Tuesday, October 6, 2009

ಹುಲು­ಗಪ್ಪ ಕಟ್ಟೀ­ಮನಿ


'ಕಟ್ಟೀ­ಮನಿ' ಕಾಣಿ­ಕೆ­


ಅದೊಂದು ಕೆಟ್ಟ ಕಾಲ.
ಆ ಕಪಟ ಕಾಲ ಕಂಡ ಕನ­ಸು­ಗ­ಳ­ನ್ನೆಲ್ಲಾ ಕೊಂದು ಹಾಕಿತು.
ಆ ಕ್ಷಣ ಕಳೆ­ದು­ಹೋ­ಗಿ­ದ್ದರೆ ಬದುಕು ಬಂಗಾ­ರ­ವಾ­ಗು­ತ್ತಿತ್ತು.
ಮಾಡಿದ ತಪ್ಪಿಗೆ ಈಗ ಪಶ್ಚಾ­ತಾ­ಪ­ವಿಲ್ಲ.
ತೋರಲು ಮುಖ­ವಿಲ್ಲ. ಆಡಲು ಮಾತಿಲ್ಲ.
ಆ ಸನ್ನಿ­ವೇ­ಶದ ಸುಳಿ­ಯಲ್ಲಿ ಬದುಕು ಮುಳುಗಿ ಹೋಯಿತು.....
ಅಯ್ಯೋ ದೇವರೇ ನಾನು ಆ ತಪ್ಪನ್ನು ಮಾಡ­ಬಾ­ರ­ದಿತ್ತು!
ನನ್ನ ಈ ಅರಣ್ಯ ರೋಧ­ನ­ವನ್ನು ಕೇಳು­ವ­ವ­ರಾರು?
ಸರ­ಳು­ಗ­ಳ­ನ್ನಿ­ಡಿದು ಕೈಗೆರೆ ಸವೆದು ಹೋಗಿವೆ. ಗೋಡೆಯೂ ಮುನಿ­ಸಿ­ಕೊಂ­ಡಿದೆ. ತಿರುಗಿ ಮಾತ­ನಾ­ಡು­ತ್ತಿಲ್ಲ...
ಇದು ಜೈಲು ಹಕ್ಕಿಯ ನಾಡಿ ಮಿಡಿತ. ತಪ್ಪಿನ ಅರಿ­ವಾ­ದಾಗ ಆ ಜೀವ­ಕ್ಕಾದ ಆಘಾತ.....!
18 ವರ್ಷ­ಗಳ ಹಿಂದೆ ರಂಗಾ­ಯಣ ಕಲಾ­ವಿದ ಹುಲು­ಗಪ್ಪ ಕಟ್ಟೀ­ಮನಿ ಅವರು ಬಳ್ಳಾರಿ ಜೈಲಿಗೆ ಭೇಟಿ ನೀಡಿ­ದ್ದಾಗ ಮುಂದೆ ಕೈದಿ­ಗಳ ಮನ­ಸ್ಸಿ­ನಲ್ಲಿ ಇಂತಹ ಬದ­ಲಾ­ವಣೆ ಉಂಟಾ­ಗ­ಬ­ಹುದು ಎಂದು ಯೋಚಿ­ಸಿ­ರ­ಲಿ­ಕ್ಕಿಲ್ಲ. ಜೈಲು­ಹ­ಕ್ಕಿ­ಗಳ ನಾಡಿ­ಮಿ­ಡಿ­ತ­ವನ್ನು ರಂಗ­ಭೂಮಿ ಅರ್ಥ ಮಾಡಿ­ಕೊ­ಳ್ಳ­ಬ­ಲ್ಲದು ಎಂಬ ಯೋಚ­ನೆಯೂ ಬಂದಿ­ರ­ಲಿಲ್ಲ. ಕೊಲೆ­ಗ­ಡು­ಕರು, ಮಾನ­ಭಂಗ ಮಾಡಿ­ದ­ವರು, ಮನು­ಷ್ಯತ್ವ ಬಿಟ್ಟ­ವರು, ಕಳ್ಳರು, ಸುಳ್ಳರು...ಎಂ­ತೆಲ್ಲಾ ಹಣೆ­ಪಟ್ಟಿ ಕಟ್ಟಿ­ಕೊಂಡ ಕೈದಿ­ಗಳು ತಮ್ಮನ್ನು ತಾವು ರಂಗದ ಮೇಲೆ ತೆರೆ­ದು­ಕೊಂಡು ಹಗು­ರಾ­ಗು­ತ್ತಾರೆ ಎಂಬುದು ಊಹೆಗೂ ನಿಲು­ಕಿ­ರ­ಲಿಲ್ಲ.
