Tuesday, September 29, 2009

ಶ್ರೀಧರ್‌ ಜೈನ್‌


ನಾಟ್ಯ ಮಯೂರ ಶ್ರೀಧರ್‌ ಜೈನ್‌!

ಬಹುಶಃ ಅವರು ಹುಟ್ಟಿದ್ದೇ ನೃತ್ಯ­ಕ್ಕಾಗಿ! ಅವರ ನಡೆ- ನುಡಿ­ಯಲ್ಲಿ ನಟ­ರಾ­ಜನ ನಡಿ­ಗೆ­ಯಿದೆ. ಅವರ ನಿಲು­ವಿ­ನಲ್ಲಿ ನಾಟ್ಯ­ಶಾ­ಸ್ತ್ರದ ನವ­ರ­ಸಾ­ದಿ­ಗಳು ನಲಿ­ದಾ­ಡು­ತ್ತವೆ. ಗೆಜ್ಜೆ ಕಟ್ಟಿದ ಅವರ ಹೆಜ್ಜೆಯ ಗುರುತು ರಸಿ­ಕರ ಎದೆ­ಯಲ್ಲಿ ಸದ್ದು ಮಾಡಿವೆ. ಭೂಮಿ­ಕೆಯ ಮೇಲಿಂದ ಹೊಮ್ಮಿ ಬರುವ ಅವರ ಹುಮ್ಮಸ್ಸು ಆನಂದ ಹೊತ್ತು ನಾಡಿ­ನೆ­ಲ್ಲಡೆ ಹರ­ಡಿದೆ.
ಅವರು ಖ್ಯಾತ ನೃತ್ಯ­ಪಟು ಶ್ರೀಧರ್‌ ಜೈನ್‌. ಒಮ್ಮೆ ನೋಡಿ­ದರೆ ಸಾಕು ಯಾರು ಬೇಕಾ­ದರೂ ಅವ­ರೊಬ್ಬ ನೃತ್ಯ­ಗಾರ ಎಂದು ಊಹಿ­ಸ­ಬ­ಹುದು. ಆ ಮೈಕಟ್ಟು, ಮುಖ­ಭಾವ... ನೃತ್ಯ­ವನ್ನು ಕಣ್ಮುಂದೆ ತರು­ತ್ತವೆ. ಒಬ್ಬ ವ್ಯಕ್ತಿ­ಯಾ­ಗಿಯೂ ಶ್ರೀಧರ್‌ ಜೈನ್‌ ಹೃದ­ಯದ ಹತ್ತಿ­ರಕ್ಕೆ ಬಂದು ನಿಲ್ಲು­ತ್ತಾರೆ. ಅವರ ಮಾತಿನ ವಿದೇ­ಯತೆ `ವಿದ್ಯೆ ಉಳ್ಳ­ವನ ಮುಖ ಮುದ್ದು ಬರು­ವಂ­ತಿರ್ಕು' ಎನ್ನುವ ಸರ್ವ­ಜ್ಞನ ವಚ­ನ­ವನ್ನು ಶೃತಿ ಮಾಡು­ತ್ತದೆ.
ಶ್ರದ್ಧಾ­ಭ­ಕ್ತಿ­ಯಿಂದ ಅಭ್ಯಾಸ ಮಾಡಿದ ಭರ­ತ­ನಾಟ್ಯ ಶ್ರೀಧರ್‌ ಅವರ ವ್ಯಕ್ತಿ­ತ್ವ­ವನ್ನು ಬಹಳ ಎತ್ತ­ರಕ್ಕೆ ಏರಿ­ಸಿದೆ. ಭರ­ತ­ನಾ­ಟ್ಯದ ಬಲ­ದಿಂದ ವೈವಿ­ಧ್ಯ­ಮಯ ನೃತ್ಯ ಪ್ರಾಕಾ­ರ­ಗ­ಳನ್ನು ತನ್ನತ್ತ ಸೆಳೆದು ಕೊಂಡಿ­ದ್ದಾರೆ. ಭಾರ­ತೀಯ ನೃತ್ಯ­ಗಳು ಎನ್ನುವ ಕಲ್ಪ­ನೆಯ ಕೆಳಗೆ ಜಾನ­ಪದ, ಸಮ­ಕಾ­ಲೀನ ನೃತ್ಯ, ಪಾಶ್ಚಾತ್ಯ, ರಾಜ­ಸ್ತಾನಿ, ಗರ್ಬಾ, ದಾಂಡ್ಯ, ಪ್ಯೂಜನ್‌...ಇ­ವೆ­ಲ್ಲವೂ ಅವರ ದೇಹ­ದಿಂದ ಹೊಮ್ಮಿ ಬರು­ತ್ತವೆ. ಎ.ಆರ್‌. ರೆಹ­ಮಾನ್‌ ಸಂಯೋ­ಜ­ನೆಯ `ವಂದೇ ಮಾತರಂ' ಗೀತೆಗೆ ಶ್ರೀಧರ್‌ ಜೈನ್‌­ಅ­ವರ ನೃತ್ಯ ಸಂಯೋ­ಜನೆ ರಾಷ್ಟ್ರ­ಮ­ಟ್ಟ­ದಲ್ಲಿ ಖ್ಯಾತಿ ಗಳಿ­ಸಿದೆ. ಅವರ ನೃತ್ಯ ರೂಪ­ಕ­ಗ­ಳಲ್ಲಿ ಕಾಣುವ ಎನರ್ಜಿ ಶ್ರೀಧರ್‌ ಅವರ ನೃತ್ಯ ಭರ­ವ­ಸೆ­ಯನ್ನು ಎತ್ತಿ ಹಿಡಿ­ಯು­ತ್ತದೆ.
ಶ್ರೀಧರ್‌ ಜೈನ್‌ `ಆ­ಪ್ತ­ಮಿತ್ರ' ಚಲ­ನ­ಚಿ­ತ್ರ­ದಲ್ಲಿ ದಿ. ಸೌಂದರ್ಯ ಅವರ ಜೊತೆ ಹೆಜ್ಜೆ ಹಾಕಿ­ದಾಗ ಕನ್ನಡ ನಾಡು ಮನ­ಸಾರೆ ಮೆಚ್ಚಿ­ಕೊಂ­ಡಿತು. ಇಂಥ ಅಪ್ಪಟ ಕಲಾ­ವಿ­ದನ ದಿವ್ಯ ಪ್ರತಿ­ಭೆ­ಯನ್ನು ಬಳ­ಸಿ­ಕೊಂ­ಡಿ­ದ್ದಕ್ಕೆ ಕನ್ನಡ ಚಿತ್ರ­ರಂಗ ನಿಜಕ್ಕೂ ಧನ್ಯ!
ಶ್ರೀಧರ್‌ ಜೈನ್‌ ನೃತ್ಯ ಪರಂ­ಪ­ರೆ­ಯಿಂದ ಬಂದ­ವ­ರಲ್ಲ. ತಂದೆ ದಿ. ಮಿಸ್ರಿ­ಲಾಲ್‌ ಜೈನ್‌ ರಾಜ­ಸ್ಥಾನ ಮೂಲದ ವಾಪಾ­ರ­ಸ್ಥರು. ತಾಯಿ ರತಿ­ದೇವಿ ದಕ್ಷಿಣ ಕನ್ನ­ಡದ ಕಾರ್ಕಳ ಸಮೀ­ಪದ ನಾರ­ವಿ­ಯ­ವರು. ಶ್ರೀಧರ್‌ ಹುಟ್ಟಿದ್ದು ನಾರ­ವಿ­ಯಲ್ಲಿ ಬೆಳ­ದ­ದ್ದೇಲ್ಲಾ ಮೈಸೂ­ರಿ­ನಲ್ಲಿ.
ಶ್ರೀಧರ್‌ ತಮ್ಮ ನಾಲ್ಕನೇ ವಯ­ಸ್ಸಿ­ನ­ಲ್ಲಿಯೇ ತಂದೆ­ಯನ್ನು ಕಳೆ­ದು­ಕೊಂ­ಡರು. 9ನೇ ವಯ­ಸ್ಸಿ­ನಲ್ಲಿ ನೃತ್ಯ­ಗುರು ಶ್ರೀನಿ­ವಾಸ್‌ ಅವರ ಬಳಿ ನೃತ್ಯ ಕಲಿಕೆ ಆರಂ­ಭಿ­ಸಿ­ದಾಗ ಪರಿ­ಸ್ಥಿತಿ ಸರಿ­ಯಾ­ಗಿ­ರ­ಲಿಲ್ಲ. ಅನಿ­ವಾ­ರ್ಯ­ವಾಗಿ ಬಹಳ ಚಿಕ್ಕ­ವ­ಯ­ಸ್ಸಿ­ನ­ಲ್ಲಿಯೇ ಎಲೆ­ಕ್ಟ್ರಾ­ನಿ­ಕ್ಸ್‌­ವೊಂ­ದ­ರಲ್ಲಿ ಕೆಲ­ಸಕ್ಕೆ ಸೇರ­ಬೇ­ಕಾ­ಯಿತು. ಕೆಲ­ಸದ ಒತ್ತಡ ನೃತ್ಯಕ್ಕೆ ಅವ­ಕಾಶ ಕೊಡ­ಲಿಲ್ಲ. ಮಧ್ಯೆ ನೃತ್ಯ ಕಲಿ­ಕೆ­ಯನ್ನು ಬಿಡ­ಬೇ­ಕಾ­ಯಿತು. ಆದರೆ ಕಲಿ­ಕೆಯ ಆಸಕ್ತಿ ಹಸಿ­ರಾ­ಗಿತ್ತು.
ಆಮೇಲೆ ನೃತ್ಯ­ಗುರು ಶೀಲಾ ಶ್ರೀಧರ್‌ ಅವರ ಬಳಿ ನೃತ್ಯ­ಕ­ಲಿಕೆ ಮುಂದು­ವ­ರಿ­ಸಿ­ದರು. 12 ವರ್ಷ­ಗಳ ನೃತ್ಯಾ­ಭ್ಯಾಸ ಅವ­ರಿಗೆ ಹೊಸ­ದೊಂದು ದಾರಿ ತೋರಿ­ಸಿತು. ಮೈಸೂರು ವಿವಿ ಲಲಿ­ತ­ಕಲಾ ಕಾಲೇ­ಜಿ­ನಲ್ಲಿ ಡಿಪ್ಲೊಮಾ ಪಡೆ­ದಿ­ರುವ ಅವರು ವಿದ್ವತ್‌ ಪರೀ­ಕ್ಷೆ­ಯಲ್ಲಿ ಉನ್ನತ ಶ್ರೇಣಿ ಗಳಿ­ಸಿ­ದರು. ಈಗ ಶ್ರೀಧರ್‌ ಜೈನ್‌ ಸ್ವತಃ ನೃತ್ಯ­ಗರು!

ಶ್ರೀ ನಿಮಿ­ಷಾಂಬ ನೃತ್ಯ ಶಾಲೆ: ಇದು ಶ್ರೀಧರ್‌ ಜೈನ್‌ ಅವರ ಕನ­ಸಿನ ಕೂಸು. 1996ರಲ್ಲಿ ಮೈಸೂ­ರಿ­ನಲ್ಲಿ ಸ್ಥಾಪ­ನೆ­ಗೊಂಡ ಈ ನೃತ್ಯ ಶಾಲೆ ಇವತ್ತು ಬಹಳ ಎತ್ತ­ರಕ್ಕೆ ಬೆಳೆ­ದಿದೆ. ಯಾವಾ­ಗಲು ವಿದ್ಯಾ­ರ್ಥಿ­ಗ­ಳಿಂದ ತುಂಬಿ­ರು­ತ್ತದೆ. ಈ ಶಾಲೆ ಮೈಸೂ­ರಿ­ನಲ್ಲಿ 7 ಬ್ರಾಂಚ್‌­ಗ­ಳನ್ನು ಹೊಂದಿದ್ದು ಪ್ರತಿ­ನಿತ್ಯ ನೃತ್ಯ ವಿದ್ಯೆ­ದಾನ ನಡೆ­ಯು­ತ್ತಿದೆ. ನೂರಾರು ವಿದ್ಯಾ­ರ್ಥಿ­ಗ­ಳನ್ನು ಹೊಂದಿ­ರುವ ಶ್ರೀಧರ್‌ ನೆಚ್ಚಿನ ಗುರು­ಗ­ಳಾ­ಗಿ­ದ್ದಾರೆ. ಅವರ ವಿದ್ಯಾ­ರ್ಥಿ­ಗಳು ಈಗಾ­ಗಲೇ ತಮ್ಮ ಪ್ರತಿಭೆ ತೋರಿ­ದ್ದಾರೆ. ವಿದೇಶಿ ಶಿಷ್ಯ­ರನ್ನು ಅವರು ಹೊಂದಿ­ದ್ದಾರೆ. ಭಾರ­ತ­ದಲ್ಲೇ ಪ್ರಥಮ ಬಾರಿಗೆ ಸ್ಕೇಟಿಂಗ್‌ ಮೇಲೆ ನೃತ್ಯ ಪ್ರದ­ರ್ಶಿಸಿ ದಾಖಲೆ ಮಾಡಿದ `ರೀತು' ಶ್ರೀಧರ್‌ ಅವರ ಶಿಷ್ಯ­ರ­ಲ್ಲೊ­ಬ್ಬರು.
ಬಡ ಮಕ್ಕಳ ನೃತ್ಯ ಕಲಿ­ಕೆಗೆ ಪ್ರೊತ್ಸಾಹ ಮಾಡು­ತ್ತಿ­ರುವ ಶ್ರೀಧರ್‌ ಜೈನ್‌ ನೃತ್ಯಕ್ಕೆ ಬೇಕಾದ ವಸ್ತ್ರ, ಒಡವೆ, ಮೇಕಪ್‌ ಮುಂತಾ­ದ­ವನ್ನು ಉಚಿ­ತ­ವಾಗಿ ಒದ­ಗಿ­ಸು­ತ್ತಿ­ದ್ದಾರೆ. `ಶ್ರೀ ನಿಮಿ­ಷಾಂಬ ನಾದಾ­ಲಯ ಮಂಟಪ'ವೆಂಬ ಸಭಾಂ­ಗಣ ಶ್ರೀಧರ್‌ ಅವರ ಮನೆಯ ಭಾಗವೇ ಆಗಿದ್ದು ಮನೆ­ಯಿಡೀ ನೃತ್ಯದ ಪರಿ­ಮಳ ಪಸ­ರಿ­ಸಿದೆ.

