
ಪದ್ಮನಾಭದಾಸನಿಗೆ ಅರವತ್ತು!
ಗಾನಕಲಾಭೂಷಣ ವಿದ್ವಾನ್ ಆರ್.ಕೆ. ಪದ್ಮನಾಭ!
ಈ ಹೆಸರಲ್ಲೇನೋ ಸವಿ ಸವಿ ಸುಂದರ ಸೆಳೆತವಿದೆ. ಅವರ ಹಾಡು ಕೇಳಿದರೆ ಆತ್ಮಾನಂದವಾಗುತ್ತದೆ. ಸ್ವರ ರಾಗ ಲಯ ತಾಳ ಭಾವಗಳ ಮೇಳ ಕಳೆಕಟ್ಟಿ ಕಂಗೊಳಿಸುತ್ತವೆ. ಒಂದೇ ರಾಗಕ್ಕೆ ಬಣ್ಣ ಬಣ್ಣದ ಸುಸ್ವರ ಪೋಣಿಸುತ್ತಾ ಗಂಟೆಗಟ್ಟಲೆ ತಣಿಸುವ ವಿದ್ವತ್ತು ಅವರದು. ಮಾತಿನಲ್ಲಿ ಸಂಗೀತ. ಉಸಿರಿನಲ್ಲಿ ಸಂಗೀತ. ಸಾಟಿ ಇಲ್ಲದ ಸಿದ್ಧಿ ಅವರದು!
ಆರ್.ಕೆ. ಪದ್ಮನಾಭ ಅವರಿಗೆ ಈಗ ಅರವತ್ತು ತುಂಬಿವೆ. ಹಾಸನ ಜಿಲ್ಲೆಯ ರುದ್ರಪಟ್ಟಣ ಪರಿಸರದಲ್ಲಿ ಹುಟ್ಟಿ ಬೆಳೆದ ಇವರು ಮೂರೂವರೆ ದಶಕಗಳಿಂದ ಹಾಡುತ್ತಾ ಬಂದಿದ್ದಾರೆ. ಸಂಗೀತ ಕ್ಷಿತಿಜದಲ್ಲಿ ಅವರಿಗೆ ಬಹಳ ವಿಶೇಷ ಸ್ಥಳ. ಪುರಂದರ ದಾಸರ ಸಮಕಾಲೀನರೇ ಆದ ಸದ್ಗುರು ವಾದಿರಾಜರ ದೈವಿಕ ಸಾಹಿತ್ಯವನ್ನು ಸಿದ್ಧಿಸಿಕೊಂಡಿರುವ ಒಬ್ಬನೇ ಒಬ್ಬ ಕಲಾವಿದ ಆರ್ಕೆಪಿ. ವಾದಿರಾಜರ ಕೃತಿಗಳಿಗೆ ಹೊಸ ರೂಪ ಕೊಟ್ಟು ಹರಿದಾಸ ಪರಂಪರೆಯಲ್ಲಿ ಅವರ ಕೊಡುಗೆಯನ್ನು ಜಗತ್ತಿಗೆ ಸಾರಿದ್ದಾರೆ.
ವಾಗ್ಗೇಯಕಾರರಾಗಿ ಪದ್ಮನಾಭರ ಕಾರ್ಯ ಅನನ್ಯ. `ಪದ್ಮನಾಭ ದಾಸ' ಎಂಬ ಅಂಕಿತದೊಂದಿಗೆ ಕೃತಿರಚನೆ ಮಾಡಿರುವ ಅವರು ಹರಿದಾಸ ಪರಂಪರೆಗೆ ಹೊಸ ಸೇರ್ಪಡೆಯಾಗಿದ್ದಾರೆ. `ಸರ್ವರಿಗೂ ಸಂಗೀತ' ಎಂಬ ತತ್ವದ `ಗೋಷ್ಠಿಗಾಯನ' ಪ್ರಾಯೋಗಾತ್ಮಕ ಪರಿಕಲ್ಪನೆ ಮೂಲಕ ಸಾವಿರ ಮಹಿಳೆಯರಿಗೆ ಏಕಕಾಲದಲ್ಲಿ ಸಂಗೀತ ಪಾಠ ಮಾಡುವ ಮೂಲಕ ಹೊಸ ಅಲೆಯನ್ನೇ ಸೃಷ್ಟಿಸಿದ್ದಾರೆ.
