Wednesday, June 24, 2009

ವಿದ್ವಾನ್ ಮೈಸೂರು ವಿ. ಅಂಬಾ­ಪ್ರ­ಸಾದ್‌



ನಾದ­ಯೋಗಿ ಮೈಸೂರು ವಿ. ಅಂಬಾ­ಪ್ರ­ಸಾದ್‌


ಅದು ಅಂಬಾ­ಸ­ದನ. ಅಗ್ರ­ಹಾ­ರದ ಬಸ­ವೇ­ಶ್ವರ ರಸ್ತೆ­ಯ­ಲ್ಲಿದೆ. ನೂರೊಂದು ಗಣ­ಪತಿ ದೇವಾ­ಲ­ಯಕ್ಕೆ ಸಮೀಪ. ಆ ಜಾಗ­ದಲ್ಲಿ ಒಂದು ಭಾವ­ನಾ­ತ್ಮಕ ಸೆಳೆ­ತ­ವಿದೆ. ಸದ­ನದ ಒಂದಿಚೂ ಜಾಗ­ವನ್ನೂ ಖಾಲಿ ಬಿಟ್ಟಿಲ್ಲ. ಕಬ್ಬಿ­ಣದ ಸರ­ಳು­ಗ­ಳಿಂದ ಬಂಧಿ­ಸ­ಲ್ಪ­ಟ್ಟಿದೆ. ಆದರೆ ಅಲ್ಲಿಯ ಪರಿ­ಮಳ ಸರ­ಳು­ಗ­ಳಿಂದ ತೂರು ಬಂದು ಎಲ್ಲರ ಹೃದಯ ತಟ್ಟಿದೆ. ಅಲ್ಲಿ ಹೋದ­ವ­ರಿಗೆ ದೇವಾ­ಲ­ಯಕ್ಕೆ ಹೋದ ಅನು­ಭವ ಸಿಗು­ತ್ತದೆ. ಆದರೆ ಅದು ದೇವಾ­ಲ­ಯ­ವಲ್ಲ. ಸಂಗೀ­ತ­ವನ್ನು ಆರಾ­ಧಿ­ಸುವ ಒಂದು ಕುಟುಂಬ.
ಅದು ಖ್ಯಾತ ಪಿಟೀಲು ಕಲಾ­ವಿದ ನಾದ­ಯೋಗಿ ಮೈಸೂರು ವಿ. ಅಂಬಾ­ಪ್ರ­ಸಾದ್‌ ಅವರ ಬ್ರಮ­ರಾಂಭ ಸಂಗೀತ ವಿದ್ಯಾ­ಲಯ. ತಳ ಮಹ­ಡಿ­ಯಲ್ಲಿ ಕುಟುಂಬ. ಮೊದಲ ಮಹ­ಡಿ­ಯಲ್ಲಿ ಸಂಗೀತ ವಿದ್ಯಾ­ಲಯ. ಮೇಲಿನ ಮಹ­ಡಿ­ಯಲ್ಲಿ ದಿವ್ಯ ಸಭಾಂ­ಗಣ. ಅದನ್ನು ಅಂಬಾ­ಸ­ದನ ಎಂದೇ ಕರೆ­ಯ­ಲಾ­ಗು­ತ್ತದೆ.
ಅವರ ಮನೆ ತುಂಬೆಲ್ಲಾ ಸಂಗೀತ. ಮನೆ­ಯಲ್ಲಿ ಇರು­ವ­ವ­ರೆಲ್ಲಾ ಸಂಗೀ­ತ­ಗಾ­ರರು. ಪ್ರತಿ­ಕ್ಷಣ ಅಲ್ಲಿ ವಿದ್ಯಾ­ದಾನ ತಡೆ­ಯಿ­ಲ್ಲದೆ ನಡೆ­ಯು­ತ್ತದೆ. ಸಂಗೀತ, ಭಜನೆ, ಸಂಸ್ಕೃತ ಹೀಗೆ ಹಲ­ವಾರು ವಿಭಾ­ಗ­ಗಳ ಪಾಠ­ಗಳು ನಡೆ­ಯು­ತ್ತವೆ. ವಂಶ ಪರಂ­ಪ­ರೆ­ಯಿಂದ ಬಂದ ಸಂಗೀತ ಅಂಬಾ­ಸ­ದ­ನ­ದಲ್ಲಿ ಸುಧೆ­ಯಾಗಿ ಹರಿ­ಯು­ತ್ತಿದೆ.
ಅಂಬಾ­ಪ್ರ­ಸಾದ್‌ ಅವರು ಶಾಲಿನಿ ಮತ್ತು ದಿ. ಜಿ.ವಿ. ಮೂರ್ತಿ ಅವರ ಸುಪು­ತ್ರರು. ನಾಡಿನ ಪ್ರಭಾ­ವ­ಶಾಲಿ ಪಿಟೀಲು ವಾದ­ಕ­ರಲ್ಲಿ ಅಂಬಾ­ಪ್ರ­ಸಾದ್‌ ಕೂಡ ಒಬ್ಬರು. ಅವರ ಸೋಲೋ ಪಿಟೀಲು ಕಚೇ­ರಿ­ಗ­ಳಲ್ಲಿ ಭಕ್ತಿ­ಭಾವ ಝರಿ­ಯಂತೆ ಹರಿ­ಯು­ತ್ತದೆ. ತಾವೇ ಸಿದ್ಧ­ಪ­ಡಿ­ಸಿ­ಕೊಂ­ಡಿ­ರುವ ಐದು ತಂತಿ­ಗಳ ವೈಲಿನ್‌ ತಮ್ಮ ಪ್ರತಿ­ಭೆಯ ಅಭಿ­ವ್ಯ­ಕ್ತಕ್ಕೆ ಕನ್ನ­ಡಿ­ಯಾ­ಗಿದೆ.
ಅಂಬಾ­ಪ್ರ­ಸಾದ್‌ ಪಿಟೀಲು ನುಡಿ­ಸುವ ಶೈಲಿ ಬಹಳ ವೈಶಿಷ್ಟ್ಯ ಪೂರ್ಣ­ವಾ­ಗಿದ್ದು, ಸಂಗೀತ ಲೋಕ­ದಲ್ಲಿ ವಿಶೇಷ ಸ್ಥಾನ­ದಲ್ಲಿ ನಿಲ್ಲು­ತ್ತಾರೆ. ಅವರು ಪೀಟೀಲು ನುಡಿ­ಸು­ವಾಗ ಅವರ ಮೊಗ­ದಲ್ಲಿ ಸಾಹಿ­ತ್ಯದ ಅಭಿ­ವ್ಯ­ಕ್ತ­ವಾ­ಗು­ತ್ತದೆ. ಹಾಡು­ಗಾ­ರಿ­ಕೆ­ಯಲ್ಲೂ ಕೂಡ ಅಂಬಾ­ಪ್ರ­ಸಾದ್‌ ಸಾಧನೆ ಮಾಡಿ­ದ್ದಾರೆ. ಸಂಗೀ­ತದ ವಾತಾ­ವ­ರ­ಣ­ದಲ್ಲೇ ಬೆಳೆದ ಅಂಬಾ­ಪ್ರ­ಸಾದ್‌ ರಾಜ ಮಣಿ­ಕ್ಕಮ್‌ ಪಿಳ್ಳೈ ವಂಶಾ­ವ­ಳಿಗೆ ಸೇರಿ­ದ­ವ­ರಾ­ಗಿ­ದ್ದಾರೆ. ಸಂಸ್ಕಾರ ಅವರ ನರ­ನಾಡಿ, ರಕ್ತ­ದಲ್ಲೇ ಇದೆ.
ಅಂಬಾ­ಪ್ರ­ಸಾದ್‌ ಸಂಗೀತ ಸಾಧ­ನೆಯ ಹಾದಿ­ಯಲ್ಲಿ ಹಲವು ಗುರು­ಗಳ ವಿದ್ಯಾ­ಶೀ­ರ್ವಾದ ಪಡೆ­ದಿ­ದ್ದಾರೆ. ಶ್ರೇಷ್ಠ ಆಚಾರ್ಯ ವಿದ್ವಾನ್‌ ಕುಂಬ­ಕೋಣಂ ಜನಾ­ರ್ಧ­ನಮ್‌ ಅವರ ಮಾರ್ಗ­ದ­ರ್ಶ­ನ­ದಲ್ಲಿ ಆರಂ­ಭ­ವಾದ ಸಾಧನೆ ಕಂಚಿ­ಪುರಂ ನಾಗ­ರಾ­ಜನ್‌, ಶ್ರೀನಿ­ವಾಸ ಭಾಗ­ವ­ತರ್‌, ಮೈಸೂರು ಹಿೃಶಿ­ಕೇಶ್‌ , ಮೈಸೂರು ವೇಣು­ಗೋ­ಪಾಲ್‌, ರತ್ನಮ್ಮ, ಎನ್‌. ನಂಜುಂ­ಡ­ಸ್ವಾಮಿ, ಜೆ. ದೇವಿ­ಪ್ರ­ಸಾದ್‌, ಎಚ್‌. ಕೆ. ನರ­ಸಿಂಹ ಮೂರ್ತಿ ಮುಂತಾ­ದ­ವ­ರಿಂದ ತಮ್ಮ ಸಂಗೀತ ಜ್ಞಾನ­ವನ್ನು ವಿಸ್ತ­ರಿ­ಸಿ­ಕೊಂ­ಡಿ­ದ್ದಾರೆ.
