Sunday, February 21, 2010


ನನ್ನ ಇಡೀ ಸಂಪಾದನೆ ಒಂದು ಟ್ರಸ್ಟ್‌!

ಉದ್ಯಮಿ ಅಂದಾಗ ಮನಸ್ಸಿನಲ್ಲೊಂದು ಚಿತ್ರಣ ಮೂಡುತ್ತದೆ. ಸೂಟು ಬೂಟು, ಚಟಪಟ ಇಂಗ್ಲಿಷ್‌. ಸ್ಟಾರ್‌ ಹೋಟಲ್‌. ಮೀಟಿಂಗ್‌, ಇನ್ವೆಸ್ಟಿಂಗ್‌, ಪಾರ್ಟಿ, ಷೇರು, ಕಾರು, ಬಾರು.....! ಆದರೆ ಇವರು ಆ ಥರದ ಉದ್ಯಮಿಯಲ್ಲ. ಅವರ ಉದ್ದನೆಯ ಬಿಳಿ ಗಡ್ಡದಲ್ಲಿ ಕಲೆ, ಸಾಹಿತ್ಯ, ರಂಗಭೂಮಿ, ನೃತ್ಯ, ಸಂಗೀತಗಳಿವೆ. ಕನ್ನಡ ಭಾಷೆಗೆ ಅವರ ಹೃದಯ ಮಿಡಿಯುತ್ತದೆ. ಒಂದೊಳ್ಳೆ ಪುಸ್ತಕ ಸಿಕ್ಕರೆ ಓದಿ ಮುಗಿಸೋ ತವಕ. ಯಕ್ಷಗಾನಕ್ಕೆ ಇಡೀ ರಾತ್ರಿ ನಿದ್ದೆಗೆಡಲು ರೆಡಿ. ಇಷ್ಟವಾದ ಚಿತ್ರಕೃತಿಗೆ ಕೋಟಿ ಕೊಟ್ಟರೂ ಸರಿ. ನಾಟಕದ ಮೇಲೆ ಒಂಥರಾ ಒಲವು. ಒಟ್ಟಿನಲ್ಲಿ ಅವರಿಗೆ ಲಲಿತಕಲೆಗಳ ಮೇಲೆ ಅತೀವ ಪ್ರೀತಿ!
ಅವರೇ ಡಿ.ಕೆ. ಚೌಟ. ಸಾಹಿತ್ಯದಲ್ಲಿ ಆನಂದ ಕೃಷ್ಣ ಎಂದೇ ಪ್ರಸಿದ್ಧಿ. ಚಿತ್ರಕಲಾ ಪರಿಷತ್ತಿನ ಕಾರ್ಯದರ್ಶಿಯಾಗಿ ಆರಂಭಿಸಿದ `ಚಿತ್ರಸಂತೆ' ಇಂದಿಗೂ ಮನೆಮಾತು. ಗ್ಯಾಲರಿಯೊಳಗೆ ಬಂಧಿಯಾಗಿದ್ದ ಕೃತಿಗಳು ಸಂತೆಯ ಮೂಲಕ ಸಾಮಾನ್ಯರಿಗೆ ಸಿಕ್ಕಿದವು. ರಂಗಭೂಮಿಗೆ ಅವರೊಬ್ಬ ಪೋಷಕ. ಬೆಂಗಳೂರಿನ `ರಂಗನಿರಂತ' ಸಂಘಟನೆಯ ಅಧ್ಯಕ್ಷರು. ಕ್ರೀಯಾಶೀಲ ರಂಗಭೂಮಿ ಎಲ್ಲಿರುತ್ತದೋ ಅಲ್ಲಿ ಚೌಟ!
ಭಾರತ ಸಂವಿಧಾನದ 8ನೇ ಪರಿಚ್ಛೇದದಲ್ಲಿ ತುಳುಭಾಷೆ ಸ್ಥಾನ ಪಡೆಯಲು ಚೌಟರ ಸಾಹಿತ್ಯದ ಪ್ರಮುಖ ಪಾತ್ರವಿದೆ. ಅವರ `ಪಿಲಿಪತ್ತಿ ಗಡಸ್‌' ತುಳುನಾಟಕ 130ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. `ಕರಯವಜ್ಜೆರಿನ ಕತೆಕುಲು' ಕಥಾ ಸಂಕಲನ, `ಮಿತ್ತಿಬೈಲೆ ಯಮುನಕ್ಕ' ಕಾದಂಬರಿ ಪ್ರಸಿದ್ಧವಾಗಿವೆ.
ಮಂಜೇಶ್ವರ ಸಮೀಪದ ಮೀಯಾಪದೌ ಅವರ ಹುಟ್ಟು. ಜನ್ಮತಃ ಕೃಷಿಕರು. ಮುಂಬೈನಲ್ಲಿ ಅರ್ಥಶಾಸ್ತ್ರ ಸ್ನಾತಕೋತ್ತರ ಪದವಿ. ವಿಮಾ ಕಂಪನಿಯೊಂದರಲ್ಲಿ ದೊಡ್ಡ ಕೆಲಸ. ಅದು ಸಾಗರದಾಚೆ. ಹಲವು ದೇಶಗಳ ಜೊತೆ ಸಂಬಂಧ. ನಂತರ ತಮ್ಮದೇ ಶೂ ತಯಾರಿಕಾ ಉದ್ಯಮ ಸ್ಥಾಪನೆ. 25 ವರ್ಷ ಹೊರದೇಶ. ಆನಂತರ ತಾಯ್ನಾಡಿಗೆ ಬಂದ ಚೌಟ ತಮ್ಮಿಷ್ಟದ ಕಲೆಯ ಆರಾದಕ. 72ರ ಹರೆಯದಲ್ಲೂ ಅವರದು ಹೊಸ ಆಲೋಚನೆಯ ಮೇಲ್ಪಂಕ್ತಿ.
ಚೌಟರ ಇಬ್ಬರು ಮಕ್ಕಳು ಜಗತ್ಪ್ರಸಿದ್ಧರು. ಮಗ ಸಂದೀಪ್‌ ಚೌಟ ಬಾಲಿವುಡ್‌ ಸಂಗೀತ ನಿರ್ದೇಶಕ. ಮಗಳು ಪ್ರಜ್ಞಾ ಚೌಟ ಪ್ಯಾರಿಸ್‌ ನಿವಾಸಿ. ವನ್ಯಜೀವಿ ಡ್ಯಾಕ್ಯುಮೆಂಟರಿ ನಿರ್ದೇಶಕಿ. ಮಡಿಕೇರಿಯ ದುಬಾರೆ ಅರಣ್ಯದಲ್ಲಿ ಆನೆ ಸಾಗಣಿಕೆ. ಅವರ ಡಾಕ್ಯುಮೆಂಟರಿಗಳಿಗೆ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಯ ಮುಕುಟ.
ಡಿ.ಕೆ. ಚೌಟರ ಚೌಟರ ಜೊತೆ `ಉದಯವಾಣಿ' ಮಾತುಕತೆ