ಆದರೆ ಹುಲು­ಗಪ್ಪ ಕಟ್ಟೀ­ಮನಿ ಅವರ ರಂಗ­ಪ್ರ­ಯೋ­ಗ­ದಲ್ಲಿ ಜೈಲು­ಹ­ಕ್ಕಿ­ಗಳ ಅಂತ­ರಂ­ಗದ ಕಟ್ಟೆ ಒಡೆ­ಯಿತು. ಮೈಸೂ­ರಿನ ಕಲಾ­ಮಂ­ದಿ­ರದ ಸುತ್ತಾ ಪೊಲೀಸ್‌ ಸರ್ಪ­ಗಾ­ವ­ಲಿನ ನಡುವೆ ಕೈದಿ­ಗ­ಳಿಂದ `ಮಾ­ರ­ನಾ­ಯಕ' ನಾಟಕ ಪ್ರಯೋ­ಗ­ಗೊಂ­ಡಾಗ `ಸ್ವ­ಸ್ಥ­ಸ­ಮಾಜ'ದ ದಿಲ್‌ ನಡು­ಗಿತ್ತು. ಬೆಂಗ­ಳೂರು ಕೇಂದ್ರಾ ಕಾರಾ­ಗೃ­ಹದ ಮಹಿಳಾ ಕೈದಿ­ಗ­ಳಿಂದ `ಮಾ­ಧವಿ' ನಾಟಕ ನೋಡಿ­ದ­ವರ ಮನ­ಸ್ಸಲ್ಲಿ ವಿಷಾ­ಧದ ಅಲೆ ಎದ್ದಿತ್ತು. ಇವರೂ ಕೂಡ ಮನು­ಷ್ಯರೇ......! ಎಂದ­ವರು ಅದೆಷ್ಟು ಮಂದಿಯೋ.

ದಶಕ ತುಂಬಿದೆ: ಹುಲು­ಗಪ್ಪ ಕಟ್ಟೀ­ಮನಿ ಅವರ `ಜೈ­ಲು­ನಾ­ಟಕ ಕ್ರಾಂತಿ'ಗೆ ಹತ್ತು ವರ್ಷ ತುಂಬಿದೆ. ಈ ಹತ್ತು ವರ್ಷದ ಜೈಲು ನಾಟಕ ಹಾದಿ ಇಡೀ ರಾಷ್ಟ್ರ­ದಲ್ಲಿ ಹಲವು ಮೈಲು­ಗ­ಲ್ಲು­ಗ­ಳನ್ನು ನಿರ್ಮಿ­ಸಿದೆ.
ಮೈಸೂ­ರಿ­ನಲ್ಲಿ ರಂಗಾ­ಯಣ ಆರಂಭ ಕಾಲ­ದಲ್ಲಿ ಬಿ.ವಿ. ಕಾರಂ­ತರು ತಮ್ಮ ರಂಗ­ಭೂಮಿ ವಿದ್ಯಾ­ರ್ಥಿ­ಗ­ಳನ್ನು ವೀಕ್ಷ­ಣೆಗೆ ಕರೆ­ದು­ಕೊಂಡು ಹೋಗು­ತ್ತಿ­ದ್ದರು. ಅದ­ರಲ್ಲಿ ಬಳ್ಳಾರಿ ಜೈಲು ಭೇಟಿಯೂ ಒಂದು.
