
ತಂತಿಗಳ ಮೇಲೆ `ನಾಗರಾಜ' ನಡಿಗೆ
ಆ ಬೆರಳುಗಳಲ್ಲಿ ಅದೇನು ಚೈತನ್ಯವೋ ಏನೋ. ತಂತಿಗಳ ಮೇಲೆ ಅವರು ಬೆರಳಿಟ್ಟರೆ ಮಾಧುರ್ಯ ತುಂಬಿಕೊಂಡು ಬರುತ್ತದೆ. ಅವರು ಪಿಟೀಲು ನುಡಿಸುತ್ತಿದ್ದರೆ ಸಂಗೀತ ತಿಳಿಯದ ಸಾಮಾನ್ಯನೂ ಕೂಡ ತಿಳಿದಂತೆ ತಲೆಯಾಡಿಸುತ್ತಾನೆ. ತಂತಿಗಳ ಮೇಲಿನ ಅವರ ಬೆರಳುಗಳ ನಡಿಗೆ ಕೇಳುಗನ ಹೃದಯದಲ್ಲಿ ಕಂಪನ ಹುಟ್ಟಿಸುತ್ತವೆ. ಅವರು ನುಡಿಸುವ ಜಾಗದಲ್ಲಿ ಶಬ್ದಕ್ಕೆ ಜಾಗವಿಲ್ಲ. ಅಲ್ಲೇನಿದ್ದರೂ ಶಾಂತಿ ವಿಶ್ರಾಂತಿ.
ಅವರು ಮೈಸೂರು ಸಹೋದರರು. ವಿದ್ವಾಂಸರಾದ ಮೈಸೂರು ನಾಗರಾಜ ಮತ್ತು ಡಾ. ಮಂಜುನಾಥ. ತಮ್ಮ ವೈಶಿಷ್ಟ ಸಂಗೀತ ಜ್ಞಾನದಿಂದ ಭಾರತದ ಅತ್ಯುನ್ನತ ಸ್ಥಾನದಲ್ಲಿರುವ ಪೀಟಿಲು ವಾದಕರು. ದೊಡ್ಡ ಗಾಯಕನ ಹಾಡುಗಾರಿಕೆಗೆ ತಮ್ಮ ಪಿಟೀಲು ಮೂಲಕ ತಕ್ಕ ಉತ್ತರ ಕೊಡಬಲ್ಲ ಪ್ರತಿಭಾವಂತರು. ಗಾಯಕ ಒಂದು ಅಂದರೆ ಇವರು ಹತ್ತು ಹನ್ನೆರಡು ಅನ್ನುವಷ್ಟು ಗಟ್ಟಿಗರು! ತಮಿಳುನಾಡಿನ ಸಂಗೀತ ಸಾಮ್ರಾಟರು ತಮಗೆ ತಕ್ಕ ಪಕ್ಕವಾದ್ಯ ಸಹಕಾರಕ್ಕೆ ಮೈಸೂರು ಸಹೋದರರನ್ನೇ ಬಯಸುತ್ತಾರೆ ಎನ್ನುವುದು ವಿಶೇಷ.
ಮೈಸೂರು ಸಹೋದರರ ಜುಗಲ್ಬಂದಿ ಕಚೇರಿಗಳು ಇಡೀ ವಿಶ್ವಾದ್ಯಂತ ಮನ್ನಣೆ ಪಡೆದಿವೆ. ಕರ್ನಾಟಕ ಸಂಗೀತ ಇಂದು ಲೋಕದಲ್ಲೆಲ್ಲಾ ಅಜರಾಮರ ಅಂದರೆ ಅದರಲ್ಲಿ ಮೈಸೂರು ಸಹೋದರರ ಪಾಲು ಬಹಳಷ್ಟಿದೆ. ವಿದೇಶಗಳಲ್ಲಿ ಈ ಸಹೋದರರು ಕರ್ನಾಟಕ ಶಾಸ್ತ್ರೀಯ ಸಂಗೀತದ ಬಗ್ಗೆ ಕಾರ್ಯಗಾರ ನಡೆಸಿದ್ದಾರೆ. ಪ್ರಬಂಧ ಮಂಡಿಸಿದ್ದಾರೆ. ವಾದ್ಯಗಳ ರಾಜ ಎನಿಸಿಕೊಂಡಿದರುವ ಪಿಟೀಲಿನಲ್ಲಿರುವ ಸಂಗೀತ ಸಾಧ್ಯತೆಗಳ ಬಗ್ಗೆ ಅವರು ಸಂಶೋಧನೆ ನಡೆಸಿದ್ದಾರೆ. ಪಿಟೀಲು ನುಡಿಸುವ ತಂತ್ರಗಳನ್ನು ಸ್ವತಃ ಹುಟ್ಟುಹಾಕಿದ್ದಾರೆ. ಈ ದೃಷ್ಟಿಯಿಂದ ಅವರು ಪೀಟೀಲು ತಾಂತ್ರಿಕರು!
