Tuesday, November 3, 2009

ಎನ್‌. ರಾಧಾ­ಕೃಷ್ಣ


ಪರ­ಮಾ­ತ್ಮ­ನಿಗೆ `ರಾ­ಧಾ­ಕೃಷ್ಣ' ಸ್ವರೂಪ


ದೇಗು­ಲದ ಗರ್ಭ­ಗು­ಡಿಯೇ ಅವರ ಪ್ರಯೊಗ ಶಾಲೆ. ಮನ­ಸ್ಸಿ­ನಲ್ಲಿ ಮೂಡಿದ ಕಲ್ಪ­ನೆಯೇ ಫಾರ್ಮುಲ. ಮುತ್ತು, ರತ್ನ, ವಜ್ರ, ವಸ್ತ್ರ, ವಡೆವೆ, ಧೂಪ, ಕರ್ಪೂ­ರ­ಗಳೇ ಸಂಪ­ನ್ಮೂಲ. ಭಗ­ವಂ­ತನೇ ಅವರ ಪ್ರಾಯೋ­ಗಿಕ ವಸ್ತು! ಶಂಕ, ಚಕ್ರ, ಗಧೆ, ತ್ರಿಶೂ­ಲ­ಗಳೇ ಉಪ­ಕ­ರಣ. ಅಭ­ಯಾಸ್ತ, ವರ­ದಾ­ಸ್ತ­ಗಳೇ ಕ್ಷ ಕಿರಣ........ಅ­ವರ ಪ್ರಯೋ­ಗ­ದಿಂದ ಭಕ್ತಿಯ ಸಾಗರ ಹರಿ­ಯು­ತ್ತದೆ. ಭಗ­ವಂ­ತ­ನಿಗೆ ರೂಪ ಕೊಡುವ ಅವರು ಭಕ್ತಿ­ಸಾ­ಗ­ರ­ದಲ್ಲಿ ತೊಯ್ದು ತೇವ­ಗೊ­ಳ್ಳು­ತ್ತಾರೆ!
ಅವರು ಎನ್‌. ರಾಧಾ­ಕೃಷ್ಣ. ದೇವರ ಅಲಂ­ಕಾರ ವಿದ್ವಾಂ­ಸರು. ಚಿತ್ರ­ಕಲಾ ಕಲಾ­ವಿದ ಹಾಗೂ ವಸ್ತ್ರ ವಿನ್ಯಾ­ಸಕ. ಹಲವು ದೇವಾ­ಲ­ಯ­ಗ­ಳಲ್ಲಿ ಅಲಂ­ಕಾರ ಮಾಡುವ ಹಾಗೂ ಪರ­ಮಾ­ತ್ಮನ ಮೂರುತಿ ರಚಿ­ಸುವ ಇವರ ಕಲ್ಪ­ನೆ­ಯೊ­ಳಗೆ ಭಗ­ವಂ­ತನ ಸಾಕ್ಷಾ­ತ್ಕಾ­ರ­ವಾ­ಗಿದೆ.