ಆರ್.ಕೆ. ಪದ್ಮನಾಭ ವ್ಯಕ್ತಿಯೊಬ್ಬರು, ಕಾರ್ಯ ಹಲವು! ರಂಗಕರ್ಮಿ: ಹಲವು ನಾಟಕಗಳಲ್ಲಿ ಅಭಿನಯ, ರಚನೆ, ಸಂಗೀತ, ನಿರ್ದೇಶನ. ಬರಹಗಾರ: ನೆನಪಿನಂಗಳದಲ್ಲಿ(ಆತ್ಮಚರಿತ್ರೆ), ಸಮರ್ಪಣಾ, ಪುರಂದರ ನವರತ್ನ ಮುಂತಾದ ಕೃತಿಗಳು ಲೋಕಾರ್ಪಣೆ. ಸಂಘಟಕ: ವಾದಿರಾಜ ಭವನ ನಿರ್ಮಾಣ, ರುದ್ರಪಟ್ಟಣದ ಸಂಗೀತೋತ್ಸವ, ಗಾನಕಲಾ ಪರಿಷತ್ತು ಸಂಘಟನೆಗಳ ಅಧ್ಯಕ್ಷತೆ. ಇವುಗಳ ಜೊತೆಗೆ ಸಂಗೀತ ಗುರು, ಕ್ರೀಡಾಪಟು, ಪ್ರಕಾಶಕ, ಬಡಾವಣೆ ಅಭಿವೃದ್ಧಿಕಾರ....
ಅರವತ್ತು ತುಂಬಿದ ಹೊತ್ತಿನಲ್ಲಿ `ಉದಯವಾಣಿ' ಜೊತೆ ಆರ್ಕೆಪಿ ಮಾತುಕತೆ
* ತಮಗೆ ಅರವತ್ತು ತುಂಬಿವೆ. ಈ ಸಮಯದಲ್ಲಿ ತಮ್ಮ ಸಂಗೀತ ಸೇವೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಏನು ಹೇಳುತ್ತೀರಿ?
ಸಂಗೀತ ಸಾಮಾನ್ಯರಿಗೆ ತಲುಪಬೇಕು ಎಂಬ ನನ್ನ ಕನಸಿಗೆ ಒಳ್ಳೆಯ ಪ್ರತಿಫಲ ಸಿಕ್ಕಿದೆ. ನನ್ನ ಕಾರ್ಯ ತೃಪ್ತಿ ಕೊಟ್ಟಿದೆ. ವರ್ಚಸ್ಸು ಕೊಟ್ಟಿದೆ. ಹುಮ್ಮಸ್ಸು ಕೊಟ್ಟಿದೆ. ಆದರಣೆ ಕೊಟ್ಟಿದೆ. ಇದೇ ನನಗೆ ದೊಡ್ಡ ಆಸ್ತಿ. ಇದಕ್ಕಿಂತ ಇನ್ನೇನು ಬೇಕು ಹೇಳಿ?
* ತಮ್ಮ ಸಂಗೀತ ಕಾರ್ಯದಲ್ಲಿ ಹಲವು ಮಹತ್ವಗಳನ್ನು ಸಾಧಿಸಿದ್ದೀರಿ. ಅದರಲ್ಲಿ `ಗೋಷ್ಠಿಗಾಯನ' ಒಂದು ಮೈಲುಗಲ್ಲು. ಅದರ ಬಗ್ಗೆ ಹೇಳಿ?
