
ಲಕ್ಷ್ಮಯ್ಯರೆಂಬೋ ರಂಗಭೂಮಿ ದಾಖಲೆ.
ಮಾರ್ಚ್ 3, 1962ರಂದು ಅವರು ಮುಖಕ್ಕೆ ಹಚ್ಚಿದ ಬಣ್ಣ ಇನ್ನೂ ಹಸಿರಾಗಿದೆ. ನಾಲ್ಕುವರೆ ದಶಕಗಳ ಕಾಲದ ರಂಗಭೂಮಿ ಆರಾಧನೆ ಅವರಿಗೆ ಎಂದಿಗೂ ಬೇಸರ ತಂದಿಲ್ಲ. ಅವರು ರಂಗದ ಮೇಲೆ ಬಂದರೆ ಪ್ರೇಕ್ಷಕರ ಎದೆ ಬಡಿತ ಇಮ್ಮಡಿಯಾಗುತ್ತದೆ. ಹಾರ್ಮೋನಿಯಂ ಪೆಟ್ಟಿಯ ಮನೆ ಹಿಡಿದು ಕಂದಪದ ಹಾಡಿದರೆಂದರೆ- ವನ್ಸ್ಮೋರ್... ಮೊಳಗುತ್ತದೆ.
ಕುರುಕ್ಷೇತ್ರದ ದುಶ್ಯಾಸನ ಅವರಿಗೆ ಬಹಳ ಇಷ್ಟ. ಅವನ ಸ್ವರೂಪನ್ನು ತನ್ನೊಳಗೆ ತಂದುಕೊಂಡಾಗ ರಂಗದ ಮೇಲೆ ವಿದ್ಯುತ್ ಸಂಚಾರ. ಬಲರಾಮ, ಭೀಷ್ಮ, ಬ್ರಹ್ಮ, ಯಮರಾಜರನ್ನೂ ಅವರು ತಂಬಿಕೊಂಡಿದ್ದಾರೆ. ಅಭಿನಯಿಸಿ ಅಭಿನಯಿಸಿ ಅದು ಜೀವನದ ಒಂದು ಭಾಗವಾಗಿಯೇ ಹೋಗಿದೆ. ಅವರು ನಮ್ಮೊಳಗಿನ ಅಪರೂಪದ ಕಲಾವಿದ.
ಅವರು ಕೆ. ಲಕ್ಷ್ಮಯ್ಯ. ಪೌರಾಣಿಕ ನಾಟಕಗಳನ್ನು ಆಸ್ವಾದಿಸುವ ರಸಿಕರಿಗೆ ಈ ಹೆಸರು ಬಹು ಪರಿಚಿತ. ತಮ್ಮ ಇಪ್ಪತ್ತನೇ ವಯಸ್ಸಿನಿಂದ ಅಭಿನಯಿಸಲು ಆರಂಭಿಸಿದ ಲಕ್ಷ್ಮಯ್ಯ ಇಲ್ಲಿಯವರೆಗೆ ಸಾವಿರಾರು ಪೌರಾಣಿಕ, ಐತಿಹಾಸಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಚಲನಚಿತ್ರ ಸೇರಿದಂತೆ ಹಲವು ದೂರದರ್ಶನ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಶಾಲೆ ಕಲಿತದ್ದು ಬರೀ ನಾಲ್ಕನೇ ತರಗತಿ ಆದರೂ ರಂಗಭೂಮಿಯಲ್ಲಿ ಅವರಿಗಾದ ಅನುಭವದ ಅಳತೆ ಆಸಾಧ್ಯ.
ರಂಗಭೂಮಿ ಬಗ್ಗೆ ಲಕ್ಷ್ಮಯ್ಯ ಅವರಿಗೆ ತಮ್ಮದೇ ಆದ ಕನವರಿಕೆಗಳಿವೆ. ಬದಲಾದ ರಂಗಭೂಮಿ ಹಾದಿಯನ್ನು ತಮ್ಮದೇ ಧಾಟಿಯಲ್ಲಿ ಹೇಳುತ್ತಾರೆ. ಇವತ್ತು ಹಣವಿಲ್ಲದೆ ನಾಟಕ ಮಾಡಲು ಸಾಧ್ಯವಿಲ್ಲ. ನಾಟಕವಾಡಲು ಹಣವೇ ಮುಖ್ಯವಾಗಿದೆ. ಅವತ್ತು ನಾಟಕಕ್ಕೆ ಹಣ ಮುಖ್ಯವಾಗಿರಲಿಲ್ಲ. ನಟ ಮುಖ್ಯವಾಗಿದ್ದ. ಅಭಿನಯ ಮುಖ್ಯವಾಗಿತ್ತು. ಈಗ ಆ ಕಾಲ ಉಳಿದಿಲ್ಲ. ನಾಟಕ ಆಡಲು ಮಾರುಕಟ್ಟೆ ಬೇಕಾಗಿದೆ... ಎನ್ನುವಾಗ ಲಕ್ಷ್ಮಯ್ಯ ಯಾವುದೋ ಪಾತ್ರದಂತೆ ಕಾಣುತ್ತಾರೆ!