ಜೈಲು ಅಂದರೆ ಎಲ್ಲ­ರಿಗೂ ಇರುವ ಕಲ್ಪ­ನೆಯೇ ಕಟ್ಟಿ­ಮನಿ ಅವ­ರಿಗೂ ಇತ್ತು. ಕೈದಿ­ಗ­ಳನ್ನು ಹತ್ತಿ­ರ­ದಿಂದ ಕಂಡಾಗ ಕಟ್ಟೀ­ಮನಿ ಅವ­ರಿಗೆ ಕಾಣಿ­ಸಿದ್ದೇ ಬೇರೆ. ಕೈದಿ­ಗಳ ಸ್ವಭಾ­ವ­ವನ್ನು ಗಮ­ನಿಸಿ ಅಭಿ­ನಯ ಕಲಿಕೆ ಅವರ ಮನ­ಸ್ಸಿಗೆ ಬರ­ಲಿಲ್ಲ. `ಕೈ­ದಿ­ಗ­ಳನ್ನೇ ರಂಗದ ಮೇಲೆ ತಂದರೆ?' ತಕ್ಷಣ ಯಾರಿಗೂ ಹೇಳ­ಲಿಲ್ಲ. ಹಾಗೇ ಮನ­ಸ್ಸಿ­ನಲ್ಲಿ ಇಟ್ಟು­ಕೊಂ­ಡರು. ಅದು ಹುಚ್ಚು ದೈರ್ಯವೇ ಆಗಿತ್ತು. ಯಾರಿ­ಗಾ­ದರೂ ಈ ವಿಷ­ಯ­ವನ್ನು ಹೇಳಲು ಕಟ್ಟೀ­ಮನಿ ಅಂಜಿ­ದರು. ಹುಚ್ಚ ಎಂದಾರು ಎಂಬ ಭಯ ಬೇರೆ. ಆದರೆ ಮನ­ಸ್ಸಿಗೆ ಆ ಹುಳು ಮಾತ್ರ ಸದಾ ಕೊರೆ­ಯು­ತ್ತಿತ್ತು.
ಜೈಲ್‌ ಸೂಪ­ರಿಂ­ಟೆಂ­ಡೆಂಟ್‌ ಗೋಪಾಲ್‌ ಹೊಸೂರು ಅವ­ರಿಗೆ ತಮ್ಮ ಮನ­ಸ್ಸಲ್ಲಿ ಮೂಡಿದ ವಿಷ­ಯ­ವನ್ನು ತಿಳಿ­ಸಿ­ದಾಗ ಕ್ಷಣ­ಹೊತ್ತು ಅವ­ರಲ್ಲಿ ಮಾತೇ ಹೊರ­ಡ­ಲಿಲ್ಲ. ಪರಿ­ಕ­ಲ್ಪನೆ ಅದ್ಬುತ ಆದರೆ....ಇದು ಸಾಧ್ಯವೆ? ಎಂಬ ಅನು­ಮಾನ ಗೋಪಾಲ್‌ ಅವ­ರ­ಲ್ಲಿತ್ತು. ಮೊದಲು ಅನು­ಮತಿ ಕೊಡಿ. ಆಮೇಲೆ ನೋಡಿ! ಎಂಬ ವಿಶ್ವಾ­ವನ್ನು ಕಟ್ಟೀ­ಮನಿ ಅವರು ವ್ಯಕ್ತ­ಪ­ಡಿ­ಸಿ­ದಾಗ ಗೋಪಾಲ್‌ ಹೊಸೂರು ಎಸ್‌ ಎಂದರು. ರಾಜ­ಕಾ­ರಣಿ ಹಾಗೂ ರಂಗ­ಕರ್ಮಿ ಎಂ.ಪಿ. ಪ್ರಕಾಶ್‌ ಅವರ ಸಹ­ಕಾ­ರವೂ ಇತ್ತು.

