Sunday, October 18, 2009

ಚಿತ್ರ­ವೀಣಾ ರವಿ­ಕಿ­ರಣ್‌




ಚಿತ್ರ­ವೀ­ಣೆಯ ರವಿ­ಕಿ­ರಣ

ಅತ್ಯಂತ ಹಳೆಯ ಸಂಗೀತ ವಾದ್ಯ ಚಿತ್ರ­ವೀಣೆ. ಇದಕ್ಕೆ ಸಾವಿ­ರಾರು ವರ್ಷ­ಗಳ ಇತಿ­ಹಾಸ ಇದ್ದರೂ ಬಹಳ ಮಂದಿ ಕಂಡಿ­ರ­ಲಿ­ಕ್ಕಿಲ್ಲ. 21 ತಂತಿ ಹೊಂದಿ­ರುವ ಚಿತ್ರ­ವೀ­ಣೆಯ ಮೇಲೆ ಹಿಡಿತ ಸಾಧಿ­ಸಿದ ಸಂಗೀತ ಸಾಧ­ಕರು ಬೆರ­ಳೆ­ಣಿ­ಕೆ­ಯಷ್ಟು. ಹಾಗಾಗಿ ಈ ವಾದ್ಯ ತೆರೆ­ಮ­ರೆ­ಯಲ್ಲೇ ಉಳಿ­ಯ­ಬೇ­ಕಾ­ಯಿತು. ಈ ವಾದ್ಯ ಅಷ್ಟು ಸುಲ­ಭ­ವಾಗಿ ಕೈಗ­ತ್ತು­ವಂ­ಥ­ದ್ದಲ್ಲ, ಕೊರ­ಡಿ­ನಂ­ಥದ್ದು. ರಾಮಾ­ಯ­ಣ­ದಲ್ಲಿ ಹನು­ಮಂತ ನುಡಿ­ಸು­ತ್ತಿದ್ದ (ಹ­ನುಮ ತೋಡಿಗೆ ಕಲ್ಲು ಕರ­ಗಿ­ತಂತೆ) `ಗೋ­ಟು­ವಾದ್ಯ'ದ ಪ್ರತಿ­ರೂ­ಪವೇ ಈ ಚಿತ್ರ­ವೀಣೆ.
ಮರೆ­ಯ­ಲ್ಲಿದ್ದ ಈ ಪ್ರಾಚೀನ ವಾದ್ಯಕ್ಕೆ ಹೊಸ ಆಯಾ­ಮ­ಕೊ­ಟ್ಟ­ವರು ಮೈಸೂರು ಹುಡುಗ, ವಿಶ್ವದ ಪ್ರತಿ­ಷ್ಠಿತ `ಮಿ­ಲೇ­ನಿಯಂ ಪ್ರಶಸ್ತಿ' ಪುರ­ಸ್ಕೃತ ಚಿತ್ರ­ವೀಣಾ ಎನ್‌. ರವಿ­ಕಿ­ರಣ್‌!
ಕೇವಲ ಒಬ್ಬನೇ ಒಬ್ಬ ಸಂಗೀತ ಸಾಧ­ಕ­ನಿಂದ ಅಳಿ­ವಿನ ಹಂಚಿ­ನ­ಲ್ಲಿದ್ದ ಚಿತ್ರ­ವೀಣೆ ಇಂದು ಜಗ­ತ್ತಿ­ನಾ­ದ್ಯಂತ ಮಿಡಿ­ಯು­ತ್ತಿದೆ. ಚಿತ್ರ­ವೀ­ಣೆಗೆ ಜೀವ­ತುಂ­ಬಿದ ರವಿ­ಕಿ­ರಣ್‌ ಕೂಡ ಜಗ­ತ್ಪ್ರ­ಸಿ­ದ್ಧ­ವಾಗಿ ರೂಪು­ಗೊಂ­ಡಿ­ದ್ದಾರೆ. ಸತತ 24 ಗಂಟೆ ಚಿತ್ರ­ವೀಣೆ ನುಡಿಸಿ ವಿಶ್ವದ ಗಮನ ಸೆಳೆ­ದಿ­ದ್ದಾರೆ. 325 ರಾಗ­ಗಳು, 175 ತಾಳ­ಗ­ಳನ್ನು ರವಿ­ಕಿ­ರಣ್‌ ತಮ್ಮ­ದಾ­ಗಿ­ಸಿ­ಕೊಂ­ಡಿ­ದ್ದಾರೆ.
ರವಿ­ಕಿ­ರಣ್‌ ಜಗ­ತ್ತಿನ ಅಪ­ರೂಪ. ಸಂಗೀ­ತ­ವನ್ನು ತಮ್ಮ ವಿಶಿ­ಷ್ಟ­ವಾದ ಲೆಕ್ಕಾ­ಚಾ­ರ­ಗ­ಳಿಂದ ಪ್ರಸ್ತು­ತ­ಪ­ಡಿ­ಸುವ ಪ್ರತಿ­ಭಾ­ವಂತ. ಅವರ ಹಾಡ­ಗಾ­ರಿಕೆ ಆಗಲೀ ನುಡಿ­ಸು­ಗಾ­ರಿಕೆ ಆಗಲೀ ಅಪ್ಪಟ ಶಾಸ್ತ್ರ­ಬದ್ಧ. ರಾಗ, ತಾಳ, ಕೃತಿ­ಗಳ ರಸ­ವನ್ನು ತಮ್ಮ ಚಿತ್ರ­ವೀ­ಣೆಯ ಮೂಲಕ ಬಹಳ ಶಾಸ್ತ್ರೀ­ಯ­ವಾಗಿ ಉಣ­ಬ­ಡಿ­ಸು­ವಲ್ಲಿ ಅವರು ಅಪ್ರ­ತಿ­ಮರು. ಚಿತ್ರ­ವೀ­ಣೆಯ ಮೇಲೆ ಅವ­ರಿ­ಗಿ­ರುವ ಹಿಡಿತ ನೋಡಿ­ದರೆ, ರವಿ­ಕಿ­ರಣ್‌ ಚಿತ್ರ­ವೀ­ಣೆ­ಗಾ­ಗಿಯೇ ಜನ್ಮ­ತಾ­ಳಿ­ದ್ದಾರೆ ಎಂಬ ತುಡಿತ ರಸಿ­ಕ­ರಲ್ಲಿ ಮೂಡು­ತ್ತದೆ.
ಖ್ಯಾತ ಸಿತಾರ್‌ ವಾದಕ ಪಂಡಿತ್‌ ರವಿ­ಶಂ­ಕರ್‌ ಅವರು ಒಮ್ಮೆ ರವಿ­ಕಿ­ರಣ್‌ ಅವರ ಬಗ್ಗೆ ಮಾತ­ನಾ­ಡು­ವಾಗ `ನಿ­ಮಗೆ ದೇವ­ರಲ್ಲಿ ನಂಬಿಕೆ ಇಲ್ಲ­ದಿ­ದ್ದರೆ ನೀವು ಎನ್‌. ರವಿ­ಕಿ­ರಣ್‌ ಅವ­ರನ್ನು ನೋಡಿ' ಎಂದು ಹೇಳಿದ ಮಾತು ರವಿ­ಕಿ­ರಣ್‌ ಅವರ ವಿದ್ಯೆ­ಯನ್ನು ಎತ್ತಿ ಹಿಡಿ­ದಿದೆ. ರೇಡಿಯೋ ಆಸ್ಟ್ರೇ­ಲಿಯಾ ರವಿ­ಕಿ­ರಣ್‌ ಅವ­ರನ್ನು `ಗ್ರೇ­ಟೆಸ್ಟ್‌ ಸ್ಲ್ಕ್ರೆಡ್‌ ಇನ್‌­ಸ್ಟ್ರು­ಮೆಂ­ಟ­ಲಿಸ್ಟ್‌' ಎಂದು ಕರೆದು ಅವರ ಪ್ರಬು­ದ್ಧ­ತೆ­ಯನ್ನು ಜಗ­ತ್ತಿಗೆ ಸಾರಿದೆ. `ಇಂ­ಡಿ­ಯನ್‌ ಮೆಸಾರ್ಟ್‌' ಎಂದೇ ಜಗ­ತ್ತಿ­ನೆ­ಲ್ಲೆಡೆ ಎನ್‌. ರವಿ­ಕಿ­ರಣ್‌ ಪ್ರಖ್ಯಾ­ತರು.

