
`ವೃತ್ತಿಯಿಂದ ತೃಪ್ತಿ, ಪ್ರವೃತ್ತಿಯಿಂದ ಸಂತೃಪ್ತಿ'
`ಒಬ್ಬ ನಟನಿಗೆ ಮೊದಲು ಪ್ರಕ್ಷಕ, ನಂತರ ವಿಮರ್ಶಕ. ಅದೇ ರೀತಿ ಒಬ್ಬ ಬರಹಗಾರನಿಗೂ ಮೊದಲು ಓದುಗ, ಆನಂತರ ವಿಮರ್ಶಕ. ಒಂದು ವೇಳೆ ವಿಮರ್ಶಕನನ್ನು ಗಮನದಲ್ಲಿಟ್ಟುಕೊಂಡು ಒಬ್ಬ ನಟ, ಬರಹಗಾರ ತನ್ನ ಕೃಷಿ ಮಾಡಿದರೆ ಅದು ಫಲ ನೀಡಲಾರದು. ನನ್ನ ಅಭಿನಯವನ್ನು ಪ್ರೇಕ್ಷಕ ಮಹಾಶಯ ಮೆಚ್ಚಿಕೊಂಡಾಗಲೇ ನನಗೆ ಸಂತೃಪ್ತಿ.'
ಹೀಗೆಂದವರು, ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಕಳೆದ ಮೂವತ್ತೈದು ವರ್ಷಗಳಿಂದ ತೊಡಗಿಸಿಕೊಂಡಿರುವ, ವೃತ್ತಿಯಲ್ಲಿ ವೈದ್ಯರಾದ, ವೈದ್ಯಕೀಯ ಪ್ರಾಧ್ಯಾಪಕ ಡಾ.ಎಚ್.ಎ.ಪಾರ್ಶ್ವನಾಥ್.
ಪಾರ್ಶ್ವನಾಥ್ ಹಾಸನದವರು. ತಂದೆ ವ್ಯಾಪಾರಿ. ವ್ಯಾಪಾರ ಅಂದ ಮೇಲೆ ಇವತ್ತು ಇಲ್ಲಿ ನಾಳೆ ಅಲ್ಲಿ. ಬಡತನ ಇದ್ದದ್ದೇ. `ನಿನಗೆ ವಿದ್ಯೆಯೇ ಆಧಾರವಾಗಬೇಕು' ಎಂದು ಅವರ ತಂದೆ ಹೇಳಿದ ಮಾತುಗಳು ಪಾರ್ಶ್ವನಾಥರಿಗೆ ವೇದವಾಕ್ಯವಾಗಿದ್ದವು. ಹೈಸ್ಕೂಲ್ನಲ್ಲಿ ವಯಸ್ಸಿಗೆ ತಕ್ಕ ಪ್ರೇಮಮಯ ಕವಿತೆಗಳನ್ನು ರೆಯುವಲ್ಲಿ ಎತ್ತಿದ ಕೈ. ಆಗಲೇ ಪತ್ರಿಕೆಗಳಲ್ಲಿ ಹಲವು ಲೇಖನಗಳು ಪ್ರಕಟಗೊಂಡಿದ್ದವು. ಪಿಯುಸಿಯ ಸಿಬಿಜೆಡ್ ವಿಷಯದಲ್ಲಿ ಶೇ.80 ರಷ್ಟು ಅಂಕ ಗಳಿಸಿದಾಗ ಮೈಸೂರು ಮೆಡಿಕಲ್ ಕಾಲೇಜಿನ ಬಾಗಿಲು ಇವರಿಗಾಗಿ ತೆರೆದುಕೊಂಡಿತು.
