Tuesday, November 10, 2009






ಮಾತೆ ಮೀನಾಕ್ಷಿ ಹೊಳ್ಳ



ಆ ವೃದ್ಧಾ­ಶ್ರ­ಮದ ಹಿರಿಯ ಜೀವ­ಗಳ ಜೊತೆ­ಯಲ್ಲಿ `ಮಾ­ಯಾ­ಮೃಗ' ಶೂಟಿಂಗ್‌ ನಡೆ­ಯಿತು. ವಾರದ ನಂತರ ದೂರ­ದ­ರ್ಶ­ನ­ದಲ್ಲಿ ಪ್ರಸಾ­ರ­ವಾ­ಯಿತು. ಧಾರಾ­ವಾಹಿ ನೋಡಿದ ಚೆನ್ನೈ ವೀಕ್ಷ­ಕ­ನೊಬ್ಬ ಮರು­ದಿನ ವೃದ್ಧಾ­ಶ್ರ­ಮ­ವನ್ನು ಹುಡು­ಕಿ­ಕೊಂಡು ಬಂದ. ಅವ­ನಿ­ಗೊಂದು ಅನು­ಮಾನ. ಧಾರಾ­ವಾ­ಹಿ­ಯಲ್ಲಿ ಕಂಡ ಆ ವೃದ್ಧೆ ನನ್ನ ತಾಯಿ ಇರ­ಬ­ಹುದಾ?! ಅವನ ಅನು­ಮಾನ ನಿಜ­ವಾ­ಗಿತ್ತು. ತಾಯಿ­ಯನ್ನು ಕಣ್ತುಂಬ ನೋಡಿದ. ಮಾತ­ನಾ­ಡಿ­ಸ­ಲಿಲ್ಲ. ಅನು­ಮಾ­ನ­ವನ್ನು ಪರಿ­ಹ­ರಿ­ಸಿ­ಕೊಂಡು ಕಾಲಿಗೆ ಬುದ್ದಿ ಹೇಳಿದ. ಆ ತಾಯಿ ಅತ್ತು ಅತ್ತು ಹೈರಾ­ಣಾ­ದಳು. ಕಲವೇ ದಿನ­ಗ­ಳಲ್ಲಿ ಅಲ್ಲೇ ಸತ್ತಳು. ಆಗಲೂ ಆ ಮೂರ್ಖ ಮಗ ತಾಯಿಯ ಕಳೇ­ಬರ ಕಾಣಲು ಬರ­ಲಿಲ್ಲ. ಕಡೆಗೆ ಆಕೆ ಹರಿ­ಶ್ಚಂದ್ರ ಘಾಟ್‌­ನಲ್ಲಿ ದೀರ್ಘ ಮೌನ­ವಾ­ದಳು.
