Friday, June 26, 2009

ವಸುಂ­ದರಾ ದೊರೆಸ್ವಾಮಿ



ವಸುಂ­ದರಾ ಹೆಜ್ಜೆ ಗುರುತು





ಅವರ ಹೆಜ್ಜೆ­ಗ­ಳಲ್ಲಿ ಅದ್ಯಾವ ಶಕ್ತಿ ಅಡ­ಗಿ­ದೆಯೋ ಏನೋ!
ಆ ಹೆಜ್ಜೆ­ಗಳು ನಟು­ವಾಂ­ಗದ ಏಟಿಗೆ ಎದಿ­ರೇಟು ನೀಡು­ತ್ತವೆ. ಸಂಗೀ­ತಕ್ಕೆ ಸ್ವರೂಪ ಕೊಡು­ತ್ತವೆ. ದೇಹ­ಕ್ಕಾದ ಕಾಲ­ವನ್ನು ಮರೆ­ಮಾ­ಚು­ತ್ತವೆ. ಆ ಘಲ್‌ ಘಲ್‌ ಗೆಜ್ಜೆ­ನಾದ ನೋಡು­ಗನ ಹೃದ­ಯ­ದಲ್ಲಿ ಆನಂದ ಹುಟ್ಟಿ­ಸು­ತ್ತದೆ. ನಾಟ್ಯ­ಶಾ­ಸ್ತ್ರದ ನವ­ರ­ಸಾ­ದಿ­ಗಳು ದೇಹ­ವಿಡೀ ಹೊಮ್ಮಿ ಬರು­ತ್ತವೆ. ಗೆಜ್ಜೆ ಕಟ್ಟಿದ ಆ ಕಾಲು­ಗಳು ಭೂಮಿ­ಕೆಯ ಮೇಲೆ ರಂಗೋ­ಲಿಯ ಚಿತ್ತಾರ ಬಿಡಿ­ಸು­ತ್ತವೆ.
ಅವರು ವಸುಂ­ದರಾ ದೊರೆ­ಸ್ವಾಮಿ. ಮೈಸೂ­ರಿಗೆ ಹೆಮ್ಮೆ ಹಿರಿಮೆ ಗರಿಮೆ ಬರು­ವಲ್ಲಿ ಅವರ ನೃತ್ಯ ಸೇವೆಯೂ ಪಾಲು ಪಡೆ­ದಿದೆ. ನೃತ್ಯ­ಲೋ­ಕ­ದಲ್ಲಿ ದಂತ­ಕ­ತೆ­ಯಾ­ಗಿ­ರುವ ವಸುಂ­ದರಾ ನಮ್ಮ ದೇಶದ ಅಪ­ರೂ­ಪದ ಭರ­ತ­ನಾಟ್ಯ ಕಲಾ­ವಿದೆ. ಭಾರ­ತೀಯ ಶಾಸ್ತ್ರೀಯ ನೃತ್ಯ­ದಲ್ಲಿ ಅವರ ಸ್ಥಾನ ಉತ್ತುಂ­ಗ­ದ­ಲ್ಲಿದೆ. ಭರ­ತ­ನಾ­ಟ್ಯ­ವನ್ನು ಹೃದಯ ತಂಬೆಲ್ಲಾ ತುಂಬಿ­ಕೊಂಡು ಅದರ ವೈಶಾ­ಲ್ಯ­ತೆ­ಯನ್ನು ಜಗ­ತ್ತಿ­ನೆ­ಲ್ಲೆಡೆ ತೋರಿಸಿ ಸೈ ಎನಿ­ಸಿ­ಕೊಂ­ಡಿ­ದ್ದಾರೆ. ಮೂರು ದಶ­ಕ­ಗಳ ಅವರ ನೃತ್ಯ ತಪಸ್ಸು ಅಪಾರ ಮನ್ನಣೆ ಗಳಿ­ಸಿದೆ.
ವಸುಂ­ದರಾ ದೊರೆ­ಸ್ವಾಮಿ ಅವರ ಪ್ರತಿ­ಯೊಂದು ನೃತ್ಯ ರೂಪ­ಕ­ಗಳು ಅದ್ಬುತ ಕಲಾ­ಕೃ­ತಿ­ಗಳು. ಅವರ ಸಂಯೋ­ಜ­ನೆ­ಗ­ಳ­ಲ್ಲಿ­ರುವ ಭಕ್ತಿ ಸಂದೇಶ ವರ್ಣ­ನಾ­ತೀತ. ಮಹಿ­ಷೂರು ಪುರ ಜನರ ದುಸ್ವ­ಪ್ನ­ವಾ­ಗಿದ್ದ ಮಹಿ­ಷಾ­ಸು­ರ­ನನ್ನು ಸಂಹ­ರಿ­ಸುವ `ಆ­ದಿ­ಶಕ್ತಿ ದುರ್ಗಾ' ರೂಪಕ ನೋಡು­ಗನ ನಾಡಿ­ಯಲ್ಲಿ ಉಂಟು­ಮಾ­ಡಿದ್ದ ವಿದ್ಯುತ್‌ ಸಂಚ­ಲ­ನ­ವನ್ನು ಮರೆ­ಲಾ­ಗು­ವು­ದಿಲ್ಲ. ಇಂತಹ ಅಸಂ­ಖ್ಯಾತ ರೂಪ­ಕ­ಗ­ಳನ್ನು ಅವರು ಸಂಯೋ­ಜಿ­ಸಿ­ದ್ದಾರೆ. ನೃತ್ಯ ಸಂಯೋ­ಜ­ನೆಯ ಜೊತೆಗೆ ಸಾಹಿ­ತ್ಯ­ವನ್ನು ರಚನೆ ಮಾಡು­ವ­ಲ್ಲಿಯೂ ಅವರು ಕೃಷಿ ಮಾಡಿ­ದ್ದಾರೆ. ಕೆಲವು ವೇಳೆ ಸಂಗೀತ ಸಂಯೋ­ಜ­ನೆ­ಯನ್ನೂ ಮಾಡು­ತ್ತಾರೆ. ಅವ­ರನ್ನು ಅಪ­ರೂಪ ಎನ್ನಲು ಇಂತಹ ಹತ್ತಾರು ಕಾರ್ಯ­ಸಾ­ಧ­ನೆ­ಗಳು ಸಾಕ್ಷೀ­ಕ­ರಿ­ಸು­ತ್ತವೆ.
ವಸುಂ­ದರಾ ಅವರು ಖ್ಯಾತ ನೃತ್ಯ ಹಾಗೂ ಅಷ್ಟಾಂಗ ವಿನ್ಯಾಸ ಯೋಗ­ತಜ್ಞ ಪಟ್ಟಾಭಿ ಜೋಯಿಸ್‌ ಅವರ ಶಿಷ್ಯರು. ಸಣ್ಣ ವಯ­ಸ್ಸಿ­ನಲ್ಲೇ ಭೂಮಿಕೆ ಹತ್ತಿದ ಅವರ ಸಾಧ­ನೆಯ ಹಾದಿ ಹಲವು ಘಟ್ಟ­ಗ­ಳನ್ನು ಮುಟ್ಟಿ ಸಾಗಿ ಬಂದಿವೆ. ಅವರ ನೃತ್ಯ­ದಲ್ಲಿ ಯೋಗಕ್ಕೆ ಪ್ರಧಾನ ಸ್ಥಾನ­ವಿದೆ. ಅವರು ಯೋಗ ಸಂಶೋ­ಧಕಿ ಕೂಡ ಆಗಿ­ದ್ದಾರೆ. ಯೋಗ ಮತ್ತು ಭರ­ತ­ನಾಟ್ಯ ನಡು­ವಿನ ಸಂಬಂಧ ಕುರಿ­ತಂತೆ ಅವರ ಸಂಶೋ­ಧ­ನೆಗೆ ಪಿಎ­ಚ್‌ಡಿ ಪದವಿ ಲಭಿ­ಸಿದೆ. ಜಾನ­ಪ­ದ­ದಲ್ಲಿ ಸ್ನಾತ­ಕೋ­ತ್ತರ ಪದವಿ ಗಳಿ­ಸಿ­ದ್ದಾರೆ. ಜಾನ­ಪದ, ಯಕ್ಷ­ಗಾನ ಪ್ರಾಕಾ­ರ­ಗ­ಳನ್ನು ಭರ­ತ­ನಾ­ಟ್ಯಕ್ಕೆ ಅಳ­ವ­ಡಿ­ಸಿ­ಕೊಂಡು ಪ್ರಯೋಗ ಮಾಡಿದ ಕೀರ್ತಿ ಅವ­ರಿಗೆ ಸಲ್ಲು­ತ್ತದೆ.
ವಸುಂ­ದರಾ ಅವರು ಅತ್ಯಂತ ಚಿಕ್ಕ­ವ­ಯ­ಸ್ಸಿ­ನ­ಲ್ಲಿಯೇ `ಕ­ರ್ನಾ­ಟಕ ಕಲಾ ತಿಲಕ' ಪ್ರಶಸ್ತಿ ಪಡೆದ ಸಾಧಕಿ. ಮಾರ್ಷಲ್‌ ಆರ್ಟ್ಸ್‌, ಕಳರಿ ಪೊಯಿಟ್ಟು ನೃತ್ಯ­ಗಳೂ ಅವ­ರಿಗೆ ಗೊತ್ತಿವೆ. ದೂರ­ದ­ರ್ಶನ ಕಲಾ­ವಿ­ದರೂ ಆಗಿ­ರುವ ಅವ­ರಿಗೆ ಸಂದ ಗೌರವ ಪ್ರಶ­ಸ್ತಿ­ಗ­ಳಿಗೆ ಲೆಕ್ಕ­ವಿಲ್ಲ. ತಮ್ಮ ನೃತ್ಯ­ದೊಂ­ದಿಗೆ ವಿಶ್ವ­ವನ್ನು ಸುತ್ತಿ­ದ್ದಾರೆ. ಭರ­ತ­ನಾಟ್ಯ ಕುರಿತು ಕಾರ್ಯ­ಗಾ­ರ­ಗ­ಳನ್ನು ನಡೆ­ಸಿ­ದ್ದಾರೆ. ವಿದೇ­ಶ­ಗ­ಳನ್ನು ತಮ್ಮ ನೃತ್ಯ ಹಾಗೂ ಯೋಗ ಸಂಸ್ಥೆ­ಗ­ಳನ್ನೂ ತೆರೆ­ದಿ­ದ್ದಾರೆ.
ವಸುಂ­ದರಾ ದೊರೆ­ಸ್ವಾಮಿ ಅವರು ನೃತ್ಯ­ಗ­ರು­ವಾಗಿ ಸೃಷ್ಟಿ­ಸಿ­ರುವ ಪ್ರತಿ­ಭೆ­ಗಳು ಇಂದು ಎಲ್ಲೆಡೆ ತಮ್ಮ ಪರಿ­ಮಳ ಬೀರಿವೆ. ಅವರ ಮಾರ್ಗ­ದ­ರ್ಶ­ನ­ದಲ್ಲಿ ನೂರಾರು ಪ್ರತಿ­ಭೆ­ಗಳು ಭೂಮಿ­ಕೆ­ಯೇ­ರಿವೆ. ವಿದೇ­ಶ­ಗಳೂ ಸೇರಿ­ದಂತೆ ದೇಶ­ದೆ­ಲ್ಲೆಡೆ ಅವರ ವಿದ್ಯಾರ್ಥಿ ಬಳ­ಗವೇ ಇದೆ. ಯುವ ಪ್ರತಿ­ಭೆ­ಗ­ಳಿಗೆ ವಿದ್ಯಾ­ದಾ­ನದ ಜೊತೆಗೆ ಅವ­ರಿಗೆ ಸೂಕ್ತ ವೇದಿ­ಕೆ­ಯನ್ನೂ ಅವರು ಒದ­ಗಿ­ಸಿ­ಕೊ­ಟ್ಟಿ­ದ್ದಾರೆ. ಈ ಉದ್ದೇ­ಶ­ಕ್ಕಾಗಿ `ವ­ಸುಂ­ದರಾ ಪ್ರದ­ರ್ಶನಾ ಕಲೆ ಹಾಗೂ ಯೋಗ ಕೇಂದ್ರ'ವನ್ನು ಮೈಸೂ­ರಿ­ನಲ್ಲಿ ತೆರೆ­ದಿ­ದ್ದಾರೆ.
1987ರಲ್ಲಿ ಆರಂ­ಭ­ವಾದ ಈ ಸಂಸ್ಥೆ ಇಂದು ದೇಶ­ದೆ­ಲ್ಲೆಡೆ ಹಬ್ಬಿದೆ. ವಿದೇ­ಶ­ಗ­ಳಲ್ಲೂ ಶಾಖೆ­ಗ­ಳಿವೆ. ಪ್ರತಿ­ವರ್ಷ ಸಂಸ್ಥೆ­ಯಿಂದ ಅಸಂ­ಖ್ಯಾತ ಕಾರ್ಯ­ಕ್ರ­ಮ­ಗಳು ನಡೆ­ಯು­ತ್ತವೆ. ಮುಖ್ಯ­ವಾಗಿ ವರ್ಷ­ದಲ್ಲಿ ನಾಲ್ಕು ಕಾರ್ಯ­ಕ್ರ­ಮ­ಗಳು ಪ್ರತಿ­ವರ್ಷ ಕಡ್ಡಾ­ಯ­ವಾಗಿ ನಡೆ­ಯು­ತ್ತವೆ. ಪಲ್ಲ­ವೋ­ತ್ಸವ, ಪಾರಂ­ಗೋ­ತ್ಸವ, ಚಿಗುರು ಸಂಜೆ ಕಾರ್ಯ­ಕ್ರ­ಮ­ಗಳು ಜನ­ಮ­ನ್ನಣೆ ಗಳಿ­ಸಿವೆ.
ನಟ­ರಾ­ಜೋ­ತ್ಸ­ವ­ದಲ್ಲಿ ಪುರುಷ ನೃತ್ಯ­ಪ­ಟು­ಗಳು ತಮ್ಮ ಪ್ರತಿಭೆ ತೋರಿ­ದರೆ, ಪಲ್ಲ­ವೋ­ತ್ಸ­ವ­ದಲ್ಲಿ ಮಹಿಳಾ ನರ್ತ­ಕಿ­ಯರು ತಮ್ಮ ಪ್ರತಿಭೆ ಮರೆ­ಯು­ತ್ತೆರೆ. ಪಾರಂ­ಗೋ­ತ್ಸ­ವ­ದಲ್ಲಿ ಖ್ಯಾತ­ನಾಮ ಕಲಾ­ವಿ­ದರು ತಮ್ಮ ನೃತ್ಯ­ದ­ರ್ಶನ ಮಾಡಿ­ಸು­ತ್ತಾರೆ. ಚಿಗುರು ಸಂಜೆ ಕಾರ್ಯ­ಕ್ರ­ಮ­ದಲ್ಲಿ 12 ವರ್ಷ ವಯ­ಸ್ಸಿ­ನೊ­ಳ­ಗಿನ ಬಾಲ ಪ್ರತಿ­ಭೆ­ಗಳು ತಮ್ಮ ಹೆಜ್ಜೆ ಗುರುತು ಮಾಡು­ತ್ತಾರೆ. ಈ ನಾಲ್ಕು ವಾರ್ಷಿಕ ಕಾರ್ಯ­ಕ್ರ­ಮ­ಗಳ ಜೊತೆಗೆ ಹಲವು ಸಾಂಸ್ಕೃ­ತಿಕ ಕಾರ್ಯ­ಕ್ರ­ಮ­ಗ­ಳನ್ನು ಸಂಸ್ಥೆ ಆಯೋ­ಜಿ­ಸು­ತ್ತದೆ. ವರ್ಷ­ಪೂರ್ತಿ ರಂಗ­ಪ್ರ­ವೇಶ ಕಾರ್ಯ­ಕ್ರ­ಮ­ಗಳು ನಡೆ­ಯು­ತ್ತವೆ. ಉಪ­ನ್ಯಾಸ, ಯೋಗ ಕಾರ್ಯ­ಗಾ­ರ­ಗಳೂ ನಡೆ­ಯು­ತ್ತವೆ.
ವಸುಂ­ದರಾ ಅವರು ತಮ್ಮ ನೃತ್ಯದ ಮೂಲಕ ಶ್ರೀಮಂತ ಸಂಸ್ಕೃ­ತಿ­ಯೊಂ­ದರ ಪ್ರತಿ­ನಿ­ಧಿ­ಯಾ­ಗಿ­ದ್ದಾರೆ. ನೃತ್ಯ ಸಾಗ­ರ­ದಲ್ಲಿ ಮುಂದಿ­ದ್ದಾರೆ. ಶಾರದಾ ಪುತ್ರಿ­ಯಾ­ಗಿ­ದ್ದಾರೆ. ತಪಸ್ಸು ಭಕ್ತಿ ಯೋಗ ಮಾರ್ಗ­ಗ­ಳಿಂದ ದಕ್ಕಿ­ಸಿ­ಕೊಂಡ ವಿದ್ಯೆ­ಯಿಂದ ಇಂದು ನಾಟ್ಯ­ರಾ­ಣಿ­ಯಾಗಿ ಹೆಜ್ಜೆ ಇಡು­ತ್ತಿ­ದ್ದಾರೆ.

Wednesday, June 24, 2009

ವಿದ್ವಾನ್ ಮೈಸೂರು ವಿ. ಅಂಬಾ­ಪ್ರ­ಸಾದ್‌



ನಾದ­ಯೋಗಿ ಮೈಸೂರು ವಿ. ಅಂಬಾ­ಪ್ರ­ಸಾದ್‌


ಅದು ಅಂಬಾ­ಸ­ದನ. ಅಗ್ರ­ಹಾ­ರದ ಬಸ­ವೇ­ಶ್ವರ ರಸ್ತೆ­ಯ­ಲ್ಲಿದೆ. ನೂರೊಂದು ಗಣ­ಪತಿ ದೇವಾ­ಲ­ಯಕ್ಕೆ ಸಮೀಪ. ಆ ಜಾಗ­ದಲ್ಲಿ ಒಂದು ಭಾವ­ನಾ­ತ್ಮಕ ಸೆಳೆ­ತ­ವಿದೆ. ಸದ­ನದ ಒಂದಿಚೂ ಜಾಗ­ವನ್ನೂ ಖಾಲಿ ಬಿಟ್ಟಿಲ್ಲ. ಕಬ್ಬಿ­ಣದ ಸರ­ಳು­ಗ­ಳಿಂದ ಬಂಧಿ­ಸ­ಲ್ಪ­ಟ್ಟಿದೆ. ಆದರೆ ಅಲ್ಲಿಯ ಪರಿ­ಮಳ ಸರ­ಳು­ಗ­ಳಿಂದ ತೂರು ಬಂದು ಎಲ್ಲರ ಹೃದಯ ತಟ್ಟಿದೆ. ಅಲ್ಲಿ ಹೋದ­ವ­ರಿಗೆ ದೇವಾ­ಲ­ಯಕ್ಕೆ ಹೋದ ಅನು­ಭವ ಸಿಗು­ತ್ತದೆ. ಆದರೆ ಅದು ದೇವಾ­ಲ­ಯ­ವಲ್ಲ. ಸಂಗೀ­ತ­ವನ್ನು ಆರಾ­ಧಿ­ಸುವ ಒಂದು ಕುಟುಂಬ.
ಅದು ಖ್ಯಾತ ಪಿಟೀಲು ಕಲಾ­ವಿದ ನಾದ­ಯೋಗಿ ಮೈಸೂರು ವಿ. ಅಂಬಾ­ಪ್ರ­ಸಾದ್‌ ಅವರ ಬ್ರಮ­ರಾಂಭ ಸಂಗೀತ ವಿದ್ಯಾ­ಲಯ. ತಳ ಮಹ­ಡಿ­ಯಲ್ಲಿ ಕುಟುಂಬ. ಮೊದಲ ಮಹ­ಡಿ­ಯಲ್ಲಿ ಸಂಗೀತ ವಿದ್ಯಾ­ಲಯ. ಮೇಲಿನ ಮಹ­ಡಿ­ಯಲ್ಲಿ ದಿವ್ಯ ಸಭಾಂ­ಗಣ. ಅದನ್ನು ಅಂಬಾ­ಸ­ದನ ಎಂದೇ ಕರೆ­ಯ­ಲಾ­ಗು­ತ್ತದೆ.
ಅವರ ಮನೆ ತುಂಬೆಲ್ಲಾ ಸಂಗೀತ. ಮನೆ­ಯಲ್ಲಿ ಇರು­ವ­ವ­ರೆಲ್ಲಾ ಸಂಗೀ­ತ­ಗಾ­ರರು. ಪ್ರತಿ­ಕ್ಷಣ ಅಲ್ಲಿ ವಿದ್ಯಾ­ದಾನ ತಡೆ­ಯಿ­ಲ್ಲದೆ ನಡೆ­ಯು­ತ್ತದೆ. ಸಂಗೀತ, ಭಜನೆ, ಸಂಸ್ಕೃತ ಹೀಗೆ ಹಲ­ವಾರು ವಿಭಾ­ಗ­ಗಳ ಪಾಠ­ಗಳು ನಡೆ­ಯು­ತ್ತವೆ. ವಂಶ ಪರಂ­ಪ­ರೆ­ಯಿಂದ ಬಂದ ಸಂಗೀತ ಅಂಬಾ­ಸ­ದ­ನ­ದಲ್ಲಿ ಸುಧೆ­ಯಾಗಿ ಹರಿ­ಯು­ತ್ತಿದೆ.
ಅಂಬಾ­ಪ್ರ­ಸಾದ್‌ ಅವರು ಶಾಲಿನಿ ಮತ್ತು ದಿ. ಜಿ.ವಿ. ಮೂರ್ತಿ ಅವರ ಸುಪು­ತ್ರರು. ನಾಡಿನ ಪ್ರಭಾ­ವ­ಶಾಲಿ ಪಿಟೀಲು ವಾದ­ಕ­ರಲ್ಲಿ ಅಂಬಾ­ಪ್ರ­ಸಾದ್‌ ಕೂಡ ಒಬ್ಬರು. ಅವರ ಸೋಲೋ ಪಿಟೀಲು ಕಚೇ­ರಿ­ಗ­ಳಲ್ಲಿ ಭಕ್ತಿ­ಭಾವ ಝರಿ­ಯಂತೆ ಹರಿ­ಯು­ತ್ತದೆ. ತಾವೇ ಸಿದ್ಧ­ಪ­ಡಿ­ಸಿ­ಕೊಂ­ಡಿ­ರುವ ಐದು ತಂತಿ­ಗಳ ವೈಲಿನ್‌ ತಮ್ಮ ಪ್ರತಿ­ಭೆಯ ಅಭಿ­ವ್ಯ­ಕ್ತಕ್ಕೆ ಕನ್ನ­ಡಿ­ಯಾ­ಗಿದೆ.
ಅಂಬಾ­ಪ್ರ­ಸಾದ್‌ ಪಿಟೀಲು ನುಡಿ­ಸುವ ಶೈಲಿ ಬಹಳ ವೈಶಿಷ್ಟ್ಯ ಪೂರ್ಣ­ವಾ­ಗಿದ್ದು, ಸಂಗೀತ ಲೋಕ­ದಲ್ಲಿ ವಿಶೇಷ ಸ್ಥಾನ­ದಲ್ಲಿ ನಿಲ್ಲು­ತ್ತಾರೆ. ಅವರು ಪೀಟೀಲು ನುಡಿ­ಸು­ವಾಗ ಅವರ ಮೊಗ­ದಲ್ಲಿ ಸಾಹಿ­ತ್ಯದ ಅಭಿ­ವ್ಯ­ಕ್ತ­ವಾ­ಗು­ತ್ತದೆ. ಹಾಡು­ಗಾ­ರಿ­ಕೆ­ಯಲ್ಲೂ ಕೂಡ ಅಂಬಾ­ಪ್ರ­ಸಾದ್‌ ಸಾಧನೆ ಮಾಡಿ­ದ್ದಾರೆ. ಸಂಗೀ­ತದ ವಾತಾ­ವ­ರ­ಣ­ದಲ್ಲೇ ಬೆಳೆದ ಅಂಬಾ­ಪ್ರ­ಸಾದ್‌ ರಾಜ ಮಣಿ­ಕ್ಕಮ್‌ ಪಿಳ್ಳೈ ವಂಶಾ­ವ­ಳಿಗೆ ಸೇರಿ­ದ­ವ­ರಾ­ಗಿ­ದ್ದಾರೆ. ಸಂಸ್ಕಾರ ಅವರ ನರ­ನಾಡಿ, ರಕ್ತ­ದಲ್ಲೇ ಇದೆ.
ಅಂಬಾ­ಪ್ರ­ಸಾದ್‌ ಸಂಗೀತ ಸಾಧ­ನೆಯ ಹಾದಿ­ಯಲ್ಲಿ ಹಲವು ಗುರು­ಗಳ ವಿದ್ಯಾ­ಶೀ­ರ್ವಾದ ಪಡೆ­ದಿ­ದ್ದಾರೆ. ಶ್ರೇಷ್ಠ ಆಚಾರ್ಯ ವಿದ್ವಾನ್‌ ಕುಂಬ­ಕೋಣಂ ಜನಾ­ರ್ಧ­ನಮ್‌ ಅವರ ಮಾರ್ಗ­ದ­ರ್ಶ­ನ­ದಲ್ಲಿ ಆರಂ­ಭ­ವಾದ ಸಾಧನೆ ಕಂಚಿ­ಪುರಂ ನಾಗ­ರಾ­ಜನ್‌, ಶ್ರೀನಿ­ವಾಸ ಭಾಗ­ವ­ತರ್‌, ಮೈಸೂರು ಹಿೃಶಿ­ಕೇಶ್‌ , ಮೈಸೂರು ವೇಣು­ಗೋ­ಪಾಲ್‌, ರತ್ನಮ್ಮ, ಎನ್‌. ನಂಜುಂ­ಡ­ಸ್ವಾಮಿ, ಜೆ. ದೇವಿ­ಪ್ರ­ಸಾದ್‌, ಎಚ್‌. ಕೆ. ನರ­ಸಿಂಹ ಮೂರ್ತಿ ಮುಂತಾ­ದ­ವ­ರಿಂದ ತಮ್ಮ ಸಂಗೀತ ಜ್ಞಾನ­ವನ್ನು ವಿಸ್ತ­ರಿ­ಸಿ­ಕೊಂ­ಡಿ­ದ್ದಾರೆ.
1992ರಲ್ಲಿ ಕಚೇರಿ ನೀಡಲು ಆರಂ­ಭಿ­ಸಿದ ಅಂಬಾ­ಪ್ರ­ಸಾದ್‌ ಹಿಂದೆ ತಿರುಗಿ ನೋಡಿಲ್ಲ. ದೇಶಾ­ದ್ಯಂತ ಸಾವಿ­ರಾರು ಸೋಲೋ ವೈಲಿನ್‌ ಕಚೇರಿ ನೀಡಿ­ದ್ದಾರೆ. ತಮಿ­ಳು­ನಾ­ಡಿ­ನಲ್ಲಿ ಅಂಬಾ­ಪ್ರ­ಸಾದ್‌ ಹೆಚ್ಚು ಕಾರ್ಯ­ಕ್ರಮ ನೀಡಿದ್ದು, ತಮಿ­ಳು­ನಾ­ಡಿ­ನಲ್ಲಿ ಖ್ಯಾತಿ ಪಡೆ­ದಿ­ರುವ ಕರ್ನಾ­ಟ­ಕದ ಹೆಮ್ಮೆಯ ಸಂಗೀ­ತ­ಗಾರ ಎಂದರೆ ತಪ್ಪಲ್ಲ.
ಅಂಬಾ­ಪ್ರ­ಸಾದ್‌ ಅವರ ಸಂಗೀತ ಸಾಧ­ನೆಗೆ ಅಪಾರ ಗೌರವ ಪ್ರಶ­ಸ್ತಿ­ಗಳು ಅರಸಿ ಬಂದಿವೆ. ಭಾರತ ವೈಲಿನ್‌ ವಿದ್ಯಾ ತಿಲಕ, ನಾದ­ಯೋಗಿ, ನಾದ ನಿರ್ಮಾತೃ, ಪಿಟೀಲು ವಾದನ ಚತುರ, ಯುವ ಭಾಸ್ಕರ ಮುಂತಾದ ಗೌರ­ವ­ಗಳು ಅವರ ಮುಡಿ­ಗೇ­ರಿವೆ.
ಸಂಗೀತ ಲೋಕ­ದಲ್ಲಿ ವಿದ್ಯಾ­ದಾ­ನಕ್ಕೆ ಪೂಜ್ಯ ಸ್ಥಾನ­ವಿದೆ. ಅವ­ನೆಷ್ಟೇ ದಿಗ್ಗಜ ಸಂಗೀ­ತ­ಗಾ­ರ­ನಾ­ದರೂ ಕಲಿಯ ಬಂದ­ವ­ರಿಗೆ ವಿದ್ಯಾ­ದಾನ ಮಾಡ­ದಿ­ದ್ದರೆ ಅವನು ಅಜ್ಞಾನಿ ಎಂದು ಹೇಳ­ಲಾ­ಗು­ತ್ತದೆ. ಸಂಗೀತ ಉಳಿ­ಯ­ಬೇ­ಕಾ­ದರೆ ಜ್ಞಾನದ ಹಂಚಿಕೆ ಆಗಲೇ ಬೇಕು. ಅಂಬಾ­ಪ್ರ­ಸಾದ್‌ ತಮ್ಮ ಸಂಗೀತ ಜ್ಞಾನ­ವನ್ನು ನೂರಾರು ವಿದ್ಯಾ­ರ್ಥಿ­ಗಳ ಜತೆ ಹಂಚಿ­ಕೊಂ­ಡಿ­ದ್ದಾರೆ. ಅಂಬಾ­ಸ­ದನ ಯಾವಾ­ಗಲು ವಿದ್ಯಾ­ರ್ಥಿ­ಗ­ಳಿಂದ ತುಂಬಿ­ರು­ತ್ತದೆ. ಬಿಡು­ವಿ­ಲ್ಲದ ಕಚೇ­ರಿ­ಗಳ ನಡುವೆ ವಿದ್ಯಾ­ದಾ­ನ­ಕ್ಕಾಗಿ ಸಮಯ ಮಾಡಿ­ಕೊಂಡು ವಿದ್ಯಾ­ದಾ­ನ­ದಲ್ಲಿ ತೊಡ­ಗಿ­ದ್ದಾರೆ. ಅವ­ರಿಗೆ ವಿದೇ­ಶ­ಗ­ಳಲ್ಲೂ ವಿದ್ಯಾ­ರ್ಥಿ­ಗ­ಳಿ­ದ್ದಾರೆ. ಆನ್‌­ಲೈನ್‌ ಮೂಲಕ ಸಂಗೀತ ಬೋಧಿ­ಸ­ಲಾ­ಗು­ತ್ತದೆ. ಅಂಬಾ­ಪ್ರ­ಸಾದ್‌ ಅವರ ತಮ್ಮ ವಿ.ಆರ್‌.ಆರ್‌. ಭಾರ್ಗವ ಮೃದಂ­ಗ­ದಲ್ಲಿ ಪ್ರವೀ­ಣ­ರಾ­ಗಿ­ದ್ದಾರೆ.
ೃಮ­ರಾಂಬ ಸಂಗೀತ ವಿದ್ಯಾ­ಲ­ಯ­ದಲ್ಲಿ ಹಲವು ವಿಭಾ­ಗ­ಗ­ಳಲ್ಲಿ ಸಂಗೀತ ಪಾಠ­ಗಳು ನಡೆ­ಯು­ತ್ತವೆ. ಹಾಡು­ಗಾ­ರಿಕೆ, ಹಾರ್ಮೋ­ನಿಯಂ, ಪಿಟೀಲು, ಮ್ಯಾಂಡ­ಲಿನ್‌, ವೀಣಾ, ಗಿಟಾರ್‌, ಮೃದಂಗ, ತಬಲ, ಘಟಂ ಮುಂತಾದ ವಾದ್ಯ­ಗ­ಳನ್ನು ಹೇಳಿ­ಕೊ­ಡ­ಲಾ­ಗು­ತ್ತದೆ. ಜೊತೆಗೆ ಸಂಸ್ಕೃತ, ಭಜನೆ, ಹಿಂದಿ, ತಮಿಳು ತರ­ಗ­ತಿ­ಗಳೂ ಕೂಡ ನಡೆ­ಯು­ತ್ತವೆ.
ಅಂಬಾ­ಸ­ದ­ನದ ಕಾರ್ಯ­ಕ್ರ­ಮ­ಗಳು ನಿತ್ಯ ನಿರಂ­ತ­ರ­ವಾಗಿ ನಡೆ­ಯು­ತ್ತವೆ. ಪ್ರತಿ­ವರ್ಷ ನಡೆ­ಯುವ ಬ್ರಮ­ರಾಂಭ ಸಂಗೀತ ಶಾಲೆಯ ವಾರ್ಷಿ­ಕೋ­ತ್ಸ­ವ­ದಲ್ಲಿ ಖ್ಯಾತ­ನಾಮ ಸಂಗೀ­ತ­ಗಾ­ರರ ದಂಡೇ ಅಲ್ಲಿ­ರು­ತ್ತದೆ.
ಮೈಸೂ­ರಿ­ನಲ್ಲಿ ನಡೆ­ಯುವ ಧಾರ್ಮಿಕ ಕಾರ್ಯ­ಕ್ರ­ಮ­ಗ­ಳಲ್ಲಿ ಅಂಬಾ­ಪ್ರ­ಸಾದ್‌ ಅವರ ವೈಲಿನ್‌ ಕಚೇರಿ ಇದ್ದೇ ಇರು­ತ್ತದೆ. ಅವರ ಬಹ­ಳಷ್ಟು ಕಚೇ­ರಿ­ಗ­ಳಿಗೆ ಸಹೋ­ದರ ಭಾರ್ಗವ ಮೃದಂಗ ನುಡಿ­ಸು­ತ್ತಾರೆ. ಅವರ ಕಚೇ­ರಿ­ಗ­ಳಲ್ಲಿ ಸಹೋ­ದ­ರರ ಸಂಗೀತ ಸಂಗ­ಮ­ವನ್ನು ಕಾಣ­ಬ­ಹುದು.