ಹೆಜ್ಚೆ-ಗೆಜ್ಜೆ: ಕರ್ನಾ­ಟ­ಕದ ಪ್ರತಿ­ಷ್ಠಿತ `ಹೆಜ್ಜೆ- ಗೆಜ್ಜೆ' ರಾಜ್ಯ­ಮ­ಟ್ಟದ ನೃತ್ಯ ಸ್ಪರ್ಧೆ­ಯನ್ನು ಶ್ರೀಧರ್‌ ಅವರು ಕಳೆದ 13 ವರ್ಷ­ಗ­ಳಿಂದ ಆಯೋ­ಜಿ­ಸುತ್ತಾ ಬಂದಿ­ದ್ದಾರೆ. ನೃತ್ಯದ ಎಲ್ಲಾ ಪ್ರಕಾ­ರ­ಗ­ಳಿಗೂ ನಡೆ­ಯುವ ಈ ಸ್ಪರ್ಧೆ­ಯಲ್ಲಿ ಅಸಂ­ಖ್ಯಾತ ಸ್ಪರ್ಧಾ­ಳು­ಗಳು ಭಾಗ­ವ­ಹಿ­ಸಿ­ದ್ದಾರೆ.

ನೃತ್ಯ­ರೂ­ಪ­ಕ­ಗಳು: ಶ್ರೀಧರ್‌ ಜೈನ್‌ ಸಂಯೋ­ಜಿ­ಸಿ­ರುವ ನೃತ್ಯ ರೂಪ­ಕ­ಗಳು ದೇಶಾ­ದ್ಯಂತ ಪ್ರದ­ರ್ಶ­ನ­ಗೊಂ­ಡಿವೆ. ಮೋಹಿನಿ ಬಸ್ಮಾ­ಸುರ, ಭರತ ಬಾಹು­ಬಲಿ, ಶ್ರೀಶಕ್ತಿ ನಿಮಿ­ಷಾಂಬ, ದಕ್ಷ­ಯಜ್ಞ, ಶ್ರೀ ಮಹ­ವೀರ ವೈಭವ, ಚತ್ರ­ಪತಿ ಶಿವಾಜಿ ಮುಂತಾದ ರೂಪ­ಕ­ಗಳು ಬಹಳ ಯಶ­ಸ್ವಿ­ಯಾ­ಗಿವೆ. ಅಲ್ಲದೆ ಚಲ­ನ­ಚಿತ್ರ, ಟಿವಿ ಧಾರಾ­ವಾ­ಹಿ­ಗ­ಳಿಗೂ ನೃತ್ಯ ಸಂಯೋ­ಜನೆ ಮಾಡಿ­ದ್ದಾರೆ. ಈಗ ನವ­ಶಕ್ತಿ ವೈಭವ ನೃತ್ಯ ರೂಪಕ ಸಂಯೋ­ಜ­ನೆಗೆ ಸಿದ್ಧ­ತೆ­ಗಳು ನಡೆ­ಯು­ತ್ತಿವೆ. ಈ ಬಾರಿಯ ದಸ­ರೆ­ಯಲ್ಲಿ(ಸೆ. 20: ಯುವ ದಸರಾ) ಭಾರ­ತ­ದಲ್ಲೆ ಪ್ರಥ­ಮ­ವಾಗಿ ಶ್ರೀಧರ್‌ ಜೈನ್‌ ಡೋಲಕ್‌ ಮೇಲೆ ನಾಟ್ಯ ಮಾಡ­ಲಿ­ದ್ದಾರೆ ಹಾಗೂ ಜೈ ಹೋ ಗೀತೆಗೆ 40 ಮಂದಿ ಕಲಾ­ವಿ­ದರ ಒಡ­ಗೂಡಿ ಹೆಜ್ಚೆ­ಹಾ­ಕ­ಲಿ­ದ್ದಾರೆ.

ಸಮ್ಮಾನ: ಶ್ರೀಧರ್‌ ಅವರ ನೃತ್ಯ ಪ್ರತಿ­ಭೆಯ ಹಿಂದೆ ಅಪಾರ ಗೌರವ ಪ್ರಶ­ಸ್ತಿ­ಗ­ಗಳು ಅರಸಿ ಬಂದಿವೆ. ಕಲ್ಕತ್ತಾ ಯೂತ್‌ ಪೆಸ್ಟಿ­ವಲ್‌ ರಾಷ್ಟ್ರೀಯ ಪ್ರಶಸ್ತಿ, ಶ್ರೀ ಗೊಮ್ಮ­ಟೇ­ಶ್ವರ ವಿದ್ಯಾ­ಪೀಠ ಪ್ರಶಸ್ತಿ, ಮೈಸೂ­ರಿನ ಜೈನ್‌ ಕಮಿ­ಟಿ­ಯಿಂದ `ನ­ಟ­ಸಾ­ರ್ವ­ಭೌಮ' ಪ್ರಶಸ್ತಿ ಹಾಗೂ ಸಂಘ ಸಂಸ್ಥೆ­ಗ­ಳಿ­ಗಂದ ಹಲವು ಬಿರು­ದು­ಗ­ಳನ್ನು ಗಳಿ­ಸಿ­ದ್ದಾರೆ.
ಶ್ರೀಧರ್‌ ಜೈನ್‌ ಅವರ ಪತ್ನಿ ಸೌಮ್ಯ ಶ್ರೀಧರ್‌ ಹಿಂದೂ­ಸ್ಥಾನಿ ಸಂಗೀತ ಬಲ್ಲ­ವರು. ಆಕಾ­ಶ­ವಾಣಿ ಕಲಾ­ವಿ­ದರೂ ಹೌದು. ಮಗಳು ಲಾಸ್ಯ ನೃತ್ಯ ಕಲಿ­ಯು­ತ್ತಿ­ದ್ದಾಳೆ. ಮಗ ಸಾರಂಗ.
ಜೈನ ಸಮು­ದಾ­ಯ­ದಲ್ಲಿ ಹುಟ್ಟಿ ಭರ­ತ­ನಾಟ್ಯ ಬಲ್ಲ ಪ್ರಥಮ ಕಲಾ­ವಿದ ಎನಿ­ಸಿ­ಕೊಂ­ಡಿ­ರುವ ಶ್ರೀಧರ್‌ ಜೈನ್‌ ಅವ­ರಿಗೆ ನೃತ್ಯ ಬಿಟ್ಟ ಬೇರೊಂದು ಲೋಕವೇ ಇಲ್ಲ. ಅವರ ನಾಡಿ­ಯಲ್ಲಿ ನೃತ್ಯ­ರಾ­ಜನ ವೈಭವ ಸದಾ ಮೂಡಿ­ಬ­ರು­ತ್ತಿದೆ.

ಅನಂತ ಸತ್ಯಂ





ಅನಂತ ಸತ್ಯಂ
ಬಲು ಅಪರೂಪ ಇಂಥವರು......




