Tuesday, September 8, 2009

ಗಣ­ಪತಿ ಸಚ್ಚಿ­ದಾ­ನಂದ ಸ್ವಾಮೀಜಿ



ಸಪ್ತ ಸ್ವರಗಳ `ಸ್ವಾಮೀಜಿ' ಹೃದಯ

ಸ ರಿ ಗ ಮ ಪ ದ ನಿ....ಗಳ ಮೇಲೆ ಆ ಮಾನ­ವ­ತಾ­ವಾ­ದಿಗೆ ಅದೇನು ವಿಶ್ವಾಸ! ಸಂಗೀತ ಒಂದು ಶಕ್ತಿ. ಬದು­ಕಿ­ನ­ಲ್ಲಿ­ರುವ ಸೌಂದರ್ಯ ಕಾಣಲು ಸಂಗೀತ ಪ್ರಧಾನ ಮಾರ್ಗ. ಮನುಷ್ಯ ಮಾತ್ರ­ವಲ್ಲ ಪ್ರಾಣಿ ಪಕ್ಷಿ­ಗಳ ಹೃದಯ ತಲು­ಪುವ ಅಪೂರ್ವ ಚೈತನ್ಯ ಸಂಗೀತ. ಜಗದ ಮನು­ಷ್ಯ­ತ್ವ­ವನ್ನು ಒಂದೆಡೆ ಕಲೆ­ಹಾ­ಕುವ ಮಾರ್ಗ. ಮಾಯಾ­ಲೋ­ಕದ ಒತ್ತ­ಡ­ಗ­ಳಿಂದ ಬಳ­ಲಿದ ಹೃದ­ಯ­ಗ­ಳಿಗೆ ವಿಶ್ರಾಂ­ತಿಯ ಗುಳಿಗೆ. ಸಾವಿರ ವ್ಯಾಧಿ­ಗ­ಳನ್ನು ಗುಣ­ಪ­ಡಿ­ಸುವ ಸಾಮ­ರ್ಥ್ಯ­ವಿ­ರುವ ದಿವ್ಯ ಔಷಧಿ.... ಹೀಗೆಂದು ನಂಬಿ­ರುವ ಅವರ ಹೃದಯ ಸಪ್ತ­ಸ್ವ­ರ­ಗ­ಳಿಂದ ಉತ್ಪ­ತ್ತಿ­ಯಾ­ಗಿದೆ!
ಅವ­ರೊಬ್ಬ ಸ್ವಾಮೀಜಿ. ಯಾವುದೋ ಒಂದು ಸಮಾ­ಜಕ್ಕೆ, ಸಮು­ದಾ­ಯಕ್ಕೆ ಸೀಮಿ­ತ­ವಾ­ದ­ವ­ರಲ್ಲ. ಪವಾಡ ಮಾಡಿ ಮಾವಿ­ನ­ಹಣ್ಣು ಉದು­ರಿ­ಸುವ ಮಂತ್ರ­ವಾ­ದಿ­ಯಲ್ಲ. ಮಠದ ಹೆಸ­ರಲ್ಲಿ ಮನೆ­ಕ­ಟ್ಟು­ವ­ವ­ರಲ್ಲ. ಬರೀ ಮಾತು­ಗ­ಳ­ನ್ನಾಡಿ ಜೇಬು ತುಂಬಿ­ಸಿ­ಕೊ­ಳ್ಳುವ ಸ್ವಾಮೀ­ಜಿಯೂ ಅಲ್ಲ! ಅವ­ರೊಬ್ಬ ಹಾಡು­ಗಾರ. ಹಾಡು ಹೇಳಿ ಸಂತೋಷ ಕೊಡು­ವವ. ವಾದ್ಯ ನುಡಿಸಿ ಮನ­ಸ್ಸು­ಗಳ ಮೇಲೆ ಬಣ್ಣ ಬಳಿ­ಯು­ವವ. ಸಪ್ತ ಸ್ವರ­ಗ­ಳನ್ನು ದೇಹ­ವಿಡೀ ತುಂಬಿ­ಕೊಂ­ಡಿ­ರುವ ಸಂಗೀತ ಸಂಪನ್ನ.