ಇದು ಮಾಯಾ­ಮೃ­ಗದ ಕತೆ­ಯಲ್ಲ. ಬೆಂಗ­ಳೂ­ರಿನ ಚಿತ್ರ­ಕಲಾ ಪರಿ­ಷತ್‌ ಪಕ್ಕ­ದ­ಲ್ಲಿ­ರುವ ಶ್ರೀ ರಾಘ­ವೇ­ಶ್ವರ ಗೋ ಆಶ್ರಮ ಟ್ರಸ್ಟ್‌ನ ವೃದ್ಧಾ­ಶ್ರ­ಮ­ದಲ್ಲಿ ನಡೆದ ನಿಜ­ವಾದ ಕತೆ. ಈ ಕತೆ ಹೇಳಿ­ದ­ವರು ವೃದ್ಧಾ­ಶ್ರ­ಮ­ವನ್ನು ಕಳೆದ ಮೂರು ದಶ­ಕ­ಗ­ಳಿಂದ ಕಟ್ಟಿ­ಕೊಂಡು ಬರು­ತ್ತಿ­ರುವ 84 ವರ್ಷ ವಯ­ಸ್ಸಿನ `ಹಿ­ರಿಯ ತಾಯಿ' ಮೀನಾಕ್ಷಿ ಹೊಳ್ಳ. ಅವರ ಬಳಿ ಈ ಥರದ ನೂರಾರು ಕತೆ­ಗ­ಳಿವೆ. ಅದೆಷ್ಟೋ ವೃದ್ಧ­ರನ್ನು ಸಾಕಿ ಸಲಹಿ, ಅಂತ್ಯ ಸಂಸ್ಕಾ­ರ­ವನ್ನೂ ಮಾಡಿ­ದ್ದಾರೆ!. ಮೀನಾಕ್ಷಿ ಹೊಳ್ಳ ನಮ್ಮ ನಡುವೆ ಇರುವ ಅಪ­ರೂ­ಪದ ಹಿರಿಯ ಜೀವ. ಕಲಿ­ತದ್ದು ಕಮ್ಮಿ­ಯಾ­ದರೂ ಅವರ ಬಳಿ ಅದ್ಬುತ ಅನು­ಭ­ವ­ಗ­ಳೇನೂ ಕಮ್ಮಿ ಇಲ್ಲ. ಕಳೆದ ಮೂವತ್ತು ವರ್ಷ­ಗ­ಳಿಂದ ಎಲ್ಲ­ವನ್ನು ಕಳೆ­ದು­ಕೊಂ­ಡ­ವ­ರಿಗೆ ಇವರೇ ಎಲ್ಲಾ ಆಗಿ­ದ್ದಾರೆ. ತಮ್ಮ ಆಶ್ರ­ಮದ ಹಿರಿ­ಯ­ರನ್ನು ಮಕ್ಕ­ಳಂತೆ ಸಲ­ಹಿ­ದ್ದಾರೆ. ಇಲ್ಲಿ­ಯ­ವ­ರೆಗೆ ಆಶ್ರ­ಮ­ದಲ್ಲಿ ಮೃತ­ಪಟ್ಟ ಮೂವ­ತ್ತಕ್ಕೂ ಹೆಚ್ಚು ಹಿರಿ­ಯ­ರಿಗೆ ಅಂತ್ಯ ಸಂಸ್ಕಾರ ಮಾಡಿ­ದ್ದಾರೆ.
`ಅಂ­ತ್ಯ­ಸಂ­ಸ್ಕಾರ ಮಾಡು­ವುದು ಒಂದು ಯೋಗ. ನನ್ನ ಯಾವ ಜನ್ಮದ ಪುಣ್ಯವೋ ಕಾಣೆ. ದಿಕ್ಕಿಲ್ಲ ಅಂದ­ವ­ರಿಗೆ ಅನ್ನ ಕೊಟ್ಟಿ­ದ್ದೇನೆ, ಸೂರು ಕೊಟ್ಟು ಸಾಕಿ­ದ್ದೇನೆ. ನೋವು ಅಂದಾಗ ಮಕ್ಕ­ಳಂತೆ ಆರೈಕೆ ಮಾಡಿ­ದ್ದೇನೆ. ಸತ್ತಾಗ ಕಣ್ಣೀರು ಹಾಕಿ ಎಲ್ಲಾ ಕರ್ಮಾ­ದಿ­ಗ­ಳನ್ನು ಮಾಡಿ­ದ್ದೇನೆ. ಇದು ಪುಣ್ಯ­ವ­ಲ್ಲದೆ ಮತ್ತಿ­ನ್ನೇನು' ಎಂದು ಪ್ರಶ್ನಿ­ಸು­ವಾಗ ಅವರ ಮಾತೃ ಸ್ವರೂಪ ತೆರೆ­ದು­ಕೊಂ­ಡಿತ್ತು.
