
`ಹಳೆಮನೆ' ಆನ್ಲೈನ್ನಲ್ಲಿ ಕನ್ನಡ ಪಾಠ
ಲಿಂಗದೇವರು ಹಳೇಮನೆ. ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಚಿತ ಹೆಸರು. ಪ್ರಾಧ್ಯಾಪಕ, ಚಿಂತಕ, ವಿಮರ್ಷಕ, ಸಂಶೋಧಕ, ನಾಟಕಕಾರ ಹೀಗೆ ಅವರು ವಿವಿಧ ನೆಲೆಗಳಲ್ಲಿ ಕ್ರಿಯಾಶೀಲರು. ಕೇಂದ್ರೀಯ ಭಾಷಾ ಸಂಸ್ಥಾನದಲ್ಲಿ ಮೂರು ದಶಕಗಳಿಂದ ಪ್ರಾಧ್ಯಾಪಕರಾಗಿ ಅವರು ಸವೆಸಿದ ಹಾದಿ ವಿಶಿಷ್ಟವಾದುದು.
ಕನ್ನಡ ಸಾಹಿತ್ಯ, ರಂಗಭೂಮಿ ಕುರಿತಂತೆ ಗಂಟೆಗಟ್ಟಲೆ ಮಾತನಾಡುವ ಹಳೆಮನೆ ಮಾಹಿತಿಯ ಮೂಟೆ. ಕನ್ನಡವನ್ನು ದ್ವಿತೀಯ ಭಾಷೆಯಾಗಿ ಕೇಂದ್ರೀಯ ಭಾಷಾ ಸಂಸ್ಥಾನದಲ್ಲಿ ಬೋಧಿಸುತ್ತಿರುವ ಅವರು ಮಂಡಿಸಿರುವ ಸಂಶೋಧನಾ ಪ್ರಬಂಧಗಳಿಗೆ ಲೆಕ್ಕವಿಲ್ಲ.
ವಚನ ಸಾಹಿತ್ಯದ ವಿಭಿನ್ನ ದೃಷ್ಟಿಕೋನ, ಕನ್ನಡ ನಾಟಕಗಳಲ್ಲಿ ಭಾಷೆ, ಭಾರತದಲ್ಲಿ ಸ್ತ್ರೀ ಸಾಕ್ಷರತೆ, ಉದ್ಯಮವಾಗಿ ರಂಗಭೂಮಿ ಇಂತಹ ಹಲವು ವಿಚಾರ ಕುರಿತಂತೆ ಮಂಡಿಸಿರುವ ಪ್ರಬಂಧಗಳು ವಿಶೇಷವಾಗಿವೆ.
ನಾಟಕಕಾರರಾಗಿ ಹಳೆಮನೆಯವರು ಹೊರತಂದಿರುವ ಹಲವು ರಂಗಕೃತಿಗಳು ಕನ್ನಡ ರಂಗಭೂಮಿಯ ಆಸ್ತಿಯಾಗಿವೆ. ಹೈದರ್, ಚಿಕ್ಕದೇವ ಭೂಪ, ಧರ್ಮಪುರಿ ದೇವದಾಸ, ಬಿರುದಂತೆಂಬರ ಗಂಡ ಇವು ಹಳೆಮನೆಯವರ ಪ್ರಮುಖ ಕೃತಿಗಳು. ಬಹುತೇಕ ಕರ್ನಾಟಕದ ಎಲ್ಲಾ ವಿಶ್ವವಿದ್ಯಾಲಯಗಳಲ್ಲೂ ಹಳೆಮನೆಯವರ ಕೃತಿಗಳು ಪಠ್ಯವಾಗಿವೆ. ವಿಮರ್ಷಕರಾಗಿ, ಹಲವು ಪತ್ರಿಕೆಗಳ ಅಂಕಣಕಾರರಾಗಿ ತಮ್ಮದೇ ಆದ ಓದುಗ ವರ್ಗವನ್ನು ಸೃಸ್ಟಿಸಿಕೊಂಡಿದ್ದಾರೆ.
