
`ಭೂಮಿ' ಹುಡುಗರ ಸಾಹಸಗಾಥೆ
ದಿನಂಪ್ರತಿ ಕೆಲಸ ಮಾಡ್ತೀವಿ. ಅದೇ ರೋಡು, ಅದೇ ಟ್ರ್ಯಾಫಿಕ್ಕು. ಅದೇ ಆಫೀಸು, ಅದೇ ಕಂಪ್ಯೂಟರು. ಅದೇ ಬಾಸು, ಅದೇ ಕೊಲೀಗು. ಅದೇ ಊರು....ವಾರದೊಳಗೊಂದು ವೀಕ್ಲಿ ಆಫು. ಅದೇ ಫೋರಂ. ಅದೇ ಟಾಕೀಸು. ಅಂಥದ್ದೇ ಫಿಲ್ಮು. ನೋ ನೋ ನೋ ವೀಕ್ಲಿ ಆಫ್ ಬೇಡ್ವೇ ಬೇಡಾ ಓಟಿ ಮಾಡೋಣ!
ಇಷ್ಟೆಲ್ಲಾ ಮಾಡಿ, ಜೀವನದೊಳಗೆ ಒಂದಷ್ಟು ಥ್ರಿಲ್ ಬೇಡ್ವಾ? ಜೋಶ್ ಬೇಡ್ವಾ? ಕುತೂಹಲ ಬೇಡ್ವಾ? ಬೇಕಾಗಿರೋದು, ಬ್ಯಾಡದಿರೋದು ಎಲ್ಲಾನು ತುಂಬ್ಕೊಳ್ಳೋ ನೂರ್ಮಡಿ ಮೆಮೋರಿ ಹೊಂದಿರೊ ಈ ಬ್ರೈನಿಗೆ ಒಂಚೂರು ರೆಸ್ಟ್ ಬೇಡ್ವಾ? ಅಷ್ಟಕ್ಕೂ ಆ ಬಡಪಾಯಿ ಬ್ರೈನು ಹಣ ಕೇಳತ್ತಾ ಒಡವೆ ಕೇಳುತ್ತಾ ವಸ್ತ್ರ ಕೇಳುತ್ತಾ?
ಹೌದು. ಎಲ್ಲಾ ಬೇಕು ನಿಜ. ಆದ್ರೆ....ಈ ಥ್ರಿಲ್ಲು, ಜೋಶು ಇವುಗಳ ಅರ್ಥನೇ ತಿಳೀತಿಲ್ಲ! ಪೋರಂನಲ್ಲಿ ಫಿಲ್ಮ್ ನೋಡೋದಕ್ಕಿಂತ ಥ್ರಿಲ್ ಬೇಕಾ? ಕಾಫಿ ಡೇನಲ್ಲಿ ಹವರ್ಸ್ ಹವರ್ಸ್ ಕೂರೋದಕ್ಕಿಂತ ಕುತೂಹಲ ಬೇಕಾ? ರಾತ್ರಿ ಹನ್ನೆರಡು ಹತ್ತುತ್ತಲೇ ಎಂ.ಜಿ. ರೋಡಲ್ಲಿ ಹಂಡ್ರೆಡ್ ಸ್ಪಿಡ್ನಲ್ಲಿ ರೋಡ್ ರೇಸ್ ಮಾಡೋದಕ್ಕಿಂತ ಜೋಶ್ ಬೇಕಾ? .....ತಲೆ ಚಿಟ್ಟು ಹಿಡಿದು ಹೋಯ್ತು. ವಾಟ್ ಈಸ್ ಮೀನ್ ಬೈ ಜೋಶ್!?