ಲಕ್ಷ್ಮಯ್ಯ ಬೆಂಗಳೂರಿನ ನಾಗವಾರದವರು. ಕ್ಯಾತಪ್ಪ ಮತ್ತು ಚನ್ನಮ್ಮ ದಂಪತಿಗಳ ಸುಪುತ್ರರು. ರಂಗಭೂಮಿ ಮಾಡುತ್ತಲೇ ಕೃಷಿ ವಿಶ್ವವಿದ್ಯಾಲಯದಲ್ಲಿ ನೌಕರಿಗೆ ಸೇರಿದರು. ಕೃಷಿ ವಿವಿಯ ಎಲ್ಲಾ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಲಕ್ಷ್ಮಯ್ಯ ಅವರು ಭಾಗವಹಿಸಿದ್ದಾರೆ. ಲಕ್ಷ್ಮಯ್ಯ ಅವರ ರಂಗ ಪ್ರತಿಭೆಗೆ ಕೃಷಿ ವಿವಿ ಸೂಕ್ತ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸಿದೆ. ಅವರೀಗ ನೌಕರಿಯಿಂದ ನಿವೃತ್ತರಾಗಿದ್ದಾರೆ.
ಯಕ್ಷಗಾನಕ್ಕೂ ಹೆಜ್ಜೆ: ಲಕ್ಷ್ಮಯ್ಯ ಅವರು ಯಕ್ಷಗಾನಗಳಲ್ಲೂ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದಾರೆ. ಹಲವು ಮೂಡಲಪಾಯ ಪ್ರಸಂಗಗಳಲ್ಲಿ ಅಭಿನಯಿಸಿದ್ದಾರೆ. ಆಂಜನೇಯನಾಗಿ ಅವರು ಹಾಕಿದ ಪಾತ್ರ ಬಹಳ ಮನ್ನಣೆ ಪಡೆದಿದೆ. ಸಾಮಾನ್ಯವಾಗಿ ರಂಗಕಲಾವಿದರು ಯಕ್ಷಗಾನಗಳಲ್ಲಿ ಅಭಿನಯಿಸುವುದು ಬಹಳ ಕಮ್ಮಿ. ಯಕ್ಷಗಾನಕ್ಕೆ ಮುಖ್ಯವಾಗಿ ತರಬೇತಿ ಬೇಕು. ಆದರೆ ಲಕ್ಷ್ಮಯ್ಯ ಅವರಿಗೆ ಯಾವ ತರಬೇತಿಯೂ ಇಲ್ಲ. ಅಭಿನಯದ ಮೇಲೆ ಅವಿರಿಗಿರುವ ಪ್ರೀತಿಯೇ ತರಬೇತಿ.
ಹೆಜ್ಜೆ ಗುರುತು: ಲಕ್ಷ್ಮಯ್ಯ ಅವರನ್ನು ಅಪರೂಪ ಎನ್ನಲು ಹಲವು ಕಾರಣಗಳಿವೆ. ರಂಗಭೂಮಿಯಲ್ಲಿ ಇಟ್ಟ ಪ್ರತಿ ಹೆಜ್ಜೆಯನ್ನು ಅವರು ದಾಖಲು ಮಾಡುತ್ತಾ ಬಂದಿದ್ದಾರೆ. ನಲವತ್ತ್ಯೆದು ವರ್ಷಗಳಲ್ಲಿ ಅಭಿನಯ ಮಾಡಿದ ನಾಟಕಗಳ ಹೆಸರು ಪಾತ್ರ, ಪಡೆದ ಸಂಭಾವನೆ, ಖರ್ಚುವೆಚ್ಚಗಳನ್ನೊಳಗೊಂಡ ವಿವರಗಳನ್ನು ಬರೆದಿಡುವ ಲಕ್ಷ್ಮಯ್ಯ ಅವರ ಅಭ್ಯಾಸಕ್ಕೆ ನಾವು ಮೂಗಿನ ಮೇಲೆ ಬೆರಳಿಡಲೇಬೇಕು!