ರಾಧಾ­ಕೃಷ್ಣ ಅವರು ಗಣ­ಪ­ತಿ­ಯನ್ನು ವಿಧ ವಿಧ­ವಾಗಿ ಕಂಡಿ­ದ್ದಾರೆ. ಧಾನ್ಯ­ಗ­ಳನ್ನು ಕೂಡಿ­ಡುವ ಬಳ್ಳ, ಮಡಿಕೆ ಹಾಗೂ ಮನೆ ಬಳ­ಕೆಯ ಮೊರ­ಗ­ಳಲ್ಲಿ ಗಣ­ಪ­ನನ್ನು ಚಿತ್ರಿ­ಸಿ­ದ್ದಾರೆ. ಮೂರು ಯುಗ ಹಳೆ­ಯ­ದಾದ ಮುಳ­ಬಾ­ಗಿಲು ಸಮೀ­ಪದ ಕುರು­ಡು­ಮಲೆ ಗಣಪ ಇವ­ರಿಂದ ಮೇಕಪ್‌ ಮಾಡಿ­ಸಿ­ಕೊಂ­ಡಿ­ದ್ದಾನೆ! ಬೆಂಗ­ಳೂ­ರಿನ ಬಿನ್ನಿ ಮಿಲ್‌ ಸಮೀ­ಪದ ಉದ್ಬ­ವ­ಮೂರ್ತಿ ಸ್ವಯಂಭೋ ನಾಗ­ರಾಜ ಬಾಲ ಸುಬ್ರ­ಮ­ಣ್ಯ­ನಿಗೆ 50 ಕೆಜಿ ಬೆಣ್ಣೆ­ಯಿಂದ ಸರ್ಪದ ಎಡೆ ಸೃಷ್ಟಿ­ಸಿ­ದ್ದಾರೆ. ಮೈಸೂ­ರಿನ ಸಚ್ಚಿ­ದಾ­ನಂದ ಆಶ್ರ­ಮ­ದಲ್ಲಿ ನವ­ರತ್ನ ಖಚಿತ ಶಿವ­ಲಿಂಗ ರೂಪಿ­ಸಿ­ದ್ದಾರೆ. ಆಂಜ­ನೇ­ಯನ ಮೇಲಂತೂ ಅಪಾರ ಪ್ರಯೋಗ ಮಾಡಿ­ದ್ದಾರೆ! ಸ್ವಾತಿ­ಮುತ್ತು ಮತ್ತು ಕಪ್ಪೆ­ಚಿ­ಪ್ಪಿನ ಆಂಜ­ನೇ­ಯರು ಪ್ರಸಿ­ದ್ಧರು.
ಮಹಾ­ಲಕ್ಷ್ಮಿ ಲೇಔ­ಟ್‌ನ ಕನ್ನಿಕಾ ಪರ­ಮೇ­ಶ್ವ­ರಿಗೆ ಕಾಮಾಕ್ಷಿ ಅಲಂ­ಕಾರ ಹಾಗೂ ಗಾಯತ್ರಿ ಅಲಂ­ಕಾರ. ವರ­ಮ­ಹಾ­ಲ­ಕ್ಷ್ಮಿಗೆ ಕಳಶ ಅಲಂ­ಕಾ­ರ­ಗಳ ಐಭೋಗ. ನಂಜನ ಗೂಡಿನ ಶ್ರೀಕಂ­ಠೇ­ಶ್ವರ, ಶಿಡ್ಲ­ಘಟ್ಟ ಶಂಕ­ರ­ಮ­ಠದ ಶಾರ­ದಾಂಬೆ ಹಾಗೂ ಶಂಕ­ರಾ­ಚಾ­ರ್ಯರು, ಶಿಡ್ಲ­ಘ­ಟ್ಟದ ಗಣೇಶ ಸೇರಿ­ದಂತೆ ಕೆ.ಆರ್‌. ನಗರ ಹಾಗೂ ಹುಣ­ಸೂರು ದೇವಾ­ಲ­ಗ­ಳ­ಗ­ಳಲ್ಲೂ ಅಲಂ­ಕಾರ ಮಾಡಿ­ದ್ದಾರೆ.
