Sunday, March 7, 2010

ಚಿತ್ರ


ಗಣ­ಪ­ತಿಗೆ ರಾಷ್ಟ್ರೀಯ ಮನ್ನಣೆ!


ಬಹುಶಃ ಅವ­ರಿಗೆ ಪ್ರಕೃತಿ ಸೌಂದ­ರ್ಯದ ಅನು­ಭೂತಿ ಆಗಿ­ರ­ಬ­ಹುದು! ಕುಂಚ ಹಿಡಿದು ಕೂತರೆ ಕಲ್ಪ­ನೆಯ ಮೋಡ ಕರ­ಗಿಸಿ ಬಣ್ಣದ ಮಳೆ ತರಿ­ಸು­ತ್ತಾರೆ. ಪ್ರಕೃ­ತಿಯ ಕೌತು­ಕ­ವನ್ನು ಸರ­ಳ­ವಾಗಿ ಕೃತಿ­ಗಿ­ಳಿ­ಸು­ತ್ತಾರೆ. ಅಪ­ರೂ­ಪದ ವನ್ಯ­ಜೀ­ವಿ­ಯನ್ನು `ವ­ರ್ಣ­ಜೀವಿ'ಯಾಗಿ ಚಿತ್ರಿ­ಸು­ತ್ತಾರೆ. ಅರಣ್ಯ ಚಿತ್ರ­ಣ­ವನ್ನು ರಮ­ಣೀ­ಯ­ವಾಗಿ ವರ್ಣಿ­ಸು­ತ್ತಾರೆ. ಪ್ರಕೃ­ತಿಗೆ ಅವರ ಹೃದಯ ಮಿಡಿದು ಗೆರೆ­ಗ­ಳಲ್ಲಿ ಮೂಡು­ತ್ತದೆ. ಅವರು ಪ್ರಕೃ­ತಿ­ಯನ್ನು ಅಧ್ಯ­ಯನ ಮಾಡಿ­ದ್ದಾರೆ. ಆರಾ­ಧಿ­ಸಿ­ದ್ದಾರೆ. ಪ್ರಕೃ­ತಿಯೇ ದೇವರು ಎಂದು ನಂಬಿ­ದ್ದಾರೆ.
ಅವರು ಗಣ­ಪತಿ ಪಿ ಹೆಗಡೆ. ತಮ್ಮ ಅಪ­ರೂ­ಪದ ಚಿತ್ರ­ಕಲೆ ಮೂಲಕ ದೇಶ­ದಾ­ದ್ಯಂತ ಹೆಸರು ಮಾಡಿ­ರುವ ಕನ್ನ­ಡದ ಹುಡುಗ. ವಿಶೇಷ ಯೋಚ­ನೆ­ಗಳ ಕಲಾ­ವಿದ. ಸುತ್ತ­ಲಿನ ವಾತಾ­ವ­ರ­ಣ­ವನ್ನು ಅವರು ನೋಡುವ ದೃಷ್ಟಿಯೇ ಬೇರೆ. ಅವು­ಗ­ಳಿಗೆ ಕೊಡುವ ಅರ್ಥ­ವಿ­ವ­ರ­ಣೆಯೇ ಬೇರೆ. ಅವರ ಪ್ರತಿ ಕೃತಿ­ಯಲ್ಲೂ ಎಲ್ಲ­ರಿಗೂ ತಿಳಿ­ಯುವ ಸರಳ ಅರ್ಥ­ವಿದೆ.
ಗಣ­ಪತಿ ಹೆಗಡೆ ಅವರ ಗಣೇಶ ಕೃತಿ­ಗಳು ಜಗ­ತ್ಪ್ರ­ಸಿದ್ಧ. ಸೀರೀಸ್‌ ಆಫ್‌ ಗಣೇಶ್‌ ಸೋಲೋ ಪ್ರದ­ರ್ಶ­ನಕ್ಕೆ ಎಲ್ಲಾ ವರ್ಗದ ಮನ್ನಣೆ ಸಿಕ್ಕಿದೆ. ವಿವಿಧ ಮೀಡಿ­ಯಾ­ಗ­ಳನ್ನು ಬಳಸಿ ಮಾಡಿದ ಗಣೇಶ ಕೃತಿ­ಗಳು ಒಂದೂ ಉಳಿ­ಯ­ದಂತೆ ಖರ್ಚಾ­ಗಿವೆ!