ಬೆಟ್ಟ ಹತ್ತೊಣ: ಆ ಹುಡುಗರಿಗೆ ಬೆಟ್ಟ ಹತ್ತೊದ್ರಲ್ಲಿ ಅದೆಂಥದೋ ಜೋಶ್. ಮೆಟ್ಟಲಿವೆ ಹತ್ಕೊಂಡೋಗ್ರಯ್ಯ ಅಂದ್ರೆ ನೋ ನೋ ಅಂತಾರೆ. ಬಸ್ ಹೋಗ್ತವೆ ಹೋಗ್ರಯ್ಯ ಅಂದ್ರೆ ನೋ ನೋ ಅಂತಾರೆ. ಒಂದಥಸ್ತು ಮಹಡಿ ಹತ್ತೋಕೆ ಮುಖ ನೋಡುವ ಇವ್ರು ಸಮುದ್ರ ಮಟ್ಟದಿಂದ ಹತ್ತು ಸಾವಿರ ಅಡಿ ಎತ್ತರದ ಬೆಟ್ಟ ಹತ್ತುಲು ಮೂಖ ಮೂತಿ ನೋಡಲ್ಲ! ಎಂಥ ಹುಚ್ಚುತನ! ಇಲ್ಲ ಇಲ್ಲ... ಇದೇ ಜೋಶ್! ದಿಸ್ ಈಸ್ ವಾಟ್ ಮೀನ್ ಬೈ ಥ್ರಿಲ್.
ಅದು ಟ್ರೆಕ್ಕಿಂಗ್. ಅವರ ತಂಡದ ಹೆಸರು: `ಭೂಮಿ...ಸುತ್ತುವೆವು ನಾವು' ಅದೆಂಥಾ ದುರ್ಗಮ ಬೆಟ್ಟವಾದ್ರೂ ಸೈ. ಪಟ್ಟಿಯೊಳಗಿರುವ ಬೆಟ್ಟಗಳು: ಕೊಡಚಾದ್ರಿ ಪರ್ವತ, ಕುಮಾರ ಪರ್ವತ, ರಾಮನಗರ ಬೆಟ್ಟ, ಮಧುಗಿರಿ ಪರ್ವತ ಹಾಗೂ ಮೊನ್ನೆ ತಾನೆ ಹೋಗಿ ಬಂದ ಕರ್ನಾಟಕದ ಅತಿ ಎತ್ತರದ ಮುಳ್ಳಯ್ಯನ ಗಿರಿ ಶಿಖರ.
ಟ್ರೆಕ್ಕಿಂಗ್ ಮಾಡೋದ್ರಲ್ಲಿ ಇವರು ಅದೆಷ್ಟು ಥ್ರಿಲ್ ಆಗ್ತಾರೆ ಅಂದ್ರೆ. ಅದನ್ನು ಹೇಳೋಕೆ ಸಾಧ್ಯನೇ ಇಲ್ವಂತೆ. ಅದೊಂದು ಘಟನೆಯಾಗಿದ್ರೆ ಪಟ್ಟಂತ ಹೇಳಬಹುದಿತ್ತು. ಆದ್ರೆ ಅದೊಂದು ಅನುಭವ. ಅನುಭವಿಸಬೇಕಷ್ಟೆ ಅಂತಾರೆ.
ಅವರು ಹೇಳಿದ್ದು: ಅದು ಮುಳ್ಳಯ್ಯನ ಗಿರಿ. ನಾವು ಸಹಸ್ರ ಅಡಿ ಎತ್ತರದಲ್ಲಿದ್ವಿ. ಮೋಡದೊಳಗೆ ಮುಚ್ಚಿ ಹೋಗಿದ್ವಿ. ಎತ್ತ ನೋಡಿದರತ್ತ ಮಂಜಿನ ರಾಶಿ. ಒಬ್ಬರಿಗೊಬ್ಬರು ಕಾಣಲ್ಲ. ಹೇ.. ಇದ್ದೀಯ...ಹೀಗೆ ಮಾತಾಡ್ಬೇಕು. ಅವನ ಮೀಸೆ ಮೇಲೊಂದು ಸಣ್ಣ ಮಂಜಿನ ಹನಿ. ಮುಟ್ಟಿದರೆ ಕೆಟ್ಟೋಗುತ್ತೆ. ಬಿಡಕ್ಕಾಗುತ್ತಾ? ಕೆಮರಾ ಕಣ್ಣು ಫುಲ್ ಬಿಜಿ. ಉಶ್ಯಪ್ಪಾ! ಸುಸ್ತಾಯ್ತು. ಚಾಕಲೇಟ್ ತಿನ್ನೊಣ. ಕವರ್ ಎಸದೀರಿ ಜೋಕೆ. ಜೇಬ್ನಲ್ ಇಟ್ಕೊಳಿ. ದಿಸ್ ಈಸ್ ಎನ್ವಿರಾನ್ಮೆಂಟ್ ಫ್ರೆಂಡ್ಲಿ ಟ್ರೆಕ್ಕಿಂಗ್!
