Tuesday, September 29, 2009

ಅನಂತ ಸತ್ಯಂ





ಅನಂತ ಸತ್ಯಂ
ಬಲು ಅಪರೂಪ ಇಂಥವರು......




ಅ­ನಂತ ಸತ್ಯಂಬಲು ಅಪರೂಪ ಇಂಥವರುಕಗ್ಗ­ಲ್ಲನ್ನು ಕಡೆದು ಮೂರುತಿ ಮಾಡುವ ಶಿಲ್ಪಾ­ಗಾರ. ತಂತಿ ಮೇಲೆ ನಡೆದು ಮಾಧುರ್ಯ ತುಂಬುವ ಸಂಗೀ­ತ­ಗಾರ. ಕಲ್ಲಿನ ಗುಣ ಅರಿ­ತ­ವರು. ತಂತಿ­ಗಳ ಶೃತಿ­ಯಿಂದ ನಾಡಿ ಮಿಡಿ­ತ­ಗೊ­ಳಿ­ಸು­ವ­ವರು. ಕಗ್ಗ­ಲ್ಲಿಗೆ ಉಳಿ­ಪೆ­ಟ್ಟಿನ ರುಚಿ ತೋರಿಸಿ ಕೃತಿ ಕಟ್ಟು­ವ­ವರು. ಬೆರಳ ತುದಿ­ಯಿಂದ ತಂತಿ­ಗಳ ಬಳಸಿ ರಸೋ­ತ್ಪತ್ತಿ ಮಾಡು­ವ­ವರು.ಅವರು ವಿದ್ವಾನ್‌ ಎನ್‌. ಅನಂತ ಸತ್ಯಂ. ಅಪ­ರೂ­ಪದ ಶಿಲ್ಪಿ ಹಾಗೂ ವೈಲಿನ್‌ ವಿದ್ವಾಂ­ಸರು. ನಾಡಿ­ನ­ಲ್ಲಿ­ರುವ ಬೆರ­ಳೆ­ಣಿ­ಕೆ­ಯಷ್ಟು ಶಿಲ್ಪಿ­ಗ­ಳಲ್ಲಿ ಅನಂತ ಸತ್ಯಂ ಒಬ್ಬರು. ಅವರ ಕೈಚ­ಳ­ಕ­ದಿಂದ ಮೂಡಿದ ಹಲವು ಕಲಾ­ಕೃ­ತಿ­ಗಳು ನಾಡಿ­ನಾ­ದ್ಯಂತ ಪ್ರಸಿದ್ಧಿ ಪಡೆ­ದಿವೆ. ಬೆಂಗ­ಳೂ­ರಿನ ರಾಜ­ಭ­ವ­ನ­ದ­ಲ್ಲಿ­ರುವ ಮಹಾ­ತ್ಮ­ಗಾಂಧಿ ಪುತ್ಥಳಿ ಅವರ ಮಹ­ತ್ವದ ಕೃತಿ. ಈ ಪುತ್ಥಳಿ ಪ್ರತಿ­ಷ್ಠಾ­ಪ­ನೆ­ಯಾ­ದಾಗ ಅಂದಿನ ರಾಜ್ಯ­ಪಾಲ ಖುರ್ಷಿದ್‌ ಆಲಂ ಖಾನ್‌ ಸತ್ಯಂ ಅವ­ರನ್ನು ಸನ್ಮಾ­ನಿ­ಸಿ­ದ್ದರು.ಸರ್‌. ಎಂ. ವಿಶ್ವೇ­ಶ್ವ­ರಯ್ಯ ಅವರ ಹುಟ್ಟೂ­ರಾದ ಮುದ್ದೇ­ನ­ಹ­ಳ್ಳಿಯ ವಿಶ್ವೇ­ಶ್ವ­ರಯ್ಯ ಪುತ್ಥಳಿ ಅನಂತ ಸತ್ಯಂ ಅವರ ಹೆಸರು ಹೇಳು­ತ್ತದೆ! ಬೆಂಗ­ಳೂ­ರಿನ ಎಂ.