
'ಕಟ್ಟೀಮನಿ' ಕಾಣಿಕೆ
ಅದೊಂದು ಕೆಟ್ಟ ಕಾಲ.
ಆ ಕಪಟ ಕಾಲ ಕಂಡ ಕನಸುಗಳನ್ನೆಲ್ಲಾ ಕೊಂದು ಹಾಕಿತು.
ಆ ಕ್ಷಣ ಕಳೆದುಹೋಗಿದ್ದರೆ ಬದುಕು ಬಂಗಾರವಾಗುತ್ತಿತ್ತು.
ಮಾಡಿದ ತಪ್ಪಿಗೆ ಈಗ ಪಶ್ಚಾತಾಪವಿಲ್ಲ.
ತೋರಲು ಮುಖವಿಲ್ಲ. ಆಡಲು ಮಾತಿಲ್ಲ.
ಆ ಸನ್ನಿವೇಶದ ಸುಳಿಯಲ್ಲಿ ಬದುಕು ಮುಳುಗಿ ಹೋಯಿತು.....
ಅಯ್ಯೋ ದೇವರೇ ನಾನು ಆ ತಪ್ಪನ್ನು ಮಾಡಬಾರದಿತ್ತು!
ನನ್ನ ಈ ಅರಣ್ಯ ರೋಧನವನ್ನು ಕೇಳುವವರಾರು?
ಸರಳುಗಳನ್ನಿಡಿದು ಕೈಗೆರೆ ಸವೆದು ಹೋಗಿವೆ. ಗೋಡೆಯೂ ಮುನಿಸಿಕೊಂಡಿದೆ. ತಿರುಗಿ ಮಾತನಾಡುತ್ತಿಲ್ಲ...
ಇದು ಜೈಲು ಹಕ್ಕಿಯ ನಾಡಿ ಮಿಡಿತ. ತಪ್ಪಿನ ಅರಿವಾದಾಗ ಆ ಜೀವಕ್ಕಾದ ಆಘಾತ.....!
18 ವರ್ಷಗಳ ಹಿಂದೆ ರಂಗಾಯಣ ಕಲಾವಿದ ಹುಲುಗಪ್ಪ ಕಟ್ಟೀಮನಿ ಅವರು ಬಳ್ಳಾರಿ ಜೈಲಿಗೆ ಭೇಟಿ ನೀಡಿದ್ದಾಗ ಮುಂದೆ ಕೈದಿಗಳ ಮನಸ್ಸಿನಲ್ಲಿ ಇಂತಹ ಬದಲಾವಣೆ ಉಂಟಾಗಬಹುದು ಎಂದು ಯೋಚಿಸಿರಲಿಕ್ಕಿಲ್ಲ. ಜೈಲುಹಕ್ಕಿಗಳ ನಾಡಿಮಿಡಿತವನ್ನು ರಂಗಭೂಮಿ ಅರ್ಥ ಮಾಡಿಕೊಳ್ಳಬಲ್ಲದು ಎಂಬ ಯೋಚನೆಯೂ ಬಂದಿರಲಿಲ್ಲ. ಕೊಲೆಗಡುಕರು, ಮಾನಭಂಗ ಮಾಡಿದವರು, ಮನುಷ್ಯತ್ವ ಬಿಟ್ಟವರು, ಕಳ್ಳರು, ಸುಳ್ಳರು...ಎಂತೆಲ್ಲಾ ಹಣೆಪಟ್ಟಿ ಕಟ್ಟಿಕೊಂಡ ಕೈದಿಗಳು ತಮ್ಮನ್ನು ತಾವು ರಂಗದ ಮೇಲೆ ತೆರೆದುಕೊಂಡು ಹಗುರಾಗುತ್ತಾರೆ ಎಂಬುದು ಊಹೆಗೂ ನಿಲುಕಿರಲಿಲ್ಲ.
ಆದರೆ ಹುಲುಗಪ್ಪ ಕಟ್ಟೀಮನಿ ಅವರ ರಂಗಪ್ರಯೋಗದಲ್ಲಿ ಜೈಲುಹಕ್ಕಿಗಳ ಅಂತರಂಗದ ಕಟ್ಟೆ ಒಡೆಯಿತು. ಮೈಸೂರಿನ ಕಲಾಮಂದಿರದ ಸುತ್ತಾ ಪೊಲೀಸ್ ಸರ್ಪಗಾವಲಿನ ನಡುವೆ ಕೈದಿಗಳಿಂದ `ಮಾರನಾಯಕ' ನಾಟಕ ಪ್ರಯೋಗಗೊಂಡಾಗ `ಸ್ವಸ್ಥಸಮಾಜ'ದ ದಿಲ್ ನಡುಗಿತ್ತು. ಬೆಂಗಳೂರು ಕೇಂದ್ರಾ ಕಾರಾಗೃಹದ ಮಹಿಳಾ ಕೈದಿಗಳಿಂದ `ಮಾಧವಿ' ನಾಟಕ ನೋಡಿದವರ ಮನಸ್ಸಲ್ಲಿ ವಿಷಾಧದ ಅಲೆ ಎದ್ದಿತ್ತು. ಇವರೂ ಕೂಡ ಮನುಷ್ಯರೇ......! ಎಂದವರು ಅದೆಷ್ಟು ಮಂದಿಯೋ.