* ಉದ್ಯಮಿ ಡಿ.ಕೆ. ಚೌಟ ಅವರು ರಂಗಕರ್ಮಿ, ಸಾಹಿತಿ ಹಾಗೂ ಕಲಾಪೋಷಕ ಆಗಿದ್ದು ಯಾವಾಗ?
ನನ್ನ ಓದುವ ಚಟವೇ ಅದಕ್ಕೆ ಕಾರಣ. ಬಹಳ ಚಿಕ್ಕ ವಯಸ್ಸಿನಲ್ಲಿಯೇ ಹಲವು ಕಾದಂಬರಿ ಓದಿ ಮುಗಿಸಿದ್ದೆ. ಮುಂಬೈನ ಆ ಹಣದ ಆಟ ನನ್ನನ್ನು ಆಕರ್ಷಿಸಿತು. ಬಹುಶಃ ನಾನಾಗ ಹಣದ ಹಿಂದೆ ನಡೆದೆ. ಇಕನಾಮಿಕ್ಸ್‌ ಎಂಎ ಮುಗಿಸಿದವನೇ ವಿದೇಶಕ್ಕೆ ಹಾರಿದೆ. ಆದರೆ ಎಂದಿಗೂ ನನ್ನ ಸಾಂಸ್ಕೃತಿಕ ತುಡಿತ ಕಮ್ಮಿ ಆಗಲಿಲ್ಲ. ನನ್ನ ವಿದೇಶ ಜೀವನದಲ್ಲಿ ಬಹಳ ಮಿಸ್‌ ಮಾಡ್ಕೊತಾ ಇದ್ದೀನಿ ಅನ್ನಿಸ್ತಿತ್ತು. ರಜೆಯಲ್ಲಿ ತಾಯ್ನಾಡಿಗೆ ಬಂದಾಗ ಕನ್ನಡ ಪುಸ್ತಕಗಳನ್ನು ಬಾಚಿಕೊಳ್ಳುತ್ತಿದ್ದೆ. ಮಾತೃ ಭಾಷೆಯ ಒಡನಾಟಕ್ಕೆ ಹಾತೊರೆಯುತಿದ್ದೆ. ಅದೇ ಇವತ್ತು ಮರಳಿ ಇಲ್ಲಿಗೆ ಕರೆತಂದಿದೆ.