ಅ­ನಂತ ಸತ್ಯಂಬಲು ಅಪರೂಪ ಇಂಥವರುಕಗ್ಗ­ಲ್ಲನ್ನು ಕಡೆದು ಮೂರುತಿ ಮಾಡುವ ಶಿಲ್ಪಾ­ಗಾರ. ತಂತಿ ಮೇಲೆ ನಡೆದು ಮಾಧುರ್ಯ ತುಂಬುವ ಸಂಗೀ­ತ­ಗಾರ. ಕಲ್ಲಿನ ಗುಣ ಅರಿ­ತ­ವರು. ತಂತಿ­ಗಳ ಶೃತಿ­ಯಿಂದ ನಾಡಿ ಮಿಡಿ­ತ­ಗೊ­ಳಿ­ಸು­ವ­ವರು. ಕಗ್ಗ­ಲ್ಲಿಗೆ ಉಳಿ­ಪೆ­ಟ್ಟಿನ ರುಚಿ ತೋರಿಸಿ ಕೃತಿ ಕಟ್ಟು­ವ­ವರು. ಬೆರಳ ತುದಿ­ಯಿಂದ ತಂತಿ­ಗಳ ಬಳಸಿ ರಸೋ­ತ್ಪತ್ತಿ ಮಾಡು­ವ­ವರು.ಅವರು ವಿದ್ವಾನ್‌ ಎನ್‌. ಅನಂತ ಸತ್ಯಂ. ಅಪ­ರೂ­ಪದ ಶಿಲ್ಪಿ ಹಾಗೂ ವೈಲಿನ್‌ ವಿದ್ವಾಂ­ಸರು. ನಾಡಿ­ನ­ಲ್ಲಿ­ರುವ ಬೆರ­ಳೆ­ಣಿ­ಕೆ­ಯಷ್ಟು ಶಿಲ್ಪಿ­ಗ­ಳಲ್ಲಿ ಅನಂತ ಸತ್ಯಂ ಒಬ್ಬರು. ಅವರ ಕೈಚ­ಳ­ಕ­ದಿಂದ ಮೂಡಿದ ಹಲವು ಕಲಾ­ಕೃ­ತಿ­ಗಳು ನಾಡಿ­ನಾ­ದ್ಯಂತ ಪ್ರಸಿದ್ಧಿ ಪಡೆ­ದಿವೆ. ಬೆಂಗ­ಳೂ­ರಿನ ರಾಜ­ಭ­ವ­ನ­ದ­ಲ್ಲಿ­ರುವ ಮಹಾ­ತ್ಮ­ಗಾಂಧಿ ಪುತ್ಥಳಿ ಅವರ ಮಹ­ತ್ವದ ಕೃತಿ. ಈ ಪುತ್ಥಳಿ ಪ್ರತಿ­ಷ್ಠಾ­ಪ­ನೆ­ಯಾ­ದಾಗ ಅಂದಿನ ರಾಜ್ಯ­ಪಾಲ ಖುರ್ಷಿದ್‌ ಆಲಂ ಖಾನ್‌ ಸತ್ಯಂ ಅವ­ರನ್ನು ಸನ್ಮಾ­ನಿ­ಸಿ­ದ್ದರು.ಸರ್‌. ಎಂ. ವಿಶ್ವೇ­ಶ್ವ­ರಯ್ಯ ಅವರ ಹುಟ್ಟೂ­ರಾದ ಮುದ್ದೇ­ನ­ಹ­ಳ್ಳಿಯ ವಿಶ್ವೇ­ಶ್ವ­ರಯ್ಯ ಪುತ್ಥಳಿ ಅನಂತ ಸತ್ಯಂ ಅವರ ಹೆಸರು ಹೇಳು­ತ್ತದೆ! ಬೆಂಗ­ಳೂ­ರಿನ ಎಂ.ಜಿ. ರಸ್ತೆಯ ಐಎ­ನ್‌ಜಿ ವೈಶ್ಯ ಬ್ಯಾಂಕ್‌ ಆವ­ರ­ಣ­ದ­ಲ್ಲಿ­ರುವ ಸಿಂಹದ ಕೃತಿ ಸತ್ಯಂ ಅವರ ಸೃಜ­ನ­ಶೀ­ಲ­ತೆಯ ಕೂಸು. ಈ ಬ್ಯಾಂಕಿನ ಲೋಗೋ ಕೂಡ ಸತ್ಯಂ ಮೂಡಿ­ಸಿದ ಸಿಂಹವೇ. ಖ್ಯಾತ ನೃತ ಕಲಾ­ವಿದೆ ಪ್ರೊತಿಮಾ ಬೇಡಿ ಅವರ ನೃತ್ಯ­ಗ್ರಾ­ಮ­ದ­ಲ್ಲಿ­ರುವ ಹಲವು ಕಲಾ­ಕೃ­ತಿ­ಗ­ಳನ್ನು ಅನಂತ ಸತ್ಯಂ ಮಾಡಿ­ಕೊ­ಟ್ಟಿ­ದ್ದಾರೆ.ಅನಂತ ಸತ್ಯಂ ಹುಟ್ಟಿದ್ದು ರಾಮ­ನ­ಗ­ರ­ದಲ್ಲಿ. ತಂದೆ ದಿ. ವಿದ್ವಾನ್‌ ನಾಗ­ಭೂ­ಷಣ ಶಾಸ್ತ್ರಿ ಹಾಗೂ ತಾಯಿ ಪಾರ್ವ­ತಮ್ಮ. ತಂದೆ ತಾಯಂ­ದಿ­ರಿ­ಬ್ಬರೂ ಸಂಗೀತ ತಿಳಿ­ದ­ವರು. ರಾಮ­ನ­ಗ­ರ­ದಲ್ಲಿ ಶಾಸ್ತ್ರಿ­ಗಳ ಮನೆ ಎಂದರೆ ಇವ­ತ್ತಿಗೂ ಖ್ಯಾತಿ. ಗಣೇಶ ಹಬ್ಬದ ಕಾಲ ಬಂತೆಂ­ದರೆ ಶಾಸ್ತ್ರಿ­ಗಳ ಮನೆ­ಯಲ್ಲಿ ಸಂಭ್ರ­ಮವೋ ಸಂಭ್ರಮ. ಶಾಸ್ತ್ರಿ­ಗಳ ಕೈಚ­ಳ­ಕ­ದಿಂದ ಮೂಡಿದ ಗಣ­ಪನ ಮೂರ್ತಿ ಕೊಳ್ಳಲು ದೂರದ ಊರಿ­ನಿಂದ ಜನ ಬರು­ತ್ತಿ­ದ್ದ­ರಂತೆ. ಮನೆ ತುಂಬೆಲ್ಲಾ ಮಣ್ಣಿನ ವಾಸನೆ! ಮನೆ ಮಂದಿ­ಯೆಲ್ಲಾ ಒಟ್ಟಿಗೆ ಕೂತು ಗಜಾ­ನ­ನ­ನನ್ನು ಕಟ್ಟು­ತ್ತಿ­ದ್ದರು. ಮಗ ಅನಂತ ಸತ್ಯಂ ಕೈಯಿಂದ ಗಣ­ಪನ ಕಣ್ಣು, ಕಿವಿ, ಮೂಗು ಹೀಗೆ ಒಂದೊಂದೇ ಅಂಗ­ಗ­ಳನ್ನು ಮಾಡಿಸಿ ಶಿಲ್ಪ­ಕಲೆ ಕಲಿ­ಕೆಗೆ ಹಚ್ಚಿ­ದರು. ಅನಂತ ಸತ್ಯ ತಂದೆ ಕೂಡ ಸಂಗೀತ ತಿಳಿ­ದ­ವರು. ಹರಿ­ಕ­ಥೆ­ಗ­ಳಿಗೆ ಹಾರ್ಮೋ­ನಿಯಂ ನುಡಿ­ಸು­ತ್ತಿ­ದ್ದರು. ವಿದ್ವಾಂ­ಸ­ರಾದ ಗುರು­ರಾ­ಜುಲು ನಾಯ್ಡು, ವೆಂಕೋ­ಬ­ದಾ­ಸರು ಮುಂತಾ­ದ­ವರ ಹರಿ­ಕ­ಥೆ­ಗ­ಳಿಗೆ ಹಾರ್ಮೋ­ನಿಯಂ ನುಡಿ­ಸಿ­ದ್ದಾರೆ.ಅನಂತ ಸತ್ಯಂ ಎಸ್ಸೆ­ಸ್ಸೆಲ್ಸಿ ತನಕ ರಾಮ­ನ­ಗ­ರ­ದಲ್ಲೇ ಕಲಿ­ತರು. ನಂತರ ಬೆಂಗ­ಳೂ­ರಿನ ಚಿತ್ರ­ಕಲಾ ಪರಿ­ಷ­ತ್‌­ನಲ್ಲಿ ಬಿಎ­ಫ್‌­ಎಗೆ ಸೇರಿ­ದರು. ಎಂಎ­ಫ್‌ಎ ಮಾಡಿ­ದರು. ಅಲ್ಲೇ ಉಪ­ನ್ಯಾ­ಸ­ಕರೂ ಆದರು.ಸಂಗೀ­ತ­ಗಾರ ಅನಂತ ಸತ್ಯಂ: ಚಿಕ್ಕಂ­ದಿ­ನಲ್ಲಿ ಮನೆ­ಯಲ್ಲೇ ಹಾಡು­ಗಾ­ರಿಕೆ ಕಲಿ­ಯು­ತ್ತಿ­ದ್ದರು. ವೈಲಿನ್‌ ಮೇಲೆ ಆಸಕ್ತಿ ಹುಟ್ಟಿದ್ದು ಹೈಸ್ಕೂಲು ಮೆಟ್ಟಿ­ಲೇ­ರಿ­ದಾಗ. ಬೆಂಗ­ಳೂ­ರಿ­ನಲ್ಲಿ ಕಾಲೇಜು ಸೇರಿದ ಮೇಲೆ 1984ರಲ್ಲಿ ವಿದ್ವಾನ್‌. ಬಿ.ವಿ. ಶ್ರೀಕಂ­ಠೇ­ಶ್ವರ್‌ ಅವರ ಬಳಿ ವೈಲಿನ್‌ ಕಲಿಕೆ ಆರಂ­ಭಿ­ಸಿ­ದರು. ಸತ್ಯಂ ಅವರ ಕಲಿ­ಕೆಯ ದಿನ­ಗಳು ಕುತೂ­ಹ­ಲ­ಕ­ರ­ವಾ­ಗಿವೆ. ಮುಂಜಾನೆ ತಿಂಡಿ ಮುಗಿಸಿ ಬೆಂಗ­ಳೂರು ಕಡೆ ಹೊರ­ಟರೆ ಮತ್ತೆ ಮನೆ ಸೇರು­ತ್ತಿ­ದ್ದುದು ರಾತ್ರಿ ಒಂದು ಗಂಟೆಗೆ. ಮಧ್ಯ­ರಾತ್ರಿ 12.30ಕ್ಕೆ ಬೆಂಗ­ಳೂರು ಬಿಡುವ ಕಡೆಯ ಪ್ಯಾಸೆಂ­ಜರ್‌ ರೈಲು ಹಿಡಿದು ರಾಮ­ನ­ಗರ ಸೇರು­ತ್ತಿ­ದ್ದರು. ಅಪ್ಪ ಅಮ್ಮ ಮಗನ ಹಾದಿ­ಗಾಗಿ ಕಾಯು­ತ್ತಿ­ದ್ದರು. ಗುರು ಹೇಳಿ­ಕೊ­ಟ್ಟದ್ದು ಮರೆತು ಹೋದೀತು ಎಂದು ಅಷ್ಟೊ­ತ್ತಿ­ನಲ್ಲೂ ವೈಲಿನ್‌ ಅಭ್ಯಾಸ ಮಾಡಿ ಮಲ­ಗು­ತ್ತಿ­ದ್ದರು.ಸತ್ಯಂ ಶ್ರೀಕಂ­ಠೇ­ಶ್ವರ್‌ ಅವರ ನೆಚ್ಚಿನ ಶಿಷ್ಯ­ರಾ­ಗಿ­ದ್ದರು. ಕೆಲವು ಸಲ ಅವರ ಮನೆ­ಯಲ್ಲೇ ಪಾಠದ ಜೊತೆಗೆ ಊಟವೂ ಆಗು­ತ್ತಿತ್ತು. ತಿಂಗ­ಳಿ­ಗೊಮ್ಮೆ ಫೀ ಕಟ್ಟುವ ಪರಿ­ಪಾಠ ಇರ­ಲಿಲ್ಲ. ವರ್ಷದ ಫೀಯನ್ನು ಒಮ್ಮೆ ಕಟ್ಟಿದ ಉದಾ­ಹ­ರ­ಣೆ­ಗಳೂ ಇವೆ! ಸತ್ಯಂ ಅವ­ರಿಗೆ ಪೌರೋ­ಹಿ­ತ್ಯವೂ ಗೊತ್ತಿತ್ತು. ಅವ­ಶ್ಯ­ವಿ­ರುವ ಹಣ­ವನ್ನು ಅವರೇ ಸಂಪಾ­ದಿ­ಸು­ತ್ತಿ­ದ್ದರು. ಮದು­ವೆ­ಗ­ಳಿಗೆ ಪೌರೋ­ಹಿತ್ಯ ವಹಿ­ಸು­ತ್ತಿ­ದ್ದರು. ಚಿಕ್ಕ­ವ­ಯ­ಸ್ಸಿ­ನ­ಲ್ಲಿಯೇ ನೂರಾರು ಮದುವೆ ಮಾಡಿ­ಸಿದ ಕೀರ್ತಿ ಅವ­ರದು.