ಜಿ. ರಸ್ತೆಯ ಐಎ­ನ್‌ಜಿ ವೈಶ್ಯ ಬ್ಯಾಂಕ್‌ ಆವ­ರ­ಣ­ದ­ಲ್ಲಿ­ರುವ ಸಿಂಹದ ಕೃತಿ ಸತ್ಯಂ ಅವರ ಸೃಜ­ನ­ಶೀ­ಲ­ತೆಯ ಕೂಸು. ಈ ಬ್ಯಾಂಕಿನ ಲೋಗೋ ಕೂಡ ಸತ್ಯಂ ಮೂಡಿ­ಸಿದ ಸಿಂಹವೇ. ಖ್ಯಾತ ನೃತ ಕಲಾ­ವಿದೆ ಪ್ರೊತಿಮಾ ಬೇಡಿ ಅವರ ನೃತ್ಯ­ಗ್ರಾ­ಮ­ದ­ಲ್ಲಿ­ರುವ ಹಲವು ಕಲಾ­ಕೃ­ತಿ­ಗ­ಳನ್ನು ಅನಂತ ಸತ್ಯಂ ಮಾಡಿ­ಕೊ­ಟ್ಟಿ­ದ್ದಾರೆ.ಅನಂತ ಸತ್ಯಂ ಹುಟ್ಟಿದ್ದು ರಾಮ­ನ­ಗ­ರ­ದಲ್ಲಿ. ತಂದೆ ದಿ. ವಿದ್ವಾನ್‌ ನಾಗ­ಭೂ­ಷಣ ಶಾಸ್ತ್ರಿ ಹಾಗೂ ತಾಯಿ ಪಾರ್ವ­ತಮ್ಮ. ತಂದೆ ತಾಯಂ­ದಿ­ರಿ­ಬ್ಬರೂ ಸಂಗೀತ ತಿಳಿ­ದ­ವರು. ರಾಮ­ನ­ಗ­ರ­ದಲ್ಲಿ ಶಾಸ್ತ್ರಿ­ಗಳ ಮನೆ ಎಂದರೆ ಇವ­ತ್ತಿಗೂ ಖ್ಯಾತಿ. ಗಣೇಶ ಹಬ್ಬದ ಕಾಲ ಬಂತೆಂ­ದರೆ ಶಾಸ್ತ್ರಿ­ಗಳ ಮನೆ­ಯಲ್ಲಿ ಸಂಭ್ರ­ಮವೋ ಸಂಭ್ರಮ. ಶಾಸ್ತ್ರಿ­ಗಳ ಕೈಚ­ಳ­ಕ­ದಿಂದ ಮೂಡಿದ ಗಣ­ಪನ ಮೂರ್ತಿ ಕೊಳ್ಳಲು ದೂರದ ಊರಿ­ನಿಂದ ಜನ ಬರು­ತ್ತಿ­ದ್ದ­ರಂತೆ. ಮನೆ ತುಂಬೆಲ್ಲಾ ಮಣ್ಣಿನ ವಾಸನೆ! ಮನೆ ಮಂದಿ­ಯೆಲ್ಲಾ ಒಟ್ಟಿಗೆ ಕೂತು ಗಜಾ­ನ­ನ­ನನ್ನು ಕಟ್ಟು­ತ್ತಿ­ದ್ದರು. ಮಗ ಅನಂತ ಸತ್ಯಂ ಕೈಯಿಂದ ಗಣ­ಪನ ಕಣ್ಣು, ಕಿವಿ, ಮೂಗು ಹೀಗೆ ಒಂದೊಂದೇ ಅಂಗ­ಗ­ಳನ್ನು ಮಾಡಿಸಿ ಶಿಲ್ಪ­ಕಲೆ ಕಲಿ­ಕೆಗೆ ಹಚ್ಚಿ­ದರು. ಅನಂತ ಸತ್ಯ ತಂದೆ ಕೂಡ ಸಂಗೀತ ತಿಳಿ­ದ­ವರು. ಹರಿ­ಕ­ಥೆ­ಗ­ಳಿಗೆ ಹಾರ್ಮೋ­ನಿಯಂ ನುಡಿ­ಸು­ತ್ತಿ­ದ್ದರು. ವಿದ್ವಾಂ­ಸ­ರಾದ ಗುರು­ರಾ­ಜುಲು ನಾಯ್ಡು, ವೆಂಕೋ­ಬ­ದಾ­ಸರು ಮುಂತಾ­ದ­ವರ ಹರಿ­ಕ­ಥೆ­ಗ­ಳಿಗೆ ಹಾರ್ಮೋ­ನಿಯಂ ನುಡಿ­ಸಿ­ದ್ದಾರೆ.