Thursday, June 3, 2010

ಓ ನನ್ನ ಚೇತನ!



ಓ ನನ್ನ ಚೇತನ!



ಅವರು ಕಾಲಿಗೆ ಗಾಲಿ ಕಟ್ಟಿ­ಕೊಂ­ಡ­ವರು. ಗಾಲಿಯ ಗತಿ­ಯೊ­ಡನೆ ಗರ­ಗ­ರನೆ ಗಿರಕಿ ಹೊಡೆ­ಯು­ವ­ವರು. ಗಾಳಿಯ ವೇಗಕ್ಕೆ ಗಾಲಿ­ಯನ್ನು ಗಿರಿ­ಗ­ಟ್ಟಲೆ ಮಾಡ­ಬ­ಲ್ಲರು. ಬುಗು­ರಿ­ಯಂತೆ ತಿರು ತಿರುಗಿ ತಿರು­ಗಿ­ಸ­ಬ­ಲ್ಲರು. ಲಯದ ಹಾದಿ­ಯಲ್ಲಿ ಗಾಲಿ­ಯನ್ನು ನಡೆ­ಸ­ಬ­ಲ್ಲರು. ತಾಳಕ್ಕೆ ತಕ್ಕಂತೆ ಕುಣಿದು ತಣಿ­ಸ­ಬ­ಲ್ಲರು. ಹಾರ­ಬ­ಲ್ಲರು. ಏರ­ಬ­ಲ್ಲರು.....!
ಅವರು ಅಂಗ­ವಿ­ಕಲ ಕಲಾ­ವಿ­ದರು. ಆದರೆ ಅವರ ಮನ­ಸ್ಸಿ­ನಲ್ಲಿ ವೈಕ­ಲ್ಯತೆ ಇಲ್ಲ. ಅವರ ಮನ­ಸ್ಸಿ­ನಲ್ಲಿ ಆಕಾ­ಶ­ವಿದೆ. ಎತ್ತ­ರಕ್ಕೆ ಹಾರುವ ತಪಸ್ಸು ನಿತ್ಯವೂ ನಡೆ­ದಿದೆ. ಭರತ ನಾಟ್ಯ, ಕಥ­ಕ್ಕಳಿ, ಕುಚು­ಪುಡಿ, ಸಮ­ರ­ಕಲೆ ಮುಂತಾದ ಅದ್ಭುತ ಕಲಾ ಪ್ರಕಾ­ರ­ಗ­ಳನ್ನು ತಮ್ಮದೇ ವಿನ್ಯಾ­ಸದ `ಗಾ­ಲಿ­ಕುರ್ಚಿ ನೃತ್ಯ'ದ ಮೂಲಕ ಅನಾ­ವ­ರ­ಣ­ಗೊ­ಳಿಸಿ ಇಡೀ ಜಗ­ತ್ತನ್ನು ಬೆರ­ಗು­ಗೊ­ಳಿ­ಸಿ­ದ್ದಾರೆ. ಅವರ ಅಂತ­ರಂಗ ಬಹಳ ಸೂಕ್ಷ್ಮ­ಗ್ರಾಹಿ. ಸುಂದ­ರ­ತೆ­ಯನ್ನು ಗ್ರಹಿಸಿ ತನ್ನ ದೇಹಕ್ಕೆ ತಂದು­ಕೊ­ಳ್ಳು­ವಲ್ಲಿ ಅವರು ನಿಷ್ಣಾ­ತರು.
ಅವರ ಶಕ್ತಿ ಇಡೀ ಜಗ­ತ್ತಿ­ನಾ­ದ್ಯಂತ ಅನಾ­ವ­ರ­ಣ­ಗೊಂ­ಡಿದೆ. ಬರೋ­ಬ್ಬರಿ 10 ಸಾವಿರ ದಾಖಲೆ ಪ್ರದ­ರ್ಶನ ನೀಡಿ ಲಿಮ್ಕಾ ವಿಶ್ವ­ದಾ­ಖಲೆ ಪುಸ್ತ­ಕ­ದಲ್ಲಿ ಸ್ಥಾನ ಪಡೆ­ದಿ­ದ್ದಾರೆ. ತಮ್ಮ ಅಂಗ­ವಿ­ಕ­ಲ­ತೆ­ಯನ್ನು ಒಂದು ಶಾಪ ಎಂದು ಪರಿ­ಗ­ಣಿ­ಸದ ಈ ಕಲಾ­ಕು­ಡಿ­ಗಳು ವಿಶ್ವ­ಚೇ­ತ­ನ­ಗ­ಳಾಗಿ ಹೊರ ಹೊಮ್ಮಿ­ದ್ದಾರೆ.
