Sunday, June 21, 2009

ಅಚ್ಯು­ತ­ರಾವ್‌

ಅಚ್ಯು­ತ­ರಾವ್‌ ನಾಡಿಯಲ್ಲಿ ಗಾಂಧಿ ಮಿಡಿತ




1935ರಲ್ಲಿ ಮಹಾತ್ಮ ಗಾಂಧಿ ಮೈಸೂ­ರಿಗೆ ಭೇಟಿ ನೀಡಿ­ದ್ದಾಗ ಬಿ.ಎಸ್‌. ಅಚ್ಯುತ ರಾವ್‌ ಆರೇಳು ವರ್ಷದ ಹುಡುಗ. ಅವರ ತಾಯಿ ತನ್ನ ಮುದ್ದು ಮಗ­ನಿಗೆ ಬಿಳಿಯ ಜುಬ್ಬಾ ಪೈಜಾಮ್‌ ಹಾಕಿಸಿ ಬಾಪು ಕಾರ್ಯ­ಕ್ರ­ಮಕ್ಕೆ ಕರೆ­ದು­ಕೊಂಡು ಹೋಗಿ­ದ್ದರು. ಬಾಪು­ವಿನ ಆಶೀ­ರ್ವಾ­ದ­ಕ್ಕಾಗಿ ಜನ­ಸಾ­ಗ­ರ­ದೊ­ಳಗೆ ನುಸುಳಿ ಮಹಾ­ತ್ಮನ ಕಾರಿನ ಕಿಟ­ಕಿ­ಯೊ­ಳಗೆ ಮಗನ ತಲೆ­ಯನ್ನು ತೂರಿ­ದರು. ಬಾಪು ನಗುತ್ತಾ ಬಾಲ­ಕನ ತಲೆ ನೇವ­ರಿ­ಸಿ­ದರು....!
ಸದ್ಯ ಅಚ್ಯುತ ರಾವ್‌ ಅವ­ರಿಗೆ 80 ವರ್ಷ ವಯಸ್ಸು. ಏಳು ದಶ­ಕ­ಗಳ ಹಿಂದಿನ ಈ ಘಳಿ­ಗೆ­ಯನ್ನು ತಮ್ಮ ಸ್ಮೃತಿಗೆ ತಂದು­ಕೊಂ­ಡಾಗ ಅಚ್ಯು­ತ­ರಾವ್‌ ಮತ್ತೆ ಮಗು­ವಾ­ಗಿ­ಬಿ­ಡು­ತ್ತಾರೆ. ಮೈಯಲ್ಲಿ ವಿದ್ಯುತ್‌ ಸಂಚ­ಲ­ನ­ವಾ­ಗು­ತ್ತದೆ. ರೋಮಾಂ­ಚ­ನ­ಗೊ­ಳ್ಳು­ತ್ತಾರೆ. ಅದು ಸ್ವರ್ಗೀಯ ಕ್ಷಣ. ಆ ಕ್ಷಣ­ದಿಂದ ನನ್ನ ಬದುಕು ಬದ­ಲಾ­ಯಿತು ಎಂದು ಪುಳ­ಕ­ಗೊ­ಳ್ಳು­ತ್ತಾರೆ! ಗಾಂಧಿಜೀ ಸ್ಪರ್ಶದ ಆ ಕ್ಷಣ­ದಿಂದ ಅಚ್ಯುತ ರಾವ್‌ ಅವರ ನರ ನಾಡಿ­ಗ­ಳಲ್ಲಿ ಗಾಂಧಿ, ಗಾಂಧೀ­ಯತೆ ಉಳಿ­ದು­ಕೊಂಡು ಬಂದಿದೆ.
