Tuesday, September 29, 2009

ಶ್ರೀಧರ್‌ ಜೈನ್‌


ನಾಟ್ಯ ಮಯೂರ ಶ್ರೀಧರ್‌ ಜೈನ್‌!

ಬಹುಶಃ ಅವರು ಹುಟ್ಟಿದ್ದೇ ನೃತ್ಯ­ಕ್ಕಾಗಿ! ಅವರ ನಡೆ- ನುಡಿ­ಯಲ್ಲಿ ನಟ­ರಾ­ಜನ ನಡಿ­ಗೆ­ಯಿದೆ. ಅವರ ನಿಲು­ವಿ­ನಲ್ಲಿ ನಾಟ್ಯ­ಶಾ­ಸ್ತ್ರದ ನವ­ರ­ಸಾ­ದಿ­ಗಳು ನಲಿ­ದಾ­ಡು­ತ್ತವೆ. ಗೆಜ್ಜೆ ಕಟ್ಟಿದ ಅವರ ಹೆಜ್ಜೆಯ ಗುರುತು ರಸಿ­ಕರ ಎದೆ­ಯಲ್ಲಿ ಸದ್ದು ಮಾಡಿವೆ. ಭೂಮಿ­ಕೆಯ ಮೇಲಿಂದ ಹೊಮ್ಮಿ ಬರುವ ಅವರ ಹುಮ್ಮಸ್ಸು ಆನಂದ ಹೊತ್ತು ನಾಡಿ­ನೆ­ಲ್ಲಡೆ ಹರ­ಡಿದೆ.
ಅವರು ಖ್ಯಾತ ನೃತ್ಯ­ಪಟು ಶ್ರೀಧರ್‌ ಜೈನ್‌. ಒಮ್ಮೆ ನೋಡಿ­ದರೆ ಸಾಕು ಯಾರು ಬೇಕಾ­ದರೂ ಅವ­ರೊಬ್ಬ ನೃತ್ಯ­ಗಾರ ಎಂದು ಊಹಿ­ಸ­ಬ­ಹುದು. ಆ ಮೈಕಟ್ಟು, ಮುಖ­ಭಾವ... ನೃತ್ಯ­ವನ್ನು ಕಣ್ಮುಂದೆ ತರು­ತ್ತವೆ. ಒಬ್ಬ ವ್ಯಕ್ತಿ­ಯಾ­ಗಿಯೂ ಶ್ರೀಧರ್‌ ಜೈನ್‌ ಹೃದ­ಯದ ಹತ್ತಿ­ರಕ್ಕೆ ಬಂದು ನಿಲ್ಲು­ತ್ತಾರೆ. ಅವರ ಮಾತಿನ ವಿದೇ­ಯತೆ `ವಿದ್ಯೆ ಉಳ್ಳ­ವನ ಮುಖ ಮುದ್ದು ಬರು­ವಂ­ತಿರ್ಕು' ಎನ್ನುವ ಸರ್ವ­ಜ್ಞನ ವಚ­ನ­ವನ್ನು ಶೃತಿ ಮಾಡು­ತ್ತದೆ.
ಶ್ರದ್ಧಾ­ಭ­ಕ್ತಿ­ಯಿಂದ ಅಭ್ಯಾಸ ಮಾಡಿದ ಭರ­ತ­ನಾಟ್ಯ ಶ್ರೀಧರ್‌ ಅವರ ವ್ಯಕ್ತಿ­ತ್ವ­ವನ್ನು ಬಹಳ ಎತ್ತ­ರಕ್ಕೆ ಏರಿ­ಸಿದೆ. ಭರ­ತ­ನಾ­ಟ್ಯದ ಬಲ­ದಿಂದ ವೈವಿ­ಧ್ಯ­ಮಯ ನೃತ್ಯ ಪ್ರಾಕಾ­ರ­ಗ­ಳನ್ನು ತನ್ನತ್ತ ಸೆಳೆದು ಕೊಂಡಿ­ದ್ದಾರೆ. ಭಾರ­ತೀಯ ನೃತ್ಯ­ಗಳು ಎನ್ನುವ ಕಲ್ಪ­ನೆಯ ಕೆಳಗೆ ಜಾನ­ಪದ, ಸಮ­ಕಾ­ಲೀನ ನೃತ್ಯ, ಪಾಶ್ಚಾತ್ಯ, ರಾಜ­ಸ್ತಾನಿ, ಗರ್ಬಾ, ದಾಂಡ್ಯ, ಪ್ಯೂಜನ್‌...ಇ­ವೆ­ಲ್ಲವೂ ಅವರ ದೇಹ­ದಿಂದ ಹೊಮ್ಮಿ ಬರು­ತ್ತವೆ. ಎ.ಆರ್‌. ರೆಹ­ಮಾನ್‌ ಸಂಯೋ­ಜ­ನೆಯ `ವಂದೇ ಮಾತರಂ' ಗೀತೆಗೆ ಶ್ರೀಧರ್‌ ಜೈನ್‌­ಅ­ವರ ನೃತ್ಯ ಸಂಯೋ­ಜನೆ ರಾಷ್ಟ್ರ­ಮ­ಟ್ಟ­ದಲ್ಲಿ ಖ್ಯಾತಿ ಗಳಿ­ಸಿದೆ. ಅವರ ನೃತ್ಯ ರೂಪ­ಕ­ಗ­ಳಲ್ಲಿ ಕಾಣುವ ಎನರ್ಜಿ ಶ್ರೀಧರ್‌ ಅವರ ನೃತ್ಯ ಭರ­ವ­ಸೆ­ಯನ್ನು ಎತ್ತಿ ಹಿಡಿ­ಯು­ತ್ತದೆ.