ದಶಕ ತುಂಬಿದೆ: ಹುಲುಗಪ್ಪ ಕಟ್ಟೀಮನಿ ಅವರ `ಜೈಲುನಾಟಕ ಕ್ರಾಂತಿ'ಗೆ ಹತ್ತು ವರ್ಷ ತುಂಬಿದೆ. ಈ ಹತ್ತು ವರ್ಷದ ಜೈಲು ನಾಟಕ ಹಾದಿ ಇಡೀ ರಾಷ್ಟ್ರದಲ್ಲಿ ಹಲವು ಮೈಲುಗಲ್ಲುಗಳನ್ನು ನಿರ್ಮಿಸಿದೆ.
ಮೈಸೂರಿನಲ್ಲಿ ರಂಗಾಯಣ ಆರಂಭ ಕಾಲದಲ್ಲಿ ಬಿ.ವಿ. ಕಾರಂತರು ತಮ್ಮ ರಂಗಭೂಮಿ ವಿದ್ಯಾರ್ಥಿಗಳನ್ನು ವೀಕ್ಷಣೆಗೆ ಕರೆದುಕೊಂಡು ಹೋಗುತ್ತಿದ್ದರು. ಅದರಲ್ಲಿ ಬಳ್ಳಾರಿ ಜೈಲು ಭೇಟಿಯೂ ಒಂದು.
ಜೈಲು ಅಂದರೆ ಎಲ್ಲರಿಗೂ ಇರುವ ಕಲ್ಪನೆಯೇ ಕಟ್ಟಿಮನಿ ಅವರಿಗೂ ಇತ್ತು. ಕೈದಿಗಳನ್ನು ಹತ್ತಿರದಿಂದ ಕಂಡಾಗ ಕಟ್ಟೀಮನಿ ಅವರಿಗೆ ಕಾಣಿಸಿದ್ದೇ ಬೇರೆ. ಕೈದಿಗಳ ಸ್ವಭಾವವನ್ನು ಗಮನಿಸಿ ಅಭಿನಯ ಕಲಿಕೆ ಅವರ ಮನಸ್ಸಿಗೆ ಬರಲಿಲ್ಲ. `ಕೈದಿಗಳನ್ನೇ ರಂಗದ ಮೇಲೆ ತಂದರೆ?' ತಕ್ಷಣ ಯಾರಿಗೂ ಹೇಳಲಿಲ್ಲ. ಹಾಗೇ ಮನಸ್ಸಿನಲ್ಲಿ ಇಟ್ಟುಕೊಂಡರು. ಅದು ಹುಚ್ಚು ದೈರ್ಯವೇ ಆಗಿತ್ತು. ಯಾರಿಗಾದರೂ ಈ ವಿಷಯವನ್ನು ಹೇಳಲು ಕಟ್ಟೀಮನಿ ಅಂಜಿದರು. ಹುಚ್ಚ ಎಂದಾರು ಎಂಬ ಭಯ ಬೇರೆ. ಆದರೆ ಮನಸ್ಸಿಗೆ ಆ ಹುಳು ಮಾತ್ರ ಸದಾ ಕೊರೆಯುತ್ತಿತ್ತು.
ಜೈಲ್ ಸೂಪರಿಂಟೆಂಡೆಂಟ್ ಗೋಪಾಲ್ ಹೊಸೂರು ಅವರಿಗೆ ತಮ್ಮ ಮನಸ್ಸಲ್ಲಿ ಮೂಡಿದ ವಿಷಯವನ್ನು ತಿಳಿಸಿದಾಗ ಕ್ಷಣಹೊತ್ತು ಅವರಲ್ಲಿ ಮಾತೇ ಹೊರಡಲಿಲ್ಲ. ಪರಿಕಲ್ಪನೆ ಅದ್ಬುತ ಆದರೆ....ಇದು ಸಾಧ್ಯವೆ? ಎಂಬ ಅನುಮಾನ ಗೋಪಾಲ್ ಅವರಲ್ಲಿತ್ತು. ಮೊದಲು ಅನುಮತಿ ಕೊಡಿ. ಆಮೇಲೆ ನೋಡಿ! ಎಂಬ ವಿಶ್ವಾವನ್ನು ಕಟ್ಟೀಮನಿ ಅವರು ವ್ಯಕ್ತಪಡಿಸಿದಾಗ ಗೋಪಾಲ್ ಹೊಸೂರು ಎಸ್ ಎಂದರು. ರಾಜಕಾರಣಿ ಹಾಗೂ ರಂಗಕರ್ಮಿ ಎಂ.ಪಿ. ಪ್ರಕಾಶ್ ಅವರ ಸಹಕಾರವೂ ಇತ್ತು.