ಮೃದಂ­ಗ­ವನ್ನೂ ಕಲಿ­ತರು: ಕಾಲೇಜು ಸಾಗು­ತ್ತಿತ್ತು. ವೈಲಿನ್‌ ಸಾಧನೆ ನಡೆ­ಯು­ತಿತ್ತು. ಇಷ್ಟರ ನಡುವೆ ಮಿಕ್ಕಿದ ಸಮ­ಯ­ವನ್ನು ವ್ಯರ್ಥ ಮಾಡ­ಲಿಲ್ಲ. ವಿದ್ವಾನ್‌ ಎಂ.ಎಲ್‌. ವೀರ­ಭ­ದ್ರಯ್ಯ ಆವರ ಬಳಿ ಮೃದಂ­ಗಕ್ಕೆ ಸೇರಿ­ದರು. ತಂತಿ­ವಾದ್ಯ ವೈಲಿನ್‌ ಹಾಗೂ ತಾಳ ವಾದ್ಯ ಮೃದಂಗ ಎರ­ಡನ್ನೂ ಶ್ರದ್ಧೆ­ಯಿಂದ ಅಭ್ಯಾಸ ಮಾಡಿ­ದರು. ಇವು­ಗಳ ಜೊತೆಗೆ ಹಾರ್ಮೋ­ನಿಯಂ ಜ್ಞಾನವೂ ಇದೆ.1992ರಲ್ಲಿ ಖ್ಯಾತ ವೈಲಿನ್‌ ವಾದಕ ಕರ್ನಾ­ಟಕ ಕಲಾಶ್ರೀ ವಿದ್ವಾನ್‌ ಆರ್‌. ಆರ್‌. ಕೇಶವ ಮೂರ್ತಿ­ಗಳ ಶಿಷ್ಯತ್ವ. ಅಷ್ಟೊ­ತ್ತಿ­ಗಾ­ಗಲೇ ಕಚೇರಿ ನೀಡಲು ಆರಂ­ಭಿ­ಸಿ­ದ್ದರು. ಆಮೇಲೆ ವಿದ್ವಾನ್‌ ಮೈಸೂರು ಎಂ. ನಾಗ­ರಾಜ್‌, ಚಿತ್ರ­ವೀಣಾ ಎನ್‌. ರವಿ­ಕಿ­ರಣ್‌ ಅವ­ರಿಂ­ದಲೂ ಅನಂತ ಸತ್ಯಂ ಸಂಗೀತ ಕಲಿ­ತಿ­ದ್ದಾರೆ.ಸತ್ಯಂ ಅವರ ಪ್ರಥಮ ಕಚೇರಿ ಮದುವೆ ಮನೆ. ಹಲ­ವರು ಮೆಚ್ಚಿ ಬೆನ್ನು­ತ­ಟ್ಟಿ­ದರು. 20ನೇ ವಯ­ಸ್ಸಿ­ನಲ್ಲಿ ಕಚೇರಿ ಆರಂ­ಭಿ­ಸಿದ ಅನಂತ ಸತ್ಯಂ ಹಿಂದೆ ತಿರುಗಿ ನೋಡ­ಲಿಲ್ಲ. ಸೋಲೋ ಹಾಗೂ ಪಕ್ಕ­ವಾ­ದ್ಯ­ಗ­ಳೆ­ರ­ಡ­ರಲ್ಲೂ ರಾಷ್ಟ್ರಾ­ದ್ಯಂತ ಕಛೇರಿ ನೀಡಿ­ದ್ದಾರೆ. ಸಾಗ­ರ­ದಾ­ಚೆಗೂ ಸತ್ಯಂ ಅವರ ಪ್ರತಿಭೆ ಸಾಗಿದೆ. ಸ್ಟಿಟ್ಜ­ರ್ಲೆಂಡ್‌ ಪ್ರವಾಸ ಮಾಡಿ ಅಲ್ಲಿಯ ಹಲವು ನಗ­ರ­ಗ­ಳಲ್ಲಿ ಎರಡು ತಿಂಗಳ ಕಾಲ ತಮ್ಮ ಸಂಗೀತ ಪ್ರತಿಭೆ ತೋರಿ­ದ್ದಾರೆ.ಮದುವೆ ಮನೆ­ಯಿಂದ ಆರಂ­ಭ­ವಾದ ಸತ್ಯಂ ಅವರ ಕಚೇ­ರಿ­ಗಳು ಇಲ್ಲಿ­ಯ­ವ­ರೆಗೆ ಸಾವಿ­ರ­ಗಳ ಗಡಿ ಮುಟ್ಟಿವೆ. ಆರ್‌.ಕೆ. ಶ್ರೀಕಂ­ಠನ್‌, ವಿದ್ಯಾ­ಭೂ­ಷಣ ಸೇರಿ­ದಂತೆ ಹಲವು ಮಂದಿ ವಿದ್ವಾಂ­ಸ­ರಿಗೆ ವೈಲಿನ್‌ ಸಾಥ್‌ ನೀಡಿ­ದ್ದಾರೆ. ಸೋಲೋ ವೈಲಿನ್‌ ಕಚೇ­ರಿ­ಗ­ಳಲ್ಲೂ ಅನಂತ ಸತ್ಯಂ ಹೆಸರು ಗಳಿ­ಸಿ­ದ್ದಾರೆ.ರಾಷ್ಟ್ರೀಯ ಪ್ರಶಸ್ತಿ: ಅನಂತ ಸತ್ಯಂ ಅವರು ಶಿಲ್ಪ­ಕಲೆ ಹಾಗೂ ಸಂಗೀತ ಎರ­ಡ­ರಲ್ಲೂ ಅಪಾರ ಮೆಚ್ಚುಗೆ ಗಳಿ­ಸಿ­ದ್ದಾರೆ. ಅವ­ರನ್ನು ಹಲವು ಗೌರವ ಪ್ರಶ­ಸ್ತಿ­ಗಳು ಅರಸಿ ಬಂದಿವೆ. 1992ರಲ್ಲಿ ಕರ್ನಾ­ಟಕ ಚಿತ್ರ­ಕಲಾ ಪರಿ­ಷತ್‌ ಆಯೋ­ಜಿ­ಸಿದ್ದ ಅಖಿಲ ಭಾರತ ಲಲಿತ ಕಲೆ ಸ್ಪರ್ಧೆ­ಯಲ್ಲಿ ರಾಷ್ಟ್ರೀಯ ಪ್ರಶ­ಸ್ತಿ­ಗ­ಳಿ­ಸಿ­ದ್ದಾರೆ. 1993ರಲ್ಲಿ ಚಿತ್ರ­ಕಲಾ ಪರಿ­ಷ­ತ್‌­ನಲ್ಲಿ `ಶ್ರೇ­ಷ್ಠ­ವಿ­ದ್ಯಾರ್ಥಿ' ಪ್ರಶ­ಸ್ತಿ­ಯನ್ನು ತಮ್ಮ­ದಾ­ಗಿ­ಸಿ­ಕೊಂ­ಡಿ­ದ್ದಾರೆ. 1991ರಲ್ಲಿ ವೈಲಿನ್‌ ಜೂನಿ­ಯರ್‌ ಪರಿ­ಕ್ಷೆ­ಯಲ್ಲಿ ದ್ವಿತೀಯ ರ್ಯಾಂಕ್‌ ಗಳಿ­ಸಿ­ದ್ದಾರೆ. 1997ರಲ್ಲಿ ಸುವರ್ಣ ಸ್ವಾತಂತ್ರ್ಯ ಸಮಿತಿ ಪ್ರಶಸ್ತಿ, ಲಲಿತ ಕಲಾ ಅಕಾ­ಡೆಮಿ ಸ್ಕಾಲ­ರ್‌­ಶಿಷ್‌, ಇತ್ತೀ­ಚೆಗೆ `ಚಾ­ಣಕ್ಯ ರತ್ನ' ಪ್ರಶಸ್ತಿ ಮುಂತಾದ ಗೌರ­ವ­ಗ­ಳಿಗೆ ಭಾಜ­ನ­ರಾ­ಗಿ­ದ್ದಾರೆ. 2000 ತನಕ ಚಿತ್ರ­ಕಲಾ ಪರಿ­ಷ­ತ್‌­ನಲ್ಲೇ ಉಪ­ನ್ಯಾ­ಸ­ಕ­ರಾ­ಗಿದ್ದ ಅವರು ವಿದ್ಯಾ­ರ್ಥಿ­ಗಳ ನೆಚ್ಚಿನ ಶಿಕ್ಷ­ಕ­ರಾ­ಗಿ­ದ್ದರು. ಯಾವುದೋ ಒಂದು ಸಂಸ್ಥೆ­ಯಲ್ಲಿ ಇರು­ವುದು ಪ್ರಾಯೋ­ಗಿಕ ಬೆಳ­ವ­ಣಿಗೆ ಕಷ್ಟ ಎನಿ­ಸಿತು. ಪರಿ­ಷತ್‌ ಕೆಲ­ಸಕ್ಕೆ ಗುಡ್‌ ಬೈ ಹೇಳಿ­ದರು. ಈಗ ಸ್ವತಂತ್ರ ಶಿಲ್ಪಿ ಹಾಗೂ ಸಂಗೀತ ಗುರು. ಹಲವು ಕಡೆ ಶಿಲ್ಪ­ಕಲಾ ಕಾರ್ಯ­ಗಾ­ರ­ಗ­ಳಲ್ಲಿ ಪಾಲ್ಗೊಂಡು ಚಿತ್ರ­ಕಲೆ ಬೋಧಿ­ಸು­ತ್ತಿ­ದ್ದಾರೆ. ಹಲವು ಶಿಲ್ಪ­ಕಲಾ ಕಾರ್ಯಾ­ಗಾ­ರ­ಗ­ಳಲ್ಲಿ ಭಾಗ­ವ­ಹಿ­ಸಿ­ದ್ದಾರೆ.ಇವು­ಗಳ ಜೊತೆಗೆ ಅನಂತ ಸತ್ಯ ಉತ್ತಮ ಕ್ರಿಡಾ­ಪಟು ಕೂಡ. ಕ್ರಿಕೆಟ್‌ ಅಂದರೆ ಪ್ರಾಣ. ಕಾಲೇಜು ದಿನ­ಗ­ಳಲ್ಲಿ ರಣಜಿ ಪಂದ್ಯ­ಗ­ಳಲ್ಲಿ ಆಟ­ವಾ­ಡಿದ ಅನು­ಭ­ವ­ವಿದೆ. ಅನಂತ ಸತ್ಯಂ ನಮ್ಮ ನಾಡಿನ ಅಪ­ರೂ­ಪದ ಕಲಾ­ವಿ­ದರು. ಒಬ್ಬ­ವ್ಯಕ್ತಿ ಲಲಿತ ಕಲೆ­ಗಳ ಒಂದು ವಿದ್ಯೆ­ಯನ್ನು ಸಾಧಿಸಿ ಧಕ್ಕಿ­ಸಿ­ಕೊ­ಳ್ಳಲು ಒಂದು ಜನ್ಮವೇ ಬೇಕು. ಆದರೆ ಅವ­ರಿಗೆ ಶಿಲ್ಪ­ಕಲೆ, ವೈಲಿನ್‌, ಮೃದಂಗ, ಹಾರ್ಮೋ­ನಿಯಂ ಜ್ಞಾನ ಒಲಿದು ಬಂದಿವೆ. ಇವ­ರನ್ನು ಅಪ­ರೂಪ ಎನ್ನಲು ಇಷ್ಟೇ ಸಾಕು. ಇಂಥ ಅನರ್ಘ್ಯ ಪ್ರತಿ­ಭೆ­ಯನ್ನು ಗುರು­ತಿ­ಸಿ­ದ­ವರು ಬಹಳ ಕಡಿಮೆ ಮಂದಿ. ಅದಾ­ವು­ದರ ಬಗ್ಗೆಯೂ ತಲೆ ಕೆಡಿ­ಸಿ­ಕೊ­ಳ್ಳದ ಅನಂತ ಸತ್ಯಂ ಸೇವೆ­ಯನ್ನೇ ಸತ್ಯ ಮತ್ತು ನಿರಂ­ತರ ಎಂದು ನಂಬಿ­ದ್ದಾರೆ.