Sunday, June 21, 2009

ಎಚ್ . ಆರ್. ಲೀಲಾವತಿ







ಮೈಸೂ­ರಿ­ನಲ್ಲಿ ಸುಗಮ ಸಂಗೀ­ತದ ಬೇರು


ಕನ್ನಡ ಸುಗಮ ಸಂಗೀತ ಪರಂ­ಪ­ರೆಯ ಮೂಲ ಬೇರು ಮೈಸೂ­ರಿ­ನ­ಲ್ಲಿದೆ.
ಅವರು ಮಾಧು­ರ್ಯಕ್ಕೆ ಇನ್ನೊಂದು ಹೆಸರು. ಪಿ. ಕಾಳಿಂ­ಗ­ರಾ­ಯ­ರಿಂದ ಆರಂ­ಭ­ವಾದ ಲಘು ಸಂಗೀತ ಪರಿ­ಕ­ಲ್ಪ­ನೆಗೆ ಹೊಸ ರೂಪ ಕೊಟ್ಟ­ವರು. ಸಂಗೀ­ತ­ದಲ್ಲಿ ಸಾಹಿ­ತ್ಯ­ವನ್ನೇ ಪ್ರಧಾನ ಮಾಡಿ ಹಾಡಿ­ದ­ವರು. ಶಾಸ್ತ್ರೀಯ ಸಂಗೀ­ತದ ಹಿನ್ನೆ­ಲೆ­ಯಿಂದ ಬಂದು ಲಘು ಸಂಗೀ­ತಕ್ಕೆ ಒಂದು ಸ್ಥಾನ ಕೊಟ್ಟ­ವರು. ಆಕಾ­ಶ­ವಾ­ಣಿಯ ಮೂಲಕ ಮನೆ ಮಾತಾ­ದ­ವರು. ದಿವಂ­ಗತ ಎಚ್‌.ಕೆ. ನಾರಾ­ಯ­ಣರ ಸಮ­ಕಾ­ಲೀ­ನರು. ಅವರ ಕ್ಯಾಸೆಟ್‌ ಕ್ರಾಂತಿ­ಯಲ್ಲಿ ಪಾಲ್ಗೊಂ­ಡ­ವರು.
ಅವರು ಎಚ್‌.ಆರ್‌. ಲೀಲಾ­ವತಿ. ಸುಗಮ ಸಂಗೀತ ಸಾಮ್ರಾಜ್ಞೆ. ಅವ­ತ್ತಿನ ಸುಗಮ ಸಂಗೀತ ತ್ರಿಮೂ­ತ್ರಿ­ಗ­ಳಲ್ಲಿ (ಪ­ದ್ಮಾ­ಚ­ರಣ್‌, ಎಚ್‌.ಕೆ. ನಾರಾ­ಯಣ್‌) ಲೀಲಾ­ವತಿ ಕೂಡ ಒಬ್ಬರು. ಅಸಂ­ಖ್ಯಾತ ಕವಿ­ಗಳ ಭಾವ­ಗೀ­ತೆಗೆ ದನಿ­ಯಾ­ದ­ವರು. ಜೊತೆಗೆ ಎಚ್‌.ಆರ್‌. ಲೀಲಾ­ವತಿ ಸ್ವತಃ ಕವಿ­ಗಳೂ ಹೌದು.
ಲೀಲಾ­ವತಿ ಸಂಗೀತ ಪರಿ­ಸ­ರ­ದಲ್ಲೇ ಹುಟ್ಟಿ ಬೆಳೆ­ದ­ವರು. ತಾಯಿ ಜಯಮ್ಮ ಅವರ ಮೊದಲ ಗುರು. ತಂದೆ ಅಠಾಣ ರಾಮಣ್ಣ(ಹಾ­ಸನ ರಾಮಣ್ಣ). ಕರ್ನಾ­ಟಕ ಶಾಸ್ತ್ರಿಯ ಸಂಗೀ­ತದ ಭದ್ರ ಬುನಾ­ದಿಯ ಮೇಲೆ ಭಾವ­ಗೀ­ತೆ­ಗ­ಳನ್ನು ಹಾಡಿ ವಿಖ್ಯಾ­ತಿ­ಯಾ­ದರು.
ಎಚ್‌.ಆರ್‌. ಲೀಲಾ­ವತಿ ಅವರು ತಮ್ಮ ಕಲಿ­ಕೆಯ ಹಾದಿ­ಯಲ್ಲಿ ಹಲವು ಮೈಲು­ಗ­ಲ್ಲು­ಗ­ಳನ್ನು ಧಾಟಿ­ದ್ದಾರೆ. ಶಾಸ್ತ್ರೀಯ ಸಂಗೀತ ಹಾಡು­ತ್ತಿದ್ದ ಅವರು ಪದ್ಮಾ­ಚ­ರಣ್‌ ಮಾರ್ಗ­ದ­ರ್ಶ­ನ­ದ­ದಲ್ಲಿ ಸುಗಮ ಸಂಗೀತ ಅಭ್ಯಾಸ ಮಾಡಿ­ದರು. ಜ್ಞಾನ ಪ್ರಕಾಶ್‌ ಘೋಶ್‌, ದುಬೇನ್‌ ಶರ್ಮಾ ಅವ­ರಿ­ದಂ­ದಲೂ ಲೀಲಾ­ವತಿ ತಮ್ಮ ಸುಸ್ವರ ಜ್ಞಾನ­ವನ್ನು ಹಿಮ್ಮ­ಡಿ­ಗೊ­ಳಿ­ಸಿ­ಕೊಂ­ಡರು.
ಕನ್ನ­ಡದ ಪ್ರಥಮ ಮಹಿಳಾ ಸಂಗೀತ ಸಂಯೋ­ಜ­ಕಿ­ಯಾಗಿ ತಮ್ಮ ಸಾಮರ್ಥ್ಯ ತೋರಿ­ಸಿ­ರುವ ಲೀಲಾ­ವತಿ ಅವರು ಸಾಹಿ­ತ್ಯ­ವನ್ನು ನೇರ ಹಾಗೂ ಸರ­ಳ­ವಾಗಿ ಕೇಳು­ಗರ ಮನ­ಮು­ಟ್ಟು­ವಂತೆ ತಲು­ಪಿ­ಸು­ವಲ್ಲಿ ನಿಷ್ಣಾ­ತರು. ಅವರ ಗಾಯನ ಹಾಗೂ ಸ್ವರ ಸಂಯೋ­ಜನೆ ವೈಶಿ­ಷ್ಟ್ಯ­ತೆ­ಯಿಂದ ಕೂಡಿದ್ದು ಯಾರು ಬೇಕಾ­ದರೂ ಇದು ಲೀಲಾ­ವತಿ ಅವರ ಗಾಯನ ಎಂದು ಗುರು­ತಿ­ಸ­ಬ­ಹುದು. ಕವಿಯ ಭಾವ­ನೆ­ಗ­ಳಿಗೆ ನಿರಾ­ಶೆ­ಯಾ­ಗ­ದಂತೆ ಅದರ ಅರ್ಥಕ್ಕೆ ಸ್ವರ ಕಟ್ಟು­ವಲ್ಲಿ ಅವರು ಎತ್ತಿದ ಕೈ. ಭಾವ­ನಾ­ತ್ಮಕ ತೀವ್ರತೆ ಲೀಲಾ­ವ­ತಿ­ಯ­ವರ ಗಾಯ­ನ­ದ­ಲ್ಲಿ­ರು­ವುದು ವಿಶೇಷ.
ಆಕಾ­ಶ­ವಾ­ಣಿ­ಯಲ್ಲಿ ಹಿರಿಯ ಕಲಾ­ವಿ­ದ­ರಾ­ಗಿದ್ದ ಪದ್ಮಾ­ಚ­ರಣ್‌ ಅವರ ನೂರಾರು ಸಂಯೋ­ಜ­ನೆ­ಗ­ಳಿಗೆ ಲೀಲಾ­ವತಿ ದನಿ­ಯಾ­ಗಿ­ದ್ದಾರೆ. ಅಡಿ­ಗರ `ನ­ಡೆದು ಬಂದ ದಾರಿಯ ಕಡೆಗೆ' ಕುವೆಂಪು ಅವರ `ಅಂ­ತ­ರ­ತಮ ನೀಗುರು' ಗೀತೆ­ಗ­ಳನ್ನು ಮತ್ತೆ ಮತ್ತೆ ಕೇಳ­ಬೇಕು ಎನಿ­ಸು­ತ್ತದೆ. ನೃತ್ಯ­ರೂ­ಪ­ಕ­ಗ­ಳಿಗೂ ಎಚ್‌.ಆರ್‌. ಲೀಲಾ­ವತಿ ಹಾಡಿ­ದ್ದಾರೆ. `ಅಕ್ಕ ಮಹಾ­ದೇವಿ' ರೂಪ­ಕ­ದಲ್ಲಿ ಎಚ್‌.ಕೆ. ನಾರಾ­ಯಣ್‌ ಜೊತೆ ಹಾಡಿ­ದ್ದರು. ವಚನ, ದೇವರ ನಾಮ ಹಾಗೂ ಚಲ­ನ­ಚಿ­ತ್ರ­ಗ­ಳಿಗೂ ಹಾಡಿ­ದ್ದಾರೆ.
ಲೀಲಾ­ವತಿ ಅವರ ಪತಿ ಎಸ್‌.ಜಿ. ರಘು­ರಾಮ್‌ ಕೂಡ ಗಾಯ­ಕರು. ಲೀಲಾ­ವ­ತಿ­ಯ­ವರ ಸುಗಮ ಸಂಗೀತ ಕಾರ್ಯ­ಕ್ರ­ಮ­ಗ­ಳಲ್ಲಿ ರಘು­ರಾಮ್‌ ಹಾಡು­ತ್ತಾರೆ. ಅಲ್ಲದೆ ಪತ್ನಿ ರಾಗ ಸಂಯೋ­ಜ­ನೆಯ ಹಲವು ಧ್ವನಿ­ಸು­ರುಳಿ ಹಾಗೂ ಸಿಡಿ­ಗ­ಳಲ್ಲಿ ಹಾಡಿ­ದ್ದಾರೆ.
ಎಚ್‌.ಆರ್‌. ಲೀಲಾ­ವತಿ ಕರ್ನಾ­ಟಕ ಸಂಗೀತ ನೃತ್ಯ ಅಕಾ­ಡೆ­ಮಿಯ ಅಧ್ಯ­ಕ್ಷ­ರಾ­ಗಿ­ದ್ದರು. ಅವರು ಅಧ್ಯ­ಕ್ಷ­ರಾ­ಗಿದ್ದ ಕಾಲ­ದಲ್ಲಿ ಸುಗಮ ಸಂಗೀತ ಪ್ರಗ­ತಿಗೆ ಹಲವು ದಾಖ­ಲಿತ ಕೆಲಸ ಮಾಡಿ­ದ್ದಾರೆ.


ನಾಡ­ಗೀತೆ ಮತ್ತು ಎಚ್‌.ಆರ್‌. ಲೀಲಾ­ವತಿ: ಕುವೆಂಪು ಅವರ ನಾಡ­ಗೀತೆ `ಜೈ ಭಾರತ ಜನ­ನಿಯ ತನು­ಜಾತೆ' ಗೀತೆ­ಯನ್ನು ರಾಗ ಸಂಯೋ­ಜಿಸಿ ಮೊದಲು ಹಾಡಿದ ಖ್ಯಾತಿ ಎಚ್‌.ಆರ್‌. ಲೀಲಾ­ವತಿ ಅವ­ರಗೆ ಸಲ್ಲ­ಬೇಕು. ಇತ್ತಿ­ಚೆಗೆ ನಾಡ­ಗೀ­ತೆಯ ಕುರಿ­ತಂತೆ ವಿವಾದ ಹುಟ್ಟಿ­ಕೊಂ­ಡಿತ್ತು. ವಿವಾ­ದದ ಸಂದ­ರ್ಭ­ದಲ್ಲಿ ಎಚ್‌.ಆರ್‌. ಲೀಲಾ­ವತಿ ಎಲ್ಲರೂ ಒಪ್ಪು­ವಂ­ತಹ ಮಾತು­ಗ­ಳ­ನ್ನಾ­ಡಿ­ದ್ದರು. `ನಾನೇ ಮೊದಲು ನಾಡ­ಗೀ­ತೆಗೆ ರಾಗ ಸಂಯೋ­ಜ­ಸಿ­ದ್ದರೂ ಕೂಡ ಮೈಸೂರು ಅನಂತ ಸ್ವಾಮಿ ಅವರ ಸಂಯೋ­ಜ­ನೆ­ಯನ್ನು ಜನ ಮೆಚ್ಚಿ­ಕೊಂ­ಡಿ­ದ್ದಾರೆ. ಆದ್ದ­ರಿಂದ ಅವರ ಸಂಯೋ­ಜ­ನೆಯೇ ಕಡ್ಡಾ­ಯ­ವಾ­ಗಿಲಿ' ಎಂಬ ವಿದ್ವತ್‌ ಪೂರ್ಣ ಮಾತು­ಗ­ಳನ್ನು ಇಲ್ಲಿ ಸ್ಮರ­ಸ­ಬ­ಹುದು. ಗೀತೆಯ ಸಾಹಿತ್ಯ ಮತ್ತು ಯಾರ ಸಂಯೋ­ಜ­ನೆಯ ಗೀತೆ­ಯನ್ನು ಹಾಡ­ಬೇಕು ಎಂಬ ಕುರಿ­ತಂತೆ ಇನ್ನೂ ವಿವಾದ ಇದ್ದೇ ಇದೆ.
ಲೀಲಾ­ವತಿ ಅವ­ರಿಗೆ ರಂಗ­ಭೂ­ಮಿಯ ಮೇಲೆ ಅತೀವ ಪ್ರೀತಿ ಇದೆ. ಮೈಸೂ­ರಿ­ನಲ್ಲಿ ನಡೆ­ಯುವ ರಂಗ­ಭೂಮಿ ಚಟು­ವ­ಟಿ­ಕೆ­ಯಲ್ಲಿ ಅವರು ಉತ್ಸಾ­ಹ­ದಿಂದ ಭಾಗ­ವ­ಹಿ­ಸು­ತ್ತಾರೆ. ಹಲವು ನಾಟ­ಕ­ಗ­ಳಿಗೆ ಸಂಗೀ­ತ­ವನ್ನೂ ನೀಡಿ­ದ್ದಾರೆ. ಎಚ್‌.ಆರ್‌. ಲೀಲಾ­ವತಿ ಅವರ ಸಂಗೀತ ಸೇವೆಗೆ ಅಪಾರ ಗೌರವ ಪ್ರಶ­ಸ್ತಿ­ಗಳು ಸಂದಿವೆ. ಹಲವು ಸಂಗೀತ ಸಮ್ಮೇ­ಳ­ನ­ಗ­ಳಲ್ಲಿ ಅಧ್ಯ­ಕ್ಷ­ರಾಗಿ ಭಾಗ­ವ­ಹಿ­ಸಿ­ದ್ದಾರೆ.
ಮೈಸೂ­ರಿನ ಕುವೆಂಪು ನಗ­ರದ ತಮ್ಮ ನಿವಾ­ಸ­ದಲ್ಲಿ ಸುಗಮ ಸಂಗೀತ ಅಕಾ­ಡೆಮಿ ಎಂಬ ಸಂಸ್ಥೆ­ಯನ್ನು ಕಟ್ಟಿ­ಕೊಂಡು ಯುವ ಪ್ರತಿ­ಭೆ­ಗ­ಳಿಗೆ ಸಂಗೀತ ತರ­ಬೇತಿ ನೀಡು­ವಲ್ಲಿ ಅವರು ಕಾರ್ಯ­ನಿ­ರ­ತ­ರಾ­ಗಿ­ದ್ದಾ.

ವಿದ್ವಾನ್. ನಾಗರಾಜ ಮಂಜು­ನಾ­ಥರು


ತಂತಿ­ಗಳ ಮೇಲೆ `ನಾ­ಗ­ರಾಜ' ನಡಿಗೆ



ಆ ಬೆರ­ಳು­ಗ­ಳಲ್ಲಿ ಅದೇನು ಚೈತ­ನ್ಯವೋ ಏನೋ. ತಂತಿ­ಗಳ ಮೇಲೆ ಅವರು ಬೆರ­ಳಿ­ಟ್ಟರೆ ಮಾಧುರ್ಯ ತುಂಬಿ­ಕೊಂಡು ಬರು­ತ್ತದೆ. ಅವರು ಪಿಟೀಲು ನುಡಿ­ಸು­ತ್ತಿ­ದ್ದರೆ ಸಂಗೀತ ತಿಳಿ­ಯದ ಸಾಮಾ­ನ್ಯನೂ ಕೂಡ ತಿಳಿ­ದಂತೆ ತಲೆ­ಯಾ­ಡಿ­ಸು­ತ್ತಾನೆ. ತಂತಿ­ಗಳ ಮೇಲಿನ ಅವರ ಬೆರ­ಳು­ಗಳ ನಡಿಗೆ ಕೇಳು­ಗನ ಹೃದ­ಯ­ದಲ್ಲಿ ಕಂಪನ ಹುಟ್ಟಿ­ಸು­ತ್ತವೆ. ಅವರು ನುಡಿ­ಸುವ ಜಾಗ­ದಲ್ಲಿ ಶಬ್ದಕ್ಕೆ ಜಾಗ­ವಿಲ್ಲ. ಅಲ್ಲೇ­ನಿ­ದ್ದರೂ ಶಾಂತಿ ವಿಶ್ರಾಂತಿ.
ಅವರು ಮೈಸೂರು ಸಹೋ­ದ­ರರು. ವಿದ್ವಾಂ­ಸ­ರಾದ ಮೈಸೂರು ನಾಗ­ರಾಜ ಮತ್ತು ಡಾ. ಮಂಜು­ನಾಥ. ತಮ್ಮ ವೈಶಿಷ್ಟ ಸಂಗೀತ ಜ್ಞಾನ­ದಿಂದ ಭಾರ­ತದ ಅತ್ಯು­ನ್ನತ ಸ್ಥಾನ­ದ­ಲ್ಲಿ­ರುವ ಪೀಟಿಲು ವಾದ­ಕರು. ದೊಡ್ಡ ಗಾಯ­ಕನ ಹಾಡು­ಗಾ­ರಿ­ಕೆಗೆ ತಮ್ಮ ಪಿಟೀಲು ಮೂಲಕ ತಕ್ಕ ಉತ್ತರ ಕೊಡ­ಬಲ್ಲ ಪ್ರತಿ­ಭಾ­ವಂ­ತರು. ಗಾಯಕ ಒಂದು ಅಂದರೆ ಇವರು ಹತ್ತು ಹನ್ನೆ­ರಡು ಅನ್ನು­ವಷ್ಟು ಗಟ್ಟಿ­ಗರು! ತಮಿ­ಳು­ನಾ­ಡಿನ ಸಂಗೀತ ಸಾಮ್ರಾ­ಟರು ತಮಗೆ ತಕ್ಕ ಪಕ್ಕ­ವಾದ್ಯ ಸಹ­ಕಾ­ರಕ್ಕೆ ಮೈಸೂರು ಸಹೋ­ದ­ರ­ರನ್ನೇ ಬಯ­ಸು­ತ್ತಾರೆ ಎನ್ನು­ವುದು ವಿಶೇಷ.
ಮೈಸೂರು ಸಹೋ­ದ­ರರ ಜುಗ­ಲ್‌­ಬಂದಿ ಕಚೇ­ರಿ­ಗಳು ಇಡೀ ವಿಶ್ವಾ­ದ್ಯಂತ ಮನ್ನಣೆ ಪಡೆ­ದಿವೆ. ಕರ್ನಾ­ಟಕ ಸಂಗೀತ ಇಂದು ಲೋಕ­ದ­ಲ್ಲೆಲ್ಲಾ ಅಜ­ರಾ­ಮರ ಅಂದರೆ ಅದ­ರಲ್ಲಿ ಮೈಸೂರು ಸಹೋ­ದ­ರರ ಪಾಲು ಬಹ­ಳ­ಷ್ಟಿದೆ. ವಿದೇ­ಶ­ಗ­ಳಲ್ಲಿ ಈ ಸಹೋ­ದ­ರರು ಕರ್ನಾ­ಟಕ ಶಾಸ್ತ್ರೀಯ ಸಂಗೀ­ತದ ಬಗ್ಗೆ ಕಾರ್ಯ­ಗಾರ ನಡೆ­ಸಿ­ದ್ದಾರೆ. ಪ್ರಬಂಧ ಮಂಡಿ­ಸಿ­ದ್ದಾರೆ. ವಾದ್ಯ­ಗಳ ರಾಜ ಎನಿ­ಸಿ­ಕೊಂ­ಡಿ­ದ­ರುವ ಪಿಟೀ­ಲಿ­ನ­ಲ್ಲಿ­ರುವ ಸಂಗೀತ ಸಾಧ್ಯ­ತೆ­ಗಳ ಬಗ್ಗೆ ಅವರು ಸಂಶೋ­ಧನೆ ನಡೆ­ಸಿ­ದ್ದಾರೆ. ಪಿಟೀಲು ನುಡಿ­ಸುವ ತಂತ್ರ­ಗ­ಳನ್ನು ಸ್ವತಃ ಹುಟ್ಟು­ಹಾ­ಕಿ­ದ್ದಾರೆ. ಈ ದೃಷ್ಟಿ­ಯಿಂದ ಅವರು ಪೀಟೀಲು ತಾಂತ್ರಿ­ಕರು!
ರೋಚಕ ಸಂಗೀ­ತಾ­ಭ್ಯಾಸ: ಮೈಸೂರು ಸಹೋ­ದ­ರರು ಸಂಗೀ­ತ­ಗಾರ ಮನೆ­ತ­ನದ ಕುಡಿ­ಗಳು. ವಿದ್ವಾಂಸ ಮಹ­ದೇ­ವಪ್ಪ ಇವರ ತಂದೆ. ಅವರ ಬಾಲ್ಯ­ದ­ಲ್ಲಿನ ಸಂಗೀ­ತಾ­ಭ್ಯಾ­ಸದ ದಿನ­ಗಳು ಬಹಳ ರೋಚ­ಕ­ವಾ­ಗಿವೆ. ಪೀಟಿಲು ಕಲಿ­ಯ­ಬೇ­ಕೆಂಬ ಅಪ್ಪನ ಅಗಾಧ ಆಸೆ­ಯನ್ನು ಈಡೀ­ರಿ­ಸಿ­ಕೊ­ಳ್ಳಲು ಮಹ­ದೇ­ವಪ್ಪ ಬಹಳ ಕಷ್ಟ­ಪ­ಟ್ಟಿ­ದ್ದಾರೆ. ದಿನಕ್ಕೆ ನಾಲ್ಕೈದು ಗಂಟೆ ಅಭ್ಯಾಸ ಆಗ­ಲೇ­ಬೇಕು. ಇಲ್ಲ­ವಾ­ದರೆ ಮಕ್ಕ­ಳಿಗೆ ಊಟ ಇಲ್ಲ. ನಮ್ಮಪ್ಪ ನಮಗೆ ಶತ್ರು! ಎಂದು ಬೈದು­ಕೊ­ಳ್ಳು­ವಷ್ಟು ಒತ್ತಡ ಅವರ ಮೇಲೆ ಮೇಲಿತ್ತು.
ಅವರು ಓದಿ­ದ್ದೆಲ್ಲಾ ಸರ್ಕಾರಿ ಶಾಲೆ. ಖಾಸಗೀ ಶಾಲೆಗೆ ಮಕ್ಕ­ಳನ್ನು ಕಳಿ­ಸಿ­ದರೆ ಬರೀ ಹೋಂ ವರ್ಕ್‌­ನಲ್ಲೇ ದಿನ ಕಳೆ­ಯು­ತ್ತದೆ ಎಂದು ಅರಿ­ತಿದ್ದ ಮಹ­ದೇ­ವ­ಪ್ಪ­ನ­ವರ ಮುಂದಾ­ಲೋ­ಚ­ನೆ­ಯ­ಲ್ಲಿ­ರುವ ಲಾಜಿಕ್‌ ನೋಡಿ! ಸರ್ಕಾರಿ ಶಾಲೆ­ಯಲ್ಲೂ ತಮ್ಮ ಮಕ್ಕ­ಳಿಗೆ ಹೋಂ ವರ್ಕ್‌ ಕೊಡುವ ಹಾಗಿಲ್ಲ. ಕೊಟ್ಟರೆ ಶಾಲೆಗೆ ಹೋಗಿ `ಹೋಂ ವರ್ಕ್‌ ಕೊಡ­ಕೂ­ಡದು, ಮನೆ­ಯಲ್ಲಿ ಮಾಡಲು ಅವ­ರಿಗೆ ಬಹಳ ಕೆಲ­ಸ­ವಿದೆ' ಎಂದು ಗಲಾಟೆ ಮಾಡು­ತ್ತಿ­ದ್ದ­ರಂತೆ! ಈ ವಿಷ­ಯ­ಗ­ಳನ್ನು ನಾಗಾ­ರಾಜ ಮಂಜು­ನಾ­ಥರು ತಮ್ಮ ವಿದ್ಯಾ­ರ್ಥಿ­ಗಳ ಮುಂದೆ ಅಗಾಗ ಹಂಚಿ­ಕೊ­ಳ್ಳು­ತ್ತಾರೆ. ಪಿಟೀಲು ವಿದ್ಯಾ­ರ್ಥಿ­ಗ­ಳಿಗೆ ನಾಗ­ರಾಜ ಮಂಜು­ನಾ­ಥರ ರೋಚಕ ಅಭ್ಯಾಸ ಅಧ್ಯಾಯ ಸ್ಪೂರ್ತಿಯ ವಿಷಯ. ಪಿಟೀಲು ಕಲಿ­ಯು­ವ­ವನು ಇತರ ಸುಖ­ಗ­ಳನ್ನು ಬಿಡ­ಲೇ­ಬೇಕು. ಸಹ­ಜ­ವಾಗಿ ಅದೊಂದು ತ್ಯಾಗ!
ಇಂದು ಮಹ­ದೇ­ವಪ್ಪ ಅವರ ಕನಸು ನನ­ಸಾ­ಗಿದೆ. ಮಕ್ಕಳು ಮಾತ್ರ­ವಲ್ಲ ಮೊಮ್ಮಗ ಮಾ! ಕಾರ್ತಿಕ್‌ ಕೂಡ ಪಿಟೀ­ಲನ್ನು ಗಟ್ಟಿ ಮಾಡಿ­ಕೊಂ­ಡಿ­ದ್ದಾನೆ. ಕಾರ್ತಿಕ್‌ ನಾಗ­ರಜ್‌ ಅವರ ಮಗ. ಅಪ್ಪ ಚಿಕ್ಕ­ಪ್ಪಂ­ದಿರ ಜುಗ­ಲ್‌­ಬಂ­ದಿ­ಗ­ಳಲ್ಲಿ ಕಾರ್ತಿಕ್‌ ಆಗಾಗ ಕಾಣಿ­ಸಿ­ಕೊ­ಳ್ಳು­ತ್ತಾನೆ.
ಅಕಾ­ಡೆ­ಮಿಕ್‌ ವಿಷ­ಯ­ಗ­ಳಲ್ಲೂ ಈ ಸಹೋ­ದ­ರರು ಹಿಂದೆ ಬೀಳ­ಲಿಲ್ಲ. ನಾಗ­ರಾಜ್‌ ಆಕಾ­ಶ­ವಾ­ಣಿ­ಯಲ್ಲಿ ಎ ದರ್ಜೆ ಕಲಾ­ವಿ­ದರು. ಡಾ. ಮಂಜು­ನಾಥ್‌ ಮೈಸೂರು ವಿವಿಯ ಸಂಗೀತ ಎಂ.ಎ. ನಲ್ಲಿ ಪ್ರಥಮ ರ್ಯಾಂಕ್‌ ಹಾಗೂ ನಾಲ್ಕು ಚಿನ್ನದ ಪದಕ ಗಳಿ­ಸಿ­ದ್ದಾರೆ. ಪೀಟಿ­ಲಿ­ನಲ್ಲಿ ಸಂಶೋ­ಧನೆ ನಡೆಸಿ ಡಾಕ್ಟ­ರೇಟ್‌ ಪಡೆ­ದಿ­ದ್ದಾರೆ. ಲಲಿ­ತ­ಕಲಾ ಕಾಲೇ­ಜಿ­ನಲ್ಲಿ ಪ್ರಾದ್ಯಾ­ಪ­ಕ­ರಾಗಿ ಕಾರ್ಯ ನಿರ್ವ­ಹಿ­ಸು­ತ್ತಿ­ದ್ದಾರೆ.
ಭಾರ­ತೀಯ ಸಂಗೀತ, ಸಮ­ಕಾ­ಲೀನ ಸಂಗೀ­ತ­ಗ­ಳಲ್ಲೂ ನಾಗ­ರಾಜ ಮಂಜು­ನಾ­ಥರು ತಮ್ಮ ಪ್ರತಿಭೆ ಮೆರೆ­ದಿ­ದ್ದಾರೆ. ಅಸಂ­ಖ್ಯಾತ ಜಗ­ತ್ಪ್ರ­ಸಿ­ದ್ಧ­ರಿಗೆ ಜೊತೆ­ಯಾ­ಗಿ­ದ್ದಾರೆ. ನೂರಾರು ಕೆಸೆಟ್‌, ಸಿಡಿ­ಗ­ಳನ್ನು ಹೊರ­ತಂದು ಕೇಳು­ಗ­ರನ್ನು ತಣಿ­ಸಿ­ದ್ದಾರೆ. ಒಂಭ­ತ್ತನೇ ವಯ­ಸ್ಸಿ­ನಲ್ಲಿ ಆರಂ­ಭ­ವಾದ ಇವರ ತಂತಿಯ ಮೇಲಿನ ನಡಿಗೆ ನಿರಂ­ತ­ರ­ವಾಗಿ