* ತಾವೀಗ ಸಿಜಿಕೆ ಅವರ `ರಂಗ ನಿರಂತರ' ಸಂಘಟನೆಯ ಅಧ್ಯಕ್ಷರು. ಅದರ ಕಾರ್ಯ ಚಟುವಟಿಕೆ ಹೇಗೆ ಸಾಗುತ್ತಿದೆ?
ಈ ಬಾರಿಯ ರಂಗ ನಿರಂತರದ ಸಿಜಿಕೆ ಸ್ಮರಣೆಯಲ್ಲಿ ಹತ್ತು ಹೊಸ ನಾಟಕಗಳು ಕನ್ನಡ ರಂಗಭೂಮಿಗೆ ಕೊಟ್ಟಿದೆ. ಇದು ಹೆಮ್ಮೆಯ ವಿಷಯ. ಕನ್ನಡ ರಂಗಭೂಮಿ ಹೊಸ ನಾಟಕಗಳ ಕೊರತೆ ಎದುರಿಸುವಾಗ ರಂಗನಿರಂತರ ಈ ಸಾಹಸ ಮಾಡಿದೆ. ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿ ಇಲ್ಲದಿದ್ದರೆ 60 ದಿನಗಳ ನಾಟಕೋತ್ಸವ ಹಾಗೂ 20 ಹೊಸ ನಾಟಕ ಕೊಡುವ ಯೋಜನೆ ಇತ್ತು. ಆದರೆ ಕಳೆದ ನಾಟಕೋತ್ಸವ ಕಾಲದಲ್ಲಿ ನಮ್ಮ ಉತ್ತರ ಕನ್ನಡಿಗರು ಸಂತ್ರಸ್ತರಾಗಿದ್ದರು. ಹೊಸ ನಾಟಕ, ಹೊಸ ಹುಡುಗರು, ಹೊಸ ಯೋಚನೆಯನ್ನು ರಂಗಭೂಮಿಗೆ ತರಬೇಕು ಎಂಬುದೇ ನಮ್ಮ ಉದ್ದೇಶ.
* ತಾವು ಚಿತ್ರಕಲಾ ಪರಿಷತ್ತಿನ ಕಾರ್ಯದರ್ಶಿಗಳಾಗಿ ಹಲವು ಕಾರ್ಯ ಮಾಡಿದಿರಿ. ಅದರಲ್ಲಿ ಚಿತ್ರಸಂತೆ ಬಗ್ಗೆ ಹೇಳಿ?
ಚಿತ್ರಕಲೆ ನನಗೆ ಬಹಳ ಇಷ್ಟವಾದ ಮಾಧ್ಯಮ. ಜಗತ್ತಿನ ಯಾವುದೇ ನಗರಕ್ಕೆ ಹೋದರೂ ಅಲ್ಲಿಯ ಗ್ಯಾಲರಿಗಳನ್ನು ಹುಡುಕುತ್ತಿದ್ದೆ. ಕೃತಿ ಸಂಗ್ರಹಿಸುತ್ತಿದ್ದೆ. ಕಲಾಕೃತಿಗಳು ಗ್ಯಾಲರಿಯಿಂದ ಹೊರ ಬರಬೇಕು ಎನ್ನುವ ಕಲ್ಪನೆ ನನ್ನನ್ನು ಸದಾ ಕಾಡುತ್ತಿತ್ತು. ಚಿತ್ರಕಲಾ ಪರಿಷತ್ತಿಗೆ ಬಂದಾಗ ನನ್ನ ಕಲ್ಪನೆಗೊಂದು ರೂಪ ಕೊಟ್ಟೆ. `ಸಂತೆ' ಎನ್ನುವ ನಮ್ಮ ದೇಸಿ ಪದವನ್ನು ಬಳಸಿಕೊಂಡೆ. ಚಿತ್ರಸಂತೆ ಮಾಡಿದೆ. ಮನ್ನಣೆ ಸಿಕ್ಕಿತು. ಇದರಿಂದ ಚಿತ್ರಕಲೆಯನ್ನು ಸಾಮಾನ್ಯರಿಗೆ ತಲುಪಿಸಿದ ಸಂತೊಷ ಇದೆ.

* ಚೌಟ ಪ್ರತಿಷ್ಠಾನ ರಚನೆಯ ಉದ್ದೇಶಗಳೇನು?
ಪ್ರತಿಷ್ಠಾನದಡಿ ನನ್ನ ಊರಿನಲ್ಲಿ ಸಮುದಾಯ ಭವನವೊಂದನ್ನು ನಿರ್ಮಿಸುತ್ತಿದ್ದೇನೆ. ಇದು ಮದುವೆ ಮಂಟಪವಲ್ಲ. ಅಪ್ಪಟ ಕೃಷಿ ಭವನ. ರೈತರಿಗೆ ತರಬೇತಿ, ಹಳ್ಳಿಗರಿಗೆ ಒಳ್ಳೆ ಚಿತ್ರ ತೋರಿಸುವ ಉದ್ದೇಶವಿದೆ.

* ತಾವು ಕಲೆಗೆ ಪೋಷಕರಂತಿದ್ದೀರಿ. ಸಂಘಟನೆಗಳಿಗೆ ಅಪಾರ ಸಹಾಯ ಮಾಡಿದ್ದೀರಿ. ಈ ಬಗ್ಗೆ ಏನು ಹೇಳುತ್ತೀರಿ?
ನನ್ನ ಇಡೀ ಸಂಪಾದನೆ ಒಂದು ಟ್ರಸ್ಟ್‌. ನನ್ನದು ಕೊಡುವ ಕೈ. ಅದು ಸಹಾಯವಲ್ಲ. ಸಾಂಸ್ಕೃತಿಕ ಲೋಕಕ್ಕೆ ನನ್ನ ಪುಟ್ಟ ಕಾಣಿಕೆ.

Saturday, February 13, 2010

ಆರ್‌.ಕೆ. ಪದ್ಮ­ನಾಭ


ಪದ್ಮ­ನಾ­ಭ­ದಾ­ಸ­ನಿಗೆ ಅರ­ವತ್ತು!