ಪ್ರತಿರೋಧ ಇದ್ದೇ ಇತ್ತು: ಅದೆಲ್ಲಾ ಸರಿ. ಕೈದಿಗಳನ್ನು ಒಪ್ಪಿಸುವುದು ಹೇಗೆ? ಮೊದಮೊದಲು ಕೈದಿಗಳು ಸಹಕರಿಸಲಿಲ್ಲ. `ಏ ಹೋಗಯ್ಯಾ ನಮ್ಮ ಬದುಕೇ ನಾಟಕವಾಗಿದೆ. ನೀನೆಂಥ ನಾಟಕ ಆಡಿಸವೆ' ಎಂಬ ಉತ್ತರ ಕೈದಿಗಳಿಂದ ಬಂದಾಗ ಅದನ್ನು ಕಟ್ಟೀಮನಿ ಸವಾಲಾಗಿ ತೆಗೆದುಕೊಂಡರು.
ಆಮೇಲೆ ನಡೆದದ್ದು ಬರೀ ಮ್ಯಾಜಿಕ್. ಕೈದಿಗಳ ನಡುವೆ ಕಟ್ಟೀಮನಿ ಅವರ ಬಾಂಧವ್ಯ ಬಹಳ ಗಾಢವಾಗಿ ಬೆಳೆಯಿತು. ಕೈದಿಗಳ ತೂಕದ ಊಟವನ್ನೇ ಕಟ್ಟೀಮನಿ ಅವರೂ ಸೇವಿಸುತ್ತಿದ್ದರು. ತಿಂಗಳ ಕಾಲ ನಡೆಯುತ್ತಿದ್ದ ನಾಟಕ ಕಾರ್ಯಾಗಾರದಲ್ಲಿ ಕೈದಿಗಳು ಕಟ್ಟೀಮನಿ ಅವರನ್ನು ಬಹಳವಾಗಿ ಹಚ್ಚಿಕೊಂಡರು. ಕಟ್ಟಿಮನಿ ಅವರ ಜೊತೆ ತಮ್ಮ ಅಪರಾಧಗಳನ್ನು ಬಿಚ್ಚಿಡುತ್ತಿದ್ದರು. ಮಾಡಿದ ತಪ್ಪನ್ನು ಹೇಳಿಕೊಂಡು ಹಗುರಾಗುತ್ತಿದ್ದರು. ನಾಟಕ ಹೇಳಿಕೊಡುವಾಗ ಕೈದಿಗಳಿಗೆ ಏಟು ಕೊಟ್ಟಿದ್ದು ಇದೆ. ಆದರೆ ಅದು ಪ್ರೀತಿಯ ಸಂಕೇತವಾಗಿತ್ತು! ಕೈದಿಗಳ ಅಂತರಂಗದಲ್ಲಿ ಕಟ್ಟೀಮನಿ ಸಸಂಸ್ಕೃತ ಬೀಜ ಬಿತ್ತಿದರು.
ಬದಲಾದ ಚಿತ್ರಣ: ಮೈಸೂರು ಜೈಲು ಕೈದಿಗಳಿಂದ `ಮಾರನಾಯಕ' ನಾಟಕ ಪ್ರದರ್ಶನಗೊಂಡಾಗ ಇಡೀ ರಾಷ್ಟ್ರಾದ್ಯಂತ ಸುದ್ದಿಯಾಯಿತು. `ಔಟ್ಲುಕ್' ಮುಖಪುಟ ಲೇಖನ ಮಾಡಿತು. ಇಂಗ್ಲಿಷ್ ಟಿವಿ ವಾಹಿನಿಗಳು ಕಟ್ಟೀಮನಿ ಅವರ ಹಿಂದೆ ಬಿದ್ದವು. ಎಲ್ಲಕ್ಕಿಂತ ಮುಖ್ಯವಾಗಿ ಜೈಲು ಒಳಗಿನ ವಾತಾವರಣ ಬದಲಾಯಿತು. ಪೊಲೀಸರು ಕೈದಿಗಳನ್ನು ಕೊಲೆ ಅಪರಾಧಿ, ಡಕಾಯತಿ ಅಪರಾಧಿ, ಕಳ್ಳ ಎಂದು ಕರೆಯುತ್ತಿದ್ದವರು ಆಮೇಲೆ ಪಾತ್ರಗಳಿಂದ ಸಂಭೋದಿಸಿದರು. ಮಹಿಳಾ ಮತ್ತು ಪುರುಷ ಕೈದಿಗಳ ನಡುವೆ ಮಾತುಕತೆಯೇ ಇರಲಿಲ್ಲ. ಮಾಧವಿ ನಾಟಕದ ನಂತರ ಇದು ಬದಲಾಯಿತು. ಜೂಲಿಯಸ್ ಸೀಜರ್, ಹ್ಯಾಮೆಟ್ ನಾಟಕಗಳು ಕೈದಿಗಳಿಂದ ರಂಗವೇರಿದವು.