ಅಚ್ಯು­ತ­ರಾವ್‌

ಅಚ್ಯು­ತ­ರಾವ್‌ ನಾಡಿಯಲ್ಲಿ ಗಾಂಧಿ ಮಿಡಿತ




1935ರಲ್ಲಿ ಮಹಾತ್ಮ ಗಾಂಧಿ ಮೈಸೂ­ರಿಗೆ ಭೇಟಿ ನೀಡಿ­ದ್ದಾಗ ಬಿ.ಎಸ್‌. ಅಚ್ಯುತ ರಾವ್‌ ಆರೇಳು ವರ್ಷದ ಹುಡುಗ. ಅವರ ತಾಯಿ ತನ್ನ ಮುದ್ದು ಮಗ­ನಿಗೆ ಬಿಳಿಯ ಜುಬ್ಬಾ ಪೈಜಾಮ್‌ ಹಾಕಿಸಿ ಬಾಪು ಕಾರ್ಯ­ಕ್ರ­ಮಕ್ಕೆ ಕರೆ­ದು­ಕೊಂಡು ಹೋಗಿ­ದ್ದರು. ಬಾಪು­ವಿನ ಆಶೀ­ರ್ವಾ­ದ­ಕ್ಕಾಗಿ ಜನ­ಸಾ­ಗ­ರ­ದೊ­ಳಗೆ ನುಸುಳಿ ಮಹಾ­ತ್ಮನ ಕಾರಿನ ಕಿಟ­ಕಿ­ಯೊ­ಳಗೆ ಮಗನ ತಲೆ­ಯನ್ನು ತೂರಿ­ದರು. ಬಾಪು ನಗುತ್ತಾ ಬಾಲ­ಕನ ತಲೆ ನೇವ­ರಿ­ಸಿ­ದರು....!
ಸದ್ಯ ಅಚ್ಯುತ ರಾವ್‌ ಅವ­ರಿಗೆ 80 ವರ್ಷ ವಯಸ್ಸು. ಏಳು ದಶ­ಕ­ಗಳ ಹಿಂದಿನ ಈ ಘಳಿ­ಗೆ­ಯನ್ನು ತಮ್ಮ ಸ್ಮೃತಿಗೆ ತಂದು­ಕೊಂ­ಡಾಗ ಅಚ್ಯು­ತ­ರಾವ್‌ ಮತ್ತೆ ಮಗು­ವಾ­ಗಿ­ಬಿ­ಡು­ತ್ತಾರೆ. ಮೈಯಲ್ಲಿ ವಿದ್ಯುತ್‌ ಸಂಚ­ಲ­ನ­ವಾ­ಗು­ತ್ತದೆ. ರೋಮಾಂ­ಚ­ನ­ಗೊ­ಳ್ಳು­ತ್ತಾರೆ. ಅದು ಸ್ವರ್ಗೀಯ ಕ್ಷಣ. ಆ ಕ್ಷಣ­ದಿಂದ ನನ್ನ ಬದುಕು ಬದ­ಲಾ­ಯಿತು ಎಂದು ಪುಳ­ಕ­ಗೊ­ಳ್ಳು­ತ್ತಾರೆ! ಗಾಂಧಿಜೀ ಸ್ಪರ್ಶದ ಆ ಕ್ಷಣ­ದಿಂದ ಅಚ್ಯುತ ರಾವ್‌ ಅವರ ನರ ನಾಡಿ­ಗ­ಳಲ್ಲಿ ಗಾಂಧಿ, ಗಾಂಧೀ­ಯತೆ ಉಳಿ­ದು­ಕೊಂಡು ಬಂದಿದೆ.
ನಮ್ಮ ನಾಡಿನ ಹಿರಿಯ ಸ್ವಾತಂತ್ರ್ಯ ಹೋರಾ­ಟ­ಗಾ­ರ­ರಲ್ಲಿ ಬಿ.ಎಸ್‌. ಅಚ್ಯು­ತ­ರಾವ್‌ ಕೂಡ ಒಬ್ಬರು. ಸ್ವಾತಂತ್ರ ಭಾರ­ತ­ಕ್ಕಾಗಿ ಜೈಲು­ವಾಸ ಅನು­ಭ­ವಿ­ಸಿ­ರುವ ಅವರು ನಮ್ಮ ಸಮಾ­ಜದ ಹೆಮ್ಮೆಯ ಸಂಪತ್ತು. ಎಂಭತ್ತು ತುಂಬಿ­ರುವ ಅವರು ಇವತ್ತೂ ಪಾದ­ರಸ. ಸರ್ಕಾರಿ ನೌಕ­ರಿ­ಯಿಂದ ನಿವೃ­ತ್ತ­ರಾದ ಮೇಲೆ ಉಪ­ನ್ಯಾಸ ವೃತ್ತಿ ಸ್ವೀಕ­ರಿ­ಸಿದ ಅವರು ವಿದ್ಯಾರ್ಥಿ ಕೋಟಿ­ಯನ್ನೇ ಹೊಂದಿ­ದ್ದಾರೆ. ನಾಡು ನುಡಿಯ ಬಗ್ಗೆ ಅವರು ಹೊಂದಿ­ರುವ ಪ್ರೀತಿ ಸದಾ ಸ್ಮರ­ಣೀಯ. ಐತಿ­ಹಾ­ಸಿಕ ಶಾರ­ದಾ­ವಿ­ಲಾಸ ವಿದ್ಯಾ­ಸಂ­ಸ್ಥೆಯ ಜೊತೆ ಭಾವ­ನಾ­ತ್ಮಕ ಸಂಬಂಧ ಹೊಂದಿ­ರುವ ಅವರು ಆ ಸಂಸ್ಥೆಯ ಹೆಮ್ಮೆ­ಯಾ­ಗಿ­ದ್ದಾರೆ.
1947, ಆಗಸ್ಟ್‌ 15ರಂದು ಭಾರ­ತಕ್ಕೆ ಸ್ವಾತಂತ್ರ್ಯ ದೊರೆ­ತಾಗ ಮೈಸೂರು ರಾಜ್ಯ­ವನ್ನು ಸ್ವಾತಂತ್ರ್ಯ ಭಾರ­ತಕ್ಕೆ ಒಪ್ಪಿ­ಸಲು ಜಯ­ಚಾ­ಮ­ರಾ­ಜೇಂದ್ರ ಒಡೆ­ಯರು ನಿರಾ­ಕ­ರಿ­ಸಿ­ದರು. ಒಡೆ­ಯರ ನಿರ್ಧಾ­ರದ ವಿರುದ್ಧ ಹೋರಾಟ ಆರಂ­ಭ­ವಾ­ಯಿತು. ಮೈಸೂರು ಚಲೋ ಚಳ­ವಳಿ ನಡೆ­ಯಿತು. ಪ್ರತಿ­ಭ­ಟ­ನಾ­ಕಾ­ರರ ಮೇಲೆ ಲಾಠಿ ಪ್ರಹಾ­ರ­ವಾ­ಯಿತು. ಆ ಘಟ­ನೆ­ಯಲ್ಲಿ ಒಬ್ಬ ಶಾಲಾ ಬಾಲಕ ಬಲಿ­ಯಾದ. ಆತನ ಹೆಸರು ರಾಮ­ಸ್ವಾಮಿ. ಆತ ಜೀವ ತೆತ್ತ ಜಾಗ­ವನ್ನು ಇಂದಿಗೂ ರಾಮ­ಸ್ವಾಮಿ ವೃತ್ತ ಎಂದೇ ಕರೆ­ಯ­ಲಾ­ಗು­ತ್ತದೆ.
ಈ ಹೋರಾ­ಟ­ದಲ್ಲಿ ಅಚ್ಯತ ರಾವ್‌ ಕೂಡ ಭಾಗ­ವ­ಹಿ­ಸಿ­ದ್ದರು. ಜೊತೆಗೆ ಅವರ ಸಹೋ­ದ­ರಿ­ಯ­ರಾದ ಮಾಲತಿ, ಸುಮಿತ್ರ ಹಾಗೂ ಇನ್ನಿ­ಬ್ಬರು ಸೋದರ ಸಂಬಂ­ಧಿ­ಕರೂ ಕೂಡ ಪಾಲ್ಗೊಂ­ಡಿ­ದ್ದರು. ದೇಶ­ಪ್ರೇಮ ಇಡೀ ಕುಟುಂ­ಬ­ದ­ಲ್ಲಿತ್ತು.
ಮೈಸೂರು ಚಳ­ವಳಿ ಹೋರಾ­ಟ­ದಲ್ಲಿ ಬಂಧ­ನ­ಕ್ಕೊ­ಳ­ಗಾದ 1200 ಮಂದಿ ಹೋರಾ­ಟ­ಗಾ­ರ­ರಲ್ಲಿ ಅಚ್ಯು­ತ­ರಾವ್‌ ಅವರೂ ಇದ್ದರು. ಏಳು ದಿನ ಕಾರಾ­ಗೃಹ ವಾಸ ಅನು­ಭ­ವಿ­ಸಿ­ದರು. ವಿದ್ಯಾರ್ಥಿ ದೆಸೆ­ಯಲ್ಲೇ ಉತ್ಸಾ­ಹದ ಚಿಲು­ಮೆ­ಯಾ­ಗಿದ್ದ ಅವರು ನಾಡಿ­ಗಾಗಿ ಅರ್ಪ­ಣೆಯ ಮನೋ­ಭಾವ ರಕ್ತ­ದಲೇ ಇತ್ತು. ಈ ಘಟ­ನೆ­ಯಿಂದ ದಿಗ್ಭ್ರ­ಮೆ­ಗೊಂಡ ಒಡೆ­ಯರು ಭಾರ­ತಕ್ಕೆ ಸಾಮ್ರಾಜ್ಯ ನೀಡಲು ನೀಡಲು ಒಪ್ಪಿ­ದರು. ಕೆ.ಸಿ. ರೆಡ್ಡಿ ಮುಖ್ಯ­ಮಂ­ತ್ರಿ­ಯಾ­ದರು. ಅದೆಲ್ಲಾ ಇತಿ­ಹಾಸ.
ಅಚ್ಯು­ತ­ರಾವ್‌ ರೆಲ್ವೆ ಇಲಾ­ಖೆ­ಯಲ್ಲಿ ನೌಕರಿ ಮಾಡು­ತ್ತಿ­ದ್ದ­ವರು. ಅವರು ಕೆಲಸ ಮಾಡಿದ ಜಾಗ­ದ­ಲ್ಲೆಲ್ಲಾ ತಮ್ಮ ಪ್ರತಿ­ಭೆಯ ಪರಿ­ಮಳ ಬೀರಿ­ದ್ದಾರೆ. 1952ರಲ್ಲಿ ಹುಬ್ಬ­ಳ್ಳಿ­ಯಲ್ಲಿ ಇಲಾ­ಖೆಗೆ ಸೇರಿದ ಅವರು 1953ರಲ್ಲಿ ಮದ್ರಾ­ಸ್‌ಗೆ ವರ್ಗಾ­ವ­ಣೆ­ಗೊಂ­ಡರು. ಕನ್ನಡ ಭಾಷೆಯ ಮೇಲೆ ಅತೀವ ಪ್ರೀತಿ ಹೊಂದಿ­ರುವ ಅಚ್ಯು­ತ­ರಾವ್‌ ಮದ್ರಾ­ಸ್‌­ನಲ್ಲಿ ಕನ್ನಡ ಸಂಘ ಕಟ್ಟಿ­ದರು. ಸಂಘ ಇವ­ರಿದ್ದ ಕೊಠ­ಡಿ­ಯಿಂ­ದಲೇ ಆರಂ­ಭ­ವಾ­ಯಿತು.
ನಂತರ ಆಂದ್ರ­ಪ್ರ­ದೇ­ಶದ ಗುತ್ತಿ ಎಂಬ­ಲ್ಲಿಗೆ ವರ್ಗಾ­ವ­ಣೆ­ಗೊಂ­ಡರು. ಈ ನಡುವೆ ಬೆಂಗ­ಳೂ­ರಿನ ಯಲ­ಹಂಕ ಘಟ­ಕ­ದಲ್ಲೂ ಸೇವೆ ಸಲ್ಲಿ­ಸಿ­ದರು. ಮತ್ತೆ ಮದ್ರಾಸ್‌ ವರ್ಗಾ­ವ­ಣೆ­ಗೊಂ­ಡರು. ಅಷ್ಟೊ­ತ್ತಿ­ಗಾ­ಗಲೇ ತಾವು ಕಟ್ಟಿ ಬೆಳೆ­ಸಿದ್ದ ಕನ್ನಡ ಸಂಘ ೃಹ­ದಾ­ಕಾ­ರ­ವಾಗಿ ಬೆಳೆ­ದಿತ್ತು. ಕನ್ನಡ ಸಂಘ­ದಿಂದ ಕೇಂದ್ರಿಯ ಶಾಲೆ ಆರಂ­ಭ­ಗೊಂ­ಡಿತ್ತು. ಕನ್ನಡ ಸಂಘ ಕಟ್ಟು­ವಲ್ಲಿ ಪ್ರಮುಖ ಪಾತ್ರ ವಹಿ­ಸಿದ ಅಚ್ಯುತ ರಾವ್‌ ಸಂಸ್ಥಾ­ಪಕ ಸದ­ಸ್ಯ­ರಾಗಿ ಅಪಾರ ಮನ್ನಣೆ ಗಳಿ­ಸಿ­ದರು.
ರೈಲ್ವೆ ಇಲಾ­ಖೆ­ಯಿಂದ ನಿವೃ­ತ್ತ­ರಾದ ಮೇಲೆ ಅವರ ವೃತ್ತಿ ಬದುಕು ಮುಗಿ­ಯ­ಲಿಲ್ಲ. ಬಹುಶಃ ಆಗಲೇ ಆರಂ­ಭ­ವಾ­ಯಿತು ಎನ್ನ­ಬ­ಹುದು. ಮೈಸೂ­ರಿಗೆ ಹಿಂದು­ರಿಗಿ ಬಂದ ಮೇಲೆ ಆ ಇಳಿ ವಯ­ಸ್ಸಿ­ನಲ್ಲಿ ಇಂಗ್ಲಿಷ್‌ ಮತ್ತು ಸಮಾಜ ಶಾಸ್ತ್ರ­ಗ­ಳಲ್ಲಿ ಸ್ನಾತ­ಕೋ­ತ್ತರ ಪದವಿ ಪಡೆ­ದರು. ಶಾರದ ವಿಲಾಸ ವಿದ್ಯಾ­ಸಂಸ್ಥೆ ಕೈ ಬೀಸಿ ಕರೆ­ಯಿತು. ವಿಜ್ಞಾನ ಕಾಲೇ­ಜಿ­ನಲ್ಲಿ ಇಂಗ್ಲಿಷ್‌ ಉಪ­ನ್ಯಾ­ಸ­ಕ­ರಾಗಿ ನೇಮ­ಕ­ಗೊಂ­ಡರು. ಬಿಇಡಿ ಕಾಲೇ­ಜಿ­ನಲ್ಲೂ ಕೆಲಸ ಮಾಡಿ­ದರು. ಸದ್ಯಕ್ಕೆ ಕಾನೂನು ಕಾಲೇ­ಜಿ­ನಲ್ಲಿ ಪ್ರಾಧ್ಯಾ­ಪ­ಕ­ರಾಗಿ ಕೆಲಸ ನಿರ್ವ­ಹಿ­ಸು­ತ್ತಿ­ದ್ದಾರೆ.
ಅಚ್ಯು­ತ­ರಾವ್‌ ದಣಿ­ವಾ­ಗದ ಪ್ರಾದ್ಯಾ­ಪಕ. ಸದಾ ವಿದ್ಯಾ­ರ್ಥಿ­ಗಳ ಜೊತೆ ಒಂದಲ್ಲಾ ಒಂದು ಕಾರ್ಯ­ಚ­ಟು­ವ­ಟಿ­ಕೆ­ಗ­ಳಲ್ಲಿ ತೊಡ­ಗಿ­ಕೊಂಡು ವಿದಾ­ರ್ಥಿಯೇ ಆಗಿ­ಬಿ­ಡು­ತ್ತಾರೆ. ಶಾರದಾ ವಿಲಾಸ ವಿದ್ಯಾ­ಸಂ­ಸ್ಥೆರ ಎಲ್ಲಾ ಕಾರ್ಯ­ಕ್ರ­ಮ­ಗ­ಳಲ್ಲಿ ಅಚ್ಯು­ತ­ರಾವ್‌ ಭಾಗ­ವ­ಹಿ­ಸು­ತ್ತಾರೆ. ಸ್ವತಂತ್ರ ಸಂಗ್ರಾ­ಮದ ಹಲವು ಘಟ­ನೆ­ಗಳ ಕಿರು­ನಾ­ಟ­ಕ­ಗ­ಳನ್ನು ರಚಿಸಿ ವಿದ್ಯಾ­ರ್ಥಿ­ಗ­ಳಿಗೆ ನಿರ್ದೇ­ಶಿ­ಸಿ­ದ್ದಾರೆ.
ಅಚ್ಯು­ತ­ರಾವ್‌ ಅವರು ಬರ­ವ­ಣಿ­ಗೆ­ಯಲ್ಲೂ ತಮ್ಮ ಪ್ರತಿಭೆ ತೋರಿ­ಸಿ­ದ್ದಾರೆ. ಕವನ, ಕಿರು­ನಾ­ಟಕ, ಭಾವ­ಗೀ­ತೆ­ಗ­ಳನ್ನು ರಚಿ­ಸಿ­ದ್ದಾರೆ. ಅವರು ಹಲವು ಗೌರವ ಪ್ರಶ­ಸ್ತಿ­ಗ­ಳಿಗೆ ಪಾತ್ರ­ರಾ­ಗಿ­ದ್ದಾರೆ. ಕಾವ್ಯಶ್ರೀ ಪ್ರಶಸ್ತಿ ಅವರ ಮುಡಿ­ಗೇ­ರಿದೆ. ಕಳೆದ ಬಾರಿಯ ಸ್ವತಂ­ತ್ರ್ಯೋ­ತ್ಸ­ವ­ದಲ್ಲಿ ಕರ್ನಾ­ಟಕ ಸರ್ಕಾರ ಸನ್ಮಾ­ನಿ­ಸಿದೆ. ಹಲವು ಸಂಘ­ಸಂ­ಸ್ಥೆ­ಗಳು ಅವ­ರನ್ನು ಗೌರ­ವಿ­ಸಿವೆ.
ಅಚ್ಯು­ತ­ರಾವ್‌ ನಿಜಕ್ಕೂ ಅಸ­ಮಾನ್ಯ ಸಾಧ­ಕರು. ಅವರು ನಡೆದು ಬಂದ ಹಾದಿ­ಯಲ್ಲಿ ಅಪಾರ ಮಹ­ತ್ವ­ಪೂರ್ಣ ಮೈಲು­ಗ­ಲ್ಲು­ಗ­ಳಿವೆ. ಅವು ಕಿರಿ­ಯ­ರಿಗೆ ಸ್ಪೂರ್ತಿ­ಯಾ­ಗಿವೆ.. ಙ

ನೀಲಿಮಾ: ಅಪ­ರೂ­ಪದ ಮಹಿಳಾ ಶಿಲ್ಪಿ


ನೀಲಿಮಾ: ಅಪ­ರೂ­ಪದ ಮಹಿಳಾ ಶಿಲ್ಪಿ




ಒಬ್ಬ ಶಿಲ್ಪಿ ಕಲ್ಲು ಮತ್ತು ಹೃದ­ಯದ ನಡುವೆ ವ್ಯತ್ಯಾಸ ಹುಡು­ಕ­ಲಾರ. ಕಲ್ಲಿನ ಗುಣ ಶಿಲ್ಪಿಗೆ ಮಾತ್ರ ಗೊತ್ತು. ಕಣ್ಣಿಲ್ಲಿ ಕಣ್ಣಿಟ್ಟು ಕಲ್ಲನ್ನು ಕುಟ್ಟಿ, ಕೊರೆದು, ಕೆತ್ತಿ ತನ್ನ ಹೃದ­ಯದ ಭಾವಕ್ಕೆ ರೂಪ ಕೊಡು­ತ್ತಾನೆ. ಶಿಲ್ಪಿ ಕಲ್ಲನ್ನು ಪ್ರೀತಿ­ಸು­ತ್ತಾನೆ. ಧನ ಕನಕ ವಜ್ರ ವಾಹನ ವೈಢೂ­ರ್ಯ­ಗ­ಳಿ­ಗಿಂ­ತಲೂ ಶಿಲ್ಪಿಗೆ ಕಲ್ಲೇ ಮೇಲು.
ಶಿಲ್ಪಿ ಭಾವ­ಜೀವಿ, ಸೂಕ್ಷ್ಮ ಜೀವಿ ನಿಜ. ಆದರೆ ಅವನ ತೋಳು ಮಾತ್ರ ಗಟ್ಟಿ­ಮು­ಟ್ಟಾ­ಗಿ­ರ­ಬೇಕು. ಮನಸ್ಸು ಒರ­ಟಾ­ಗ­ಬೇಕು. ಕಗ್ಗ­ಲ್ಲಿ­ನಿಂದ ಇತಿ­ಹಾಸ ಹೇಳಿ­ಸ­ಬೇ­ಕಾ­ದರೆ ಶಿಲ್ಪಿಯ ದೇಹ ಕಲ್ಲಾ­ಗ­ಬೇಕು. ದೈಹಿಕ ಶ್ರಮವೇ ಶಿಲ್ಪ­ಕ­ಲೆಯ ಆಧಾರ.
ಈ ಶಿಲ್ಪ­ಕ­ಲೆಯ ಕಸ­ರತ್ತು ಒಬ್ಬ ಮಹಿ­ಳೆ­ಯಿಂದ ಸಾಧ್ಯವೆ?
ಸಾಧ್ಯ ಎನ್ನು­ತ್ತಾರೆ ನೀಲಿಮಾ. ರಾಷ್ಟ್ರದ ಪ್ರಥಮ ಹಾಗೂ ಅಪ­ರೂ­ಪದ ಮಹಿಳಾ ಶಿಲ್ಪಿ ಎಂಬ ಹೆಗ್ಗ­ಳಿ­ಕೆಗೆ ಪಾತ್ರ­ರಾದ ನೀಲಿಮಾ ಶಿಲ್ಪ­ಕ­ಲೆ­ಯನ್ನು ತಮ್ಮ ಜೀವ­ನದ ಅಂಗ­ವಾ­ಗಿ­ಸಿ­ಕೊಂಡ ದಿಟ್ಟ ಮಹಿಳೆ.
ಕೋಲ್ಕ­ತ್ತಾದ ಇಂಡಿ­ಯನ್‌ ಸ್ಕೂಲ್‌ ಆಫ್‌ ಆರ್ಟ್ಸ್‌­ನಲ್ಲಿ ಶಿಲ್ಪ­ಕಲಾ ವಿದ್ಯಾ­ರ್ಥಿ­ಯಾಗಿ ನೀಲಿಮಾ ದಾಖ­ಲಾ­ದಾಗ ಇಡೀ ಕಲಾ­ಶಾಲೆ ಚಕಿ­ತ­ಗೊಂ­ಡಿತ್ತು. ಭಾರ­ತದ ಪ್ರತಿ­ಷ್ಠಿತ ಕಲಾ­ಶಾ­ಲೆ­ಯಾದ ಈ ಸಂಸ್ಥೆ­ಯಲ್ಲಿ ಮಹಿ­ಳೆ­ಯೊ­ಬ್ಬರು ಶಿಲ್ಪ­ಕಲೆ ಕಲಿತ ಉದಾ­ಹ­ರ­ಣೆಯೇ ಇರ­ಲಿಲ್ಲ. ಕೆಲ­ವರು ಮೂದ­ಲಿ­ಸಿದ್ದೂ ಉಂಟು. ನಿರ್ಧಾರ ಕೈಬಿ­ಡು­ವಂತೆ ಒತ್ತಾ­ಯ­ಗಳೂ ಬಂದವು. ಹಠ ಬಿಡದ ನೀಲಿಮಾ ಶ್ರದ್ಧೆ­ಯಿಂದ ಶಿಲ್ಪ­ಕಲೆ ಕಲಿ­ತರು. ಶಾಲೆ­ಯ­ಲ್ಲಿ­ದ್ದಷ್ಟೂ ದಿನ ಉನ್ನತ ಮಟ್ಟ­ದಲ್ಲಿ ತಮ್ಮ ಸಾಮರ್ಥ್ಯ ತೋರಿ­ದರು. ರಾಷ್ಟ್ರ­ಮ­ಟ್ಟದ ಬಹು­ಮಾನ ಗಳಿ­ಸಿ­ದರು. ಚಿನ್ನದ ಪದಕ ಗಳಿ­ಸಿ­ದರು. ಪುರುಷ ವಿದ್ಯಾ­ರ್ಥಿ­ಗ­ಳನ್ನು ಮೀರಿ­ಸಿ­ದರು. ರವೀಂ­ದ್ರ­ಭಾ­ರತಿ ವಿಶ್ವ­ವಿ­ದ್ಯಾ­ಲ­ಯದ ಪ್ರಥಮ ಮಹಿಳಾ ಶಿಲ್ಪಿ ಎನಿ­ಸಿ­ಕೊಂ­ಡರು. ನೀಲಿ­ಮಾ­ರಿಂದ ಪ್ರಭಾ­ವಿ­ತ­ರಾದ ಇಬ್ಬರು ಹೆಣ್ಣು ಮಕ್ಕಳು ಮುಂದೆ ಶಿಲ್ಪ­ಕ­ಲೆಗೆ ದಾಖ­ಲಾ­ದರು. ಆದರೆ ಎರಡೇ ತಿಂಗ­ಳಲ್ಲಿ ಅವರು ಬೆವ­ರಿ­ಳಿ­ಸಿ­ಕೊಂಡು ಕಾಲಿಗೆ ಬುದ್ಧಿ­ಹೇ­ಳಿ­ದರು.
ಹಠ­ಯೋ­ಗ­ದಿಂದ ಕಲಿತ ವಿದ್ಯೆ ನೀಲಿಮಾ ಅವರ ಕೈ ಹಿಡಿ­ಯಿತು. ಶಿಲ್ಪಿ­ಯಾಗಿ ನೂರಾರು ಕಲಾ­ಕೃ­ತಿ­ಗ­ಳನ್ನು ಕಟ್ಟಿ­ದ್ದಾರೆ. ನೀಲಿಮಾ ಕಂಚು ಮತ್ತು ಫೈಬರ್‌ ಗ್ಲಾಸ್‌ ಮೇಲೆ ಹೆಚ್ಚು ಕೆಲಸ ಮಾಡಿ­ದ್ದಾರೆ. ಅವರ ಕಂಚಿನ ಏಕ­ವ್ಯಕ್ತಿ ಕಲಾ­ಕೃ­ತಿ­ಗಳು ಹೆಚ್ಚು ಪ್ರಸಿದ್ಧಿ ಪಡೆ­ದಿವೆ. ಮೊನ್ನೆ (ನ. 12- 16ರ ವರೆಗೆ) ಬೆಂಗ­ಳೂ­ರಿನ ಚಿತ್ರ­ಕಲಾ ಪರಿ­ಷ­ತ್ತಿ­ನಲ್ಲಿ ನಡೆದ ಕಂಚಿನ ಏಕ­ವ್ಯಕ್ತಿ ಕಲಾ­ಕೃ­ತಿ­ಗಳ ಪ್ರದ­ರ್ಶನ ಮನ­ಸೂ­ರೆ­ಗೊಂ­ಡಿತು.
ಮಾತೃತ್ವ. ಇದು ನೀಲಿಮಾ ಅವರ ಪ್ರಸಿದ್ಧ ಕಂಚಿನ ಏಕ­ವ್ಯಕ್ತಿ ಕಲಾ­ಕೃ­ತಿ­ಯ­ಲ್ಲೊಂದು. ಇಡೀ ಮಾನವ ಸಮಾ­ಜ­ದಲ್ಲಿ ಮಾತೃ­ವಾಗಿ ಹೆಣ್ಣಿನ ಪಾತ್ರ­ವನ್ನು ಈ ಶಾಂತ ಮೂರ್ತಿ ವರ್ಣಿ­ಸು­ತ್ತದೆ. ನಿಂದ್ರಾ. ಇದು ನೀಲಿ­ಮಾರ ಇನ್ನೊಂದು ಪ್ರಸಿದ್ಧ ಕೃತಿ. ಹೆಣ್ಣು ಮತ್ತು ಗಂಡು ಇಬ್ಬರು ನಿದ್ರಿ­ಸು­ತ್ತಿ­ರುವ ಈ ಕೃತಿ­ಯಲ್ಲಿ ಶಾಂತ­ತೆ­ಯನ್ನು ಚಿತ್ರಿ­ಸಿ­ದ್ದಾರೆ. ಅಖಿಲ್‌. ಈ ಕೃತಿ­ಯಲ್ಲಿ ಯೌವ­ನಾ­ವ­ಸ್ಥೆ­ಯನ್ನು ಕಾಣ­ಬ­ಹುದು.
ಇದಂ ಮಮ್‌. ಇದು ಕಲಾ­ಕೃ­ತಿ­ಗಳ ಗುಚ್ಛ. ಇವು ಧಾರ್ಮಿಕ ಭಾವ­ಗ­ಳನ್ನು ಬಿಂಬಿ­ಸುವ ಕೃತಿ­ಗಳು. ಇವು­ಗಳ ಮೇಲ್ಪ­ದ­ರ­ದಲ್ಲಿ ಪ್ರಾಚೀನ ನಾಗ­ರಿ­ಕ­ತೆಯ ಬ್ರಾಹ್ಮಿ ಮತ್ತು ಖರೋಷ್ಠಿ ಲಿಪಿ­ಗ­ಳನ್ನು ಬಳ­ಸ­ಲಾ­ಗಿದೆ. ಇದಂ ಮಮ್‌ ಕೃತಿ­ಗ­ಳಲ್ಲಿ ನೀಲಿ­ಮಾರ ಸಂಶೋ­ಧನೆ ಮನೋ­ಭಾ­ವವೂ ಕೂಡ ಬಿಂಬಿ­ತ­ವಾ­ಗಿದೆ. ಹಿಂದು­ಗಳ ಪವಿತ್ರ ಶಬ್ಧ­ವಾದ `ಓಂ'ಕಾರ ಉತ್ಪ­ತ್ತಿ­ಯನ್ನು ಈ ಕಲಾ­ಕೃ­ತಿ­ಗ­ಳಲ್ಲಿ ಕಾಣ­ಬ­ಹುದು.
ಅವರ ಕೃತಿ­ಗಳು ಒಂದು ಕಾಲ­ಘ­ಟ್ಟದ ಇತಿ­ಹಾಸ ಹೇಳ­ಬ­ಲ್ಲವು. ಅಂತೆಯೇ ಪ್ರತಿ­ನಿ­ತ್ಯದ ಬದು­ಕನ್ನೂ ಬಿಂಬಿ­ಸ­ಬ­ಲ್ಲವು. ಭಾವ­ನೆ­ಗ­ಳನ್ನು ಉದ್ರೇ­ಕಿ­ಸುವ ಶಕ್ತಿ ಇವರ ಕೃತಿ­ಗ­ಳ­ಲ್ಲಿವೆ. ಕಂಚಿನ ಗುಣ­ವನ್ನು ಆಳ­ವಾಗಿ ಅಧ್ಯ­ಯನ ಮಾಡಿ­ರುವ ನೀಲಿಮಾ ಆ ಲೋಹದ ಸಾಧ್ಯ­ತೆ­ಯನ್ನು ಕೃತಿ­ಗಿ­ಳಿ­ಸಿ­ದ್ದಾರೆ.
ನೀಲಿ­ಮಾರ ಶಿಲ್ಪ­ಕೆ­ಲೆ­ಯಲ್ಲಿ ತಾಂತ್ರಿ­ಕತೆ ಮತ್ತು ಮ್ಯಾಜಿಕ್‌ ತತ್ವ­ಗ­ಳನ್ನು ವಿಶೇ­ಷ­ವಾಗಿ ನೋಡ­ಬ­ಹುದು. ಈ ಕಲಾ­ಕೃ­ತಿ­ಗ­ಳನ್ನು ಅರ್ಥೈ­ಸಿ­ಕೊ­ಳ್ಳಲು ಕ್ಲಾಸ್‌ ಪ್ರೇಕ್ಷ­ಕನೇ ಆಗ­ಬೇ­ಕೆಂ­ದಿಲ್ಲ. ಯಾರೊಬ್ಬ ಸಾಮಾನ್ಯ ಪ್ರೇಕ್ಷ­ಕ­ನಿಗೂ ಕೂಡ ನೋಡಿದ ಕೂಡಲೆ ಸರ­ಳ­ವಾಗಿ ಅರ್ಥ­ವಾ­ಗು­ತ್ತವೆ. ಸರ­ಳತೆ ಅವರ ಕೃತಿ­ಗಳ ಮುಖ್ಯಾಂಶ.
ನೀಲಿಮಾ ಶಿಲ್ಪಿ­ಯಾಗಿ ಹಲವು ಪ್ರಶಸ್ತಿ ಗೌರ­ವ­ಗ­ಳನ್ನು ತಮ್ಮ­ದಾ­ಗಿ­ಸಿ­ಕೊಂ­ಡಿ­ದ್ದಾರೆ. ದೇಶಾ­ದ್ಯಂತ ಪ್ರದ­ರ್ಶ­ನದ ಜೊತೆಗೆ ಹಲವು ಕಾರ್ಯ­ಗಾ­ರ­ಗ­ಳನ್ನು ನಡೆ­ಸಿ­ದ್ದಾರೆ. ಬೋಧ­ಕ­ರಾಗಿ ಶಿಷ್ಯ­ವೃಂ­ದ­ವನ್ನು ಹೊಂದಿ­ದ್ದಾರೆ. ತಮ್ಮ ಕಲಾ­ಕೃ­ತಿ­ಗಳ ಮೂಲಕ ತನ್ಮ­ಯತೆ, ಆಪ್ತತೆ, ತಾಂತತೆ, ಭಾವು­ಕ­ತೆ­ಗ­ಳನ್ನು ಬಿಂಬಿ­ಸುತ್ತಾ ಒಬ್ಬ ಕಲಾ­ಮೂ­ರ್ತಿ­ಯಾಗಿ ಕಲಾ­ಪ್ರೇ­ಮಿ­ಗಳ ಮನ­ಮು­ಟ್ಟಿ­ದ್ದಾರೆ.