Tuesday, September 8, 2009

ಗಣ­ಪತಿ ಸಚ್ಚಿ­ದಾ­ನಂದ ಸ್ವಾಮೀಜಿ



ಸಪ್ತ ಸ್ವರಗಳ `ಸ್ವಾಮೀಜಿ' ಹೃದಯ

ಸ ರಿ ಗ ಮ ಪ ದ ನಿ....ಗಳ ಮೇಲೆ ಆ ಮಾನ­ವ­ತಾ­ವಾ­ದಿಗೆ ಅದೇನು ವಿಶ್ವಾಸ! ಸಂಗೀತ ಒಂದು ಶಕ್ತಿ. ಬದು­ಕಿ­ನ­ಲ್ಲಿ­ರುವ ಸೌಂದರ್ಯ ಕಾಣಲು ಸಂಗೀತ ಪ್ರಧಾನ ಮಾರ್ಗ. ಮನುಷ್ಯ ಮಾತ್ರ­ವಲ್ಲ ಪ್ರಾಣಿ ಪಕ್ಷಿ­ಗಳ ಹೃದಯ ತಲು­ಪುವ ಅಪೂರ್ವ ಚೈತನ್ಯ ಸಂಗೀತ. ಜಗದ ಮನು­ಷ್ಯ­ತ್ವ­ವನ್ನು ಒಂದೆಡೆ ಕಲೆ­ಹಾ­ಕುವ ಮಾರ್ಗ. ಮಾಯಾ­ಲೋ­ಕದ ಒತ್ತ­ಡ­ಗ­ಳಿಂದ ಬಳ­ಲಿದ ಹೃದ­ಯ­ಗ­ಳಿಗೆ ವಿಶ್ರಾಂ­ತಿಯ ಗುಳಿಗೆ. ಸಾವಿರ ವ್ಯಾಧಿ­ಗ­ಳನ್ನು ಗುಣ­ಪ­ಡಿ­ಸುವ ಸಾಮ­ರ್ಥ್ಯ­ವಿ­ರುವ ದಿವ್ಯ ಔಷಧಿ.... ಹೀಗೆಂದು ನಂಬಿ­ರುವ ಅವರ ಹೃದಯ ಸಪ್ತ­ಸ್ವ­ರ­ಗ­ಳಿಂದ ಉತ್ಪ­ತ್ತಿ­ಯಾ­ಗಿದೆ!
ಅವ­ರೊಬ್ಬ ಸ್ವಾಮೀಜಿ. ಯಾವುದೋ ಒಂದು ಸಮಾ­ಜಕ್ಕೆ, ಸಮು­ದಾ­ಯಕ್ಕೆ ಸೀಮಿ­ತ­ವಾ­ದ­ವ­ರಲ್ಲ. ಪವಾಡ ಮಾಡಿ ಮಾವಿ­ನ­ಹಣ್ಣು ಉದು­ರಿ­ಸುವ ಮಂತ್ರ­ವಾ­ದಿ­ಯಲ್ಲ. ಮಠದ ಹೆಸ­ರಲ್ಲಿ ಮನೆ­ಕ­ಟ್ಟು­ವ­ವ­ರಲ್ಲ. ಬರೀ ಮಾತು­ಗ­ಳ­ನ್ನಾಡಿ ಜೇಬು ತುಂಬಿ­ಸಿ­ಕೊ­ಳ್ಳುವ ಸ್ವಾಮೀ­ಜಿಯೂ ಅಲ್ಲ! ಅವ­ರೊಬ್ಬ ಹಾಡು­ಗಾರ. ಹಾಡು ಹೇಳಿ ಸಂತೋಷ ಕೊಡು­ವವ. ವಾದ್ಯ ನುಡಿಸಿ ಮನ­ಸ್ಸು­ಗಳ ಮೇಲೆ ಬಣ್ಣ ಬಳಿ­ಯು­ವವ. ಸಪ್ತ ಸ್ವರ­ಗ­ಳನ್ನು ದೇಹ­ವಿಡೀ ತುಂಬಿ­ಕೊಂ­ಡಿ­ರುವ ಸಂಗೀತ ಸಂಪನ್ನ.
ಅವರು ಗಣ­ಪತಿ ಸಚ್ಚಿ­ದಾ­ನಂದ ಸ್ವಾಮೀಜಿ. ಚಾಮುಂಡಿ ಬೆಟ್ಟದ ತಪ್ಪ­ಲಿನ ಪ್ರಕೃತಿ ಮಡಿ­ಲಿ­ನಲ್ಲಿ ಅರ­ಳಿ­ರುವ ಅವ­ಧೂತ ದತ್ತ ಪೀಠದ ಸಂಸ್ಥಾ­ಪ­ಕರು. ಸ್ವತಃ ಸಂಗೀ­ತ­ಗಾ­ರರು, ಸ್ವರ ಸಂಯೋ­ಜ­ಕರೂ ಆಗಿ­ರುವ ಶ್ರೀಗಳು ತಮ್ಮ ಭಕ್ತಿ ಸಂಗೀತ ಮಾರ್ಗದ ಮೂಲಕ ವಿಶ್ವ ಪರ್ಯ­ಟನೆ ಮಾಡಿ­ದ­ವರು. ತಮ್ಮ ಸಂಗೀತ ಚಿಕಿತ್ಸೆ ಮೂಲಕ ವಿಶ್ವ ಮಾನವ ಸಮಾ­ಜ­ದಲ್ಲಿ ಶಾಂತಿ ಮೂಡಿ­ಸಲು ಹವ­ಣಿ­ಸು­ತ್ತಿ­ರುವ ಯೋಗಿ ಶ್ರೀ ಸ್ವಾಮೀಜಿ.
ಸಚ್ಚಿ­ದಾ­ನಂದ ಶ್ರೀಗಳ ಸಂಗೀತ ಚಿಕಿತ್ಸೆ ಇಂದು ಜಗ­ತ್ತಿ­ನೆ­ಲ್ಲೆಡೆ ಮನ್ನಣೆ ಪಡೆ­ದಿದೆ. ಅವರ ಭಕ್ತಿ ಸಂಗೀ­ತ­ದಲ್ಲಿ ಮನ­ಶ್ಯಾ­ಸ್ತ್ರ­ವಿದೆ. ಭವಿ­ಷ್ಯ­ವಿದೆ. ಪತಂ­ಜಲಿ ಯೋಗ­ಸೂ­ತ್ರ­ಗ­ಳಿವೆ. ಸಪ್ತ ಸ್ವರ­ಗಳ ಶುದ್ಧ­ತೆ­ಯಿಂದ ಹೊಮ್ಮಿ ಬರುವ ಮಾಧು­ರ್ಯ­ವನ್ನು ಆಲಿ­ಸುವ ಮನ­ಸ್ಸು­ಗ­ಳಲ್ಲಿ ಸಂತೋ­ಷದ ಕಿಚ್ಚು ಹೊತ್ತಿ­ಕೊ­ಳ್ಳು­ತ್ತದೆ. ಅಲ್ಲೊಂದು ಶಕ್ತಿಯ ಸಂಚಾ­ರ­ವಾ­ಗು­ತ್ತದೆ. ಕೇಳು­ಗನ ನಾಡಿ­ಯಲ್ಲಿ ಶಕ್ತಿ ಚಲಿ­ಸುತ್ತಾ ತಾನಾ­ಗಿಯೇ ಆನಂದ ಉತ್ಪ­ತ್ತಿ­ಯಾ­ಗು­ತ್ತದೆ. ಅದೇ ಚಿಕಿ­ತ್ಸಕ ಗುಣ. ಅದೇ ಸಂಗೀತ ಚಿಕಿತ್ಸೆ.
ಸಂಗೀತ ಚಿಕಿ­ತ್ಸೆ­ಯನ್ನು ಬಲ­ವಾಗಿ ನಂಬಿ­ರುವ ಸಚ್ಚಿ­ದಾ­ನಂದ ಶ್ರೀಗಳು ತಮ್ಮ ಸಂಗೀ­ತದ ಮೂಲಕ ಕೇಳುವ ಮನ­ಸ್ಸು­ಗ­ಳಲ್ಲಿ ರೋಮಾಂ­ಚನ ಸೃಷ್ಟಿ­ಸು­ತ್ತಾರೆ. ಆತ್ಮ­ವನ್ನು ಉಲ್ಲಾ­ಸ­ಗೊ­ಳಿ­ಸು­ತ್ತಾರೆ. ಕಣ್ಣಂ­ಚಿ­ನಲ್ಲಿ ಬಾಷ್ಪ ಹರಿ­ಸು­ತ್ತಾರೆ. ಆ ಅನು­ಭವ ಪಡೆ­ಯಲು ಅವರ ಸಂಗೀ­ತ­ವನ್ನೇ ಕೇಳ­ಬೇಕು.
ಮೈಸೂರು ಆಶ್ರ­ಮದ ಆವ­ರ­ಣ­ದ­ಲ್ಲಿ­ರುವ ನಾದ­ಮಂ­ಟಪ ಅದ್ಬು­ತ­ವನ್ನು ಹೊತ್ತು ನಿಂತಿದೆ. ಮಂಟ­ಪಕ್ಕೆ 72 ಕಂಭ­ಗಳು ಆಸ­ರೆ­ಯಾ­ಗಿವೆ. ಆ 72 ಕಂಭ­ಗಳು ಕರ್ನಾ­ಟಕ ಶಾಸ್ತ್ರೀಯ ಸಂಗೀ­ತದ 72 ಮೇಳ­ಕರ್ತ ರಾಗ­ಗ­ಳನ್ನು ಪ್ರತಿ­ನಿ­ಧಿ­ಸು­ತ್ತವೆ. ಅಲ್ಲಿ ಹತ್ತು ನಿಮಿಷ ಕೂತರೆ ಸಾಕು ಮನಸ್ಸು ನಿರ್ಮ­ಲ­ವಾ­ಗು­ತ್ತದೆ. ಅಲ್ಲಿ ಬೀಸುವ ಗಾಳಿ ಸರಿ­ಗ­ಮ­ಗ­ಳನ್ನು ಹೊತ್ತು ಸಾಗು­ತ್ತದೆ. ಸುಂದರ ಪರಿ­ಸ­ರ­ದೊ­ಳ­ಗಿನ ಪ್ರತಿ ಗಿಡವೂ ಕೃತಿ ಗೀತೆ ಕೀರ್ತ­ನೆ­ಗ­ಳನ್ನು ಗುನು­ಗು­ನಿ­ಸು­ತ್ತವೆ. ಅಲ್ಲಿ ಹೋದರೆ ಮೌನದ ಜೊತೆ ಮಾತ­ನಾ­ಡ­ಬ­ಹುದು. ನಿಶ­ಬ್ದದ ಜೊತೆ ಆಲಾಪ ಮಾಡ­ಬ­ಹುದು. ಆ ಅನು­ಭವ ಪಡೆ­ಯಲು ಅಲ್ಲಿಗೇ ಹೋಗ­ಬೇಕು.
ಪ್ರತಿ­ಯೊಂದು ಹಬ್ಬ ಹರಿ­ದಿ­ನ­ಗ­ಳಲ್ಲೂ ಸಚ್ಚಿ­ದಾ­ನಂದ ಆಶ್ರಮ ಸಂಗೀತ ಪ್ರೇಮಿ­ಗ­ಳಿಂದ ತುಂಬಿ­ರು­ತ್ತದೆ. ಅಲ್ಲಿಯ ವಾತಾ­ವ­ರಣ ಯುವ ಮನ­ಸ್ಸು­ಗ­ಳಿಗೆ ಸ್ಪೂರ್ತಿ ತುಂಬು­ತ್ತದೆ. ಅಲ್ಲದೆ ಸಂಗೀ­ತ­ಗಾ­ರ­ರಿಗೆ ಆಶ್ರಮ ವೇದಿ­ಕೆಯೂ ಆಗಿದೆ. ವಿಶೇಷ ಸಂದ­ರ್ಭ­ಗ­ಳಲ್ಲಿ ಸಂಗೀ­ತ­ಗಾ­ರ­ರನ್ನು ಆಹ್ವಾ­ನಿಸಿ ಕಛೇರಿ ಕೊಡಿ­ಸ­ಲಾ­ಗು­ತ್ತದೆ. ಸಂಗೀ­ತ­ಗಾ­ರ­ರನ್ನು ಗುರು­ತಿಸಿ ಗೌರ­ವಿ­ಸುವ ಪರಂ­ಪ­ರೆ­ಯನ್ನೂ ಶ್ರೀಗಳು ಮಾಡುತ್ತಾ ಬಂದಿ­ದ್ದಾರೆ. ಶಿವ­ರಾತ್ರಿ ಹಬ್ಬ­ವನ್ನು ವಿೃಂ­ಭ­ಣೆ­ಯಿಂದ ಆಚ­ರಣೆ ಮಾಡ­ಲಾ­ಗು­ತ್ತದೆ. ಅಂದು ನಡೆ­ಸುವ ಹೋಮ ಬಹಳ ಮಹತ್ವ ಪಡೆ­ದಿದೆ.
ಶ್ರೀಗ­ಳಿಗೆ ಒಂದು ಕಗ್ಗ­ಲ್ಲನ್ನೂ ಕೊಟ್ಟರು ಸ್ವರ ಹುಟ್ಟಿ­ಸು­ತ್ತಾರೆ. ಅವರು ಬಹು­ವಾದ್ಯ ಪಂಡಿ­ತರು. ಶ್ರೀಗಳ ಆಶೀ­ರ್ವ­ಚ­ನ­ಗಳೂ ಕೂಡ ಬಹಳ ಮನ್ನಣೆ ಪಡೆ­ದಿವೆ. ಧಾರ್ಮಿಕ ದೂರ­ರ್ಶನ ವಾಹಿ­ನಿ­ಗ­ಳಲ್ಲಿ ಅವರ ಉಪ­ನ್ಯಾ­ಸ­ಗಳು ಪ್ರಸಾ­ರ­ಗೊ­ಳ್ಳು­ತ್ತವೆ. ಶ್ರೀಗಳೇ ಹಾಡಿ­ರುವ ಸಾವಿ­ರಾರು ಸಿಡಿ, ಕ್ಸಾಸೆ­ಟ್‌­ಗಳು ಹೊರ­ಬಂ­ದಿವೆ.
ಅವ­ತಾರ ಮೂರ್ತಿ ದತ್ತಾ­ತ್ರೇ­ಯರ ಹಲವು ಪೀಠ­ಗ­ಳಲ್ಲಿ ಸಚ್ಚಿ­ದಾ­ನಂದ ಶ್ರೀ ಸ್ಥಾಪ­ನೆಯ ಅವ­ಧೂತ ಪೀಠವೂ ಒಂದು. ಅವರು ದೇಶಾ­ದ್ಯಂತ ಹಲವು ದೇವಾ­ಲ­ಯ­ಗ­ಳನ್ನು ನಿರ್ಮಿ­ಸಿ­ದ್ದಾರೆ.
ಶ್ರೀಗಳ ಮೂಲ ಮೈಸೂ­ರಾ­ದರೂ ಅವರ ಸಂಗೀತ ಅಭಿ­ಯಾನ ವಿಶ್ವ­ದಾ­ದ್ಯಂತ ನಡೆ­ಯು­ತ್ತಿದೆ. ಭಾರ­ತದ ಎಲ್ಲಾ ಪ್ರಮುಖ ನಗ­ರ­ಗ­ಳಲ್ಲಿ ಆಶ್ರ­ಮದ ಶಾಖೆ­ಗ­ಳಿವೆ. ವಿದೇ­ಶ­ಗ­ಳಲ್ಲೂ ಇವೆ.
1966ರಲ್ಲಿ ಒಂದು ಸಣ್ಣ ಗುಡಿ­ಸ­ಲಿ­ನಿಂದ ಆರಂ­ಭ­ವಾದ ಶ್ರೀಗಳ ಆಶ್ರಮ ಇಂದು ೃಹ­ದಾ­ಕಾ­ರ­ವಾಗಿ ಬೆಳೆ­ದಿದೆ. ಸಂಗೀ­ತದ ಮೂಲಕ ಸಮಾ­ಜ­ದಲ್ಲಿ ಶಾಂತಿ ಸ್ಥಾಪ­ನೆಯ ಮಂತ್ರ­ವನ್ನು ಜಗ­ತ್ತಿಗೆ ತಿಳಿ­ಸಿದೆ.

ಲಕ್ಷ್ಮ­ಯ್ಯ­ರೆಂಬೋ ರಂಗ­ಭೂಮಿ ದಾಖಲೆ.


ಲಕ್ಷ್ಮ­ಯ್ಯ­ರೆಂಬೋ ರಂಗ­ಭೂಮಿ ದಾಖಲೆ.