ಬೆಂಗ­ಳೂ­ರಿನ ಕೆನ್‌ ಸ್ಕೂಲ್‌ ಆಫ್‌ ಆರ್ಟ್ಸ್‌­ನಲ್ಲಿ ಹೆಗಡೆ ಕಲಾ ಶಿಕ್ಷಣ ಪಡೆ­ದಿ­ದ್ದಾರೆ. ಅವರು ಉತ್ತರ ಕನ್ನಡ ಜಿಲ್ಲೆಯ ಕುಮುಟಾ ಪರಿ­ಸ­ರ­ದಲ್ಲಿ ಹುಟ್ಟಿ ಬೆಳೆ­ದ­ವರು. ಅವ­ರಿಗೆ ತಾತನೇ ಪ್ರೇರಣೆ. ಊರಿನ ಪರಿ­ಸರ, ಅರಣ್ಯ ದಟ್ಟ­ಣೆ­ಯಿಂದ ಪ್ರೇರಿ­ತ­ರಾ­ಗಿದ್ದ ಅವರು ಚಿತ್ರ­ಕ­ಲೆ­ಯಲ್ಲಿ ಅದ­ನ್ನೆಲ್ಲಾ ಎರಕ ಹೊಯ್ದಿ­ದ್ದಾರೆ. ಎಂಟನೇ ತರ­ಗತಿ ಕಲಿ­ಯು­ತ್ತಿ­ದ್ದಾ­ಗಲೇ ಜಪಾ­ನಿನ ಅಂತಾ­ರಾ­ಷ್ಟ್ರೀಯ ಪೈಂಟಿಂಗ್‌ ಸ್ಪರ್ಧೆ­ಯಲ್ಲಿ ಬೆಳ್ಳಿ­ಪ­ದಕ ಗೆದ್ದು ದಾಖಲೆ ನಿರ್ಮಿ­ಸಿ­ದ್ದಾರೆ.
ಈಗ ಗಣ­ಪತಿ ಹೆಗಡೆ ಇನ್ನೊಂದು ದಾಖಲೆ ಬರೆ­ದಿ­ದ್ದಾರೆ. ಪ್ರಕೃ­ತಿಯ ವಿಚಿತ್ರ ವನ್ಯ­ಜೀವಿ `ಹಲ್ಲಿ'ಗೆ ಅವರು ಕೊಟ್ಟ `ಮ­ನು­ಷ್ಯ­ತ್ವದ ಟಚ್‌' ಕೃತಿಗೆ 2009- 10ನೇ ಸಾಲಿನ ರಾಷ್ಟ್ರೀಯ ಲಲಿ­ತ­ಕಲಾ ಅಕಾ­ಡೆಮಿ ಪ್ರಶಸ್ತಿ ಸಿಕ್ಕಿದೆ. ಈ ಪ್ರತಿ­ಷ್ಠಿತ ಪ್ರಶಸ್ತಿ ಪಡೆದ ಹತ್ತು ಪ್ರಬುದ್ಧ ಕಲಾ­ವಿ­ದ­ರಲ್ಲಿ ಕರ್ನಾ­ಟ­ಕದ ಗಣ­ಪತಿ ಹೆಗಡೆ ಕೂಡ ಒಬ್ಬರು.
ಉದ­ಯ­ವಾಣಿ ಸೇರಿ­ದಂತೆ ಹಲವು ಪತ್ರಿ­ಕೆ­ಗ­ಳಲ್ಲಿ , ಕತೆ­ಗ­ಳಿಗೆ ಬಣ್ಣದ ದೃಷ್ಟಾಂತ ಕೊಡುತ್ತಾ ಯಾವ ಗಾಡ್‌­ಫಾ­ದ­ರ್‌­ಗಳೂ ಇಲ್ಲದೆ ಸ್ವಂತ ಶಕ್ತಿ­ಯಿಂದ ಬೆಳೆದ 35ರ ಹರೆ­ಯದ ಗಣ­ಪತಿ ಹೆಗಡೆ ಈಗ ಇನ್ಪೋ­ಸಿ­ಸ್‌­ನಲ್ಲಿ ಕ್ರಿಯೆ­ಟಿವ್‌ ಡಿಸೈ­ನರ್‌!