Saturday, June 20, 2009

ಮುರಳಿ ಶೃಂಗೇರಿ



ಬಿದಿರಿನ ಕೊಳಲಿನ ಒಳಗೆ ಮುರಳಿ ಉಸಿರು


ಅದು ಮೊದಲ ಕೊಳಲು ತರಗತಿ. ಬಿದಿರಿನ ಬಾನ್ಸುರಿಯೊಳಗೆ ಸಪ್ತ ಸ್ವರಗಳನ್ನು ತುಂಬುವ ಪಾಠವನ್ನು ಶಿಷ್ಯನಿಗೆ ಗುರುಗಳು ಹೇಳಿಕೊಟ್ಟರು. ಶಿಷ್ಯನಿಗೆ ರೋಮಾಂಚನ. ಅವರ ಹಲವು ವರ್ಷಗಳ ಕನಸಿಗೆ ಅಂದು ಸ್ವರೂಪ ಸಿಕ್ಕಿತ್ತು. ರಾತ್ರಿಯಿಡೀ ಅಭ್ಯಾಸ ನಡೆಯಿತು. ಮುಂಜಾನೆ ತರಗತಿಯಲ್ಲಿ ಗುರುಗಳ ಮುಂದೆ `ಯಮನ್‌' ರಾಗ ಆಲಾಪ ಮಾಡಿ ತೋರಿಸಿದರು. ಗುರುಗಳು ಆನಂದದಿಂದ ನಿನ್ನ ನಾಡಿಯಲ್ಲಿ ಸಂಗೀತ ಸಂಚರಿಸುತ್ತಿದೆ ಎಂದು ಆಶೀರ್ವದಿಸಿದರು. ಅಲ್ಲಿಂದ ಮುಂದೆ ಕೊಳಲು ಅವರ ಆಪ್ತ ಸಂಗಾತಿಯಾಯಿತು.
ಅವರು ಮುರಳಿ ಶೃಂಗೇರಿ. ಹಣೆಯ ಮೇಲೆ ಉದ್ದನೆಯ ಕುಂಕುಮ. ಜಟಾಧಾರಿ. ಸದಾ ಜುಬ್ಬದಾರಿ. ಬೆನ್ನಿನ ಹಿಂದೆ ಕೊಳಲುಗಳ ಮೂಟೆ. ನೇರ ನಡೆ. ದಿಟ್ಟ ನುಡಿ. ಮತ್ತೆ ಮತ್ತೆ ನೋಡಬೇಕೆನ್ನುವ ಮುಖಚರ್ಯೆ. ಅವರು ರಸ್ತೆಯ ಮೇಲೆ ನಡೆದು ಹೋಗುತ್ತಿದ್ದರೆ ಅಕ್ಕ ಪಕ್ಕದಲ್ಲಿ ವಿಶೇಷ ಆಕರ್ಷಣೆ. ಆ ನಡೆಗೆಯಲ್ಲೂ ಒಂದು ರಿದಮ್‌. ಮಾತಿಗೆ ಕೂತರೆ ಉರುಳಿಕಾಳು ಉದುರುತ್ತವೆ. ಮಂದರದಿಂದ ಬರುವ ಮಾತಿನಲ್ಲಿ ಎದ್ದು ಕಾಣುವ ಮುಗ್ಧತೆ. ಧ್ವನಿಯಲ್ಲಿ ಮನ ಸೆಳೆಯುವ ಇಂಪು. ಮಾತಿನ ಒಂದೊಂದು ಪದವೂ ಮಹತ್ವ. ಒಮ್ಮೊಮ್ಮೆ ಮಗುವಿನಂತಾಗಿಬಿಡುವ ವ್ಯಕ್ತಿತ್ವ. ಇನ್ನೊಮ್ಮೆ ಘನ ಗಂಭೀರ ಬುದ್ಧಿಜೀವಿ... ಅಂತರ್ಮುಖಿ....ಒಟ್ಟಾರೆ ಅವರೊಬ್ಬ ಅಲೆಮಾರಿ!
ಮುರಳಿ ಶೃಂಗೇರಿ ಕನ್ನಡ ರಂಗಭೂಮಿಯ ಅಪರೂಪದ ಕೊಳಲು ವಾದಕ. ಅವರು ಕೊಳಲು ನುಡಿಸುವ ನಾಟಕಗಳಲ್ಲಿ ನಿಜವಾದ ನಾಯಕ ಅವರೇ. ಅವರ ಕೊಳಲಿನ ಮಾಧುರ್ಯದ ಜತೆ ಅಭಿನಯಿಸುವ ನಟ ನಿಜವಾಗಿ ಭಾವುಕನಾಗಲೇಬೇಕು. ಮೌನದಲ್ಲಿ ಆ ಆಲಾಪ ಕಿಚ್ಚು ಹೊತ್ತಿಸುತ್ತದೆ. ಬೆಳಕಿನೊಂದಿಗೆ ಅವರು ಮಾತಿಗಿಳಿಯುತ್ತಾರೆ. ಅಂತರಗಳ ನಡುವೆ ಆ ಗಾನ ಹುಸಿರು ಕಟ್ಟಿಸುತ್ತದೆ. ರಂಗದ ಹಿಂದಿನಿಂದ ಅವರು ನಟನೆಗೆ ಜೀವ ತುಂಬುತ್ತಾರೆ. ಕೊಳಲು ನುಡುಸುತ್ತಾ ಆಪ್ತತೆ ಸೃಷ್ಟಿಸುತ್ತಾರೆ. ರಂಗಮಂದಿದ ಒಳಗೆ ಮುರಳಿ ಕರತಾಡನ ಉಂಟುಮಾಡುತ್ತಾರೆ. ಸಂದರ್ಭ ಸನ್ನಿವೇಶಗಳಿಗೆ ಹೊಂದುವ ರಾಗಾಲಾಪ ಮಾಡುತ್ತಾ ಒಟ್ಟು ರಂಗಪ್ರಯೋಗವನ್ನು ಮೇಲೆತ್ತುವ ಸಾಮರ್ಥ್ಯ ಅವರಿಗಿದೆ.
ಮುರಳಿ ಶೃಂಗೇರಿ ಶಿಲ್ಪಿಯೂ ಹೌದು. ನಾಡಿನಲ್ಲಿರುವ ಬೆರಳೆಣಿಕೆಯಷ್ಟು ಶಿಲ್ಪಿಗಳಲ್ಲಿ ಇವರೂ ಒಬ್ಬರು. ಮೈಸೂರಿನ ಕಾವಾದಲ್ಲಿ ಶಿಲ್ಪಕಲೆ ಪದವೀದರ. 1993ರಲ್ಲಿ ಶಿಲ್ಪಕಲೆ ಕಲಿಯಲು ಮೈಸೂರಿಗೆ ಬಂದಾಗಲೇ ಅವರ ಕೊಳಲು ಕಲಿಯುವ ಕನಸು ಸಾಕಾರಗೊಂಡಿದ್ದು. ಚಿಕ್ಕಂದಿನಿಂದಲೂ ಕೊಳಲನ್ನು ಬಹಳ ಪ್ರೀತಿಸುತ್ತಿದ್ದರು. ಕೇಳ್ಮೆ ಇದ್ದೇ ಇತ್ತು. ಕೊಳಲಿಗೆ ಹೇಳಿಮಾಡಿಸಿದಂತೆ ಇರುವ ಮಲೆನಾಡಿನ ಬಿದಿರಿನಿಂದ ತಾವೇ ಕೊಳಲು ಮಾಡಿಕೊಂಡು ಸ್ವರ ಹುಟ್ಟಿಸುವ ಯತ್ನ ಮಾಡುತ್ತಿದ್ದರು. ಮೈಸೂರಿಗೆ ಬಂದ ಮೇಲೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಕೊಳಲು ಅಭ್ಯಾಸ ಮಾಡಿದರು. ದಿನೇಶ್‌ಚಂದ್ರ ಮಿಶ್ರ ಹಾಗೂ ಅವರ ಪುತ್ರ ರವಿಶಂಕರ್‌ ಮಿಶ್ರ ಗುರುಗಳು.
ಶಿಲ್ಪಿಯಾಗಿ ಮುರಳಿ ಹಲವು ಕೆಲಸ ಮಾಡಿದ್ದಾರೆ. ಕಾಸರಗೂಡಿನಲ್ಲಿರುವ 12 ಅಡಿ ಎತ್ತರದ ಸ್ವಾಮಿ ತಿಮ್ಮಯಾನಂದರ ಮೂರ್ತಿ ಇರುವ ಕೈ ಏಟಿನ ರುಚಿಯಿಂದ ರೂಪ ಪಡೆದಿದೆ. ಏಕಲವ್ಯ ನಾಟಕದಲ್ಲಿ ದ್ರೋಣಚಾರ್ಯ ಪಾತ್ರ ನಿರ್ವಹಿಸಿದ್ದ ಮುರಳಿ ತಮ್ಮ ಮೂರ್ತಿಯನ್ನು ತಾವೇ ಮಾಡಿಕೊಂಡಿದ್ದು ವಿಶೇಷ. ನಾಡಿನ ಹಲವು ಕಡೆಗಳಲ್ಲಿ ಮುರುಳಿ ಶಿಲ್ಪಕಲಾ ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಸದ್ಯಕ್ಕೆ ಮುರಳಿ ಶೃಂಗೇರಿ ಅವರ ವಾಸ ನಾಗಮಂಗಲದಲ್ಲಿ. ನಾಡಿನ ಖ್ಯಾತ ರಂಗಸಂಘಟನೆಯಾದ ನಾಗಮಂಗಲದ `ಕನ್ನಡ ಸಂಘ'ದಲ್ಲಿ ಮುರುಳಿ ದಶಕಗಳಿಂದಲೂ ಅವಿರತಾ ದುಡಿಯುತ್ತಾ ಬಂದಿದ್ದಾರೆ. ಕನ್ನಡ ಸಂಘದ ರಂಗಪ್ರಯೋಗ, ನಾಟಕೋತ್ಸವಗಳಲ್ಲಿ ಒಬ್ಬ ಪ್ರಮುಖ ಸಂಘಟಕನಾಗಿ ಕೆಲಸ ಮಾಡಿದ್ದಾರೆ. ಮುರಳಿ ಅವರ ಪ್ರತಿಭೆಗೆ ಕನ್ನಡ ಸಂಘ ಸೂಕ್ತ ವೇದಿಕೆ ಅಂದರೆ ತಪ್ಪಲ್ಲ. ಕನ್ನಡ ಸಂಘದ ಗೆಳೆಯರು, ಪಟ್ಟಣದ ಕಲಾಭಿಮಾನಿಗಳು ಅವರನ್ನು ಮನಸಾರೆ ಪ್ರೀತಿಸುತ್ತಾರೆ.
ಅವರ ಪ್ರತಿಭೆ ನಾಗಮಂಗಲಕ್ಕೆ ಮಾತ್ರ ಸೀಮಿತವಾಗಿಲ್ಲ. ಮೈಸೂರಿನ ರಂಗಾಯಣದಲ್ಲಿ ಆರಂಭದಿಂದಲೂ ತೊಡಗಿಸಿಕೊಂಡಿದ್ದಾರೆ. ಶಿಲ್ಪಿಯಾಗಿ ರಂಗ ಸಜ್ಜಿಕೆಯಲ್ಲಿ ಕ್ರಿಯಾಶೀಲರಾಗಿರುವ ಅವರು ರಂಗಾಯಣದ ಹಲವು ನಾಟಕಗಳಿಗೆ ರಂಗದ ಹಿಂದೆ ಕೆಲಸ ಮಾಡಿದ್ದಾರೆ. ಸಂಗೀತಕ್ಕೆ ತಮ್ಮ ಕೊಳಲನ್ನು ಜತೆಗೂಡಿಸಿದ್ದಾರೆ. ರಂಗಾಯಣದಲ್ಲೇ ಕಲಾವಿದನಾಗಿ ನೇಮಕಗೊಳ್ಳುವ ಎಲ್ಲಾ ಯೋಗ್ಯತೆಗಳಿದ್ದರೂ ನಿಂತ ನೀರಾಗಲು ಬಯಸದ ಅವರು ತಮ್ಮ ರಂಗಕಾರ್ಯಕ್ಕೆ ಎಂದೂ ವ್ಯಾಪ್ತಿ ವಿಧಿಸಿಕೊಳ್ಳಲಿಲ್ಲ.
ರಂಗಭೂಮಿಯ ಎಲ್ಲಾ ಅಂಗಗಳಲ್ಲೂ ಮುರಳಿ ಅವರ ಕೃಷಿ ನಡೆದಿದೆ. ನಟನಾಗಿ ಭರವಸೆ ಮೂಡಿಸಿದ್ದಾರೆ. ನಿರ್ದೇಶಕರಾಗಿ ಪ್ರಬದ್ಧತೆ ತೋರಿದ್ದಾರೆ. ವಿನ್ಯಾಸಕಾರರಾಗಿ ಕ್ರಿಯಾಶೀಲರಾಗಿದ್ದಾರೆ. ಸಂಗೀತ ಸಾಗರದೆಡೆಗೆ ಹೆಜ್ಜೆ ಇಕ್ಕಿದ್ದಾರೆ. ನೂರಾರು ನಾಟಕಗಳಿಗೆ ಕೊಳಲು ನುಡಿಸಿದ್ದಾರೆ. ಜೊತೆಗೆ ನಾಟಕಕಾರರಾಗಿಯೂ ಕಂಡಬಂದಿದ್ದಾರೆ. ಹಲವು ನಾಟಕಗಳನ್ನು ರಚನೆ ಮಾಡಿದ್ದಾರೆ. ಅವರ `ಬಧ್ರಬಾಹು' ನಾಟಕ ಹತ್ತಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. `ಪರಿಣಯ ಪ್ರಸಂಗ'ವೂ ರಂಗಕ್ಕೇರಿದೆ. ಮೋಕ್ಷ ಸಂಗೀತ, ರಾಣಿಯೂ ನಕ್ಕಳು ಮುಂತಾದ ಮಕ್ಕಳ ನಾಟಗಳನ್ನು ರಚಿಸಿದ್ದಾರೆ.
ಮುರಳಿ ಚಲನಚಿತ್ರಕ್ಕೂ ಹೋಗಿಬಂದವರು. ಪ್ರಶಸ್ತಿ ವಿಜೇತ `ಭೂಮಿಗೀತ' ಚಿತ್ರದಲ್ಲಿ ವಿನ್ಯಾಸಗಾರರಾಗಿ ಕೆಲಸ ಮಾಡಿದ್ದಾರೆ. ಇಟಲಿ ಚಲನಚಿತ್ರವೊಂದಕ್ಕೆ ವಸ್ತ್ರವಿನ್ಯಾಸ ಮಾಡಿದ್ದಾರೆ. ಹಲವು ಸಾಕ್ಷ್ಯಚಿತ್ರಗಳಲ್ಲೂ ಅವರು ಕೆಲಸ ಮಾಡಿದ್ದಾರೆ.
ಇಷ್ಟೆಲ್ಲಾ ಪ್ರತಿಭೆಗಳನ್ನು ತುಂಬಿಕೊಂಡಿರುವ ಮುರಳಿ ಶೃಂಗೇರಿ ನಿಜಕ್ಕೂ ನಡೆದಾಡುವ ವಿಶ್ವಕೋಶ. ರಂಗಕಾರ್ಯದಲ್ಲಿ ಒಂದೂ ಘಳಿಗೆಯೂ ಬೇಸರಪಟ್ಟುಕೊಂಡವರಲ್ಲ. ಎಲ್ಲಾ ಸುಖಾದಿಗಳನ್ನು ತ್ಯಜಿಸಿ ಕಟ್ಟುಕಾರ್ಯದಲ್ಲಿ ತನ್ನನ್ನು ತಾನು ಕೊಟ್ಟುಕೊಂಡ ಒಬ್ಬ ತಪಸ್ವಿ. ಅವರು ರಂಗಭೂಮಿಗೆ ಮುತ್ತಿನಂಥ ಆಸ್ತಿ.ಙ

ಶ್ರೀಕಂಠ ಗುಂಡಪ್ಪ


ಸಾಂಸ್ಕೃತಿಕ ಸಂಪತ್ತು

ಅವರು ಮೈಸೂರು ಸಾಂಸ್ಕೃತಿಕ ಲೋಕದಲ್ಲಿ ಅಪೂರ್ವ ಪ್ರೀತಿಗೆ ಪಾತ್ರರಾದವರು. ತಮ್ಮ ನಗುಮೊಗದ ಮೊನಚು ಮಾತುಗಳಿಂದ ಸೆಳೆತ ಸೃಷ್ಟಿಸುವವರು. ಆಪ್ತ ಎನ್ನಿಸುವ ನಡವಳಿಕೆಯಿಂದ ಘನತೆ ಗಳಿಸಿಕೊಂಡವರು. ನಲವತ್ತು ವರ್ಷಗಳ ರಂಗಭೂಮಿ ಸೇವೆಯಿಂದ ನಾಡಿನೆಲ್ಲೆಡೆ ಪ್ರಸಿದ್ಧಿ ಪಡೆದವರು.
ಅವರು ಶ್ರೀಕಂಠ ಗುಂಡಪ್ಪ. ರಂಗಕರ್ಮಿ, ಲೇಖಕ, ವಿಮರ್ಷಕ, ಅನುವಾದಕ. ಅಪರೂಪದ ರಂಗಭೂಮಿ ಭಿತ್ತಿಪತ್ರ, ಟಿಕೆಟ್ಸ್‌, ವೃತ್ತಪತ್ರಿಕೆಗಳನ್ನೊಳಗೊಂಡ ೃಹತ್‌ ದಾಖಲೆಯನ್ನೇ ಸಂಗ್ರಹಿಸಿ ದಾಖಲೆ ನಿರ್ಮಿಸಿದವರು. ವಿಶ್ವ ರಂಗಭೂಮಿ ದಿನಾಚರಣೆಯ ಸಂದೇಶವನ್ನು ಪ್ರತೀವರ್ಷ ಕನ್ನಡಕ್ಕೆ ಅನುವಾದಿಸಿ ಸಂದೇಶದ ಸಾರವನ್ನು ಕನ್ನಡ ರಂಗಭೂಮಿಗೆ ಕೊಡುವವರು. ಆ ಅಂತಾರಾಷ್ಟ್ರೀಯ ಸಂದೇಶ ಕನ್ನಡವಲ್ಲದೆ ದಕ್ಷಿಣ ಭಾರತದ ಯಾವುದೇ ಭಾಷೆಗೂ ಅನುವಾದವಾಗುವುದಿಲ್ಲ. ಈ ಮಹತ್ಕಾರ್ಯದ ಖ್ಯಾತಿ ಶ್ರೀಕಂಠ ಗುಂಡಪ್ಪ ಅವರದು.
ಶ್ರೀಕಂಠ ಗುಂಡಪ್ಪ ಮೈಸೂರು ಸೀಮೆಯಲ್ಲಿ ಬಹಳ ಚಿರಪರಿಚಿತರು. ತಾವೇ ಕಟ್ಟಿರುವ `ಕಲಾಪ್ರಿಯ' ರಂಗ ಸಂಘಟನೆಯ ಮೂಲಕ ಕಳೆದ ನಾಲ್ಕು ದಶಕಗಳಿಂದ ಕಲಾಸೇವೆ ಮಾಡುತ್ತಾ ಬಂದಿದ್ದಾರೆ. ಅವರು ತಮ್ಮ ಸಂಸ್ಥೆಗೆ ಮಾತ್ರ ಸೀಮಿತವಾದವರಲ್ಲ. ಮೈಸೂರಿನ ಎಲ್ಲಾ ಸಾಂಸ್ಕೃತಿಕ ಸಂಘಟನೆಗಳಲ್ಲೂ ಅವಿರತವಾಗಿ ತೊಡಗಿಸಿಕೊಂಡಿದ್ದಾರೆ. ತಮ್ಮ ಕ್ರೀಯಾಶೀಲತೆಯ ಅಭಿವ್ಯಕ್ತಕ್ಕೆ ರಂಗಭೂಮಿಯನ್ನು ವೇದಿಕೆ ಮಾಡಿಕೊಂಡ ಗುಂಡಪ್ಪ ಎಲ್ಲೆಲ್ಲೂ ಸಲ್ಲುತ್ತಾರೆ. ಅಭಿನಯಿಸಬಲ್ಲರು, ನಿರ್ದೇಶಿಸಬಲ್ಲರು. ರಂಗಮಂಚವನ್ನು ಸಜ್ಜುಗೊಳಿಸಬಲ್ಲರು. ರಂಗಕೃತಿ ರಚಿಸಬಲ್ಲರು.....
ಮೈಸೂರಿನಲ್ಲಿ ಏನೇ ಸಾಂಸ್ಕೃತಿಕ ಚಟುವಟಿಕೆಗಳು ನಡೆದರೂ ಅದರೊಂದಿಗೆ ಶ್ರೀಕಂಠ ಗುಂಡಪ್ಪ ಅವರ ಒಡನಾಟ ಇದ್ದೇ ಇರುತ್ತದೆ. ಕಾರ್ಯಕ್ರಮಗಳ ಪೂರ್ವಭಾವಿಯಾಗಿ ಅದರ ಸ್ಪಷ್ಟ ಚಿತ್ರಣವನ್ನು ಪತ್ರಿಕೆಗಳ ಮೂಲಕ ಕಲಾಪ್ರೇಮಿಗಳಿಗೆ ಉಣ ಬಡಿಸುತ್ತಾರೆ. ಒಂದು ರೀತಿಯ ಕಲಾ ಮಾರ್ಗದರ್ಶನದಂತೆ. ಶ್ರೀಕಂಠ ಗುಂಡಪ್ಪ ಅವರ ಲೇಖನ ನೋಡಿಕೊಂಡೇ ಕಾರ್ಯಕ್ರಮಕ್ಕೆ ಹೋಗುವ ಕಲಾಪ್ರೇಮಿಗಳು ಮೈಸೂರಿನಲ್ಲಿದ್ದಾರೆ.
ಗುಂಡಪ್ಪ ಅವರು ವಿಮರ್ಷಕರಾದರೂ ಕೂಡ ಚಟುವಟಿಕೆಗಳನ್ನು ವಿಮರ್ಷೆಯ ದೃಷ್ಟಿಯಿಂದ ಮಾತ್ರ ನೋಡುವವರಲ್ಲ. ಅವರ ವಿಮರ್ಷೆಗಳಲ್ಲಿ ತೆಗಳುವಿಕೆ ಬಹಳ ವಿರಳ. ಪೂರ್ವಗ್ರಹಗಳಿಂದ ದೂರವಾಗಿ ಸಕಾರಾತ್ಮಕ ಅಂಶಗಳ ಮೇಲೆ ಬೆಳಕು ಚೆಲ್ಲುವಲ್ಲಿ ಅವರು ನಿಷ್ಣಾತರು. ಅದು ಸಕಾರಾತ್ಮಕ ಆದರ್ಶಗಳನ್ನು ಇಟ್ಟುಕೊಂಡವರಿಗೆ ಮಾತ್ರ ಸಾಧ್ಯ. ಅವರ ಬರಹದಲ್ಲಿ ಸ್ಪೂರ್ತಿಯ ಸೆಲೆಯನ್ನು ಕಾಣಬಹುದು.
ಮುಖ್ಯವಾಗಿ ಶ್ರೀಕಂಠ ಗುಂಡಪ್ಪ ಅವರ ಭಿತ್ತಿಪತ್ರ ಸಂಗ್ರಹ ಹವ್ಯಾಸ ಬಹಳ ರೋಚಕವಾದುದು. ಕನ್ನಡ ರಂಗಭೂಮಿ ನಡೆದು ಬಂದ ದಾರಿಯ ದಾಖಲೆಯೇ ಅವರ ಬಳಿಯಿದೆ. ರಂಗಭೂಮಿಯ ಇತಿಹಾಸವನ್ನು ಅವರ ಮನೆಯಲ್ಲಿ ಭದ್ರವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಹಲವು ದಶಕದ ರಂಗಪ್ರಯೋಗಗಳ ಭಿತ್ತಿಪತ್ರ, ಟಿಕೆಟ್ಸ್‌, ಛಾಯಾಚಿತ್ರ, ಪತ್ರಿಕಾ ರಂಗವಿಮರ್ಷೆಗಳು ಅವರ ಬಳಿಯಿವೆ.
ಗುಂಡಪ್ಪ ಅವರ ಅಪರೂಪದ ಸಂಗ್ರಹಗಳ ಪ್ರದರ್ಶನಗಳು ಜನಮನ್ನಣೆ ಗಳಿಸಿವೆ. ಸಂಗ್ರಹ ಹವ್ಯಾಸ ಅಂದರೆ ಸ್ಟ್ಯಾಂಪ್‌, ಕಾಯಿನ್‌ ಸಂಗ್ರಹ ಮಾತ್ರ ಅಂದುಕೊಂಡವರಿಗೆ ಇಂಥ ಹವ್ಯಾಸವೂ ಉಂಟೆ! ಎಂದು ಉಬ್ಬೇರಿಸುವಂತೆ ಮಾಡಿವೆ. ಬಹುಶಃ ಅದು ಕೇವಲ ಸಂಗ್ರಹ ಹವ್ಯಾಸವಲ್ಲ. ರಂಗಭೂಮಿ ಬಗ್ಗೆ ಒಲವುಳ್ಳ ವ್ಯಕ್ತಿಯೊಬ್ಬ ಮುಂದಿನ ಪೀಳಿಗೆಗೆ ಬಳುವಳಿಯಾಗಿ ಕೊಡುತ್ತಿರುವ ರಂಗಭೂಮಿ ಇತಿಹಾಸದ ಚಿತ್ರಣ.
ಶ್ರೀಕಂಠ ಗುಂಡಪ್ಪ ಅವರಿಗೆ ಅಣ್ಣಾವ್ರ ಮೇಲೆ ಅತೀವ ಪ್ರೀತಿ. ಅವರ ಅಪರೂಪದ ಛಾಯಾಚಿತ್ರಗಳನ್ನು ಸಂಗ್ರಹಿಸಿದ್ದಾರೆ. ಡಾ. ರಾಜ್‌ ಅವರ 77ನೇ ಹುಟ್ಟುಹಬ್ಬದಂದು ಅವರ 77 ಅಪರೂಪದ ಛಾಯಾಚಿತ್ರಗಳನ್ನು ಪ್ರದರ್ಶಿಸಿದ್ದಾರೆ. ಡಾ. ರಾಜ್‌ ನಟನೆಯ ಚಲನಚಿತ್ರ ಸೇರಿದಂತೆ ನಾಟಕಗಳ ಫೋಟೋಗಳು ಅವರ ಬಳಿ ಇವೆ. ಕನ್ನಡ ಚಿತ್ರರಂಗದ ಅಮೃತ ಮಹೋತ್ಸವದ ಶುಭ ಘಳಿಗೆಯಲ್ಲಿ ಗುಂಡಪ್ಪ ಅವರ ದಾಖಲೆಯನ್ನು ಬಳಸಿಕೊಂಡರೆ ಅವರಿಗೊಂದು ಗೌರವ ಸಲ್ಲಿಸಿದಂತಾಗುತ್ತದೆ.
ಶ್ರೀಕಂಠ ಗುಂಡಪ್ಪ ಬರವಣಿಗೆಯಲ್ಲೂ ಕೃಷಿ ನಡೆಸಿದ್ದಾರೆ. ಮೈಸೂರು ಆಕಾಶವಾಣಿಯಲ್ಲಿ ಬಿ ಪ್ಲಸ್‌ ದರ್ಜೆ ಕಲಾವಿದರಾಗಿರುವ ಅವರು ಹಲವು ಬಾನುಲಿ ನಾಟಕಗಳನ್ನು ರಚನೆ ಮಾಡಿದ್ದಾರೆ. ರಂಗಾಯಣದ ಬಹುರೂಪಿಗಾಗಿ `ಈ ಬೇರು ಈ ಬೆವರು' ಬೀದಿನಾಟಕ ರಚಿಸಿದ್ದಾರೆ. `ಈಜು ಬಾರದ ಮೀನು' ಕವನ ಸಂಕಲನ ಹೊರಬಂದಿದೆ. ಮೊನ್ನೆ ಆಸ್ಕರ್‌ ಗಳಿಸಿದ `ಸ್ಲಮ್‌ಡಾಗ್‌ ಮಿಲಿಯನೇರ್‌' ಚಿತ್ರದ ಜೈ ಹೋ ಗೀತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಟಿವಿ ದಾರಾವಾಹಿಗಳಲ್ಲೂ ಅಭಿನಯಿಸಿದ್ದಾರೆ.
ಶ್ರೀಕಂಠ ಗುಂಡಪ್ಪ ಯೂಕೋ ಬ್ಯಾಂಕ್‌ನಲ್ಲಿ ನೌಕರಿ ಮಾಡುತ್ತಿದ್ದವರು. ಬ್ಯಾಂಕ್‌ನಲ್ಲೂ ಕೂಡ ಸಾಂಸ್ಕೃತಿಕ ಬೀಜ ಬಿತ್ತಿದ್ದರು. ಬ್ಯಾಂಕ್‌ ನೌಕರರನ್ನು ಕಟ್ಟಿಕೊಂಡು ನಾಟಕವಾಡಿಸುತ್ತಿದ್ದರು. ಬ್ಯಾಂಕಿಗೆ ವಿದಾಯ ಹೇಳಿದ ನಂತರ 1968ರಲ್ಲಿ `ಅಮರ ಕಲಾ ಸಂಘ'ದ ಮೂಲಕ ತಮ್ಮ ನೆಚ್ಚಿನ ರಂಗಭೂಮಿ ಕಾರ್ಯಕ್ಷೇತ್ರಕ್ಕೆ ಪ್ರವೇಶ ಮಾಡಿದರು. ಹಲವು ಅಭಿನಯಿಸಿದರು. ರಂಗದ ಹಿಂದೆ ಕೆಲಸ ಮಾಡಿದರು. ಅತ್ಯುತ್ತಮ ಸಂಘಟಕರಾದರು. ಸದ್ಯಕ್ಕೆ ಅವರ ರಂಗಭೂಮಿ ಸೇವೆಗೆ ನಲವತ್ತು ತುಂಬಿದೆ.
ಅವರ ಕಲಾ ಕೈಂಕರ್ಯಕ್ಕೆ ಸಂದ ಗೌರವಗಳಿಗೇನು ಕಮ್ಮಿ ಇಲ್ಲ. ತಮ್ಮ `ಕಲಾಪ್ರಿಯಾ' ಸಂಸ್ಥೆಗೆ ರೋಟರಿ ಪ್ರಶಸ್ತಿ ಸಂದಿದೆ. ಹಲವು ಸಂಘಸಂಸ್ಥೆಗಳು ಅವರನ್ನು ಗೌರವಿಸಿವೆ. ಶ್ರಿಕಂಠ ಗುಂಡಪ್ಪ ಅವರನ್ನು ಮೈಸೂರು ಸಾಂಸ್ಕೃತಿಕ ಲೋಕದ ಮಿನುಗುತಾರೆ ಎಂದರೆ ತಪ್ಪಲ್ಲ.