ವಿಶೇಷ ಹಬ್ಬ ಹರಿ­ದಿ­ನ­ಗ­ಳಲ್ಲಿ ರಾಧಾ­ಕೃಷ್ಣ ದೇವರ ಅಲಂ­ಕಾ­ರ­ದಲ್ಲಿ ಬಿಡು­ವಿ­ಲ್ಲದೆ ಮಗ್ನ. ದೇವಾ­ಲಯ ಅಲಂ­ಕಾ­ರದ ಜೊತೆಗೆ ಮನೆ­ಗ­ಳಲ್ಲಿ ಆಯೋ­ಜಿ­ಸುವ ಪೂಜೆ­ಗ­ಳಲ್ಲೂ ದೇವರ ವಿಗ್ರಹ ಮಾಡಿ ಅಲಂ­ಕಾರ ಮಾಡು­ತ್ತಾರೆ. ದೇವರ ಹೆಸರು ಹೇಳಿ­ದರೆ ಸಾಕು, ಕಲ್ಪ­ನೆ­ಯೊ­ಳಗೆ ಭಗ­ವಂ­ತ­ನಿಗೆ ರೂಪ ಕೊಟ್ಟು ನಂತರ ಕೃತಿ­ಗಿ­ಳಿ­ಸು­ತ್ತಾರೆ. ದೇವರ ಬಗ್ಗೆ ಓದು ಹಾಗೂ ಕೇಳಿದ ಕತೆ­ಗಳು ಸ್ವರೂಪ ಕೊಡಲು ಸಹಾಯ ಮಾಡು­ತ್ತವೆ. ಅಲಂ­ಕಾ­ರಕ್ಕೆ ಅವ­ಶ್ಯ­ವಿ­ರುವ ಎಲ್ಲಾ ವಸ್ತು­ಗ­ಳನ್ನು ತಾವೇ ತಯಾ­ರಿ­ಸಿ­ಕೊ­ಳ್ಳು­ತ್ತಾರೆ. ರೆಡಿ­ಮೇಡ್‌ ವಸ್ತು­ಗ­ಳನ್ನು ಬಳ­ಸ­ದಿ­ರು­ವುದು ವಿಶೇಷ.
ದೀಪಾ­ವಳಿ ಲಕ್ಷ್ಮಿ­ಪೂ­ಜೆ­ಯಲ್ಲಿ ಮಾಡಿದ ಲಕ್ಷ್ಮಿ ವಿಗ್ರಹ ಹಾಗೂ ಅಲಂ­ಕಾ­ರ­ವನ್ನು ಟಿವಿ 9 ವಾಹಿನಿ ವಿಶೇಷ ಕಾರ್ಯ­ಕ್ರ­ಮ­ವಾಗಿ ಪ್ರಸಾರ ಮಾಡಿದೆ. ಕೊಳ­ಲ­ನೂ­ದುತ ನವಿ­ಲು­ಗರಿ ಕೆಳಗೆ ಪವ­ಡಿ­ಸಿ­ರುವ ಶ್ರೀಕ­ಷ್ಣನ ಕೃತಿ­ಯನ್ನು ಶ್ರೀಕೃಷ್ಣ ಜನ್ಮಾ­ಷ್ಟ­ಮಿ­ಯಂದು ಜೀ ಕನ್ನಡ ವಾಹಿನಿ ಪ್ರಸಾರ ಮಾಡಿದೆ. ಅಲ್ಲದೆ ಮನೆ­ಗ­ಳಿಗೂ ವಿಗ್ರಹ ಮತ್ತು ಅಲಂ­ಕಾರ ಮಾಡು­ತ್ತಾರೆ. ಚಿತ್ರ­ನಟಿ ತಾರಾ ಅವರ ಮನೆಗೆ ತೆಂಗಿನ ಗರಿ­ಯಲ್ಲಿ ಸತ್ಯ­ನಾ­ರಾ­ಯಣ ಪೂಜೆಗೆ ದೇಗುಲ ನಿರ್ಮಿ­ಸಿದ್ದು ಅವರ ವಿಶೇ­ಷ­ಗ­ಳ­ಲ್ಲೊಂದು. ಇಷ್ಟರ ಜೊತೆಗೆ ಪೂಜೆಗೆ ಪೌರೋ­ಹಿ­ತ್ಯ­ವನ್ನೂ ಮಾಡ­ಬ­ಲ್ಲರು! ಚಿತ್ರ­ಕ­ಲಾ­ವಿದ ಹಾಗೂ ವಸ್ತ್ರ ವಿನ್ಯಾ­ಸಕ: ದೇವರ ಅಲಂ­ಕಾ­ರದ ಜೊತೆಗೆ ರಾಧಾ­ಕೃಷ್ಣ ಅವರು ಚಿತ್ರ­ಕಲಾ ಕಲಾ­ವಿದ ಹಾಗೂ ವಸ್ತ್ರ ವಿನ್ಯಾ­ಸಕ. ಬೆಂಗ­ಳೂ­ರಿನ `ಕೆನ್‌ ಸ್ಕೂಲ್‌ ಆಫ್‌ ಆರ್ಟ್ಸ್‌'ನಲ್ಲಿ ಪದವಿ ಗಳಿ­ಸಿ­ರುವ ಅವರು ನೂರಾರು ಕಲಾ­ಕೃತಿ, ಭಿತ್ತಿ­ಚಿತ್ರ ರಚಿ­ಸಿ­ದ್ದಾರೆ. ಪದವಿ ನಂತರ ಜೆ.