ಶ್ರೀಧರ್‌ ಜೈನ್‌ `ಆ­ಪ್ತ­ಮಿತ್ರ' ಚಲ­ನ­ಚಿ­ತ್ರ­ದಲ್ಲಿ ದಿ. ಸೌಂದರ್ಯ ಅವರ ಜೊತೆ ಹೆಜ್ಜೆ ಹಾಕಿ­ದಾಗ ಕನ್ನಡ ನಾಡು ಮನ­ಸಾರೆ ಮೆಚ್ಚಿ­ಕೊಂ­ಡಿತು. ಇಂಥ ಅಪ್ಪಟ ಕಲಾ­ವಿ­ದನ ದಿವ್ಯ ಪ್ರತಿ­ಭೆ­ಯನ್ನು ಬಳ­ಸಿ­ಕೊಂ­ಡಿ­ದ್ದಕ್ಕೆ ಕನ್ನಡ ಚಿತ್ರ­ರಂಗ ನಿಜಕ್ಕೂ ಧನ್ಯ!
ಶ್ರೀಧರ್‌ ಜೈನ್‌ ನೃತ್ಯ ಪರಂ­ಪ­ರೆ­ಯಿಂದ ಬಂದ­ವ­ರಲ್ಲ. ತಂದೆ ದಿ. ಮಿಸ್ರಿ­ಲಾಲ್‌ ಜೈನ್‌ ರಾಜ­ಸ್ಥಾನ ಮೂಲದ ವಾಪಾ­ರ­ಸ್ಥರು. ತಾಯಿ ರತಿ­ದೇವಿ ದಕ್ಷಿಣ ಕನ್ನ­ಡದ ಕಾರ್ಕಳ ಸಮೀ­ಪದ ನಾರ­ವಿ­ಯ­ವರು. ಶ್ರೀಧರ್‌ ಹುಟ್ಟಿದ್ದು ನಾರ­ವಿ­ಯಲ್ಲಿ ಬೆಳ­ದ­ದ್ದೇಲ್ಲಾ ಮೈಸೂ­ರಿ­ನಲ್ಲಿ.
ಶ್ರೀಧರ್‌ ತಮ್ಮ ನಾಲ್ಕನೇ ವಯ­ಸ್ಸಿ­ನ­ಲ್ಲಿಯೇ ತಂದೆ­ಯನ್ನು ಕಳೆ­ದು­ಕೊಂ­ಡರು. 9ನೇ ವಯ­ಸ್ಸಿ­ನಲ್ಲಿ ನೃತ್ಯ­ಗುರು ಶ್ರೀನಿ­ವಾಸ್‌ ಅವರ ಬಳಿ ನೃತ್ಯ ಕಲಿಕೆ ಆರಂ­ಭಿ­ಸಿ­ದಾಗ ಪರಿ­ಸ್ಥಿತಿ ಸರಿ­ಯಾ­ಗಿ­ರ­ಲಿಲ್ಲ. ಅನಿ­ವಾ­ರ್ಯ­ವಾಗಿ ಬಹಳ ಚಿಕ್ಕ­ವ­ಯ­ಸ್ಸಿ­ನ­ಲ್ಲಿಯೇ ಎಲೆ­ಕ್ಟ್ರಾ­ನಿ­ಕ್ಸ್‌­ವೊಂ­ದ­ರಲ್ಲಿ ಕೆಲ­ಸಕ್ಕೆ ಸೇರ­ಬೇ­ಕಾ­ಯಿತು. ಕೆಲ­ಸದ ಒತ್ತಡ ನೃತ್ಯಕ್ಕೆ ಅವ­ಕಾಶ ಕೊಡ­ಲಿಲ್ಲ. ಮಧ್ಯೆ ನೃತ್ಯ ಕಲಿ­ಕೆ­ಯನ್ನು ಬಿಡ­ಬೇ­ಕಾ­ಯಿತು. ಆದರೆ ಕಲಿ­ಕೆಯ ಆಸಕ್ತಿ ಹಸಿ­ರಾ­ಗಿತ್ತು.
ಆಮೇಲೆ ನೃತ್ಯ­ಗುರು ಶೀಲಾ ಶ್ರೀಧರ್‌ ಅವರ ಬಳಿ ನೃತ್ಯ­ಕ­ಲಿಕೆ ಮುಂದು­ವ­ರಿ­ಸಿ­ದರು. 12 ವರ್ಷ­ಗಳ ನೃತ್ಯಾ­ಭ್ಯಾಸ ಅವ­ರಿಗೆ ಹೊಸ­ದೊಂದು ದಾರಿ ತೋರಿ­ಸಿತು. ಮೈಸೂರು ವಿವಿ ಲಲಿ­ತ­ಕಲಾ ಕಾಲೇ­ಜಿ­ನಲ್ಲಿ ಡಿಪ್ಲೊಮಾ ಪಡೆ­ದಿ­ರುವ ಅವರು ವಿದ್ವತ್‌ ಪರೀ­ಕ್ಷೆ­ಯಲ್ಲಿ ಉನ್ನತ ಶ್ರೇಣಿ ಗಳಿ­ಸಿ­ದರು. ಈಗ ಶ್ರೀಧರ್‌ ಜೈನ್‌ ಸ್ವತಃ ನೃತ್ಯ­ಗರು!