ಅಪ­ರೂ­ಪದ ಆಲಯ:
ಪ್ರಚಾ­ರ­ದಿಂದ ಬಹಳ ದೂರ­ವಿ­ರುವ ವೃದ್ಧಾ­ಶ್ರಮ ಅದು. ರಾಜ­ಕಾ­ರ­ಣಿ­ಗಳು ಕೊಡುವ ಪುಡಿ­ಗಾ­ಸಿಗೆ ಎಂದಿಗೂ ಕೈ ಚಾಚಿ­ದ­ವ­ರಲ್ಲ. 1979ರಲ್ಲಿ ತುಂಡು­ಭೂ­ಮಿ­ಯಲ್ಲಿ ಗೋ ಆಶ್ರಮ ಟ್ರಸ್ಟ್‌ ಆಗಿ ಆರಂ­ಭ­ವಾ­ಯಿತು. ಟ್ರಸ್ಟ್‌ ವೃದ್ಧಾ­ಶ್ರ­ಮನ್ನೂ ಆರಂ­ಭಿ­ಸಿತು. ಆರಂ­ಭ­ದಲ್ಲಿ ಆ ಜಾಗ ದೊಡ್ಡ ಹೊಂಡ­ದಂ­ತಿತ್ತು. ಅದು ಮುಂದೊಂದು ದಿನ ಹಿರಿಯ ಜೀವ­ಗಳ ಆಶ್ರ­ಯ­ತಾ­ಣ­ವಾ­ಗು­ತ್ತದೆ ಎಂದು ಯಾರೂ ಎಣಿ­ಸಿ­ರ­ಲಿಲ್ಲ. ಆ ಕಾಲ­ದಲ್ಲಿ ಮೀನಾ­ಕ್ಷಿ­ಯ­ವರ ತೋಳಲ್ಲಿ ಇನ್ನೂ ಬಲ­ವಿತ್ತು. ತಮ್ಮ ಪತಿ ಜನಾ­ರ್ಧನ ಹೊಳ್ಳ ಅವರ ಸಂಕ­ಲ್ಪಕ್ಕೆ ಮೀನಾಕ್ಷಿ ನೀರೆ­ರೆ­ದರು. ಇವತ್ತು ಅದು ಹಿರಿಯ ಜೀವ­ಗಳ ಆಲ­ಯ­ವಾ­ಗಿದೆ. ಅವರು ಸರ್ಕಾ­ರದ ಕಡೆ­ಯಿಂದ ಒಂದು ನಯಾ ಪೈಸೆ­ಯನ್ನೂ ನಿರೀಕ್ಷೆ ಮಾಡಿ­ದ­ವ­ರಲ್ಲ. ಮುಂದೆಯೂ ಮಾಡು­ವ­ವ­ರಲ್ಲ. ಆಶ್ರ­ಮಕ್ಕೆ ಹಿರಿ­ಯರ ಬಗ್ಗೆ ಕಾಳ­ಜಿ­ಯುಳ್ಳ ದಾನಿ­ಗಳೇ ಧಣಿ­ಗಳು.
ಇವರು ಕಟು­ಕರು:
ಹೆತ್ತ­ವ­ರಿಗೆ ಒಂದು ಹೊತ್ತಿನ ಅನ್ನ ಹಾಕಲು ಆಗ­ವ­ರಿಗೆ ಮೀನಾಕ್ಷಿ ಹೊಳ್ಳ ಕಟು­ಕರು ಎಂದು ಕರೆ­ಯು­ತ್ತಾರೆ. ಹೆತ್ತ­ವ­ರನ್ನು ಮಕ್ಕಳು ತಿರ­ಸ್ಕ­ರಿ­ಸಿ­ದಾಗ ಸಮಾಜ ತಿರ­ಸ್ಕ­ರಿ­ಸ­ಕೂ­ಡದು. ಹಿರಿ­ಯರ ನೋವು­ಗ­ಳಿಗೆ ಸ್ಪಂದಿ­ಸ­ಬೇಕು. ಈ ಕೆಲಸ ಮಾಡಲು ಮಕ್ಕಳೇ ಆಗ­ಬೇ­ಕೆಂ­ದಿಲ್ಲ. ಮನು­ಷ್ಯತ್ವ ಇರುವ ಯಾರು ಬೇಕಾ­ದರೂ ಮಾಡ­ಬ­ಹುದು ಎಂಬುದು ಅವರ ಮನ­ದಾ­ಳದ ಮಾತು.