ಪಿ. ಟೆಕ್ಸ್‌­ಟೈ­ಲ್ಸ್‌­ನಲ್ಲಿ ಕ್ರಿಯೆ­ಟಿವ್‌ ಡಿಸೈ­ನರ್‌ ಆಗಿ ಕೆಲಸ ಮಾಡಿ­ದ್ದಾರೆ. ಖ್ಯಾತ ಬಟ್ಟೆ ರಪ್ತು ಉದ್ಯಮ `ಗೋ­ಕುಲ್‌ ದಾಸ್‌ ಎಕ್ಸ್‌­ಪೋರ್ಟ್ಸ'ನಲ್ಲಿ ವಿನ್ಯಾ­ಸ­ಕಾ­ರ­ರಾಗಿ 9 ವರ್ಷ­ಗಳ ಕಾಲ ಕೆಲಸ ಮಾಡಿ­ದ್ದಾರೆ. ಜೊತೆಗೆ `ಸ್ವಾತಿ ಡಿಸೈನ್‌'ಗೂ ವಿನ್ಯಾಸ ಮಾಡಿ­ದ್ದಾರೆ. ಈಗ ಸ್ವತಂ­ತ್ರ­ವಾಗಿ ಮನೆ­ಯಲ್ಲೇ ದೇವರ ಅಲಂ­ಕಾರ ಹಾಗೂ ಚಿತ್ರ­ಕ­ಲೆ­ಯಲ್ಲಿ ತೊಡ­ಗಿ­ಕೊಂ­ಡಿ­ದ್ದಾರೆ.
ಉದ್ಯಮಿ ದಿನೇಶ್‌ ಹಿಂದುಜಾ ಅವ­ರಿಗೆ ಮಾಡಿ­ಕೊಟ್ಟ `ರಾ­ಧ­ಕೃಷ್ಣ' ಬಿತ್ತಿ­ಚಿತ್ರ, ಕುಟೀರ ರೆಸಾ­ರ್ಟ್‌ಗೆ ಮಾಡಿದ ಕೃತಿ­ಗಳು, ಮೈಸೂ­ರಿನ ದೀಕ್ಷಿತ್‌ ಆಸ್ಪ­ತ್ರೆಗೆ ಮೃತ್ಯುಂ­ಜಯ ಪೋಟ್ರೈಟ್‌, ಗಣ­ಪತಿ ಸಚ್ಚಿ­ದಾ­ನಂದ ಆಶ್ರ­ಮಕ್ಕೆ ಹಲವು ಕಲಾ­ಕೃ­ತಿ­ಗ­ಳನ್ನು ರಚಿ­ಸಿ­ದ್ದಾರೆ.
ಬೆಂಗ­ಳೂ­ರಿನ ತಾತ­ಗು­ಣಿ­ಯ­ಲ್ಲಿ­ರುವ ಸ್ವಾನಂದ ಆಶ್ರ­ಮದ ಕಲಾ ಮಹೋ­ತ್ಸ­ವ­ದಲ್ಲಿ ರಾಧಾ­ಕೃಷ್ಣ ರಚಿ­ಸಿದ ಜಾನ­ಪದ ವೇದಿಕೆ ಮೆಚ್ಚು­ಗೆಗೆ ಪಾತ್ರ­ವಾ­ಗಿದೆ. ಆ ಇಡೀ ಮಹೋ­ತ್ಸ­ವ­ವನ್ನು ಜಾನ­ಪದ ಪರಿ­ಕ­ಲ್ಪ­ನೆ­ಯಲ್ಲಿ ರಚನೆ ಮಾಡಿ­ದ್ದರು. ಹೆಬ್ಬಾ­ಗಿ­ಲಿ­ನಿಂದ ಹಿಡಿದು ಮುಖ್ಯ ವೇದಿ­ಕೆ­ಯ­ವ­ರೆಗೂ ಜಾನ­ಪ­ದವೇ ತುಂಬಿ ಅಪಾರ ಜನರ ಮೆಚ್ಚು­ಗೆಗೆ ಪಾತ್ರ­ವಾ­ಯಿತು. ಅಲ್ಲದೆ ರಾಧಾ­ಕೃ­ಷ್ಣರ ಕೃತಿ­ಗ­ಳನ್ನು ಕ್ಯಾಲೆಂ­ಡ­ರ್‌­ಗ­ಳಿಗೆ, ಪ್ರಶಸ್ತಿ ಮೊಮೆಂ­ಟೋ­ಗ­ಳಿಗೆ ಬಳ­ಸಿ­ಕೊ­ಳ್ಳ­ಲಾ­ಗಿದೆ.