ಶ್ರೀ ನಿಮಿ­ಷಾಂಬ ನೃತ್ಯ ಶಾಲೆ: ಇದು ಶ್ರೀಧರ್‌ ಜೈನ್‌ ಅವರ ಕನ­ಸಿನ ಕೂಸು. 1996ರಲ್ಲಿ ಮೈಸೂ­ರಿ­ನಲ್ಲಿ ಸ್ಥಾಪ­ನೆ­ಗೊಂಡ ಈ ನೃತ್ಯ ಶಾಲೆ ಇವತ್ತು ಬಹಳ ಎತ್ತ­ರಕ್ಕೆ ಬೆಳೆ­ದಿದೆ. ಯಾವಾ­ಗಲು ವಿದ್ಯಾ­ರ್ಥಿ­ಗ­ಳಿಂದ ತುಂಬಿ­ರು­ತ್ತದೆ. ಈ ಶಾಲೆ ಮೈಸೂ­ರಿ­ನಲ್ಲಿ 7 ಬ್ರಾಂಚ್‌­ಗ­ಳನ್ನು ಹೊಂದಿದ್ದು ಪ್ರತಿ­ನಿತ್ಯ ನೃತ್ಯ ವಿದ್ಯೆ­ದಾನ ನಡೆ­ಯು­ತ್ತಿದೆ. ನೂರಾರು ವಿದ್ಯಾ­ರ್ಥಿ­ಗ­ಳನ್ನು ಹೊಂದಿ­ರುವ ಶ್ರೀಧರ್‌ ನೆಚ್ಚಿನ ಗುರು­ಗ­ಳಾ­ಗಿ­ದ್ದಾರೆ. ಅವರ ವಿದ್ಯಾ­ರ್ಥಿ­ಗಳು ಈಗಾ­ಗಲೇ ತಮ್ಮ ಪ್ರತಿಭೆ ತೋರಿ­ದ್ದಾರೆ. ವಿದೇಶಿ ಶಿಷ್ಯ­ರನ್ನು ಅವರು ಹೊಂದಿ­ದ್ದಾರೆ. ಭಾರ­ತ­ದಲ್ಲೇ ಪ್ರಥಮ ಬಾರಿಗೆ ಸ್ಕೇಟಿಂಗ್‌ ಮೇಲೆ ನೃತ್ಯ ಪ್ರದ­ರ್ಶಿಸಿ ದಾಖಲೆ ಮಾಡಿದ `ರೀತು' ಶ್ರೀಧರ್‌ ಅವರ ಶಿಷ್ಯ­ರ­ಲ್ಲೊ­ಬ್ಬರು.
ಬಡ ಮಕ್ಕಳ ನೃತ್ಯ ಕಲಿ­ಕೆಗೆ ಪ್ರೊತ್ಸಾಹ ಮಾಡು­ತ್ತಿ­ರುವ ಶ್ರೀಧರ್‌ ಜೈನ್‌ ನೃತ್ಯಕ್ಕೆ ಬೇಕಾದ ವಸ್ತ್ರ, ಒಡವೆ, ಮೇಕಪ್‌ ಮುಂತಾ­ದ­ವನ್ನು ಉಚಿ­ತ­ವಾಗಿ ಒದ­ಗಿ­ಸು­ತ್ತಿ­ದ್ದಾರೆ. `ಶ್ರೀ ನಿಮಿ­ಷಾಂಬ ನಾದಾ­ಲಯ ಮಂಟಪ'ವೆಂಬ ಸಭಾಂ­ಗಣ ಶ್ರೀಧರ್‌ ಅವರ ಮನೆಯ ಭಾಗವೇ ಆಗಿದ್ದು ಮನೆ­ಯಿಡೀ ನೃತ್ಯದ ಪರಿ­ಮಳ ಪಸ­ರಿ­ಸಿದೆ.