ಬಾಲ ಸಂಗೀತ ಸಾಮ್ರಾಟ
ತಮ್ಮ ಎರ­ಡನೇ ವಯ­ಸ್ಸಿ­ನಲ್ಲೇ ಸಂಗೀತ ಕಚೇರಿ ನೀಡಿದ ರವಿ­ಕಿ­ರಣ್‌ ರಸಿ­ಕರ ಮನ­ಸ್ಸಿ­ನಲ್ಲಿ ಭರ­ವಸೆ ಮೂಡಿ­ಸಿ­ದರು. 1969ರಲ್ಲಿ ಬೆಂಗ­ಳೂ­ರಿನ ಮಲ್ಲೇ­ಶ್ವರಂ ಸಂಗೀತ ಸಭಾ­ದಲ್ಲಿ ತಮ್ಮ ಚೊಚ್ಚಲ ಕಚೇರಿ ನೀಡಿ­ದರು. ಬಹಳ ಚಿಕ್ಕ­ವ­ಯ­ಸ್ಸಿ­ನಲ್ಲೇ ಮದ್ರಾಸ್‌ ಸಂಗೀತ ಅಕಾ­ಡೆಮಿ ಆಯೋ­ಜಿ­ಸಿದ್ದ ಸಂಗೀತ ಕ್ವಿಜ್‌­ನಲ್ಲಿ ಕಷ್ಟದ ತಾಂತ್ರಿಕ ಪ್ರಶ್ನೆ­ಗ­ಳಿಗೆ ಉತ್ತ­ರಿಸಿ ಸ್ಕಾಲ­ರ್‌­ಶಿಪ್‌ ಪಡೆ­ದರು. ಆ ಸಂದ­ರ್ಭ­ದಲ್ಲಿ ಸಂಗೀತ ದಿಗ್ಗ­ಜ­ರಾದ ಪಂಡಿತ್‌ ರವಿ­ಶಂ­ಕರ್‌, ಎಂ.ಎಸ್‌. ಸುಬ್ಬು­ಲಕ್ಷ್ಮಿ ಅಂಥ­ವರೇ ರವಿ­ಕಿ­ರಣ್‌ ಅವರ ಸಂಗೀತ ವಿದ್ಯೆಗೆ ಮಾರು­ಹೋ­ದರು.
ಹತ್ತನೇ ವಯ­ಸ್ಸಿ­ನ­ವ­ರೆಗೆ ಗಾಯನ ಕಚೇರಿ ನೀಡು­ತಿದ್ದ ರವಿ­ಕಿ­ರಣ್‌ ನಂತರ ಚಿತ್ರ­ವೀಣೆ ಕಡೆ ಹೊರ­ಳಿ­ದರು. ಗೋಟು­ವಾದ್ಯ ಸ್ವರೂ­ಪದ ವಾದ್ಯಕ್ಕೆ ಚಿತ್ರ­ವೀಣೆ ಎಂದು ನಾಮ­ಕ­ರಣ ಮಾಡಿ­ದರು. ಆನಂ­ತರ ನಿರ್ಮಾಣ ಆಗಿದ್ದು ಇತಿ­ಹಾಸ. ಈಗ ರವಿ­ಕಿ­ರಣ್‌ ಜಗ­ತ್ತಿನ ಅತ್ಯಂತ ಶ್ರೇಷ್ಠ ಸಂಗೀ­ತ­ಗಾರ!