ಅನಂತ ಸತ್ಯಂ ಎಸ್ಸೆ­ಸ್ಸೆಲ್ಸಿ ತನಕ ರಾಮ­ನ­ಗ­ರ­ದಲ್ಲೇ ಕಲಿ­ತರು. ನಂತರ ಬೆಂಗ­ಳೂ­ರಿನ ಚಿತ್ರ­ಕಲಾ ಪರಿ­ಷ­ತ್‌­ನಲ್ಲಿ ಬಿಎ­ಫ್‌­ಎಗೆ ಸೇರಿ­ದರು. ಎಂಎ­ಫ್‌ಎ ಮಾಡಿ­ದರು. ಅಲ್ಲೇ ಉಪ­ನ್ಯಾ­ಸ­ಕರೂ ಆದರು.ಸಂಗೀ­ತ­ಗಾರ ಅನಂತ ಸತ್ಯಂ: ಚಿಕ್ಕಂ­ದಿ­ನಲ್ಲಿ ಮನೆ­ಯಲ್ಲೇ ಹಾಡು­ಗಾ­ರಿಕೆ ಕಲಿ­ಯು­ತ್ತಿ­ದ್ದರು. ವೈಲಿನ್‌ ಮೇಲೆ ಆಸಕ್ತಿ ಹುಟ್ಟಿದ್ದು ಹೈಸ್ಕೂಲು ಮೆಟ್ಟಿ­ಲೇ­ರಿ­ದಾಗ. ಬೆಂಗ­ಳೂ­ರಿ­ನಲ್ಲಿ ಕಾಲೇಜು ಸೇರಿದ ಮೇಲೆ 1984ರಲ್ಲಿ ವಿದ್ವಾನ್‌. ಬಿ.ವಿ. ಶ್ರೀಕಂ­ಠೇ­ಶ್ವರ್‌ ಅವರ ಬಳಿ ವೈಲಿನ್‌ ಕಲಿಕೆ ಆರಂ­ಭಿ­ಸಿ­ದರು. ಸತ್ಯಂ ಅವರ ಕಲಿ­ಕೆಯ ದಿನ­ಗಳು ಕುತೂ­ಹ­ಲ­ಕ­ರ­ವಾ­ಗಿವೆ. ಮುಂಜಾನೆ ತಿಂಡಿ ಮುಗಿಸಿ ಬೆಂಗ­ಳೂರು ಕಡೆ ಹೊರ­ಟರೆ ಮತ್ತೆ ಮನೆ ಸೇರು­ತ್ತಿ­ದ್ದುದು ರಾತ್ರಿ ಒಂದು ಗಂಟೆಗೆ. ಮಧ್ಯ­ರಾತ್ರಿ 12.30ಕ್ಕೆ ಬೆಂಗ­ಳೂರು ಬಿಡುವ ಕಡೆಯ ಪ್ಯಾಸೆಂ­ಜರ್‌ ರೈಲು ಹಿಡಿದು ರಾಮ­ನ­ಗರ ಸೇರು­ತ್ತಿ­ದ್ದರು. ಅಪ್ಪ ಅಮ್ಮ ಮಗನ ಹಾದಿ­ಗಾಗಿ ಕಾಯು­ತ್ತಿ­ದ್ದರು. ಗುರು ಹೇಳಿ­ಕೊ­ಟ್ಟದ್ದು ಮರೆತು ಹೋದೀತು ಎಂದು ಅಷ್ಟೊ­ತ್ತಿ­ನಲ್ಲೂ ವೈಲಿನ್‌ ಅಭ್ಯಾಸ ಮಾಡಿ ಮಲ­ಗು­ತ್ತಿ­ದ್ದರು.ಸತ್ಯಂ ಶ್ರೀಕಂ­ಠೇ­ಶ್ವರ್‌ ಅವರ ನೆಚ್ಚಿನ ಶಿಷ್ಯ­ರಾ­ಗಿ­ದ್ದರು. ಕೆಲವು ಸಲ ಅವರ ಮನೆ­ಯಲ್ಲೇ ಪಾಠದ ಜೊತೆಗೆ ಊಟವೂ ಆಗು­ತ್ತಿತ್ತು. ತಿಂಗ­ಳಿ­ಗೊಮ್ಮೆ ಫೀ ಕಟ್ಟುವ ಪರಿ­ಪಾಠ ಇರ­ಲಿಲ್ಲ. ವರ್ಷದ ಫೀಯನ್ನು ಒಮ್ಮೆ ಕಟ್ಟಿದ ಉದಾ­ಹ­ರ­ಣೆ­ಗಳೂ ಇವೆ! ಸತ್ಯಂ ಅವ­ರಿಗೆ ಪೌರೋ­ಹಿ­ತ್ಯವೂ ಗೊತ್ತಿತ್ತು. ಅವ­ಶ್ಯ­ವಿ­ರುವ ಹಣ­ವನ್ನು ಅವರೇ ಸಂಪಾ­ದಿ­ಸು­ತ್ತಿ­ದ್ದರು. ಮದು­ವೆ­ಗ­ಳಿಗೆ ಪೌರೋ­ಹಿತ್ಯ ವಹಿ­ಸು­ತ್ತಿ­ದ್ದರು. ಚಿಕ್ಕ­ವ­ಯ­ಸ್ಸಿ­ನ­ಲ್ಲಿಯೇ ನೂರಾರು ಮದುವೆ ಮಾಡಿ­ಸಿದ ಕೀರ್ತಿ ಅವ­ರದು.ಮೃದಂ­ಗ­ವನ್ನೂ ಕಲಿ­ತರು: ಕಾಲೇಜು ಸಾಗು­ತ್ತಿತ್ತು. ವೈಲಿನ್‌ ಸಾಧನೆ ನಡೆ­ಯು­ತಿತ್ತು. ಇಷ್ಟರ ನಡುವೆ ಮಿಕ್ಕಿದ ಸಮ­ಯ­ವನ್ನು ವ್ಯರ್ಥ ಮಾಡ­ಲಿಲ್ಲ. ವಿದ್ವಾನ್‌ ಎಂ.ಎಲ್‌. ವೀರ­ಭ­ದ್ರಯ್ಯ ಆವರ ಬಳಿ ಮೃದಂ­ಗಕ್ಕೆ ಸೇರಿ­ದರು. ತಂತಿ­ವಾದ್ಯ ವೈಲಿನ್‌ ಹಾಗೂ ತಾಳ ವಾದ್ಯ ಮೃದಂಗ ಎರ­ಡನ್ನೂ ಶ್ರದ್ಧೆ­ಯಿಂದ ಅಭ್ಯಾಸ ಮಾಡಿ­ದರು. ಇವು­ಗಳ ಜೊತೆಗೆ ಹಾರ್ಮೋ­ನಿಯಂ ಜ್ಞಾನವೂ ಇದೆ.1992ರಲ್ಲಿ ಖ್ಯಾತ ವೈಲಿನ್‌ ವಾದಕ ಕರ್ನಾ­ಟಕ ಕಲಾಶ್ರೀ ವಿದ್ವಾನ್‌ ಆರ್‌. ಆರ್‌. ಕೇಶವ ಮೂರ್ತಿ­ಗಳ ಶಿಷ್ಯತ್ವ. ಅಷ್ಟೊ­ತ್ತಿ­ಗಾ­ಗಲೇ ಕಚೇರಿ ನೀಡಲು ಆರಂ­ಭಿ­ಸಿ­ದ್ದರು. ಆಮೇಲೆ ವಿದ್ವಾನ್‌ ಮೈಸೂರು ಎಂ. ನಾಗ­ರಾಜ್‌, ಚಿತ್ರ­ವೀಣಾ ಎನ್‌. ರವಿ­ಕಿ­ರಣ್‌ ಅವ­ರಿಂ­ದಲೂ ಅನಂತ ಸತ್ಯಂ ಸಂಗೀತ ಕಲಿ­ತಿ­ದ್ದಾರೆ.ಸತ್ಯಂ ಅವರ ಪ್ರಥಮ ಕಚೇರಿ ಮದುವೆ ಮನೆ. ಹಲ­ವರು ಮೆಚ್ಚಿ ಬೆನ್ನು­ತ­ಟ್ಟಿ­ದರು. 20ನೇ ವಯ­ಸ್ಸಿ­ನಲ್ಲಿ ಕಚೇರಿ ಆರಂ­ಭಿ­ಸಿದ ಅನಂತ ಸತ್ಯಂ ಹಿಂದೆ ತಿರುಗಿ ನೋಡ­ಲಿಲ್ಲ. ಸೋಲೋ ಹಾಗೂ ಪಕ್ಕ­ವಾ­ದ್ಯ­ಗ­ಳೆ­ರ­ಡ­ರಲ್ಲೂ ರಾಷ್ಟ್ರಾ­ದ್ಯಂತ ಕಛೇರಿ ನೀಡಿ­ದ್ದಾರೆ. ಸಾಗ­ರ­ದಾ­ಚೆಗೂ ಸತ್ಯಂ ಅವರ ಪ್ರತಿಭೆ ಸಾಗಿದೆ. ಸ್ಟಿಟ್ಜ­ರ್ಲೆಂಡ್‌ ಪ್ರವಾಸ ಮಾಡಿ ಅಲ್ಲಿಯ ಹಲವು ನಗ­ರ­ಗ­ಳಲ್ಲಿ ಎರಡು ತಿಂಗಳ ಕಾಲ ತಮ್ಮ ಸಂಗೀತ ಪ್ರತಿಭೆ ತೋರಿ­ದ್ದಾರೆ.