ರಾಜು ಅನಂತಸ್ವಾಮಿ


ರಾಜು ಮತ್ತೊಮ್ಮೆ ಹುಟ್ಟಿ ಬರಲಿಲ್ಲ!


ಅದು ಮೈಸೂರಿನ ಅಪೊಲೋ ಆಸ್ಪತ್ರೆ. ಸಾವು ಬದುಕಿನ ನಡುವೆ ಹೋರಾಡಿದ ಜೀವವನ್ನು ಉಳಿಸಲಾಗದ ವೈದ್ಯರು ಕೈ ಚೆಲ್ಲಿದ್ದರು. ಮುಖದ ಮೇಲಿದ್ದ ಮಾಸ್ಕ್‌ಅನ್ನು ಹೊರ ತೆಗೆಯಲಾಗಿತ್ತು. ತೀವ್ರ ನಿಗಾ ಘಟಕದ ಯಂತ್ರಗಳ ಶಬ್ದ ನಿಂತು ಹೋಗಿತ್ತು. ಹೊರಗೆ ಕಾದು ಕುಳಿತವರ ಹೃದಯಗಳು ಉಮ್ಮಳಿಸುತ್ತಿದ್ದವು. `ನಮ್ಮ ಪ್ರಯತ್ನ ನಾವು ಮಾಡಿದ್ದೇವೆ. ಇನ್ನು ದೇವರಿಚ್ಛೆ. ಕೈಕಾಲು ತಣ್ಣಗಾಗಿವೆ. ಒಂದೆರೆಡು ಗಂಟೆ ಬದುಕಬಹುದಷ್ಟೆ.' ವೈದ್ಯರು ತಮ್ಮ ಕಡೆಯ ಉತ್ತರ ಕೊಟ್ಟಿದ್ದರು.
ಎರೆಡು ಗಂಟೆ ಕಳೆಯಿತು. ಅದ್ಯಾವ ಶಕ್ತಿ ಅವರ ಹತ್ತಿರ ಸಾವು ಸುಳಿಯದಂತೆ ತಪ್ಪಿಸಿತೋ ಗೊತ್ತಿಲ್ಲ. ಅವರ ಪ್ರಾಣಪಕ್ಷಿ ಹಾರಿ ಹೋಗಲಿಲ್ಲ! ವೈದ್ಯರಿಗೆ ಆಶ್ಚರ್ಯ. ಗೆಳೆಯರೆಲ್ಲಾ ನಿಟ್ಟುಸಿರು ಬಿಟ್ಟರು. ಅವರ ಸ್ವರಧಾರಾ ಜ್ಞಾನದಿಂದ ಅವರು ಮರುಹುಟ್ಟು ಪಡೆದಿದ್ದಾನೆ ಅಂದುಕೊಂಡರು.
ಹೌದು. ಅವತ್ತು ರಾಜು ಅನಂತಸ್ವಾಮಿ ಮರುಹುಟ್ಟು ಪಡೆದಿದ್ದರು. ಮೃತ್ಯವನ್ನು ಸೋಲಿಸಿದ್ದರು. ಸಾವಿನ ದವಡೆಯಿಂದ ತಪ್ಪಿಸಿಕೊಂಡು ಬಂದು ಮನತುಂಬಿ ಹಾಡಿದ್ದರು.
ಇದೊಂದು ಘಟನೆಯಷ್ಟೆ. ಇಂತಹ ಹಲವು ಪ್ರಸಂಗಗಳು ನಡೆದು ಹೋಗಿವೆ. ದೇವರು ಇನ್ನೆಷ್ಟು ಅವಕಾಶ ಕೊಡಲು ಸಾಧ್ಯ......? ಅವರು ಮತ್ತೊಮ್ಮೆ ಹುಟ್ಟಿ ಬರಲಿಲ್ಲ!
ಮೈಸೂರು ಅನಂತಸ್ವಾಮಿ ಅವರು ಇಹಲೋಕ ತ್ಯಜಿಸಿದ ಮೇಲೆ ರಾಜು ಒಬ್ಬಂಟಿಯಾಗಿದ್ದರು. ನನ್ನಪ್ಪ ಇಲ್ಲದೆ ನಾನು ಹಾಡಲಾರೆ! ಎಂದು ತಮ್ಮ ಗಾಯನವನ್ನೇ ತ್ಯಜಿಸಿದ್ದರು. ಒಂದು ವರ್ಷ ಹಾಡಲೇ ಇಲ್ಲ. ಕವಿ ಎಚ್‌ಎಸ್‌ವಿ ಅವರ ಗೀತೆಯೊಂದು ರಾಜು ಅವರನ್ನು ಮತ್ತೆ ಹಾಡುವಂತೆ ಮಾಡಿತು...
ಬನ್ನಿ ಅರಸಿರಿ ತಂದೆಯೇ
ಆಸೀನರಾಗಿರಿ ಮುಂದೆಯೆ
ಜೀವ ಕೊಟ್ಟಿರಿ ದೇಹ ಕೊಟ್ಟಿರಿ
ನಿಮಗಾಗಿ ನಾ ಹಾಡುವೆ

ಬನ್ನಿ ಅರಸಿರಿ ತಂದೆಯೇ...

ರಾಜು ಈ ಗೀತೆಯನ್ನು ಮನತುಂಬಿ ಹಾಡುತ್ತಿದ್ದರು. ಪ್ರತಿಯೊಂದು ಕಾರ್ಯಕ್ರಮದಲ್ಲೂ ಈ ಹಾಡು ಕಡ್ಡಾಯವಾಗಿತ್ತು. ಅವರು ಅಪ್ಪನನ್ನು ಪ್ರೀತಿಸಿದಷ್ಟು ಜಗತ್ತಿನಲ್ಲಿ ಮತ್ತಾರನ್ನೂ ಪ್ರೀತಿಸಲಿಲ್ಲ. ಪ್ರತಿ ವಸ್ತುವಿನಲ್ಲಿ ಅಪ್ಪನನ್ನು ಕಾಣುತ್ತಿದ್ದರು. ಅಪ್ಪನನ್ನು ತುಂಬಿಕೊಳ್ಳುತ್ತಿದ್ದರು. ಈಗ ಅಪ್ಪನೊಂದಿಗೆ ಜತೆಯಾಗಿದ್ದಾರೆ!
ಮೈಸೂರಿನ ನಟನಾ ಸಂಸ್ಥೆ ನಿರ್ಮಾಣದ `ನಮ್ಮಪ್ಪ' ನಾಟಕ ನೋಡಿದ ರಾಜು ಅನಂತಸ್ವಾಮಿ ಪಾತ್ರಧಾರಿಯನ್ನು ಅಪ್ಪಿಕೊಂಡು ಬಿಕ್ಕಿಬಿಕ್ಕಿ ಅತ್ತಿದ್ದರು. ಅಪ್ಪನನ್ನು ನೆನಪಿಸುವ ಯಾವುದೇ ಘಟನೆ ನಡೆದರೂ ಅವರ ಕಣ್ಣಾಲಿಗಳು ತುಂಬಿ ಬರುತ್ತಿದ್ದವು.
ಅವರು ಮದಿರೆಗೆ ದಾಸರಾಗಿದ್ದರು ಎಂಬುದು ಎಲ್ಲರಿಗೂ ಗೊತ್ತಿತ್ತು. ಅವತ್ತು ಅಪೊಲೋ ಆಸ್ಪತ್ರೆಯಿಂದ ಹೊರಬರುತ್ತಿದ್ದಂತೆಯೇ... ನಾನಿನ್ನು ಕುಡಿಯುವುದಿಲ್ಲ! ಎಂಬ ಭರವಸೆ ನೀಡಿದ್ದರು. ಎಲ್ಲರೂ ಅವರ ಮೇಲೊಂದು ಭರವಸೆ ಇಟ್ಟುಕೊಂಡಿದ್ದರು. ವಿದ್ಯಾರ್ಥಿ ವೃಂದ ಸಂತೋಷ ಪಟ್ಟಿತ್ತು. ಆದರೆ ಅದು ಅಲ್ಪ ಕಾಲದಲ್ಲಿಯೇ ನಿರಾಶೆಯಾಯಿತು.
ರಾಜು ಅನಂತಸ್ವಾಮಿ ಕಮ್ಮಿಏನೂ ಹಾಡಿಲ್ಲ. ಲಕ್ಷಾಂತರ ಕಾರ್ಯಕ್ರಮ ನೀಡಿದ್ದಾರೆ. ಹಲವು ದೇಶ ಸುತ್ತಿ ತಮ್ಮ ಹಾಡು ಕೇಳಿಸಿದ್ದಾರೆ. ನೂರಾರು ಸಿಡಿ, ಕೆಸೆಟ್‌ ಹೊರ ತಂದಿದ್ದಾರೆ. ಅವರ ವೈಶಿಷ್ಟ್ಯ ಕಂಠಸಿರಿಗೆ ಸರಿಸಾಟಿಯಾಗಬಲ್ಲ ಇನ್ನೊಬ್ಬ ಗಾಯಕ ಕರುನಾಡಿನಲ್ಲಿ ಕಾಣಸಿಗಲಾರ. ರತ್ನನ ಪದಗಳಿಗೆ ಜೀವ ತುಂಬಬಲ್ಲ ರಾಜು ಅವರಂತಹ ಇನ್ನೊಬ್ಬ ಗಾಯಕನಿಲ್ಲ. ಆದರೂ ಅವರ ಪ್ರತಿಭೆಗೆ ಇವೆಲ್ಲವೂ ಕಡಿಮೆಯಾಗಿದ್ದವು.
ನಟನಾ ಸಂಸ್ಥೆಯ ಹಲವು ನಾಟಕಗಳಿಗೆ ರಾಜು ಸಂಗೀತ ನೀಡಿದ್ದರು. ಅಲೀಬಾಬ ಮತ್ತು ನಲವತ್ತು ಮಂದಿ ಕಳ್ಳರು, ತುಂಟ ರಾಬಿನ್‌, ನೀಲಿ ಕುದುರೆ ಮುಂತಾದವು. ಅವರು ಬಹುವಾದ್ಯ ಪಾರಂಗತರಾಗಿದ್ದರು. ಮೈಸೂರು ವಿವಿ ಲಲಿತಕಲಾ ಕಾಲೇಜಿನಲ್ಲಿ ಎಂಎ ಪದವಿ ಪಡೆದಿದ್ದರು. ಅವರೊಳಗೆ ನಟನೂ ಇದ್ದ. ಹಲವು ಚಲನಚಿತ್ರಗಳಲ್ಲಿ ಅಭಿನಯಿಸಿದ್ದರು.
ರಾಜು ಎಲ್ಲಿರುತ್ತಿದ್ದರೋ ಅಲ್ಲಿ ನಗು ಇರುತಿತ್ತು. ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದರು. ಈಗ ಎಲ್ಲವೂ ನೆನಪು ಮಾತ್ರ.

Dr. ಪಾರ್ಶ್ವನಾಥ್


`ವೃತ್ತಿಯಿಂದ ತೃಪ್ತಿ, ಪ್ರವೃತ್ತಿಯಿಂದ ಸಂತೃಪ್ತಿ'


`ಒಬ್ಬ ನಟನಿಗೆ ಮೊದಲು ಪ್ರಕ್ಷಕ, ನಂತರ ವಿಮರ್ಶಕ. ಅದೇ ರೀತಿ ಒಬ್ಬ ಬರಹಗಾರನಿಗೂ ಮೊದಲು ಓದುಗ, ಆನಂತರ ವಿಮರ್ಶಕ. ಒಂದು ವೇಳೆ ವಿಮರ್ಶಕನನ್ನು ಗಮನದಲ್ಲಿಟ್ಟುಕೊಂಡು ಒಬ್ಬ ನಟ, ಬರಹಗಾರ ತನ್ನ ಕೃಷಿ ಮಾಡಿದರೆ ಅದು ಫಲ ನೀಡಲಾರದು. ನನ್ನ ಅಭಿನಯವನ್ನು ಪ್ರೇಕ್ಷಕ ಮಹಾಶಯ ಮೆಚ್ಚಿಕೊಂಡಾಗಲೇ ನನಗೆ ಸಂತೃಪ್ತಿ.'
ಹೀಗೆಂದವರು, ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಕಳೆದ ಮೂವತ್ತೈದು ವರ್ಷಗಳಿಂದ ತೊಡಗಿಸಿಕೊಂಡಿರುವ, ವೃತ್ತಿಯಲ್ಲಿ ವೈದ್ಯರಾದ, ವೈದ್ಯಕೀಯ ಪ್ರಾಧ್ಯಾಪಕ ಡಾ.ಎಚ್‌.ಎ.ಪಾರ್ಶ್ವನಾಥ್‌.
ಪಾರ್ಶ್ವನಾಥ್‌ ಹಾಸನದವರು. ತಂದೆ ವ್ಯಾಪಾರಿ. ವ್ಯಾಪಾರ ಅಂದ ಮೇಲೆ ಇವತ್ತು ಇಲ್ಲಿ ನಾಳೆ ಅಲ್ಲಿ. ಬಡತನ ಇದ್ದದ್ದೇ. `ನಿನಗೆ ವಿದ್ಯೆಯೇ ಆಧಾರವಾಗಬೇಕು' ಎಂದು ಅವರ ತಂದೆ ಹೇಳಿದ ಮಾತುಗಳು ಪಾರ್ಶ್ವನಾಥರಿಗೆ ವೇದವಾಕ್ಯವಾಗಿದ್ದವು. ಹೈಸ್ಕೂಲ್‌ನಲ್ಲಿ ವಯಸ್ಸಿಗೆ ತಕ್ಕ ಪ್ರೇಮಮಯ ಕವಿತೆಗಳನ್ನು ರೆಯುವಲ್ಲಿ ಎತ್ತಿದ ಕೈ. ಆಗಲೇ ಪತ್ರಿಕೆಗಳಲ್ಲಿ ಹಲವು ಲೇಖನಗಳು ಪ್ರಕಟಗೊಂಡಿದ್ದವು. ಪಿಯುಸಿಯ ಸಿಬಿಜೆಡ್‌ ವಿಷಯದಲ್ಲಿ ಶೇ.80 ರಷ್ಟು ಅಂಕ ಗಳಿಸಿದಾಗ ಮೈಸೂರು ಮೆಡಿಕಲ್‌ ಕಾಲೇಜಿನ ಬಾಗಿಲು ಇವರಿಗಾಗಿ ತೆರೆದುಕೊಂಡಿತು.
ವೈದ್ಯರಾದರು. ಪೆಥಾಲಜಿ (ರೋಗಲಕ್ಷಣ ಶಾಸ್ತ್ರ)ಯಲ್ಲಿ ಉನ್ನತ ಶಿಕ್ಷಣ ಪಡೆದರು. ಬಳ್ಳಾರಿ, ಹುಬ್ಬಳ್ಳಿ, ಬೆಂಗಳೂರು ವೈದ್ಯಕೀಯ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ, ತಾವು ಪದವಿಗಳಿಸಿದ ಮೈಸೂರು ಮೆಡಿಕಲ್‌ ಕಾಲೇಜಿನಲ್ಲಿ ವಿಭಾಗ ಮುಖ್ಯಸ್ಥರಾಗಿ ಮತ್ತು ಪ್ರಾಂಶುಪಾಲರಾಗಿ, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಇವರು ಪ್ರಸ್ತುತ ಧಾರವಾಡದ ಎಸ್‌ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವುಗಳ ನಡುವೆ ಮೈಸೂರಿನ ಲಲಿತಕಲಾ ಕಾಲೇಜಿನ ನಾಟಕ ವಿಭಾಗದಲ್ಲಿ ಡಿಪ್ಲೊಮಾ ಮುಗಿಸಿದ್ದು, ಇವರ ಕಲಾಭಿಮಾನದ ಹಂಬಲಕ್ಕೆ ಸಾಕ್ಷಿ.
ಡಾ.ಪಾರ್ಶ್ವನಾಥ್‌ ವೈದ್ಯಕೀಯ ಸಲಹೆಗಾರರಾಗಿ, ರಂಗಕರ್ಮಿಯಾಗಿ, ಸಾಹಿತಿಯಾಗಿ, ವಿಮರ್ಶಕರಾಗಿ, ಸಂಘಟಕರಾಗಿ ನೀಡಿರುವ ಸೇವೆಗೆ ಸರ್ಕಾರ, ಸಂಘ ಸಂಸ್ಥೆಗಳು ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಡಾ.ಪಾರ್ಶ್ವನಾಥ್‌ `ಉದಯವಾಣಿ'ಯೊಂದಿಗೆ ಮಾತನಾಡಿದ ಒಂದು ಘಳಿಗೆ...

* ತಾವು ಹಾಸನದವರು. ತಮ್ಮ ರಂಗಭೂಮಿ ಆಸಕ್ತಿಗೆ ಅಲ್ಲಿಯ ವಾತಾವರಣ ಹೇಗಿತ್ತು?

ಹಾಸನದ ಜಾತ್ರೆ. ಅಲ್ಲಿ ನಡೆಯುತ್ತಿದ್ದ ಕಂಪನಿ ನಾಟಕಗಳು. ನಾನು ರಂಗಭೂಮಿ ಪ್ರವೇಶಕ್ಕೆ ಮುಚೆ ಬರವಣಿಗೆಯಲ್ಲಿ ತೊಡಗಿಕೊಂಡಿದ್ದೆ. ಸಾಹಿತ್ಯದ ನೆಲೆಗಟ್ಟಿನಿಂದ ರಂಗಭೂಮಿಯ ಕಡೆ ಒಲವು ಮೂಡಿತು. 1972ರಲ್ಲಿ ಎನ್‌.ರಾವ್‌ರ `ವಿಷಜ್ವಾಲೆ' ನಾಟಕದಲ್ಲಿ ಅಭಿನಯಿಸಿ ರಂಗಪ್ರವೇಶ ಮಾಡಿದೆ. ಅದನ್ನು ಬೀಚಿಯವರು ನೋಡಿ ತುಂಬಾ ಸಂತೋಷ ಪಟ್ಟರು.

* ನಿಮ್ಮ ಆಸಕ್ತಿಗೆ ಮನೆ ಮಂದಿಯ ಪ್ರೋತ್ಸಾಹ ಹೇಗಿತ್ತು?

ತಂದೆ ತಾಯಂದಿರ ಪ್ರೋತ್ಸಾಹ ಸದಾ ಇತ್ತು. ತಂದೆ ವ್ಯಾಪಾರಸ್ಥರಾಗಿದ್ದರಿಂದ ಅವರ ಗೆಳೆಯರೊಬ್ಬರ ಕಡೆಯಿಂದ `ವ್ಯಾಪಾರ' ಎನ್ನುವ ಪತ್ರಿಕೆಯಲ್ಲಿ ನನ್ನ ಲೇಖನಗಳು ಪ್ರಕಟಗೊಂಡವು. ಆ ಮೂಲಕ ನನ್ನ ತಂದೆ ಸಾರ್ವತ್ರಿಕ ವೇದಿಕೆಗೆ ಮಾರ್ಗ ಕಲ್ಪಿಸಿದರು.

* ವೃತ್ತಿ ಮತ್ತು ಪ್ರವೃತ್ತಿಗಳನ್ನು ತಾವು ಹೇಗೆ ಸರಿದೂಗಿಸಿಕೊಂಡು ಹೋದಿರಿ?

ಇದೊಂಥರಾ ಕೋ ಇನ್ಸಿಡೆನ್ಸ್‌. ಸರ್ಕಾರಿ ನೌಕರನಾಗಿ 30 ವರ್ಷಗಳನ್ನು ಪೂರೈಸಿದ್ದೀನಿ. ರಂಗಭೂಮಿಯಲ್ಲೂ ಅಷ್ಟೇ ಆಗಿದೆ. ಹಾಗೆ ನೋಡಿದರೆ ಇದು ನನ್ನ ಸೆಕೆಂಡ್‌ ಇನ್ನಿಂಗ್ಸ್‌.

* ನಿಮ್ಮ ಜೊತೆ ವಿವಿಧ ಮುಖಗಳ ಒಡನಾಟವಿದೆ, ಸಾಹಿತಿಗಳು, ಕಲಾವಿದರು, ರೋಗಿಗಳು, ವಿದ್ಯಾರ್ಥಿಗಳು ಇತ್ಯಾದಿ. ಇವರ ಜೊತೆ ಹೇಗೆ ವ್ಯವಹರಿಸುತ್ತೀರಿ?

ಎಲ್ಲರೊಳಗೊಬ್ಬನಾಗಿದ್ದೀನಿ. ಬೀದಿ ನಾಟಕಗಳನ್ನು ಮಾಡುತ್ತಾ ಹಳ್ಳಿಗಳನ್ನು ಸುತ್ತಿದ್ದೀನಿ. ವೈದ್ಯ ವಿದ್ಯಾರ್ಥಿಗಳಿಗೆ ನಾಟಕವಾಡಿಸಿದ್ದೀನಿ. ನನ್ನ ಪ್ರೀತಿಯ ಪೆಥಾಲಜಿಯ ಬಗ್ಗೆ ದೇಶ ವಿದೇಶಗಳಲ್ಲಿ ಉಪನ್ಯಾಸ ಮಾಡಿದ್ದೀನಿ. ಟಿವಿ ಆಕಾಶವಾಣಿಗಳಲ್ಲಿ ನಾಟಕ ಮಾಡಿದ್ದೀನಿ. ವೈದ್ಯಕೀಯ ಸಲಹೆ ನೀಡಿದ್ದೀನಿ. ಅಸಂಖ್ಯಾತ ರೋಗಿಗಳನ್ನು ಪರೀಕ್ಷಿಸಿದ್ದೀನಿ. ಇವರೆಲ್ಲದರಲ್ಲಿ ನಾನೂ ಒಬ್ಬ. ಅದಕ್ಕಿಂತ ಹೆಚ್ಚಿನವನಲ್ಲ.

* ಸರ್ಕಾರಿ ಕೆಲಸ ಅಂದಮೇಲೆ ವರ್ಗಾವಣೆ ಸಮಸ್ಯೆ ಇದ್ದೇ ಇರುತ್ತೆ. ಬೇರೆ ಸ್ಥಳಗಳಿಗೆ ಹೋದಾಗ ತಮ್ಮ ರಂಗಭೂಮಿ ಚಟುವಟಿಕೆ ಹೇಗಿರುತ್ತಿತ್ತು?

ಎಲ್ಲಿಗೆ ಹೋದರೂ ನಮ್ಮ ಅಭಿರುಚಿಗೆ ತಕ್ಕ ಪ್ರೋತ್ಸಾಹ ಇದ್ದೇ ಇದೆ. ರಂಗಭೂಮಿಯ ಸಂಪರ್ಕಜಾಲ ವಿಸ್ತಾರವಾದುದು. ಎಲ್ಲಾ ಕಡೆ ನಮ್ಮವರಿದ್ದಾರೆ!

* ತಾವು ಸಾಹಿತಿಯಾಗಿಯೂ ಗುರುತಿಸಿಕೊಂಡವರು. ಅದರ ಬಗ್ಗೆ ಹೇಳಿ?

ನನ್ನ ಒಟ್ಟು 15 ಕೃತಿಗಳು ಹೊರಬಂದಿವೆ. 1992ರಲ್ಲಿ `ಸನ್ನಿಧಿ' ಕೃತಿ ಹೊರಬಂತು. ವಾಸ್ತುಶಿಲ್ಪದ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಸಂಶೋಧಿಸಿದ ಅಪರೂಪದ ಮಾಹಿತಿ ಇದರಲ್ಲಿದೆ. ರಂಗಸಂಗ, ಸಹೃದಯ, ನಮ್ಮ ನಿಮ್ಮವರು, ಜಿನಮನ ಮುಂತಾದ ಕೃತಿಗಳು ಪ್ರಕಟವಾಗಿವೆ.

* ತೃಪ್ತಿ ಕೊಟ್ಟ ರಂಗ ಯಾವುದು?

ವೃತ್ತಿ ತೃಪ್ತಿ ಕೊಟ್ಟಿದೆ. ಪ್ರವೃತ್ತಿ ಸಂತಪ್ತಿ ಕೊಟ್ಟಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಿಷ್ಠೆ ಎಲ್ಲಿದೆಯೋ ಅಲ್ಲಿ ತೃಪ್ತಿ ಸಂತಪ್ತಿಗಲೆರಡೂ ಇವೆ. ನಾನು ಪೆಥಾಲಜಿ ತೆಗೆದುಕೊಂಡಾಗ ಅಲ್ಲಿ ಹಣ ಬರುವುದಿಲ್ಲ ಎಂದರು. ಆದರೆ ನಾನು ಧೃತಿಗೆಡಲಿಲ್ಲ, ಇಷ್ಟ ಪಟ್ಟು ಆಯ್ಕೆಮಾಡಿಕೊಂಡ ವಿಷಯಕ್ಕೆ ನಾನು ನಿಷ್ಠನಾಗಿದ್ದೆ. ಬಹುಶಃ ನಾನು ಹಣದ ಹಿಂದೆ ಬಿದ್ದಿದ್ದರೆ ಈ ಸಂತೃಪ್ತಿ ಸಿಗುತ್ತಿತ್ತು ಎನ್ನುವಲ್ಲಿ ನನಗೆ ಅನುಮಾನವಿದೆ. ಹಣ ಮುಖ್ಯವಲ್ಲ, ಚಿನ್ನದ ತಟ್ಟೆಯಲ್ಲಿ ಅನ್ನವಲ್ಲದೆ ಚಿನ್ನ ತಿನ್ನಲಾದೀತೆ?

* ನೀವು ಸವೆಸಿದ ಹಾದಿಯಲ್ಲಿ ಕುತೂಹಲ ಎನ್ನಿಸುವ ವ್ಯಕ್ತಿಗಳಿದ್ದಾರೆಯೇ?

ರಂಗಭೂಮಿಯಲ್ಲಿ ಟಿ.ಪಿ. ಕೈಲಾಸಂ, ರಂಗಭೂಮಿ, ಸಿನಿಮಾಗಳೆರಡಲ್ಲೂ ದಂತಕತೆಯಾಗಿರುವ ಡಾ.ರಾಜ್‌.

Friday, June 19, 2009

ವೈಜಯಂತಿ ಕಾಶಿ




ಹೆಜ್ಜೆ ಇಡಬೇಕು, ಹೆಜ್ಜೆಗೆ ಗೆಜ್ಜೆಯೂ ಬೇಕು


` ನಾವು ಪ್ರಾಮಾಣಿಕವಾಗಿ ದೇವರ ಬಳಿಗೆ ಒಂದು ಹೆಜ್ಜೆ ಇಟ್ಟರೆ, ದೇವರು ನಮ್ಮ ಬಳಿಗೆ ಹತ್ತು ಹೆಜ್ಜೆ ಇಡುತ್ತಾನೆ. ಯಾವುದೇ ಕ್ಷೇತ್ರವಿರಲಿ ಪ್ರಾಮಾಣಿಕ ಪ್ರಯತ್ನಕ್ಕೆ ಪ್ರತಿಫಲವಿದೆ. ಈ ಮಾತುಗಳನ್ನಾಡುವಾಗ ಅವರು ಭಾವುಕರಾಗಿದ್ದರು.
' ನನಗೆ ಬ್ರಿಟಿಷರ ಮೇಲೆ ಕೋಪವಿದೆ, ನಮ್ಮ ದೇವಾಲಯಗಳ ಮೇಲೆ ಅವರು ತೋರಿರುವ ಕ್ರೌರ್ಯ ಕಂಡಾಗ ದೇಹ ಬಿಸಿಯಾಗುತ್ತದೆ. ನಾನು ಆಗ ರಂಗದ ಮೇಲೆ ಝಾನ್ಸಿರಾಣಿ ಲಕ್ಷ್ಮಿ ಬಾಯಿ ಆಗುತ್ತೇನೆ' ಈ ಮಾತುಗಳನ್ನಾಡುವಾಗ ಅವರ ಮುಖ ಭಾವದಲ್ಲಿ ವೀರತ್ವವಿತ್ತು.
ಅವರು ವೈಜಯಂತಿ ಕಾಶಿ. ಕೂಚಿಪುಡಿ ನೃತ್ಯ ಪ್ರಕಾರಕ್ಕೆ ದೈವಿಕ ರೂಪ ಕೊಟ್ಟ ಅಪರೂಪದ ನೃತ್ಯಗಾರ್ತಿ. ನೃತ್ಯದಲ್ಲೇ ಚಿಕಿತ್ಸಾ ಗುಣ ಕಂಡುಕೊಂಡಿರುವ ಚಿಕಿತ್ಸಕ (ಡ್ಯಾನ್ಸ್‌ ಥೆರಪಿಸ್ಟ್‌). ಗುರುಕುಲ ಪರಂಪರೆಯ ಮೇಲೆ ಅತೀವ ಆಸಕ್ತಿ ಹೊಂದಿರುವ. ಅದೇ ತಳಹದಿಯ ಮೇಲೆ ತಮ್ಮ ಕನಸಿನ `ಶಾಂಭವಿ ನೃತ್ಯ ಶಾಲೆ; ಸ್ಥಾಪಿಸಿ, ದೇಶ ವಿದೇಶಗಳಲ್ಲಿ ಶಿಷ್ಯಕೋಟಿ ಹೊಂದಿರುವ ನೃತ್ಯಗುರು. ಅಪರೂಪದ ನವಿಲು ನೃತ್ಯ (ಮಯೂರ ಕೌತಮ್‌) ಮಅಡುವ ಏಕೈಕ ನರ್ತಕಿ, ಸಂಶೋಧಕಿ, ನಾಟ್ಯಯೋಗ ತಜ್ಞೆ, ಸಮರ ಕಲಾ ಪ್ರವೀಣೆ. ಹೀಗಿವೆ ವೈಜಯಂತಿ ಅವರ ಹತ್ತುಮುಖಗಳು.
ಕನ್ನಡ ರಂಗಭೂಮಿಯ ಇತಿಹಾಸ ಪುರಷ. ಗುಬ್ಬಿ ವೀರಣ್ಣ ಅವರ ಮೊಮ್ಮಗಳಾದ ವೈಜಯಂತಿ, ತಮ್ಮ ಆರನೆಯ ವಯಸ್ಸಿನಲ್ಲಿ ತುಮಕೂರು ರಾಮಣ್ಣ ಅವರ ಭರತ ನಾಟ್ಯ ಶಿಷ್ಯೆಯಾಗಿ ಕಾಲಿಗೆ ಗೆಜ್ಜೆ ಕಟ್ಟಿದರು. ನಂತರ ಕೂಚಿಪುರಿ ನೃತ್ಯದ ಕಡೆ ವಾಲಿದರು. ಸಿ.ಆರ್‌. ಆಚಾರ್ಯ ಅವರ ಶಿಷ್ಯೆಯಾಗಿ ಕೂಚಿಪುಡಿ ನೃತ್ಯಕ್ಕೆ ಮುನ್ನುಡಿ ಬರೆದುಕೊಂಡರು. ಅಲ್ಲಿಂದ ಅವರು ಹಿಂತಿರುಗಿ ನೋಡಲಿಲ. ಭಾರತದ ಕಲಾ ಪ್ರಕಾರವೊಂದರ ಪ್ರತಿನಿಧಿಯಾಗಿ, ನೃತ್ಯಕಲಾ ರಾಯಭಾರಿಯಾಗಿ ದೇಶ ವಿದೇಶ ಸುತ್ತಿರುವ ಅವರು, ನೃತ್ಯ ಕುರಿತ ಸಂಶೋಧನೆಗಳನ್ನು ವಿದೇಶೀಯರ ಮುಂದೆ ಮಂಡಿಸಿ ಸೈ ಎನಿಸಿಕೊಂಡಿದ್ದಾರೆ.
ನೃತ್ಯ ನಿರ್ದೇಶಕಿಯಾಗಿ ಅಸಂಖ್ಯಾತ ನೃತ್ಯ ರೂಪಕಗಳಲ್ಲಿ ತಮ್ಮ ಅಮೋಘ ನೃತ್ಯಾಭಿನಯದಿಂದ ಬೇರೆ ಬೇರೆ ರಾಷ್ಟ್ರೀಯತೆಯ ಹೃದಯ ಗೆದ್ದಿರುವ ವೈಜಯಂತಿ ಕಾಶಿಯೊಂದಿಗೆ.........ಮಾತನಾಡಿದ್ದಾರೆ.


* ತಾವು ಮೂಲತಃ ಗೆಜ್ಜೆ ಕಟ್ಟಿದ್ದು ಭರತನಾಟ್ಯಕ್ಕೆ, ಕೂಚಿಪುರಿ ನೃತ್ಯದ ಕಡೆಗೆ ಹೇಗೆ ಇಟ್ಟಿರಿ?