ಅವರು ಗಣ­ಪತಿ ಸಚ್ಚಿ­ದಾ­ನಂದ ಸ್ವಾಮೀಜಿ. ಚಾಮುಂಡಿ ಬೆಟ್ಟದ ತಪ್ಪ­ಲಿನ ಪ್ರಕೃತಿ ಮಡಿ­ಲಿ­ನಲ್ಲಿ ಅರ­ಳಿ­ರುವ ಅವ­ಧೂತ ದತ್ತ ಪೀಠದ ಸಂಸ್ಥಾ­ಪ­ಕರು. ಸ್ವತಃ ಸಂಗೀ­ತ­ಗಾ­ರರು, ಸ್ವರ ಸಂಯೋ­ಜ­ಕರೂ ಆಗಿ­ರುವ ಶ್ರೀಗಳು ತಮ್ಮ ಭಕ್ತಿ ಸಂಗೀತ ಮಾರ್ಗದ ಮೂಲಕ ವಿಶ್ವ ಪರ್ಯ­ಟನೆ ಮಾಡಿ­ದ­ವರು. ತಮ್ಮ ಸಂಗೀತ ಚಿಕಿತ್ಸೆ ಮೂಲಕ ವಿಶ್ವ ಮಾನವ ಸಮಾ­ಜ­ದಲ್ಲಿ ಶಾಂತಿ ಮೂಡಿ­ಸಲು ಹವ­ಣಿ­ಸು­ತ್ತಿ­ರುವ ಯೋಗಿ ಶ್ರೀ ಸ್ವಾಮೀಜಿ.
ಸಚ್ಚಿ­ದಾ­ನಂದ ಶ್ರೀಗಳ ಸಂಗೀತ ಚಿಕಿತ್ಸೆ ಇಂದು ಜಗ­ತ್ತಿ­ನೆ­ಲ್ಲೆಡೆ ಮನ್ನಣೆ ಪಡೆ­ದಿದೆ. ಅವರ ಭಕ್ತಿ ಸಂಗೀ­ತ­ದಲ್ಲಿ ಮನ­ಶ್ಯಾ­ಸ್ತ್ರ­ವಿದೆ. ಭವಿ­ಷ್ಯ­ವಿದೆ. ಪತಂ­ಜಲಿ ಯೋಗ­ಸೂ­ತ್ರ­ಗ­ಳಿವೆ. ಸಪ್ತ ಸ್ವರ­ಗಳ ಶುದ್ಧ­ತೆ­ಯಿಂದ ಹೊಮ್ಮಿ ಬರುವ ಮಾಧು­ರ್ಯ­ವನ್ನು ಆಲಿ­ಸುವ ಮನ­ಸ್ಸು­ಗ­ಳಲ್ಲಿ ಸಂತೋ­ಷದ ಕಿಚ್ಚು ಹೊತ್ತಿ­ಕೊ­ಳ್ಳು­ತ್ತದೆ. ಅಲ್ಲೊಂದು ಶಕ್ತಿಯ ಸಂಚಾ­ರ­ವಾ­ಗು­ತ್ತದೆ. ಕೇಳು­ಗನ ನಾಡಿ­ಯಲ್ಲಿ ಶಕ್ತಿ ಚಲಿ­ಸುತ್ತಾ ತಾನಾ­ಗಿಯೇ ಆನಂದ ಉತ್ಪ­ತ್ತಿ­ಯಾ­ಗು­ತ್ತದೆ. ಅದೇ ಚಿಕಿ­ತ್ಸಕ ಗುಣ. ಅದೇ ಸಂಗೀತ ಚಿಕಿತ್ಸೆ.
ಸಂಗೀತ ಚಿಕಿ­ತ್ಸೆ­ಯನ್ನು ಬಲ­ವಾಗಿ ನಂಬಿ­ರುವ ಸಚ್ಚಿ­ದಾ­ನಂದ ಶ್ರೀಗಳು ತಮ್ಮ ಸಂಗೀ­ತದ ಮೂಲಕ ಕೇಳುವ ಮನ­ಸ್ಸು­ಗ­ಳಲ್ಲಿ ರೋಮಾಂ­ಚನ ಸೃಷ್ಟಿ­ಸು­ತ್ತಾರೆ. ಆತ್ಮ­ವನ್ನು ಉಲ್ಲಾ­ಸ­ಗೊ­ಳಿ­ಸು­ತ್ತಾರೆ. ಕಣ್ಣಂ­ಚಿ­ನಲ್ಲಿ ಬಾಷ್ಪ ಹರಿ­ಸು­ತ್ತಾರೆ. ಆ ಅನು­ಭವ ಪಡೆ­ಯಲು ಅವರ ಸಂಗೀ­ತ­ವನ್ನೇ ಕೇಳ­ಬೇಕು.