ಪ್ರಸ್ತುತ ಭಾರತ ಸರ್ಕಾರದ ಮಾನವ ಸಂಪನ್ಮೂಲ ಸಚಿವಾಲಯದ ಸಹಯೋಗದಲ್ಲಿ ಕನ್ನಡ ಭಾಷೆಯನ್ನು ಆನ್ಲೈನ್ ಕಾರ್ಯಕ್ರಮವಾಗಿ ವಿನ್ಯಾಸಗೊಳಿಸಿ ವಿಶ್ವದಾದ್ಯಂತ ಹರಡಿರುವ ಕನ್ನಡ ಪ್ರಿಯರಿಗೆ ಬೋಧನೆ ಮಾಡುತ್ತಿದ್ದಾರೆ.
ಈಗ ಉದಯವಾಣಿ ಜೊತೆ ಹಳೆಮನೆ ಅವರ ಮಾತುಕತೆ.
* ಆನ್ಲೈನ್ ಕನ್ನಡ ಕಲಿಕೆಯ ರೂಪುರೇಷೆಗಳೇನು?
ಜಾಗತಿಕ ಹಳ್ಳಿ ಪರಿಕಲ್ಪನೆ ಭಾಷೆಯನ್ನೂ ಬಿಟ್ಟಿಲ್ಲ. ಜಗತ್ತಿನ ವಿವಿಧ ಮೂಲೆಗಳಲ್ಲಿ ಕನ್ನಡಿಗರಿದ್ದಾರೆ. ಅವರು ದೇಶ ಬಿಟ್ಟಿದ್ದರೂ, ಭಾಷೆ ಅವರನ್ನು ಬಿಟ್ಟಿಲ್ಲ. ಅವರಿಗೆ ಇರುವ ಒತ್ತಡದೊಳಗೆ ತಮ್ಮ ಮಕ್ಕಳಿಗೆ ಕನ್ನಡ ಕಲಿಸುವ ಒಂದು ಮಾಧ್ಯಮದ ಅವಶ್ಯಕತೆ ಇದೆ. ಅಲ್ಲದೆ ಬಹುರಾಷ್ಟ್ರೀಯ ಕಂಪನಿಗಳ ಜೊತೆಗೆ ಅಸಂಖ್ಯಾತ ವಿದೇಶಿಯರು, ಪರ ರಾಜ್ಯದವರು ಕರ್ನಾಟಕಕ್ಕೆ ಬಂದು ಇಲ್ಲಿಯೇ ನೆಲೆಸುತಿದ್ದಾರೆ. ಕನ್ನಡ ಭಾಷೆಯನ್ನು ಕಲಿಯುವುದು ಅವರಿಗೆ ಅನಿವಾರ್ಯವಾಗಿದೆ. ಈ ಉದ್ದೇಶ ಈಡೇರಿಕೆಗೆ ಆನ್ಲ್ಕ್ರೆನ್ ಕನ್ನಡ ಕಲಿಕೆ ಕಾರ್ಯಕ್ರಮ ನೆರವಾಗಲಿದೆ.
* ಕಾರ್ಯಕ್ರಮದ ವಿನ್ಯಾಸ ಯಾವ ರೀತಿ ಇದೆ?
ಆಸಕ್ತರು ತಮ್ಮ ಹೆಸರನ್ನು ನೋಂದಣಿ ಮಾಡಿಸಬೇಕು. ನೋಂದಾಯಿತರಿಗೆ ಗುರುತಿನ ಚೀಟಿ ನೀಡಲಾಗುವುದು. ಬೋಧಿಸಲಾಗುವ ಪಾಠಗಳನ್ನು 10 ಅಧ್ಯಾಯಗಳಲ್ಲಿ ವಿಭಾಗಿಸಲಾಗಿದೆ. ಆರಂಭದ ಮೂರು ಅಧ್ಯಾಯಗಳಲ್ಲಿ ಕರ್ನಾಟಕ ಅಂದರೇನು, ಅದರ ಇತಿಹಾಸ, ಸಂಸ್ಕೃತಿ, ಪರಂಪರೆ ಕುರಿತಾದ ಮಾಹಿತಿ ನೀಡಲಾಗುವುದು. ನಂತರದ ಏಳು ಅಧ್ಯಾಯಗಳಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಾಹಿತಿಗಳು ಮುಂತಾದ ಮಾಹಿತಿಯಿದೆ. ಅದರೊಂದಿಗೆ ಕನ್ನಡ ನಿಘಂಟನ್ನು ಕೂಡ ಆನ್ಲೈನ್ನಲ್ಲೇ ವಿನ್ಯಾಸಗೊಳಿಸಲಾಗಿದೆ.