ಮಾರ್ಚ್‌ 3, 1962ರಂದು ಅವರು ಮುಖಕ್ಕೆ ಹಚ್ಚಿದ ಬಣ್ಣ ಇನ್ನೂ ಹಸಿ­ರಾ­ಗಿದೆ. ನಾಲ್ಕು­ವರೆ ದಶ­ಕ­ಗಳ ಕಾಲದ ರಂಗ­ಭೂಮಿ ಆರಾ­ಧನೆ ಅವ­ರಿಗೆ ಎಂದಿಗೂ ಬೇಸರ ತಂದಿಲ್ಲ. ಅವರು ರಂಗದ ಮೇಲೆ ಬಂದರೆ ಪ್ರೇಕ್ಷ­ಕರ ಎದೆ ಬಡಿತ ಇಮ್ಮ­ಡಿ­ಯಾ­ಗು­ತ್ತದೆ. ಹಾರ್ಮೋ­ನಿಯಂ ಪೆಟ್ಟಿಯ ಮನೆ ಹಿಡಿದು ಕಂದ­ಪದ ಹಾಡಿ­ದ­ರೆಂ­ದರೆ- ವನ್ಸ್‌­ಮೋರ್‌... ಮೊಳ­ಗು­ತ್ತದೆ.
ಕುರು­ಕ್ಷೇ­ತ್ರದ ದುಶ್ಯಾ­ಸನ ಅವ­ರಿಗೆ ಬಹಳ ಇಷ್ಟ. ಅವನ ಸ್ವರೂ­ಪನ್ನು ತನ್ನೊ­ಳಗೆ ತಂದು­ಕೊಂ­ಡಾಗ ರಂಗದ ಮೇಲೆ ವಿದ್ಯುತ್‌ ಸಂಚಾರ. ಬಲ­ರಾಮ, ಭೀಷ್ಮ, ಬ್ರಹ್ಮ, ಯಮ­ರಾ­ಜ­ರನ್ನೂ ಅವರು ತಂಬಿ­ಕೊಂ­ಡಿ­ದ್ದಾರೆ. ಅಭಿ­ನ­ಯಿಸಿ ಅಭಿ­ನ­ಯಿಸಿ ಅದು ಜೀವ­ನದ ಒಂದು ಭಾಗ­ವಾ­ಗಿಯೇ ಹೋಗಿದೆ. ಅವರು ನಮ್ಮೊ­ಳ­ಗಿನ ಅಪ­ರೂ­ಪದ ಕಲಾ­ವಿದ.
ಅವರು ಕೆ. ಲಕ್ಷ್ಮಯ್ಯ. ಪೌರಾ­ಣಿಕ ನಾಟ­ಕ­ಗ­ಳನ್ನು ಆಸ್ವಾ­ದಿ­ಸುವ ರಸಿ­ಕ­ರಿಗೆ ಈ ಹೆಸರು ಬಹು ಪರಿ­ಚಿತ. ತಮ್ಮ ಇಪ್ಪ­ತ್ತನೇ ವಯ­ಸ್ಸಿ­ನಿಂದ ಅಭಿ­ನ­ಯಿ­ಸಲು ಆರಂ­ಭಿ­ಸಿದ ಲಕ್ಷ್ಮಯ್ಯ ಇಲ್ಲಿ­ಯ­ವ­ರೆಗೆ ಸಾವಿ­ರಾರು ಪೌರಾ­ಣಿಕ, ಐತಿ­ಹಾ­ಸಿಕ ನಾಟ­ಕ­ಗ­ಳಲ್ಲಿ ಅಭಿ­ನ­ಯಿ­ಸಿ­ದ್ದಾರೆ. ಚಲ­ನ­ಚಿತ್ರ ಸೇರಿ­ದಂತೆ ಹಲವು ದೂರ­ದ­ರ್ಶನ ಧಾರಾ­ವಾ­ಹಿ­ಗ­ಳಲ್ಲಿ ಅಭಿ­ನ­ಯಿ­ಸಿ­ದ್ದಾರೆ. ಶಾಲೆ ಕಲಿ­ತದ್ದು ಬರೀ ನಾಲ್ಕನೇ ತರ­ಗತಿ ಆದರೂ ರಂಗ­ಭೂ­ಮಿ­ಯಲ್ಲಿ ಅವ­ರಿ­ಗಾದ ಅನು­ಭ­ವದ ಅಳತೆ ಆಸಾಧ್ಯ.
ರಂಗ­ಭೂಮಿ ಬಗ್ಗೆ ಲಕ್ಷ್ಮಯ್ಯ ಅವ­ರಿಗೆ ತಮ್ಮದೇ ಆದ ಕನ­ವ­ರಿ­ಕೆ­ಗ­ಳಿವೆ. ಬದ­ಲಾದ ರಂಗ­ಭೂಮಿ ಹಾದಿ­ಯನ್ನು ತಮ್ಮದೇ ಧಾಟಿ­ಯಲ್ಲಿ ಹೇಳು­ತ್ತಾರೆ. ಇವತ್ತು ಹಣ­ವಿ­ಲ್ಲದೆ ನಾಟಕ ಮಾಡಲು ಸಾಧ್ಯ­ವಿಲ್ಲ. ನಾಟ­ಕ­ವಾ­ಡಲು ಹಣವೇ ಮುಖ್ಯ­ವಾ­ಗಿದೆ. ಅವತ್ತು ನಾಟ­ಕಕ್ಕೆ ಹಣ ಮುಖ್ಯ­ವಾ­ಗಿ­ರ­ಲಿಲ್ಲ. ನಟ ಮುಖ್ಯ­ವಾ­ಗಿದ್ದ. ಅಭಿ­ನಯ ಮುಖ್ಯ­ವಾ­ಗಿತ್ತು. ಈಗ ಆ ಕಾಲ ಉಳಿ­ದಿಲ್ಲ. ನಾಟಕ ಆಡಲು ಮಾರು­ಕಟ್ಟೆ ಬೇಕಾ­ಗಿದೆ... ಎನ್ನು­ವಾಗ ಲಕ್ಷ್ಮಯ್ಯ ಯಾವುದೋ ಪಾತ್ರ­ದಂತೆ ಕಾಣು­ತ್ತಾರೆ!
ಲಕ್ಷ್ಮಯ್ಯ ಬೆಂಗ­ಳೂ­ರಿನ ನಾಗ­ವಾ­ರ­ದ­ವರು. ಕ್ಯಾತಪ್ಪ ಮತ್ತು ಚನ್ನಮ್ಮ ದಂಪ­ತಿ­ಗಳ ಸುಪು­ತ್ರರು. ರಂಗ­ಭೂಮಿ ಮಾಡು­ತ್ತಲೇ ಕೃಷಿ ವಿಶ್ವ­ವಿ­ದ್ಯಾ­ಲ­ಯ­ದಲ್ಲಿ ನೌಕ­ರಿಗೆ ಸೇರಿ­ದರು. ಕೃಷಿ ವಿವಿಯ ಎಲ್ಲಾ ಸಾಂಸ್ಕೃ­ತಿಕ ಚಟು­ವ­ಟಿ­ಕೆ­ಗ­ಳಲ್ಲಿ ಲಕ್ಷ್ಮಯ್ಯ ಅವರು ಭಾಗ­ವ­ಹಿ­ಸಿ­ದ್ದಾರೆ. ಲಕ್ಷ್ಮಯ್ಯ ಅವರ ರಂಗ ಪ್ರತಿ­ಭೆಗೆ ಕೃಷಿ ವಿವಿ ಸೂಕ್ತ ವೇದಿಕೆ ಕಲ್ಪಿಸಿ ಪ್ರೋತ್ಸಾ­ಹಿ­ಸಿದೆ. ಅವ­ರೀಗ ನೌಕ­ರಿ­ಯಿಂದ ನಿವೃ­ತ್ತ­ರಾ­ಗಿ­ದ್ದಾರೆ.

ಯಕ್ಷ­ಗಾ­ನಕ್ಕೂ ಹೆಜ್ಜೆ: ಲಕ್ಷ್ಮಯ್ಯ ಅವರು ಯಕ್ಷ­ಗಾ­ನ­ಗ­ಳಲ್ಲೂ ಪಾತ್ರ ಮಾಡಿ ಸೈ ಎನಿ­ಸಿ­ಕೊಂ­ಡಿ­ದ್ದಾರೆ. ಹಲವು ಮೂಡ­ಲ­ಪಾಯ ಪ್ರಸಂ­ಗ­ಗ­ಳಲ್ಲಿ ಅಭಿ­ನ­ಯಿ­ಸಿ­ದ್ದಾರೆ. ಆಂಜ­ನೇ­ಯ­ನಾಗಿ ಅವರು ಹಾಕಿದ ಪಾತ್ರ ಬಹಳ ಮನ್ನಣೆ ಪಡೆ­ದಿದೆ. ಸಾಮಾ­ನ್ಯ­ವಾಗಿ ರಂಗ­ಕ­ಲಾ­ವಿ­ದರು ಯಕ್ಷ­ಗಾ­ನ­ಗ­ಳಲ್ಲಿ ಅಭಿ­ನ­ಯಿ­ಸು­ವುದು ಬಹಳ ಕಮ್ಮಿ. ಯಕ್ಷ­ಗಾ­ನಕ್ಕೆ ಮುಖ್ಯ­ವಾಗಿ ತರ­ಬೇತಿ ಬೇಕು. ಆದರೆ ಲಕ್ಷ್ಮಯ್ಯ ಅವ­ರಿಗೆ ಯಾವ ತರ­ಬೇ­ತಿಯೂ ಇಲ್ಲ. ಅಭಿ­ನ­ಯದ ಮೇಲೆ ಅವಿ­ರಿ­ಗಿ­ರುವ ಪ್ರೀತಿಯೇ ತರ­ಬೇತಿ.

ಹೆಜ್ಜೆ ಗುರುತು: ಲಕ್ಷ್ಮಯ್ಯ ಅವ­ರನ್ನು ಅಪ­ರೂಪ ಎನ್ನಲು ಹಲವು ಕಾರ­ಣ­ಗ­ಳಿವೆ. ರಂಗ­ಭೂ­ಮಿ­ಯಲ್ಲಿ ಇಟ್ಟ ಪ್ರತಿ ಹೆಜ್ಜೆ­ಯನ್ನು ಅವರು ದಾಖಲು ಮಾಡುತ್ತಾ ಬಂದಿ­ದ್ದಾರೆ. ನಲ­ವ­ತ್ತ್ಯೆದು ವರ್ಷ­ಗ­ಳಲ್ಲಿ ಅಭಿ­ನಯ ಮಾಡಿದ ನಾಟ­ಕ­ಗಳ ಹೆಸರು ಪಾತ್ರ, ಪಡೆದ ಸಂಭಾ­ವನೆ, ಖರ್ಚು­ವೆ­ಚ್ಚ­ಗ­ಳ­ನ್ನೊ­ಳ­ಗೊಂಡ ವಿವ­ರ­ಗ­ಳನ್ನು ಬರೆ­ದಿ­ಡುವ ಲಕ್ಷ್ಮಯ್ಯ ಅವರ ಅಭ್ಯಾ­ಸಕ್ಕೆ ನಾವು ಮೂಗಿನ ಮೇಲೆ ಬೆರ­ಳಿ­ಡ­ಲೇ­ಬೇಕು!
ಯಾಕೀ ಅಭ್ಯಾಸ? ಎಂಬ ಪ್ರಶ್ನೆಗೆ ಅವರ ಕೊಡುವ ಉತ್ತರ: ಸಮಾ­ಧಾನ. ಮನ­ಸ್ಸಿನ ಸಮಾ­ಧಾ­ನ­ಕ್ಕಾಗಿ ಈ ದಾಖ­ಲಾತಿ! ಎನ್ನುತ್ತಾ ಮೇಲೆ ನೋಡು­ತ್ತಾರೆ.
1962ನೇ ಇಸ್ವಿ­ಯಿಂದ 2009 ಆಗಸ್ಟ್‌ ತಿಂಗ­ಳ­ವ­ರೆಗೂ ಅಭಿ­ನ­ಯಿ­ಸಿದ ಎಲ್ಲಾ ನಾಟ­ಕ­ಗಳ ಮಾಹಿತಿ ಲಕ್ಷ್ಮಯ್ಯ ಅವರ ಬಳಿ ಇದೆ.

ನಾಟಕ ಸಂಗ್ರಹ: ಲಕ್ಷ್ಮಯ್ಯ ಅವ­ರನ್ನು ಅಪ­ರೂಪ ಎನ್ನಲು ಇನ್ನೊಂದು ಮುಖ್ಯ­ವಾದ ಕಾರ­ಣ­ವಿದೆ. ಅವರ ಬಳಿ ಕೈ ಬರ­ಹದ ಹಲವು ಪೌರಾ­ಣಿಕ, ಐತಿ­ಹಾ­ಸಿಕ ನಾಟಕ ಕೃತಿ­ಗ­ಳಿವೆ. ಬಾಯಿಂದ ಬಾಯಿಗೆ ಕಲಿ­ಸುವ ಹಾಡು ಸಂಭಾ­ಷ­ಣೆ­ಗ­ಳನ್ನು ಲಕ್ಷ್ಮಯ್ಯ ಅವರು ತಮ್ಮ ಪತ್ನಿ ಸಹ­ಕಾ­ರ­ದೊಂ­ದಿಗೆ ಕೈ ಬರ­ಹ­ಕ್ಕಿ­ಳಿ­ಸಿ­ದ್ದಾರೆ. ಅವು­ಗ­ಳನ್ನು ಹಲವು ವರ್ಷ­ಗ­ಳಿಂದ ಕಾಪಾ­ಡಿ­ಕೊಂಡು ಬರು­ತ್ತಿ­ದ್ದಾರೆ.
ಇನ್ನೊಂದು ವಿಶೇ­ಷ­ವೆಂ­ದರೆ ಆ ಎಲ್ಲಾ ಕೃತಿ­ಗ­ಳನ್ನು ಯಾರಾ­ದರೂ ಇಷ್ಟ­ಪಟ್ಟು ನಾಟಕ ಅಭ್ಯಾ­ಸಕ್ಕೆ ಅಥವಾ ಓದಲು ಕೇಳಿ­ದರೆ ಧಾರಾ­ಳ­ವಾಗಿ ಕೊಡು­ತ್ತಾರೆ. ವಾಪಸ್‌ ಕೊಡು­ವ­ವ­ರಿಗೆ ಮಾತ್ರ!