ಗೋಷ್ಠಿ ಎನ್ನುವ ಪದದಲ್ಲೇ ಒಂದು ವಿಶೇಷ ಗುಣವಿದೆ. ಒಗ್ಗಟ್ಟು. ಇಲ್ಲಿ ತಾರತಮ್ಯ ಇಲ್ಲ. ಎಲ್ಲರೂ ಒಂದೆ. ಈ ಕಲ್ಪನೆಯ ಮೇಲೆ ಗೋಷ್ಠಿಗಾಯನ ಪ್ರಯೋಗ ಮಾಡಿದೆ. ಸದಾ ಕೌಟುಂಬಿಕ ಜಂಜಾಟಗಳಲ್ಲಿರುವ ಗೃಹಿಣಿಯರಿಗೆ ಇದು ಚಿಕಿತ್ಸೆಯ ರೀತಿಯಲ್ಲಿ ಕೆಲಸ ಮಾಡಿದೆ. ಇಲ್ಲಿ ಸಾವಿರ ಮಹಿಳೆಯರು ಏಕ ಕಂಠದಲ್ಲಿ ಹಾಡುತ್ತಾರೆ. ಅವರೇನು ವಿದುಷಿಯರಾಗಬೇಕಿಲ್ಲ. ಒಂದು ಸಂಗತಿ ಬಿಟ್ಟು ಹಾಡಿದರೂ ನಷ್ಟವಿಲ್ಲ. ಆದರೆ ಸಮೂಹ ಗಾಯನದಿಂದ ಅವರ ಮನಸ್ಸಿಗೆ ನೆಮ್ಮದಿ ಸಿಕ್ಕಿದೆ.
* ಪ್ರಚಾರಕ್ಕೆ ಬಾರದ ವಾದಿರಾಜರ ಕೃತಿಗಳಿಗೆ ಮಟ್ಟುಹಾಕಿ ಹೊಸ ರೂಪ ಕೊಟ್ಟಿದ್ದೀರಿ. ಅವರ ಕೃತಿಗಳಲ್ಲಿ ನೀವು ಕಂಡಿದ್ದೇನು?
ಸದ್ಗುರು ವಾದಿರಾಜರು ನನ್ನ ಆರಾಧ್ಯ ದೈವ. ಅವರ ಕೃತಿಗಳಲ್ಲಿರುವ ಸೊಗಸು, ಸರಳತೆ, ಆಧ್ಯಾತ್ಮ ಚಿಂತನೆ, ಮಾನವೀಯ ಮೌಲ್ಯಗಳನ್ನು ಪರಿಚಯಿಸಬೇಕು ಎಂಬುದು ನನ್ನ ಸಂಕಲ್ಪ. ಆ ನಿಟ್ಟಿನಲ್ಲಿ ನೂರಕ್ಕೂ ಹೆಚ್ಚು ಕೃತಿಗಳಿಗೆ ಸಂಯೋಜನೆ ಮಾಡಿದ್ದೀನಿ. ವಾದಿರಾಜರ ಕೃತಿಯಾಧಾರಿತ ಕಚೇರಿ ಮಾಡಿದ್ದೇನೆ.
* ವಾಗ್ಗೇಯಕಾರರಾಗಿ ನೂರಾರು ಕೃತಿ ರಚಸಿ `ಪದ್ಮನಾಭದಾಸ'ನಾಗಿದ್ದೀರಿ. ಈ ಪ್ರಯತ್ನದ ಫಲವೇನು?
ಸಂಗೀತ ತ್ರಿಮೂರ್ತಿಗಳಾದ ತ್ಯಾಗರಾಜ, ದೀಕ್ಷಿತರು, ಶಾಮಶಾಸ್ತ್ರಿಗಳು ಪೂಜ್ಯರು. ಅವರು ಶ್ರೇಷ್ಠ ವಾಗ್ಗೇಯಕಾರರು. ನಾನು ಸದಾ ಹೊಸತಿಗಾಗಿ ತುಡಿಯುವವನು. ಸಂಶೋಧನೆ ನನ್ನ ಸ್ವಭಾವ. ಈ ನಿಟ್ಟಿನಲ್ಲಿ ನೂರೈವತ್ತು ಹೆಚ್ಚು ಕೃತಿ ರಚಿಸಿ ಹಾಡಿದ್ದೇನೆ. ನನ್ನ ಕೃತಿಗಳನ್ನು ಹಾಡಿ ಎಂದು ಯಾರನ್ನೂ ಕೇಳಿಕೊಂಡಿಲ್ಲ. ಕೃತಿ ರಚನೆಯಿಂದ ನನಗೆ ತೃಪ್ತಿ ಸಿಕ್ಕಿದೆ ಅಷ್ಟು ಸಾಕು.