ಪ್ರತಿ­ರೋಧ ಇದ್ದೇ ಇತ್ತು: ಅದೆಲ್ಲಾ ಸರಿ. ಕೈದಿ­ಗ­ಳನ್ನು ಒಪ್ಪಿ­ಸು­ವುದು ಹೇಗೆ? ಮೊದ­ಮೊ­ದಲು ಕೈದಿ­ಗಳು ಸಹ­ಕ­ರಿ­ಸ­ಲಿಲ್ಲ. `ಏ ಹೋಗಯ್ಯಾ ನಮ್ಮ ಬದುಕೇ ನಾಟ­ಕ­ವಾ­ಗಿದೆ. ನೀನೆಂಥ ನಾಟಕ ಆಡಿ­ಸವೆ' ಎಂಬ ಉತ್ತರ ಕೈದಿ­ಗ­ಳಿಂದ ಬಂದಾಗ ಅದನ್ನು ಕಟ್ಟೀ­ಮನಿ ಸವಾ­ಲಾಗಿ ತೆಗೆ­ದು­ಕೊಂ­ಡರು.
ಆಮೇಲೆ ನಡೆ­ದದ್ದು ಬರೀ ಮ್ಯಾಜಿಕ್‌. ಕೈದಿ­ಗಳ ನಡುವೆ ಕಟ್ಟೀ­ಮನಿ ಅವರ ಬಾಂಧವ್ಯ ಬಹಳ ಗಾಢ­ವಾಗಿ ಬೆಳೆ­ಯಿತು. ಕೈದಿ­ಗಳ ತೂಕದ ಊಟ­ವನ್ನೇ ಕಟ್ಟೀ­ಮನಿ ಅವರೂ ಸೇವಿ­ಸು­ತ್ತಿ­ದ್ದರು. ತಿಂಗಳ ಕಾಲ ನಡೆ­ಯು­ತ್ತಿದ್ದ ನಾಟಕ ಕಾರ್ಯಾ­ಗಾ­ರ­ದಲ್ಲಿ ಕೈದಿ­ಗಳು ಕಟ್ಟೀ­ಮನಿ ಅವ­ರನ್ನು ಬಹ­ಳ­ವಾಗಿ ಹಚ್ಚಿ­ಕೊಂ­ಡರು. ಕಟ್ಟಿ­ಮನಿ ಅವರ ಜೊತೆ ತಮ್ಮ ಅಪ­ರಾ­ಧ­ಗ­ಳನ್ನು ಬಿಚ್ಚಿ­ಡು­ತ್ತಿ­ದ್ದರು. ಮಾಡಿದ ತಪ್ಪನ್ನು ಹೇಳಿ­ಕೊಂಡು ಹಗು­ರಾ­ಗು­ತ್ತಿ­ದ್ದರು. ನಾಟಕ ಹೇಳಿ­ಕೊ­ಡು­ವಾಗ ಕೈದಿ­ಗ­ಳಿಗೆ ಏಟು ಕೊಟ್ಟಿದ್ದು ಇದೆ. ಆದರೆ ಅದು ಪ್ರೀತಿಯ ಸಂಕೇ­ತ­ವಾ­ಗಿತ್ತು! ಕೈದಿ­ಗಳ ಅಂತ­ರಂ­ಗ­ದಲ್ಲಿ ಕಟ್ಟೀ­ಮನಿ ಸಸಂ­ಸ್ಕೃತ ಬೀಜ ಬಿತ್ತಿ­ದರು.