ಆಸಕ್ತರು ತಮ್ಮ ಹೆಸರನ್ನು ನೋಂದಣಿ ಮಾಡಿಸಬೇಕು. ನೋಂದಾಯಿತರಿಗೆ ಗುರುತಿನ ಚೀಟಿ ನೀಡಲಾಗುವುದು. ಬೋಧಿಸಲಾಗುವ ಪಾಠಗಳನ್ನು 10 ಅಧ್ಯಾಯಗಳಲ್ಲಿ ವಿಭಾಗಿಸಲಾಗಿದೆ. ಆರಂಭದ ಮೂರು ಅಧ್ಯಾಯಗಳಲ್ಲಿ ಕರ್ನಾಟಕ ಅಂದರೇನು, ಅದರ ಇತಿಹಾಸ, ಸಂಸ್ಕೃತಿ, ಪರಂಪರೆ ಕುರಿತಾದ ಮಾಹಿತಿ ನೀಡಲಾಗುವುದು. ನಂತರದ ಏಳು ಅಧ್ಯಾಯಗಳಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಾಹಿತಿಗಳು ಮುಂತಾದ ಮಾಹಿತಿಯಿದೆ. ಅದರೊಂದಿಗೆ ಕನ್ನಡ ನಿಘಂಟನ್ನು ಕೂಡ ಆನ್ಲೈನ್ನಲ್ಲೇ ವಿನ್ಯಾಸಗೊಳಿಸಲಾಗಿದೆ.
* ಈ ಕಾರ್ಯಕ್ರಮದಲ್ಲಿ ಪರೀಕ್ಷೆಗಳೇನಾದರೂ ಇರುತ್ತವೆಯೇ?
ಖಂಡಿತಾ ಇದೆ. ಕೋರ್ಸ್ನ ಒಟ್ಟಾರೆ ಅವಧಿ ಎರಡು ವರ್ಷ (24 ತಿಂಗಳು). 18 ತಿಂಗಳ ನಂತರ ಪರೀಕ್ಷೆ ತೆಗೆದುಕೊಳ್ಳಬಹುದು. ಇದಕ್ಕೆ ಸರ್ಟಿಫಿಕೇಟ್ ಕೂಡ ನೀಡಲಾಗುವುದು.
ಖಂಡಿತಾ ಇದೆ. ಕೋರ್ಸ್ನ ಒಟ್ಟಾರೆ ಅವಧಿ ಎರಡು ವರ್ಷ (24 ತಿಂಗಳು). 18 ತಿಂಗಳ ನಂತರ ಪರೀಕ್ಷೆ ತೆಗೆದುಕೊಳ್ಳಬಹುದು. ಇದಕ್ಕೆ ಸರ್ಟಿಫಿಕೇಟ್ ಕೂಡ ನೀಡಲಾಗುವುದು.
* ಕೋರ್ಸ್ಗೆ ಎಷ್ಟು ಶುಲ್ಕ ನಿಗದಿ ಮಾಡಿದ್ದೀರಿ?
ನಾಮಮಾತ್ರ ಶುಲ್ಕ. ಅಭ್ಯರ್ಥಿಗೆ 500 ರೂ. ಮಾತ್ರ. ಪರೀಕ್ಷೆ ತೆಗೆದುಕೊಳ್ಳಲು ಇಚ್ಛಿಸುವ ಅಭ್ಯರ್ಥಿ ಪ್ರತ್ಯೇಕ 500 ರೂ. ಪರೀಕ್ಷಾ ಶುಲ್ಕ ಪಾವತಿಸಬೇಕು.
ನಾಮಮಾತ್ರ ಶುಲ್ಕ. ಅಭ್ಯರ್ಥಿಗೆ 500 ರೂ. ಮಾತ್ರ. ಪರೀಕ್ಷೆ ತೆಗೆದುಕೊಳ್ಳಲು ಇಚ್ಛಿಸುವ ಅಭ್ಯರ್ಥಿ ಪ್ರತ್ಯೇಕ 500 ರೂ. ಪರೀಕ್ಷಾ ಶುಲ್ಕ ಪಾವತಿಸಬೇಕು.