ಅಬ್ಬಾ. ಅಲ್ಲೊಂದು ಎತ್ತರದ ವ್ಯೂ ಪಾಯಿಂಟ್. ಕೆಳಗೆ ನೋಡಿದ್ರೆ, ಸ್ವರ್ಗಕ್ಕಿನ್ನು ಮೂರೇ ಗೇಣು. ಛೆ, ಮೊಬೈಲ್ ನಟ್ವರ್ಕಿಲ್ಲ. ಈ ಸುಖದ ಅನುಭವ ಹಂಚ್ಕೊಳ್ಳೋಣ ಅಂದ್ರೆ. ಸಿಕ್ಕೇ ಬಿಡ್ತು ತುತ್ತ ತುದಿ. ಅಲ್ಲೊಂದು ಪುಟ್ಟಗುಡಿ. ದೇವರಿಗೊಂದು ನಮಸ್ಕಾರ. ತಮಾಷೆ ಏನು ಗೊತ್ತಾ? ನಾವು ಕಷ್ಟಪಟ್ಟು ಟ್ರೆಕ್ ಮಾಡ್ಕೊಂಡ್ ಬಂದ್ರೆ, ಬಸ್ಸಲ್ಲಿ ಬಂದು ನಾಲ್ಕು ಮೆಟ್ಟಿಲು ಏರಿ ಏದುಸಿರು ಬಿಡುವ ಟೂರಿಸ್ಟ್ಗಳ ಸಾಧನೆಯ ಮಾತುಗಳು.
ಬೆಟ್ಟದ ತುದಿಯಲ್ಲಿ ಕುವೆಂಪು ನೆನಪಾದರು...
ಹೋಗುವೆನು ನಾ ಹೋಗುವೆನು ನಾ
ನನ್ನ ಒಲುಮೆಯ ಗೂಡಿಗೆ
ಸಿರಿ ಬನಂಗಳ ಗಿರಿಬನಂಗಳ
ಸಗ್ಗಸುಖದ ಬೀಡಿಗೆ
ಹೋಗುವೆನು ನಾ...
ನಾವು ಹತ್ತಿದ್ದು ಮುಳ್ಳಯ್ಯನಗಿರಿ, ಇಳಿದಿದ್ದು ಬಾಬಾ ಬುಡನ್ ಗಿರಿ. ಇದು ಸುಲಭದ ಚಾರಣವಲ್ಲ. ನಿಜಕ್ಕೂ ಧೈರ್ಯ ಬೇಕು. ಅದು ನಡೆದಾಡುವ ದಾರಿಯಲ್ಲ, ದಾರಿಯಿಲ್ಲದ ಬೆಟ್ಟ. ನಾವೇ ದಾರಿ ಹುಡುಕಬೇಕು. ದಾರಿ ತಪ್ಪಿದ ಮಕ್ಕಳಾದರೆ ದೇವ್ರೇ ಗತಿ! ದಿಕ್ಸೂಚಿ ಇಲ್ಲದಿದ್ದರೆ ಚಾರಣ ಕಷ್ಟ. ಗಾಯ ಗ್ಯಾರಂಟಿ. ಫಸ್ಟ್ ಏಡ್ ಬೇಕೇ ಬೇಕು. ಟ್ರೆಕ್ಕಿಂಗ್ ಅಂದ್ರೆ ಬೆನ್ನಿಗೊಂದು ಬ್ಯಾಗು ಇದ್ದೇ ಇರುತ್ತೆ. ಕೆಲವೊಂದು ಹತಾರಗಳೂ ಜತೆಯಲ್ಲಿ ಇಟ್ಕೊಂಡಿರಬೇಕು. ಟ್ರೆಕ್ಕಿಂಗ್ ಸಾಮಾಗ್ರಿಗಳು ಅಂಗಡೀಲಿ ಸಿಗ್ತವೆ. ಗುಂಡಾಗಿರುವ ಭೂಮಿನಾ ಒಂದು ಸುತ್ತು ಹಾಕಿದೆವೆಂಬ ಭಾವ ನಮ್ಮದು. ಈ ಅನುಭಾವ ಮತ್ತೆಲ್ಲಿಂದ ಸಿಗತ್ತೆ ಹೇಳಿ?