ನಮ್ಮ ನಾಡಿನ ಹಿರಿಯ ಸ್ವಾತಂತ್ರ್ಯ ಹೋರಾ­ಟ­ಗಾ­ರ­ರಲ್ಲಿ ಬಿ.ಎಸ್‌. ಅಚ್ಯು­ತ­ರಾವ್‌ ಕೂಡ ಒಬ್ಬರು. ಸ್ವಾತಂತ್ರ ಭಾರ­ತ­ಕ್ಕಾಗಿ ಜೈಲು­ವಾಸ ಅನು­ಭ­ವಿ­ಸಿ­ರುವ ಅವರು ನಮ್ಮ ಸಮಾ­ಜದ ಹೆಮ್ಮೆಯ ಸಂಪತ್ತು. ಎಂಭತ್ತು ತುಂಬಿ­ರುವ ಅವರು ಇವತ್ತೂ ಪಾದ­ರಸ. ಸರ್ಕಾರಿ ನೌಕ­ರಿ­ಯಿಂದ ನಿವೃ­ತ್ತ­ರಾದ ಮೇಲೆ ಉಪ­ನ್ಯಾಸ ವೃತ್ತಿ ಸ್ವೀಕ­ರಿ­ಸಿದ ಅವರು ವಿದ್ಯಾರ್ಥಿ ಕೋಟಿ­ಯನ್ನೇ ಹೊಂದಿ­ದ್ದಾರೆ. ನಾಡು ನುಡಿಯ ಬಗ್ಗೆ ಅವರು ಹೊಂದಿ­ರುವ ಪ್ರೀತಿ ಸದಾ ಸ್ಮರ­ಣೀಯ. ಐತಿ­ಹಾ­ಸಿಕ ಶಾರ­ದಾ­ವಿ­ಲಾಸ ವಿದ್ಯಾ­ಸಂ­ಸ್ಥೆಯ ಜೊತೆ ಭಾವ­ನಾ­ತ್ಮಕ ಸಂಬಂಧ ಹೊಂದಿ­ರುವ ಅವರು ಆ ಸಂಸ್ಥೆಯ ಹೆಮ್ಮೆ­ಯಾ­ಗಿ­ದ್ದಾರೆ.
1947, ಆಗಸ್ಟ್‌ 15ರಂದು ಭಾರ­ತಕ್ಕೆ ಸ್ವಾತಂತ್ರ್ಯ ದೊರೆ­ತಾಗ ಮೈಸೂರು ರಾಜ್ಯ­ವನ್ನು ಸ್ವಾತಂತ್ರ್ಯ ಭಾರ­ತಕ್ಕೆ ಒಪ್ಪಿ­ಸಲು ಜಯ­ಚಾ­ಮ­ರಾ­ಜೇಂದ್ರ ಒಡೆ­ಯರು ನಿರಾ­ಕ­ರಿ­ಸಿ­ದರು. ಒಡೆ­ಯರ ನಿರ್ಧಾ­ರದ ವಿರುದ್ಧ ಹೋರಾಟ ಆರಂ­ಭ­ವಾ­ಯಿತು. ಮೈಸೂರು ಚಲೋ ಚಳ­ವಳಿ ನಡೆ­ಯಿತು. ಪ್ರತಿ­ಭ­ಟ­ನಾ­ಕಾ­ರರ ಮೇಲೆ ಲಾಠಿ ಪ್ರಹಾ­ರ­ವಾ­ಯಿತು. ಆ ಘಟ­ನೆ­ಯಲ್ಲಿ ಒಬ್ಬ ಶಾಲಾ ಬಾಲಕ ಬಲಿ­ಯಾದ. ಆತನ ಹೆಸರು ರಾಮ­ಸ್ವಾಮಿ. ಆತ ಜೀವ ತೆತ್ತ ಜಾಗ­ವನ್ನು ಇಂದಿಗೂ ರಾಮ­ಸ್ವಾಮಿ ವೃತ್ತ ಎಂದೇ ಕರೆ­ಯ­ಲಾ­ಗು­ತ್ತದೆ.