ವೈದ್ಯರಾದರು. ಪೆಥಾಲಜಿ (ರೋಗಲಕ್ಷಣ ಶಾಸ್ತ್ರ)ಯಲ್ಲಿ ಉನ್ನತ ಶಿಕ್ಷಣ ಪಡೆದರು. ಬಳ್ಳಾರಿ, ಹುಬ್ಬಳ್ಳಿ, ಬೆಂಗಳೂರು ವೈದ್ಯಕೀಯ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ, ತಾವು ಪದವಿಗಳಿಸಿದ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ವಿಭಾಗ ಮುಖ್ಯಸ್ಥರಾಗಿ ಮತ್ತು ಪ್ರಾಂಶುಪಾಲರಾಗಿ, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಇವರು ಪ್ರಸ್ತುತ ಧಾರವಾಡದ ಎಸ್ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವುಗಳ ನಡುವೆ ಮೈಸೂರಿನ ಲಲಿತಕಲಾ ಕಾಲೇಜಿನ ನಾಟಕ ವಿಭಾಗದಲ್ಲಿ ಡಿಪ್ಲೊಮಾ ಮುಗಿಸಿದ್ದು, ಇವರ ಕಲಾಭಿಮಾನದ ಹಂಬಲಕ್ಕೆ ಸಾಕ್ಷಿ.
ಡಾ.ಪಾರ್ಶ್ವನಾಥ್ ವೈದ್ಯಕೀಯ ಸಲಹೆಗಾರರಾಗಿ, ರಂಗಕರ್ಮಿಯಾಗಿ, ಸಾಹಿತಿಯಾಗಿ, ವಿಮರ್ಶಕರಾಗಿ, ಸಂಘಟಕರಾಗಿ ನೀಡಿರುವ ಸೇವೆಗೆ ಸರ್ಕಾರ, ಸಂಘ ಸಂಸ್ಥೆಗಳು ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಡಾ.ಪಾರ್ಶ್ವನಾಥ್ `ಉದಯವಾಣಿ'ಯೊಂದಿಗೆ ಮಾತನಾಡಿದ ಒಂದು ಘಳಿಗೆ...
ಹೀಗೆಂದವರು, ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಕಳೆದ ಮೂವತ್ತೈದು ವರ್ಷಗಳಿಂದ ತೊಡಗಿಸಿಕೊಂಡಿರುವ, ವೃತ್ತಿಯಲ್ಲಿ ವೈದ್ಯರಾದ, ವೈದ್ಯಕೀಯ ಪ್ರಾಧ್ಯಾಪಕ ಡಾ.ಎಚ್.ಎ.ಪಾರ್ಶ್ವನಾಥ್.
ಪಾರ್ಶ್ವನಾಥ್ ಹಾಸನದವರು. ತಂದೆ ವ್ಯಾಪಾರಿ. ವ್ಯಾಪಾರ ಅಂದ ಮೇಲೆ ಇವತ್ತು ಇಲ್ಲಿ ನಾಳೆ ಅಲ್ಲಿ. ಬಡತನ ಇದ್ದದ್ದೇ. `ನಿನಗೆ ವಿದ್ಯೆಯೇ ಆಧಾರವಾಗಬೇಕು' ಎಂದು ಅವರ ತಂದೆ ಹೇಳಿದ ಮಾತುಗಳು ಪಾರ್ಶ್ವನಾಥರಿಗೆ ವೇದವಾಕ್ಯವಾಗಿದ್ದವು. ಹೈಸ್ಕೂಲ್ನಲ್ಲಿ ವಯಸ್ಸಿಗೆ ತಕ್ಕ ಪ್ರೇಮಮಯ ಕವಿತೆಗಳನ್ನು ರೆಯುವಲ್ಲಿ ಎತ್ತಿದ ಕೈ. ಆಗಲೇ ಪತ್ರಿಕೆಗಳಲ್ಲಿ ಹಲವು ಲೇಖನಗಳು ಪ್ರಕಟಗೊಂಡಿದ್ದವು. ಪಿಯುಸಿಯ ಸಿಬಿಜೆಡ್ ವಿಷಯದಲ್ಲಿ ಶೇ.80 ರಷ್ಟು ಅಂಕ ಗಳಿಸಿದಾಗ ಮೈಸೂರು ಮೆಡಿಕಲ್ ಕಾಲೇಜಿನ ಬಾಗಿಲು ಇವರಿಗಾಗಿ ತೆರೆದುಕೊಂಡಿತು.