ಮೆಲ್ಹಾ­ರ್ಮೋ­ನಿಕಾ
ಇದು ಚಿತ್ರ­ವೀಣಾ ರವಿ­ಕಿ­ರಣ್‌ ಅವರ ಕನ­ಸಿನ ಕೂಸು. ಈ ಕಾರ್ಯ­ಕ್ರ­ಮದ ಮೂಲಕ ಜಗ­ತ್ತಿ­ನಾ­ದ್ಯಂತ ತಮ್ಮ ಪ್ರತಿಭೆ ಮೆರೆ­ದಿ­ದ್ದಾರೆ. ಬೇರೆ ಬೇರೆ ನಗ­ರ­ಗ­ಳಲ್ಲಿ ವಿವಿಧ ಖ್ಯಾತ­ನಾಮ ಸಂಗೀ­ತ­ಗಾ­ರರ ಜತೆ­ಗೂಡಿ ಸಂಗೀತ ಸಾಧ್ಯ­ತೆ­ಗ­ಳನ್ನು ತಿಳಿ­ಸಿ­ಕೊ­ಟ್ಟಿ­ದ್ದಾರೆ. ಇದ­ರಲ್ಲಿ ಇಲ್ಲ­ದಿ­ರುವ ಸಂಗೀತ ಪ್ರಾಕಾ­ರ­ಗಳೇ ಇಲ್ಲ. ವಿವಿಧ ಸಮ­ಕಾ­ಲೀನ ಸಂಗೀತ ಪ್ರಬೇ­ಧ­ಗ­ಳನ್ನು ಇಲ್ಲಿ ಪ್ರಸ್ತು­ತ­ಪ­ಡಿ­ಸಿ­ದ್ದಾರೆ. ವಿವಿಧ ದೇಶ­ಗಳ ವಾದ್ಯ­ಗಳು ಮಿಲ್ಹಾ­ರ್ಮೋ­ನಿಕಾ ಕಾರ್ಯ­ಕ್ರ­ಮ­ದಲ್ಲಿ ಒಂದಾ­ಗು­ತ್ತವೆ. ಆ ಮೂಲಕ ಎಲ್ಲಾ ಸಂಗೀತ ಪ್ರಾಕಾ­ರ­ಗಳ ಮೂಲ ಒಂದೇ ಎಂದು ಪ್ರತಿ­ಪಾ­ದಿ­ಸಿ­ದ್ದಾರೆ. ವಿಶ್ವ­ದಾ­ದ್ಯಂತ ಹಲವು ನಗ­ರ­ಗ­ಳಲ್ಲಿ ಮೆಲ್ಹಾ­ರ್ಮೋ­ನಿಕಾ ನಡೆ­ದಿದೆ. ಬೇಸ­ರದ ಸಂಗತಿ ಎಂದರೆ ಈವ­ರೆಗೆ ಬೆಂಗ­ಳೂ­ರಿ­ನಲ್ಲಿ ನಡೆ­ದಿಲ್ಲ!