ಬದ­ಲಾದ ಚಿತ್ರಣ: ಮೈಸೂರು ಜೈಲು ಕೈದಿ­ಗ­ಳಿಂದ `ಮಾ­ರ­ನಾ­ಯಕ' ನಾಟಕ ಪ್ರದ­ರ್ಶ­ನ­ಗೊಂ­ಡಾಗ ಇಡೀ ರಾಷ್ಟ್ರಾ­ದ್ಯಂತ ಸುದ್ದಿ­ಯಾ­ಯಿತು. `ಔ­ಟ್‌­ಲುಕ್‌' ಮುಖ­ಪುಟ ಲೇಖನ ಮಾಡಿತು. ಇಂಗ್ಲಿಷ್‌ ಟಿವಿ ವಾಹಿ­ನಿ­ಗಳು ಕಟ್ಟೀ­ಮನಿ ಅವರ ಹಿಂದೆ ಬಿದ್ದವು. ಎಲ್ಲ­ಕ್ಕಿಂತ ಮುಖ್ಯ­ವಾಗಿ ಜೈಲು ಒಳ­ಗಿನ ವಾತಾ­ವ­ರಣ ಬದ­ಲಾ­ಯಿತು. ಪೊಲೀ­ಸರು ಕೈದಿ­ಗ­ಳನ್ನು ಕೊಲೆ ಅಪ­ರಾಧಿ, ಡಕಾ­ಯತಿ ಅಪ­ರಾಧಿ, ಕಳ್ಳ ಎಂದು ಕರೆ­ಯು­ತ್ತಿ­ದ್ದ­ವರು ಆಮೇಲೆ ಪಾತ್ರ­ಗ­ಳಿಂದ ಸಂಭೋ­ದಿ­ಸಿ­ದರು. ಮಹಿಳಾ ಮತ್ತು ಪುರುಷ ಕೈದಿ­ಗಳ ನಡುವೆ ಮಾತು­ಕ­ತೆಯೇ ಇರ­ಲಿಲ್ಲ. ಮಾಧವಿ ನಾಟ­ಕದ ನಂತರ ಇದು ಬದ­ಲಾ­ಯಿತು. ಜೂಲಿ­ಯಸ್‌ ಸೀಜರ್‌, ಹ್ಯಾಮೆಟ್‌ ನಾಟ­ಕ­ಗಳು ಕೈದಿ­ಗ­ಳಿಂದ ರಂಗ­ವೇ­ರಿ­ದವು.
ಆ ನಂತರ ಎಷ್ಟೋ ಕೈದಿ­ಗಳ ಶಿಕ್ಷೆಯ ಅವಧಿ ಕಮ್ಮಿ­ಯಾ­ದದ್ದೂ ಇದೆ. ಜೈಲು ನಾಟಕ ಕರ್ನಾ­ಟ­ಕಲ್ಲಿ ನಡೆ­ಯಿ­ತಾ­ದರೂ ಅದರ ಪರಿ­ಣಾಮ ಇಡೀ ದೇಶ­ದಲ್ಲಿ ಉಂಟಾ­ಯಿತು.
ರಂಗ­ಭೂಮಿ ಕಟ್ಟೀ­ಮನಿ: ಕನ್ನಡ ರಂಗ­ಭೂ­ಮಿ­ಯಲ್ಲಿ ಹುಲು­ಗಪ್ಪ ಕಟ್ಟೀ­ಮನಿ ಅವರು ಅತ್ಯಂತ ವಿಶಿಷ್ಟ ಸ್ಥಾನ­ದಲ್ಲಿ ನಿಲ್ಲು­ತ್ತಾರೆ. ಅವರ ರಂಗ­ಭೂಮಿ ಕಾರ್ಯಾ­ಗಾ­ರ­ಗ­ಳಲ್ಲಿ ಭಾಗ­ವ­ಹಿ­ಸಿ­ದ­ವರು ಅಪ­ರೂಪ ಅನು­ಭವ ಪಡೆ­ಯು­ತ್ತಾರೆ. ಅವರ ಮಾತಿ­ನಲ್ಲಿ ಒಂದು ಚಿಕಿ­ತ್ಸಕ ಗುಣ­ವಿದೆ. ಸಕಾ­ರಾ­ತ್ಮಕ ಎನರ್ಜಿ ಮೂಡಿ­ಸು­ವಲ್ಲಿ ಅವರು ನಿಷ್ಣಾ­ತರು.