ಯಾಕೀ ಅಭ್ಯಾಸ? ಎಂಬ ಪ್ರಶ್ನೆಗೆ ಅವರ ಕೊಡುವ ಉತ್ತರ: ಸಮಾಧಾನ. ಮನಸ್ಸಿನ ಸಮಾಧಾನಕ್ಕಾಗಿ ಈ ದಾಖಲಾತಿ! ಎನ್ನುತ್ತಾ ಮೇಲೆ ನೋಡುತ್ತಾರೆ.
1962ನೇ ಇಸ್ವಿಯಿಂದ 2009 ಆಗಸ್ಟ್ ತಿಂಗಳವರೆಗೂ ಅಭಿನಯಿಸಿದ ಎಲ್ಲಾ ನಾಟಕಗಳ ಮಾಹಿತಿ ಲಕ್ಷ್ಮಯ್ಯ ಅವರ ಬಳಿ ಇದೆ.
ನಾಟಕ ಸಂಗ್ರಹ: ಲಕ್ಷ್ಮಯ್ಯ ಅವರನ್ನು ಅಪರೂಪ ಎನ್ನಲು ಇನ್ನೊಂದು ಮುಖ್ಯವಾದ ಕಾರಣವಿದೆ. ಅವರ ಬಳಿ ಕೈ ಬರಹದ ಹಲವು ಪೌರಾಣಿಕ, ಐತಿಹಾಸಿಕ ನಾಟಕ ಕೃತಿಗಳಿವೆ. ಬಾಯಿಂದ ಬಾಯಿಗೆ ಕಲಿಸುವ ಹಾಡು ಸಂಭಾಷಣೆಗಳನ್ನು ಲಕ್ಷ್ಮಯ್ಯ ಅವರು ತಮ್ಮ ಪತ್ನಿ ಸಹಕಾರದೊಂದಿಗೆ ಕೈ ಬರಹಕ್ಕಿಳಿಸಿದ್ದಾರೆ. ಅವುಗಳನ್ನು ಹಲವು ವರ್ಷಗಳಿಂದ ಕಾಪಾಡಿಕೊಂಡು ಬರುತ್ತಿದ್ದಾರೆ.
ಇನ್ನೊಂದು ವಿಶೇಷವೆಂದರೆ ಆ ಎಲ್ಲಾ ಕೃತಿಗಳನ್ನು ಯಾರಾದರೂ ಇಷ್ಟಪಟ್ಟು ನಾಟಕ ಅಭ್ಯಾಸಕ್ಕೆ ಅಥವಾ ಓದಲು ಕೇಳಿದರೆ ಧಾರಾಳವಾಗಿ ಕೊಡುತ್ತಾರೆ. ವಾಪಸ್ ಕೊಡುವವರಿಗೆ ಮಾತ್ರ!
ಲೆಕ್ಕವಿಲ್ಲದ ಬಿರುದು ಗೌರವ: ಲಕ್ಷ್ಮಯ್ಯ ಅವರನ್ನು ಅರಸಿ ಬಂದಿರುವ ಗೌರವ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ರಾಜ್ಯದೆಲ್ಲೆಡೆ ರಂಗ ಪ್ರವಾಸ ಮಾಡಿರುವ ಅವರನ್ನು ನಾಡಿನ ಹಲವು ಸಂಘ ಸಂಸ್ಥೆಗಳು ಗೌರವಿಸಿವೆ. ಕಲಾರತ್ನ, ನಾಟಕ ರತ್ನ, ಕಲಾಜ್ಯೋತಿ ಮುಂತಾದ ಹತ್ತಾರು ಬಿರುದುಗಳಿಗೆ ಪಾತ್ರರಾಗಿದ್ದಾರೆ. ನಾಟಕ ಸೇವಾ ಪ್ರಶಸ್ತಿ, ವಿಶ್ವಜ್ಯೋತಿ ಪ್ರಶಸ್ತಿ, ಡಾ. ರಾಜ್ಕುಮಾರ್ ಸುವರ್ಣ ರತ್ನ ಪ್ರಶಸ್ತಿ, ಕರ್ನಾಟಕ ದೃವತಾರೆ ಪ್ರಶಸ್ತಿ ಲಕ್ಷ್ಮಯ್ಯ ಅವರ ಮುಡಿಗೇರಿವೆ.