ಜೀನ್ಸ್‌­ಪ್ಯಾಂಟ್‌ ಮೇಲೆ ಶೇಡ್ಸ್‌:
ದೇವರ ಅಲಂ­ಕಾರ ಹಾಗೂ ಚಿತ್ರ­ಕ­ಲೆಯ ಜೊತೆಗೆ ರಾಧಾ­ಕೃಷ್ಣ ಅವರು ವಸ್ತ್ರ­ವಿ­ನ್ಯಾ­ಸ­ಕರೂ ಹೌದು. ಜೀನ್ಸ್‌­ಪ್ಯಾಂ­ಟ್‌­ಗಳ ಮೇಲೆ ಶೇಡ್ಸ್‌ ಮಾಡುವ ವಿನ್ಯಾ­ಸ­ವನ್ನು ಬೆಂಗ­ಳೂ­ರಿ­ನಲ್ಲಿ ಮೊದಲು ಪರಿ­ಚ­ಯಿ­ಸಿ­ದ­ವರೇ ರಾಧಾ­ಕೃಷ್ಣ. ವಿಶಿಷ್ಟ ರಾಸಾ­ಯ­ನಿ­ಕ­ಗ­ಳನ್ನು ಬಳಸಿ ಕೊಟ್ಟ ಶೇಡಿಂಗ್‌ ವಿನ್ಯಾ­ಸ­ವನ್ನು ಯುವ ಸಮು­ದಾಯ ಒಪ್ಪಿ ಅಪ್ಪಿ­ಕೊಂ­ಡಿತು. ಇವತ್ತು ರಸ್ತೆ ರಸ್ತೆ­ಯಲ್ಲಿ ಶೇಡೆಡ್‌ ಜೀನ್ಸ್‌ ಸಿಗು­ತ್ತವೆ! ಅದು ಅವರ ದೊಡ್ಡ ಯಶಸ್ವಿ. ನಂತರ ಖ್ಯಾತ ಕಂಪ­ನಿ­ಗ­ಳಾದ ಲೀ ಜೀನ್ಸ್‌, ರ್ಯಾಂಗ್ಲರ್‌, ರೀಬಾಕ್‌, ಡೀಸೆಲ್‌, ನಿಕಿಯ ವಸ್ತ್ರ­ಗ­ಳಿಗೆ ಡಿಸೈನ್‌ ಮಾಡಿವ ಅವ­ಕಾಶ ದೊರೆ­ಯಿತು.