ಗಣ­ಪನ ಜೊತೆ ಉದ­ಯ­ವಾಣಿ ಮಾತು­ಕತೆ.

* ಎಂಟನೇ ತರ­ಗ­ತಿ­ಯಲ್ಲಿ ಮುಡಿ­ಗೇ­ರಿದ ಅಂತಾ­ರಾ­ಷ್ಟ್ರೀಯ ಪ್ರಶಸ್ತಿ ಹಾಗೂ ಈಗ ಗಳಿ­ಸಿದ ರಾಷ್ಟ್ರೀಯ ಪ್ರಶ­ಸ್ತಿ­ಯಲ್ಲಿ ಏನು ವ್ಯತ್ಯಾಸ ಕಂಡಿರಿ?

ಆಗಿನ ಅಂತಾ­ರಾ­ಷ್ಟ್ರೀಯ ಪ್ರಶಸ್ತಿ ಚಿತ್ರ­ಕ­ಲೆ­ಯನ್ನು ಬಹಳ ಗಂಭೀ­ರ­ವಾಗಿ ತೆಗೆ­ದು­ಕೊ­ಳ್ಳಲು ಪ್ರೇರಣೆ ಆಯಿತು. ಈಗಿನ ರಾಷ್ಟ್ರೀಯ ಪ್ರಶಸ್ತಿ ವಿಶಾಲ ಕಲಾ ಜಗ­ತ್ತಿ­ನೊ­ಳಗೆ ಇನ್ನಷ್ಟು ಆಳ­ವಾಗಿ ಇಳಿ­ಯುವ ವಿಶ್ವಾಸ ತುಂಬಿತು.

* ನಿಮ್ಮ ಕೃತಿ­ಗಳು ಪಕೃ­ತಿಯ ಪ್ರತಿ­ಬಿಂ­ಬ­ಗಳು. ವನ್ಯ­ಜೀವಿ ವೈಶಿ­ಷ್ಟ್ಯ­ಗಳು. ಏನು ಇದರ ವಿಶೇಷ?

ಇದಕ್ಕೆ ನಮ್ಮೂ­ರಿನ ಸುಂದರ ಪರಿ­ಸರ ಹಾಗೂ ನನ್ನ ತಾತ ಕಾರಣ. ಅರ್ಚ­ಕ­ರಾ­ಗಿದ್ದ ತಾತ ಪೂಜಿ­ಸುವ ದೇವಾ­ಲಯ ಬೆಟ್ಟದ ಮೇಲಿತ್ತು. ಅಲ್ಲಿಗೆ ಹುಲಿ ಕೂಗುವ ಧನಿ ಕೇಳು­ತ್ತಿತ್ತು. ವನ್ಯ ಜೀವಿ­ಗ­ಳನ್ನು ನಾನು ಬೆರ­ಗು­ಗ­ಣ್ಣಿ­ನಿಂದ ನೋಡು­ತ್ತಿದ್ದೆ. ಅದು ಈಗ ಸಹಾ­ಯಕ್ಕೆ ಬರು­ತ್ತಿದೆ. ನನ್ನ ಕೃತಿ­ಗ­ಳಲ್ಲಿ ಪ್ರಕೃ­ತಿಯ ಉತ್ತಮ ಹಾಗೂ ಕೆಟ್ಟ ಎರಡೂ ಮುಖ­ಗ­ಳಿವೆ. ಪತಂಗ, ಮಿಡತೆ, ಪಡಚು ಉಳು, ಎಲೆ ತಿನ್ನುವ ಉಳು ಮುಂತಾದ ಕ್ರಿಮಿ ಕೀಟ­ಗ­ಳನ್ನು ಚಿತ್ರಿ­ಸುವ ಮೂಲಕ ನಿಸ­ರ್ಗದ ಸುಪ್ತ­ತೆ­ಯನ್ನು ಹೊರ­ಗಿ­ಡಲು ಪ್ರಯತ್ನ ಮಾಡಿ­ದ್ದೇನೆ.