* ತಾವು ಇತ್ತೀಚೆಗೆ ಹೊಸದಾಗಿ ಏನಾದರೂ ಬರೆದಿದ್ದೀರಾ?
ಬರವಣಿಗೆ ಸಾಗುತ್ತಿದೆ. `ಗುಡಿಯಂಕ ಕುಡಿಮುದ್ದ' ಎಂಬ ರಂಗಕೃತಿಯ ಬರವಣಿಗೆ ಸಾಗಿದ್ದು, ರೀ ರೈಟ್ ಮಾಡಿದರೆ ಮುಗಿಯುತ್ತದೆ. ಅದು ಬಿಟ್ಟರೆ ರಾಮಚಂದ್ರ ಶರ್ಮ ಅವರ ಬಗ್ಗೆ ಒಂದು ಕೃತಿ ಪ್ರಕಟವಾಯಿತು. ನನ್ನ ಬೇರೆ ಒತ್ತಡಗಳಲ್ಲಿ ಬರವಣಿಗೆ ಕಡಿಮೆಯಾಗಿದೆ.
ಬರವಣಿಗೆ ಸಾಗುತ್ತಿದೆ. `ಗುಡಿಯಂಕ ಕುಡಿಮುದ್ದ' ಎಂಬ ರಂಗಕೃತಿಯ ಬರವಣಿಗೆ ಸಾಗಿದ್ದು, ರೀ ರೈಟ್ ಮಾಡಿದರೆ ಮುಗಿಯುತ್ತದೆ. ಅದು ಬಿಟ್ಟರೆ ರಾಮಚಂದ್ರ ಶರ್ಮ ಅವರ ಬಗ್ಗೆ ಒಂದು ಕೃತಿ ಪ್ರಕಟವಾಯಿತು. ನನ್ನ ಬೇರೆ ಒತ್ತಡಗಳಲ್ಲಿ ಬರವಣಿಗೆ ಕಡಿಮೆಯಾಗಿದೆ.
* ರಂಗಭೂಮಿ ಒಂದು ಉದ್ಯಮ ಎಂದು ಹೇಗೆ ಸಮರ್ಥಿಸುತ್ತೀರಿ?
ಮೂಲತಃ ರಂಗಭೂಮಿ ಉದ್ಯಮವೇ ಆಗಿತ್ತು. ಪಾರ್ಸಿ ವೃತ್ತಿ ನಿರತ ನಾಟಕ ಕಂಪನಿಗಳಿದ್ದವು. ಉದ್ಯಮದ ರೀತಿಯಲ್ಲಿಯೇ ನೋಂದಣಿ ಮಾಡಿಸಲಾಗುತಿತ್ತು. ಲಾಭ ನಷ್ಟಗಳಿಗೆ ಮಹತ್ವ ನೀಡಲಾಗುತಿತ್ತು. ಕರ್ನಾಟಕದಲ್ಲಿಯೂ ಕೂಡ ಅಂತಹ ಕಂಪನಿಗಳಿದ್ದವು. ಕ್ರಮೇಣ ಹವ್ಯಾಸಿ ಎನ್ನುವ ಪರಿಕಲ್ಪನೆ ಹುಟ್ಟಿಕೊಂಡಿತು. ಹವ್ಯಾಸಿಗಳು ಹಣಕ್ಕಿಂತ ಹೆಚ್ಚಾಗಿ ಪ್ರಯೋಗಕ್ಕೆ ಮಹತ್ವ ನೀಡಿದರು.
ನನ್ನ ವಾದವೇನೆಂದರೆ ಸರ್ಕಾ ರಂಗಭೂಮಿಯನ್ನು ಉದ್ಯಮ ಎಂದು ಪರಿಗಣಿಸಿ ತನ್ನ ಆಯವ್ಯಯದಲ್ಲಿ ಇಂತಿಷ್ಟು ಎಂದು ಹಣ ಮೀಸಲಿಡಬೇಕು. ಯೂರೋಪಿನ ದೇಶಗಳಲ್ಲಿ ಈ ಕೆಲಸ ನಡೆಯುತ್ತಿದೆ. ಅಲ್ಲಿ ನಾಟಕ ಉದ್ಯಮ ಸ್ಥಾಪಿಸುವ ಸಾಹಸಿಗೆ ಸರ್ಕಾರ ಸಬ್ಸಿಡಿ, ಸಾಲ ನೀಡುತ್ತದೆ.