1992ರಲ್ಲಿ ಕಚೇರಿ ನೀಡಲು ಆರಂ­ಭಿ­ಸಿದ ಅಂಬಾ­ಪ್ರ­ಸಾದ್‌ ಹಿಂದೆ ತಿರುಗಿ ನೋಡಿಲ್ಲ. ದೇಶಾ­ದ್ಯಂತ ಸಾವಿ­ರಾರು ಸೋಲೋ ವೈಲಿನ್‌ ಕಚೇರಿ ನೀಡಿ­ದ್ದಾರೆ. ತಮಿ­ಳು­ನಾ­ಡಿ­ನಲ್ಲಿ ಅಂಬಾ­ಪ್ರ­ಸಾದ್‌ ಹೆಚ್ಚು ಕಾರ್ಯ­ಕ್ರಮ ನೀಡಿದ್ದು, ತಮಿ­ಳು­ನಾ­ಡಿ­ನಲ್ಲಿ ಖ್ಯಾತಿ ಪಡೆ­ದಿ­ರುವ ಕರ್ನಾ­ಟ­ಕದ ಹೆಮ್ಮೆಯ ಸಂಗೀ­ತ­ಗಾರ ಎಂದರೆ ತಪ್ಪಲ್ಲ.
ಅಂಬಾ­ಪ್ರ­ಸಾದ್‌ ಅವರ ಸಂಗೀತ ಸಾಧ­ನೆಗೆ ಅಪಾರ ಗೌರವ ಪ್ರಶ­ಸ್ತಿ­ಗಳು ಅರಸಿ ಬಂದಿವೆ. ಭಾರತ ವೈಲಿನ್‌ ವಿದ್ಯಾ ತಿಲಕ, ನಾದ­ಯೋಗಿ, ನಾದ ನಿರ್ಮಾತೃ, ಪಿಟೀಲು ವಾದನ ಚತುರ, ಯುವ ಭಾಸ್ಕರ ಮುಂತಾದ ಗೌರ­ವ­ಗಳು ಅವರ ಮುಡಿ­ಗೇ­ರಿವೆ.
ಸಂಗೀತ ಲೋಕ­ದಲ್ಲಿ ವಿದ್ಯಾ­ದಾ­ನಕ್ಕೆ ಪೂಜ್ಯ ಸ್ಥಾನ­ವಿದೆ. ಅವ­ನೆಷ್ಟೇ ದಿಗ್ಗಜ ಸಂಗೀ­ತ­ಗಾ­ರ­ನಾ­ದರೂ ಕಲಿಯ ಬಂದ­ವ­ರಿಗೆ ವಿದ್ಯಾ­ದಾನ ಮಾಡ­ದಿ­ದ್ದರೆ ಅವನು ಅಜ್ಞಾನಿ ಎಂದು ಹೇಳ­ಲಾ­ಗು­ತ್ತದೆ. ಸಂಗೀತ ಉಳಿ­ಯ­ಬೇ­ಕಾ­ದರೆ ಜ್ಞಾನದ ಹಂಚಿಕೆ ಆಗಲೇ ಬೇಕು. ಅಂಬಾ­ಪ್ರ­ಸಾದ್‌ ತಮ್ಮ ಸಂಗೀತ ಜ್ಞಾನ­ವನ್ನು ನೂರಾರು ವಿದ್ಯಾ­ರ್ಥಿ­ಗಳ ಜತೆ ಹಂಚಿ­ಕೊಂ­ಡಿ­ದ್ದಾರೆ. ಅಂಬಾ­ಸ­ದನ ಯಾವಾ­ಗಲು ವಿದ್ಯಾ­ರ್ಥಿ­ಗ­ಳಿಂದ ತುಂಬಿ­ರು­ತ್ತದೆ. ಬಿಡು­ವಿ­ಲ್ಲದ ಕಚೇ­ರಿ­ಗಳ ನಡುವೆ ವಿದ್ಯಾ­ದಾ­ನ­ಕ್ಕಾಗಿ ಸಮಯ ಮಾಡಿ­ಕೊಂಡು ವಿದ್ಯಾ­ದಾ­ನ­ದಲ್ಲಿ ತೊಡ­ಗಿ­ದ್ದಾರೆ. ಅವ­ರಿಗೆ ವಿದೇ­ಶ­ಗ­ಳಲ್ಲೂ ವಿದ್ಯಾ­ರ್ಥಿ­ಗ­ಳಿ­ದ್ದಾರೆ. ಆನ್‌­ಲೈನ್‌ ಮೂಲಕ ಸಂಗೀತ ಬೋಧಿ­ಸ­ಲಾ­ಗು­ತ್ತದೆ. ಅಂಬಾ­ಪ್ರ­ಸಾದ್‌ ಅವರ ತಮ್ಮ ವಿ.ಆರ್‌.ಆರ್‌. ಭಾರ್ಗವ ಮೃದಂ­ಗ­ದಲ್ಲಿ ಪ್ರವೀ­ಣ­ರಾ­ಗಿ­ದ್ದಾರೆ.