* ತಮ್ಮನ್ನು ಮನೆ­ಮಾತು ಮಾಡಿದ `ಸೀ­ರೀಸ್‌ ಆಫ್‌ ಗಣೇಶ' ಕೃತಿ­ಗಳ ಬಗ್ಗೆ ಹೇಳಿ?

ಗಣೇಶ್‌ ಎಲ್ಲರ ಪ್ರೀತಿಯ ದೈವ. ಎಲ್ಲರ ಕೈಗೂ ಸಿಗು­ವ­ವನು. ನನ್ನ ಸೀರಿಸ್‌ ಆಫ್‌ ಗಣೇಶ ಕೃತಿ­ಗ­ಳನ್ನು ದೈವಿಕ ತತ್ವದ ಮೇಲೆ ರಚಿ­ಸಿದೆ. ಅದ­ಕ್ಕಾಗಿ `ಗ­ಣೇಶ ಉಪ­ನಿ­ಷತ್ತು' ಅಧ್ಯ­ಯನ ಮಾಡಿದೆ. ಎಲೆ­ಗಳ ಮೇಲೆ ಮಾಡಿದ ಗಣಪ ಎಲ್ಲ­ರಿಗೂ ಇಷ್ಟ­ವಾ­ದವು. ಇದಕ್ಕೆ ಉತ್ತಮ ಪ್ರತಿ­ಕ್ರಿಯೆ ಸಿಕ್ಕಿತು. ವಿದೇ­ಶ­ಗ­ಳಲ್ಲೂ ಪ್ರದ­ರ್ಶ­ನ­ಗೊಂ­ಡವು. ಈಗಲೂ ಗಣ­ಪ­ನನ್ನು ಮಾಡಿ­ದರೆ ಒಂದೂ ಉಳಿ­ಯದೆ ಖರ್ಚಾ­ಗು­ತ್ತವೆ.

* ನಿಮಗೆ ರಾಷ್ಟ್ರೀಯ ಪ್ರಶಸ್ತಿ ತಂದು ಕೊಟ್ಟ `ಹಲ್ಲಿ' ಚಿತ್ರ­ಕೃ­ತಿಯ ಬಗ್ಗೆ ಏನು ಹೇಳು­ತ್ತೀರಿ?

ನಾನು ಎಲ್ಲಾ ಜೀವಿ­ಗ­ಳಲ್ಲೂ ಸೌಂದ­ರ್ಯ­ವನ್ನು ಗುರು­ತಿ­ಸು­ತ್ತೇನೆ. ಹಲ್ಲಿ ಅಥವಾ ಊಸ­ರ­ವ­ಳ್ಳಿ­ಯಂ­ತಹ ಜೀವಿ­ಗಳು ಎಲ್ಲ­ರಿಗೂ ಭಯ ಹುಟ್ಟಿ­ಸು­ತ್ತವೆ. ಆದರೆ ನನ್ನ ದೃಷ್ಟಿ­ಯಲ್ಲಿ ಅವು ನಿಸ­ರ್ಗದ ಅಪ­ರೂಪ. ಹಲ್ಲಿಗೆ ಮನು­ಷ್ಯ­ತ್ವದ ರೂಪ ಕೊಟ್ಟೆ. ಜ್ಯೂರಿಗೆ ವಿಶೇ­ಷ­ವಾಗಿ ಕಂಡು­ಬಂತು. ಪ್ರಶ­ಸ್ತಿಗೆ ಆಯ್ಕೆ­ಯಾ­ಯಿತು.

* ಹಲವು ಪತ್ರಿ­ಕೆ­ಗ­ಳಲ್ಲಿ ಕತೆ­ಗ­ಳಿಗೆ ಚಿತ್ರ ಬರೆ­ದಿ­ದ್ದೀರಿ. ಅಲ್ಲಿಯ ಅನು­ಭವ ಹೇಗಿತ್ತು?

ಅಲ್ಲಿ ನನ­ಗೊಂದು ಮನ್ನಣೆ ದೊರೆ­ಯಿತು. `ಅಂ­ಧ­ಪರ್ವ' ಧಾರ­ವಾ­ಹಿಗೆ ಬರೆದ ಚಿತ್ರ ಬಹಳ ಹೆಸರು ತಂದು ಕೊಟ್ಟಿತು.