ಎಬಿ­ಲಿಟಿ ಅನ್‌­ಲಿ­ಮಿ­ಟೆಡ್‌: ಈ ಕಲಾ­ವಿ­ದರ ಕನ­ಸು­ಗ­ಳಿಗೆ ಎಲ್ಲೆ ಎಂಬು­ದಿಲ್ಲ. ಅವರ ಸಂಸ್ಥೆಯ ಹೆಸ­ರಿ­ನಲ್ಲೇ ಒಂದು ಸುಂದರ ಸೆಳೆ­ತ­ವಿದೆ. ಅದು `ಎ­ಬಿ­ಲಿಟಿ ಅನ್‌­ಲಿ­ಮಿ­ಟೆಡ್‌'(ಅ­ನಿ­ಯ­ಮಿತ ಸಾಮರ್ಥ್ಯ). ಆ ಚೇತ­ನ­ಗಳ ಮನಸ್ಸು ಬಹಳ ವಿಶಾಲ. ಮನ­ಸ್ಸಿ­ನಲ್ಲಿ ಸಲ್ಲದ ಯಾವ ವಿಚಾ­ರ­ಗ­ಳಿಲ್ಲ. ಅವು ಮುಗ್ಧ ಮನ­ಸ್ಸು­ಗಳು. ಕಲ್ಪ­ನೆ­ಯನ್ನು ಕೃತಿ­ಗಿ­ಳಿ­ಸಿವ ಸಾಮರ್ಥ್ಯ ಅವ­ರದು.
ಈ ವಿಕಲ ಚೇತ­ನರು ಗಾಲಿಯ ಕುರ್ಚಿ ಬಳಸಿ ರಂಗದ ಮೇಲೆ ತಮ್ಮ ಸಮರ ಕಲೆ ಸಾಹಸ ಪ್ರದ­ರ್ಶಿ­ಸು­ತ್ತಾರೆ. ಬೆಳ­ಕಿಗೆ ತಮ್ಮನ್ನು ತಾವು ತೆರೆ­ದು­ಕೊಂಡು ನೋಡು­ಗ­ರನ್ನು ಉಸಿರು ಕಟ್ಟಿ­ಸು­ತ್ತಾರೆ. ಸಂಗೀ­ತಕ್ಕೆ ಸಮ್ಮೋ­ಹ­ಗೊಂಡು ಮಾಧುರ್ಯ ತುಂಬು­ತ್ತಾರೆ. ಸಮ­ರ­ಕ­ಲೆಯ ಅದ್ಭುತ ಸಾಹ­ಸ­ಗ­ಳಿಗೆ ರಂಗದ ಮೇಲೆ ರೂಪ ಕೊಡು­ತ್ತಾರೆ.
ಕನ­ಸಿಗೆ ರೂಪ­ಕೊಟ್ಟ ಶಿಲ್ಪಿ: ಗಾಲಿ­ಕುರ್ಚಿ ನೃತ್ಯ ಎನ್ನುವ ವಿಕಲ ಚೇತ­ನರ ವಿಶೇಷ ಕಲಾ ಪ್ರಕಾ­ರಕ್ಕೆ ರೂಪ­ಕೊ­ಟ್ಟ­ವರು ಭರ­ತ­ನಾಟ್ಯ ಕಲಾ­ವಿದ ಸಯ್ಯದ್‌ ಸಲ್ಲಾ­ವು­ದ್ದೀನ್‌ ಪಾಶಾ. ಇವರೇ ಎಬಿ­ಲಿಟಿ ಅನ್‌­ಲಿ­ಮಿ­ಟೆಡ್‌ ಸಂಸ್ಥಾ­ಪ­ಕರು. ಚೇತ­ನರ ಬಾಯಲ್ಲಿ ಇವರು ಗುರೂಜಿ. ಸಯ್ಸದ್‌ ಮುಸ್ಲಿಂ ಸಮು­ದಾ­ಯಕ್ಕೆ ಸೇರಿ­ದ­ವ­ರಾ­ದರೂ ಇವರ ಹೃದಯ ಬಾಲ್ಯ­ದಿಂ­ದಲೂ ಭರ­ತ­ನಾ­ಟ್ಯ­ದತ್ತ ಮಿಡಿ­ಯು­ತ್ತಿತ್ತು. ಮನೆ­ಯ­ವರ ವಿರೋ­ಧದ ನಡು­ವೆಯೂ ನಾಟ್ಯ­ರಾ­ಣಿ­ಯನ್ನು ಕಣ್ಣಿಗೆ ಕಟ್ಟಿ­ಕೊಂ­ಡರು. ವರ್ಷಾ­ನು­ಗ­ಟ್ಟಲೆ ಮಾಡದ ತಪ­ಸ್ಸಿನ ಫಲ­ವಾಗಿ ನಾಟ್ಯ­ರಾಣಿ ಒಲಿದು ಬಂದಳು. ದೆಹ­ಲಿ­ಯನ್ನು ಕಾರ್ಯ­ಸ್ಥಾನ ಮಾಡಿ­ಕೊಂಡ ಸಯ್ಯದ್‌ ತಮ್ಮ ವಿಲ­ಕ­ಚೇ­ತನ ಗಾಲಿ­ಕುರ್ಚಿ ಕಲ್ಪ­ನೆಗೆ ರೂಪ ಕೊಡುತ್ತಾ ಸಾಗಿ­ದರು.
ದೆಹಲಿ ಸುತ್ತ­ಮು­ತ್ತ­ಲಿನ ಸರ್ಕಾರಿ ಶಾಲೆ­ಗ­ಳ­ಲ್ಲಿದ್ದ ಬಡ ಅಂಗ­ವಿ­ಕಲ ಮಕ್ಕ­ಳನ್ನು ಆಯ್ದು­ಕೊಂಡು ಅವ­ರಿ­ಗೊಂದು ಹೊಸ ಬದು­ಕಿನ ಕನಸು ತುಂಬಿ­ದರು. ಅವ­ರಿಗೆ ವಸತಿ, ಊಟ ಸಹಿತ ನೃತ್ಯ ತರ­ಬೇತಿ ನೀಡಿ­ದರು. ಹತ್ತಾರು ವರ್ಷ­ಗಳ ಕಾಲ ತರ­ಬೇತಿ ಪಡೆದ ಈ ಮಕ್ಕಳು ಚೇತ­ನ­ಗ­ಳಾಗಿ ಹೊರ­ಹೊ­ಮ್ಮಿ­ದರು. ಈಗ 150 ಚೇತ­ನರು ಈ ತಂಡ­ದ­ಲ್ಲಿ­ದ್ದಾರೆ. ಕೆಲ ಕಲಾ­ವಿ­ದರು ಸ್ವಂತ­ವಾಗಿ ಬೆಳೆದು ನಿಂತಿ­ದ್ದಾರೆ. ಬಾಲಿ­ವು­ಡ್‌­ನಲ್ಲೂ ತಮ್ಮ ಪ್ರತಿಭೆ ಮೆರೆ­ದಿ­ದ್ದಾರೆ. ಕಲಾ­ನಿ­ರ್ದೇ­ಶ­ಕರು, ಸಹಾ­ಯಕ ನಿರ್ದೇ­ಶ­ಕ­ರಾಗಿ ಕೆಲಸ ಮಾಡು­ತ್ತಿ­ದ್ದಾರೆ.
ಸಯ್ಯದ್‌ ಸಲ್ಲಾ­ವು­ದ್ದೀನ್‌ ಪಾಶಾ ಕರ್ನಾ­ಟ­ಕ­ದ­ವರೇ. ಬೆಂಗ­ಳೂರು ಗ್ರಾಮಂ­ತರ ಜಿಲ್ಲೆಯ ಆನೆ­ಕಲ್‌ ಅವರ ಹುಟ್ಟೂರು. ತಮ್ಮ ನೃತ್ಯ ಬದುಕು ಆರಂಭ ಆದ ಮೇಲೆ ದೆಹ­ಲಿ­ಯಲ್ಲಿ ನೆಲ­ಸಿ­ದ್ದಾರೆ.
