Tuesday, September 8, 2009

ಮೈಸೂ­ರಿ­ನಲ್ಲಿ `ಚೀನಿ' ಸಂಗೀತ




ಮೈಸೂ­ರಿ­ನಲ್ಲಿ `ಚೀನಿ' ಸಂಗೀತ







ಬೆಳಕು ಹರಿ­ಯುವ ಮೊದಲೇ ದಾಸ ಭಟ್ಟರ ತಬಲ ಪಾಠ ಆರಂ­ಭ­ವಾ­ಗು­ತ್ತಿತ್ತು. ಚಾವ­ಡಿಯ ಮೇಲೆ ಭಟ್ಟರ ಏಳು ಮಂದಿ ಮಕ್ಕಳು ಸಾಲಾಗಿ ಮಲ­ಗಿ­ರು­ತಿ­ದ್ದರು. ಕೆಳಗೆ ನಡೆ­ಯುವ ತಬಲ ವಾದ­ನದ ಅಲೆ ವಿದ್ಯುತ್‌ ಸ್ವರೂಪ ತಾಳಿ ಮಲ­ಗಿದ್ದ ಮಕ್ಕಳ ನಾಡಿ­ಯಲ್ಲಿ ಸಂಚಾ­ರ­ಗೊ­ಳ್ಳು­ತ್ತಿತ್ತು. ಶಾಸ್ತ್ರೀ­ಯ­ವಾಗಿ ಕಲಿ­ತಿ­ದ್ದಿಲ್ಲ. ಆದರೂ ಅವ­ರೆ­ಲ್ಲರು ನಮ್ಮ ನಾಡಿನ ಖ್ಯಾತ ಸಂಗೀ­ತ­ಗಾ­ರರು. ಅದೇ ಅಲ್ಲವೇ ಸಂಗೀತ ರಕ್ತ!
ಅವ­ರೊ­ಳ­ಗೊಬ್ಬ ಶ್ರೀನಿ­ವಾಸ ಭಟ್ಟರು. `ಚೀನಿ' ಎಂಬ ಹೆಸ­ರಿ­ನಿಂದ ಸಂಗೀತ ರಸಿ­ಕರ ಮನ­ಸೂ­ರೆ­ಗೊಂ­ಡ­ವರು. ಮೈಸೂ­ರಿನ ರಂಗಾ­ಯ­ಣದ ಆವ­ರ­ಣ­ದೊ­ಳ­ಗಿ­ರುವ ಗಿಡ ಗಂಟೆ­ಯನ್ನು ಕೇಳಿ­ದರೂ ಚೀನಿ­ಯ­ವರ ಕತೆ ಬಿಚ್ಚಿ­ಕೊ­ಳ್ಳ­ತ್ತದೆ. ಇಡೀ ಆವ­ರ­ಣ­ದೊ­ಳಗೆ ಅವರು ಸಂಗೀತ ಕರ­ತಾ­ಡನ ಸೃಷ್ಟಿ­ಸಿ­ದ್ದಾರೆ. ಅವರ ಗಿಟಾ­ರ್‌­ವಾ­ದನ ಭೂಮಿ­ಗೀತ ರಂಗ­ಮಂ­ದಿ­ರ­ದೊ­ಳಗೆ ಮ್ಯಾಜಿಕ್‌ ಮಾಡಿದೆ. ಅವರ ತಬಲ ವಾದನ ತೆರದ ವನ­ರಂ­ಗದ ಕಡೆಯ ಪ್ರೇಕ್ಷ­ಕ­ನಿಗೂ ತಲು­ಪಿದೆ. ಅವರ ಹಾರ್ಮೋ­ನಿಯಂ ಮನೆ­ಗಳು ಕೇಳು­ಗನ ತಲೆ­ದೂ­ಗಿ­ಸಿವೆ. ಸ್ವರ­ಮಂ­ಡ­ಲದ ತಂತಿ­ಗಳು ಭಾವು­ಕ­ಗೊ­ಳಿ­ಸಿವೆ. ಗಾಂಗ್‌ನ ಢಣ್‌ ಶಬ್ದ ಪ್ರೆಕ್ಷ­ಕನ ಉಸಿರು ಕಟ್ಟಿ­ಸಿದೆ......ಅ­ವ­ರೊಬ್ಬ ಬಹು­ವಾದ್ಯ ವಾದಕ. ಕನ್ನಡ ರಂಗ ಸಂಗೀ­ತದ ಪ್ರಬುದ್ಧ ಪ್ರತಿಭೆ.