ಗಾನ­ಕ­ಲಾ­ಭೂ­ಷಣ ವಿದ್ವಾನ್‌ ಆರ್‌.ಕೆ. ಪದ್ಮ­ನಾಭ!
ಈ ಹೆಸ­ರ­ಲ್ಲೇನೋ ಸವಿ ಸವಿ ಸುಂದರ ಸೆಳೆ­ತ­ವಿದೆ. ಅವರ ಹಾಡು ಕೇಳಿ­ದರೆ ಆತ್ಮಾ­ನಂ­ದ­ವಾ­ಗು­ತ್ತದೆ. ಸ್ವರ ರಾಗ ಲಯ ತಾಳ ಭಾವ­ಗಳ ಮೇಳ ಕಳೆ­ಕಟ್ಟಿ ಕಂಗೊ­ಳಿ­ಸು­ತ್ತವೆ. ಒಂದೇ ರಾಗಕ್ಕೆ ಬಣ್ಣ ಬಣ್ಣದ ಸುಸ್ವರ ಪೋಣಿ­ಸುತ್ತಾ ಗಂಟೆ­ಗ­ಟ್ಟಲೆ ತಣಿ­ಸುವ ವಿದ್ವತ್ತು ಅವ­ರದು. ಮಾತಿ­ನಲ್ಲಿ ಸಂಗೀತ. ಉಸಿ­ರಿ­ನಲ್ಲಿ ಸಂಗೀತ. ಸಾಟಿ ಇಲ್ಲದ ಸಿದ್ಧಿ ಅವ­ರದು!
ಆರ್‌.ಕೆ. ಪದ್ಮ­ನಾಭ ಅವ­ರಿಗೆ ಈಗ ಅರ­ವತ್ತು ತುಂಬಿವೆ. ಹಾಸನ ಜಿಲ್ಲೆಯ ರುದ್ರ­ಪ­ಟ್ಟಣ ಪರಿ­ಸ­ರ­ದಲ್ಲಿ ಹುಟ್ಟಿ ಬೆಳೆದ ಇವರು ಮೂರೂ­ವರೆ ದಶ­ಕ­ಗ­ಳಿಂದ ಹಾಡುತ್ತಾ ಬಂದಿ­ದ್ದಾರೆ. ಸಂಗೀತ ಕ್ಷಿತಿ­ಜ­ದಲ್ಲಿ ಅವ­ರಿಗೆ ಬಹಳ ವಿಶೇಷ ಸ್ಥಳ. ಪುರಂ­ದರ ದಾಸರ ಸಮ­ಕಾ­ಲೀ­ನರೇ ಆದ ಸದ್ಗುರು ವಾದಿ­ರಾ­ಜರ ದೈವಿಕ ಸಾಹಿ­ತ್ಯ­ವನ್ನು ಸಿದ್ಧಿ­ಸಿ­ಕೊಂ­ಡಿ­ರುವ ಒಬ್ಬನೇ ಒಬ್ಬ ಕಲಾ­ವಿದ ಆರ್‌­ಕೆಪಿ. ವಾದಿ­ರಾ­ಜರ ಕೃತಿ­ಗ­ಳಿಗೆ ಹೊಸ ರೂಪ ಕೊಟ್ಟು ಹರಿ­ದಾಸ ಪರಂ­ಪ­ರೆ­ಯಲ್ಲಿ ಅವರ ಕೊಡು­ಗೆ­ಯನ್ನು ಜಗ­ತ್ತಿಗೆ ಸಾರಿ­ದ್ದಾರೆ.
ವಾಗ್ಗೇ­ಯ­ಕಾ­ರ­ರಾಗಿ ಪದ್ಮ­ನಾ­ಭರ ಕಾರ್ಯ ಅನನ್ಯ. `ಪ­ದ್ಮ­ನಾಭ ದಾಸ' ಎಂಬ ಅಂಕಿ­ತ­ದೊಂ­ದಿಗೆ ಕೃತಿ­ರ­ಚನೆ ಮಾಡಿ­ರುವ ಅವರು ಹರಿ­ದಾಸ ಪರಂ­ಪ­ರೆಗೆ ಹೊಸ ಸೇರ್ಪ­ಡೆ­ಯಾ­ಗಿ­ದ್ದಾರೆ. `ಸ­ರ್ವ­ರಿಗೂ ಸಂಗೀತ' ಎಂಬ ತತ್ವದ `ಗೋ­ಷ್ಠಿ­ಗಾ­ಯನ' ಪ್ರಾಯೋ­ಗಾ­ತ್ಮಕ ಪರಿ­ಕ­ಲ್ಪನೆ ಮೂಲಕ ಸಾವಿರ ಮಹಿ­ಳೆ­ಯ­ರಿಗೆ ಏಕ­ಕಾ­ಲ­ದಲ್ಲಿ ಸಂಗೀತ ಪಾಠ ಮಾಡುವ ಮೂಲಕ ಹೊಸ ಅಲೆ­ಯನ್ನೇ ಸೃಷ್ಟಿ­ಸಿ­ದ್ದಾರೆ.
ಆರ್‌.ಕೆ. ಪದ್ಮ­ನಾಭ ವ್ಯಕ್ತಿ­ಯೊ­ಬ್ಬರು, ಕಾರ್ಯ ಹಲವು! ರಂಗ­ಕರ್ಮಿ: ಹಲವು ನಾಟ­ಕ­ಗ­ಳಲ್ಲಿ ಅಭಿ­ನಯ, ರಚನೆ, ಸಂಗೀತ, ನಿರ್ದೇ­ಶನ. ಬರ­ಹ­ಗಾರ: ನೆನ­ಪಿ­ನಂ­ಗ­ಳ­ದಲ್ಲಿ(ಆ­ತ್ಮ­ಚ­ರಿತ್ರೆ), ಸಮ­ರ್ಪಣಾ, ಪುರಂ­ದರ ನವ­ರತ್ನ ಮುಂತಾದ ಕೃತಿ­ಗಳು ಲೋಕಾ­ರ್ಪಣೆ. ಸಂಘ­ಟಕ: ವಾದಿ­ರಾಜ ಭವನ ನಿರ್ಮಾಣ, ರುದ್ರ­ಪ­ಟ್ಟ­ಣದ ಸಂಗೀ­ತೋ­ತ್ಸವ, ಗಾನ­ಕಲಾ ಪರಿ­ಷತ್ತು ಸಂಘ­ಟ­ನೆ­ಗಳ ಅಧ್ಯ­ಕ್ಷತೆ. ಇವು­ಗಳ ಜೊತೆಗೆ ಸಂಗೀತ ಗುರು, ಕ್ರೀಡಾ­ಪಟು, ಪ್ರಕಾ­ಶಕ, ಬಡಾ­ವಣೆ ಅಭಿ­ವೃ­ದ್ಧಿ­ಕಾರ....