ವಿಶೇಷ ಗಾಲಿ­ಗಳು: ಗಾಲಿ­ಕುರ್ಚಿ ನೃತ್ಯ ಮಾಡುವ ವಿಕ­ಲಾಂಗ ಮಕ್ಕ­ಳಿ­ಗಾಗಿ ವಿಶೇಷ ಕುರ್ಚಿ­ಗ­ಳನ್ನು ವಿನ್ಯಾಸ ಮಾಡ­ಲಾ­ಗಿದೆ. ಭಾರ­ವಿ­ಲ್ಲದ, ಗಾಳಿ ತುಂಬಿದ ಚಕ್ರ­ವುಳ್ಳ ಕುರ್ಚಿ­ಗ­ಳನ್ನು ಅವ­ರಿ­ಗಾಗಿ ತಯಾರು ಮಾಡ­ಲಾ­ಗಿದೆ.
ಬೆಂಗ­ಳೂ­ರಿ­ನಲ್ಲಿ ಗಾಲಿ­ಕುರ್ಚಿ ನೃತ್ಯ: ಈಗ ಬೆಂಗ­ಳೂ­ರಿ­ಗ­ರಿಗೆ ಸುಯೋಗ. ಜಗ­ತ್ಪ್ರ­ಸಿದ್ಧ ಗಾಲಿ­ಕುರ್ಚಿ ನೃತ್ಯ­ವನ್ನು ಸವಿ­ಯುವ ಒಂದು ಅಪೂರ್ವ ಅವ­ಕಾಶ. ೨೮-೦೬-2010ರಂದು ಸಂಜೆ 6. 30ಕ್ಕೆ ಚೌಡಯ್ಯ ಸ್ಮಾರಕ ಭವ­ನ­ದಲ್ಲಿ ನೃತ್ಯ ಕಾರ್ಯ­ಕ್ರಮ ಆಯೋ­ಜ­ನೆ­ಗೊಂ­ಡಿದೆ. ನಗ­ರದ ನ್ಯಾಷ­ನಲ್‌ ಇನ್ಸ್‌­ಟಿ­ಟ್ಯೂಟ್‌ ಆಪ್‌ ಪರ್ಸ­ನಲ್‌ ಮ್ಯಾನೇ­ಜ್‌­ಮೆಂಟ್‌ ಸುವರ್ಣ ಮಹೋ­ತ್ಸ­ವದ ಅಂಗ­ವಾಗಿ ಕಾರ್ಯ­ಕ್ರ­ಮ­ಕೊ­ಡಲು ಎಬಿ­ಲಿಟಿ ಅನ್‌­ಲಿ­ಮಿ­ಟೆಡ್‌ ತಂಡ ಆಗ­ಮಿ­ಸು­ತ್ತಿದೆ. ಮೈ ನವಿ­ರೇ­ಳಿ­ಸುವ ಮಣಿ­ಪುರ ಸಮರ ಕಲೆ ಬೆಂಗ­ಳೂ­ರಿನ ಗಾಲಿ­ನೃ­ತ್ಯ­ದಲ್ಲಿ ಮುಖ್ಯ ಪಾತ್ರ ವಹಿ­ಸ­ಲಿದೆ. ಅದೇ ರೀತಿ ರಾಮಾ­ಯಣ, ಮಹಾ­ಭಾ­ರತ ಕತೆ­ಗಳು ಗಾಲಿ­ಕುರ್ಚಿ ನೃತ್ಯ­ದಲ್ಲಿ ತೆರೆ­ದು­ಕೊ­ಳ್ಳ­ಲಿವೆ. ಈ ಕಾರ್ಯ­ಕ್ರ­ಮ­ದಲ್ಲಿ 17 ಜನ ವೃತ್ತಿ ವಿಕಲ ಚೇತ­ನರು ಭಾಗ­ವ­ಹಿ­ಸು­ತ್ತಿ­ದ್ದಾರೆ. ಈ ಸುಂದರ ಸಾಹಸ ಮಯ ನೃತ್ಯ ಕಾರ್ಯ­ಕ್ರ­ಮ­ವನ್ನು ಶುಕ್ರ­ವಾರ ಬೆಂಗ­ಳೂರು ಮಂದಿ ಸಾಕ್ಷೀ­ಕ­ರಿ­ಸ­ಬ­ಹುದು. ಹೆಚ್ಚಿನ ವಿವ­ರ­ಗ­ಳಿ­ಗಾಗಿ ಮೊಬೈಲ್‌: 9686715886 ಸಂಪ­ರ್ಕಿ­ಸ­ಬ­ಹುದು.

No comments:

Post a Comment