70 ವರ್ಷ ವಯಸ್ಸಿನ ಹೊಸ್ತಿಲಲ್ಲಿರುವ ಲಕ್ಷ್ಮಯ್ಯ ಅವರು ಈಗಲೂ ಪಾದರಸ. ದೇಹ ಮಾಗಿದ್ದರೂ ಅವರ ಉತ್ಸಾಹಕ್ಕೆ ವಯಸ್ಸಾಗಿಲ್ಲ. ಮೊನ್ನೆ ತಾನೆ ಸುಂದರಕಾಂಡ ರಾಮಾಯಣದಲ್ಲಿ ಪಾತ್ರ ಮಾಡಿದ್ದಾರೆ. ಅವರ ಎದುರು ಕೂತರೆ ದಶಕಗಳ ರಂಗ ಇತಿಹಾಸ ಎಳೆಯಾಗಿ ಬಿಚ್ಚಿಕೊಳ್ಳುತ್ತದೆ. ಇಂಥ ಅನರ್ಘ್ಯ ಪ್ರತಿಭೆ ನಮ್ಮ ಘನ ಸರ್ಕಾರದ ಕಣ್ಣಿಗೆ ಬೀಳದೆ ಇರುವುದು ಕನ್ನಡಿಗರ ದುರಾದೃಷ್ಟ! ಮೊಬೈಲ್: 9844174899 ಸಂಖ್ಯೆಗಳಿಗೆ ಕರೆಮಾಡಿ ಈ ಕಲಾವಿದನಿಗೆ ಅಭಿನಂದಿಸಿ. ಕೈ ಬರಹದ ಪೌರಾಣಿಕ, ಐತಿಹಾಸಿಕ ನಾಟಕ ಕೃತಿ ಬೇಕಿದ್ದರೆ ಕರೆ ಮಾಡಿ. ನಾಟಕ ಮಾಡಿ. ಆದರೆ ದಯವಿಟ್ಟು ವಾಪಸ್ ಕೊಡಿ!
ಮಾರ್ಚ್ 3, 1962ರಂದು ಅವರು ಮುಖಕ್ಕೆ ಹಚ್ಚಿದ ಬಣ್ಣ ಇನ್ನೂ ಹಸಿರಾಗಿದೆ. ನಾಲ್ಕುವರೆ ದಶಕಗಳ ಕಾಲದ ರಂಗಭೂಮಿ ಆರಾಧನೆ ಅವರಿಗೆ ಎಂದಿಗೂ ಬೇಸರ ತಂದಿಲ್ಲ. ಅವರು ರಂಗದ ಮೇಲೆ ಬಂದರೆ ಪ್ರೇಕ್ಷಕರ ಎದೆ ಬಡಿತ ಇಮ್ಮಡಿಯಾಗುತ್ತದೆ. ಹಾರ್ಮೋನಿಯಂ ಪೆಟ್ಟಿಯ ಮನೆ ಹಿಡಿದು ಕಂದಪದ ಹಾಡಿದರೆಂದರೆ- ವನ್ಸ್ಮೋರ್... ಮೊಳಗುತ್ತದೆ.
ಕುರುಕ್ಷೇತ್ರದ ದುಶ್ಯಾಸನ ಅವರಿಗೆ ಬಹಳ ಇಷ್ಟ. ಅವನ ಸ್ವರೂಪನ್ನು ತನ್ನೊಳಗೆ ತಂದುಕೊಂಡಾಗ ರಂಗದ ಮೇಲೆ ವಿದ್ಯುತ್ ಸಂಚಾರ. ಬಲರಾಮ, ಭೀಷ್ಮ, ಬ್ರಹ್ಮ, ಯಮರಾಜರನ್ನೂ ಅವರು ತಂಬಿಕೊಂಡಿದ್ದಾರೆ. ಅಭಿನಯಿಸಿ ಅಭಿನಯಿಸಿ ಅದು ಜೀವನದ ಒಂದು ಭಾಗವಾಗಿಯೇ ಹೋಗಿದೆ. ಅವರು ನಮ್ಮೊಳಗಿನ ಅಪರೂಪದ ಕಲಾವಿದ.