ವೈದ್ಯರಾದರು. ಪೆಥಾಲಜಿ (ರೋಗಲಕ್ಷಣ ಶಾಸ್ತ್ರ)ಯಲ್ಲಿ ಉನ್ನತ ಶಿಕ್ಷಣ ಪಡೆದರು. ಬಳ್ಳಾರಿ, ಹುಬ್ಬಳ್ಳಿ, ಬೆಂಗಳೂರು ವೈದ್ಯಕೀಯ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ, ತಾವು ಪದವಿಗಳಿಸಿದ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ವಿಭಾಗ ಮುಖ್ಯಸ್ಥರಾಗಿ ಮತ್ತು ಪ್ರಾಂಶುಪಾಲರಾಗಿ, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಇವರು ಪ್ರಸ್ತುತ ಧಾರವಾಡದ ಎಸ್ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವುಗಳ ನಡುವೆ ಮೈಸೂರಿನ ಲಲಿತಕಲಾ ಕಾಲೇಜಿನ ನಾಟಕ ವಿಭಾಗದಲ್ಲಿ ಡಿಪ್ಲೊಮಾ ಮುಗಿಸಿದ್ದು, ಇವರ ಕಲಾಭಿಮಾನದ ಹಂಬಲಕ್ಕೆ ಸಾಕ್ಷಿ.
ಡಾ.ಪಾರ್ಶ್ವನಾಥ್ ವೈದ್ಯಕೀಯ ಸಲಹೆಗಾರರಾಗಿ, ರಂಗಕರ್ಮಿಯಾಗಿ, ಸಾಹಿತಿಯಾಗಿ, ವಿಮರ್ಶಕರಾಗಿ, ಸಂಘಟಕರಾಗಿ ನೀಡಿರುವ ಸೇವೆಗೆ ಸರ್ಕಾರ, ಸಂಘ ಸಂಸ್ಥೆಗಳು ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಡಾ.ಪಾರ್ಶ್ವನಾಥ್ `ಉದಯವಾಣಿ'ಯೊಂದಿಗೆ ಮಾತನಾಡಿದ ಒಂದು ಘಳಿಗೆ...
* ತಾವು ಹಾಸನದವರು. ತಮ್ಮ ರಂಗಭೂಮಿ ಆಸಕ್ತಿಗೆ ಅಲ್ಲಿಯ ವಾತಾವರಣ ಹೇಗಿತ್ತು?
ಹಾಸನದ ಜಾತ್ರೆ. ಅಲ್ಲಿ ನಡೆಯುತ್ತಿದ್ದ ಕಂಪನಿ ನಾಟಕಗಳು. ನಾನು ರಂಗಭೂಮಿ ಪ್ರವೇಶಕ್ಕೆ ಮುಚೆ ಬರವಣಿಗೆಯಲ್ಲಿ ತೊಡಗಿಕೊಂಡಿದ್ದೆ. ಸಾಹಿತ್ಯದ ನೆಲೆಗಟ್ಟಿನಿಂದ ರಂಗಭೂಮಿಯ ಕಡೆ ಒಲವು ಮೂಡಿತು. 1972ರಲ್ಲಿ ಎನ್.ರಾವ್ರ `ವಿಷಜ್ವಾಲೆ' ನಾಟಕದಲ್ಲಿ ಅಭಿನಯಿಸಿ ರಂಗಪ್ರವೇಶ ಮಾಡಿದೆ. ಅದನ್ನು ಬೀಚಿಯವರು ನೋಡಿ ತುಂಬಾ ಸಂತೋಷ ಪಟ್ಟರು.
* ನಿಮ್ಮ ಆಸಕ್ತಿಗೆ ಮನೆ ಮಂದಿಯ ಪ್ರೋತ್ಸಾಹ ಹೇಗಿತ್ತು?