`ಭೂಮಿ' ಹುಡುಗರು ಬೆಟ್ಟ ಹತ್ತಿದ ಕತೆ ಇದು. ಇನ್ನೆಲ್ಲೂ ಈ ಥ್ರಿಲ್ ಸಿಕ್ಕೋದೆ ಇಲ್ಲಾ ಅಂತಾರೆ ಇವ್ರು. ದೇಶ ಸುತ್ತ ಬೇಕು ಇಲ್ಲಾ ಓದಬೇಕು ನಿಜ, ಮುಂದಕ್ಕೆ ಸೇರ್ಸೊದಾದ್ರೆ ಬೆಟ್ಟ ಹತ್ಬೇಕು. ಪ್ರಕೃತಿಯ ಅಂಗಳದೊಳಗೆ ಅವಳ ಸೌಂದರ್ಯ ಕಾಣುವ ಸೌಭಾಗ್ಯ ಚಾರಣ. ಕೆಲವರು ಚಾರಣವನ್ನು ಮೋಜು ಅಂದ್ಕೊಂಡಿದಾರೆ. ಚಾರಣಕ್ಕೋದವರು ಪರಿಸರವನ್ನು ಹಾಳು ಮಾಡಿ ಬರ್ತಾರೆ. ಚಾರಣ ಹೊಸದೊಂದನ್ನು ಜಗತ್ತೊಂದನ್ನು ತೋರಿಸುತ್ತದೆ. ಇದು ಮೋಜು ಅಲ್ಲವೇ ಅಲ್ಲ. ಇದು ಸಾಹಸಗಾಥೆ.ಙ
ದಿನಂಪ್ರತಿ ಕೆಲಸ ಮಾಡ್ತೀವಿ. ಅದೇ ರೋಡು, ಅದೇ ಟ್ರ್ಯಾಫಿಕ್ಕು. ಅದೇ ಆಫೀಸು, ಅದೇ ಕಂಪ್ಯೂಟರು. ಅದೇ ಬಾಸು, ಅದೇ ಕೊಲೀಗು. ಅದೇ ಊರು....ವಾರದೊಳಗೊಂದು ವೀಕ್ಲಿ ಆಫು. ಅದೇ ಫೋರಂ. ಅದೇ ಟಾಕೀಸು. ಅಂಥದ್ದೇ ಫಿಲ್ಮು. ನೋ ನೋ ನೋ ವೀಕ್ಲಿ ಆಫ್ ಬೇಡ್ವೇ ಬೇಡಾ ಓಟಿ ಮಾಡೋಣ!
ಇಷ್ಟೆಲ್ಲಾ ಮಾಡಿ, ಜೀವನದೊಳಗೆ ಒಂದಷ್ಟು ಥ್ರಿಲ್ ಬೇಡ್ವಾ? ಜೋಶ್ ಬೇಡ್ವಾ? ಕುತೂಹಲ ಬೇಡ್ವಾ? ಬೇಕಾಗಿರೋದು, ಬ್ಯಾಡದಿರೋದು ಎಲ್ಲಾನು ತುಂಬ್ಕೊಳ್ಳೋ ನೂರ್ಮಡಿ ಮೆಮೋರಿ ಹೊಂದಿರೊ ಈ ಬ್ರೈನಿಗೆ ಒಂಚೂರು ರೆಸ್ಟ್ ಬೇಡ್ವಾ? ಅಷ್ಟಕ್ಕೂ ಆ ಬಡಪಾಯಿ ಬ್ರೈನು ಹಣ ಕೇಳತ್ತಾ ಒಡವೆ ಕೇಳುತ್ತಾ ವಸ್ತ್ರ ಕೇಳುತ್ತಾ?