ಅವರು ಕೆ. ಲಕ್ಷ್ಮಯ್ಯ. ಪೌರಾಣಿಕ ನಾಟಕಗಳನ್ನು ಆಸ್ವಾದಿಸುವ ರಸಿಕರಿಗೆ ಈ ಹೆಸರು ಬಹು ಪರಿಚಿತ. ತಮ್ಮ ಇಪ್ಪತ್ತನೇ ವಯಸ್ಸಿನಿಂದ ಅಭಿನಯಿಸಲು ಆರಂಭಿಸಿದ ಲಕ್ಷ್ಮಯ್ಯ ಇಲ್ಲಿಯವರೆಗೆ ಸಾವಿರಾರು ಪೌರಾಣಿಕ, ಐತಿಹಾಸಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಚಲನಚಿತ್ರ ಸೇರಿದಂತೆ ಹಲವು ದೂರದರ್ಶನ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಶಾಲೆ ಕಲಿತದ್ದು ಬರೀ ನಾಲ್ಕನೇ ತರಗತಿ ಆದರೂ ರಂಗಭೂಮಿಯಲ್ಲಿ ಅವರಿಗಾದ ಅನುಭವದ ಅಳತೆ ಆಸಾಧ್ಯ.
ರಂಗಭೂಮಿ ಬಗ್ಗೆ ಲಕ್ಷ್ಮಯ್ಯ ಅವರಿಗೆ ತಮ್ಮದೇ ಆದ ಕನವರಿಕೆಗಳಿವೆ. ಬದಲಾದ ರಂಗಭೂಮಿ ಹಾದಿಯನ್ನು ತಮ್ಮದೇ ಧಾಟಿಯಲ್ಲಿ ಹೇಳುತ್ತಾರೆ. ಇವತ್ತು ಹಣವಿಲ್ಲದೆ ನಾಟಕ ಮಾಡಲು ಸಾಧ್ಯವಿಲ್ಲ. ನಾಟಕವಾಡಲು ಹಣವೇ ಮುಖ್ಯವಾಗಿದೆ. ಅವತ್ತು ನಾಟಕಕ್ಕೆ ಹಣ ಮುಖ್ಯವಾಗಿರಲಿಲ್ಲ. ನಟ ಮುಖ್ಯವಾಗಿದ್ದ. ಅಭಿನಯ ಮುಖ್ಯವಾಗಿತ್ತು. ಈಗ ಆ ಕಾಲ ಉಳಿದಿಲ್ಲ. ನಾಟಕ ಆಡಲು ಮಾರುಕಟ್ಟೆ ಬೇಕಾಗಿದೆ... ಎನ್ನುವಾಗ ಲಕ್ಷ್ಮಯ್ಯ ಯಾವುದೋ ಪಾತ್ರದಂತೆ ಕಾಣುತ್ತಾರೆ!
ಲಕ್ಷ್ಮಯ್ಯ ಬೆಂಗಳೂರಿನ ನಾಗವಾರದವರು. ಕ್ಯಾತಪ್ಪ ಮತ್ತು ಚನ್ನಮ್ಮ ದಂಪತಿಗಳ ಸುಪುತ್ರರು. ರಂಗಭೂಮಿ ಮಾಡುತ್ತಲೇ ಕೃಷಿ ವಿಶ್ವವಿದ್ಯಾಲಯದಲ್ಲಿ ನೌಕರಿಗೆ ಸೇರಿದರು. ಕೃಷಿ ವಿವಿಯ ಎಲ್ಲಾ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಲಕ್ಷ್ಮಯ್ಯ ಅವರು ಭಾಗವಹಿಸಿದ್ದಾರೆ. ಲಕ್ಷ್ಮಯ್ಯ ಅವರ ರಂಗ ಪ್ರತಿಭೆಗೆ ಕೃಷಿ ವಿವಿ ಸೂಕ್ತ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸಿದೆ. ಅವರೀಗ ನೌಕರಿಯಿಂದ ನಿವೃತ್ತರಾಗಿದ್ದಾರೆ.