ಆಶ್ರ­ಮಕ್ಕೆ ರಜತ ಮಹೋ­ತ್ಸವ:
2004ರಲ್ಲಿ ಆಶ್ರ­ಮಕ್ಕೆ 25 ತುಂಬಿತು. ಬಹುಶಃ ಆಗಲೇ ಈ ಆಶ್ರ­ಮದ ಸೇವೆ ಎಲ್ಲ­ರಿಗೂ ತಿಳಿ­ದದ್ದು. ಅಲ್ಲಿ­ಯ­ವ­ರೆಗೆ ಮರೆ­ಯಲ್ಲೇ ಇತ್ತು. ರಜತ ಸಂಭ್ರ­ದ­ಲ್ಲಿದ್ದ ಆಶ್ರ­ಮ­ವನ್ನು ಅಂದಿನ ರಾಜ್ಯ­ಪಾ­ಲ­ರಾದ ಟಿ.ಎನ್‌. ಚತು­ರ್ವೇದಿ, ಉಪ ಮುಖ್ಯ­ಮಂ­ತ್ರಿ­ಗ­ಳಾ­ಗಿದ್ದ ಸಿದ್ದ­ರಾ­ಮಯ್ಯ, ಗಣ್ಯ­ರಾದ ವಿರೇಂದ್ರ ಹೆಗ್ಗಡೆ, ಪತ್ರ­ಕರ್ತ ರವಿ­ಬೆ­ಳ­ಗೆರೆ, ವಿಶ್ವೇ­ಶ್ವರ ಭಟ್‌ ಮುಂತಾ­ದ­ವರು ಕೊಂಡಾ­ಡಿ­ದ್ದಾರೆ.
ಮನೆಯ ವಾತಾ­ವ­ರಣ:
ಮನೆಯ ವಾತಾ­ವ­ರಣ ಈ ಆಶ್ರ­ಮ­ದ­ಲ್ಲಿದೆ. 60 ವರ್ಷ ವಯ­ಸ್ಸಿಗೂ ಮೇಲ್ಪಟ್ಟ ವೃದ್ಧರು ಇಲ್ಲಿ ಆಶ್ರಯ ಪಡೆ­ಯ­ಬ­ಹುದು. ಜಾತಿ, ಭಾಷೆ­ಗಳ ಪ್ರಶ್ನೆಯೇ ಇಲ್ಲ. ಅವಿ­ವಾ­ಹಿತ ವೃದ್ಧ­ರಿಗೆ ಹೆಚ್ಚು ಆದ್ಯತೆ ಇದೆ. ಡೊನೇ­ಷನ್‌, ಡಿಫಾ­ಜಿಟ್‌ ಯಾವುದೂ ಇಲ್ಲ. ಇಷ್ಟ­ಪ­ಟ್ಟರೆ ವೃದ್ಧರು ಹಣ ಸಹಾಯ ಮಾಡ­ಬ­ಹುದು ಆದರೆ ಕಡ್ಡಾ­ಯ­ವಿಲ್ಲ. ಆಶ್ರ­ಮ­ದಲ್ಲಿ ಎಲ್ಲಾ ವ್ಯವ­ಸ್ಥೆ­ಗ­ಳಿವೆ. ಮುಖ್ಯ­ವಾಗಿ ಆಶ್ರಮ ಬಹಳ ಶುಚಿ­ಯಾ­ಗಿದೆ.