ಹೌದು. ಎಲ್ಲಾ ಬೇಕು ನಿಜ. ಆದ್ರೆ....ಈ ಥ್ರಿಲ್ಲು, ಜೋಶು ಇವುಗಳ ಅರ್ಥನೇ ತಿಳೀತಿಲ್ಲ! ಪೋರಂನಲ್ಲಿ ಫಿಲ್ಮ್ ನೋಡೋದಕ್ಕಿಂತ ಥ್ರಿಲ್ ಬೇಕಾ? ಕಾಫಿ ಡೇನಲ್ಲಿ ಹವರ್ಸ್ ಹವರ್ಸ್ ಕೂರೋದಕ್ಕಿಂತ ಕುತೂಹಲ ಬೇಕಾ? ರಾತ್ರಿ ಹನ್ನೆರಡು ಹತ್ತುತ್ತಲೇ ಎಂ.ಜಿ. ರೋಡಲ್ಲಿ ಹಂಡ್ರೆಡ್ ಸ್ಪಿಡ್ನಲ್ಲಿ ರೋಡ್ ರೇಸ್ ಮಾಡೋದಕ್ಕಿಂತ ಜೋಶ್ ಬೇಕಾ? .....ತಲೆ ಚಿಟ್ಟು ಹಿಡಿದು ಹೋಯ್ತು. ವಾಟ್ ಈಸ್ ಮೀನ್ ಬೈ ಜೋಶ್!?
ಬೆಟ್ಟ ಹತ್ತೊಣ: ಆ ಹುಡುಗರಿಗೆ ಬೆಟ್ಟ ಹತ್ತೊದ್ರಲ್ಲಿ ಅದೆಂಥದೋ ಜೋಶ್. ಮೆಟ್ಟಲಿವೆ ಹತ್ಕೊಂಡೋಗ್ರಯ್ಯ ಅಂದ್ರೆ ನೋ ನೋ ಅಂತಾರೆ. ಬಸ್ ಹೋಗ್ತವೆ ಹೋಗ್ರಯ್ಯ ಅಂದ್ರೆ ನೋ ನೋ ಅಂತಾರೆ. ಒಂದಥಸ್ತು ಮಹಡಿ ಹತ್ತೋಕೆ ಮುಖ ನೋಡುವ ಇವ್ರು ಸಮುದ್ರ ಮಟ್ಟದಿಂದ ಹತ್ತು ಸಾವಿರ ಅಡಿ ಎತ್ತರದ ಬೆಟ್ಟ ಹತ್ತುಲು ಮೂಖ ಮೂತಿ ನೋಡಲ್ಲ! ಎಂಥ ಹುಚ್ಚುತನ! ಇಲ್ಲ ಇಲ್ಲ... ಇದೇ ಜೋಶ್! ದಿಸ್ ಈಸ್ ವಾಟ್ ಮೀನ್ ಬೈ ಥ್ರಿಲ್.
ಅದು ಟ್ರೆಕ್ಕಿಂಗ್. ಅವರ ತಂಡದ ಹೆಸರು: `ಭೂಮಿ...ಸುತ್ತುವೆವು ನಾವು' ಅದೆಂಥಾ ದುರ್ಗಮ ಬೆಟ್ಟವಾದ್ರೂ ಸೈ. ಪಟ್ಟಿಯೊಳಗಿರುವ ಬೆಟ್ಟಗಳು: ಕೊಡಚಾದ್ರಿ ಪರ್ವತ, ಕುಮಾರ ಪರ್ವತ, ರಾಮನಗರ ಬೆಟ್ಟ, ಮಧುಗಿರಿ ಪರ್ವತ ಹಾಗೂ ಮೊನ್ನೆ ತಾನೆ ಹೋಗಿ ಬಂದ ಕರ್ನಾಟಕದ ಅತಿ ಎತ್ತರದ ಮುಳ್ಳಯ್ಯನ ಗಿರಿ ಶಿಖರ.