ಜೈಲು ನಾಟಕ ನಿರ್ದೇ­ಶ­ಕ­ರಾಗಿ ಎಲ್ಲರ ಬಾಯಲ್ಲೂ ಕಟ್ಟಿ­ಮನಿ ಅವರು ಕೇಳಿ­ಬಂ­ದರೂ ಕೂಡ ಅವ­ರೊಬ್ಬ ಪ್ರಬುದ್ಧ ನಟ. `ಗಾಂಧಿ ವಿರುದ್ಧ ಗಾಂಧಿ' ನಾಟ­ಕದ ಗಾಂಧಿ ಯಾವಾ­ಗಲು ಎಲ್ಲ­ರನ್ನು ಕಾಡು­ತ್ತಾನೆ. `ಮಾ­ಯಾ­ಸೀತಾ ಪ್ರಸಂಗ'ದಲ್ಲಿ ಅವರ ಅದ್ಬುತ ಅಭಿ­ನ­ಯ­ವಿದೆ. ಕತ್ತಲೆ ಬೆಳಕು, ಹೀಗೊಂದು ಪ್ರಣಯ ಪ್ರಸಂಗ, ಕತ್ತಲೆ ಬೆಳಕು, ಕಿಂದ­ರಿ­ಜೋಗಿ ಹೀಗೆ ನೂರಾರು ನಾಟ­ಕ­ಗ­ಳಲ್ಲಿ ಅಭಿ­ನ­ಯಿ­ಸಿ­ದ್ದಾರೆ. ಸಂಘ­ಟ­ಕ­ರಾಗಿ ಮೈಸೂ­ರ­ನಲ್ಲಿ `ಸಂ­ಕಲ್ಪ'ವೆಂಬ ಹವ್ಯಾಸಿ ರಂಗ­ತಂಡ ಕಟ್ಟಿ­ದ್ದಾರೆ. ನಿರ್ದೇ­ಶ­ಕ­ರಾಗಿ ಅವರು ರಂಗ­ಭೂ­ಮಿಗೆ ಹಲವು ಪ್ರಸಿದ್ಧ ನಾಟ­ಕ­ಗ­ಳನ್ನು ನಿರ್ದೇ­ಶಿ­ಸಿ­ದ್ದಾರೆ.
ಸದ್ಯಕ್ಕೆ ಕಟ್ಟೀ­ಮನಿ ಧಾರ­ವಾಡ ರಂಗಾ­ಯಣ ಉಸ್ತು­ವಾರಿ ಹೊತ್ತಿ­ದ್ದಾರೆ. ಅಲ್ಲೂ ಜೈಲು ನಾಟಕ ತಯಾರಿ ನಡೆ­ಯು­ತ್ತಿದೆ. ಬಳ್ಳಾ­ರಿಯ ಹಗ­ರಿ­ಬೊ­ಮ್ಮನ ಹಳ್ಳಿ­ಯಿಂದ ಬಂದ ಅವರು ಇಂದು ರಂಗ­ಭೂ­ಮಿಯ ಆಸ್ತಿ­ಯಾ­ಗಿ­ದ್ದಾರೆ. ಪತ್ನಿ ಪ್ರಮೀಳಾ ಬೇಂಗ್ರೆ ಕೂಡ ರಂಗಾ­ಯಣ ಕಲಾ­ವಿ­ದರು. ಮಗಳು ಕುಂತಿ, ಮಗ ಕಣ್ವ.
ಅವರ ಈ ಹತ್ತು­ವ­ರ್ಷ­ಗಳ ಜೈಲು ನಾಟಕ ನಡಿ­ಗೆ­ಯಲ್ಲಿ ಹಲವು ಏಳು ಬೀಳು­ಗ­ಳನ್ನು ಅನು­ಭ­ವಿ­ಸಿ­ದ್ದಾರೆ. ಹಲವು ಅದ್ಬು­ತ­ಗ­ಳನ್ನು ಕಂಡಿ­ದ್ದಾರೆ. ಎಂದೂ ಮರೆ­ಯದ `ದಿ­ವ್ಯ­ಔ­ಷಧಿ'ಯನ್ನು ಅವರು ವಿಶ್ವ­ರಂ­ಗ­ಭೂ­ಮಿಗೆ ಕಾಣಿ­ಕೆ­ಯಾಗಿ ಕೊಟ್ಟಿ­ದ್ದಾರೆ.

No comments:

Post a Comment