ಅವರು ಆಕಸ್ಮಿಕ, ನನ್ನ ಗುರು ಸಿ.ಆರ್‌. ಆಚಾರ್ಯ ಬೇಸಿಗೆ ರಜಕ್ಕೆಂದು ಬೆಂಗಳೂರಿಗೆ ಬಂದಿದ್ದರು. ನನ್ನ ತಂದೆಯ ಗೆಳೆಯರೊಬ್ಬರು, ಆಚಾರ್ಯರ ಬಳಿ ಕೂಚಿಪುಡಿ ನೃತ್ಯ ಕಲಿತುಕೊ ಎಂದು ಸಲಹೆ ಮಾಡಿದರು. ನಂತರ ನಾನು ಅವರ ಹಿಂದೆ ಬಿದ್ದೆ. ಅದು ನನ್ನ ನೃತ್ಯ ಬದುಕಿನ ಪ್ರಮುಖ ಘಟ್ಟ, ಮುಖ್ಯವಾಗಿ ನನಗೆ ಕೂಚಿಪುಡಿ ಬಗ್ಗೆ ಅತೀವ ಪ್ರೀತಿಯಿತ್ತು. ನಾನು ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ಕೂಚಪುಡಿಯಲ್ಲಿ ನಾಟಕೀಯ ಗುಣ ಇದ್ದುದರಿಂದ ಸಹಜವಾಗಿ ಆಕರ್ಷಿತಳಾದೆ.
*ನೃತ್ಯ ಥೆರಪಿ ತಾವು ಕಂಡುಕೊಂಡಿರುವ ಒಂದು ಪ್ರಭಾವಿ ಫಾರ್ಮುಲಾ ಇದರಲ್ಲಿ ಹೇಗೆ ಕೃಷಿ ಮಾಡಿದ್ದೀರಿ?
ಆಸಕ್ತಿ ಎಲ್ಲಿದೆಯೋ ಅಲ್ಲಿ ಎಲ್ಲಾ ಇದೆ. ನಾನು ನೃತ್ಯದಲ್ಲಿ ಹೊಸದನ್ನು ಅರಸುತ್ತಾ ಅದರಲ್ಲೇ ಮುಳುಗಿ ಹೋದೆ. ಅದು ಸಂಶೋಧನೆ ಎನ್ನುವ ಹೊಸ ರೂಪಪಡೆಯಿತು. ಅದರಲ್ಲಿ ಏನೋ ಒಂದು ಸೆಳತವಿದೆ ಎಂದು ಮೊದಲು ನನಗೆ ಫೀಲ್‌ ಆಯಿತು.


*ನೃತ್ಯ ಥೆರಪಿಯನ್ನು ಕಾರ್ಯಾಗಾರಗಳ ಮೂಲಕ ವಿದೇಶೀಯರ ಮೇಲೆ, ವಿಕಲಾಂಗರ ಮೇಲೆ ಪ್ರಯೋಗಿಸಿ ಯಶಸ್ವಿಯಾಗಿದ್ದೀರಿ, ಅದು ಹೇಗೆ ಸಾಧ್ಯವಾಯಿತು?


ವಿದೇಶೀಯರನ್ನು ಸೆಳೆಯುವುದು ಸುಲಭದ ಮಾತಲ್ಲ, ಬಹಳ ಸೂಕ್ಷ್ಮ ಮನುಷ್ಯರು ಅವರು. ನಮ್ಮವರ ಹಾಗೆ ಅವರು ಹೇಳುವುದೆಲ್ಲಾ ನಂಬುವುದಿಲ್ಲ. ಎಲ್ಲದಕ್ಕೂ ಅವರು ಪ್ರೂಫ್‌ ಕೇಳಿತ್ತಾರೆ. ಈ ಜಗತ್ತಿನಲ್ಲಿ ಕಲೆ ಮತ್ತು ಯೋಗಕ್ಕೆ ಪ್ರೂಫ್‌ ಇಲ್ಲ. ಅವರನ್ನು ಸೆಳೆಯಲು ನಾನು ಬಳಸಿದ ಮಾನದಂಡ. ಅವರ ಮನಸ್ಥಿತಿ ಅರ್ಥ ಮಾಡಿಕೊಳ್ಳುವುದು ಮತ್ತು ನನ್ನ 'ವೇ ಆಫ್‌ ಪ್ರೆಸೆಂಟೇಷನ್‌ ನನಗೆ ನಿಜಕ್ಕೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.
ವಿಕಲಾಂಗ ಶಾಪಗ್ರಸ್ಥನಲ್ಲ. ವೈಕಲ್ಯವಾಗಿರುವ ಅಂಗದ ಶಕ್ತಿ ಬೇರೊಂದು ಅಂಗದಲ್ಲೇ ಇರುತ್ತದೆ. ಅದನ್ನು ಪತ್ತೆ ಮಾಡಿ ಅದನ್ನು ಅವನಿಗೆ ಮನವರಿಕೆ ಮಾಡಿಕೊಟ್ಟರೆ ನಾನು ವಿಕಲಾಂಗ ಎಂಬ ಕೀಳರಿಮೆ ಮಾಯವಾಗುತ್ತದೆ.


*ಗುರುಶಿಷ್ಯ ಪರಂಪರೆಯ ಮೇಲೆ ಅಷ್ಟೊಂದು ಆಸಕ್ತಿ ಏಕೆ?


ಅದು ಆಸಕ್ತಿಯಲ್ಲ, ಸತ್ಯದ ಮೇಲಿನ ನಂಬಿಕೆ. ಅದೊಂದು ಧ್ಯಾನ, ಯೋಗ, ಅಲ್ಲಿ ಹೃದುಯ ಸ್ಪಂದನೆಯಿದೆ. ನಾನು ಸರಳತೆ ಮತ್ತು ಪ್ರಾಮಾಣಿಕತೆಯನ್ನು ಬಲವಾಗಿ ನಂಬಿದ್ದೇನೆ. ಅದನ್ನು ಈ ಪರಂಪರೆಯಲ್ಲಿ ಮಾತ್ರ ಗುರುತಿಸಬಹುದು. ನಮ್ಮ ಮನೆಯ ಗುರುಶಿಷ್ಯ ಪರಂಪರೆಯನ್ನು ಉಳಿಸಿಕೊಳ್ಳುವ ತವಕ ನನ್ನದು.


*ಭರತನ ನಾಟ್ಯಶಾಸ್ತ್ರ ನಾಟ್ಯದ ಮೂಲ, ಅದೇ ರೀತಿ ನಾಟಕಕ್ಕೂ ಕೂಡ. ಅದರ ಬಗ್ಗೆ ಏನು ಹೇಳುವಿರಿ?


ಒಳ್ಳೆಯ ಪ್ರಶ್ನೆ, ನಾಟ್ಯ ಶಾಸ್ತ್ರ ನಮ್ಮ ಬದುಕಿನ ಶಾಸ್ತ್ರ ನಾಟ್ಯವಿಲ್ಲದೆ ನಾಟಕವಿಲ್ಲ, ನಾಟಕವಿಲ್ಲದೆ ನಾಟ್ಯವಿಲ್ಲ, ಸಂಗೀತ ವಿಲ್ಲದೆ ನಾಟ್ಯ ನಾಟಕವಿಲ್ಲ. ಎಲ್ಲದಕ್ಕೂ ಮೂಲ ನಾಟ್ಯ ಶಾಸ್ತ್ರವೇ. ಅಲ್ಲಿ ಬರುವ ನವಸರಸಗಳು ಪ್ರತಿನಿತ್ಯದ ನಮ್ಮ ಬದುಕಿನೊಂದಿಗೆ ಬೆಸೆದುಕೊಂಡಿವೆ. ನಾನು ದ್ರೌಪದಿಯನ್ನು ಕಂಡಿಲ್ಲ. ಆದರೆ ಅವರ ಬಗ್ಗೆ ಇಂತಹ ಉದ್ಗ್ರಂಥಗಳಿವೆ. ಅವು ನಮಗೆ ಒಂದು ಚಿತ್ರಣ ನೀಡುತ್ತವೆ.


*ತಮ್ಮ ಪತಿ ಮತ್ತು ಮಗಳ ಬಗ್ಗೆ ಹೇಳಿ?


ನನ್ನ ಮನೆ, ನೋವು ನಲಿವು ಒತ್ತಡಗಳ ಗೂಡು, ಮಗಳು ಹಾಗೂ ನನ್ನ ವಿದ್ಯಾರ್ಥಿನಿ ಪ್ರತೀಕ್ಷ ಮೌಂಟ್‌ ಕಾಞರ್ವೆುಲ್‌ ಕಾಲೇಜಿನಲ್ಲಿ ಪಿಯುಸಿ ಕಲಿಯುತ್ತಿದ್ದಾಳೆ. ಅವಳ ಮೇಲೆ ಯಾವುದನ್ನೂ ಹೇರಿಲ್ಲ. ಅವಳ ಬಗ್ಗೆ ನಿರ್ಧಾರ ಕೈಗೊಳ್ಳುವ ಅವಕಾಶವನ್ನು ಅವಳಿಗೇ ನೀಡಿದ್ದೇನೆ. ಪತಿ ಚಿತ್ರನಟ ವಿಜಯಕಾಶಿ ನನ್ನ ಎಲ್ಲಾ ಕೆಲಸಗಳಿಗೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾ ನೀಡುತ್ತಿದ್ದಾರೆ.


*ತಮ್ಮ ಮುಂದಿನ ಯೋಜನೆಗಳಾವುವು?


ಕೆಂಗೇರಿಯಲ್ಲಿ ಸೈಟ್‌ ಕೊಂಡು ರಂಗಮಂದಿರ ಮತ್ತು ನೃತ್ಯ ಶಾಲೆ ನಿರ್ಮಾಣ ಮಾಡಿಸುತ್ತಿದ್ದೇನೆ. ಈಗಾಗಲೇ 70 ರಷ್ಟು ಕೆಲಸ ಮುಗಿದಿದೆ. ಮುಂದೆ ಬರುವ ವಿಶ್ವ ನೃತ್ಯ ಹಬ್ಬದಂದು ಲೋಕಾರ್ಪಣೆ ಮಾಡುತ್ತೇನೆ. ಇದು ಬದುಕನ್ನು ಪ್ರೀತಿಸುವ ವಾತಾವರಣವನ್ನು ಸೃಷ್ಠಿಸುವ ಸಂಸ್ಥೆ, ಪ್ರಾಕೃತಿಕ ಚಿಕಿತ್ಸಾ ಕೇಂದ್ರ. ನಾನು ಇಲ್ಲಿ ನೃತ್ಯ ಪ್ರತಿಭೆಗಳನ್ನು ಮಾತ್ರ ತಯಾರು ಮಾಡುವುದಿಲ್ಲ, ಒಳ್ಳೆಯ ಮನುಷ್ಯರನ್ನು, ಮನುಷ್ಯತ್ವವನ್ನು ನಿರ್ಮಾಣ ಮಾಡಬೇಕೆನ್ನುವುದು ನನ್ನ ಆಸೆ.

ಲಿಂಗದೇವರು ಹಳೆಮನೆ



`ಹಳೆಮನೆ' ಆನ್‌ಲೈನ್‌ನಲ್ಲಿ ಕನ್ನಡ ಪಾಠ


ಲಿಂಗದೇವರು ಹಳೇಮನೆ. ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಚಿತ ಹೆಸರು. ಪ್ರಾಧ್ಯಾಪಕ, ಚಿಂತಕ, ವಿಮರ್ಷಕ, ಸಂಶೋಧಕ, ನಾಟಕಕಾರ ಹೀಗೆ ಅವರು ವಿವಿಧ ನೆಲೆಗಳಲ್ಲಿ ಕ್ರಿಯಾಶೀಲರು. ಕೇಂದ್ರೀಯ ಭಾಷಾ ಸಂಸ್ಥಾನದಲ್ಲಿ ಮೂರು ದಶಕಗಳಿಂದ ಪ್ರಾಧ್ಯಾಪಕರಾಗಿ ಅವರು ಸವೆಸಿದ ಹಾದಿ ವಿಶಿಷ್ಟವಾದುದು.
ಕನ್ನಡ ಸಾಹಿತ್ಯ, ರಂಗಭೂಮಿ ಕುರಿತಂತೆ ಗಂಟೆಗಟ್ಟಲೆ ಮಾತನಾಡುವ ಹಳೆಮನೆ ಮಾಹಿತಿಯ ಮೂಟೆ. ಕನ್ನಡವನ್ನು ದ್ವಿತೀಯ ಭಾಷೆಯಾಗಿ ಕೇಂದ್ರೀಯ ಭಾಷಾ ಸಂಸ್ಥಾನದಲ್ಲಿ ಬೋಧಿಸುತ್ತಿರುವ ಅವರು ಮಂಡಿಸಿರುವ ಸಂಶೋಧನಾ ಪ್ರಬಂಧಗಳಿಗೆ ಲೆಕ್ಕವಿಲ್ಲ.
ವಚನ ಸಾಹಿತ್ಯದ ವಿಭಿನ್ನ ದೃಷ್ಟಿಕೋನ, ಕನ್ನಡ ನಾಟಕಗಳಲ್ಲಿ ಭಾಷೆ, ಭಾರತದಲ್ಲಿ ಸ್ತ್ರೀ ಸಾಕ್ಷರತೆ, ಉದ್ಯಮವಾಗಿ ರಂಗಭೂಮಿ ಇಂತಹ ಹಲವು ವಿಚಾರ ಕುರಿತಂತೆ ಮಂಡಿಸಿರುವ ಪ್ರಬಂಧಗಳು ವಿಶೇಷವಾಗಿವೆ.
ನಾಟಕಕಾರರಾಗಿ ಹಳೆಮನೆಯವರು ಹೊರತಂದಿರುವ ಹಲವು ರಂಗಕೃತಿಗಳು ಕನ್ನಡ ರಂಗಭೂಮಿಯ ಆಸ್ತಿಯಾಗಿವೆ. ಹೈದರ್‌, ಚಿಕ್ಕದೇವ ಭೂಪ, ಧರ್ಮಪುರಿ ದೇವದಾಸ, ಬಿರುದಂತೆಂಬರ ಗಂಡ ಇವು ಹಳೆಮನೆಯವರ ಪ್ರಮುಖ ಕೃತಿಗಳು. ಬಹುತೇಕ ಕರ್ನಾಟಕದ ಎಲ್ಲಾ ವಿಶ್ವವಿದ್ಯಾಲಯಗಳಲ್ಲೂ ಹಳೆಮನೆಯವರ ಕೃತಿಗಳು ಪಠ್ಯವಾಗಿವೆ. ವಿಮರ್ಷಕರಾಗಿ, ಹಲವು ಪತ್ರಿಕೆಗಳ ಅಂಕಣಕಾರರಾಗಿ ತಮ್ಮದೇ ಆದ ಓದುಗ ವರ್ಗವನ್ನು ಸೃಸ್ಟಿಸಿಕೊಂಡಿದ್ದಾರೆ.
ಪ್ರಸ್ತುತ ಭಾರತ ಸರ್ಕಾರದ ಮಾನವ ಸಂಪನ್ಮೂಲ ಸಚಿವಾಲಯದ ಸಹಯೋಗದಲ್ಲಿ ಕನ್ನಡ ಭಾಷೆಯನ್ನು ಆನ್‌ಲೈನ್‌ ಕಾರ್ಯಕ್ರಮವಾಗಿ ವಿನ್ಯಾಸಗೊಳಿಸಿ ವಿಶ್ವದಾದ್ಯಂತ ಹರಡಿರುವ ಕನ್ನಡ ಪ್ರಿಯರಿಗೆ ಬೋಧನೆ ಮಾಡುತ್ತಿದ್ದಾರೆ.
ಈಗ ಉದಯವಾಣಿ ಜೊತೆ ಹಳೆಮನೆ ಅವರ ಮಾತುಕತೆ.
* ಆನ್‌ಲೈನ್‌ ಕನ್ನಡ ಕಲಿಕೆಯ ರೂಪುರೇಷೆಗಳೇನು?

ಜಾಗತಿಕ ಹಳ್ಳಿ ಪರಿಕಲ್ಪನೆ ಭಾಷೆಯನ್ನೂ ಬಿಟ್ಟಿಲ್ಲ. ಜಗತ್ತಿನ ವಿವಿಧ ಮೂಲೆಗಳಲ್ಲಿ ಕನ್ನಡಿಗರಿದ್ದಾರೆ. ಅವರು ದೇಶ ಬಿಟ್ಟಿದ್ದರೂ, ಭಾಷೆ ಅವರನ್ನು ಬಿಟ್ಟಿಲ್ಲ. ಅವರಿಗೆ ಇರುವ ಒತ್ತಡದೊಳಗೆ ತಮ್ಮ ಮಕ್ಕಳಿಗೆ ಕನ್ನಡ ಕಲಿಸುವ ಒಂದು ಮಾಧ್ಯಮದ ಅವಶ್ಯಕತೆ ಇದೆ. ಅಲ್ಲದೆ ಬಹುರಾಷ್ಟ್ರೀಯ ಕಂಪನಿಗಳ ಜೊತೆಗೆ ಅಸಂಖ್ಯಾತ ವಿದೇಶಿಯರು, ಪರ ರಾಜ್ಯದವರು ಕರ್ನಾಟಕಕ್ಕೆ ಬಂದು ಇಲ್ಲಿಯೇ ನೆಲೆಸುತಿದ್ದಾರೆ. ಕನ್ನಡ ಭಾಷೆಯನ್ನು ಕಲಿಯುವುದು ಅವರಿಗೆ ಅನಿವಾರ್ಯವಾಗಿದೆ. ಈ ಉದ್ದೇಶ ಈಡೇರಿಕೆಗೆ ಆನ್‌ಲ್ಕ್ರೆನ್‌ ಕನ್ನಡ ಕಲಿಕೆ ಕಾರ್ಯಕ್ರಮ ನೆರವಾಗಲಿದೆ.

* ಕಾರ್ಯಕ್ರಮದ ವಿನ್ಯಾಸ ಯಾವ ರೀತಿ ಇದೆ?
ಆಸಕ್ತರು ತಮ್ಮ ಹೆಸರನ್ನು ನೋಂದಣಿ ಮಾಡಿಸಬೇಕು. ನೋಂದಾಯಿತರಿಗೆ ಗುರುತಿನ ಚೀಟಿ ನೀಡಲಾಗುವುದು. ಬೋಧಿಸಲಾಗುವ ಪಾಠಗಳನ್ನು 10 ಅಧ್ಯಾಯಗಳಲ್ಲಿ ವಿಭಾಗಿಸಲಾಗಿದೆ. ಆರಂಭದ ಮೂರು ಅಧ್ಯಾಯಗಳಲ್ಲಿ ಕರ್ನಾಟಕ ಅಂದರೇನು, ಅದರ ಇತಿಹಾಸ, ಸಂಸ್ಕೃತಿ, ಪರಂಪರೆ ಕುರಿತಾದ ಮಾಹಿತಿ ನೀಡಲಾಗುವುದು. ನಂತರದ ಏಳು ಅಧ್ಯಾಯಗಳಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಾಹಿತಿಗಳು ಮುಂತಾದ ಮಾಹಿತಿಯಿದೆ. ಅದರೊಂದಿಗೆ ಕನ್ನಡ ನಿಘಂಟನ್ನು ಕೂಡ ಆನ್‌ಲೈನ್‌ನಲ್ಲೇ ವಿನ್ಯಾಸಗೊಳಿಸಲಾಗಿದೆ.

* ಈ ಕಾರ್ಯಕ್ರಮದಲ್ಲಿ ಪರೀಕ್ಷೆಗಳೇನಾದರೂ ಇರುತ್ತವೆಯೇ?
ಖಂಡಿತಾ ಇದೆ. ಕೋರ್ಸ್‌ನ ಒಟ್ಟಾರೆ ಅವಧಿ ಎರಡು ವರ್ಷ (24 ತಿಂಗಳು). 18 ತಿಂಗಳ ನಂತರ ಪರೀಕ್ಷೆ ತೆಗೆದುಕೊಳ್ಳಬಹುದು. ಇದಕ್ಕೆ ಸರ್ಟಿಫಿಕೇಟ್‌ ಕೂಡ ನೀಡಲಾಗುವುದು.

* ಕೋರ್ಸ್‌ಗೆ ಎಷ್ಟು ಶುಲ್ಕ ನಿಗದಿ ಮಾಡಿದ್ದೀರಿ?
ನಾಮಮಾತ್ರ ಶುಲ್ಕ. ಅಭ್ಯರ್ಥಿಗೆ 500 ರೂ. ಮಾತ್ರ. ಪರೀಕ್ಷೆ ತೆಗೆದುಕೊಳ್ಳಲು ಇಚ್ಛಿಸುವ ಅಭ್ಯರ್ಥಿ ಪ್ರತ್ಯೇಕ 500 ರೂ. ಪರೀಕ್ಷಾ ಶುಲ್ಕ ಪಾವತಿಸಬೇಕು.

* ತಾವು ಇತ್ತೀಚೆಗೆ ಹೊಸದಾಗಿ ಏನಾದರೂ ಬರೆದಿದ್ದೀರಾ?
ಬರವಣಿಗೆ ಸಾಗುತ್ತಿದೆ. `ಗುಡಿಯಂಕ ಕುಡಿಮುದ್ದ' ಎಂಬ ರಂಗಕೃತಿಯ ಬರವಣಿಗೆ ಸಾಗಿದ್ದು, ರೀ ರೈಟ್‌ ಮಾಡಿದರೆ ಮುಗಿಯುತ್ತದೆ. ಅದು ಬಿಟ್ಟರೆ ರಾಮಚಂದ್ರ ಶರ್ಮ ಅವರ ಬಗ್ಗೆ ಒಂದು ಕೃತಿ ಪ್ರಕಟವಾಯಿತು. ನನ್ನ ಬೇರೆ ಒತ್ತಡಗಳಲ್ಲಿ ಬರವಣಿಗೆ ಕಡಿಮೆಯಾಗಿದೆ.

* ರಂಗಭೂಮಿ ಒಂದು ಉದ್ಯಮ ಎಂದು ಹೇಗೆ ಸಮರ್ಥಿಸುತ್ತೀರಿ?
ಮೂಲತಃ ರಂಗಭೂಮಿ ಉದ್ಯಮವೇ ಆಗಿತ್ತು. ಪಾರ್ಸಿ ವೃತ್ತಿ ನಿರತ ನಾಟಕ ಕಂಪನಿಗಳಿದ್ದವು. ಉದ್ಯಮದ ರೀತಿಯಲ್ಲಿಯೇ ನೋಂದಣಿ ಮಾಡಿಸಲಾಗುತಿತ್ತು. ಲಾಭ ನಷ್ಟಗಳಿಗೆ ಮಹತ್ವ ನೀಡಲಾಗುತಿತ್ತು. ಕರ್ನಾಟಕದಲ್ಲಿಯೂ ಕೂಡ ಅಂತಹ ಕಂಪನಿಗಳಿದ್ದವು. ಕ್ರಮೇಣ ಹವ್ಯಾಸಿ ಎನ್ನುವ ಪರಿಕಲ್ಪನೆ ಹುಟ್ಟಿಕೊಂಡಿತು. ಹವ್ಯಾಸಿಗಳು ಹಣಕ್ಕಿಂತ ಹೆಚ್ಚಾಗಿ ಪ್ರಯೋಗಕ್ಕೆ ಮಹತ್ವ ನೀಡಿದರು.
ನನ್ನ ವಾದವೇನೆಂದರೆ ಸರ್ಕಾ ರಂಗಭೂಮಿಯನ್ನು ಉದ್ಯಮ ಎಂದು ಪರಿಗಣಿಸಿ ತನ್ನ ಆಯವ್ಯಯದಲ್ಲಿ ಇಂತಿಷ್ಟು ಎಂದು ಹಣ ಮೀಸಲಿಡಬೇಕು. ಯೂರೋಪಿನ ದೇಶಗಳಲ್ಲಿ ಈ ಕೆಲಸ ನಡೆಯುತ್ತಿದೆ. ಅಲ್ಲಿ ನಾಟಕ ಉದ್ಯಮ ಸ್ಥಾಪಿಸುವ ಸಾಹಸಿಗೆ ಸರ್ಕಾರ ಸಬ್ಸಿಡಿ, ಸಾಲ ನೀಡುತ್ತದೆ.

* ಸ್ತ್ರೀ ಸಾಕ್ಷರತೆ ಕುರಿತ ನಿಮ್ಮ ಪ್ರಬಂಧಗಳು ಪ್ರಸಿದ್ಧಿಯಾಗಿವೆ. ಅದರ ಬಗ್ಗೆ ಹೇಳಿ?
ಸ್ತ್ರೀ ಕಲಿಯದ ಹೊರೆತು ನಾಗರಿಕ ಸಮಾಜವನ್ನು ಊಹಿಸಿಕೊಳ್ಳಲಾಗದು. ಬಿಹಾರದ ಸ್ತ್ರೀ ಸಾಕ್ಷರತೆಯನ್ನು ಗಮನಿಸಿದರೆ ಭಯವಾಗುತ್ತದೆ. ಉತ್ತರ ಕರ್ನಾಟಕದ ರಾಯಚೂರು, ವಿಜಾಪುರ ಜಿಲ್ಲೆಗಳಲ್ಲಿ ಸಾಕ್ಷರತೆ ಪ್ರಮಾಣ ಶೇ. 23ಕ್ಕಿಂತಲೂ ಕಡಿಮೆ ಇದೆ. ಇತ್ತೀಚೆಗೆ ಸ್ತ್ರೀ ಸಂಘಟನೆಗಳು ಸಾಕ್ಷರತೆಯ ಬಗ್ಗೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಬಹಳ ಚೆನ್ನಾಗಿವೆ.

* ರಾಜ್ಯಾದ್ಯಂತ ಕಾವೇರಿ ಚಳವಳಿಗೆ ಕಾವೇರಿದೆ. ಒಬ್ಬ ಸಾಹಿತಿಯಾಗಿ ಈ ಚಳವಳಿಗೆ ತಮ್ಮ ಸ್ವಂದನೆ ಏನು?
ನನಗೆ ನಿಜಕ್ಕೂ ಆಶ್ವರ್ಯವೆನಿಸುತ್ತಿದೆ. ಈ ಐತಿಹಾಸಿಕ ಸಮಸ್ಯೆಯ ತೀರ್ಪಿನಿಂದ ಕನ್ನಡಿಗರಿಗೆ ಅನ್ಯಾಯವಾಗಿದ್ದರೂ ಯಾವ ಅಹಿತಕರ ಘಟನೆಗಳಿಗೂ ಆಸ್ಪದ ಕೊಡದೆ ಶಾಂತಿಯುವ ಚಳವಳಿ ನಡೆಸುತ್ತಿರುವು ಇಡೀ ರಾಷ್ಟ್ರಕ್ಕೆ ಮಾದರಿ. ನಮ್ಮವರ ತಾಳ್ಮೆ ನಿಜಕ್ಕೂ ಮೆಚ್ಚುವಂತದ್ದು. ನಮ್ಮ ನ್ಯಾಯವಾದಿಗಳು, ಸಂಸದರು ಕರ್ನಾಟಕವನ್ನು ಪ್ರತಿನಿಧಿಸುವಲ್ಲಿ ಎಡವಿದ್ದಾರೆ. ಒಬ್ಬ ಸಾಹಿತಿಯಾಗಿ ಈ ಅನ್ಯಾಯದ ತೀರ್ಪನ್ನು ಖಂಡಿಸುತ್ತೇನೆ.

Wednesday, June 10, 2009


ರಂಗ ಜಂಗಮ ಚಿದಂಬರ ರಾವ್‌ ಜಂಬೆ



ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಪದವಿ ಪಡೆದ ಬೆರಳೆಣಿಕೆಯಷ್ಟು ಕನ್ನಡಿಗರಲ್ಲಿ ಎ.ಜಿ. ಚಿದಂಬರ ರಾವ್‌ ಜಂಬೆ ಪ್ರಮುಖರು. ಪದವಿ ಪಡೆದ ನಂತರ ಸುಬ್ಬಣ್ಣ ಅವರ ಜತೆಗೂಡಿ ಹೆಗ್ಗೋಡಿನ ನೀಲಕಂಠ ನಾಟಕ ಸಂಘ(ನೀನಾಸಂ)ದಲ್ಲಿ ಹಲವು ವರ್ಷಗಳ ಕಾಲ ಪ್ರಾಂಶುಪಾಲರಾಗಿ ದುಡಿದು ಈಗ ರಂಗಭೀಷ್ಮ ಬಿ.ವಿ. ಕಾರಂತರು ಕಟ್ಟಿದ ದಕ್ಷಿಣ ಭಾರತದ ಏಕೈಕ ಸರ್ಕಾರಿ ನಾಟಕ ರೆಪರ್ಟರಿ ರಂಗಾಯಣದ ನಿರ್ದೇಶನ ಸಾರಥ್ಯ ವಹಿಸಿದ್ದಾರೆ.
ಒಂದು ಅಪವಾದವಿದೆ, ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಪದವಿ ಪಡೆದವರು ಬಾಲಿವುಡ್‌ ಕಡೆ ಹಾರುತ್ತಾರೆ ಎಂದು. ಆದರೆ ಚಿದಂಬರ ರಾವ್‌ ಜಂಬೆ ಈ ಅಪವಾದಕ್ಕೆ ಒಂದು ಅಪವಾದ
ಆದರೂ ಅವರ ರಂಗ ಕಾಯಕ ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ, ತಮ್ಮ ಸಂಪರ್ಕ ಜಾಲವನ್ನು ರಾಷ್ಟ್ರಾದ್ಯಂತ ಹಬ್ಬಿಸಿದ್ದು, ಕನ್ನಡ ರಂಗ ಸೊಗಡನ್ನು ಬೇರೆ ಬೇರೆ ಜಾಗ, ಸಂಸ್ಕೃತಿಗಳೊಂದಿಗೆ ಬೆರಸಿ ಭಾಷಾ ಸಾಮರಸ್ಯ ಕೈಂಕರ್ಯದಲ್ಲಿ ತೊಡಗಿದ್ದಾರೆ. ಈಗ ತಾನೆ ರಂಗಾಯಣ ಅಸ್ಸಾಂ ಪ್ರವಾಸ ಮುಗಿಸಿ ಬಂದಿದೆ, ಈ ಭಾರಿಯ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವನ್ನು ಕೃಷಿ ಉತ್ಸವವಾಗಿ ಆಚರಿಸಿದ್ದುದು ಜಂಬೆಯವರ ಒಂದು ವಿಶೇಷ.
ರಂಗಾಯಣ ಸಾಗುತ್ತಿರುವ ಹಾದಿ, ರಂಗಭೂಮಿಯ ಹಲವು ಅಭಿಲಾಷೆಗಳನ್ನು ಜಂಬೆ ಇಲ್ಲಿ ಉದಯವಾಣಿಯೊಂದಿಗೆ ಹಂಚಿಕೊಂಡಿದ್ದಾರೆ.

* ನೂತನ ವರ್ಷದಲ್ಲಿ ರಂಗಾಯಣದ ನೂತನ ಪ್ರಯೋಗಗಳೇನು?
ನನ್ನ ಪ್ರಕಾರ ಈ ಜಗತ್ತಿನಲ್ಲಿ ಹೊಸತನದ ಹುಡುಕಾಟಕ್ಕೆ ಒಂದೇ ಒಂದು ವೇದಿಕೆ ರಂಗಭೂಮಿ. ಪ್ರತಿದಿನವೂ ಹೊಸ ಹುಡುಕಾಟಕ್ಕಾಗಿ ತುಡಿಯುತ್ತೇವೆ. ಪ್ರತಿ ಮುಂಜಾನೆಯೂ ಹೊಸ ದಿನ, ಹೊಸ ವರ್ಷ. ಅದಕ್ಕೆ ಜನವರಿ ಮಾತ್ರ ಹೊಸತಲ್ಲ. ರಂಗಾಯಣ ಈಗ ಮೈಸೂರಿಗೆ ಮಾತ್ರ ಸೀಮಿತವಾಗಿಲ್ಲ. ಧಾರವಾಡದಲ್ಲಿ ರಂಗಾಯಣದ ಶಾಖೆ ಇಷ್ಟರಲ್ಲೇ ಬರಲಿದೆ. ಧಾರವಾಡದ ರಾಜಗುರು ರಂಗಮಂದಿರದಲ್ಲಿ ರಂಗಾಯಣದ ಚಟುವಟಿಕೆಗಳು ಪ್ರಾರಂಭವಾಗಲಿವೆ. ಇದು ರಂಗಾಯಣಕ್ಕೆ ಮತ್ತೊಂದು ಅಂಗವಾಗಿ ಸೇರ್ಪಡೆಯಾಗಲಿದ್ದು, ಸದ್ಯಕ್ಕೆ ಇದು ಹೊಸ ಸುದ್ದಿ.