ಈ ಹೋರಾ­ಟ­ದಲ್ಲಿ ಅಚ್ಯತ ರಾವ್‌ ಕೂಡ ಭಾಗ­ವ­ಹಿ­ಸಿ­ದ್ದರು. ಜೊತೆಗೆ ಅವರ ಸಹೋ­ದ­ರಿ­ಯ­ರಾದ ಮಾಲತಿ, ಸುಮಿತ್ರ ಹಾಗೂ ಇನ್ನಿ­ಬ್ಬರು ಸೋದರ ಸಂಬಂ­ಧಿ­ಕರೂ ಕೂಡ ಪಾಲ್ಗೊಂ­ಡಿ­ದ್ದರು. ದೇಶ­ಪ್ರೇಮ ಇಡೀ ಕುಟುಂ­ಬ­ದ­ಲ್ಲಿತ್ತು.
ಮೈಸೂರು ಚಳ­ವಳಿ ಹೋರಾ­ಟ­ದಲ್ಲಿ ಬಂಧ­ನ­ಕ್ಕೊ­ಳ­ಗಾದ 1200 ಮಂದಿ ಹೋರಾ­ಟ­ಗಾ­ರ­ರಲ್ಲಿ ಅಚ್ಯು­ತ­ರಾವ್‌ ಅವರೂ ಇದ್ದರು. ಏಳು ದಿನ ಕಾರಾ­ಗೃಹ ವಾಸ ಅನು­ಭ­ವಿ­ಸಿ­ದರು. ವಿದ್ಯಾರ್ಥಿ ದೆಸೆ­ಯಲ್ಲೇ ಉತ್ಸಾ­ಹದ ಚಿಲು­ಮೆ­ಯಾ­ಗಿದ್ದ ಅವರು ನಾಡಿ­ಗಾಗಿ ಅರ್ಪ­ಣೆಯ ಮನೋ­ಭಾವ ರಕ್ತ­ದಲೇ ಇತ್ತು. ಈ ಘಟ­ನೆ­ಯಿಂದ ದಿಗ್ಭ್ರ­ಮೆ­ಗೊಂಡ ಒಡೆ­ಯರು ಭಾರ­ತಕ್ಕೆ ಸಾಮ್ರಾಜ್ಯ ನೀಡಲು ನೀಡಲು ಒಪ್ಪಿ­ದರು. ಕೆ.ಸಿ. ರೆಡ್ಡಿ ಮುಖ್ಯ­ಮಂ­ತ್ರಿ­ಯಾ­ದರು. ಅದೆಲ್ಲಾ ಇತಿ­ಹಾಸ.
ಅಚ್ಯು­ತ­ರಾವ್‌ ರೆಲ್ವೆ ಇಲಾ­ಖೆ­ಯಲ್ಲಿ ನೌಕರಿ ಮಾಡು­ತ್ತಿ­ದ್ದ­ವರು. ಅವರು ಕೆಲಸ ಮಾಡಿದ ಜಾಗ­ದ­ಲ್ಲೆಲ್ಲಾ ತಮ್ಮ ಪ್ರತಿ­ಭೆಯ ಪರಿ­ಮಳ ಬೀರಿ­ದ್ದಾರೆ. 1952ರಲ್ಲಿ ಹುಬ್ಬ­ಳ್ಳಿ­ಯಲ್ಲಿ ಇಲಾ­ಖೆಗೆ ಸೇರಿದ ಅವರು 1953ರಲ್ಲಿ ಮದ್ರಾ­ಸ್‌ಗೆ ವರ್ಗಾ­ವ­ಣೆ­ಗೊಂ­ಡರು. ಕನ್ನಡ ಭಾಷೆಯ ಮೇಲೆ ಅತೀವ ಪ್ರೀತಿ ಹೊಂದಿ­ರುವ ಅಚ್ಯು­ತ­ರಾವ್‌ ಮದ್ರಾ­ಸ್‌­ನಲ್ಲಿ ಕನ್ನಡ ಸಂಘ ಕಟ್ಟಿ­ದರು. ಸಂಘ ಇವ­ರಿದ್ದ ಕೊಠ­ಡಿ­ಯಿಂ­ದಲೇ ಆರಂ­ಭ­ವಾ­ಯಿತು.