ಹಿರಿ­ಯರ ಆರೋ­ಗ್ಯಕ್ಕೆ ಇಲ್ಲಿ ಜಾಸ್ತಿ ಒತ್ತು ಕೊಟ್ಟಿ­ದ್ದಾರೆ. ಮಹ­ವೀರ್‌ ಜೈನ್‌ ಆಸ್ಪತ್ರೆ ವೈದ್ಯ­ಕೀಯ ಸೌಲಭ್ಯ ನೀಡು­ತ್ತದೆ. ಶುಶೃಕಿ ಸಿಸ್ಟರ್‌ ಶಾಲಿನಿ ಅವರು ಪ್ರತಿ­ದಿನ ಆರೋಗ್ಯ ತಪಾ­ಸಣೆ ನಡೆ­ಸು­ತ್ತಾರೆ. ಈ ಎಲ್ಲಾ ಉಸ್ತು­ವಾ­ರಿ­ಯನ್ನು ಮೀನಾಕ್ಷಿ ಹೊಳ್ಳ ಅವರೇ ನೋಡಿ­ಕೊ­ಳ್ಳು­ತ್ತಾರೆ. ಮಗ ಕೆ.ಜೆ. ಬಾಲ­ಕೃಷ್ಣ ಹೊಳ್ಳ ಅವರು ಅಮ್ಮ­ನಿಗೆ ಸಹಾಯ ಮಾಡು­ತ್ತಾರೆ.
ವಿದ್ಯಾ ಪ್ರತಿ­ಷ್ಠಾನ:



ವಿದ್ಯಾ­ಸೇ­ವೆಯ ಉದ್ದೇ­ಶ­ದಿಂ­ದಲೇ `ಮೀ­ನಾ­ಕ್ಷಿ­ಹೊಳ್ಳ ವಿದ್ಯಾ ಪ್ರತಿ­ಷ್ಠಾನ'ವನ್ನು ತೆರೆ­ಯ­ಲಾ­ಗಿದೆ. ಆರ್ಥಿಕ ಚೈತನ್ಯ ಇಲ್ಲದ ಮಕ್ಕ­ಳಿಗೆ ಈ ವಿದ್ಯಾ ಪ್ರತಿ­ಷ್ಠಾ­ನದ ಮೂಲಕ ವಿದ್ಯಾ­ದಾನ ಮಾಡ­ಲಾ­ಗು­ತ್ತದೆ. ಆಶ್ರ­ಮದ ಹಿರಿ­ಯರು ಹಾಗೂ ಶಾಲೆಯ ಮಕ್ಕ­ಳನ್ನು ಮೀನಾಕ್ಷಿ ಹೊಳ್ಳ ತಮ್ಮ­ವ­ರಂತೆ ಪ್ರೀತಿ­ಸು­ತ್ತಾರೆ.
ಮುಂದೆಯೂ ಆಶ್ರ­ಮದ ಸೇವೆ ನಿರಂ­ತ­ರ­ವಾಗಿ ನಡೆ­ಯ­ಬೇಕು ಅನ್ನು­ವುದೇ ಮೀನಾಕ್ಷಿ ಹೊಳ್ಳರ ಆಸೆ. ಹಿರಿಯ ಜೀವ­ಗಳ ಬಗ್ಗೆ ಕಾಳಜಿ ಉಳ್ಳ ಯಾರು ಬೇಕಾ­ದರೂ ಈ ಆಶ್ರ­ಮಕ್ಕೆ ತಮ್ಮ ಕೈಲಾದ ಸಹಾಯ ಸಲ್ಲಿ­ಸ­ಬ­ಹುದು. ಕಡೇ ಪಕ್ಷ ಹಿರಿ­ಯ­ರಿಗೆ ಒಂದು ಹೊತ್ತಿನ ಊಟ ಹಾಕಿ­ಸುವ ವ್ಯವ­ಸ್ಥೆ­ಯನ್ನೂ ಮಾಡ­ಬ­ಹುದು.

No comments:

Post a Comment