ಯಕ್ಷಗಾನಕ್ಕೂ ಹೆಜ್ಜೆ: ಲಕ್ಷ್ಮಯ್ಯ ಅವರು ಯಕ್ಷಗಾನಗಳಲ್ಲೂ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದಾರೆ. ಹಲವು ಮೂಡಲಪಾಯ ಪ್ರಸಂಗಗಳಲ್ಲಿ ಅಭಿನಯಿಸಿದ್ದಾರೆ. ಆಂಜನೇಯನಾಗಿ ಅವರು ಹಾಕಿದ ಪಾತ್ರ ಬಹಳ ಮನ್ನಣೆ ಪಡೆದಿದೆ. ಸಾಮಾನ್ಯವಾಗಿ ರಂಗಕಲಾವಿದರು ಯಕ್ಷಗಾನಗಳಲ್ಲಿ ಅಭಿನಯಿಸುವುದು ಬಹಳ ಕಮ್ಮಿ. ಯಕ್ಷಗಾನಕ್ಕೆ ಮುಖ್ಯವಾಗಿ ತರಬೇತಿ ಬೇಕು. ಆದರೆ ಲಕ್ಷ್ಮಯ್ಯ ಅವರಿಗೆ ಯಾವ ತರಬೇತಿಯೂ ಇಲ್ಲ. ಅಭಿನಯದ ಮೇಲೆ ಅವಿರಿಗಿರುವ ಪ್ರೀತಿಯೇ ತರಬೇತಿ.
ಹೆಜ್ಜೆ ಗುರುತು: ಲಕ್ಷ್ಮಯ್ಯ ಅವರನ್ನು ಅಪರೂಪ ಎನ್ನಲು ಹಲವು ಕಾರಣಗಳಿವೆ. ರಂಗಭೂಮಿಯಲ್ಲಿ ಇಟ್ಟ ಪ್ರತಿ ಹೆಜ್ಜೆಯನ್ನು ಅವರು ದಾಖಲು ಮಾಡುತ್ತಾ ಬಂದಿದ್ದಾರೆ. ನಲವತ್ತ್ಯೆದು ವರ್ಷಗಳಲ್ಲಿ ಅಭಿನಯ ಮಾಡಿದ ನಾಟಕಗಳ ಹೆಸರು ಪಾತ್ರ, ಪಡೆದ ಸಂಭಾವನೆ, ಖರ್ಚುವೆಚ್ಚಗಳನ್ನೊಳಗೊಂಡ ವಿವರಗಳನ್ನು ಬರೆದಿಡುವ ಲಕ್ಷ್ಮಯ್ಯ ಅವರ ಅಭ್ಯಾಸಕ್ಕೆ ನಾವು ಮೂಗಿನ ಮೇಲೆ ಬೆರಳಿಡಲೇಬೇಕು!
ಯಾಕೀ ಅಭ್ಯಾಸ? ಎಂಬ ಪ್ರಶ್ನೆಗೆ ಅವರ ಕೊಡುವ ಉತ್ತರ: ಸಮಾಧಾನ. ಮನಸ್ಸಿನ ಸಮಾಧಾನಕ್ಕಾಗಿ ಈ ದಾಖಲಾತಿ! ಎನ್ನುತ್ತಾ ಮೇಲೆ ನೋಡುತ್ತಾರೆ.
1962ನೇ ಇಸ್ವಿಯಿಂದ 2009 ಆಗಸ್ಟ್ ತಿಂಗಳವರೆಗೂ ಅಭಿನಯಿಸಿದ ಎಲ್ಲಾ ನಾಟಕಗಳ ಮಾಹಿತಿ ಲಕ್ಷ್ಮಯ್ಯ ಅವರ ಬಳಿ ಇದೆ.
ನಾಟಕ ಸಂಗ್ರಹ: ಲಕ್ಷ್ಮಯ್ಯ ಅವರನ್ನು ಅಪರೂಪ ಎನ್ನಲು ಇನ್ನೊಂದು ಮುಖ್ಯವಾದ ಕಾರಣವಿದೆ. ಅವರ ಬಳಿ ಕೈ ಬರಹದ ಹಲವು ಪೌರಾಣಿಕ, ಐತಿಹಾಸಿಕ ನಾಟಕ ಕೃತಿಗಳಿವೆ. ಬಾಯಿಂದ ಬಾಯಿಗೆ ಕಲಿಸುವ ಹಾಡು ಸಂಭಾಷಣೆಗಳನ್ನು ಲಕ್ಷ್ಮಯ್ಯ ಅವರು ತಮ್ಮ ಪತ್ನಿ ಸಹಕಾರದೊಂದಿಗೆ ಕೈ ಬರಹಕ್ಕಿಳಿಸಿದ್ದಾರೆ. ಅವುಗಳನ್ನು ಹಲವು ವರ್ಷಗಳಿಂದ ಕಾಪಾಡಿಕೊಂಡು ಬರುತ್ತಿದ್ದಾರೆ.