* ರಂಗಕಾಯಕದಲ್ಲೂ ತಮಗೆ ದೊಡ್ಡ ಹೆಸರಿದೆ. ತ್ಯಾಗರಾಜರಾಗಿ ತಮ್ಮ ಅಮೋಘ ಅಭಿನಯ ಇನ್ನೂ ಹಸಿರಾಗಿದೆ. ಅದರ ಬಗ್ಗೆ ಹೇಳಿ?
ಭಾರತೀಯ ಕಲೆಗಳು ಬಹಳ ಶ್ರೇಷ್ಠವಾಗಿವೆ. ಚಿಕ್ಕಂದಿನಿಂದಲೂ ನನಗೆ ರಂಗಭೂಮಿಯ ಸೆಳೆತವಿತ್ತು. ಹಲವು ಸಂಗೀತ ನಾಟಕಗಳಲ್ಲಿ ಅಭಿನಯಿಸಿದ್ದೀನಿ. ರಚಿಸಿ ನಿರ್ದೇಶಿಸಿದ್ದೀನಿ. ಸಂಗೀತ ಶಿಬಿರಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಕಿಟ್ ಕಡ್ಡಾಯವಾಗಿ ಮಾಡಿಸುತ್ತೇನೆ. ಎಲ್ಲರೂ ವೇದಿಕೆಯ ಮೇಲೆ ಮಾತನಾಡಬೇಕು. ಇದರಿಂದ ಅವರ ಉಚ್ಛಾರಣೆ ಸ್ಪಷ್ಟವಾಗುತ್ತದೆ.
ಗಾನಕಲಾಭೂಷಣ ವಿದ್ವಾನ್ ಆರ್.ಕೆ. ಪದ್ಮನಾಭ!
ಈ ಹೆಸರಲ್ಲೇನೋ ಸವಿ ಸವಿ ಸುಂದರ ಸೆಳೆತವಿದೆ. ಅವರ ಹಾಡು ಕೇಳಿದರೆ ಆತ್ಮಾನಂದವಾಗುತ್ತದೆ. ಸ್ವರ ರಾಗ ಲಯ ತಾಳ ಭಾವಗಳ ಮೇಳ ಕಳೆಕಟ್ಟಿ ಕಂಗೊಳಿಸುತ್ತವೆ. ಒಂದೇ ರಾಗಕ್ಕೆ ಬಣ್ಣ ಬಣ್ಣದ ಸುಸ್ವರ ಪೋಣಿಸುತ್ತಾ ಗಂಟೆಗಟ್ಟಲೆ ತಣಿಸುವ ವಿದ್ವತ್ತು ಅವರದು. ಮಾತಿನಲ್ಲಿ ಸಂಗೀತ. ಉಸಿರಿನಲ್ಲಿ ಸಂಗೀತ. ಸಾಟಿ ಇಲ್ಲದ ಸಿದ್ಧಿ ಅವರದು!