ಲೆಕ್ಕ­ವಿ­ಲ್ಲದ ಬಿರುದು ಗೌರವ: ಲಕ್ಷ್ಮಯ್ಯ ಅವ­ರನ್ನು ಅರಸಿ ಬಂದಿ­ರುವ ಗೌರವ ಪ್ರಶ­ಸ್ತಿ­ಗ­ಳಿಗೆ ಲೆಕ್ಕ­ವಿಲ್ಲ. ರಾಜ್ಯ­ದೆ­ಲ್ಲೆಡೆ ರಂಗ ಪ್ರವಾಸ ಮಾಡಿ­ರುವ ಅವ­ರನ್ನು ನಾಡಿನ ಹಲವು ಸಂಘ ಸಂಸ್ಥೆ­ಗಳು ಗೌರ­ವಿ­ಸಿವೆ. ಕಲಾ­ರತ್ನ, ನಾಟಕ ರತ್ನ, ಕಲಾ­ಜ್ಯೋತಿ ಮುಂತಾದ ಹತ್ತಾರು ಬಿರು­ದು­ಗ­ಳಿಗೆ ಪಾತ್ರ­ರಾ­ಗಿ­ದ್ದಾರೆ. ನಾಟಕ ಸೇವಾ ಪ್ರಶಸ್ತಿ, ವಿಶ್ವ­ಜ್ಯೋತಿ ಪ್ರಶಸ್ತಿ, ಡಾ. ರಾಜ್‌­ಕು­ಮಾರ್‌ ಸುವರ್ಣ ರತ್ನ ಪ್ರಶಸ್ತಿ, ಕರ್ನಾ­ಟಕ ದೃವ­ತಾರೆ ಪ್ರಶಸ್ತಿ ಲಕ್ಷ್ಮಯ್ಯ ಅವರ ಮುಡಿ­ಗೇ­ರಿವೆ.
70 ವರ್ಷ ವಯ­ಸ್ಸಿನ ಹೊಸ್ತಿ­ಲ­ಲ್ಲಿ­ರುವ ಲಕ್ಷ್ಮಯ್ಯ ಅವರು ಈಗಲೂ ಪಾದ­ರಸ. ದೇಹ ಮಾಗಿ­ದ್ದರೂ ಅವರ ಉತ್ಸಾ­ಹಕ್ಕೆ ವಯ­ಸ್ಸಾ­ಗಿಲ್ಲ. ಮೊನ್ನೆ ತಾನೆ ಸುಂದ­ರ­ಕಾಂಡ ರಾಮಾ­ಯ­ಣ­ದಲ್ಲಿ ಪಾತ್ರ ಮಾಡಿ­ದ್ದಾರೆ. ಅವರ ಎದುರು ಕೂತರೆ ದಶ­ಕ­ಗಳ ರಂಗ ಇತಿ­ಹಾಸ ಎಳೆ­ಯಾಗಿ ಬಿಚ್ಚಿ­ಕೊ­ಳ್ಳು­ತ್ತದೆ. ಇಂಥ ಅನರ್ಘ್ಯ ಪ್ರತಿಭೆ ನಮ್ಮ ಘನ ಸರ್ಕಾ­ರದ ಕಣ್ಣಿಗೆ ಬೀಳದೆ ಇರು­ವುದು ಕನ್ನ­ಡಿ­ಗರ ದುರಾ­ದೃಷ್ಟ! ಮೊಬೈಲ್‌: 9844174899 ಸಂಖ್ಯೆ­ಗ­ಳಿಗೆ ಕರೆ­ಮಾಡಿ ಈ ಕಲಾ­ವಿ­ದ­ನಿಗೆ ಅಭಿ­ನಂ­ದಿಸಿ. ಕೈ ಬರ­ಹದ ಪೌರಾ­ಣಿಕ, ಐತಿ­ಹಾ­ಸಿಕ ನಾಟಕ ಕೃತಿ ಬೇಕಿ­ದ್ದರೆ ಕರೆ ಮಾಡಿ. ನಾಟಕ ಮಾಡಿ. ಆದರೆ ದಯ­ವಿಟ್ಟು ವಾಪಸ್‌ ಕೊಡಿ!