ಆ ನಂತರ ಎಷ್ಟೋ ಕೈದಿಗಳ ಶಿಕ್ಷೆಯ ಅವಧಿ ಕಮ್ಮಿಯಾದದ್ದೂ ಇದೆ. ಜೈಲು ನಾಟಕ ಕರ್ನಾಟಕಲ್ಲಿ ನಡೆಯಿತಾದರೂ ಅದರ ಪರಿಣಾಮ ಇಡೀ ದೇಶದಲ್ಲಿ ಉಂಟಾಯಿತು.
ರಂಗಭೂಮಿ ಕಟ್ಟೀಮನಿ: ಕನ್ನಡ ರಂಗಭೂಮಿಯಲ್ಲಿ ಹುಲುಗಪ್ಪ ಕಟ್ಟೀಮನಿ ಅವರು ಅತ್ಯಂತ ವಿಶಿಷ್ಟ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರ ರಂಗಭೂಮಿ ಕಾರ್ಯಾಗಾರಗಳಲ್ಲಿ ಭಾಗವಹಿಸಿದವರು ಅಪರೂಪ ಅನುಭವ ಪಡೆಯುತ್ತಾರೆ. ಅವರ ಮಾತಿನಲ್ಲಿ ಒಂದು ಚಿಕಿತ್ಸಕ ಗುಣವಿದೆ. ಸಕಾರಾತ್ಮಕ ಎನರ್ಜಿ ಮೂಡಿಸುವಲ್ಲಿ ಅವರು ನಿಷ್ಣಾತರು.
ಜೈಲು ನಾಟಕ ನಿರ್ದೇಶಕರಾಗಿ ಎಲ್ಲರ ಬಾಯಲ್ಲೂ ಕಟ್ಟಿಮನಿ ಅವರು ಕೇಳಿಬಂದರೂ ಕೂಡ ಅವರೊಬ್ಬ ಪ್ರಬುದ್ಧ ನಟ. `ಗಾಂಧಿ ವಿರುದ್ಧ ಗಾಂಧಿ' ನಾಟಕದ ಗಾಂಧಿ ಯಾವಾಗಲು ಎಲ್ಲರನ್ನು ಕಾಡುತ್ತಾನೆ. `ಮಾಯಾಸೀತಾ ಪ್ರಸಂಗ'ದಲ್ಲಿ ಅವರ ಅದ್ಬುತ ಅಭಿನಯವಿದೆ. ಕತ್ತಲೆ ಬೆಳಕು, ಹೀಗೊಂದು ಪ್ರಣಯ ಪ್ರಸಂಗ, ಕತ್ತಲೆ ಬೆಳಕು, ಕಿಂದರಿಜೋಗಿ ಹೀಗೆ ನೂರಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಸಂಘಟಕರಾಗಿ ಮೈಸೂರನಲ್ಲಿ `ಸಂಕಲ್ಪ'ವೆಂಬ ಹವ್ಯಾಸಿ ರಂಗತಂಡ ಕಟ್ಟಿದ್ದಾರೆ. ನಿರ್ದೇಶಕರಾಗಿ ಅವರು ರಂಗಭೂಮಿಗೆ ಹಲವು ಪ್ರಸಿದ್ಧ ನಾಟಕಗಳನ್ನು ನಿರ್ದೇಶಿಸಿದ್ದಾರೆ.
ಸದ್ಯಕ್ಕೆ ಕಟ್ಟೀಮನಿ ಧಾರವಾಡ ರಂಗಾಯಣ ಉಸ್ತುವಾರಿ ಹೊತ್ತಿದ್ದಾರೆ. ಅಲ್ಲೂ ಜೈಲು ನಾಟಕ ತಯಾರಿ ನಡೆಯುತ್ತಿದೆ. ಬಳ್ಳಾರಿಯ ಹಗರಿಬೊಮ್ಮನ ಹಳ್ಳಿಯಿಂದ ಬಂದ ಅವರು ಇಂದು ರಂಗಭೂಮಿಯ ಆಸ್ತಿಯಾಗಿದ್ದಾರೆ. ಪತ್ನಿ ಪ್ರಮೀಳಾ ಬೇಂಗ್ರೆ ಕೂಡ ರಂಗಾಯಣ ಕಲಾವಿದರು. ಮಗಳು ಕುಂತಿ, ಮಗ ಕಣ್ವ.
ಅವರ ಈ ಹತ್ತುವರ್ಷಗಳ ಜೈಲು ನಾಟಕ ನಡಿಗೆಯಲ್ಲಿ ಹಲವು ಏಳು ಬೀಳುಗಳನ್ನು ಅನುಭವಿಸಿದ್ದಾರೆ. ಹಲವು ಅದ್ಬುತಗಳನ್ನು ಕಂಡಿದ್ದಾರೆ. ಎಂದೂ ಮರೆಯದ `ದಿವ್ಯಔಷಧಿ'ಯನ್ನು ಅವರು ವಿಶ್ವರಂಗಭೂಮಿಗೆ ಕಾಣಿಕೆಯಾಗಿ ಕೊಟ್ಟಿದ್ದಾರೆ.