ಆರ್.ಕೆ. ಪದ್ಮನಾಭ ಅವರಿಗೆ ಈಗ ಅರವತ್ತು ತುಂಬಿವೆ. ಹಾಸನ ಜಿಲ್ಲೆಯ ರುದ್ರಪಟ್ಟಣ ಪರಿಸರದಲ್ಲಿ ಹುಟ್ಟಿ ಬೆಳೆದ ಇವರು ಮೂರೂವರೆ ದಶಕಗಳಿಂದ ಹಾಡುತ್ತಾ ಬಂದಿದ್ದಾರೆ. ಸಂಗೀತ ಕ್ಷಿತಿಜದಲ್ಲಿ ಅವರಿಗೆ ಬಹಳ ವಿಶೇಷ ಸ್ಥಳ. ಪುರಂದರ ದಾಸರ ಸಮಕಾಲೀನರೇ ಆದ ಸದ್ಗುರು ವಾದಿರಾಜರ ದೈವಿಕ ಸಾಹಿತ್ಯವನ್ನು ಸಿದ್ಧಿಸಿಕೊಂಡಿರುವ ಒಬ್ಬನೇ ಒಬ್ಬ ಕಲಾವಿದ ಆರ್ಕೆಪಿ. ವಾದಿರಾಜರ ಕೃತಿಗಳಿಗೆ ಹೊಸ ರೂಪ ಕೊಟ್ಟು ಹರಿದಾಸ ಪರಂಪರೆಯಲ್ಲಿ ಅವರ ಕೊಡುಗೆಯನ್ನು ಜಗತ್ತಿಗೆ ಸಾರಿದ್ದಾರೆ.
ವಾಗ್ಗೇಯಕಾರರಾಗಿ ಪದ್ಮನಾಭರ ಕಾರ್ಯ ಅನನ್ಯ. `ಪದ್ಮನಾಭ ದಾಸ' ಎಂಬ ಅಂಕಿತದೊಂದಿಗೆ ಕೃತಿರಚನೆ ಮಾಡಿರುವ ಅವರು ಹರಿದಾಸ ಪರಂಪರೆಗೆ ಹೊಸ ಸೇರ್ಪಡೆಯಾಗಿದ್ದಾರೆ. `ಸರ್ವರಿಗೂ ಸಂಗೀತ' ಎಂಬ ತತ್ವದ `ಗೋಷ್ಠಿಗಾಯನ' ಪ್ರಾಯೋಗಾತ್ಮಕ ಪರಿಕಲ್ಪನೆ ಮೂಲಕ ಸಾವಿರ ಮಹಿಳೆಯರಿಗೆ ಏಕಕಾಲದಲ್ಲಿ ಸಂಗೀತ ಪಾಠ ಮಾಡುವ ಮೂಲಕ ಹೊಸ ಅಲೆಯನ್ನೇ ಸೃಷ್ಟಿಸಿದ್ದಾರೆ.
ಆರ್.ಕೆ. ಪದ್ಮನಾಭ ವ್ಯಕ್ತಿಯೊಬ್ಬರು, ಕಾರ್ಯ ಹಲವು! ರಂಗಕರ್ಮಿ: ಹಲವು ನಾಟಕಗಳಲ್ಲಿ ಅಭಿನಯ, ರಚನೆ, ಸಂಗೀತ, ನಿರ್ದೇಶನ. ಬರಹಗಾರ: ನೆನಪಿನಂಗಳದಲ್ಲಿ(ಆತ್ಮಚರಿತ್ರೆ), ಸಮರ್ಪಣಾ, ಪುರಂದರ ನವರತ್ನ ಮುಂತಾದ ಕೃತಿಗಳು ಲೋಕಾರ್ಪಣೆ. ಸಂಘಟಕ: ವಾದಿರಾಜ ಭವನ ನಿರ್ಮಾಣ, ರುದ್ರಪಟ್ಟಣದ ಸಂಗೀತೋತ್ಸವ, ಗಾನಕಲಾ ಪರಿಷತ್ತು ಸಂಘಟನೆಗಳ ಅಧ್ಯಕ್ಷತೆ. ಇವುಗಳ ಜೊತೆಗೆ ಸಂಗೀತ ಗುರು, ಕ್ರೀಡಾಪಟು, ಪ್ರಕಾಶಕ, ಬಡಾವಣೆ ಅಭಿವೃದ್ಧಿಕಾರ....