ತಂದೆ ತಾಯಂದಿರ ಪ್ರೋತ್ಸಾಹ ಸದಾ ಇತ್ತು. ತಂದೆ ವ್ಯಾಪಾರಸ್ಥರಾಗಿದ್ದರಿಂದ ಅವರ ಗೆಳೆಯರೊಬ್ಬರ ಕಡೆಯಿಂದ `ವ್ಯಾಪಾರ' ಎನ್ನುವ ಪತ್ರಿಕೆಯಲ್ಲಿ ನನ್ನ ಲೇಖನಗಳು ಪ್ರಕಟಗೊಂಡವು. ಆ ಮೂಲಕ ನನ್ನ ತಂದೆ ಸಾರ್ವತ್ರಿಕ ವೇದಿಕೆಗೆ ಮಾರ್ಗ ಕಲ್ಪಿಸಿದರು.
* ವೃತ್ತಿ ಮತ್ತು ಪ್ರವೃತ್ತಿಗಳನ್ನು ತಾವು ಹೇಗೆ ಸರಿದೂಗಿಸಿಕೊಂಡು ಹೋದಿರಿ?
ಇದೊಂಥರಾ ಕೋ ಇನ್ಸಿಡೆನ್ಸ್. ಸರ್ಕಾರಿ ನೌಕರನಾಗಿ 30 ವರ್ಷಗಳನ್ನು ಪೂರೈಸಿದ್ದೀನಿ. ರಂಗಭೂಮಿಯಲ್ಲೂ ಅಷ್ಟೇ ಆಗಿದೆ. ಹಾಗೆ ನೋಡಿದರೆ ಇದು ನನ್ನ ಸೆಕೆಂಡ್ ಇನ್ನಿಂಗ್ಸ್.
* ನಿಮ್ಮ ಜೊತೆ ವಿವಿಧ ಮುಖಗಳ ಒಡನಾಟವಿದೆ, ಸಾಹಿತಿಗಳು, ಕಲಾವಿದರು, ರೋಗಿಗಳು, ವಿದ್ಯಾರ್ಥಿಗಳು ಇತ್ಯಾದಿ. ಇವರ ಜೊತೆ ಹೇಗೆ ವ್ಯವಹರಿಸುತ್ತೀರಿ?
ಎಲ್ಲರೊಳಗೊಬ್ಬನಾಗಿದ್ದೀನಿ. ಬೀದಿ ನಾಟಕಗಳನ್ನು ಮಾಡುತ್ತಾ ಹಳ್ಳಿಗಳನ್ನು ಸುತ್ತಿದ್ದೀನಿ. ವೈದ್ಯ ವಿದ್ಯಾರ್ಥಿಗಳಿಗೆ ನಾಟಕವಾಡಿಸಿದ್ದೀನಿ. ನನ್ನ ಪ್ರೀತಿಯ ಪೆಥಾಲಜಿಯ ಬಗ್ಗೆ ದೇಶ ವಿದೇಶಗಳಲ್ಲಿ ಉಪನ್ಯಾಸ ಮಾಡಿದ್ದೀನಿ. ಟಿವಿ ಆಕಾಶವಾಣಿಗಳಲ್ಲಿ ನಾಟಕ ಮಾಡಿದ್ದೀನಿ. ವೈದ್ಯಕೀಯ ಸಲಹೆ ನೀಡಿದ್ದೀನಿ. ಅಸಂಖ್ಯಾತ ರೋಗಿಗಳನ್ನು ಪರೀಕ್ಷಿಸಿದ್ದೀನಿ. ಇವರೆಲ್ಲದರಲ್ಲಿ ನಾನೂ ಒಬ್ಬ. ಅದಕ್ಕಿಂತ ಹೆಚ್ಚಿನವನಲ್ಲ.
* ಸರ್ಕಾರಿ ಕೆಲಸ ಅಂದಮೇಲೆ ವರ್ಗಾವಣೆ ಸಮಸ್ಯೆ ಇದ್ದೇ ಇರುತ್ತೆ. ಬೇರೆ ಸ್ಥಳಗಳಿಗೆ ಹೋದಾಗ ತಮ್ಮ ರಂಗಭೂಮಿ ಚಟುವಟಿಕೆ ಹೇಗಿರುತ್ತಿತ್ತು?