ಮೈಸೂ­ರಿ­ನಲ್ಲಿ `ಚೀನಿ' ಸಂಗೀತ




ಮೈಸೂ­ರಿ­ನಲ್ಲಿ `ಚೀನಿ' ಸಂಗೀತ







ಬೆಳಕು ಹರಿ­ಯುವ ಮೊದಲೇ ದಾಸ ಭಟ್ಟರ ತಬಲ ಪಾಠ ಆರಂ­ಭ­ವಾ­ಗು­ತ್ತಿತ್ತು. ಚಾವ­ಡಿಯ ಮೇಲೆ ಭಟ್ಟರ ಏಳು ಮಂದಿ ಮಕ್ಕಳು ಸಾಲಾಗಿ ಮಲ­ಗಿ­ರು­ತಿ­ದ್ದರು. ಕೆಳಗೆ ನಡೆ­ಯುವ ತಬಲ ವಾದ­ನದ ಅಲೆ ವಿದ್ಯುತ್‌ ಸ್ವರೂಪ ತಾಳಿ ಮಲ­ಗಿದ್ದ ಮಕ್ಕಳ ನಾಡಿ­ಯಲ್ಲಿ ಸಂಚಾ­ರ­ಗೊ­ಳ್ಳು­ತ್ತಿತ್ತು. ಶಾಸ್ತ್ರೀ­ಯ­ವಾಗಿ ಕಲಿ­ತಿ­ದ್ದಿಲ್ಲ. ಆದರೂ ಅವ­ರೆ­ಲ್ಲರು ನಮ್ಮ ನಾಡಿನ ಖ್ಯಾತ ಸಂಗೀ­ತ­ಗಾ­ರರು. ಅದೇ ಅಲ್ಲವೇ ಸಂಗೀತ ರಕ್ತ!
ಅವ­ರೊ­ಳ­ಗೊಬ್ಬ ಶ್ರೀನಿ­ವಾಸ ಭಟ್ಟರು. `ಚೀನಿ' ಎಂಬ ಹೆಸ­ರಿ­ನಿಂದ ಸಂಗೀತ ರಸಿ­ಕರ ಮನ­ಸೂ­ರೆ­ಗೊಂ­ಡ­ವರು. ಮೈಸೂ­ರಿನ ರಂಗಾ­ಯ­ಣದ ಆವ­ರ­ಣ­ದೊ­ಳ­ಗಿ­ರುವ ಗಿಡ ಗಂಟೆ­ಯನ್ನು ಕೇಳಿ­ದರೂ ಚೀನಿ­ಯ­ವರ ಕತೆ ಬಿಚ್ಚಿ­ಕೊ­ಳ್ಳ­ತ್ತದೆ. ಇಡೀ ಆವ­ರ­ಣ­ದೊ­ಳಗೆ ಅವರು ಸಂಗೀತ ಕರ­ತಾ­ಡನ ಸೃಷ್ಟಿ­ಸಿ­ದ್ದಾರೆ. ಅವರ ಗಿಟಾ­ರ್‌­ವಾ­ದನ ಭೂಮಿ­ಗೀತ ರಂಗ­ಮಂ­ದಿ­ರ­ದೊ­ಳಗೆ ಮ್ಯಾಜಿಕ್‌ ಮಾಡಿದೆ. ಅವರ ತಬಲ ವಾದನ ತೆರದ ವನ­ರಂ­ಗದ ಕಡೆಯ ಪ್ರೇಕ್ಷ­ಕ­ನಿಗೂ ತಲು­ಪಿದೆ. ಅವರ ಹಾರ್ಮೋ­ನಿಯಂ ಮನೆ­ಗಳು ಕೇಳು­ಗನ ತಲೆ­ದೂ­ಗಿ­ಸಿವೆ. ಸ್ವರ­ಮಂ­ಡ­ಲದ ತಂತಿ­ಗಳು ಭಾವು­ಕ­ಗೊ­ಳಿ­ಸಿವೆ. ಗಾಂಗ್‌ನ ಢಣ್‌ ಶಬ್ದ ಪ್ರೆಕ್ಷ­ಕನ ಉಸಿರು ಕಟ್ಟಿ­ಸಿದೆ......ಅ­ವ­ರೊಬ್ಬ ಬಹು­ವಾದ್ಯ ವಾದಕ. ಕನ್ನಡ ರಂಗ ಸಂಗೀ­ತದ ಪ್ರಬುದ್ಧ ಪ್ರತಿಭೆ.
ರಂಗಾ­ಯ­ಣದ ಆರಂ­ಭ­ದಿಂ­ದಲೂ ಶ್ರೀನಿ­ವಾಸ ಭಟ್ಟರು ಅಲ್ಲಿಯ ಒಂದು ಭಾಗ­ವಾ­ಗಿ­ದ್ದಾರೆ. ಚೀನಿ ಇಲ್ಲದ ರಂಗಾ­ಯಣ ಕಲ್ಪ­ನೆಗೂ ಸಿಕ್ಕು­ವು­ದಿಲ್ಲ! ಅವ­ರೊಬ್ಬ ಆಪ್ತ ಸಂಗೀ­ತ­ಗಾರ. ಚಿಣ್ಣರ ಮೇಳದ ಮಕ್ಕಳ ಮನ­ಸ್ಸಿ­ನಲ್ಲಿ ಉಳಿ­ಯುವ `ಚೀನಿ ಮಾಮಾ' ಎಂದೂ ಮರೆ­ಯ­ಲಾ­ಗದ ಹೃದಯ. ಅವರು ಮಕ್ಕಳ ಜೊತೆ ಮಗು­ವಾಗಿ ಹಾಡು ಹೇಳಿ­ಕೊ­ಡು­ತ್ತಾರೆ. ನೂರಾರು ಮಕ್ಕ­ಳನ್ನು ಏಕ ಕಾಲ­ದಲ್ಲಿ ತಮ್ಮ ಸಂಗೀ­ತ­ದಿಂದ ನಿಯಂ­ತ್ರಿ­ಸುವ ಶಕ್ತಿ ಅವ­ರ­ಲ್ಲಿದೆ. ರಂಗ­ಭೂಮಿ ಕಲಿ­ಕೆ­ಗಾಗಿ ರಂಗಾ­ಯ­ಣಕ್ಕೆ ಬರುವ ರಂಗಾ­ಸ­ಕ್ತ­ರಿಗೆ ಚೀನಿ ಅವರ ಪಾಠ ಅಮೂ­ಲ್ಯ­ವಾ­ದುದು. ಸಾಹಿ­ತ್ಯಕ್ಕೆ ಅವರು ನೀಡುವ ಸ್ವರ ಪ್ರಸ್ತಾ­ನ­ದಲ್ಲಿ ಅವರ ಪ್ರಬು­ದ್ಧತೆ ಎದ್ದು­ಕಾ­ಣು­ತ್ತದೆ. ತಾಳದ ಮೇಲೆ ಅವರ ಹಿಡಿತ ವಿಸ್ಮಯ ಹುಟ್ಟಿ­ಸು­ತ್ತದೆ.
ರಂಗಾ­ಯ­ಣದ ನೂರಾರು ನಾಟ­ಕ­ಗ­ಳಲ್ಲಿ ಚೀನಿ ಅವರು ರಂಗದ ಹಿಂದಿನ ನಾಯಕ. ರಂಗಾ­ಯ­ಣದ ಪ್ರತಿ­ಯೊಂದು ರಂಗಾ­ಪ್ರ­ಯೋ­ಗ­ದಲ್ಲೂ ಚೀನಿ ಛಾಯೆ ಎದ್ದು ಕಾಣು­ತ್ತದೆ. ಅವರ ಸಂಗೀ­ತ­ಕ್ಕಾ­ಗಿಯೇ ನಾಟಕ ನೋಡಲು ಬರುವ ಪ್ರೇಕ್ಷ­ಕರು ಮೈಸೂ­ರಿ­ನ­ಲ್ಲಿ­ದ್ದಾರೆ. ನಟನ ಅಭಿ­ನ­ಯಕ್ಕೆ ತಮ್ಮ ಸಂಗೀ­ತದ ಮೂಲಕ ಜೀವ­ತುಂ­ಬು­ವಲ್ಲಿ ಅವರು ಎತ್ತಿದ ಕೈ. ಅವರ ವಿಶೇಷ ಸುಂದರ ಧನಿ ಕೇಳುವ ಮನ­ಸ್ಸು­ಗ­ಳನ್ನು ಕಟ್ಟಿ­ಹಾ­ಕು­ತ್ತದೆ. ಅವರ ಮಾತು­ಗಳು ಕೂಡ ಅಷ್ಟೆ. ಮುತ್ತು. ಬಹು­ಬೇ­ಗನೆ ಚೀನಿ ಎಲ್ಲರ ಸಮೀ­ಪದ ಮನು­ಷ್ಯ­ರಾ­ಗಿ­ಬಿ­ಡು­ತ್ತಾರೆ.
ಚೀನಿ ಅವರು ರಂಗ­ಭೂ­ಮಿಗೆ ಬಂದದ್ದು ಆಕ­ಸ್ಮಿಕ. ಮಂಗ­ಳೂ­ರಿನ ಹೊಟೇ­ಲೊಂ­ದರ ಲೈವ್‌­ಬ್ಯಾಂಡ್‌ ಗಿಟಾರ್‌ ವಾದ­ಕ­ರಾ­ಗಿದ್ದ ಅವ­ರಿಗೆ ರಂಗ ಸಂಗೀ­ತ­ಗಾ­ರ­ನಾ­ಗುವ ಕಲ್ಪನೆ ಕನ­ಸಿ­ನ­ಲ್ಲಿಯೂ ಇರ­ಲಿಲ್ಲ. ಮಂಗ­ಳೂ­ರಿ­ನಲ್ಲಿ ಪಾಶ್ಚ್ಯಾತ್ಯ ಸಂಗೀ­ತ­ಗಾ­ರರ ಒಂದು ತಂಡ­ವಿತ್ತು. ಕನ್ನಡ ಚಿತ್ರ­ರಂ­ಗ­ದಲ್ಲಿ ಇಂದು ಮಿಂಚು­ತ್ತಿ­ರುವ ಸಂಗೀತ ನಿರ್ದೇ­ಶಕ ಗುರು­ಕಿ­ರಣ್‌ ಅಲ್ಲಿ ಗಾಯ­ಕ­ರಾ­ಗಿ­ದ್ದರು. ಉಡುಪಿ, ಗೋವಾ ಮುಂತಾದ ಕಡೆ ತಮ್ಮ ಕಾರ್ಯ­ಕ್ರಮ ನೀಡು­ತ್ತಿ­ದ್ದರು. ಶ್ರೀನಿ­ವಾಸ ಭಟ್ಟ­ರಿಗೆ ಚೀನಿ ಎಂಬ ಹೆಸರು ಬಂದದ್ದು ಇಲ್ಲೇ.
ನೀನಾ­ಸಂನ `ಮೂ­ರ­ಕಾ­ಸಿನ ಸಂಗೀತ ನಾಟಕ' ರಂಗ ಪ್ರಯೋ­ಗ­ದಿಂದ ಚೀನಿ ರಂಗ ಸಂಗೀ­ತ­ಗಾ­ರ­ರಾಗಿ ಬಡ್ತಿ ಪಡೆ­ದರು. ನಂತರ ಕೆ.ವಿ. ಅಕ್ಷರ ಅವರ ಕಡೆ­ಯಿಂದ ರಂಗ­ದಿ­ಗ್ಗಜ ಬಿ.ವಿ. ಕಾರಂ­ತರ ಪರಿ­ಚ­ಯ­ವಾ­ಯಿತು. ಕಾರಂತ ನಿರ್ದೇ­ಶ­ನದ `ಸ­ದಾ­ರಮೆ' ಹಾಗೂ `ಬ­ಣ್ಣಿನ ಬಂಡಿ' ನಾಟ­ಕ­ಗ­ಳಲ್ಲಿ ಸಹಾ­ಯ­ಕ­ರಾಗಿ ಕೆಲಸ ಮಾಡಿ­ದರು. ಅಲ್ಲಿ ಚೀನಿ ತೋರಿದ ಪ್ರತಿಭೆ ಕಾರಂ­ತ­ರಲ್ಲಿ ಭರ­ವಸೆ ಮೂಡಿ­ಸಿತು. ಅಲ್ಲಿಂದ ಶ್ರೀನಿ­ವಾಸ ಭಟ್ಟರ ರಂಗ­ಭೂಮಿ ಪಯಣ ಆರಂ­ಭ­ವಾ­ಯಿತು.
ಕಾರಂ­ತರು ರಂಗಾ­ಯಣ ಕಟ್ಟು­ವಾಗ ಕಡೆ ಘಳಿ­ಗೆ­ಯಲ್ಲಿ ಚೀನಿ ರಂಗಾ­ಯಣ ಗರಡಿ ಸೇರಿ­ದರು. ಅಲ್ಲಿಂದ ಚೀನಿ ಅವರ ಮುಂದೆ ರಂಗ­ಭೂಮಿ ತೆರೆ­ದು­ಕೊಂ­ಡಿತು. ರಂಗ­ಭೂ­ಮಿ­ಯನ್ನು ಎಲ್ಲೂ ಕಲಿ­ತಿ­ದ್ದಿಲ್ಲ. ಆದರೆ ಕಾರಂ­ತರ ಪ್ರಭಾವ ಅವ­ರಲ್ಲಿ ರಂಗ­ಭೂ­ಮಿಯ ಉಸಿ­ರಾ­ಡು­ವಂತೆ ಮಾಡಿತು.
ಬಿ.ವಿ. ಕಾರಂ­ತರ ನೆಚ್ಚಿನ ಶಿಷ್ಯ­ರಲ್ಲಿ ಚೀನಿ ಕೂಡ ಒಬ್ಬರು. ಅವ­ರನ್ನು ಕಾರಂ­ತರು ಬಹ­ಳ­ವಾಗಿ ಪ್ರೀತಿ­ಸು­ತ್ತಿ­ದ್ದರು. ರಂಗಾ­ಯ­ಣ­ವೆಂಬ ಕುಟುಂ­ಬ­ವೊಂ­ದ­ರಲ್ಲಿ ಚೀನಿ ಎಲ್ಲ­ರಿಂದ ಪ್ರೀತಿ­ಸ­ಲ್ಪ­ಡುವ ಹುಡು­ಗ­ನಾ­ಗಿ­ದ್ದರು. ಪ್ರೀತಿ­ಸಿದ ಹುಡುಗಿ `ಸು­ಚೇತಾ'ರನ್ನು ರಂಗಾ­ಯ­ಣದ ವನ­ರಂ­ಗ­ದಲ್ಲಿ ಕಲಾ­ವಿ­ದರ ಮುಂದೆ ಕೈ ಹಿಡು­ದದ್ದು ವಿಶೇಷ!
ಆರಂ­ಭ­ದಲ್ಲಿ ಕಾರಂ­ತರೇ ಸಂಗೀತ ನಿರ್ದೇ­ಶಿ­ಸಿದ ನಾಟ­ಕ­ಗ­ಳಿಗೆ ಸ್ವರ ಹಾಕು­ತ್ತಿ­ದ್ದರು. ವಾದ್ಯ ನುಡಿ­ಸು­ತ್ತಿ­ದ್ದರು. ಆ ನಂತರ ಸ್ವತಂ­ತ್ರ­ವಾಗಿ ಸಂಗೀತ ನಿರ್ದೇ­ಶನ ನೀಡಿ­ದರು. ಕಾರಂ­ತರ ಬಹ­ಳಷ್ಟು ನಾಟ­ಕ­ಗ­ಳಿಗೆ ಚೀನಿ ಅವರೇ ಸಂಗೀತ ನಿರ್ದೇ­ಶ­ಕರು. ಕಾರಂ­ತರು ಅವ­ರನ್ನು ಬಹ­ಳ­ವಾಗಿ ಹಚ್ಚಿ­ಕೊಂ­ಡಿ­ದ್ದರು. ಅವರು ಸಾಯುವ ಮುಂಚೆ ತಮಗೆ ಪತ್ರ ಬರೆ­ದಿ­ದ್ದನ್ನು ಚೀನಿ ನೋವಿ­ನಿಂದ ನೆನಪು ಮಾಡಿ­ಕೊ­ಳ್ಳು­ತ್ತಾರೆ.
ಅವರು ಸದಾ ಒಂದ­ಲ್ಲೊಂದು ಕೆಲಸ ಮಾಡು­ತ್ತಲೇ ಇರುವ ಶ್ರಮ ಜೀವಿ. ಪೆಟ್ಟಿ ಹಿಡಿದು ಕೂತರೆ ಅಲ್ಲೊಂದು ಒಳ್ಳೆಯ ಸಂಗೀತ ಮೂಡಿ ಬರ­ಲೇ­ಬೇಕು. ಒಂದು ರೀತಿಯ ಹಠ­ಯೋಗ. ಅವರು ರಂಗಾ­ಯ­ಣ­ದಲ್ಲಿ ವರ್ಷ­ಪೂರ್ತಿ ಬಿಜಿ. ಜತೆಗೆ ರಂಗ­ಸಂ­ಗೀತ ಶಿಬಿ­ರ­ಗಳು, ಕಮ್ಮ­ಟ­ಗಳು, ಚಿಣ್ಣರ ಮೇಳ, ಸಂಸ್ಕೃತಿ ಶಿಬಿರ ಹೀಗೆ ಯಾವಾ­ಗಲೂ ಅವ­ರಿಗೆ ಕೆಲಸ ಇದ್ದೇ ಇರು­ತ್ತದೆ. ರಜ­ದಲ್ಲೂ ಅವ­ರಿಗೆ ಬಿಡು­ವಿ­ರು­ವು­ದಿಲ್ಲ.
ಅವರು ರಂಗ­ಭೂ­ಮಿಗೆ ಸಲ್ಲಿ­ಸಿದ ಸೇವೆಗೆ ತಕ್ಕ ಮನ್ನಣೆ ದೊರೆ­ಯದೆ ಇರು­ವುದು ಬಹಳ ನೋವಿನ ವಿಷಯ. ಸರ್ಕಾರಿ ರೆಪ­ರ್ಟ­ರಿ­ಯಾದ ರಂಗಾ­ಯ­ಣ­ದಲ್ಲಿ ಶಿಕ್ಷ­ಕರು ಹಾಗೂ ಪ್ರಶಿ­ಕ್ಷ­ಕರು ಎಂಬ ಎರಡು ವರ್ಗದ ಕಲಾ­ವಿ­ದ­ರಿ­ದ್ದಾರೆ. ಚೀನಿ ಶಿಕ್ಷಕ ವರ್ಗದ ಕಲಾ­ವಿ­ದರು. ಆದರೆ ಅವ­ರಿಗೆ ಸಿಗುವ ಸರ್ಕಾರಿ ಸೌಲ­ಭ್ಯ­ಗಳು ಬಹಳ ಕಡಿಮೆ. ಇದು ನಿಜಕ್ಕೂ ತಾರ­ತಮ್ಯ. ರಂಗಾ­ಯ­ಣದ ಅವಿ­ಭಾಜ್ಯ ಅಂಗ­ವೊಂ­ದಕ್ಕೆ ಮಾಡಿದ ಮೋಸ­ವಿದು. ಅವ­ರಿಗೆ ಸಿಗ­ಬೇ­ಕಾದ ಮನ್ನ­ಣೆ­ಯನ್ನು ನಮ್ಮ ಸರ್ಕಾರ ಆದಷ್ಟು ಬೇಗ ಕೊಟ್ಟರೆ ಕಲಾ­ವಿ­ದರ ಪ್ರತಿ­ಭೆ­ಯನ್ನು ಗೌರ­ವಿ­ಸಿ­ದಂ­ತಾ­ಗು­ತ್ತದೆ.
ಚೀನಿ ಅವರು ಸೌಲ­ಭ್ಯ­ಗಳ ಬಗ್ಗೆ ಎಂದೂ ತಲೆ ಕೆಡಿ­ಸಿ­ಕೊಂ­ಡಿ­ದ್ದಿಲ್ಲ. ಅವರ ಕೆಲ­ಸ­ವನ್ನು ಮೆಚ್ಚಿ­ಕೊ­ಳ್ಳಲು ನೂರಾರು ಅಭಿ­ಮಾ­ನಿ­ಗ­ಳಿ­ದ್ದಾರೆ. ಸಂತೋಷ ಪಡಲು ರಕ್ತ­ದಲ್ಲಿ ಸಂಗೀ­ತ­ವಿದೆ. ವಿದ್ಯಾ­ರ್ಥಿ­ಗ­ಳಿ­ದ್ದಾರೆ. ದೈರ್ಯ ತುಂಬುವ ಸುಚೇತಾ ಪತ್ನಿ ಇದ್ದಾರೆ. ಅವ­ರಷ್ಟೇ ಪ್ರತಿ­ಭಾ­ವಂತ ಗಿರಿ­ದಾಸ ಭಟ್‌ ಮಗ­ನಿ­ದ್ದಾನೆ. ಇವ­ರು­ಗಳ ನಡುವೆ ಚೀನಿ ಅವರು ಮುಗು­ಳ್ನ­ಗು­ತ್ತಲೇ ಎಲ್ಲ­ವನ್ನು ಸಹಿಸಿಕೊಂಡಿದ್ದಾರೆ.