ಟ್ರೆಕ್ಕಿಂಗ್ ಮಾಡೋದ್ರಲ್ಲಿ ಇವರು ಅದೆಷ್ಟು ಥ್ರಿಲ್ ಆಗ್ತಾರೆ ಅಂದ್ರೆ. ಅದನ್ನು ಹೇಳೋಕೆ ಸಾಧ್ಯನೇ ಇಲ್ವಂತೆ. ಅದೊಂದು ಘಟನೆಯಾಗಿದ್ರೆ ಪಟ್ಟಂತ ಹೇಳಬಹುದಿತ್ತು. ಆದ್ರೆ ಅದೊಂದು ಅನುಭವ. ಅನುಭವಿಸಬೇಕಷ್ಟೆ ಅಂತಾರೆ.
ಅವರು ಹೇಳಿದ್ದು: ಅದು ಮುಳ್ಳಯ್ಯನ ಗಿರಿ. ನಾವು ಸಹಸ್ರ ಅಡಿ ಎತ್ತರದಲ್ಲಿದ್ವಿ. ಮೋಡದೊಳಗೆ ಮುಚ್ಚಿ ಹೋಗಿದ್ವಿ. ಎತ್ತ ನೋಡಿದರತ್ತ ಮಂಜಿನ ರಾಶಿ. ಒಬ್ಬರಿಗೊಬ್ಬರು ಕಾಣಲ್ಲ. ಹೇ.. ಇದ್ದೀಯ...ಹೀಗೆ ಮಾತಾಡ್ಬೇಕು. ಅವನ ಮೀಸೆ ಮೇಲೊಂದು ಸಣ್ಣ ಮಂಜಿನ ಹನಿ. ಮುಟ್ಟಿದರೆ ಕೆಟ್ಟೋಗುತ್ತೆ. ಬಿಡಕ್ಕಾಗುತ್ತಾ? ಕೆಮರಾ ಕಣ್ಣು ಫುಲ್ ಬಿಜಿ. ಉಶ್ಯಪ್ಪಾ! ಸುಸ್ತಾಯ್ತು. ಚಾಕಲೇಟ್ ತಿನ್ನೊಣ. ಕವರ್ ಎಸದೀರಿ ಜೋಕೆ. ಜೇಬ್ನಲ್ ಇಟ್ಕೊಳಿ. ದಿಸ್ ಈಸ್ ಎನ್ವಿರಾನ್ಮೆಂಟ್ ಫ್ರೆಂಡ್ಲಿ ಟ್ರೆಕ್ಕಿಂಗ್!
ಅಬ್ಬಾ. ಅಲ್ಲೊಂದು ಎತ್ತರದ ವ್ಯೂ ಪಾಯಿಂಟ್. ಕೆಳಗೆ ನೋಡಿದ್ರೆ, ಸ್ವರ್ಗಕ್ಕಿನ್ನು ಮೂರೇ ಗೇಣು. ಛೆ, ಮೊಬೈಲ್ ನಟ್ವರ್ಕಿಲ್ಲ. ಈ ಸುಖದ ಅನುಭವ ಹಂಚ್ಕೊಳ್ಳೋಣ ಅಂದ್ರೆ. ಸಿಕ್ಕೇ ಬಿಡ್ತು ತುತ್ತ ತುದಿ. ಅಲ್ಲೊಂದು ಪುಟ್ಟಗುಡಿ. ದೇವರಿಗೊಂದು ನಮಸ್ಕಾರ. ತಮಾಷೆ ಏನು ಗೊತ್ತಾ? ನಾವು ಕಷ್ಟಪಟ್ಟು ಟ್ರೆಕ್ ಮಾಡ್ಕೊಂಡ್ ಬಂದ್ರೆ, ಬಸ್ಸಲ್ಲಿ ಬಂದು ನಾಲ್ಕು ಮೆಟ್ಟಿಲು ಏರಿ ಏದುಸಿರು ಬಿಡುವ ಟೂರಿಸ್ಟ್ಗಳ ಸಾಧನೆಯ ಮಾತುಗಳು.
ಬೆಟ್ಟದ ತುದಿಯಲ್ಲಿ ಕುವೆಂಪು ನೆನಪಾದರು...