ರಂಗಾ­ಯ­ಣದ ಆರಂ­ಭ­ದಿಂ­ದಲೂ ಶ್ರೀನಿ­ವಾಸ ಭಟ್ಟರು ಅಲ್ಲಿಯ ಒಂದು ಭಾಗ­ವಾ­ಗಿ­ದ್ದಾರೆ. ಚೀನಿ ಇಲ್ಲದ ರಂಗಾ­ಯಣ ಕಲ್ಪ­ನೆಗೂ ಸಿಕ್ಕು­ವು­ದಿಲ್ಲ! ಅವ­ರೊಬ್ಬ ಆಪ್ತ ಸಂಗೀ­ತ­ಗಾರ. ಚಿಣ್ಣರ ಮೇಳದ ಮಕ್ಕಳ ಮನ­ಸ್ಸಿ­ನಲ್ಲಿ ಉಳಿ­ಯುವ `ಚೀನಿ ಮಾಮಾ' ಎಂದೂ ಮರೆ­ಯ­ಲಾ­ಗದ ಹೃದಯ. ಅವರು ಮಕ್ಕಳ ಜೊತೆ ಮಗು­ವಾಗಿ ಹಾಡು ಹೇಳಿ­ಕೊ­ಡು­ತ್ತಾರೆ. ನೂರಾರು ಮಕ್ಕ­ಳನ್ನು ಏಕ ಕಾಲ­ದಲ್ಲಿ ತಮ್ಮ ಸಂಗೀ­ತ­ದಿಂದ ನಿಯಂ­ತ್ರಿ­ಸುವ ಶಕ್ತಿ ಅವ­ರ­ಲ್ಲಿದೆ. ರಂಗ­ಭೂಮಿ ಕಲಿ­ಕೆ­ಗಾಗಿ ರಂಗಾ­ಯ­ಣಕ್ಕೆ ಬರುವ ರಂಗಾ­ಸ­ಕ್ತ­ರಿಗೆ ಚೀನಿ ಅವರ ಪಾಠ ಅಮೂ­ಲ್ಯ­ವಾ­ದುದು. ಸಾಹಿ­ತ್ಯಕ್ಕೆ ಅವರು ನೀಡುವ ಸ್ವರ ಪ್ರಸ್ತಾ­ನ­ದಲ್ಲಿ ಅವರ ಪ್ರಬು­ದ್ಧತೆ ಎದ್ದು­ಕಾ­ಣು­ತ್ತದೆ. ತಾಳದ ಮೇಲೆ ಅವರ ಹಿಡಿತ ವಿಸ್ಮಯ ಹುಟ್ಟಿ­ಸು­ತ್ತದೆ.
ರಂಗಾ­ಯ­ಣದ ನೂರಾರು ನಾಟ­ಕ­ಗ­ಳಲ್ಲಿ ಚೀನಿ ಅವರು ರಂಗದ ಹಿಂದಿನ ನಾಯಕ. ರಂಗಾ­ಯ­ಣದ ಪ್ರತಿ­ಯೊಂದು ರಂಗಾ­ಪ್ರ­ಯೋ­ಗ­ದಲ್ಲೂ ಚೀನಿ ಛಾಯೆ ಎದ್ದು ಕಾಣು­ತ್ತದೆ. ಅವರ ಸಂಗೀ­ತ­ಕ್ಕಾ­ಗಿಯೇ ನಾಟಕ ನೋಡಲು ಬರುವ ಪ್ರೇಕ್ಷ­ಕರು ಮೈಸೂ­ರಿ­ನ­ಲ್ಲಿ­ದ್ದಾರೆ. ನಟನ ಅಭಿ­ನ­ಯಕ್ಕೆ ತಮ್ಮ ಸಂಗೀ­ತದ ಮೂಲಕ ಜೀವ­ತುಂ­ಬು­ವಲ್ಲಿ ಅವರು ಎತ್ತಿದ ಕೈ. ಅವರ ವಿಶೇಷ ಸುಂದರ ಧನಿ ಕೇಳುವ ಮನ­ಸ್ಸು­ಗ­ಳನ್ನು ಕಟ್ಟಿ­ಹಾ­ಕು­ತ್ತದೆ. ಅವರ ಮಾತು­ಗಳು ಕೂಡ ಅಷ್ಟೆ. ಮುತ್ತು. ಬಹು­ಬೇ­ಗನೆ ಚೀನಿ ಎಲ್ಲರ ಸಮೀ­ಪದ ಮನು­ಷ್ಯ­ರಾ­ಗಿ­ಬಿ­ಡು­ತ್ತಾರೆ.
ಚೀನಿ ಅವರು ರಂಗ­ಭೂ­ಮಿಗೆ ಬಂದದ್ದು ಆಕ­ಸ್ಮಿಕ. ಮಂಗ­ಳೂ­ರಿನ ಹೊಟೇ­ಲೊಂ­ದರ ಲೈವ್‌­ಬ್ಯಾಂಡ್‌ ಗಿಟಾರ್‌ ವಾದ­ಕ­ರಾ­ಗಿದ್ದ ಅವ­ರಿಗೆ ರಂಗ ಸಂಗೀ­ತ­ಗಾ­ರ­ನಾ­ಗುವ ಕಲ್ಪನೆ ಕನ­ಸಿ­ನ­ಲ್ಲಿಯೂ ಇರ­ಲಿಲ್ಲ. ಮಂಗ­ಳೂ­ರಿ­ನಲ್ಲಿ ಪಾಶ್ಚ್ಯಾತ್ಯ ಸಂಗೀ­ತ­ಗಾ­ರರ ಒಂದು ತಂಡ­ವಿತ್ತು. ಕನ್ನಡ ಚಿತ್ರ­ರಂ­ಗ­ದಲ್ಲಿ ಇಂದು ಮಿಂಚು­ತ್ತಿ­ರುವ ಸಂಗೀತ ನಿರ್ದೇ­ಶಕ ಗುರು­ಕಿ­ರಣ್‌ ಅಲ್ಲಿ ಗಾಯ­ಕ­ರಾ­ಗಿ­ದ್ದರು. ಉಡುಪಿ, ಗೋವಾ ಮುಂತಾದ ಕಡೆ ತಮ್ಮ ಕಾರ್ಯ­ಕ್ರಮ ನೀಡು­ತ್ತಿ­ದ್ದರು. ಶ್ರೀನಿ­ವಾಸ ಭಟ್ಟ­ರಿಗೆ ಚೀನಿ ಎಂಬ ಹೆಸರು ಬಂದದ್ದು ಇಲ್ಲೇ.
ನೀನಾ­ಸಂನ `ಮೂ­ರ­ಕಾ­ಸಿನ ಸಂಗೀತ ನಾಟಕ' ರಂಗ ಪ್ರಯೋ­ಗ­ದಿಂದ ಚೀನಿ ರಂಗ ಸಂಗೀ­ತ­ಗಾ­ರ­ರಾಗಿ ಬಡ್ತಿ ಪಡೆ­ದರು. ನಂತರ ಕೆ.ವಿ. ಅಕ್ಷರ ಅವರ ಕಡೆ­ಯಿಂದ ರಂಗ­ದಿ­ಗ್ಗಜ ಬಿ.ವಿ. ಕಾರಂ­ತರ ಪರಿ­ಚ­ಯ­ವಾ­ಯಿತು. ಕಾರಂತ ನಿರ್ದೇ­ಶ­ನದ `ಸ­ದಾ­ರಮೆ' ಹಾಗೂ `ಬ­ಣ್ಣಿನ ಬಂಡಿ' ನಾಟ­ಕ­ಗ­ಳಲ್ಲಿ ಸಹಾ­ಯ­ಕ­ರಾಗಿ ಕೆಲಸ ಮಾಡಿ­ದರು. ಅಲ್ಲಿ ಚೀನಿ ತೋರಿದ ಪ್ರತಿಭೆ ಕಾರಂ­ತ­ರಲ್ಲಿ ಭರ­ವಸೆ ಮೂಡಿ­ಸಿತು. ಅಲ್ಲಿಂದ ಶ್ರೀನಿ­ವಾಸ ಭಟ್ಟರ ರಂಗ­ಭೂಮಿ ಪಯಣ ಆರಂ­ಭ­ವಾ­ಯಿತು.
