Sunday, June 21, 2009

ವಿದ್ವಾನ್. ನಾಗರಾಜ ಮಂಜು­ನಾ­ಥರು


ತಂತಿ­ಗಳ ಮೇಲೆ `ನಾ­ಗ­ರಾಜ' ನಡಿಗೆ



ಆ ಬೆರ­ಳು­ಗ­ಳಲ್ಲಿ ಅದೇನು ಚೈತ­ನ್ಯವೋ ಏನೋ. ತಂತಿ­ಗಳ ಮೇಲೆ ಅವರು ಬೆರ­ಳಿ­ಟ್ಟರೆ ಮಾಧುರ್ಯ ತುಂಬಿ­ಕೊಂಡು ಬರು­ತ್ತದೆ. ಅವರು ಪಿಟೀಲು ನುಡಿ­ಸು­ತ್ತಿ­ದ್ದರೆ ಸಂಗೀತ ತಿಳಿ­ಯದ ಸಾಮಾ­ನ್ಯನೂ ಕೂಡ ತಿಳಿ­ದಂತೆ ತಲೆ­ಯಾ­ಡಿ­ಸು­ತ್ತಾನೆ. ತಂತಿ­ಗಳ ಮೇಲಿನ ಅವರ ಬೆರ­ಳು­ಗಳ ನಡಿಗೆ ಕೇಳು­ಗನ ಹೃದ­ಯ­ದಲ್ಲಿ ಕಂಪನ ಹುಟ್ಟಿ­ಸು­ತ್ತವೆ. ಅವರು ನುಡಿ­ಸುವ ಜಾಗ­ದಲ್ಲಿ ಶಬ್ದಕ್ಕೆ ಜಾಗ­ವಿಲ್ಲ. ಅಲ್ಲೇ­ನಿ­ದ್ದರೂ ಶಾಂತಿ ವಿಶ್ರಾಂತಿ.
ಅವರು ಮೈಸೂರು ಸಹೋ­ದ­ರರು. ವಿದ್ವಾಂ­ಸ­ರಾದ ಮೈಸೂರು ನಾಗ­ರಾಜ ಮತ್ತು ಡಾ. ಮಂಜು­ನಾಥ. ತಮ್ಮ ವೈಶಿಷ್ಟ ಸಂಗೀತ ಜ್ಞಾನ­ದಿಂದ ಭಾರ­ತದ ಅತ್ಯು­ನ್ನತ ಸ್ಥಾನ­ದ­ಲ್ಲಿ­ರುವ ಪೀಟಿಲು ವಾದ­ಕರು. ದೊಡ್ಡ ಗಾಯ­ಕನ ಹಾಡು­ಗಾ­ರಿ­ಕೆಗೆ ತಮ್ಮ ಪಿಟೀಲು ಮೂಲಕ ತಕ್ಕ ಉತ್ತರ ಕೊಡ­ಬಲ್ಲ ಪ್ರತಿ­ಭಾ­ವಂ­ತರು. ಗಾಯಕ ಒಂದು ಅಂದರೆ ಇವರು ಹತ್ತು ಹನ್ನೆ­ರಡು ಅನ್ನು­ವಷ್ಟು ಗಟ್ಟಿ­ಗರು! ತಮಿ­ಳು­ನಾ­ಡಿನ ಸಂಗೀತ ಸಾಮ್ರಾ­ಟರು ತಮಗೆ ತಕ್ಕ ಪಕ್ಕ­ವಾದ್ಯ ಸಹ­ಕಾ­ರಕ್ಕೆ ಮೈಸೂರು ಸಹೋ­ದ­ರ­ರನ್ನೇ ಬಯ­ಸು­ತ್ತಾರೆ ಎನ್ನು­ವುದು ವಿಶೇಷ.
ಮೈಸೂರು ಸಹೋ­ದ­ರರ ಜುಗ­ಲ್‌­ಬಂದಿ ಕಚೇ­ರಿ­ಗಳು ಇಡೀ ವಿಶ್ವಾ­ದ್ಯಂತ ಮನ್ನಣೆ ಪಡೆ­ದಿವೆ. ಕರ್ನಾ­ಟಕ ಸಂಗೀತ ಇಂದು ಲೋಕ­ದ­ಲ್ಲೆಲ್ಲಾ ಅಜ­ರಾ­ಮರ ಅಂದರೆ ಅದ­ರಲ್ಲಿ ಮೈಸೂರು ಸಹೋ­ದ­ರರ ಪಾಲು ಬಹ­ಳ­ಷ್ಟಿದೆ. ವಿದೇ­ಶ­ಗ­ಳಲ್ಲಿ ಈ ಸಹೋ­ದ­ರರು ಕರ್ನಾ­ಟಕ ಶಾಸ್ತ್ರೀಯ ಸಂಗೀ­ತದ ಬಗ್ಗೆ ಕಾರ್ಯ­ಗಾರ ನಡೆ­ಸಿ­ದ್ದಾರೆ. ಪ್ರಬಂಧ ಮಂಡಿ­ಸಿ­ದ್ದಾರೆ. ವಾದ್ಯ­ಗಳ ರಾಜ ಎನಿ­ಸಿ­ಕೊಂ­ಡಿ­ದ­ರುವ ಪಿಟೀ­ಲಿ­ನ­ಲ್ಲಿ­ರುವ ಸಂಗೀತ ಸಾಧ್ಯ­ತೆ­ಗಳ ಬಗ್ಗೆ ಅವರು ಸಂಶೋ­ಧನೆ ನಡೆ­ಸಿ­ದ್ದಾರೆ. ಪಿಟೀಲು ನುಡಿ­ಸುವ ತಂತ್ರ­ಗ­ಳನ್ನು ಸ್ವತಃ ಹುಟ್ಟು­ಹಾ­ಕಿ­ದ್ದಾರೆ. ಈ ದೃಷ್ಟಿ­ಯಿಂದ ಅವರು ಪೀಟೀಲು ತಾಂತ್ರಿ­ಕರು!
ರೋಚಕ ಸಂಗೀ­ತಾ­ಭ್ಯಾಸ: ಮೈಸೂರು ಸಹೋ­ದ­ರರು ಸಂಗೀ­ತ­ಗಾರ ಮನೆ­ತ­ನದ ಕುಡಿ­ಗಳು. ವಿದ್ವಾಂಸ ಮಹ­ದೇ­ವಪ್ಪ ಇವರ ತಂದೆ. ಅವರ ಬಾಲ್ಯ­ದ­ಲ್ಲಿನ ಸಂಗೀ­ತಾ­ಭ್ಯಾ­ಸದ ದಿನ­ಗಳು ಬಹಳ ರೋಚ­ಕ­ವಾ­ಗಿವೆ. ಪೀಟಿಲು ಕಲಿ­ಯ­ಬೇ­ಕೆಂಬ ಅಪ್ಪನ ಅಗಾಧ ಆಸೆ­ಯನ್ನು ಈಡೀ­ರಿ­ಸಿ­ಕೊ­ಳ್ಳಲು ಮಹ­ದೇ­ವಪ್ಪ ಬಹಳ ಕಷ್ಟ­ಪ­ಟ್ಟಿ­ದ್ದಾರೆ. ದಿನಕ್ಕೆ ನಾಲ್ಕೈದು ಗಂಟೆ ಅಭ್ಯಾಸ ಆಗ­ಲೇ­ಬೇಕು. ಇಲ್ಲ­ವಾ­ದರೆ ಮಕ್ಕ­ಳಿಗೆ ಊಟ ಇಲ್ಲ. ನಮ್ಮಪ್ಪ ನಮಗೆ ಶತ್ರು! ಎಂದು ಬೈದು­ಕೊ­ಳ್ಳು­ವಷ್ಟು ಒತ್ತಡ ಅವರ ಮೇಲೆ ಮೇಲಿತ್ತು.
ಅವರು ಓದಿ­ದ್ದೆಲ್ಲಾ ಸರ್ಕಾರಿ ಶಾಲೆ. ಖಾಸಗೀ ಶಾಲೆಗೆ ಮಕ್ಕ­ಳನ್ನು ಕಳಿ­ಸಿ­ದರೆ ಬರೀ ಹೋಂ ವರ್ಕ್‌­ನಲ್ಲೇ ದಿನ ಕಳೆ­ಯು­ತ್ತದೆ ಎಂದು ಅರಿ­ತಿದ್ದ ಮಹ­ದೇ­ವ­ಪ್ಪ­ನ­ವರ ಮುಂದಾ­ಲೋ­ಚ­ನೆ­ಯ­ಲ್ಲಿ­ರುವ ಲಾಜಿಕ್‌ ನೋಡಿ! ಸರ್ಕಾರಿ ಶಾಲೆ­ಯಲ್ಲೂ ತಮ್ಮ ಮಕ್ಕ­ಳಿಗೆ ಹೋಂ ವರ್ಕ್‌ ಕೊಡುವ ಹಾಗಿಲ್ಲ. ಕೊಟ್ಟರೆ ಶಾಲೆಗೆ ಹೋಗಿ `ಹೋಂ ವರ್ಕ್‌ ಕೊಡ­ಕೂ­ಡದು, ಮನೆ­ಯಲ್ಲಿ ಮಾಡಲು ಅವ­ರಿಗೆ ಬಹಳ ಕೆಲ­ಸ­ವಿದೆ' ಎಂದು ಗಲಾಟೆ ಮಾಡು­ತ್ತಿ­ದ್ದ­ರಂತೆ! ಈ ವಿಷ­ಯ­ಗ­ಳನ್ನು ನಾಗಾ­ರಾಜ ಮಂಜು­ನಾ­ಥರು ತಮ್ಮ ವಿದ್ಯಾ­ರ್ಥಿ­ಗಳ ಮುಂದೆ ಅಗಾಗ ಹಂಚಿ­ಕೊ­ಳ್ಳು­ತ್ತಾರೆ. ಪಿಟೀಲು ವಿದ್ಯಾ­ರ್ಥಿ­ಗ­ಳಿಗೆ ನಾಗ­ರಾಜ ಮಂಜು­ನಾ­ಥರ ರೋಚಕ ಅಭ್ಯಾಸ ಅಧ್ಯಾಯ ಸ್ಪೂರ್ತಿಯ ವಿಷಯ. ಪಿಟೀಲು ಕಲಿ­ಯು­ವ­ವನು ಇತರ ಸುಖ­ಗ­ಳನ್ನು ಬಿಡ­ಲೇ­ಬೇಕು. ಸಹ­ಜ­ವಾಗಿ ಅದೊಂದು ತ್ಯಾಗ!
ಇಂದು ಮಹ­ದೇ­ವಪ್ಪ ಅವರ ಕನಸು ನನ­ಸಾ­ಗಿದೆ. ಮಕ್ಕಳು ಮಾತ್ರ­ವಲ್ಲ ಮೊಮ್ಮಗ ಮಾ! ಕಾರ್ತಿಕ್‌ ಕೂಡ ಪಿಟೀ­ಲನ್ನು ಗಟ್ಟಿ ಮಾಡಿ­ಕೊಂ­ಡಿ­ದ್ದಾನೆ. ಕಾರ್ತಿಕ್‌ ನಾಗ­ರಜ್‌ ಅವರ ಮಗ. ಅಪ್ಪ ಚಿಕ್ಕ­ಪ್ಪಂ­ದಿರ ಜುಗ­ಲ್‌­ಬಂ­ದಿ­ಗ­ಳಲ್ಲಿ ಕಾರ್ತಿಕ್‌ ಆಗಾಗ ಕಾಣಿ­ಸಿ­ಕೊ­ಳ್ಳು­ತ್ತಾನೆ.
ಅಕಾ­ಡೆ­ಮಿಕ್‌ ವಿಷ­ಯ­ಗ­ಳಲ್ಲೂ ಈ ಸಹೋ­ದ­ರರು ಹಿಂದೆ ಬೀಳ­ಲಿಲ್ಲ. ನಾಗ­ರಾಜ್‌ ಆಕಾ­ಶ­ವಾ­ಣಿ­ಯಲ್ಲಿ ಎ ದರ್ಜೆ ಕಲಾ­ವಿ­ದರು. ಡಾ. ಮಂಜು­ನಾಥ್‌ ಮೈಸೂರು ವಿವಿಯ ಸಂಗೀತ ಎಂ.ಎ. ನಲ್ಲಿ ಪ್ರಥಮ ರ್ಯಾಂಕ್‌ ಹಾಗೂ ನಾಲ್ಕು ಚಿನ್ನದ ಪದಕ ಗಳಿ­ಸಿ­ದ್ದಾರೆ. ಪೀಟಿ­ಲಿ­ನಲ್ಲಿ ಸಂಶೋ­ಧನೆ ನಡೆಸಿ ಡಾಕ್ಟ­ರೇಟ್‌ ಪಡೆ­ದಿ­ದ್ದಾರೆ. ಲಲಿ­ತ­ಕಲಾ ಕಾಲೇ­ಜಿ­ನಲ್ಲಿ ಪ್ರಾದ್ಯಾ­ಪ­ಕ­ರಾಗಿ ಕಾರ್ಯ ನಿರ್ವ­ಹಿ­ಸು­ತ್ತಿ­ದ್ದಾರೆ.
ಭಾರ­ತೀಯ ಸಂಗೀತ, ಸಮ­ಕಾ­ಲೀನ ಸಂಗೀ­ತ­ಗ­ಳಲ್ಲೂ ನಾಗ­ರಾಜ ಮಂಜು­ನಾ­ಥರು ತಮ್ಮ ಪ್ರತಿಭೆ ಮೆರೆ­ದಿ­ದ್ದಾರೆ. ಅಸಂ­ಖ್ಯಾತ ಜಗ­ತ್ಪ್ರ­ಸಿ­ದ್ಧ­ರಿಗೆ ಜೊತೆ­ಯಾ­ಗಿ­ದ್ದಾರೆ. ನೂರಾರು ಕೆಸೆಟ್‌, ಸಿಡಿ­ಗ­ಳನ್ನು ಹೊರ­ತಂದು ಕೇಳು­ಗ­ರನ್ನು ತಣಿ­ಸಿ­ದ್ದಾರೆ. ಒಂಭ­ತ್ತನೇ ವಯ­ಸ್ಸಿ­ನಲ್ಲಿ ಆರಂ­ಭ­ವಾದ ಇವರ ತಂತಿಯ ಮೇಲಿನ ನಡಿಗೆ ನಿರಂ­ತ­ರ­ವಾಗಿ

No comments:

Post a Comment