ಕಾನೂನು ತಜ್ಞರೆಂದು ಹೇಳಿಕೊಂಡು ಬಂದು
ನೀತಿ ನಿಯಮಗಳನ್ನು ಗಾಳಿಗೆ ತೂರಿದಿರಿ...
ಅವಕಾಶ ಸಿಕ್ಕಾಗಲೆಲ್ಲಾ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿ
ಹುದ್ದೆಗೆ ಅಗೌರವ ತೋರಿದಿರಿ...
ಮಾಧ್ಯಮಗಳ ಮೈಕ್ ನಿಮ್ಮ ಬಾಯಿಗೆ ಮುತ್ತಿಕ್ಕಿದಾಗ
ಆಡಬಾರದ ಮಾತುಗಳನ್ನಾಡಿದಿರಿ...
ಕಾರ್ಯಕ್ರಮಗಳಲ್ಲಿ ಶ್ರೀಮತಿಯನ್ನು ವೇದಿಕೆ ಹತ್ತಿಸಿ
ಆಯೋಜಕರಿಗೆ ಮುಜುಗರ ತಂದಿರಿ...
ವಿಶ್ವವಿದ್ಯಾಲಯಗಳ ಕುಲಾಧಿಪತಿಯಾಗಿದ್ದ ನೀವು
ಮುಟ್ಠಾಳರನ್ನೆಲ್ಲಾ ಕುಲಪತಿಯನ್ನಾಗಿ ಮಾಡಿದಿರಿ...
ಸಿಂಡಿಕೇಟ್ ಸದಸ್ಯರನ್ನು ನೇಮಕ ಮಾಡುವಾಗಲೂ
ವಿವಿ ಅಂಗಳದಲ್ಲಿ ರಾಜಕೀಯ ತುಂಬಿದಿರಿ...
ಕುಲಪತಿಯಾಗಿ ಜಾತಿ ಮಾಡಿದರನ್ನು
ರಕ್ಷಸಿ ಕೆಟ್ಟದಾಗಿ ನಡೆದುಕೊಂಡಿರಿ...
ಕರ್ನಾಟಕ್ಕೆ ಮೊದಲ ಪ್ರಜೆಯಾಗಿದ್ದ ನೀವು
ವಿವಿಗಳನ್ನು ಮಾರಾಟಕ್ಕಿಟ್ಟಿರಿ...
ನೀವೀಗ ಕೋಟಿಗಳನ್ನು ಕೊಳ್ಳೆ ಹೊಡೆದುಕೊಂಡು
ಹೋಗುತ್ತಿದ್ದೀರಿ...ಮತ್ತೆಂದೂ ಇಲ್ಲಿಗೆ ಬಾರದಿರಿ...
ಆದರೂ ನಾವು ‘ಗವರ್ನರ್ ಹುದ್ದೆ’ಯನ್ನು ಗೌರವಿಸುತ್ತೇವೆ
ಯಾಕೆಂದರೆ ಕರ್ನಾಟಕ ಎಲ್ಲರಿಗೂ ಮಾದರಿ...!
No comments:
Post a Comment