ಕಾರಂ­ತರು ರಂಗಾ­ಯಣ ಕಟ್ಟು­ವಾಗ ಕಡೆ ಘಳಿ­ಗೆ­ಯಲ್ಲಿ ಚೀನಿ ರಂಗಾ­ಯಣ ಗರಡಿ ಸೇರಿ­ದರು. ಅಲ್ಲಿಂದ ಚೀನಿ ಅವರ ಮುಂದೆ ರಂಗ­ಭೂಮಿ ತೆರೆ­ದು­ಕೊಂ­ಡಿತು. ರಂಗ­ಭೂ­ಮಿ­ಯನ್ನು ಎಲ್ಲೂ ಕಲಿ­ತಿ­ದ್ದಿಲ್ಲ. ಆದರೆ ಕಾರಂ­ತರ ಪ್ರಭಾವ ಅವ­ರಲ್ಲಿ ರಂಗ­ಭೂ­ಮಿಯ ಉಸಿ­ರಾ­ಡು­ವಂತೆ ಮಾಡಿತು.
ಬಿ.ವಿ. ಕಾರಂ­ತರ ನೆಚ್ಚಿನ ಶಿಷ್ಯ­ರಲ್ಲಿ ಚೀನಿ ಕೂಡ ಒಬ್ಬರು. ಅವ­ರನ್ನು ಕಾರಂ­ತರು ಬಹ­ಳ­ವಾಗಿ ಪ್ರೀತಿ­ಸು­ತ್ತಿ­ದ್ದರು. ರಂಗಾ­ಯ­ಣ­ವೆಂಬ ಕುಟುಂ­ಬ­ವೊಂ­ದ­ರಲ್ಲಿ ಚೀನಿ ಎಲ್ಲ­ರಿಂದ ಪ್ರೀತಿ­ಸ­ಲ್ಪ­ಡುವ ಹುಡು­ಗ­ನಾ­ಗಿ­ದ್ದರು. ಪ್ರೀತಿ­ಸಿದ ಹುಡುಗಿ `ಸು­ಚೇತಾ'ರನ್ನು ರಂಗಾ­ಯ­ಣದ ವನ­ರಂ­ಗ­ದಲ್ಲಿ ಕಲಾ­ವಿ­ದರ ಮುಂದೆ ಕೈ ಹಿಡು­ದದ್ದು ವಿಶೇಷ!
ಆರಂ­ಭ­ದಲ್ಲಿ ಕಾರಂ­ತರೇ ಸಂಗೀತ ನಿರ್ದೇ­ಶಿ­ಸಿದ ನಾಟ­ಕ­ಗ­ಳಿಗೆ ಸ್ವರ ಹಾಕು­ತ್ತಿ­ದ್ದರು. ವಾದ್ಯ ನುಡಿ­ಸು­ತ್ತಿ­ದ್ದರು. ಆ ನಂತರ ಸ್ವತಂ­ತ್ರ­ವಾಗಿ ಸಂಗೀತ ನಿರ್ದೇ­ಶನ ನೀಡಿ­ದರು. ಕಾರಂ­ತರ ಬಹ­ಳಷ್ಟು ನಾಟ­ಕ­ಗ­ಳಿಗೆ ಚೀನಿ ಅವರೇ ಸಂಗೀತ ನಿರ್ದೇ­ಶ­ಕರು. ಕಾರಂ­ತರು ಅವ­ರನ್ನು ಬಹ­ಳ­ವಾಗಿ ಹಚ್ಚಿ­ಕೊಂ­ಡಿ­ದ್ದರು. ಅವರು ಸಾಯುವ ಮುಂಚೆ ತಮಗೆ ಪತ್ರ ಬರೆ­ದಿ­ದ್ದನ್ನು ಚೀನಿ ನೋವಿ­ನಿಂದ ನೆನಪು ಮಾಡಿ­ಕೊ­ಳ್ಳು­ತ್ತಾರೆ.
ಅವರು ಸದಾ ಒಂದ­ಲ್ಲೊಂದು ಕೆಲಸ ಮಾಡು­ತ್ತಲೇ ಇರುವ ಶ್ರಮ ಜೀವಿ. ಪೆಟ್ಟಿ ಹಿಡಿದು ಕೂತರೆ ಅಲ್ಲೊಂದು ಒಳ್ಳೆಯ ಸಂಗೀತ ಮೂಡಿ ಬರ­ಲೇ­ಬೇಕು. ಒಂದು ರೀತಿಯ ಹಠ­ಯೋಗ. ಅವರು ರಂಗಾ­ಯ­ಣ­ದಲ್ಲಿ ವರ್ಷ­ಪೂರ್ತಿ ಬಿಜಿ. ಜತೆಗೆ ರಂಗ­ಸಂ­ಗೀತ ಶಿಬಿ­ರ­ಗಳು, ಕಮ್ಮ­ಟ­ಗಳು, ಚಿಣ್ಣರ ಮೇಳ, ಸಂಸ್ಕೃತಿ ಶಿಬಿರ ಹೀಗೆ ಯಾವಾ­ಗಲೂ ಅವ­ರಿಗೆ ಕೆಲಸ ಇದ್ದೇ ಇರು­ತ್ತದೆ. ರಜ­ದಲ್ಲೂ ಅವ­ರಿಗೆ ಬಿಡು­ವಿ­ರು­ವು­ದಿಲ್ಲ.