ಅರ­ವತ್ತು ತುಂಬಿದ ಹೊತ್ತಿ­ನಲ್ಲಿ `ಉ­ದ­ಯ­ವಾಣಿ' ಜೊತೆ ಆರ್‌­ಕೆಪಿ ಮಾತು­ಕತೆ


* ತಮಗೆ ಅರ­ವತ್ತು ತುಂಬಿವೆ. ಈ ಸಮ­ಯ­ದಲ್ಲಿ ತಮ್ಮ ಸಂಗೀತ ಸೇವೆಗೆ ಅಭಿ­ನಂ­ದ­ನೆ­ಗಳ ಮಹಾ­ಪೂ­ರವೇ ಹರಿದು ಬಂದಿದೆ. ಏನು ಹೇಳು­ತ್ತೀರಿ?

ಸಂಗೀತ ಸಾಮಾ­ನ್ಯ­ರಿಗೆ ತಲು­ಪ­ಬೇಕು ಎಂಬ ನನ್ನ ಕನ­ಸಿಗೆ ಒಳ್ಳೆಯ ಪ್ರತಿ­ಫಲ ಸಿಕ್ಕಿದೆ. ನನ್ನ ಕಾರ್ಯ ತೃಪ್ತಿ ಕೊಟ್ಟಿದೆ. ವರ್ಚಸ್ಸು ಕೊಟ್ಟಿದೆ. ಹುಮ್ಮಸ್ಸು ಕೊಟ್ಟಿದೆ. ಆದ­ರಣೆ ಕೊಟ್ಟಿದೆ. ಇದೇ ನನಗೆ ದೊಡ್ಡ ಆಸ್ತಿ. ಇದ­ಕ್ಕಿಂತ ಇನ್ನೇನು ಬೇಕು ಹೇಳಿ?