ಇನ್ನೊಂದು ವಿಶೇಷವೆಂದರೆ ಆ ಎಲ್ಲಾ ಕೃತಿಗಳನ್ನು ಯಾರಾದರೂ ಇಷ್ಟಪಟ್ಟು ನಾಟಕ ಅಭ್ಯಾಸಕ್ಕೆ ಅಥವಾ ಓದಲು ಕೇಳಿದರೆ ಧಾರಾಳವಾಗಿ ಕೊಡುತ್ತಾರೆ. ವಾಪಸ್ ಕೊಡುವವರಿಗೆ ಮಾತ್ರ!
ಲೆಕ್ಕವಿಲ್ಲದ ಬಿರುದು ಗೌರವ: ಲಕ್ಷ್ಮಯ್ಯ ಅವರನ್ನು ಅರಸಿ ಬಂದಿರುವ ಗೌರವ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ರಾಜ್ಯದೆಲ್ಲೆಡೆ ರಂಗ ಪ್ರವಾಸ ಮಾಡಿರುವ ಅವರನ್ನು ನಾಡಿನ ಹಲವು ಸಂಘ ಸಂಸ್ಥೆಗಳು ಗೌರವಿಸಿವೆ. ಕಲಾರತ್ನ, ನಾಟಕ ರತ್ನ, ಕಲಾಜ್ಯೋತಿ ಮುಂತಾದ ಹತ್ತಾರು ಬಿರುದುಗಳಿಗೆ ಪಾತ್ರರಾಗಿದ್ದಾರೆ. ನಾಟಕ ಸೇವಾ ಪ್ರಶಸ್ತಿ, ವಿಶ್ವಜ್ಯೋತಿ ಪ್ರಶಸ್ತಿ, ಡಾ. ರಾಜ್ಕುಮಾರ್ ಸುವರ್ಣ ರತ್ನ ಪ್ರಶಸ್ತಿ, ಕರ್ನಾಟಕ ದೃವತಾರೆ ಪ್ರಶಸ್ತಿ ಲಕ್ಷ್ಮಯ್ಯ ಅವರ ಮುಡಿಗೇರಿವೆ.
70 ವರ್ಷ ವಯಸ್ಸಿನ ಹೊಸ್ತಿಲಲ್ಲಿರುವ ಲಕ್ಷ್ಮಯ್ಯ ಅವರು ಈಗಲೂ ಪಾದರಸ. ದೇಹ ಮಾಗಿದ್ದರೂ ಅವರ ಉತ್ಸಾಹಕ್ಕೆ ವಯಸ್ಸಾಗಿಲ್ಲ. ಮೊನ್ನೆ ತಾನೆ ಸುಂದರಕಾಂಡ ರಾಮಾಯಣದಲ್ಲಿ ಪಾತ್ರ ಮಾಡಿದ್ದಾರೆ. ಅವರ ಎದುರು ಕೂತರೆ ದಶಕಗಳ ರಂಗ ಇತಿಹಾಸ ಎಳೆಯಾಗಿ ಬಿಚ್ಚಿಕೊಳ್ಳುತ್ತದೆ. ಇಂಥ ಅನರ್ಘ್ಯ ಪ್ರತಿಭೆ ನಮ್ಮ ಘನ ಸರ್ಕಾರದ ಕಣ್ಣಿಗೆ ಬೀಳದೆ ಇರುವುದು ಕನ್ನಡಿಗರ ದುರಾದೃಷ್ಟ! ಮೊಬೈಲ್: 9844174899 ಸಂಖ್ಯೆಗಳಿಗೆ ಕರೆಮಾಡಿ ಈ ಕಲಾವಿದನಿಗೆ ಅಭಿನಂದಿಸಿ. ಕೈ ಬರಹದ ಪೌರಾಣಿಕ, ಐತಿಹಾಸಿಕ ನಾಟಕ ಕೃತಿ ಬೇಕಿದ್ದರೆ ಕರೆ ಮಾಡಿ. ನಾಟಕ ಮಾಡಿ. ಆದರೆ ದಯವಿಟ್ಟು ವಾಪಸ್ ಕೊಡಿ!
No comments:
Post a Comment