* ಧಾರವಾಡದ ಶಾಖೆ ಹೊಸ ಅಂಗ ಎಂದಿರಿ, ಇತರ ಅಂಗಗಳ ಬಗ್ಗೆ ಹೇಳಿ?
ರಂಗಾಯಣ ಬರೀ ನಾಟಕ ಮಾತ್ರ ಮಾಡುವುದಿಲ್ಲ, ರಂಗಭೂಮಿಯ ವಿವಿಧ ಅಯಾಮಗಳಲ್ಲಿಯೂ ಕೃಷಿ ಮಾಡಿದೆ, ಶಾಲಾ ಮಕ್ಕಳಿಗೆ ರಂಗಭೂಮಿ ಶಿಕ್ಷಣ ನೀಡುವ ಉದ್ದೇಶದಿಂದ ಪ್ರತಿ ವರ್ಷ ಚಿಣ್ಣರ ಮೇಳ ನಡೆಯುತ್ತದೆ. ರಂಗಶಿಕ್ಷಣ ನೀಡಲು ಭಾರತೀಯ ರಂಗ ಶಿಕ್ಷಣ ಕೇಂದ್ರವಿದೆ. ರಂಗಭೂಮಿಯ ಬಗ್ಗೆ ಸಂಶೋಧನೆ ಮಾಡಲು ಶ್ರೀರಂಗ ಸಂಶೋಧನಾ ಕೇಂದ್ರವಿದೆ.
ಮಕ್ಕಳ ರಂಗಭೂಮಿ ನಿರ್ಮಾಣದಲ್ಲಿ ರಂಗಾಯಣ ಬಲುದೂರ ಸಾಗಿದ್ದು, ಸ್ವೀಡನ್ನಿನ ಸಹಯೋಗದೊಂದಿಗೆ ಸೀಡಾ ಐಟಿಐ ಯೋಜನೆಯ ಅಡಿಯಲ್ಲಿ 20 ಮಂದಿ ಕಲಾವಿದರನ್ನು ನೇಮಕ ಮಾಡಿಕೊಂಡು ಮಕ್ಕಳ ನಾಟಕಗಳನ್ನು ದೊಡ್ಡವರಿಂದ ಮಾಡಿಸಿ ಮಕ್ಕಳ ಮುಂದೆ ಪ್ರದರ್ಶಿಸಲಾಗುತ್ತಿದೆ.

* ಶಿಕ್ಷಣದಲ್ಲಿ ರಂಗಭೂಮಿ ಅವಶ್ಯಕತೆ ಇದಿಯೇ?
ಮಲ್ಲಿಗೆಯ ಮೊಗ್ಗು ಹೂವಾಗಿ ಅರಳುವ ಸೂಕ್ಷ್ಮತೆಯನ್ನು ಮಕ್ಕಳು ಬೆಳೆಯುವ ಸಂದರ್ಭದಲ್ಲೂ ಕಾಣಬಹುದು. ಶಿಕ್ಷಣ ಮಕ್ಕಳಿಗೆ ಚಿಂತನೆಯ ವಸ್ತುವಾಗಿದೆ. ಆದರೆ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರ್ತಿಸುವುದು ಸವಾಲಿನ ಸಂಗತಿ, ರಂಗಭೂಮಿ ಈ ಕೆಲಸ ಮಾಡುತ್ತದೆ, ಆದ್ದರಿಂದ ಶಿಕ್ಷಣದಲ್ಲಿ ರಂಗಕಲೆಯ ಅಳವಡಿಕೆ ಅವಶ್ಯಕ. ರಂಗಾಯಣ ಈ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಪ್ರತಿವರ್ಷ ಶಾಲಾ ಶಿಕ್ಷಕರಿಗೆ ತರಬೇತಿ ನೀಡುತ್ತಾ ಬಂದಿದೆ.

* ರಾಷ್ಟ್ರೀಯ ನಾಟಕ ಶಾಲೆ ಹೋರಾಟದಲ್ಲಿ ತಮ್ಮ ನಿಲುವು?
ನಾನು ರಾಷ್ಟ್ರೀಯ ನಾಟಕ ಶಾಲೆಯನ್ನು ಹತ್ತಿರದಿಂದ ಕಂಡಿದ್ದೇನೆ. ಅದರ ಸ್ಥಾಪನೆಯ ಉದ್ದೇಶವೇ ಸ್ಪಷ್ಟವಾಗಿಲ್ಲ, ಸರ್ಕಾರ ನೀಡುವ ಕೋಟ್ಯಾಂತರ ರೂ. ಹಣ ಒಂದೇ ಕಡೆ ಕೇಂದ್ರೀಕೃತವಾಗಿದೆ. ಕೇವಲ ಭಾಷೆಯ ಕಾರಣವೊಡ್ಡಿ ಹಿಂದಿ ತಿಳಿಯದವರಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ. ಹಾಗೆ ನೋಡಿದರೆ ಇಲ್ಲಿ ಪದವಿ ಪಡೆದವರು ರಂಗಭೂಮಿಯಲ್ಲಿ ಎಷ್ಟುಜನ ಕ್ರಿಯಾಶೀಲರಾಗಿದ್ದಾರೆ? ರಾಷ್ಟ್ರೀಯ ನಾಟಕ ಶಾಲೆ ರಾಷ್ಟ್ರಕ್ಕೆ ಒಂದಲ್ಲ, ಅದು ರಾಜ್ಯಗಳಿಗೆಲ್ಲಾ ಹಂಚಿಕೆಯಾಗಬೇಕು.

* ಮುಂದಿನ ದಿನಗಳಲ್ಲಿ ರಂಗಭೂಮಿಯ ಮುಂದೆ ಯಾವ ಸವಾಲಿದೆ?.
ಪ್ರಪಂಚ ನಾಗಾಲೋಟದಲ್ಲಿ ಓಡುತ್ತಿದೆ. ಮಾಹಿತಿ ನಮ್ಮನ್ನು ಆಳುತ್ತಿದೆ. ತಂತ್ರಜ್ಞಾನದ ತೀವ್ರ ಬೆಳವಣಿಗೆಯಲ್ಲಿ ಪ್ರಪಂಚದ ಕಲ್ಪನೆ ಕಿರಿದಾಗಿದೆ. ಜಾಗತೀಕರಣದ ನೀತಿಗೆ ದೇಶ ತನ್ನೆಲ್ಲಾ ಕಿಟಕಿ ಬಾಗಿಲುಗಳನ್ನು ತೆರೆದುಕೊಂಡಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ಬದುಕಿನೊಟ್ಟಿಗೆ ಬೆಳೆದು ಬಂದ `ದೇಸಿ' ಸಂಸ್ಕೃತಿ ರಕ್ಷಣೆಗಾಗಿ ನಾವೆಲ್ಲರೂ ಒಟ್ಟಾಗಿ ದುಡಿಯಬೇಕಿದೆ.

* ಸಂಸಾರದ ನಿರ್ದೇಶಕರಾಗಿ ನೀವು?
ನಾನು ರಂಗಭೂಮಿಗೆ ಮಾತ್ರ ನಿರ್ದೇಶಕ. ನನ್ನ ಸಂಸಾರಕ್ಕೆ ನನ್ನ ಹೆಂಡತಿ ಭಾರತಿ ನಿರ್ದೇಶಕಿ. ಒಬ್ಬ ಮಗ ಬಿ.ಕಾಂ ಕಲಿಯುತ್ತಿದ್ದಾನೆ, ಅವನಿಗೆ ಇದೇ ಮಾಡು, ಅದೇ ಮಾಡು ಎಂಬ ಒತ್ತಡವಿಲ್ಲ, ಸಂಪೂರ್ಣ ಸ್ವತಂತ್ರ್ಯ ನೀಡಿದ್ದೇನೆ.

* ನಿವೃತ್ತಿಯ ಬಗ್ಗೆ ಯೋಚಿಸಿದ್ದೀರಾ?
ರಂಗಾಯಣದಿಂದ ನಿವೃತ್ತಿಯಿದೆ, ಆದರೆ ರಂಗಭೂಮಿಯಿಂದ ನಿವೃತ್ತಿ ಇಲ್ಲ. ಮುಂದೆ ನನ್ನ ಬಹುದಿನಗಳ ಕನಸಾಗಿರುವ ನಮ್ಮ ತೆಂಗಿನ ತೋಟ ನೋಡಿಕೊಂಡು ಮನೆಯಲ್ಲಿ ಕೆಲ ಕಾಲ ಕಳೆಯಬೇಕು ಅಂದುಕೊಂಡಿದ್ದೇನೆ.

ಕಳಚಿದ `ಹೊನ್ನಿನ ಕಂಠಸಿರಿ' ಎಚ್‌.ಕೆ. ನಾರಾಯಣ


ಕನ್ನಡ ಸುಗಮ ಸಂಗೀತ ಕ್ಷೇತ್ರದ ದಿಗ್ಗಜ ಎಚ್‌.ಕೆ. ನಾರಾಯಣ ಇನ್ನಿಲ್ಲ. ಕರ್ನಾಟಕ ಸಾಂಸ್ಕೃತಿಕ ಲೋಕದ ಐದು ದಶಕಗಳ ನಾರಾಯಣ ಗಾನೋತ್ಸವಕ್ಕೆ ತೆರೆಬಿದ್ದಿದೆ. 1960ರ ದಶಕದಲ್ಲಿ ಸುಗಮ ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರಾಗಿರಾದ್ದ ನಾರಾಯಣರು ಆಕಾಶವಾಣಿಯ ಸಾಮ್ರಾಟರಾಗಿದ್ದರು. ಅವರು ಮಾತನಾಡಿದ್ದು ಬಹಳ ಕಡಿಮೆ. ಹಾಡಿದ್ದು ಅಪಾರ.
ಶಾಸ್ತ್ರೀಯ ಸಂಗೀತದ ನೆಲೆಯಲ್ಲಿ ಸುಗಮ ಸಂಗೀತಕ್ಕೆ ಹೊಸ ರೂಪ ಕೊಟ್ಟವರು ನಾರಾಯಣರು. ಬೇಂದ್ರೆಯವರ ನೂರಾರು ಗೀತೆಗಳಿಗೆ ದನಿಯಾದವರು. ಕ್ಯಾಸೆಟ್‌ ಕ್ರಾಂತಿಯ ಮೂಲಕ ಮನೆ ಮನ ತಲುಪಿದರು. ಅಂದು ಆರಂಭವಾದ ಕ್ಯಾಸೆಟ್‌ ಕ್ರಾಂತಿಯಿಂದ ಅಪಾರ ಭಕ್ತಿಗೀತೆಗಳು, ದೇವರನಾಮಗಳು, ವಚನಗಳು ಎಲ್ಲರ ಬಾಯಲ್ಲೂ ಗುನುಗಿದವು. ತಮ್ಮ ವಿಶಿಷ್ಟ ಹೊನ್ನ ಕಂಠಸಿರಿಯಿಂದ ಅಪಾರ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡರು. ನೃತ್ಯರೂಪಕಗಳಿಗೆ ಸಂಗೀತ ಸಂಯೋಜಕರಾಗಿ ಸಾಗರದಾಚೆಗೂ ಹೋಗಿ ಬಂದರು.
ಎಚ್‌.ಕೆ. ನಾರಾಯಣ ಮೂಲತಃ ಹಾಸನ ಜಿಲ್ಲೆಯ ಹೊಳೆನರಸೀಪುರದವರು. ತಂದೆ ಕೇಶವಯ್ಯನವರಿಂದ ಪ್ರಾಥಮಿಕ ಸಂಗೀತ ಶಿಕ್ಷಣ ಪಡೆದರು. ಮೈಸೂರಿಗೆ ಬಂದ ನಂತರ ವಿದ್ವಾಂಸ ಆರ್‌.ಕೆ. ಶ್ರೀಕಂಠನ್‌ ಅವರ ಬಳಿ ಸಂಗೀತ ವಿದ್ಯೆ ಮುಂದುವರಿಸಿದರು. ವಿದ್ವತ್‌ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸಿದರು.
1954ರಲ್ಲಿ ಮೈಸೂರು ಆಕಾಶವಾಣಿ ಕೈ ಬೀಸಿ ಕರೆಯಿತು. ನಿಲಯ ಕಲಾವಿದರಾದರು. ಪ್ರಥಮ ದರ್ಜೆ ಆಕಾಶವಾಣಿ ಕಲಾವಿದರಾದರು. ಹಿರಿಯ ಸಂಯೋಜಕರಾಗಿ ಮನ್ನಣೆ ಪಡೆದರು. ಆಕಾಶವಾಣಿ ನಿರ್ಮಾಪಕರಾಗಿ, ನಿರ್ದೇಶಕರಾಗಿ 1989ರಲ್ಲಿ ನಿವೃತ್ತರಾದರು.
ಕವಿ ನಿಸಾರ್‌ ಅಹಮದ್‌ ಅವರ ಚೊಚ್ಚಲ ದ್ವನಿಸುರುಳಿ `ನಿತ್ಯೋತ್ಸವ'ಕ್ಕೆ ನಾರಾಯಣ್‌ ಸಂಗೀತ ಸಂಯೋಜನೆ ಮಾಡಿದರು. ಜನ ಮುಗಿಬಿದ್ದು ಕ್ಯಾಸೆಟ್‌ ಕೊಂಡರು. ಅದೊಂದು ಕ್ರಾಂತಿಯೇ ಆಯಿತು. ಇದರಿಂದ ಹಲವು ದ್ವನಿಸುರುಳಿ ಸಂಸ್ಥೆಗಳು ಜನ್ಮತಾಳಿದವು.
`ರಮಣಾಂಜಲಿ' ನಾರಾಯಣ ಅವರ ಇನ್ನೊಂದು ಪ್ರಸಿದ್ಧ ದ್ವನಿಸುರುಳಿ. ರಮಣಮಹರ್ಷಿಗಳ ಸಾಹಿತ್ಯಕ್ಕೆ ಲಘುಸಂಗಿತದ ಲೇಪಹಚ್ಚಿ ಉಣಬಡಿಸಿದರು. ರಮಣಮಹರ್ಷಿಗಳ ಹಾಡುಗಳು ನಾರಾಯಣರನ್ನು ಹಲವು ದೇಶಗಳಿಗೆ ಕೊಂಡೊಯ್ದವು. ಪುರಂದರ ದಾಸರ ಪದಗಳಿಗೆ ಸಂಗೀತ ನೀಡಿರುವ ನಾರಾಯಣರು `ಕಲ್ಲು ಸಕ್ಕರೆ ಕೊಳ್ಳಿರೊ' ಎಂಬ ಹೆಸರಿನ ಕ್ಯಾಸೆಟ್‌ ಹೊರತಂದಿದ್ದಾರೆ. ಇದರಲ್ಲಿ ವಿದ್ವಾನ್‌ ವಿದ್ಯಾಭೂಷಣ್‌ ಹಾಡಿದ್ದಾರೆ. `ಅಪೂರ್ವ ಮಿಲನ' ನಾರಾಯಣರ ಇನ್ನೊಂದು ದ್ವನಿಸುರುಳಿ.
ನಾರಾಯಣ್‌ ಅವರಿಗೆ ಅಪಾರ ಗೌರವ ಪ್ರಶಸ್ತಿಗಳು ಅರಸಿ ಬಂದಿವೆ. ಕರ್ನಾಟಕ ನೃತ್ಯ ಸಂಗೀತ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಂಗೀತ ರತ್ನ ಟಿ. ಚೌಡಯ್ಯ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಸಂತ ಶಿಶುನಾಳ ಶರೀಫ ಪ್ರಶಸ್ತಿ ಮುಂತಾದವು ನಾರಾಯಣರ ಮುಡಿಗೇರಿವೆ. ಹಾಸನದಲ್ಲಿ ನಡೆದ ಐದನೇ ರಾಜ್ಯ ಸುಗಮ ಸಂಗೀತ ಸಮ್ಮೇಳನದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ನಾರಾಯಣರು ಬೆಂಗಳೂರು ವಿಜಯನಗರದ ಆರ್‌.ಪಿ.ಸಿ ಲೇಔನ್‌ನಲ್ಲಿರುವ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದರು. ತಮ್ಮ 73 ವರ್ಷ ಜೀವಿತಾವಧಿಯಲ್ಲಿ ಸುಮಾರು 60 ವರ್ಷಗಳ ಕಾಲ ಸಂಗೀತ ಸೇವೆ ಮಾಡಿದ್ದಾರೆ. ಮೊನ್ನೆ ತನಕವೂ ಅವರು ರೆಕಾರ್ಡಿಂಗ್‌ ಒತ್ತಡದಲ್ಲಿದ್ದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕಿರಿಯ ಮಗಳು ಚಂದನ ಭರತನಾಟ್ಯ ಕಲಾವಿದೆ ಹಾಗೂ ತಂಜಾವೂರು ಶೈಲಿಯ ಚಿತ್ರಕಲಾವಿದೆ. ಹಿರಿಯ ಮಗಳು ಮಂಜುಳ ಸಂಗೀತ ಕಲಾವಿದೆ. ಪತ್ನಿ ಕಾಂತ ಕಥಕ್‌ ನೃತ್ಯಕಲಾವಿದೆ. ತಮ್ಮ ಕೇಶವ ವಯೋಲಿನ್‌ ಕಲಾವಿದರು.
ಪರಂಪರೆಯ ಕೊಂಡಿ ಇನ್ನಿಲ್ಲ: ಎಚ್‌.ಆರ್‌. ಲೀಲಾವತಿ
`ನಾರಾಯಣರ ಸಾವಿನ ಸುದ್ದಿ ನನಗೆ ತೀವ್ರ ವ್ಯಥೆಯುಂಟುಮಾಡಿದೆ. ನಾವಿಬ್ಬರು ಒಟ್ಟಿಗೆ ಹಾಡಿದ ಘಳಿಗೆಗಳು ಇನ್ನೂ ಹಚ್ಚ ಹಸಿರಾಗಿವೆ. ಗಾಂಧಿಯ ಹಾಡುಗಳನ್ನು ಒಟ್ಟಿಗೆ ಹಾಡುತ್ತಿದ್ದಾಗ ದೇಶಭಕ್ತಿ ಹೊರಹೊಮ್ಮುತ್ತಿತ್ತು. ನಾರಾಯಣರು ಸುಗಮ ಸಂಗೀತದ ಪರಂಪರೆಯ ಪ್ರತಿಭೆ. ಅವರ ಸಾವು ತುಂಬಲಾಗದ ನಷ್ಟ.' ಎನ್ನುತ್ತಾರೆ ಹಿರಿಯ ಸುಗಮ ಸಂಗೀತ ಕಲಾವಿದೆ ಎಚ್‌.ಆರ್‌. ಲೀಲಾವತಿ.
ಪಿ. ಕಾಳಿಂಗರಾಯರ ನಂತರ ಕನ್ನಡ ಸುಗಮ ಸಂಗಿತಕ್ಕೆ ಹೊಸ ರೂಪಕೊಟ್ಟವರು ಎಚ್‌.ಕೆ. ನಾರಾಯಣ, ಎಚ್‌.ಆರ್‌. ಲೀಲಾವತಿ ಮತ್ತು ಪದ್ಮಚರಣ್‌. ಈ ಮೂವರು ಕಲಾವಿದರು ಸುಗಮ ಸಂಗೀತದ ತ್ರಿಮೂರ್ತಿಗಳು ಎಂದೇ ಖ್ಯಾತರಾಗಿದ್ದರು. 1950ರಿಂದ ಸುಮಾರು ಐದು ದಶಕಗಳ ಕಾಲ ಸುಗಮ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ಕೊಟ್ಟರು.
ಲೀಲಾವತಿ ನಾರಾಯಣರ ಜತೆಗಿನ ಆಕಾಶವಾಣಿಯ ನೆನಪುಗಳನ್ನು ಬಿಚ್ಚಿಟ್ಟರು. `ಅಕ್ಕ ಮಹದೇವಿ ನೃತ್ಯರೂಪಕದಲ್ಲಿ ಒಟ್ಟಿಗೆ ಹಾಡಿದೆವು. ನಮ್ಮಿಬ್ಬರಿಗೂ ಆಕಾಶವಾಣಿಯೇ ವೇದಿಕೆಯಾಗಿತ್ತು. ಅವರು 1950ರ ತನಕ ಮೈಸೂರಿನಲ್ಲಿಯೇ ಇದ್ದರು. ಅಲ್ಲಿಯತನಕ ಪದ್ಮಾಚರಣ್‌ ಸಂಯೋಜಿಸಿದ ಗೀತೆಗಳನ್ನು ಹಾಡುತ್ತಿದ್ದರು. ಬೆಂಗಳೂರಿಗೆ ತೆರಳಿದ ಮೇಲೆ ಸ್ವತಂತ್ರ ಸಂಯೋಜಕರಾದರು. ಹೆಚ್ಚು ವಚನ ದೇವರನಾಮಗಳಿಗೆ ಸಂಗೀತ ಸಂಯೋಜನೆ ಮಾಡಿದ ಖ್ಯಾತಿ ಅವರದು' ಎಂದರು.

Tuesday, June 9, 2009

ಅವರ ಯಶಸ್ವಿಯ ಹಿಂದೆ ಪ್ರೇಮಾರ ತ್ಯಾಗವಿತ್ತು

ಅವರ ಯಶಸ್ವಿಯ ಹಿಂದೆ ಪ್ರೇಮಾರ ತ್ಯಾಗವಿತ್ತು

(ಪ್ರೇಮ ಕಾರಂತ ಇನ್ನಿಲ್ಲ)


ಬಿ.ವಿ. ಕಾರಂತರು ಸ್ವರ್ಗದಲ್ಲಿ ನಾಟಕದ ತಾಲೀಮು ಆರಂಭಿಸಿದ್ದಾರಂತೆ. ನಟರಾಗಿ ವೆಂಕಿ, ಲೋಕೇಶರು ಹೋದರು. ಹಾರ್ಮೋನಿಯಂ ಗೆ ನಾಗನಾಥ ಹೋದರು. ಮೇಕಪ್‌ಗೆ ನಾಣಿ ಹೋದರು. ಸ್ಟೇಜ್‌ ಮ್ಯಾನೇಜರ್‌ ಆಗಿ ಸಿಜಿಕೆ ಹೋದರು. ಈಗ ವಸ್ತ್ರ ವಿನ್ಯಾಸಕಿಯಾಗಿ ಪ್ರೇಮಾ ಕಾರಂತ ಹೋಗಿದ್ದಾರೆ.
ಹೌದು. ಪ್ರೇಮಾ ಕಾರಂತ ಇನ್ನಿಲ್ಲ. ಬಿ.ವಿ. ಕಾರಂತ ಹೋದ ಮೇಲೆ ಪ್ರೇಮಾರಿಗೆ ಒಂಟಿತನ ಕಾಡಿತ್ತು. ಕಾರಂತ ಇಲ್ಲದ ಬದುಕು ಅವರಿಗೆ ಬೇಕಿರಲಿಲ್ಲ. `ನಿನ್ನ ಗೆಳೆಯರೆಲ್ಲಾ ನಿನ್ನ ಜೊತೆ ಬರುತ್ತಿದ್ದಾರೆ, ನನ್ನನೇಕೆ ಮರೆತಿದ್ದೀಯ ಕಾರಂತ?' ಎಂದು ಸ್ವರ್ಗದಲ್ಲಿದ್ದ ಕಾರಂತರಲ್ಲಿ ಕೇಳಿಕೊಂಡಿದ್ದರು. ಆದರೂ ಅವರ ಜತೆಗಿನ ಅಮರ ನೆನಪುಗಳೊಂದಿಗೆ ದಿನ ಕಳೆಯುತ್ತಿದ್ದರು.
ನಾಟಕಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದವರು. ವೈಯಕ್ತಿಕ ಬದುಕನ್ನು ಬಲಿಕೊಟ್ಟವರು. ಮಕ್ಕಳಾದರೆ ಎಲ್ಲಿ ನಮ್ಮರಂಗಸಂಕ್ರಾಂತಿ ಮಂಕಾಗುತ್ತದೋ ಎಂದು ಮನೆ ಮಕ್ಕಳ ಸಂಸಾರಕ್ಕೆ ತಿಲಾಂಜಲಿ ಹಾಡಿದ್ದರು. ರಂಗಭೂಮಿಯನ್ನೇ ಮಕ್ಕಳೆಂದುಕೊಂಡವರು. ದೇಶಾದ್ಯಂತ ಹರಡಿರುವ ರಂಗ ಸಮೂಹವನ್ನು ಮಕ್ಕಳಂತೆ ಪ್ರೀತಿಸಿದವರು.
ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಿಂದ ಹಿಡಿದು ಮೈಸೂರಿನ ರಂಗಾಯಣದ ವರೆಗೂ ಕಾರಂತರ ರಂಗ ಕಾಯಕಕ್ಕೆ ಪ್ರೇಮಾ ಸಾಥ್‌ ಕೊಟ್ಟರು. ಕಾರಂತರು ಹೋದಲ್ಲೆಲ್ಲಾ ಹೋದರು. ಪ್ರೀತಿಯನ್ನು ಕೊಟ್ಟು ತೆಗೆದುಕೊಳ್ಳುವ ಸಂಸಾರಿಕ ಗೂಡು ಅವರ ಕುಟುಂಬವಲ್ಲ. ನಾಟಕದ ಡೈಲಾಗ್‌ಗಳನ್ನು ಕೊಟ್ಟು ತೆಗೆದುಕೊಳ್ಳುವ ವೇದಿಕೆಯಾಗಿತ್ತು.

ಮೊನ್ನೆ ಆಸ್ಪತ್ರೆ ಮುಂದೆ ಶಿಷ್ಯರೆಲ್ಲರೂ ಸೇರಿದ್ದರು. ತಮ್ಮಜತೆಗಿನ ಒಡನಾಟವನ್ನು ಗುನುಗುನು ನೆನಪು ಮಾಡಿಕೊಳ್ಳುತ್ತಿದ್ದರು. ನಾಗಭರಣ, ಕಪ್ಪಣ್ಣ, ಜಯಶ್ರೀ, ಮಂಡ್ಯ ರಮೇಶ್‌ ಎಲ್ಲರ ನೆನಪಿನ ಬುತ್ತಿ ಬಿಚ್ಚಿಕೊಂಡಿತ್ತು.
ವೈದ್ಯರ ಕೈ ಬಿಟ್ಟಿದ್ದರು. ಎಲ್ಲವೂ ಮುಗಿದಿದೆ. ಕೃತಕ ಉಸಿರಾಟ ಯಂತ್ರ ತೆಗೆಯಬೇಕಷ್ಟೆ, ಎನ್ನುವಾಗ ತೆಗೆದುಬಿಡಿ ಎನ್ನುವ ಧೈರ್ಯ ಯಾರಿಗೂ ಇರಲಿಲ್ಲ. ಕೆಲವರು `ಇಂತಹ ಸಂದರ್ಭದಲ್ಲಿ ನನ್ನದೆಂಬ ಒಂದು ಕರುಳಿನ ಕುಡಿ ಇರಬೇಕು' ಎಂದುಕೊಳ್ಳುತ್ತಿದ್ದರು. ಆಶ್ಚರ್ಯ ಎನ್ನುವಂತೆ ನಿನ್ನೆ ರಾತ್ರಿ ಚೇತರಿಸಿಕೊಂಡಂತೆ ಕಂಡರು. ಆದರೆ ಅವರ ಚೇತರಿಕೆ ಬಹುಕ್ಷಣ ನಿಲ್ಲಲಿಲ್ಲ.
ಮನೆಮಠಕ್ಕೆ ಹೊಣೆಯಾರು?: ಮೂರು ಸಹಸ್ರ ಗ್ರಂಥಗಳು, ನೂರಾರು ಸಂಗೀತ ಉಪಕರಣಗಳು, ಕೆಸೆಟ್‌, ಸಿಡಿ, ವಸ್ತ್ರ, ಲೈಟ್ಸ್‌, ಗಿರಿನಗರದಲ್ಲಿ ಒಂದು ಮನೆ. ಇವಿಷ್ಟು ಕಾರಂತರ ಆಸ್ತಿ. ಕಾರಂತರು ಹೋದಮೇಲೆ ಪ್ರೇಮಾ ಕಾಪಾಡಿಕೊಂಡು ಬಂದರು. ಈಗ ಪ್ರೇಮಾ ಇಲ್ಲ. ಈಗ ಆಸ್ತಿ ನೋಡಿಕೊಳ್ಳುವವರಾರು ಎಂಬ ಪ್ರಶ್ನೆ ಸಹಜವಾಗಿ ಉದ್ಬವವಾಗಿದೆ.
ರಂಗವಲಯದ ಮಾತುಕತೆಯಂತೆ ಕಾರಂತರು ಸ್ಥಾಪಿಸಿದ `ಬೆನಕ' ತಂಡ ನೋಡಿಕೊಳ್ಳುತ್ತದೆ ಎಂಬ ಮಾತಿದೆ. ಬಿ.ಬಿ. ಕಾರಂತ ಟ್ರಸ್ಟ್‌ ನೋಡಿಕೊಳ್ಳುತ್ತದೆ ಎಂಬ ಇನ್ನೊಂದು ಮಾತಿದೆ. ಆದರೆ ಪ್ರೇಮಾರಿಗೆ ವೈಯಕ್ತಿಕವಾಗಿ ತಮ್ಮ ಆಸ್ತಿಯನ್ನು ಇವರಾರಿಗೂ ಕೊಡಲು ಇಷ್ಟವಿಲ್ಲ.
ಕಳೆದ ಆರು ತಿಂಗಳ ಹಿಂದೆ `ಉದಯವಾಣಿ'ಯೊಂದಿಗೆ ಮಾತನಾಡಿದ್ದ ಪ್ರೇಮಾ ತಮ್ಮ ಶಿಷ್ಯರ ಬಗ್ಗೆ ಅಸಮದಾನ ವ್ಯಕ್ತಪಡಿಸಿದ್ದರು. ನನ್ನ ನಂತರ ನನ್ನ ಮನೆ, ಮಠ ಅಧ್ಯಯನ ಕೇಂದ್ರವಾಗಬೇಕು. ಅದನ್ನು ಸರ್ಕಾರವೇ ತೆರೆಯಬೇಕು ಎಂದಿದ್ದರು.
ಬಿ.ವಿ. ಕಾರಂತ ಅಧ್ಯಯನ ಕೇಂದ್ರಕ್ಕಾಗಿ ಪ್ರೇಮಾ ಒಂಟಿಯಾಗಿ ಹೋರಾಡಿದ್ದರು. ವಿಧಾನಸೌಧದ ಮೆಟ್ಟಿಲು ಸವೆಸಿದ್ದರು. ಆದರೆ ಅವರ ಕನಸು ಕೈಗೂಡಲಿಲ್ಲ.
ಏನೇ ಆಗಲಿ. ರಂಗಭೂಮಿಗಾಗಿಯೇ ಹುಟ್ಟಿ, ರಂಗ ಕಾಯಕಕ್ಕಾಗಿಯೇ ಬದುಕಿದ ಕಾರಂತರ ಕುಟುಂಬ ಬದುಕನ್ನು ಅರಿಯುವ ವಿಶ್ವ ವಿದ್ಯಾಲಯವಾದರೂ ಕಡಿಮೆಯೇ.
ಪ್ರೆಮಾಕಾರಂತ ಪ್ರೆಂಚ್‌ನ `ರಶೋಮನ್‌' ನಾಟಕ ನಿರ್ದೇಶನಕ್ಕೆ ತಯಾರಿ ನಡೆಸಿದ್ದರು. ಆಗಲೇ ಮೊದಲ ರೀಡಿಂಗ್‌ ಆಗಿತ್ತು. ಅವರ ಈ ಆಸೆಯೂ ಕೈಗೂಡಲಿಲ್ಲ.
ಕಾರಂತರು ಪ್ರೇಮಾರನ್ನು ಭೇಟಿ ಮಾಡಿ ಕೈ ಹಿಡಿದಿದ್ದೇ ಒಂದು ಕುತೂಹಲ. ಅದನ್ನು ಮತ್ತೊಮ್ಮೆ ಹೇಳಬೇಕಾಗಿಲ್ಲ. ಆದರೆ ಬಿ.ವಿ. ಕಾರಂತರ ಅತಿದೊಡ್ಡ ಯಶಸ್ವಿಗೆ ಪ್ರೇಮಾರ ತ್ಯಾಗವೇ ಅತಿದೊಡ್ಡ ಕಾರಣ.