ಬ್ಯಾನ­ರ್‌­ನಿಂದ ಯಾತ್ರೆ ಆರಂಭ:
ರಾಧಾ­ಕೃಷ್ಣ ರಾಮ­ನ­ಗ­ರ­ದ­ವರು. ತಂದೆ ದಿ. ನಾಗ­ಭೂ­ಷಣ ಶಾಸ್ತ್ರೀ, ಕನ್ನಿಕಾ ಪರ­ಮೇ­ಶ್ವರಿ ದೇವಾ­ಲ­ಯ­ದಲ್ಲಿ ಅರ್ಚ­ಕ­ರಾ­ಗಿ­ದ್ದರು. ತಾಯಿ ಪಾರ್ವ­ತಮ್ಮ. ತಂದೆ ತಾಯಂ­ದಿ­ರಿಗೆ ಸಂಗೀತ ಗೊತ್ತಿತ್ತು. ಮನೆಯ ಮಕ್ಕ­ಳೆಲ್ಲಾ ಸಂಗೀತ ಹಾದಿ ಹಿಡಿ­ದರೆ, ರಾಧಾ­ಕೃಷ್ಣ ಕುಂಚ ಮತ್ತು ಬಣ್ಣದ ಹಿಂದೆ ನಡೆ­ದರು. ರಾಮ­ನ­ಗ­ರದ ........ಸಭಾ ಅವರ ಪ್ರತಿ­ಭೆಗೆ ವೇದಿ­ಕೆ­ಯಾ­ಯಿತು. ಸಭಾ­ದಿಂದ ಏನೇ ಕಾರ್ಯ­ಕ್ರಮ ನಡೆ­ದರೂ ಇವರ ಕುಟುಂ­ಬದ ಪಾಲು ಇರು­ತ್ತಿತ್ತು. ಇವ­ತ್ತಿಗೂ .......ಸಭಾ ಕಾರ್ಯ­ಕ್ರ­ಮ­ಗ­ಳಲ್ಲಿ ರಾಧಾ­ಕೃಷ್ಣ ಕುಟುಂಬ ಸಮೇ­ತ­ರಾಗಿ ಪಾಲ್ಗೊ­ಳ್ಳು­ತ್ತಾರೆ. ರಾಧಾ­ಕೃಷ್ಣ ಕಾರ್ಯ­ಕ್ರ­ಮ­ಗ­ಳಿಗೆ ಬ್ಯಾನರ್‌ ಬರೆ­ಯು­ತ್ತಿ­ದ್ದರು. ಆ ಮೂಲಕ ತಮ್ಮ ಕಲಾ ಯಾತ್ರೆ­ಯನ್ನು ಆರಂ­ಭಿ­ಸಿ­ದರು. ತಂದೆಯೂ ದೇವ­ರಿಗೆ ಅಲಂ­ಕಾರ ಮಾಡು­ತ್ತಿ­ದ್ದರು. ಅಲಂ­ಕಾ­ರ­ದಲ್ಲಿ ತಂದೆಯೇ ಗುರು. ಬೇರೆ ಬೇರೆ ಊರು­ಗ­ಳಿಗೆ ತಂದೆಯ ಜೊತೆ ಅಲಂ­ಕಾ­ರಕ್ಕೆ ತೆರ­ಳು­ತ್ತಿ­ದ್ದರು. ತಮಗೆ ಬೇಕಾದ ಸಣ್ಣ ಪುಟ್ಟ ಕಾಲೇಜು ಖರ್ಚು­ಗ­ಳನ್ನು ತಾವೇ ದುಡಿ­ದು­ಕೊ­ಳ್ಳು­ತ್ತಿ­ದ್ದರು. ಎಲ್ಲ­ದಕ್ಕೂ ಮನೆಯ ಮೇಲೆ ಅವ­ಲಂ­ಭಿ­ತ­ರಾ­ಗಿ­ರ­ಲಿಲ್ಲ. ಮನೆ­ಯಲ್ಲಿ ಅವ­ರಿಗೆ ಸಿಕ್ಕ ಸ್ವತಂತ್ರ ಎಲ್ಲೂ ವ್ಯರ್ಥ­ವಾ­ಗ­ಲಿಲ್ಲ!