ಅರವತ್ತು ತುಂಬಿದ ಹೊತ್ತಿನಲ್ಲಿ `ಉದಯವಾಣಿ' ಜೊತೆ ಆರ್ಕೆಪಿ ಮಾತುಕತೆ
* ತಮಗೆ ಅರವತ್ತು ತುಂಬಿವೆ. ಈ ಸಮಯದಲ್ಲಿ ತಮ್ಮ ಸಂಗೀತ ಸೇವೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಏನು ಹೇಳುತ್ತೀರಿ?
ಸಂಗೀತ ಸಾಮಾನ್ಯರಿಗೆ ತಲುಪಬೇಕು ಎಂಬ ನನ್ನ ಕನಸಿಗೆ ಒಳ್ಳೆಯ ಪ್ರತಿಫಲ ಸಿಕ್ಕಿದೆ. ನನ್ನ ಕಾರ್ಯ ತೃಪ್ತಿ ಕೊಟ್ಟಿದೆ. ವರ್ಚಸ್ಸು ಕೊಟ್ಟಿದೆ. ಹುಮ್ಮಸ್ಸು ಕೊಟ್ಟಿದೆ. ಆದರಣೆ ಕೊಟ್ಟಿದೆ. ಇದೇ ನನಗೆ ದೊಡ್ಡ ಆಸ್ತಿ. ಇದಕ್ಕಿಂತ ಇನ್ನೇನು ಬೇಕು ಹೇಳಿ?
* ತಮ್ಮ ಸಂಗೀತ ಕಾರ್ಯದಲ್ಲಿ ಹಲವು ಮಹತ್ವಗಳನ್ನು ಸಾಧಿಸಿದ್ದೀರಿ. ಅದರಲ್ಲಿ `ಗೋಷ್ಠಿಗಾಯನ' ಒಂದು ಮೈಲುಗಲ್ಲು. ಅದರ ಬಗ್ಗೆ ಹೇಳಿ?
ಗೋಷ್ಠಿ ಎನ್ನುವ ಪದದಲ್ಲೇ ಒಂದು ವಿಶೇಷ ಗುಣವಿದೆ. ಒಗ್ಗಟ್ಟು. ಇಲ್ಲಿ ತಾರತಮ್ಯ ಇಲ್ಲ. ಎಲ್ಲರೂ ಒಂದೆ. ಈ ಕಲ್ಪನೆಯ ಮೇಲೆ ಗೋಷ್ಠಿಗಾಯನ ಪ್ರಯೋಗ ಮಾಡಿದೆ. ಸದಾ ಕೌಟುಂಬಿಕ ಜಂಜಾಟಗಳಲ್ಲಿರುವ ಗೃಹಿಣಿಯರಿಗೆ ಇದು ಚಿಕಿತ್ಸೆಯ ರೀತಿಯಲ್ಲಿ ಕೆಲಸ ಮಾಡಿದೆ. ಇಲ್ಲಿ ಸಾವಿರ ಮಹಿಳೆಯರು ಏಕ ಕಂಠದಲ್ಲಿ ಹಾಡುತ್ತಾರೆ. ಅವರೇನು ವಿದುಷಿಯರಾಗಬೇಕಿಲ್ಲ. ಒಂದು ಸಂಗತಿ ಬಿಟ್ಟು ಹಾಡಿದರೂ ನಷ್ಟವಿಲ್ಲ. ಆದರೆ ಸಮೂಹ ಗಾಯನದಿಂದ ಅವರ ಮನಸ್ಸಿಗೆ ನೆಮ್ಮದಿ ಸಿಕ್ಕಿದೆ.
* ಪ್ರಚಾರಕ್ಕೆ ಬಾರದ ವಾದಿರಾಜರ ಕೃತಿಗಳಿಗೆ ಮಟ್ಟುಹಾಕಿ ಹೊಸ ರೂಪ ಕೊಟ್ಟಿದ್ದೀರಿ. ಅವರ ಕೃತಿಗಳಲ್ಲಿ ನೀವು ಕಂಡಿದ್ದೇನು?