ಮೂಲತಃ ರಂಗಭೂಮಿ ಉದ್ಯಮವೇ ಆಗಿತ್ತು. ಪಾರ್ಸಿ ವೃತ್ತಿ ನಿರತ ನಾಟಕ ಕಂಪನಿಗಳಿದ್ದವು. ಉದ್ಯಮದ ರೀತಿಯಲ್ಲಿಯೇ ನೋಂದಣಿ ಮಾಡಿಸಲಾಗುತಿತ್ತು. ಲಾಭ ನಷ್ಟಗಳಿಗೆ ಮಹತ್ವ ನೀಡಲಾಗುತಿತ್ತು. ಕರ್ನಾಟಕದಲ್ಲಿಯೂ ಕೂಡ ಅಂತಹ ಕಂಪನಿಗಳಿದ್ದವು. ಕ್ರಮೇಣ ಹವ್ಯಾಸಿ ಎನ್ನುವ ಪರಿಕಲ್ಪನೆ ಹುಟ್ಟಿಕೊಂಡಿತು. ಹವ್ಯಾಸಿಗಳು ಹಣಕ್ಕಿಂತ ಹೆಚ್ಚಾಗಿ ಪ್ರಯೋಗಕ್ಕೆ ಮಹತ್ವ ನೀಡಿದರು.
ನನ್ನ ವಾದವೇನೆಂದರೆ ಸರ್ಕಾ ರಂಗಭೂಮಿಯನ್ನು ಉದ್ಯಮ ಎಂದು ಪರಿಗಣಿಸಿ ತನ್ನ ಆಯವ್ಯಯದಲ್ಲಿ ಇಂತಿಷ್ಟು ಎಂದು ಹಣ ಮೀಸಲಿಡಬೇಕು. ಯೂರೋಪಿನ ದೇಶಗಳಲ್ಲಿ ಈ ಕೆಲಸ ನಡೆಯುತ್ತಿದೆ. ಅಲ್ಲಿ ನಾಟಕ ಉದ್ಯಮ ಸ್ಥಾಪಿಸುವ ಸಾಹಸಿಗೆ ಸರ್ಕಾರ ಸಬ್ಸಿಡಿ, ಸಾಲ ನೀಡುತ್ತದೆ.
* ಸ್ತ್ರೀ ಸಾಕ್ಷರತೆ ಕುರಿತ ನಿಮ್ಮ ಪ್ರಬಂಧಗಳು ಪ್ರಸಿದ್ಧಿಯಾಗಿವೆ. ಅದರ ಬಗ್ಗೆ ಹೇಳಿ?
ಸ್ತ್ರೀ ಕಲಿಯದ ಹೊರೆತು ನಾಗರಿಕ ಸಮಾಜವನ್ನು ಊಹಿಸಿಕೊಳ್ಳಲಾಗದು. ಬಿಹಾರದ ಸ್ತ್ರೀ ಸಾಕ್ಷರತೆಯನ್ನು ಗಮನಿಸಿದರೆ ಭಯವಾಗುತ್ತದೆ. ಉತ್ತರ ಕರ್ನಾಟಕದ ರಾಯಚೂರು, ವಿಜಾಪುರ ಜಿಲ್ಲೆಗಳಲ್ಲಿ ಸಾಕ್ಷರತೆ ಪ್ರಮಾಣ ಶೇ. 23ಕ್ಕಿಂತಲೂ ಕಡಿಮೆ ಇದೆ. ಇತ್ತೀಚೆಗೆ ಸ್ತ್ರೀ ಸಂಘಟನೆಗಳು ಸಾಕ್ಷರತೆಯ ಬಗ್ಗೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಬಹಳ ಚೆನ್ನಾಗಿವೆ.