ಆ ಕಪಟ ಕಾಲ ಕಂಡ ಕನಸುಗಳನ್ನೆಲ್ಲಾ ಕೊಂದು ಹಾಕಿತು.
ಆ ಕ್ಷಣ ಕಳೆದುಹೋಗಿದ್ದರೆ ಬದುಕು ಬಂಗಾರವಾಗುತ್ತಿತ್ತು.
ಮಾಡಿದ ತಪ್ಪಿಗೆ ಈಗ ಪಶ್ಚಾತಾಪವಿಲ್ಲ.
ತೋರಲು ಮುಖವಿಲ್ಲ. ಆಡಲು ಮಾತಿಲ್ಲ.
ಆ ಸನ್ನಿವೇಶದ ಸುಳಿಯಲ್ಲಿ ಬದುಕು ಮುಳುಗಿ ಹೋಯಿತು.....
ಅಯ್ಯೋ ದೇವರೇ ನಾನು ಆ ತಪ್ಪನ್ನು ಮಾಡಬಾರದಿತ್ತು!
ನನ್ನ ಈ ಅರಣ್ಯ ರೋಧನವನ್ನು ಕೇಳುವವರಾರು?
ಸರಳುಗಳನ್ನಿಡಿದು ಕೈಗೆರೆ ಸವೆದು ಹೋಗಿವೆ. ಗೋಡೆಯೂ ಮುನಿಸಿಕೊಂಡಿದೆ. ತಿರುಗಿ ಮಾತನಾಡುತ್ತಿಲ್ಲ...
ಇದು ಜೈಲು ಹಕ್ಕಿಯ ನಾಡಿ ಮಿಡಿತ. ತಪ್ಪಿನ ಅರಿವಾದಾಗ ಆ ಜೀವಕ್ಕಾದ ಆಘಾತ.....!
18 ವರ್ಷಗಳ ಹಿಂದೆ ರಂಗಾಯಣ ಕಲಾವಿದ ಹುಲುಗಪ್ಪ ಕಟ್ಟೀಮನಿ ಅವರು ಬಳ್ಳಾರಿ ಜೈಲಿಗೆ ಭೇಟಿ ನೀಡಿದ್ದಾಗ ಮುಂದೆ ಕೈದಿಗಳ ಮನಸ್ಸಿನಲ್ಲಿ ಇಂತಹ ಬದಲಾವಣೆ ಉಂಟಾಗಬಹುದು ಎಂದು ಯೋಚಿಸಿರಲಿಕ್ಕಿಲ್ಲ. ಜೈಲುಹಕ್ಕಿಗಳ ನಾಡಿಮಿಡಿತವನ್ನು ರಂಗಭೂಮಿ ಅರ್ಥ ಮಾಡಿಕೊಳ್ಳಬಲ್ಲದು ಎಂಬ ಯೋಚನೆಯೂ ಬಂದಿರಲಿಲ್ಲ. ಕೊಲೆಗಡುಕರು, ಮಾನಭಂಗ ಮಾಡಿದವರು, ಮನುಷ್ಯತ್ವ ಬಿಟ್ಟವರು, ಕಳ್ಳರು, ಸುಳ್ಳರು...ಎಂತೆಲ್ಲಾ ಹಣೆಪಟ್ಟಿ ಕಟ್ಟಿಕೊಂಡ ಕೈದಿಗಳು ತಮ್ಮನ್ನು ತಾವು ರಂಗದ ಮೇಲೆ ತೆರೆದುಕೊಂಡು ಹಗುರಾಗುತ್ತಾರೆ ಎಂಬುದು ಊಹೆಗೂ ನಿಲುಕಿರಲಿಲ್ಲ.
ಆದರೆ ಹುಲುಗಪ್ಪ ಕಟ್ಟೀಮನಿ ಅವರ ರಂಗಪ್ರಯೋಗದಲ್ಲಿ ಜೈಲುಹಕ್ಕಿಗಳ ಅಂತರಂಗದ ಕಟ್ಟೆ ಒಡೆಯಿತು. ಮೈಸೂರಿನ ಕಲಾಮಂದಿರದ ಸುತ್ತಾ ಪೊಲೀಸ್ ಸರ್ಪಗಾವಲಿನ ನಡುವೆ ಕೈದಿಗಳಿಂದ `ಮಾರನಾಯಕ' ನಾಟಕ ಪ್ರಯೋಗಗೊಂಡಾಗ `ಸ್ವಸ್ಥಸಮಾಜ'ದ ದಿಲ್ ನಡುಗಿತ್ತು. ಬೆಂಗಳೂರು ಕೇಂದ್ರಾ ಕಾರಾಗೃಹದ ಮಹಿಳಾ ಕೈದಿಗಳಿಂದ `ಮಾಧವಿ' ನಾಟಕ ನೋಡಿದವರ ಮನಸ್ಸಲ್ಲಿ ವಿಷಾಧದ ಅಲೆ ಎದ್ದಿತ್ತು. ಇವರೂ ಕೂಡ ಮನುಷ್ಯರೇ......! ಎಂದವರು ಅದೆಷ್ಟು ಮಂದಿಯೋ.