ೃಮ­ರಾಂಬ ಸಂಗೀತ ವಿದ್ಯಾ­ಲ­ಯ­ದಲ್ಲಿ ಹಲವು ವಿಭಾ­ಗ­ಗ­ಳಲ್ಲಿ ಸಂಗೀತ ಪಾಠ­ಗಳು ನಡೆ­ಯು­ತ್ತವೆ. ಹಾಡು­ಗಾ­ರಿಕೆ, ಹಾರ್ಮೋ­ನಿಯಂ, ಪಿಟೀಲು, ಮ್ಯಾಂಡ­ಲಿನ್‌, ವೀಣಾ, ಗಿಟಾರ್‌, ಮೃದಂಗ, ತಬಲ, ಘಟಂ ಮುಂತಾದ ವಾದ್ಯ­ಗ­ಳನ್ನು ಹೇಳಿ­ಕೊ­ಡ­ಲಾ­ಗು­ತ್ತದೆ. ಜೊತೆಗೆ ಸಂಸ್ಕೃತ, ಭಜನೆ, ಹಿಂದಿ, ತಮಿಳು ತರ­ಗ­ತಿ­ಗಳೂ ಕೂಡ ನಡೆ­ಯು­ತ್ತವೆ.
ಅಂಬಾ­ಸ­ದ­ನದ ಕಾರ್ಯ­ಕ್ರ­ಮ­ಗಳು ನಿತ್ಯ ನಿರಂ­ತ­ರ­ವಾಗಿ ನಡೆ­ಯು­ತ್ತವೆ. ಪ್ರತಿ­ವರ್ಷ ನಡೆ­ಯುವ ಬ್ರಮ­ರಾಂಭ ಸಂಗೀತ ಶಾಲೆಯ ವಾರ್ಷಿ­ಕೋ­ತ್ಸ­ವ­ದಲ್ಲಿ ಖ್ಯಾತ­ನಾಮ ಸಂಗೀ­ತ­ಗಾ­ರರ ದಂಡೇ ಅಲ್ಲಿ­ರು­ತ್ತದೆ.
ಮೈಸೂ­ರಿ­ನಲ್ಲಿ ನಡೆ­ಯುವ ಧಾರ್ಮಿಕ ಕಾರ್ಯ­ಕ್ರ­ಮ­ಗ­ಳಲ್ಲಿ ಅಂಬಾ­ಪ್ರ­ಸಾದ್‌ ಅವರ ವೈಲಿನ್‌ ಕಚೇರಿ ಇದ್ದೇ ಇರು­ತ್ತದೆ. ಅವರ ಬಹ­ಳಷ್ಟು ಕಚೇ­ರಿ­ಗ­ಳಿಗೆ ಸಹೋ­ದರ ಭಾರ್ಗವ ಮೃದಂಗ ನುಡಿ­ಸು­ತ್ತಾರೆ. ಅವರ ಕಚೇ­ರಿ­ಗ­ಳಲ್ಲಿ ಸಹೋ­ದ­ರರ ಸಂಗೀತ ಸಂಗ­ಮ­ವನ್ನು ಕಾಣ­ಬ­ಹುದು.

No comments:

Post a Comment