ನನ್ನನೇಕೆ ಮರೆತೆ ಕಾರಂತ?

ನನ್ನನೇಕೆ ಮರೆತೆ ಕಾರಂತ?


(ಪ್ರೇಮಾ ಕಾರಂತರು ಬದುಕಿದ್ದಾಗ ಅವರೊಂದಿಗೆ ಆಡಿದ ಮಾತುಗಳು)

ನಾಲ್ಕು ವರುಷ ಕಳೆದವು ನೀನು ಸ್ವರ್ಗ ಸೇರಿ

ಅಲ್ಲಿಯೂ ನೀ ಮಾಡಿಕೊಂಡಿರುವೆ ನಾಟಕಕ್ಕೆ ದಾರಿ

ನೀ ಹೊರಟ ಎಂಟನೆ ದಿನವೇ ಹೊರಟ ಜಯತೀರ್ಥ ಜೋಷಿ

ಹಾರ್ಮೋನಿಯಂ ನುಡಿಸಲು ನಾಗನಾಥ.

ವೆಂಕಿ, ಲೋಕೇಶರು ಹೊರಟರು ಅಭಿನಯಿಸಲು.

ಮೇಕಪ್‌ ಮಾಡಲು ಮಲ್ಲೇಶಿ, ನಾಣಿ.

ಸಂಘಟನೆಗೆ ಹೊರಟ ಸಿ.ಜಿ.ಕೆ.

ಯಾವಾಗ ಶುರು ಮಾಡುತಿ ನಾಟಕದ ತಾಲೀಮು?

ಆದರೆ ನನ್ನನೇಕೆ ಮರೆತೆ ಕಾರಂತ?

ನಾನು ಬೇಡವೇ ನಿನಗೆ ವಸ್ತ್ರ ವಿನ್ಯಾಸ ಮಾಡಲು?


ರಂಗಭೀಷ್ಮ ಬಿ.ವಿ. ಕಾರಂತರ ಮಡದಿ ಪ್ರೇಮಾ ಕಾರಂತರ ಮನದಾಳದ ಮಾತಿನ ಸಾಲುಗಳಿವು.
ಕನ್ನಡ ರಂಗಭೂಮಿಯನ್ನು ಸಾಗರದಾಚೆಗೆ ಹಾರಿಸಿದ ದಂಪತಿಗಳಿವರು. ಉಸಿರಿನ ಕಣದಲ್ಲೂ ರಂಗಭೂಮಿಯನ್ನೇ ತುಂಬಿಕೊಂಡು ಬದುಕಿದ ರಂಗಜೋಡಿಗಳು. ಜೊಡಿಯಾಗಿಯೇ ದೆಹಲಿಗೆ ಹೋದರು. ಜೋಡಿಯಾಗಿಯೇ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಕಲಿತರು, ಜೋಡಿಯಾಗಿಯೇ ಶಿಕ್ಷಕರಾದರು, ಬಹುತೇಕ ಕಾರಂತರು ನಿರ್ದೇಶಿಸಿದ ಎಲ್ಲಾ ನಾಟಕಗಳಿಗೆ ಪ್ರೆಮಾ ಅವರೇ ವಸ್ತ್ರ ವಿನ್ಯಾಸಕಿ. ಆದರೆ ನಾಲ್ಕು ವರ್ಷಗಳ ಹಿಂದೆ ಪ್ರೇಮಾರನ್ನು ಒಬ್ಬಂಟಿಯಾಗಿ ಬಿಟ್ಟು ಕಾರಂತರು ಇಹ ಲೋಕ ತ್ಯಜಿಸಿದರು.
ಕನ್ನಡದ ಮೊದಲ ಮಹಿಳಾ ಚಲನಚಿತ್ರ ನಿರ್ದೇಶಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪ್ರೇಮಾ `ಪಣಿಯಮ್ಮ' ಮತ್ತು `ನಕ್ಕಳಾ ರಾಜಕುಮಾರಿ' ಎಂಬ ಪ್ರಶಸ್ತಿ ವಿಜೇತ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಮಕ್ಕಳ ಮೇಲೆ ಅತೀವ ಪ್ರೀತಿ ಇರುವ ಪ್ರೇಮಾ ಕಾರಂತರಿಗೆ ಮಕ್ಕಳ ರಂಗಭೂಮಿ ಮೊದಲ ಆಯ್ಕೆ. 70ರ ಹರೆಯದ ಪ್ರೇಮಾ ಈಗಲೂ ಪಾದರಸ. ಪ್ರಖ್ಯಾತ ಪ್ರೆಂಚ್‌ ಕೃತಿ `ರಶೋಮನ್‌' ಅನ್ನು ಕನ್ನಡಕ್ಕೆ ತಂದು ನಿರ್ದೇಶಿಸುವ ಹುಡುಕಾಟದಲ್ಲಿದ್ದಾರೆ. ಉದಯವಾಣಿಯೊಂದಿಗೆ ಆಡಿದ ನಾಲ್ಕು ಮಾತುಗಳು ಇಲ್ಲಿವೆ.



* ಹೇಗಿದ್ದೀರಿ? ಆರೋಗ್ಯ ಹೇಗಿದೆ?
ಆರೋಗ್ಯ ಚೆನ್ನಾಗೇನೋ ಇದೆ, ಆದರೆ ಕೆಲ ದಿನಗಳ ಹಿಂದೆ ಜಾರಿಬಿದ್ದು ಮೊಣಕಾಲಿಗೆ ಪೆಟ್ಟಾಯಿತು. ಮೆಟ್ಟಿಲುಗಳನ್ನು ಏರುವಾಗ ಸ್ವಲ್ಪ ನೋವು ಬರುತ್ತೆ.



* ಬಿ. ವಿ. ಕಾರಂತ ಅಧ್ಯಯನ ಕೇಂದ್ರ ತೆರೆಯವ ತಮ್ಮ ಹೋರಾಟ ಎಲ್ಲಿಗೆ ಬಂತು?
ವಿಧಾನ ಸೌಧದ ಮೆಟ್ಟಿಲುಗಳನ್ನು ಸವೆಸಿ ಸುಸ್ತಾದೆ. ಕೇಂದ್ರ ಸಚಿವ ಅರ್ಜುನ್‌ ಸಿಂಗ್‌ ಆಗ ಮುಖ್ಯಮಂತ್ರಿಗಳಾಗಿದ್ದ ಧರಂ ಸಿಂಗ್‌ ಅವರಿಗೆ ಪರಿಶೀಲಿಸುವಂತೆ ಪತ್ರ ಬರೆದರು. ಕನಿಷ್ಟ ಅದನ್ನು ಓದುವ ಪ್ರಯತ್ನವೂ ನಡೆಯಲಿಲ್ಲ. ನಾನು ಇನ್ನೆಷ್ಟು ದಿನ ಇರುತ್ತೀನಿ? ಕಾರಂತರ ಕೂಡಿಟ್ಟ 2000 ಪುಸ್ತಕಗಳ ಬಂಡಾರವಿದೆ. ನೂರಾರು ಸಂಗೀತ ಉಪಕರಣಗಳಿವೆ, ಲೈಟ್ಸ್, ಕಾಟ್ಯೂಮ್‌, ಕೆಸೆಟ್‌, ಸಿಡಿಗಳು ಎಲ್ಲವನ್ನೂ ಇಟ್ಟುಕೊಂಡು ನಾನೊಬ್ಬಳೇ ಮಲಗುತ್ತೇನೆ. ನೋಡೋಣ, ಬದುಕಿರುವ ವರೆಗೂ ಹೋರಾಡುತ್ತೇನೆ.



* ದೇಶಾದ್ಯಂತ ಇರುವ ಕಾರಂತರ ಶಿಷ್ಯ ಕೋಟಿ ನಿಮ್ಮ ಹೋರಾಟಕ್ಕೆ ದನಿಗೂಡಿಸಬಹುದಲ್ಲವೆ?
ಯಾರೂ ಸಹಾಯ ಮಾಡಲಿಲ್ಲ, ಸ್ವಾರ್ಥಿಗಳು. ಅವರವರ ಪಾಡಿಗೆ ಅವರಿದ್ದಾರೆ. ನಾನೂ ಕೂಡ ಸಹಾಯ ಕೇಳಿಕೊಂಡು ಹೋಗೋದಿಲ್ಲ. ಸರ್ಕಾರ ಆ ಕೆಲಸ ಮಾಡಬೇಕು ಅನ್ನೋದೆ ನನ್ನ ಆಸೆ.



* ಮಕ್ಕಳ ರಂಗಭೂಮಿ ಮೇಲೆ ಏಕೆ ಅಷ್ಟೊಂದು ಆಸಕ್ತಿ?
ಮಕ್ಕಳು ಬೆಳೆಯುವ ಚಿಗುರುಗಳು. ನಾವು ಹೇಗೆ ಬೆಳೆಸುತ್ತೇವೋ ಹಾಗೆ ಬೆಳೆಯುತ್ತವೆ, ಬಾಗುತ್ತವೆ. ರಂಗ ಶಿಕ್ಷಣದ ಮೂಲಕ ಮಾತ್ರ ಮಕ್ಕಳಲ್ಲಿ ಮನಸಲ್ಲಿ ಸಂಸ್ಕೃತಿ ಬಿತ್ತಲು ಸಾಧ್ಯ. ನಾನು ರಂಗ ಶಿಕ್ಷಣವನ್ನು ಪಠ್ಯವಾಗಿ ಅಳವಡಿಸುವಂತೆ ಬಹಳಷ್ಟು ಒತ್ತಡ ತಂದೆ. ಕಾಂಗ್ರೆಸ್‌ ಸರ್ಕಾರದಲ್ಲಿ ಬಿ.ಕೆ. ಚಂದ್ರಶೇಖರ್‌ ಮಂತ್ರಿಗಳಾಗಿದ್ದಾಗ ಭರವಸೆ ನೀಡಿದರು. ನಾನು, ಬಿ. ಜಯಶ್ರಿ. ಎಚ್‌. ಎಸ್‌. ಉಮೇಶ್‌, ಗಂಗಾಧರ ಸ್ವಾಮಿ ಕೂತು ಕಷ್ಟಪಟ್ಟು ಸರಳವಾದ ಪಠ್ಯ ಸಿದ್ದಪಡಿಸಿದೆವು. ಕಾಂಗ್ರೆಸ್‌ ಬಿತ್ತು. ಯೋಜನೆಯೂ ನೆನೆಗುದಿಗೆ ಬಿತ್ತು.



* ಕರ್ನಾಟಕಕ್ಕೆ ರಾಷ್ಟ್ರೀಯ ನಾಟಕ ಶಾಲೆ ಬೇಕೆ?
ಖಂಡಿತಾ ಬೇಡ. ರಾಷ್ಟ್ರೀಯ ನಾಟಕ ಶಾಲೆಯ ಪ್ರಾದೇಶಿಕ ಕೇಂದ್ರವಿದೆ. ನೀನಾಸಂ ರಂಗಾಯಣಗಳಿವೆ. ಇವುಗಳಿಗೇ ರಾಷ್ಟ್ರೀಯ ಮಾನ್ಯತೆ ಸಿಕ್ಕರೆ ಅಷ್ಟೆ ಸಾಕು. ಕನ್ನಡ ರಂಗಭೂಮಿ ಶ್ರೀಮಂತವಾಗಿದೆ. ನಾನೂ ಎಲ್ಲಾ ಭಾಷೆಯ ರಂಗಭೂಮಿಯನ್ನು ಹತ್ತಿರದಿಂದ ಕಂಡಿದ್ದೇನೆ. ಎನ್‌ಎಸ್‌ಡಿಗಿಂತ ಒಳ್ಳೆಯ ನಾಟಕಗಳು ಕನ್ನಡದಲ್ಲಾಗುತ್ತಿವೆ. ವಿವೇಚನೆಯಿಲ್ಲದೆ ರಾಜಕಾರಣಿಗಳ ಹಾಗೆ ಉಪವಾಸ ಮಾಡಿ ರಂಗಭೂಮಿಯನ್ನು ಸುದ್ದಿ ಮಾಡುತ್ತಾರೆ.



* ಕಾರಂತರು ಕಟ್ಟಿದ ರಂಗಾಯಣದಲ್ಲಿ ನಿಮ್ಮ ಪಾತ್ರವೇನು?
ಕಾರಂತ ಮಾಡಿಸುವ ರಂಗಾಯಣದ ನಾಟಕಗಳಿಗೆ ವಸ್ತ್ರ ವಿನ್ಯಾಸ ಮಾಡುವುದು ಬಿಟ್ಟರೆ ನಾನು ರಂಗಾಯಣಕ್ಕೆ ಏನೂ ಮಾಡಲಿಲ್ಲ.



* ಮುಂದೆ ಸಿನಿಮಾ ನಿರ್ದೇಶನ ಮಾಡುವ ಯೋಚನೆ ಇದೆಯಾ?
ನಾನು ತಯಾರಾಗಿದ್ದೀನಿ. ಆದರೆ ಹಣ ಹಾಕುವವರಿಲ್ಲ. ಕಷ್ಟ ಪಟ್ಟು ಸಿನಿಮಾ ಮಾಡಿದ್ರೆ ಟಾಕೀಸ್‌ ಕೊಡಲ್ಲ, ಬಿಡುಗಡೆ ಆಗಲ್ಲ. ಪ್ರಶಸ್ತಿ ಕೊಡ್ತಾರೆ ಅಷ್ಟೆ.
ಕಾರಂತರ ಜೊತೆಗಿನ ಯಾವುದಾದರೂ ಒಂದು ಘಟನೆ ಬಗ್ಗೆ ಹೇಳಿ?
ಹಿಂದಿನ ಘಟನೆ. `ಸಿರಿಸಂಪಿಗೆ' ನಾಟಕದ 200ನೇ ಪ್ರದರ್ಶನದ ರಿಹರ್ಸಲ್‌ಗೆ ನಟರಾರೂ ಸರಿಯಾಗಿ ಬರಲಿಲ್ಲ. ನನಗೂ ಕಾರಂತರಿಗೂ ತುಂಬಾ ಕೋಪ ಬಂತು. `ಯಾರಿಗೂ ಶಿಸ್ತಿಲ್ಲ ಈ ನಾಟಕವನ್ನ ಇಲ್ಲಿಗೇ ನಿಲ್ಲಿಸಿಬಿಡಿ' ಎಂದು ಜಗಳ ಮಾಡಿದೆ. ನಾಟಕ ಪ್ರಾರಂಭ ಆಗುವುದಕ್ಕಿಂತ ಮುಂಚೆ ಈ ನಾಟಕ ಇಲ್ಲಿಗೇ ನಿಲ್ಲಿಸುವುದಾಗಿ ಘೋಷಣೆ ಮಾಡಲು ಕಾರಂತರು ವೇದಿಕೆಗೆ ಬಂದಾಗ ಇಡೀ ಕಲಾಕ್ಷೇತ್ರ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿತ್ತು. ಗಾಬರಿಯಾದ ಕಾರಂತರು `ನೀವು ಇಷ್ಟೊಂದು ಪ್ರೀತಿಯಿಂದ ಈ ನಾಟಕ ನೋಡ್ತೀರಾ ಅಂದ ಮೇಲೆ, ನಾಟಕ ನಿಲ್ಲಿಸಲು ನಾನಾರು?' ಎನ್ನುತ್ತಾ ನಿರ್ಗಮಿಸಿದರು. ಈ ಘಟನೆ ಯಾವಾಗಲೂ ನೆನಪಾಗುತ್ತೆ.

Monday, June 8, 2009

(ಎಚ್‌.ಕೆ. ನಾರಾಯಣರು ಇಹಲೋಕ ತ್ಯಜಿಸುವುದಕ್ಕೆ ಮುಂಚೆ ಉದಯವಾಣಿಯ ಸಂವಹನ ಅಂಕಣದಲ್ಲಿ ಪ್ರಕಟಗೊಂಡ ಸಂದರ್ಶನ)

'ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ'


ಎಚ್‌.ಕೆ. ನಾರಾಯಣರ ಅಂತರಾಳ








ಅದು 1954ನೇ ಇಸವಿ. `ನಾರಾಯಣ' ನಿಗೆ ಆಗತಾನೆ ಎಸ್‌ಎಸ್‌ಎಲ್‌ಸಿ ಮುಗಿದಿತ್ತು. ಆಗ ಆತನಿಗೆ 14 ವರ್ಷ. ಕಾಲೇಜು ಕನಸು ಕಣ್ಣಿನಲ್ಲಿ ಕಟ್ಟಿರುವಾಗಲೇ `ಆಕಾಶವಾಣಿ' ಕೈ ಬೀಸಿ ಕರೆಯಿತು. ಸಣ್ಣ ವಯಸ್ಸಿನಲ್ಲೇ ದೊಡ್ಡ ಜವಾಬ್ದಾರಿ ನಿರ್ವಹಣೆ. ಆ ಹುಡುಗ ನಡೆದ ಹಾದಿಯಲ್ಲಿ ಹೆಜ್ಜೆಗಳೆಲ್ಲ ಮೈಲುಗಲ್ಲುಗಳಾದವು. ಈಗ ಆ ಹದಿನಾಲ್ಕು ಎಪ್ಪತ್ತೊಂದು ಆಗಿದೆ, ಆದರೆ ಉತ್ಸಾಹ ಮಾತ್ರ ಹಾಗೇ ಉಳಿದಿದೆ.
ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಕನ್ನಡ ಸುಗಮ ಸಂಗೀತ ಕ್ಷೇತ್ರದ ದಿಗ್ಗಜ ಎಚ್‌.ಕೆ. ನಾರಾಯಣ ಅವರು ಗಾಯಕರಾಗಿ, ಸಂಗೀತ ನಿರ್ದೇಶಕರಾಗಿ, ಆಕಾಶವಾಣಿ ಸಂಗೀತ ನಿರ್ಮಾಪಕರಾಗಿ ಮಾಡಿರುವ ಐದು ದಶಕಗಳ ಸೇವೆ, ಕರ್ನಾಟಕದ ಸಾಂಸ್ಕೃತಿಕ ಇತಿಹಾಸದಲ್ಲಿ ಅಪೂರ್ವ ಅಧ್ಯಾಯವಾಗಿದೆ.
ಎಚ್‌.ಕೆ. ನಾರಾಯಣ ಅವರು ಹುಟ್ಟಿದ್ದು ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ. ತಂದೆ ಕೇಶವಯ್ಯ ಅವರಿಂದ ಮೂಲ ಸ್ವರಗಳ ಪಾಠ. ಮೈಸೂರಿಗೆ ಬಂದ ನಂತರ ವಿದ್ವಾಂಸ ಆರ್‌.ಕೆ. ಶ್ರೀಕಂಠನ್‌ ಅವರ ಬಳಿ ಶಿಷ್ಯ ವೃತ್ತಿ. ವಿದ್ವತ್‌ ಪರೀಕ್ಷೆಯಲ್ಲಿ ಚಿನ್ನದ ಪದಕ. ಮೈಸೂರು ಆಕಾಶವಾಣಿಯಲ್ಲಿ ನಿಲಯ ಕಲಾವಿದ. ನಂತರ ಪ್ರಥಮ ದರ್ಜೆ ಕಲಾವಿದರಾಗಿ ಮನ್ನಣೆ. ಅನಂತರ ಹಿರಿಯ ಸಂಯೋಜಕನಾಗಿ ಬಡ್ತಿ. ಶೋತೃವರ್ಗದಲ್ಲಿ `ಹೊನ್ನಿನ ಕಂಠಸಿರಿ' ಹೊತ್ತ ಗಾಯಕ ಎಂದೇ ಖ್ಯಾತಿ. ನೂರಾರು ಕವಿಗಳಿಗೆ ದನಿಯಾಗಿ ಕೇಳುಗರಿಗೆ ತಣಿಯುವಷ್ಟು ಸ್ವರದೌತಣ. 1989ರಲ್ಲಿ ಆಕಾಶವಾಣಿಯಿಂದ ನಿವೃತ್ತಿ.
ನಾರಾಯಣ ಅವರ ಕೊಡುಗೆಗೆ ಸಂದ ಗೌರವ, ಪುರಸ್ಕಾರಗಳು ಅಸಂಖ್ಯಾತ. ಕರ್ನಾಟಕ ನೃತ್ಯ, ಸಂಗೀತ ಅಕಾಡೆಮಿ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಸಂಗೀತ ರತ್ನ ಟಿ. ಚೌಡಯ್ಯ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಸಂತ ಶಿಶುನಾಳ ಷರೀಫ ಪ್ರಶಸ್ತಿ ಮುಂತಾದುವು ಅವರಿಗೆ ಸಂದಿವೆ.
ನಾರಾಯಣ ಅವರನ್ನು ಐದನೇ ರಾಜ್ಯ ಸುಗಮ ಸಂಗೀತ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆಮಾಡಲಾಗಿದೆ. ಆದರೆ ಫೆ. 10ರಂದು ನಡೆಯಬೇಕಿದ್ದ ಸಮ್ಮೇಳನವನ್ನು ಕಾವೇರಿ ಹೋರಾಟದ ಪ್ರಯುಕ್ತ ಮುಂದೂಡಲಾಗಿದೆ. ಅವರೊಂದಿಗೆ ಒಂದಷ್ಟು ಮಾತುಕತೆ:




* ನಿಮ್ಮದು ಶಾಸ್ತ್ರೀಯ ಸಂಗೀತದ ಹಿನ್ನೆಲೆ. ಸುಗಮ ಸಂಗೀತದಲ್ಲಿ ಆಸಕ್ತಿ ತಳೆಯಲು ಹೇಗೆ ಸಾಧ್ಯವಾಯಿತು?
ಅದಕ್ಕೆ ಆಕಾಶವಾಣಿಯೇ ಕಾರಣ, ಆಕಾಶವಾಣಿ ಕಲಾವಿದನಾಗಿ ಶಾಸ್ತ್ರೀಯ ಸಂಗೀತದ ನೆಲೆಯಲ್ಲಿಯೇ ಸುಗಮ ಸಂಗೀತದಲ್ಲಿ ತೊಡಗಿಸಿಕೊಂಡೆ. ನನ್ನ ಸಮಕಾಲೀನರು ನನ್ನನ್ನು `ಶಾಸ್ತ್ರೀಯ ಗಾಯಕ ಪೋಲಿ ಹಾಡುಗಳನ್ನು ಹಾಡುತ್ತಾನೆ' ಎಂದು ಛೇಡಿಸುತ್ತಿದ್ದರು. ರೇಡಿಯೋದಲ್ಲಿ ಕೇಳುಗರು ನನ್ನ ದನಿಯ ನಿರೀಕ್ಷೆ ಮಾಡುತ್ತಿದ್ದರು. ಆದ್ದರಿಂದ ಭಾವಗೀತೆಯಲ್ಲಿ ಆಸಕ್ತಿ ತಳೆದೆ.




* ಪದ್ಮಚರಣ್‌, ಎಚ್‌.ಆರ್‌. ಲೀಲಾವತಿ ಮತ್ತು ನೀವು ಒಂದು ಕಾಲದ ಸುಗಮ ಸಂಗೀತದ ತ್ರಿಮೂರ್ತಿಗಳಾಗಿದ್ದಿರಿ. ಅಂದು ಈ ಕ್ಷೇತ್ರ ಹೇಗಿತ್ತು? ಈಗ ಹೇಗಿದೆ?




ಅಂದು ಮಾಧುರ್ಯವಿತ್ತು. ಸುಂದರ ಸಾಹಿತ್ಯವಿತ್ತು. ಜನ ಅದನ್ನು ಅನುಭವಿಸುತ್ತಿದ್ದರು. ಇಂದು ಆ ಮಾಧುರ್ಯ ಮಾಯವಾಗಿದೆ. ನಾವೆಲ್ಲ ಸಾಹಿತ್ಯವನ್ನು ಅಧ್ಯಯನ ಮಾಡಿ ಕವಿಯ ಭಾವನೆಗಳನ್ನು ಅರ್ಥ ಮಾಡಿಕೊಂಡು ಸ್ವರ ಸಂಯೋಜನೆ ಮಾಡುತ್ತಿದ್ದೆವು. ಈಗ ಆ ಸಂಸ್ಕೃತಿ ಇಲ್ಲ. ಟ್ಯೂನ್‌ ಆದ ಮೇಲೆ ಹಾಡು ಬರೆಯುತ್ತಾರೆ. ಕವಿಯ ಭಾವನೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ.



* ನೀವು ಅದೆಷ್ಟು ಕವಿಗಳ ಭಾವನೆಗಳಿಗೆ ದನಿಯಾಗಿದ್ದೀರಿ?
ಇಷ್ಟು ಹಾಡಿದ್ದೀನಿ, ಅಷ್ಟಕ್ಕೆ ಸಂಯೋಜನೆ ಮಾಡಿದ್ದೀನಿ ಎಂದು ಲೆಕ್ಕದಿಂದ ಗುರ್ತಿಸಿಕೊಳ್ಳಲು ನನಗಿಷ್ಟವಿಲ್ಲ. ಬೇಂದ್ರೆಯವರ ಹೆಚ್ಚು ಗೀತೆಗಳಿಗೆ ಸ್ವರ ಸಂಯೋಜನೆ ಮಾಡಿ, ಹಾಡಿದ್ದೇನೆ. ಕುವೆಂಪು, ಅಡಿಗ, ಕೆಎಸ್‌ನ, ಪುತಿನ, ನಿಸಾರ್‌ ಅಹಮದ್‌, ಲಕ್ಷ್ಮೀನಾರಾಯಣ ಭಟ್ಟ ಮುಂತಾದವರ ಕವಿತೆಗಳಿಗೆ ಸಂಯೋಜನೆ ಮಾಡಿದ್ದೇನೆ..




* ನಿಮ್ಮ ಕಾಲದಲ್ಲಿ ಆರಂಭವಾದ ಕ್ಯಾಸೆಟ್‌ ಕ್ರಾಂತಿ ಮೂಲಕ ಮನೆಮನೆಗೆ ತಲುಪಿದಿರಿ, ಅದರ ಬಗ್ಗೆ ಹೇಳಿ?
ಅವತ್ತಿಗೆ ಅದು ಕ್ರಾಂತಿಯೇ ಆಗಿತ್ತು. ನಿಸಾರ್‌ ಅಹಮದ್‌ ಅವರ ಮೊದಲ ಧ್ವನಿಸುರುಳಿ `ನಿತ್ಯೋತ್ಸವ' ಬಂದಾಗ ಜನ ಮುಗಿಬಿದ್ದು ಕೊಂಡರು. ಆಡಿಯೋ ಸಂಸ್ಥೆಗಳು ಧ್ವನಿಸುರುಳಿ ತರಲು ಮುಂದೆ ಬಂದ ಕಾರಣ ಭಕ್ತಿಗೀತೆಗಳು, ವಚನಗಳು, ದೇವರ ನಾಮಗಳು ಮನೆ ಮನೆ ತಲುಪಿದವು.




* ಆಕಾಶವಾಣಿಗೆ ಹಲವು ದಶಕಗಳನ್ನು ಧಾರೆ ಎರೆದಿದ್ದೀರಿ, ನೀವು ಅಲ್ಲಿ ಕಂಡ ವಿಶೇಷವೇನು?
ಕಂಡಿದ್ದು ಅಪಾರ. ಸಣ್ಣವನಿದ್ದಾಗಲೇ ಆಕಾಶವಾಣಿ ಬದುಕು ನೀಡಿತು. ಉನ್ನತ ಶ್ರೇಣಿಯ ಸ್ವರ ಸಂಯೋಜಕನಾದೆ. ಶಾಸ್ತ್ರೀಯ, ಸುಗಮ ಸಂಗೀತದಲ್ಲಿ `ಎ' ಶ್ರೇಣಿ ಕಲಾವಿದನಾದೆ. ನಿರ್ಮಾಪಕನಾದೆ. ಎಲ್ಲಕ್ಕಿಂತ ಮಿಗಿಲಾಗಿ ಕೇಳುಗರ ಅಪಾರ ಪ್ರೀತಿ ಸಿಕ್ಕಿತು.




* ಒಬ್ಬ ಸಂಗೀತಗಾರನಾಗಿ ಬೇರೆ ಬೇರೆ ಜನ, ಭಾಷೆ, ಸಂಸ್ಕೃತಿ, ರಾಷ್ಟ್ರೀಯತೆಗಳನ್ನು ಕಂಡಿದ್ದೀರಿ. ಆ ಅನುಭವಗಳ ನೆನಪಿದೆಯೇ?
ನೃತ್ಯ ರೂಪಕಗಳಿಗೆ ಸಂಗೀತ ಸಂಯೋಜಕನಾಗಿ ಇಂಗ್ಲೆಂಡ್‌, ರಷ್ಯಾ, ಸಿಂಗಪೂರ್‌, ಹಾಂಕಾಂಗ್‌, ಕೌಲಾಲಂಪುರ್‌, ಮಾರಿಷಸ್‌, ಶ್ರೀಲಂಕಾ, ನೇಪಾಳ ಮುಂತಾದ ದೇಶಗಳನ್ನು ಕಂಡಿದ್ದೇನೆ, ಆ ಜನಕ್ಕೆ ಭಾರತೀಯ ಸಂಗೀತ ಪ್ರಕಾರಗಳ ಮೇಲೆ ಆಕರ್ಷಣೆಯಿದೆ. ಸಾಹಿತ್ಯ ಅರ್ಥವಾಗದಿದ್ದರೂ ರಾಗ, ಲಯ, ತಾಳಗಳಿಗೆ ರೋಮಾಂಚನಗೊಳ್ಳುತ್ತಾರೆ. ಅಲ್ಲಿ ಒಂದು ಶಿಸ್ತಿದೆ. ಆ ಶಿಸ್ತು ಇಲ್ಲಿ ಹುಡುಕಿದರೂ ಸಿಗುವುದಿಲ್ಲ.




* ತಮ್ಮ ಕೌಟುಂಬಿಕ ಬದುಕಿನ ಬಗ್ಗೆ ಹೇಳಿ?
ನನ್ನ ಮಗಳು ಚಂದು ಭರತ ನಾಟ್ಯ ಕಲಾವಿದೆ, ತಂಜಾವೂರು ಶೈಲಿಯಲ್ಲಿ ಚಿತ್ರ ಕಲಾವಿದೆ. ಹಿರಿಯ ಮಗಳು ಮಂಜು, ವಾದ್ಯ ಸಂಗೀತದಲ್ಲಿ ಅವಳಿಗೆ ಆಸಕ್ತಿ, ಪತ್ನಿ ಕಾಂತ ಕಥಕ್‌ ನೃತ್ಯಗಾರ್ತಿ, ತಮ್ಮ ಕೇಶವ ನನ್ನ ಕಚೇರಿಗಳಿಗೆ ಪಿಟೀಲು ನುಡಿಸುತ್ತಾರೆ.




* ಯಾವಾಗಲೂ ನೆನಪಾಗುವ ಒಂದು ಗಳಿಗೆ ಯಾವುದು?
ಮೊದಲ ಸುಗಮ ಸಂಗೀತ ಸಮ್ಮೇಳನ ಮಂಡ್ಯದಲ್ಲಿ ನಡೆಯಿತು. ಖ್ಯಾತನಾಮ ಕವಿಗಳು, ಗಾಯಕರು ಭಾಗವಹಿಸಿದ್ದರು, ಕವಿ ಕೆಎಸ್‌ನ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಇಂದು ಆರ್ಕೆಸ್ಟ್ರಾಗಳ ಆರ್ಭಟ ಜಾಸ್ತಿಯಾಗಿದೆ. ಇತ್ತೀಚಿನ ಗಾಯಕರ ಹಾಡುಗಳು ರುಚಿಸುತ್ತಿಲ್ಲ. ಆದರೆ ಇತ್ತೀಚೆಗೆ ಎಚ್‌.ಕೆ. ನಾರಾಯಣ ಅವರ `ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ' ಹಾಡು ಕೇಳಿ ತುಂಬಾ ಸಂತೋಷವಾಯಿತು' ಎಂದರು. ಅದು ಮರೆಯಲಾಗದ ಗಳಿಗೆ.