ದಶಕ ತುಂಬಿದೆ: ಹುಲುಗಪ್ಪ ಕಟ್ಟೀಮನಿ ಅವರ `ಜೈಲುನಾಟಕ ಕ್ರಾಂತಿ'ಗೆ ಹತ್ತು ವರ್ಷ ತುಂಬಿದೆ. ಈ ಹತ್ತು ವರ್ಷದ ಜೈಲು ನಾಟಕ ಹಾದಿ ಇಡೀ ರಾಷ್ಟ್ರದಲ್ಲಿ ಹಲವು ಮೈಲುಗಲ್ಲುಗಳನ್ನು ನಿರ್ಮಿಸಿದೆ.
ಮೈಸೂರಿನಲ್ಲಿ ರಂಗಾಯಣ ಆರಂಭ ಕಾಲದಲ್ಲಿ ಬಿ.ವಿ. ಕಾರಂತರು ತಮ್ಮ ರಂಗಭೂಮಿ ವಿದ್ಯಾರ್ಥಿಗಳನ್ನು ವೀಕ್ಷಣೆಗೆ ಕರೆದುಕೊಂಡು ಹೋಗುತ್ತಿದ್ದರು. ಅದರಲ್ಲಿ ಬಳ್ಳಾರಿ ಜೈಲು ಭೇಟಿಯೂ ಒಂದು.
ಜೈಲು ಅಂದರೆ ಎಲ್ಲರಿಗೂ ಇರುವ ಕಲ್ಪನೆಯೇ ಕಟ್ಟಿಮನಿ ಅವರಿಗೂ ಇತ್ತು. ಕೈದಿಗಳನ್ನು ಹತ್ತಿರದಿಂದ ಕಂಡಾಗ ಕಟ್ಟೀಮನಿ ಅವರಿಗೆ ಕಾಣಿಸಿದ್ದೇ ಬೇರೆ. ಕೈದಿಗಳ ಸ್ವಭಾವವನ್ನು ಗಮನಿಸಿ ಅಭಿನಯ ಕಲಿಕೆ ಅವರ ಮನಸ್ಸಿಗೆ ಬರಲಿಲ್ಲ. `ಕೈದಿಗಳನ್ನೇ ರಂಗದ ಮೇಲೆ ತಂದರೆ?' ತಕ್ಷಣ ಯಾರಿಗೂ ಹೇಳಲಿಲ್ಲ. ಹಾಗೇ ಮನಸ್ಸಿನಲ್ಲಿ ಇಟ್ಟುಕೊಂಡರು. ಅದು ಹುಚ್ಚು ದೈರ್ಯವೇ ಆಗಿತ್ತು. ಯಾರಿಗಾದರೂ ಈ ವಿಷಯವನ್ನು ಹೇಳಲು ಕಟ್ಟೀಮನಿ ಅಂಜಿದರು. ಹುಚ್ಚ ಎಂದಾರು ಎಂಬ ಭಯ ಬೇರೆ. ಆದರೆ ಮನಸ್ಸಿಗೆ ಆ ಹುಳು ಮಾತ್ರ ಸದಾ ಕೊರೆಯುತ್ತಿತ್ತು.
ಜೈಲ್ ಸೂಪರಿಂಟೆಂಡೆಂಟ್ ಗೋಪಾಲ್ ಹೊಸೂರು ಅವರಿಗೆ ತಮ್ಮ ಮನಸ್ಸಲ್ಲಿ ಮೂಡಿದ ವಿಷಯವನ್ನು ತಿಳಿಸಿದಾಗ ಕ್ಷಣಹೊತ್ತು ಅವರಲ್ಲಿ ಮಾತೇ ಹೊರಡಲಿಲ್ಲ. ಪರಿಕಲ್ಪನೆ ಅದ್ಬುತ ಆದರೆ....ಇದು ಸಾಧ್ಯವೆ? ಎಂಬ ಅನುಮಾನ ಗೋಪಾಲ್ ಅವರಲ್ಲಿತ್ತು. ಮೊದಲು ಅನುಮತಿ ಕೊಡಿ. ಆಮೇಲೆ ನೋಡಿ! ಎಂಬ ವಿಶ್ವಾವನ್ನು ಕಟ್ಟೀಮನಿ ಅವರು ವ್ಯಕ್ತಪಡಿಸಿದಾಗ ಗೋಪಾಲ್ ಹೊಸೂರು ಎಸ್ ಎಂದರು. ರಾಜಕಾರಣಿ ಹಾಗೂ ರಂಗಕರ್ಮಿ ಎಂ.ಪಿ. ಪ್ರಕಾಶ್ ಅವರ ಸಹಕಾರವೂ ಇತ್ತು.