ನಂತರ ಆಂದ್ರ­ಪ್ರ­ದೇ­ಶದ ಗುತ್ತಿ ಎಂಬ­ಲ್ಲಿಗೆ ವರ್ಗಾ­ವ­ಣೆ­ಗೊಂ­ಡರು. ಈ ನಡುವೆ ಬೆಂಗ­ಳೂ­ರಿನ ಯಲ­ಹಂಕ ಘಟ­ಕ­ದಲ್ಲೂ ಸೇವೆ ಸಲ್ಲಿ­ಸಿ­ದರು. ಮತ್ತೆ ಮದ್ರಾಸ್‌ ವರ್ಗಾ­ವ­ಣೆ­ಗೊಂ­ಡರು. ಅಷ್ಟೊ­ತ್ತಿ­ಗಾ­ಗಲೇ ತಾವು ಕಟ್ಟಿ ಬೆಳೆ­ಸಿದ್ದ ಕನ್ನಡ ಸಂಘ ೃಹ­ದಾ­ಕಾ­ರ­ವಾಗಿ ಬೆಳೆ­ದಿತ್ತು. ಕನ್ನಡ ಸಂಘ­ದಿಂದ ಕೇಂದ್ರಿಯ ಶಾಲೆ ಆರಂ­ಭ­ಗೊಂ­ಡಿತ್ತು. ಕನ್ನಡ ಸಂಘ ಕಟ್ಟು­ವಲ್ಲಿ ಪ್ರಮುಖ ಪಾತ್ರ ವಹಿ­ಸಿದ ಅಚ್ಯುತ ರಾವ್‌ ಸಂಸ್ಥಾ­ಪಕ ಸದ­ಸ್ಯ­ರಾಗಿ ಅಪಾರ ಮನ್ನಣೆ ಗಳಿ­ಸಿ­ದರು.
ರೈಲ್ವೆ ಇಲಾ­ಖೆ­ಯಿಂದ ನಿವೃ­ತ್ತ­ರಾದ ಮೇಲೆ ಅವರ ವೃತ್ತಿ ಬದುಕು ಮುಗಿ­ಯ­ಲಿಲ್ಲ. ಬಹುಶಃ ಆಗಲೇ ಆರಂ­ಭ­ವಾ­ಯಿತು ಎನ್ನ­ಬ­ಹುದು. ಮೈಸೂ­ರಿಗೆ ಹಿಂದು­ರಿಗಿ ಬಂದ ಮೇಲೆ ಆ ಇಳಿ ವಯ­ಸ್ಸಿ­ನಲ್ಲಿ ಇಂಗ್ಲಿಷ್‌ ಮತ್ತು ಸಮಾಜ ಶಾಸ್ತ್ರ­ಗ­ಳಲ್ಲಿ ಸ್ನಾತ­ಕೋ­ತ್ತರ ಪದವಿ ಪಡೆ­ದರು. ಶಾರದ ವಿಲಾಸ ವಿದ್ಯಾ­ಸಂಸ್ಥೆ ಕೈ ಬೀಸಿ ಕರೆ­ಯಿತು. ವಿಜ್ಞಾನ ಕಾಲೇ­ಜಿ­ನಲ್ಲಿ ಇಂಗ್ಲಿಷ್‌ ಉಪ­ನ್ಯಾ­ಸ­ಕ­ರಾಗಿ ನೇಮ­ಕ­ಗೊಂ­ಡರು. ಬಿಇಡಿ ಕಾಲೇ­ಜಿ­ನಲ್ಲೂ ಕೆಲಸ ಮಾಡಿ­ದರು. ಸದ್ಯಕ್ಕೆ ಕಾನೂನು ಕಾಲೇ­ಜಿ­ನಲ್ಲಿ ಪ್ರಾಧ್ಯಾ­ಪ­ಕ­ರಾಗಿ ಕೆಲಸ ನಿರ್ವ­ಹಿ­ಸು­ತ್ತಿ­ದ್ದಾರೆ.