ಸಂಗೀ­ತ­ದಿಂದ ಸಾಮ­ರಸ್ಯ
ಹಲವು ದಶ­ಕ­ಗ­ಳಿಂದ ಅಸಂ­ಖ್ಯಾತ ದೇಶ­ಗ­ಳನ್ನು ಪ್ರವಾಸ ಮಾಡಿ, ಬೇರೆ ಬೇರೆ ಜನ, ಬೇರೆ ಬೇರೆ ಸಂಸ್ಕೃತಿ, ನೆಲ-ಜಲ ಅಭಿ­ರುಚಿ ಕಂಡಿ­ರುವ ರವಿ­ಕಿ­ರಣ್‌ ಅವ­ರಿಗೆ ಸಂಗೀ­ತ­ದಿಂದ ರಾಷ್ಟ್ರ­ಗಳ ನಡು­ವಣ ಸಾಮ­ರಸ್ಯ ಸಾಧಿ­ಸ­ಬ­ಹುದು ಎಂಬ ಬಲ­ವಾದ ನಂಬಿಕೆ ಇದೆ. ಎಷ್ಟೋ ಸಂದ­ರ್ಭ­ಗ­ಳಲ್ಲಿ ಅವರು ಈ ವಿಷ­ಯ­ವನ್ನು ಹೇಳಿ­ಕೊಂ­ಡಿ­ದ್ದಾರೆ. ಆದರೆ ಅವ­ರಿಗೆ ವಿದೇ­ಶ­ಗ­ಳಲ್ಲಿ ಸಿಕ್ಕಷ್ಟು ಪ್ರೋತ್ಸಾಹ, ಬೆಂಬಲ ತಾಯ್ನಾ­ಡಿ­ನಲ್ಲಿ ಸಿಕ್ಕಿಲ್ಲ. ಈ ಬೇಸರ ಅವ­ರನ್ನು ಬಾಧಿ­ಸ­ದೆಯೂ ಬಿಟ್ಟಿಲ್ಲ.