ಪ್ರತಿರೋಧ ಇದ್ದೇ ಇತ್ತು: ಅದೆಲ್ಲಾ ಸರಿ. ಕೈದಿಗಳನ್ನು ಒಪ್ಪಿಸುವುದು ಹೇಗೆ? ಮೊದಮೊದಲು ಕೈದಿಗಳು ಸಹಕರಿಸಲಿಲ್ಲ. `ಏ ಹೋಗಯ್ಯಾ ನಮ್ಮ ಬದುಕೇ ನಾಟಕವಾಗಿದೆ. ನೀನೆಂಥ ನಾಟಕ ಆಡಿಸವೆ' ಎಂಬ ಉತ್ತರ ಕೈದಿಗಳಿಂದ ಬಂದಾಗ ಅದನ್ನು ಕಟ್ಟೀಮನಿ ಸವಾಲಾಗಿ ತೆಗೆದುಕೊಂಡರು.
ಆಮೇಲೆ ನಡೆದದ್ದು ಬರೀ ಮ್ಯಾಜಿಕ್. ಕೈದಿಗಳ ನಡುವೆ ಕಟ್ಟೀಮನಿ ಅವರ ಬಾಂಧವ್ಯ ಬಹಳ ಗಾಢವಾಗಿ ಬೆಳೆಯಿತು. ಕೈದಿಗಳ ತೂಕದ ಊಟವನ್ನೇ ಕಟ್ಟೀಮನಿ ಅವರೂ ಸೇವಿಸುತ್ತಿದ್ದರು. ತಿಂಗಳ ಕಾಲ ನಡೆಯುತ್ತಿದ್ದ ನಾಟಕ ಕಾರ್ಯಾಗಾರದಲ್ಲಿ ಕೈದಿಗಳು ಕಟ್ಟೀಮನಿ ಅವರನ್ನು ಬಹಳವಾಗಿ ಹಚ್ಚಿಕೊಂಡರು. ಕಟ್ಟಿಮನಿ ಅವರ ಜೊತೆ ತಮ್ಮ ಅಪರಾಧಗಳನ್ನು ಬಿಚ್ಚಿಡುತ್ತಿದ್ದರು. ಮಾಡಿದ ತಪ್ಪನ್ನು ಹೇಳಿಕೊಂಡು ಹಗುರಾಗುತ್ತಿದ್ದರು. ನಾಟಕ ಹೇಳಿಕೊಡುವಾಗ ಕೈದಿಗಳಿಗೆ ಏಟು ಕೊಟ್ಟಿದ್ದು ಇದೆ. ಆದರೆ ಅದು ಪ್ರೀತಿಯ ಸಂಕೇತವಾಗಿತ್ತು! ಕೈದಿಗಳ ಅಂತರಂಗದಲ್ಲಿ ಕಟ್ಟೀಮನಿ ಸಸಂಸ್ಕೃತ ಬೀಜ ಬಿತ್ತಿದರು.
ಬದಲಾದ ಚಿತ್ರಣ: ಮೈಸೂರು ಜೈಲು ಕೈದಿಗಳಿಂದ `ಮಾರನಾಯಕ' ನಾಟಕ ಪ್ರದರ್ಶನಗೊಂಡಾಗ ಇಡೀ ರಾಷ್ಟ್ರಾದ್ಯಂತ ಸುದ್ದಿಯಾಯಿತು. `ಔಟ್ಲುಕ್' ಮುಖಪುಟ ಲೇಖನ ಮಾಡಿತು. ಇಂಗ್ಲಿಷ್ ಟಿವಿ ವಾಹಿನಿಗಳು ಕಟ್ಟೀಮನಿ ಅವರ ಹಿಂದೆ ಬಿದ್ದವು. ಎಲ್ಲಕ್ಕಿಂತ ಮುಖ್ಯವಾಗಿ ಜೈಲು ಒಳಗಿನ ವಾತಾವರಣ ಬದಲಾಯಿತು. ಪೊಲೀಸರು ಕೈದಿಗಳನ್ನು ಕೊಲೆ ಅಪರಾಧಿ, ಡಕಾಯತಿ ಅಪರಾಧಿ, ಕಳ್ಳ ಎಂದು ಕರೆಯುತ್ತಿದ್ದವರು ಆಮೇಲೆ ಪಾತ್ರಗಳಿಂದ ಸಂಭೋದಿಸಿದರು. ಮಹಿಳಾ ಮತ್ತು ಪುರುಷ ಕೈದಿಗಳ ನಡುವೆ ಮಾತುಕತೆಯೇ ಇರಲಿಲ್ಲ. ಮಾಧವಿ ನಾಟಕದ ನಂತರ ಇದು ಬದಲಾಯಿತು. ಜೂಲಿಯಸ್ ಸೀಜರ್, ಹ್ಯಾಮೆಟ್ ನಾಟಕಗಳು ಕೈದಿಗಳಿಂದ ರಂಗವೇರಿದವು.