ಮದುವೆ ಮನೆ­ಯಿಂದ ಆರಂ­ಭ­ವಾದ ಸತ್ಯಂ ಅವರ ಕಚೇ­ರಿ­ಗಳು ಇಲ್ಲಿ­ಯ­ವ­ರೆಗೆ ಸಾವಿ­ರ­ಗಳ ಗಡಿ ಮುಟ್ಟಿವೆ. ಆರ್‌.ಕೆ. ಶ್ರೀಕಂ­ಠನ್‌, ವಿದ್ಯಾ­ಭೂ­ಷಣ ಸೇರಿ­ದಂತೆ ಹಲವು ಮಂದಿ ವಿದ್ವಾಂ­ಸ­ರಿಗೆ ವೈಲಿನ್‌ ಸಾಥ್‌ ನೀಡಿ­ದ್ದಾರೆ. ಸೋಲೋ ವೈಲಿನ್‌ ಕಚೇ­ರಿ­ಗ­ಳಲ್ಲೂ ಅನಂತ ಸತ್ಯಂ ಹೆಸರು ಗಳಿ­ಸಿ­ದ್ದಾರೆ.ರಾಷ್ಟ್ರೀಯ ಪ್ರಶಸ್ತಿ: ಅನಂತ ಸತ್ಯಂ ಅವರು ಶಿಲ್ಪ­ಕಲೆ ಹಾಗೂ ಸಂಗೀತ ಎರ­ಡ­ರಲ್ಲೂ ಅಪಾರ ಮೆಚ್ಚುಗೆ ಗಳಿ­ಸಿ­ದ್ದಾರೆ. ಅವ­ರನ್ನು ಹಲವು ಗೌರವ ಪ್ರಶ­ಸ್ತಿ­ಗಳು ಅರಸಿ ಬಂದಿವೆ. 1992ರಲ್ಲಿ ಕರ್ನಾ­ಟಕ ಚಿತ್ರ­ಕಲಾ ಪರಿ­ಷತ್‌ ಆಯೋ­ಜಿ­ಸಿದ್ದ ಅಖಿಲ ಭಾರತ ಲಲಿತ ಕಲೆ ಸ್ಪರ್ಧೆ­ಯಲ್ಲಿ ರಾಷ್ಟ್ರೀಯ ಪ್ರಶ­ಸ್ತಿ­ಗ­ಳಿ­ಸಿ­ದ್ದಾರೆ. 1993ರಲ್ಲಿ ಚಿತ್ರ­ಕಲಾ ಪರಿ­ಷ­ತ್‌­ನಲ್ಲಿ `ಶ್ರೇ­ಷ್ಠ­ವಿ­ದ್ಯಾರ್ಥಿ' ಪ್ರಶ­ಸ್ತಿ­ಯನ್ನು ತಮ್ಮ­ದಾ­ಗಿ­ಸಿ­ಕೊಂ­ಡಿ­ದ್ದಾರೆ. 1991ರಲ್ಲಿ ವೈಲಿನ್‌ ಜೂನಿ­ಯರ್‌ ಪರಿ­ಕ್ಷೆ­ಯಲ್ಲಿ ದ್ವಿತೀಯ ರ್ಯಾಂಕ್‌ ಗಳಿ­ಸಿ­ದ್ದಾರೆ. 1997ರಲ್ಲಿ ಸುವರ್ಣ ಸ್ವಾತಂತ್ರ್ಯ ಸಮಿತಿ ಪ್ರಶಸ್ತಿ, ಲಲಿತ ಕಲಾ ಅಕಾ­ಡೆಮಿ ಸ್ಕಾಲ­ರ್‌­ಶಿಷ್‌, ಇತ್ತೀ­ಚೆಗೆ `ಚಾ­ಣಕ್ಯ ರತ್ನ' ಪ್ರಶಸ್ತಿ ಮುಂತಾದ ಗೌರ­ವ­ಗ­ಳಿಗೆ ಭಾಜ­ನ­ರಾ­ಗಿ­ದ್ದಾರೆ. 