ಸದ್ಗುರು ವಾದಿರಾಜರು ನನ್ನ ಆರಾಧ್ಯ ದೈವ. ಅವರ ಕೃತಿಗಳಲ್ಲಿರುವ ಸೊಗಸು, ಸರಳತೆ, ಆಧ್ಯಾತ್ಮ ಚಿಂತನೆ, ಮಾನವೀಯ ಮೌಲ್ಯಗಳನ್ನು ಪರಿಚಯಿಸಬೇಕು ಎಂಬುದು ನನ್ನ ಸಂಕಲ್ಪ. ಆ ನಿಟ್ಟಿನಲ್ಲಿ ನೂರಕ್ಕೂ ಹೆಚ್ಚು ಕೃತಿಗಳಿಗೆ ಸಂಯೋಜನೆ ಮಾಡಿದ್ದೀನಿ. ವಾದಿರಾಜರ ಕೃತಿಯಾಧಾರಿತ ಕಚೇರಿ ಮಾಡಿದ್ದೇನೆ.
* ವಾಗ್ಗೇಯಕಾರರಾಗಿ ನೂರಾರು ಕೃತಿ ರಚಸಿ `ಪದ್ಮನಾಭದಾಸ'ನಾಗಿದ್ದೀರಿ. ಈ ಪ್ರಯತ್ನದ ಫಲವೇನು?
ಸಂಗೀತ ತ್ರಿಮೂರ್ತಿಗಳಾದ ತ್ಯಾಗರಾಜ, ದೀಕ್ಷಿತರು, ಶಾಮಶಾಸ್ತ್ರಿಗಳು ಪೂಜ್ಯರು. ಅವರು ಶ್ರೇಷ್ಠ ವಾಗ್ಗೇಯಕಾರರು. ನಾನು ಸದಾ ಹೊಸತಿಗಾಗಿ ತುಡಿಯುವವನು. ಸಂಶೋಧನೆ ನನ್ನ ಸ್ವಭಾವ. ಈ ನಿಟ್ಟಿನಲ್ಲಿ ನೂರೈವತ್ತು ಹೆಚ್ಚು ಕೃತಿ ರಚಿಸಿ ಹಾಡಿದ್ದೇನೆ. ನನ್ನ ಕೃತಿಗಳನ್ನು ಹಾಡಿ ಎಂದು ಯಾರನ್ನೂ ಕೇಳಿಕೊಂಡಿಲ್ಲ. ಕೃತಿ ರಚನೆಯಿಂದ ನನಗೆ ತೃಪ್ತಿ ಸಿಕ್ಕಿದೆ ಅಷ್ಟು ಸಾಕು.
* ರಂಗಕಾಯಕದಲ್ಲೂ ತಮಗೆ ದೊಡ್ಡ ಹೆಸರಿದೆ. ತ್ಯಾಗರಾಜರಾಗಿ ತಮ್ಮ ಅಮೋಘ ಅಭಿನಯ ಇನ್ನೂ ಹಸಿರಾಗಿದೆ. ಅದರ ಬಗ್ಗೆ ಹೇಳಿ?
ಭಾರತೀಯ ಕಲೆಗಳು ಬಹಳ ಶ್ರೇಷ್ಠವಾಗಿವೆ. ಚಿಕ್ಕಂದಿನಿಂದಲೂ ನನಗೆ ರಂಗಭೂಮಿಯ ಸೆಳೆತವಿತ್ತು. ಹಲವು ಸಂಗೀತ ನಾಟಕಗಳಲ್ಲಿ ಅಭಿನಯಿಸಿದ್ದೀನಿ. ರಚಿಸಿ ನಿರ್ದೇಶಿಸಿದ್ದೀನಿ. ಸಂಗೀತ ಶಿಬಿರಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಕಿಟ್ ಕಡ್ಡಾಯವಾಗಿ ಮಾಡಿಸುತ್ತೇನೆ. ಎಲ್ಲರೂ ವೇದಿಕೆಯ ಮೇಲೆ ಮಾತನಾಡಬೇಕು. ಇದರಿಂದ ಅವರ ಉಚ್ಛಾರಣೆ ಸ್ಪಷ್ಟವಾಗುತ್ತದೆ.
No comments:
Post a Comment