ಕೊಡುಗೆ
ವಿಶ್ವ ಸಂಗೀ­ತಕ್ಕೆ ಅವರು ನೀಡಿ­ರುವ ಕೊಡು­ಗೆ­ಗಳು ಅಪಾರ. `ಇಂ­ಟ­ರ್‌­ನ್ಯಾ­ಷ­ನಲ್‌ ಪೌಂಡೇ­ಶನ್‌ ಆಫ್‌ ಕರ್ನಾ­ಟಿಕ್‌ ಮ್ಯೂಸಿಕ್‌' ಸಂಸ್ಥೆ ಸ್ಥಾಪಿಸಿ ಆ ಮೂಲಕ ಹಲವು ದೇಶ­ಗಳ ನಡು­ವಿನ ಸಾಂಸ್ಕೃ­ತಿಕ ಬೆಸುಗೆ ಆಗಿ­ದ್ದಾರೆ. ರವಿ­ಕಿ­ರಣ್‌ ಸಂಗೀತ ತಜ್ಞರೂ ಆಗಿದ್ದು, ಹಲವು ಪುಸ್ತಕ ಬರೆ­ದಿ­ದ್ದಾರೆ. `ಅ­ಪ್ರಿ­ಷಿ­ಯೇ­ಟಿಂಗ್‌ ಕರ್ನಾ­ಟಿಕ್‌ ಮ್ಯೂಸಿಕ್‌', `ಪ­ರ್ಪೆ­ಕ್ಟಿಂಗ್‌ ಕರ್ನಾ­ಟಿಕ್‌ ಮ್ಯೂಸಿಕ್‌' ಕೃತಿ­ಗಳು ಕರ್ನಾ­ಟಕ ಶಾಸ್ತ್ರೀಯ ಸಂಗೀ­ತದ ಮೈಲು­ಗ­ಲ್ಲು­ಗಳು. `ಟೆಲಿ ಟೀಚಿಂಗ್‌' ಕಂಪ್ಯೂ­ಟರ್‌ ಕಾರ್ಯ­ಕ್ರ­ಮದ ಮೂಲದ ವಿಶ್ವ­ದಾ­ದ್ಯಂತ ಸಾವಿ­ರಾರು ವಿದ್ಯಾ­ರ್ಥಿ­ಗ­ಳನ್ನು ಹೊಂದಿ­ರುವ ಅವರು, ಸಂಗೀ­ತದ ಬಗ್ಗೆ ಯಾವುದೇ ಅನು­ಮಾ­ನ­ಗ­ಳಿಗೆ ಉತ್ತ­ರಿ­ಸು­ತ್ತಾರೆ.
ಅಪಾರ ಅಂತಾ­ರಾ­ಷ್ಟ್ರೀಯ, ರಾಷ್ಟ್ರೀಯ ಪ್ರಶ­ಸ್ತಿ­ಗಳು ರವಿ­ಕಿ­ರಣ್‌ ಅವ­ರಿಗೆ ಸಂದಿವೆ. ತಮ್ಮ ಆರನೇ ವಯ­ಸ್ಸಿ­ನಲ್ಲೇ ಅವ­ರಿಗೆ ಪ್ರತಿ­ಷ್ಠಿತ `ಅ­ರುಲ್‌ ಇಸ್ಕ್ರೆ ಸೆಲ್ವನ್‌' ಬಿರುದು ಲಭಿ­ಸಿದೆ. ಅಂತಾ­ರಾ­ಷ್ಟ್ರೀಯ ಪ್ರಶ­ಸ್ತಿ­ಗ­ಳಾದ ರಷ್ಯಾದ `ಮಿ­ಲೇ­ನಿಯಂ' ಪ್ರಶಸ್ತಿ, ಅಮೆ­ರಿ­ಕಾದ `ನ್ಯೂ ಏಜ್‌ ವಾ್ಸ್‌ ಅವಾರ್ಡ್‌'ಗಳು ದೊರೆ­ತಿವೆ. ಭಾರ­ತದ ಹೆಮ್ಮೆಯ `ಕ­ಲೈ­ಮಾ­ಮಣಿ' ಪ್ರಶಸ್ತಿ ಸಂದಿದೆ. `ವಿ­ಸ್‌­ಡಮ್‌ ಇಂಟ­ರ್‌­ನ್ಯಾ­ಷ­ನಲ್‌', `ಕು­ಮಾರ ಗಂಧರ್ವ', `ಸಂ­ಸ್ಕೃತಿ ಸಮ್ಮಾನ' ಮುಂತಾದ ಪ್ರಶ­ಸ್ತಿ­ಗಳು ಅವರ ಮುಡಿ­ಗೇ­ರಿವೆ. ಜೊತೆಗೆ ನೂರಾರು ಬಿರು­ದು­ಗಳು.
ಸದ್ಯ ಚೆನ್ನೈ­ನಲ್ಲಿ ನೆಲ­ಸಿ­ರುವ ರವಿ­ಕಿ­ರಣ್‌ ಅವ­ರಿಗೆ ಸಂಗೀ­ತವೇ ಪ್ರಪಂಚ. ಎರಡು ವರ್ಷದ ಮಗು­ವಾ­ಗಿ­ದ್ದಾಗ ಅವರು ಮೂಡಿ­ಸಿದ ಭರ­ವಸೆ ಇಲ್ಲಿ­ವ­ರೆಗೆ ಎಲ್ಲೂ ಮಂಕಾ­ಗಿಲ್ಲ. ಈಗ 42ರ ಹಂಚಿ­ನ­ಲ್ಲಿವ ರವಿ­ಕಿ­ರಣ್‌ ಪ್ರತಿಭೆ ಹೆಮ್ಮ­ರ­ವಾಗಿ ಬೆಳ­ದಿದ್ದು ಅದರ ಬೀಳಲು ವಿಶ್ವ­ದೆ­ಲ್ಲೆಡೆ ಚಾಚಿ­ಕೊಂ­ಡಿದೆ.

No comments:

Post a Comment