ಸ್ತ್ರೀ ಕಲಿಯದ ಹೊರೆತು ನಾಗರಿಕ ಸಮಾಜವನ್ನು ಊಹಿಸಿಕೊಳ್ಳಲಾಗದು. ಬಿಹಾರದ ಸ್ತ್ರೀ ಸಾಕ್ಷರತೆಯನ್ನು ಗಮನಿಸಿದರೆ ಭಯವಾಗುತ್ತದೆ. ಉತ್ತರ ಕರ್ನಾಟಕದ ರಾಯಚೂರು, ವಿಜಾಪುರ ಜಿಲ್ಲೆಗಳಲ್ಲಿ ಸಾಕ್ಷರತೆ ಪ್ರಮಾಣ ಶೇ. 23ಕ್ಕಿಂತಲೂ ಕಡಿಮೆ ಇದೆ. ಇತ್ತೀಚೆಗೆ ಸ್ತ್ರೀ ಸಂಘಟನೆಗಳು ಸಾಕ್ಷರತೆಯ ಬಗ್ಗೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಬಹಳ ಚೆನ್ನಾಗಿವೆ.
* ರಾಜ್ಯಾದ್ಯಂತ ಕಾವೇರಿ ಚಳವಳಿಗೆ ಕಾವೇರಿದೆ. ಒಬ್ಬ ಸಾಹಿತಿಯಾಗಿ ಈ ಚಳವಳಿಗೆ ತಮ್ಮ ಸ್ವಂದನೆ ಏನು?
ನನಗೆ ನಿಜಕ್ಕೂ ಆಶ್ವರ್ಯವೆನಿಸುತ್ತಿದೆ. ಈ ಐತಿಹಾಸಿಕ ಸಮಸ್ಯೆಯ ತೀರ್ಪಿನಿಂದ ಕನ್ನಡಿಗರಿಗೆ ಅನ್ಯಾಯವಾಗಿದ್ದರೂ ಯಾವ ಅಹಿತಕರ ಘಟನೆಗಳಿಗೂ ಆಸ್ಪದ ಕೊಡದೆ ಶಾಂತಿಯುವ ಚಳವಳಿ ನಡೆಸುತ್ತಿರುವು ಇಡೀ ರಾಷ್ಟ್ರಕ್ಕೆ ಮಾದರಿ. ನಮ್ಮವರ ತಾಳ್ಮೆ ನಿಜಕ್ಕೂ ಮೆಚ್ಚುವಂತದ್ದು. ನಮ್ಮ ನ್ಯಾಯವಾದಿಗಳು, ಸಂಸದರು ಕರ್ನಾಟಕವನ್ನು ಪ್ರತಿನಿಧಿಸುವಲ್ಲಿ ಎಡವಿದ್ದಾರೆ. ಒಬ್ಬ ಸಾಹಿತಿಯಾಗಿ ಈ ಅನ್ಯಾಯದ ತೀರ್ಪನ್ನು ಖಂಡಿಸುತ್ತೇನೆ.
ನನಗೆ ನಿಜಕ್ಕೂ ಆಶ್ವರ್ಯವೆನಿಸುತ್ತಿದೆ. ಈ ಐತಿಹಾಸಿಕ ಸಮಸ್ಯೆಯ ತೀರ್ಪಿನಿಂದ ಕನ್ನಡಿಗರಿಗೆ ಅನ್ಯಾಯವಾಗಿದ್ದರೂ ಯಾವ ಅಹಿತಕರ ಘಟನೆಗಳಿಗೂ ಆಸ್ಪದ ಕೊಡದೆ ಶಾಂತಿಯುವ ಚಳವಳಿ ನಡೆಸುತ್ತಿರುವು ಇಡೀ ರಾಷ್ಟ್ರಕ್ಕೆ ಮಾದರಿ. ನಮ್ಮವರ ತಾಳ್ಮೆ ನಿಜಕ್ಕೂ ಮೆಚ್ಚುವಂತದ್ದು. ನಮ್ಮ ನ್ಯಾಯವಾದಿಗಳು, ಸಂಸದರು ಕರ್ನಾಟಕವನ್ನು ಪ್ರತಿನಿಧಿಸುವಲ್ಲಿ ಎಡವಿದ್ದಾರೆ. ಒಬ್ಬ ಸಾಹಿತಿಯಾಗಿ ಈ ಅನ್ಯಾಯದ ತೀರ್ಪನ್ನು ಖಂಡಿಸುತ್ತೇನೆ.
No comments:
Post a Comment