ಹೋಗುವೆನು ನಾ ಹೋಗುವೆನು ನಾ
ನನ್ನ ಒಲುಮೆಯ ಗೂಡಿಗೆ
ಸಿರಿ ಬನಂಗಳ ಗಿರಿಬನಂಗಳ
ಸಗ್ಗಸುಖದ ಬೀಡಿಗೆ
ಹೋಗುವೆನು ನಾ...
ನಾವು ಹತ್ತಿದ್ದು ಮುಳ್ಳಯ್ಯನಗಿರಿ, ಇಳಿದಿದ್ದು ಬಾಬಾ ಬುಡನ್ ಗಿರಿ. ಇದು ಸುಲಭದ ಚಾರಣವಲ್ಲ. ನಿಜಕ್ಕೂ ಧೈರ್ಯ ಬೇಕು. ಅದು ನಡೆದಾಡುವ ದಾರಿಯಲ್ಲ, ದಾರಿಯಿಲ್ಲದ ಬೆಟ್ಟ. ನಾವೇ ದಾರಿ ಹುಡುಕಬೇಕು. ದಾರಿ ತಪ್ಪಿದ ಮಕ್ಕಳಾದರೆ ದೇವ್ರೇ ಗತಿ! ದಿಕ್ಸೂಚಿ ಇಲ್ಲದಿದ್ದರೆ ಚಾರಣ ಕಷ್ಟ. ಗಾಯ ಗ್ಯಾರಂಟಿ. ಫಸ್ಟ್ ಏಡ್ ಬೇಕೇ ಬೇಕು. ಟ್ರೆಕ್ಕಿಂಗ್ ಅಂದ್ರೆ ಬೆನ್ನಿಗೊಂದು ಬ್ಯಾಗು ಇದ್ದೇ ಇರುತ್ತೆ. ಕೆಲವೊಂದು ಹತಾರಗಳೂ ಜತೆಯಲ್ಲಿ ಇಟ್ಕೊಂಡಿರಬೇಕು. ಟ್ರೆಕ್ಕಿಂಗ್ ಸಾಮಾಗ್ರಿಗಳು ಅಂಗಡೀಲಿ ಸಿಗ್ತವೆ. ಗುಂಡಾಗಿರುವ ಭೂಮಿನಾ ಒಂದು ಸುತ್ತು ಹಾಕಿದೆವೆಂಬ ಭಾವ ನಮ್ಮದು. ಈ ಅನುಭಾವ ಮತ್ತೆಲ್ಲಿಂದ ಸಿಗತ್ತೆ ಹೇಳಿ?
`ಭೂಮಿ' ಹುಡುಗರು ಬೆಟ್ಟ ಹತ್ತಿದ ಕತೆ ಇದು. ಇನ್ನೆಲ್ಲೂ ಈ ಥ್ರಿಲ್ ಸಿಕ್ಕೋದೆ ಇಲ್ಲಾ ಅಂತಾರೆ ಇವ್ರು. ದೇಶ ಸುತ್ತ ಬೇಕು ಇಲ್ಲಾ ಓದಬೇಕು ನಿಜ, ಮುಂದಕ್ಕೆ ಸೇರ್ಸೊದಾದ್ರೆ ಬೆಟ್ಟ ಹತ್ಬೇಕು. ಪ್ರಕೃತಿಯ ಅಂಗಳದೊಳಗೆ ಅವಳ ಸೌಂದರ್ಯ ಕಾಣುವ ಸೌಭಾಗ್ಯ ಚಾರಣ. ಕೆಲವರು ಚಾರಣವನ್ನು ಮೋಜು ಅಂದ್ಕೊಂಡಿದಾರೆ. ಚಾರಣಕ್ಕೋದವರು ಪರಿಸರವನ್ನು ಹಾಳು ಮಾಡಿ ಬರ್ತಾರೆ. ಚಾರಣ ಹೊಸದೊಂದನ್ನು ಜಗತ್ತೊಂದನ್ನು ತೋರಿಸುತ್ತದೆ. ಇದು ಮೋಜು ಅಲ್ಲವೇ ಅಲ್ಲ. ಇದು ಸಾಹಸಗಾಥೆ.ಙ