ಆ ನಂತರ ಎಷ್ಟೋ ಕೈದಿಗಳ ಶಿಕ್ಷೆಯ ಅವಧಿ ಕಮ್ಮಿಯಾದದ್ದೂ ಇದೆ. ಜೈಲು ನಾಟಕ ಕರ್ನಾಟಕಲ್ಲಿ ನಡೆಯಿತಾದರೂ ಅದರ ಪರಿಣಾಮ ಇಡೀ ದೇಶದಲ್ಲಿ ಉಂಟಾಯಿತು.
ರಂಗಭೂಮಿ ಕಟ್ಟೀಮನಿ: ಕನ್ನಡ ರಂಗಭೂಮಿಯಲ್ಲಿ ಹುಲುಗಪ್ಪ ಕಟ್ಟೀಮನಿ ಅವರು ಅತ್ಯಂತ ವಿಶಿಷ್ಟ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರ ರಂಗಭೂಮಿ ಕಾರ್ಯಾಗಾರಗಳಲ್ಲಿ ಭಾಗವಹಿಸಿದವರು ಅಪರೂಪ ಅನುಭವ ಪಡೆಯುತ್ತಾರೆ. ಅವರ ಮಾತಿನಲ್ಲಿ ಒಂದು ಚಿಕಿತ್ಸಕ ಗುಣವಿದೆ. ಸಕಾರಾತ್ಮಕ ಎನರ್ಜಿ ಮೂಡಿಸುವಲ್ಲಿ ಅವರು ನಿಷ್ಣಾತರು.
ಜೈಲು ನಾಟಕ ನಿರ್ದೇಶಕರಾಗಿ ಎಲ್ಲರ ಬಾಯಲ್ಲೂ ಕಟ್ಟಿಮನಿ ಅವರು ಕೇಳಿಬಂದರೂ ಕೂಡ ಅವರೊಬ್ಬ ಪ್ರಬುದ್ಧ ನಟ. `ಗಾಂಧಿ ವಿರುದ್ಧ ಗಾಂಧಿ' ನಾಟಕದ ಗಾಂಧಿ ಯಾವಾಗಲು ಎಲ್ಲರನ್ನು ಕಾಡುತ್ತಾನೆ. `ಮಾಯಾಸೀತಾ ಪ್ರಸಂಗ'ದಲ್ಲಿ ಅವರ ಅದ್ಬುತ ಅಭಿನಯವಿದೆ. ಕತ್ತಲೆ ಬೆಳಕು, ಹೀಗೊಂದು ಪ್ರಣಯ ಪ್ರಸಂಗ, ಕತ್ತಲೆ ಬೆಳಕು, ಕಿಂದರಿಜೋಗಿ ಹೀಗೆ ನೂರಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಸಂಘಟಕರಾಗಿ ಮೈಸೂರನಲ್ಲಿ `ಸಂಕಲ್ಪ'ವೆಂಬ ಹವ್ಯಾಸಿ ರಂಗತಂಡ ಕಟ್ಟಿದ್ದಾರೆ. ನಿರ್ದೇಶಕರಾಗಿ ಅವರು ರಂಗಭೂಮಿಗೆ ಹಲವು ಪ್ರಸಿದ್ಧ ನಾಟಕಗಳನ್ನು ನಿರ್ದೇಶಿಸಿದ್ದಾರೆ.
ಸದ್ಯಕ್ಕೆ ಕಟ್ಟೀಮನಿ ಧಾರವಾಡ ರಂಗಾಯಣ ಉಸ್ತುವಾರಿ ಹೊತ್ತಿದ್ದಾರೆ. ಅಲ್ಲೂ ಜೈಲು ನಾಟಕ ತಯಾರಿ ನಡೆಯುತ್ತಿದೆ. ಬಳ್ಳಾರಿಯ ಹಗರಿಬೊಮ್ಮನ ಹಳ್ಳಿಯಿಂದ ಬಂದ ಅವರು ಇಂದು ರಂಗಭೂಮಿಯ ಆಸ್ತಿಯಾಗಿದ್ದಾರೆ. ಪತ್ನಿ ಪ್ರಮೀಳಾ ಬೇಂಗ್ರೆ ಕೂಡ ರಂಗಾಯಣ ಕಲಾವಿದರು. ಮಗಳು ಕುಂತಿ, ಮಗ ಕಣ್ವ.
ಅವರ ಈ ಹತ್ತುವರ್ಷಗಳ ಜೈಲು ನಾಟಕ ನಡಿಗೆಯಲ್ಲಿ ಹಲವು ಏಳು ಬೀಳುಗಳನ್ನು ಅನುಭವಿಸಿದ್ದಾರೆ. ಹಲವು ಅದ್ಬುತಗಳನ್ನು ಕಂಡಿದ್ದಾರೆ. ಎಂದೂ ಮರೆಯದ `ದಿವ್ಯಔಷಧಿ'ಯನ್ನು ಅವರು ವಿಶ್ವರಂಗಭೂಮಿಗೆ ಕಾಣಿಕೆಯಾಗಿ ಕೊಟ್ಟಿದ್ದಾರೆ.
No comments:
Post a Comment