ಮೈಸೂರು ಆಶ್ರ­ಮದ ಆವ­ರ­ಣ­ದ­ಲ್ಲಿ­ರುವ ನಾದ­ಮಂ­ಟಪ ಅದ್ಬು­ತ­ವನ್ನು ಹೊತ್ತು ನಿಂತಿದೆ. ಮಂಟ­ಪಕ್ಕೆ 72 ಕಂಭ­ಗಳು ಆಸ­ರೆ­ಯಾ­ಗಿವೆ. ಆ 72 ಕಂಭ­ಗಳು ಕರ್ನಾ­ಟಕ ಶಾಸ್ತ್ರೀಯ ಸಂಗೀ­ತದ 72 ಮೇಳ­ಕರ್ತ ರಾಗ­ಗ­ಳನ್ನು ಪ್ರತಿ­ನಿ­ಧಿ­ಸು­ತ್ತವೆ. ಅಲ್ಲಿ ಹತ್ತು ನಿಮಿಷ ಕೂತರೆ ಸಾಕು ಮನಸ್ಸು ನಿರ್ಮ­ಲ­ವಾ­ಗು­ತ್ತದೆ. ಅಲ್ಲಿ ಬೀಸುವ ಗಾಳಿ ಸರಿ­ಗ­ಮ­ಗ­ಳನ್ನು ಹೊತ್ತು ಸಾಗು­ತ್ತದೆ. ಸುಂದರ ಪರಿ­ಸ­ರ­ದೊ­ಳ­ಗಿನ ಪ್ರತಿ ಗಿಡವೂ ಕೃತಿ ಗೀತೆ ಕೀರ್ತ­ನೆ­ಗ­ಳನ್ನು ಗುನು­ಗು­ನಿ­ಸು­ತ್ತವೆ. ಅಲ್ಲಿ ಹೋದರೆ ಮೌನದ ಜೊತೆ ಮಾತ­ನಾ­ಡ­ಬ­ಹುದು. ನಿಶ­ಬ್ದದ ಜೊತೆ ಆಲಾಪ ಮಾಡ­ಬ­ಹುದು. ಆ ಅನು­ಭವ ಪಡೆ­ಯಲು ಅಲ್ಲಿಗೇ ಹೋಗ­ಬೇಕು.
ಪ್ರತಿ­ಯೊಂದು ಹಬ್ಬ ಹರಿ­ದಿ­ನ­ಗ­ಳಲ್ಲೂ ಸಚ್ಚಿ­ದಾ­ನಂದ ಆಶ್ರಮ ಸಂಗೀತ ಪ್ರೇಮಿ­ಗ­ಳಿಂದ ತುಂಬಿ­ರು­ತ್ತದೆ. ಅಲ್ಲಿಯ ವಾತಾ­ವ­ರಣ ಯುವ ಮನ­ಸ್ಸು­ಗ­ಳಿಗೆ ಸ್ಪೂರ್ತಿ ತುಂಬು­ತ್ತದೆ. ಅಲ್ಲದೆ ಸಂಗೀ­ತ­ಗಾ­ರ­ರಿಗೆ ಆಶ್ರಮ ವೇದಿ­ಕೆಯೂ ಆಗಿದೆ. ವಿಶೇಷ ಸಂದ­ರ್ಭ­ಗ­ಳಲ್ಲಿ ಸಂಗೀ­ತ­ಗಾ­ರ­ರನ್ನು ಆಹ್ವಾ­ನಿಸಿ ಕಛೇರಿ ಕೊಡಿ­ಸ­ಲಾ­ಗು­ತ್ತದೆ. ಸಂಗೀ­ತ­ಗಾ­ರ­ರನ್ನು ಗುರು­ತಿಸಿ ಗೌರ­ವಿ­ಸುವ ಪರಂ­ಪ­ರೆ­ಯನ್ನೂ ಶ್ರೀಗಳು ಮಾಡುತ್ತಾ ಬಂದಿ­ದ್ದಾರೆ. ಶಿವ­ರಾತ್ರಿ ಹಬ್ಬ­ವನ್ನು ವಿೃಂ­ಭ­ಣೆ­ಯಿಂದ ಆಚ­ರಣೆ ಮಾಡ­ಲಾ­ಗು­ತ್ತದೆ. ಅಂದು ನಡೆ­ಸುವ ಹೋಮ ಬಹಳ ಮಹತ್ವ ಪಡೆ­ದಿದೆ.