* ತಮ್ಮ ಸಂಗೀತ ಕಾರ್ಯ­ದಲ್ಲಿ ಹಲವು ಮಹ­ತ್ವ­ಗ­ಳನ್ನು ಸಾಧಿ­ಸಿ­ದ್ದೀರಿ. ಅದ­ರಲ್ಲಿ `ಗೋ­ಷ್ಠಿ­ಗಾ­ಯನ' ಒಂದು ಮೈಲು­ಗಲ್ಲು. ಅದರ ಬಗ್ಗೆ ಹೇಳಿ?

ಗೋಷ್ಠಿ ಎನ್ನುವ ಪದ­ದಲ್ಲೇ ಒಂದು ವಿಶೇಷ ಗುಣ­ವಿದೆ. ಒಗ್ಗಟ್ಟು. ಇಲ್ಲಿ ತಾರ­ತಮ್ಯ ಇಲ್ಲ. ಎಲ್ಲರೂ ಒಂದೆ. ಈ ಕಲ್ಪ­ನೆಯ ಮೇಲೆ ಗೋಷ್ಠಿ­ಗಾ­ಯನ ಪ್ರಯೋಗ ಮಾಡಿದೆ. ಸದಾ ಕೌಟುಂ­ಬಿಕ ಜಂಜಾ­ಟ­ಗ­ಳ­ಲ್ಲಿ­ರುವ ಗೃಹಿ­ಣಿ­ಯ­ರಿಗೆ ಇದು ಚಿಕಿ­ತ್ಸೆಯ ರೀತಿ­ಯಲ್ಲಿ ಕೆಲಸ ಮಾಡಿದೆ. ಇಲ್ಲಿ ಸಾವಿರ ಮಹಿ­ಳೆ­ಯರು ಏಕ ಕಂಠ­ದಲ್ಲಿ ಹಾಡು­ತ್ತಾರೆ. ಅವ­ರೇನು ವಿದು­ಷಿ­ಯ­ರಾ­ಗ­ಬೇ­ಕಿಲ್ಲ. ಒಂದು ಸಂಗತಿ ಬಿಟ್ಟು ಹಾಡಿ­ದರೂ ನಷ್ಟ­ವಿಲ್ಲ. ಆದರೆ ಸಮೂಹ ಗಾಯ­ನ­ದಿಂದ ಅವರ ಮನ­ಸ್ಸಿಗೆ ನೆಮ್ಮದಿ ಸಿಕ್ಕಿದೆ.

* ಪ್ರಚಾ­ರಕ್ಕೆ ಬಾರದ ವಾದಿ­ರಾ­ಜರ ಕೃತಿ­ಗ­ಳಿಗೆ ಮಟ್ಟು­ಹಾಕಿ ಹೊಸ ರೂಪ ಕೊಟ್ಟಿ­ದ್ದೀರಿ. ಅವರ ಕೃತಿ­ಗ­ಳಲ್ಲಿ ನೀವು ಕಂಡಿ­ದ್ದೇನು?

ಸದ್ಗುರು ವಾದಿ­ರಾ­ಜರು ನನ್ನ ಆರಾಧ್ಯ ದೈವ. ಅವರ ಕೃತಿ­ಗ­ಳ­ಲ್ಲಿ­ರುವ ಸೊಗಸು, ಸರ­ಳತೆ, ಆಧ್ಯಾತ್ಮ ಚಿಂತನೆ, ಮಾನ­ವೀಯ ಮೌಲ್ಯ­ಗ­ಳನ್ನು ಪರಿ­ಚ­ಯಿ­ಸ­ಬೇಕು ಎಂಬುದು ನನ್ನ ಸಂಕಲ್ಪ. ಆ ನಿಟ್ಟಿ­ನಲ್ಲಿ ನೂರಕ್ಕೂ ಹೆಚ್ಚು ಕೃತಿ­ಗ­ಳಿಗೆ ಸಂಯೋ­ಜನೆ ಮಾಡಿ­ದ್ದೀನಿ. ವಾದಿ­ರಾ­ಜರ ಕೃತಿ­ಯಾ­ಧಾ­ರಿತ ಕಚೇರಿ ಮಾಡಿ­ದ್ದೇನೆ.