ರೋಚಕ ಸಂಗೀತಾಭ್ಯಾಸ: ಮೈಸೂರು ಸಹೋದರರು ಸಂಗೀತಗಾರ ಮನೆತನದ ಕುಡಿಗಳು. ವಿದ್ವಾಂಸ ಮಹದೇವಪ್ಪ ಇವರ ತಂದೆ. ಅವರ ಬಾಲ್ಯದಲ್ಲಿನ ಸಂಗೀತಾಭ್ಯಾಸದ ದಿನಗಳು ಬಹಳ ರೋಚಕವಾಗಿವೆ. ಪೀಟಿಲು ಕಲಿಯಬೇಕೆಂಬ ಅಪ್ಪನ ಅಗಾಧ ಆಸೆಯನ್ನು ಈಡೀರಿಸಿಕೊಳ್ಳಲು ಮಹದೇವಪ್ಪ ಬಹಳ ಕಷ್ಟಪಟ್ಟಿದ್ದಾರೆ. ದಿನಕ್ಕೆ ನಾಲ್ಕೈದು ಗಂಟೆ ಅಭ್ಯಾಸ ಆಗಲೇಬೇಕು. ಇಲ್ಲವಾದರೆ ಮಕ್ಕಳಿಗೆ ಊಟ ಇಲ್ಲ. ನಮ್ಮಪ್ಪ ನಮಗೆ ಶತ್ರು! ಎಂದು ಬೈದುಕೊಳ್ಳುವಷ್ಟು ಒತ್ತಡ ಅವರ ಮೇಲೆ ಮೇಲಿತ್ತು.
ಅವರು ಓದಿದ್ದೆಲ್ಲಾ ಸರ್ಕಾರಿ ಶಾಲೆ. ಖಾಸಗೀ ಶಾಲೆಗೆ ಮಕ್ಕಳನ್ನು ಕಳಿಸಿದರೆ ಬರೀ ಹೋಂ ವರ್ಕ್ನಲ್ಲೇ ದಿನ ಕಳೆಯುತ್ತದೆ ಎಂದು ಅರಿತಿದ್ದ ಮಹದೇವಪ್ಪನವರ ಮುಂದಾಲೋಚನೆಯಲ್ಲಿರುವ ಲಾಜಿಕ್ ನೋಡಿ! ಸರ್ಕಾರಿ ಶಾಲೆಯಲ್ಲೂ ತಮ್ಮ ಮಕ್ಕಳಿಗೆ ಹೋಂ ವರ್ಕ್ ಕೊಡುವ ಹಾಗಿಲ್ಲ. ಕೊಟ್ಟರೆ ಶಾಲೆಗೆ ಹೋಗಿ `ಹೋಂ ವರ್ಕ್ ಕೊಡಕೂಡದು, ಮನೆಯಲ್ಲಿ ಮಾಡಲು ಅವರಿಗೆ ಬಹಳ ಕೆಲಸವಿದೆ' ಎಂದು ಗಲಾಟೆ ಮಾಡುತ್ತಿದ್ದರಂತೆ! ಈ ವಿಷಯಗಳನ್ನು ನಾಗಾರಾಜ ಮಂಜುನಾಥರು ತಮ್ಮ ವಿದ್ಯಾರ್ಥಿಗಳ ಮುಂದೆ ಅಗಾಗ ಹಂಚಿಕೊಳ್ಳುತ್ತಾರೆ. ಪಿಟೀಲು ವಿದ್ಯಾರ್ಥಿಗಳಿಗೆ ನಾಗರಾಜ ಮಂಜುನಾಥರ ರೋಚಕ ಅಭ್ಯಾಸ ಅಧ್ಯಾಯ ಸ್ಪೂರ್ತಿಯ ವಿಷಯ. ಪಿಟೀಲು ಕಲಿಯುವವನು ಇತರ ಸುಖಗಳನ್ನು ಬಿಡಲೇಬೇಕು. ಸಹಜವಾಗಿ ಅದೊಂದು ತ್ಯಾಗ!