ಹೆಜ್ಚೆ-ಗೆಜ್ಜೆ: ಕರ್ನಾ­ಟ­ಕದ ಪ್ರತಿ­ಷ್ಠಿತ `ಹೆಜ್ಜೆ- ಗೆಜ್ಜೆ' ರಾಜ್ಯ­ಮ­ಟ್ಟದ ನೃತ್ಯ ಸ್ಪರ್ಧೆ­ಯನ್ನು ಶ್ರೀಧರ್‌ ಅವರು ಕಳೆದ 13 ವರ್ಷ­ಗ­ಳಿಂದ ಆಯೋ­ಜಿ­ಸುತ್ತಾ ಬಂದಿ­ದ್ದಾರೆ. ನೃತ್ಯದ ಎಲ್ಲಾ ಪ್ರಕಾ­ರ­ಗ­ಳಿಗೂ ನಡೆ­ಯುವ ಈ ಸ್ಪರ್ಧೆ­ಯಲ್ಲಿ ಅಸಂ­ಖ್ಯಾತ ಸ್ಪರ್ಧಾ­ಳು­ಗಳು ಭಾಗ­ವ­ಹಿ­ಸಿ­ದ್ದಾರೆ.

ನೃತ್ಯ­ರೂ­ಪ­ಕ­ಗಳು: ಶ್ರೀಧರ್‌ ಜೈನ್‌ ಸಂಯೋ­ಜಿ­ಸಿ­ರುವ ನೃತ್ಯ ರೂಪ­ಕ­ಗಳು ದೇಶಾ­ದ್ಯಂತ ಪ್ರದ­ರ್ಶ­ನ­ಗೊಂ­ಡಿವೆ. ಮೋಹಿನಿ ಬಸ್ಮಾ­ಸುರ, ಭರತ ಬಾಹು­ಬಲಿ, ಶ್ರೀಶಕ್ತಿ ನಿಮಿ­ಷಾಂಬ, ದಕ್ಷ­ಯಜ್ಞ, ಶ್ರೀ ಮಹ­ವೀರ ವೈಭವ, ಚತ್ರ­ಪತಿ ಶಿವಾಜಿ ಮುಂತಾದ ರೂಪ­ಕ­ಗಳು ಬಹಳ ಯಶ­ಸ್ವಿ­ಯಾ­ಗಿವೆ. ಅಲ್ಲದೆ ಚಲ­ನ­ಚಿತ್ರ, ಟಿವಿ ಧಾರಾ­ವಾ­ಹಿ­ಗ­ಳಿಗೂ ನೃತ್ಯ ಸಂಯೋ­ಜನೆ ಮಾಡಿ­ದ್ದಾರೆ. ಈಗ ನವ­ಶಕ್ತಿ ವೈಭವ ನೃತ್ಯ ರೂಪಕ ಸಂಯೋ­ಜ­ನೆಗೆ ಸಿದ್ಧ­ತೆ­ಗಳು ನಡೆ­ಯು­ತ್ತಿವೆ. ಈ ಬಾರಿಯ ದಸ­ರೆ­ಯಲ್ಲಿ(ಸೆ. 20: ಯುವ ದಸರಾ) ಭಾರ­ತ­ದಲ್ಲೆ ಪ್ರಥ­ಮ­ವಾಗಿ ಶ್ರೀಧರ್‌ ಜೈನ್‌ ಡೋಲಕ್‌ ಮೇಲೆ ನಾಟ್ಯ ಮಾಡ­ಲಿ­ದ್ದಾರೆ ಹಾಗೂ ಜೈ ಹೋ ಗೀತೆಗೆ 40 ಮಂದಿ ಕಲಾ­ವಿ­ದರ ಒಡ­ಗೂಡಿ ಹೆಜ್ಚೆ­ಹಾ­ಕ­ಲಿ­ದ್ದಾರೆ.