* ವಾಗ್ಗೇ­ಯ­ಕಾ­ರ­ರಾಗಿ ನೂರಾರು ಕೃತಿ ರಚಸಿ `ಪ­ದ್ಮ­ನಾ­ಭ­ದಾಸ'ನಾ­ಗಿ­ದ್ದೀರಿ. ಈ ಪ್ರಯ­ತ್ನದ ಫಲ­ವೇನು?


ಸಂಗೀತ ತ್ರಿಮೂ­ರ್ತಿ­ಗ­ಳಾದ ತ್ಯಾಗ­ರಾಜ, ದೀಕ್ಷಿ­ತರು, ಶಾಮ­ಶಾ­ಸ್ತ್ರಿ­ಗಳು ಪೂಜ್ಯರು. ಅವರು ಶ್ರೇಷ್ಠ ವಾಗ್ಗೇ­ಯ­ಕಾ­ರರು. ನಾನು ಸದಾ ಹೊಸ­ತಿ­ಗಾಗಿ ತುಡಿ­ಯು­ವ­ವನು. ಸಂಶೋ­ಧನೆ ನನ್ನ ಸ್ವಭಾವ. ಈ ನಿಟ್ಟಿ­ನಲ್ಲಿ ನೂರೈ­ವತ್ತು ಹೆಚ್ಚು ಕೃತಿ ರಚಿಸಿ ಹಾಡಿ­ದ್ದೇನೆ. ನನ್ನ ಕೃತಿ­ಗ­ಳನ್ನು ಹಾಡಿ ಎಂದು ಯಾರನ್ನೂ ಕೇಳಿ­ಕೊಂ­ಡಿಲ್ಲ. ಕೃತಿ ರಚ­ನೆ­ಯಿಂದ ನನಗೆ ತೃಪ್ತಿ ಸಿಕ್ಕಿದೆ ಅಷ್ಟು ಸಾಕು.


* ರಂಗ­ಕಾ­ಯ­ಕ­ದಲ್ಲೂ ತಮಗೆ ದೊಡ್ಡ ಹೆಸ­ರಿದೆ. ತ್ಯಾಗ­ರಾ­ಜ­ರಾಗಿ ತಮ್ಮ ಅಮೋಘ ಅಭಿ­ನಯ ಇನ್ನೂ ಹಸಿ­ರಾ­ಗಿದೆ. ಅದರ ಬಗ್ಗೆ ಹೇಳಿ?


ಭಾರ­ತೀಯ ಕಲೆ­ಗಳು ಬಹಳ ಶ್ರೇಷ್ಠ­ವಾ­ಗಿವೆ. ಚಿಕ್ಕಂ­ದಿ­ನಿಂ­ದಲೂ ನನಗೆ ರಂಗ­ಭೂ­ಮಿಯ ಸೆಳೆ­ತ­ವಿತ್ತು. ಹಲವು ಸಂಗೀತ ನಾಟ­ಕ­ಗ­ಳಲ್ಲಿ ಅಭಿ­ನ­ಯಿ­ಸಿ­ದ್ದೀನಿ. ರಚಿಸಿ ನಿರ್ದೇ­ಶಿ­ಸಿ­ದ್ದೀನಿ. ಸಂಗೀತ ಶಿಬಿ­ರ­ಗ­ಳಲ್ಲಿ ವಿದ್ಯಾ­ರ್ಥಿ­ಗ­ಳಿಗೆ ಸ್ಕಿಟ್‌ ಕಡ್ಡಾ­ಯ­ವಾಗಿ ಮಾಡಿ­ಸು­ತ್ತೇನೆ. ಎಲ್ಲರೂ ವೇದಿ­ಕೆಯ ಮೇಲೆ ಮಾತ­ನಾ­ಡ­ಬೇಕು. ಇದ­ರಿಂದ ಅವರ ಉಚ್ಛಾ­ರಣೆ ಸ್ಪಷ್ಟ­ವಾ­ಗು­ತ್ತದೆ.