ಇಲ್ಲೊಂದು ಶಿಸ್ತು ಸಂಹಿತೆ:
ರಾಧಾ­ಕೃಷ್ಣ ತಮ್ಮ ಕಾರ್ಯ­ದ­ಲ್ಲೊಂದು ಶಿಸ್ತು ಸಂಹಿ­ತೆ­ಯನ್ನು ಅನು­ಸ­ರಿ­ಸು­ತ್ತಾರೆ. ದೇವರ ಅಲಂ­ಕಾ­ರ­ದಲ್ಲಿ ಎಲ್ಲೂ ಶಾಸ್ತ್ರ ಮೀರಿ­ದ್ದಿಲ್ಲ. ಸೃಜ­ನ­ಶೀ­ಲ­ತೆ­ಗಾಗಿ ಶಿಸ್ತನ್ನು ಕಡೆ­ಗ­ಣಿ­ಸಿಲ್ಲ. ದೇವರ ವಿಗ್ರಹ ರಚ­ನೆ­ಯಲ್ಲಿ ಹೆಣ್ಣು, ಗಂಡು ದೇವರ ಅವ­ತಾ­ರ­ಗ­ಳನ್ನು ಅರ್ಥ­ಮಾ­ಡಿ­ಕೊ­ಳ್ಳ­ಬೇ­ಕಾದ ಅವ­ಶ್ಯ­ಕತೆ ಇದೆ. ಅದೆ­ಲ್ಲ­ವನ್ನು ರಾಧಾ­ಕೃಷ್ಣ ಬದ್ಧ­ತೆ­ಯಿಂದ ಅನು­ಸ­ರಿ­ಸು­ತ್ತಾರೆ.
ಎಲ್ಲೂ ನಿಲ್ಲೋ­ದಿಲ್ಲ: `ಕ­ಲಾ­ವಿ­ದ­ನಿಗೆ ಕನಸೇ ಬಂಡ­ವಾಳ. ಕನ­ಸನ್ನು ಸಾಕಾರ ಮಾಡು­ವಾಗ ಬೇರೇನೂ ಮುಖ್ಯ­ವಲ್ಲ. ಹಣ ಕಮ್ಮಿ­ಯಾ­ಗ­ಬ­ಹುದು, ಹೆಚ್ಚಾ­ಗ­ಬ­ಹುದು ಆದರೆ ಕಾರ್ಯ­ದಲ್ಲಿ ವ್ಯತ್ಯಾ­ಸ­ವಾ­ಗ­ಕೂ­ಡದು. ಯಾವ ಮನ್ನಣೆ ಗೌರ­ವ­ಗಳ ನಿರೀ­ಕ್ಷೇಯೂ ಇಲ್ಲ. ಅಷ್ಟಕ್ಕೂ ನಾನೊಬ್ಬ ನೇಪಥ್ಯ ಕಲಾ­ವಿದ, ಗೌರ­ವ­ಗಳ ನಿರೀಕ್ಷೆ ಮಾಡ­ಬಾ­ರದು. ಯಾವು­ದಕ್ಕೂ ಅಂಜದೆ ಎಲ್ಲೂ ನಿಲ್ಲದೆ ನಡೆ­ಯು­ತ್ತೇನೆ ' ಎಂದು ರಾಧ­ಕೃಷ್ಣ ಅವರು ಹೇಳು­ವಾಗ ಅವರ ಉನ್ನತ ವಿಶ್ವಾ­ಸದ ಅಂತ­ರ್‌­ದ­ರ್ಶ­ನ­ವಾ­ಯಿತು. ಜೊತೆಗೆ ಯಾರೂ ಮಾಡಿ­ರದ ದೊಡ್ಡ­ದೊಂದು ಚಿತ್ರ­ಕ­ಲಾ­ಕೃತಿ ಮಾಡುವ ಕನ­ಸನ್ನು ಅವರು ಹೊರ ಹಾಕಿ­ದರು.
ರಾಧಾ­ಕೃಷ್ಣ ಅವ­ರದು ರಾಜ­ರಾ­ಜೇ­ಶ್ವರಿ ನಗ­ರದ ಪಟ್ಟ­ಣ­ಗೆರೆ ವಾಸ. ಪತ್ನಿ ವಿಮಲಾ ಮೈಕೋ ಕಾರ್ಖಾನೆ ಉದ್ಯೋಗಿ. ಮಗಳು ರಚ­ನಾ­ ಚಿತ್ರ­ಕಲೆ ಅಂದರೆ ಪಂಚ­ಪ್ರಾಣ. ಪುಟ್ಟ ಸಂಸಾರದೊಂದಿಗೆ ದೊಡ್ಡ ಕನಸು ಹೊಂದಿರುವ ಅವರ ಹಾದಿ ಸುಗಮವಾಗಲಿ.

No comments:

Post a Comment