ಇಂದು ಮಹದೇವಪ್ಪ ಅವರ ಕನಸು ನನಸಾಗಿದೆ. ಮಕ್ಕಳು ಮಾತ್ರವಲ್ಲ ಮೊಮ್ಮಗ ಮಾ! ಕಾರ್ತಿಕ್ ಕೂಡ ಪಿಟೀಲನ್ನು ಗಟ್ಟಿ ಮಾಡಿಕೊಂಡಿದ್ದಾನೆ. ಕಾರ್ತಿಕ್ ನಾಗರಜ್ ಅವರ ಮಗ. ಅಪ್ಪ ಚಿಕ್ಕಪ್ಪಂದಿರ ಜುಗಲ್ಬಂದಿಗಳಲ್ಲಿ ಕಾರ್ತಿಕ್ ಆಗಾಗ ಕಾಣಿಸಿಕೊಳ್ಳುತ್ತಾನೆ.
ಅಕಾಡೆಮಿಕ್ ವಿಷಯಗಳಲ್ಲೂ ಈ ಸಹೋದರರು ಹಿಂದೆ ಬೀಳಲಿಲ್ಲ. ನಾಗರಾಜ್ ಆಕಾಶವಾಣಿಯಲ್ಲಿ ಎ ದರ್ಜೆ ಕಲಾವಿದರು. ಡಾ. ಮಂಜುನಾಥ್ ಮೈಸೂರು ವಿವಿಯ ಸಂಗೀತ ಎಂ.ಎ. ನಲ್ಲಿ ಪ್ರಥಮ ರ್ಯಾಂಕ್ ಹಾಗೂ ನಾಲ್ಕು ಚಿನ್ನದ ಪದಕ ಗಳಿಸಿದ್ದಾರೆ. ಪೀಟಿಲಿನಲ್ಲಿ ಸಂಶೋಧನೆ ನಡೆಸಿ ಡಾಕ್ಟರೇಟ್ ಪಡೆದಿದ್ದಾರೆ. ಲಲಿತಕಲಾ ಕಾಲೇಜಿನಲ್ಲಿ ಪ್ರಾದ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಭಾರತೀಯ ಸಂಗೀತ, ಸಮಕಾಲೀನ ಸಂಗೀತಗಳಲ್ಲೂ ನಾಗರಾಜ ಮಂಜುನಾಥರು ತಮ್ಮ ಪ್ರತಿಭೆ ಮೆರೆದಿದ್ದಾರೆ. ಅಸಂಖ್ಯಾತ ಜಗತ್ಪ್ರಸಿದ್ಧರಿಗೆ ಜೊತೆಯಾಗಿದ್ದಾರೆ. ನೂರಾರು ಕೆಸೆಟ್, ಸಿಡಿಗಳನ್ನು ಹೊರತಂದು ಕೇಳುಗರನ್ನು ತಣಿಸಿದ್ದಾರೆ. ಒಂಭತ್ತನೇ ವಯಸ್ಸಿನಲ್ಲಿ ಆರಂಭವಾದ ಇವರ ತಂತಿಯ ಮೇಲಿನ ನಡಿಗೆ ನಿರಂತರವಾಗಿ
No comments:
Post a Comment