2000 ತನಕ ಚಿತ್ರ­ಕಲಾ ಪರಿ­ಷ­ತ್‌­ನಲ್ಲೇ ಉಪ­ನ್ಯಾ­ಸ­ಕ­ರಾ­ಗಿದ್ದ ಅವರು ವಿದ್ಯಾ­ರ್ಥಿ­ಗಳ ನೆಚ್ಚಿನ ಶಿಕ್ಷ­ಕ­ರಾ­ಗಿ­ದ್ದರು. ಯಾವುದೋ ಒಂದು ಸಂಸ್ಥೆ­ಯಲ್ಲಿ ಇರು­ವುದು ಪ್ರಾಯೋ­ಗಿಕ ಬೆಳ­ವ­ಣಿಗೆ ಕಷ್ಟ ಎನಿ­ಸಿತು. ಪರಿ­ಷತ್‌ ಕೆಲ­ಸಕ್ಕೆ ಗುಡ್‌ ಬೈ ಹೇಳಿ­ದರು. ಈಗ ಸ್ವತಂತ್ರ ಶಿಲ್ಪಿ ಹಾಗೂ ಸಂಗೀತ ಗುರು. ಹಲವು ಕಡೆ ಶಿಲ್ಪ­ಕಲಾ ಕಾರ್ಯ­ಗಾ­ರ­ಗ­ಳಲ್ಲಿ ಪಾಲ್ಗೊಂಡು ಚಿತ್ರ­ಕಲೆ ಬೋಧಿ­ಸು­ತ್ತಿ­ದ್ದಾರೆ. ಹಲವು ಶಿಲ್ಪ­ಕಲಾ ಕಾರ್ಯಾ­ಗಾ­ರ­ಗ­ಳಲ್ಲಿ ಭಾಗ­ವ­ಹಿ­ಸಿ­ದ್ದಾರೆ.ಇವು­ಗಳ ಜೊತೆಗೆ ಅನಂತ ಸತ್ಯ ಉತ್ತಮ ಕ್ರಿಡಾ­ಪಟು ಕೂಡ. ಕ್ರಿಕೆಟ್‌ ಅಂದರೆ ಪ್ರಾಣ. ಕಾಲೇಜು ದಿನ­ಗ­ಳಲ್ಲಿ ರಣಜಿ ಪಂದ್ಯ­ಗ­ಳಲ್ಲಿ ಆಟ­ವಾ­ಡಿದ ಅನು­ಭ­ವ­ವಿದೆ. ಅನಂತ ಸತ್ಯಂ ನಮ್ಮ ನಾಡಿನ ಅಪ­ರೂ­ಪದ ಕಲಾ­ವಿ­ದರು. ಒಬ್ಬ­ವ್ಯಕ್ತಿ ಲಲಿತ ಕಲೆ­ಗಳ ಒಂದು ವಿದ್ಯೆ­ಯನ್ನು ಸಾಧಿಸಿ ಧಕ್ಕಿ­ಸಿ­ಕೊ­ಳ್ಳಲು ಒಂದು ಜನ್ಮವೇ ಬೇಕು. ಆದರೆ ಅವ­ರಿಗೆ ಶಿಲ್ಪ­ಕಲೆ, ವೈಲಿನ್‌, ಮೃದಂಗ, ಹಾರ್ಮೋ­ನಿಯಂ ಜ್ಞಾನ ಒಲಿದು ಬಂದಿವೆ. ಇವ­ರನ್ನು ಅಪ­ರೂಪ ಎನ್ನಲು ಇಷ್ಟೇ ಸಾಕು. ಇಂಥ ಅನರ್ಘ್ಯ ಪ್ರತಿ­ಭೆ­ಯನ್ನು ಗುರು­ತಿ­ಸಿ­ದ­ವರು ಬಹಳ ಕಡಿಮೆ ಮಂದಿ. ಅದಾ­ವು­ದರ ಬಗ್ಗೆಯೂ ತಲೆ ಕೆಡಿ­ಸಿ­ಕೊ­ಳ್ಳದ ಅನಂತ ಸತ್ಯಂ ಸೇವೆ­ಯನ್ನೇ ಸತ್ಯ ಮತ್ತು ನಿರಂ­ತರ ಎಂದು ನಂಬಿ­ದ್ದಾರೆ.

No comments:

Post a Comment