ಎಲ್ಲಿಗೆ ಹೋದರೂ ನಮ್ಮ ಅಭಿರುಚಿಗೆ ತಕ್ಕ ಪ್ರೋತ್ಸಾಹ ಇದ್ದೇ ಇದೆ. ರಂಗಭೂಮಿಯ ಸಂಪರ್ಕಜಾಲ ವಿಸ್ತಾರವಾದುದು. ಎಲ್ಲಾ ಕಡೆ ನಮ್ಮವರಿದ್ದಾರೆ!
* ತಾವು ಸಾಹಿತಿಯಾಗಿಯೂ ಗುರುತಿಸಿಕೊಂಡವರು. ಅದರ ಬಗ್ಗೆ ಹೇಳಿ?
ನನ್ನ ಒಟ್ಟು 15 ಕೃತಿಗಳು ಹೊರಬಂದಿವೆ. 1992ರಲ್ಲಿ `ಸನ್ನಿಧಿ' ಕೃತಿ ಹೊರಬಂತು. ವಾಸ್ತುಶಿಲ್ಪದ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಸಂಶೋಧಿಸಿದ ಅಪರೂಪದ ಮಾಹಿತಿ ಇದರಲ್ಲಿದೆ. ರಂಗಸಂಗ, ಸಹೃದಯ, ನಮ್ಮ ನಿಮ್ಮವರು, ಜಿನಮನ ಮುಂತಾದ ಕೃತಿಗಳು ಪ್ರಕಟವಾಗಿವೆ.
* ತೃಪ್ತಿ ಕೊಟ್ಟ ರಂಗ ಯಾವುದು?
ವೃತ್ತಿ ತೃಪ್ತಿ ಕೊಟ್ಟಿದೆ. ಪ್ರವೃತ್ತಿ ಸಂತಪ್ತಿ ಕೊಟ್ಟಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಿಷ್ಠೆ ಎಲ್ಲಿದೆಯೋ ಅಲ್ಲಿ ತೃಪ್ತಿ ಸಂತಪ್ತಿಗಲೆರಡೂ ಇವೆ. ನಾನು ಪೆಥಾಲಜಿ ತೆಗೆದುಕೊಂಡಾಗ ಅಲ್ಲಿ ಹಣ ಬರುವುದಿಲ್ಲ ಎಂದರು. ಆದರೆ ನಾನು ಧೃತಿಗೆಡಲಿಲ್ಲ, ಇಷ್ಟ ಪಟ್ಟು ಆಯ್ಕೆಮಾಡಿಕೊಂಡ ವಿಷಯಕ್ಕೆ ನಾನು ನಿಷ್ಠನಾಗಿದ್ದೆ. ಬಹುಶಃ ನಾನು ಹಣದ ಹಿಂದೆ ಬಿದ್ದಿದ್ದರೆ ಈ ಸಂತೃಪ್ತಿ ಸಿಗುತ್ತಿತ್ತು ಎನ್ನುವಲ್ಲಿ ನನಗೆ ಅನುಮಾನವಿದೆ. ಹಣ ಮುಖ್ಯವಲ್ಲ, ಚಿನ್ನದ ತಟ್ಟೆಯಲ್ಲಿ ಅನ್ನವಲ್ಲದೆ ಚಿನ್ನ ತಿನ್ನಲಾದೀತೆ?
* ನೀವು ಸವೆಸಿದ ಹಾದಿಯಲ್ಲಿ ಕುತೂಹಲ ಎನ್ನಿಸುವ ವ್ಯಕ್ತಿಗಳಿದ್ದಾರೆಯೇ?
ರಂಗಭೂಮಿಯಲ್ಲಿ ಟಿ.ಪಿ. ಕೈಲಾಸಂ, ರಂಗಭೂಮಿ, ಸಿನಿಮಾಗಳೆರಡಲ್ಲೂ ದಂತಕತೆಯಾಗಿರುವ ಡಾ.ರಾಜ್.
No comments:
Post a Comment