ಅಚ್ಯು­ತ­ರಾವ್‌ ದಣಿ­ವಾ­ಗದ ಪ್ರಾದ್ಯಾ­ಪಕ. ಸದಾ ವಿದ್ಯಾ­ರ್ಥಿ­ಗಳ ಜೊತೆ ಒಂದಲ್ಲಾ ಒಂದು ಕಾರ್ಯ­ಚ­ಟು­ವ­ಟಿ­ಕೆ­ಗ­ಳಲ್ಲಿ ತೊಡ­ಗಿ­ಕೊಂಡು ವಿದಾ­ರ್ಥಿಯೇ ಆಗಿ­ಬಿ­ಡು­ತ್ತಾರೆ. ಶಾರದಾ ವಿಲಾಸ ವಿದ್ಯಾ­ಸಂ­ಸ್ಥೆರ ಎಲ್ಲಾ ಕಾರ್ಯ­ಕ್ರ­ಮ­ಗ­ಳಲ್ಲಿ ಅಚ್ಯು­ತ­ರಾವ್‌ ಭಾಗ­ವ­ಹಿ­ಸು­ತ್ತಾರೆ. ಸ್ವತಂತ್ರ ಸಂಗ್ರಾ­ಮದ ಹಲವು ಘಟ­ನೆ­ಗಳ ಕಿರು­ನಾ­ಟ­ಕ­ಗ­ಳನ್ನು ರಚಿಸಿ ವಿದ್ಯಾ­ರ್ಥಿ­ಗ­ಳಿಗೆ ನಿರ್ದೇ­ಶಿ­ಸಿ­ದ್ದಾರೆ.
ಅಚ್ಯು­ತ­ರಾವ್‌ ಅವರು ಬರ­ವ­ಣಿ­ಗೆ­ಯಲ್ಲೂ ತಮ್ಮ ಪ್ರತಿಭೆ ತೋರಿ­ಸಿ­ದ್ದಾರೆ. ಕವನ, ಕಿರು­ನಾ­ಟಕ, ಭಾವ­ಗೀ­ತೆ­ಗ­ಳನ್ನು ರಚಿ­ಸಿ­ದ್ದಾರೆ. ಅವರು ಹಲವು ಗೌರವ ಪ್ರಶ­ಸ್ತಿ­ಗ­ಳಿಗೆ ಪಾತ್ರ­ರಾ­ಗಿ­ದ್ದಾರೆ. ಕಾವ್ಯಶ್ರೀ ಪ್ರಶಸ್ತಿ ಅವರ ಮುಡಿ­ಗೇ­ರಿದೆ. ಕಳೆದ ಬಾರಿಯ ಸ್ವತಂ­ತ್ರ್ಯೋ­ತ್ಸ­ವ­ದಲ್ಲಿ ಕರ್ನಾ­ಟಕ ಸರ್ಕಾರ ಸನ್ಮಾ­ನಿ­ಸಿದೆ. ಹಲವು ಸಂಘ­ಸಂ­ಸ್ಥೆ­ಗಳು ಅವ­ರನ್ನು ಗೌರ­ವಿ­ಸಿವೆ.
ಅಚ್ಯು­ತ­ರಾವ್‌ ನಿಜಕ್ಕೂ ಅಸ­ಮಾನ್ಯ ಸಾಧ­ಕರು. ಅವರು ನಡೆದು ಬಂದ ಹಾದಿ­ಯಲ್ಲಿ ಅಪಾರ ಮಹ­ತ್ವ­ಪೂರ್ಣ ಮೈಲು­ಗ­ಲ್ಲು­ಗ­ಳಿವೆ. ಅವು ಕಿರಿ­ಯ­ರಿಗೆ ಸ್ಪೂರ್ತಿ­ಯಾ­ಗಿವೆ.. ಙ

No comments:

Post a Comment