ಶ್ರೀಗ­ಳಿಗೆ ಒಂದು ಕಗ್ಗ­ಲ್ಲನ್ನೂ ಕೊಟ್ಟರು ಸ್ವರ ಹುಟ್ಟಿ­ಸು­ತ್ತಾರೆ. ಅವರು ಬಹು­ವಾದ್ಯ ಪಂಡಿ­ತರು. ಶ್ರೀಗಳ ಆಶೀ­ರ್ವ­ಚ­ನ­ಗಳೂ ಕೂಡ ಬಹಳ ಮನ್ನಣೆ ಪಡೆ­ದಿವೆ. ಧಾರ್ಮಿಕ ದೂರ­ರ್ಶನ ವಾಹಿ­ನಿ­ಗ­ಳಲ್ಲಿ ಅವರ ಉಪ­ನ್ಯಾ­ಸ­ಗಳು ಪ್ರಸಾ­ರ­ಗೊ­ಳ್ಳು­ತ್ತವೆ. ಶ್ರೀಗಳೇ ಹಾಡಿ­ರುವ ಸಾವಿ­ರಾರು ಸಿಡಿ, ಕ್ಸಾಸೆ­ಟ್‌­ಗಳು ಹೊರ­ಬಂ­ದಿವೆ.
ಅವ­ತಾರ ಮೂರ್ತಿ ದತ್ತಾ­ತ್ರೇ­ಯರ ಹಲವು ಪೀಠ­ಗ­ಳಲ್ಲಿ ಸಚ್ಚಿ­ದಾ­ನಂದ ಶ್ರೀ ಸ್ಥಾಪ­ನೆಯ ಅವ­ಧೂತ ಪೀಠವೂ ಒಂದು. ಅವರು ದೇಶಾ­ದ್ಯಂತ ಹಲವು ದೇವಾ­ಲ­ಯ­ಗ­ಳನ್ನು ನಿರ್ಮಿ­ಸಿ­ದ್ದಾರೆ.
ಶ್ರೀಗಳ ಮೂಲ ಮೈಸೂ­ರಾ­ದರೂ ಅವರ ಸಂಗೀತ ಅಭಿ­ಯಾನ ವಿಶ್ವ­ದಾ­ದ್ಯಂತ ನಡೆ­ಯು­ತ್ತಿದೆ. ಭಾರ­ತದ ಎಲ್ಲಾ ಪ್ರಮುಖ ನಗ­ರ­ಗ­ಳಲ್ಲಿ ಆಶ್ರ­ಮದ ಶಾಖೆ­ಗ­ಳಿವೆ. ವಿದೇ­ಶ­ಗ­ಳಲ್ಲೂ ಇವೆ.
1966ರಲ್ಲಿ ಒಂದು ಸಣ್ಣ ಗುಡಿ­ಸ­ಲಿ­ನಿಂದ ಆರಂ­ಭ­ವಾದ ಶ್ರೀಗಳ ಆಶ್ರಮ ಇಂದು ೃಹ­ದಾ­ಕಾ­ರ­ವಾಗಿ ಬೆಳೆ­ದಿದೆ. ಸಂಗೀ­ತದ ಮೂಲಕ ಸಮಾ­ಜ­ದಲ್ಲಿ ಶಾಂತಿ ಸ್ಥಾಪ­ನೆಯ ಮಂತ್ರ­ವನ್ನು ಜಗ­ತ್ತಿಗೆ ತಿಳಿ­ಸಿದೆ.

No comments:

Post a Comment