ಸಮ್ಮಾನ: ಶ್ರೀಧರ್‌ ಅವರ ನೃತ್ಯ ಪ್ರತಿ­ಭೆಯ ಹಿಂದೆ ಅಪಾರ ಗೌರವ ಪ್ರಶ­ಸ್ತಿ­ಗ­ಗಳು ಅರಸಿ ಬಂದಿವೆ. ಕಲ್ಕತ್ತಾ ಯೂತ್‌ ಪೆಸ್ಟಿ­ವಲ್‌ ರಾಷ್ಟ್ರೀಯ ಪ್ರಶಸ್ತಿ, ಶ್ರೀ ಗೊಮ್ಮ­ಟೇ­ಶ್ವರ ವಿದ್ಯಾ­ಪೀಠ ಪ್ರಶಸ್ತಿ, ಮೈಸೂ­ರಿನ ಜೈನ್‌ ಕಮಿ­ಟಿ­ಯಿಂದ `ನ­ಟ­ಸಾ­ರ್ವ­ಭೌಮ' ಪ್ರಶಸ್ತಿ ಹಾಗೂ ಸಂಘ ಸಂಸ್ಥೆ­ಗ­ಳಿ­ಗಂದ ಹಲವು ಬಿರು­ದು­ಗ­ಳನ್ನು ಗಳಿ­ಸಿ­ದ್ದಾರೆ.
ಶ್ರೀಧರ್‌ ಜೈನ್‌ ಅವರ ಪತ್ನಿ ಸೌಮ್ಯ ಶ್ರೀಧರ್‌ ಹಿಂದೂ­ಸ್ಥಾನಿ ಸಂಗೀತ ಬಲ್ಲ­ವರು. ಆಕಾ­ಶ­ವಾಣಿ ಕಲಾ­ವಿ­ದರೂ ಹೌದು. ಮಗಳು ಲಾಸ್ಯ ನೃತ್ಯ ಕಲಿ­ಯು­ತ್ತಿ­ದ್ದಾಳೆ. ಮಗ ಸಾರಂಗ.
ಜೈನ ಸಮು­ದಾ­ಯ­ದಲ್ಲಿ ಹುಟ್ಟಿ ಭರ­ತ­ನಾಟ್ಯ ಬಲ್ಲ ಪ್ರಥಮ ಕಲಾ­ವಿದ ಎನಿ­ಸಿ­ಕೊಂ­ಡಿ­ರುವ ಶ್ರೀಧರ್‌ ಜೈನ್‌ ಅವ­ರಿಗೆ ನೃತ್ಯ ಬಿಟ್ಟ ಬೇರೊಂದು ಲೋಕವೇ ಇಲ್ಲ. ಅವರ ನಾಡಿ­ಯಲ್ಲಿ ನೃತ್ಯ­ರಾ­ಜನ ವೈಭವ ಸದಾ ಮೂಡಿ­ಬ­ರು­ತ್ತಿದೆ.

No comments:

Post a Comment