ಅವರು ರಂಗ­ಭೂ­ಮಿಗೆ ಸಲ್ಲಿ­ಸಿದ ಸೇವೆಗೆ ತಕ್ಕ ಮನ್ನಣೆ ದೊರೆ­ಯದೆ ಇರು­ವುದು ಬಹಳ ನೋವಿನ ವಿಷಯ. ಸರ್ಕಾರಿ ರೆಪ­ರ್ಟ­ರಿ­ಯಾದ ರಂಗಾ­ಯ­ಣ­ದಲ್ಲಿ ಶಿಕ್ಷ­ಕರು ಹಾಗೂ ಪ್ರಶಿ­ಕ್ಷ­ಕರು ಎಂಬ ಎರಡು ವರ್ಗದ ಕಲಾ­ವಿ­ದ­ರಿ­ದ್ದಾರೆ. ಚೀನಿ ಶಿಕ್ಷಕ ವರ್ಗದ ಕಲಾ­ವಿ­ದರು. ಆದರೆ ಅವ­ರಿಗೆ ಸಿಗುವ ಸರ್ಕಾರಿ ಸೌಲ­ಭ್ಯ­ಗಳು ಬಹಳ ಕಡಿಮೆ. ಇದು ನಿಜಕ್ಕೂ ತಾರ­ತಮ್ಯ. ರಂಗಾ­ಯ­ಣದ ಅವಿ­ಭಾಜ್ಯ ಅಂಗ­ವೊಂ­ದಕ್ಕೆ ಮಾಡಿದ ಮೋಸ­ವಿದು. ಅವ­ರಿಗೆ ಸಿಗ­ಬೇ­ಕಾದ ಮನ್ನ­ಣೆ­ಯನ್ನು ನಮ್ಮ ಸರ್ಕಾರ ಆದಷ್ಟು ಬೇಗ ಕೊಟ್ಟರೆ ಕಲಾ­ವಿ­ದರ ಪ್ರತಿ­ಭೆ­ಯನ್ನು ಗೌರ­ವಿ­ಸಿ­ದಂ­ತಾ­ಗು­ತ್ತದೆ.
ಚೀನಿ ಅವರು ಸೌಲ­ಭ್ಯ­ಗಳ ಬಗ್ಗೆ ಎಂದೂ ತಲೆ ಕೆಡಿ­ಸಿ­ಕೊಂ­ಡಿ­ದ್ದಿಲ್ಲ. ಅವರ ಕೆಲ­ಸ­ವನ್ನು ಮೆಚ್ಚಿ­ಕೊ­ಳ್ಳಲು ನೂರಾರು ಅಭಿ­ಮಾ­ನಿ­ಗ­ಳಿ­ದ್ದಾರೆ. ಸಂತೋಷ ಪಡಲು ರಕ್ತ­ದಲ್ಲಿ ಸಂಗೀ­ತ­ವಿದೆ. ವಿದ್ಯಾ­ರ್ಥಿ­ಗ­ಳಿ­ದ್ದಾರೆ. ದೈರ್ಯ ತುಂಬುವ ಸುಚೇತಾ ಪತ್ನಿ ಇದ್ದಾರೆ. ಅವ­ರಷ್ಟೇ ಪ್ರತಿ­ಭಾ­ವಂತ ಗಿರಿ­ದಾಸ ಭಟ್‌ ಮಗ­ನಿ­ದ್ದಾನೆ. ಇವ­ರು­ಗಳ ನಡುವೆ ಚೀನಿ ಅವರು ಮುಗು­ಳ್ನ­ಗು­ತ್ತಲೇ ಎಲ್ಲ­ವನ್ನು ಸಹಿಸಿಕೊಂಡಿದ್ದಾರೆ.

No comments:

Post a Comment