
ಗಣಪತಿಗೆ ರಾಷ್ಟ್ರೀಯ ಮನ್ನಣೆ!
ಬಹುಶಃ ಅವರಿಗೆ ಪ್ರಕೃತಿ ಸೌಂದರ್ಯದ ಅನುಭೂತಿ ಆಗಿರಬಹುದು! ಕುಂಚ ಹಿಡಿದು ಕೂತರೆ ಕಲ್ಪನೆಯ ಮೋಡ ಕರಗಿಸಿ ಬಣ್ಣದ ಮಳೆ ತರಿಸುತ್ತಾರೆ. ಪ್ರಕೃತಿಯ ಕೌತುಕವನ್ನು ಸರಳವಾಗಿ ಕೃತಿಗಿಳಿಸುತ್ತಾರೆ. ಅಪರೂಪದ ವನ್ಯಜೀವಿಯನ್ನು `ವರ್ಣಜೀವಿ'ಯಾಗಿ ಚಿತ್ರಿಸುತ್ತಾರೆ. ಅರಣ್ಯ ಚಿತ್ರಣವನ್ನು ರಮಣೀಯವಾಗಿ ವರ್ಣಿಸುತ್ತಾರೆ. ಪ್ರಕೃತಿಗೆ ಅವರ ಹೃದಯ ಮಿಡಿದು ಗೆರೆಗಳಲ್ಲಿ ಮೂಡುತ್ತದೆ. ಅವರು ಪ್ರಕೃತಿಯನ್ನು ಅಧ್ಯಯನ ಮಾಡಿದ್ದಾರೆ. ಆರಾಧಿಸಿದ್ದಾರೆ. ಪ್ರಕೃತಿಯೇ ದೇವರು ಎಂದು ನಂಬಿದ್ದಾರೆ.
ಅವರು ಗಣಪತಿ ಪಿ ಹೆಗಡೆ. ತಮ್ಮ ಅಪರೂಪದ ಚಿತ್ರಕಲೆ ಮೂಲಕ ದೇಶದಾದ್ಯಂತ ಹೆಸರು ಮಾಡಿರುವ ಕನ್ನಡದ ಹುಡುಗ. ವಿಶೇಷ ಯೋಚನೆಗಳ ಕಲಾವಿದ. ಸುತ್ತಲಿನ ವಾತಾವರಣವನ್ನು ಅವರು ನೋಡುವ ದೃಷ್ಟಿಯೇ ಬೇರೆ. ಅವುಗಳಿಗೆ ಕೊಡುವ ಅರ್ಥವಿವರಣೆಯೇ ಬೇರೆ. ಅವರ ಪ್ರತಿ ಕೃತಿಯಲ್ಲೂ ಎಲ್ಲರಿಗೂ ತಿಳಿಯುವ ಸರಳ ಅರ್ಥವಿದೆ.
ಗಣಪತಿ ಹೆಗಡೆ ಅವರ ಗಣೇಶ ಕೃತಿಗಳು ಜಗತ್ಪ್ರಸಿದ್ಧ. ಸೀರೀಸ್ ಆಫ್ ಗಣೇಶ್ ಸೋಲೋ ಪ್ರದರ್ಶನಕ್ಕೆ ಎಲ್ಲಾ ವರ್ಗದ ಮನ್ನಣೆ ಸಿಕ್ಕಿದೆ. ವಿವಿಧ ಮೀಡಿಯಾಗಳನ್ನು ಬಳಸಿ ಮಾಡಿದ ಗಣೇಶ ಕೃತಿಗಳು ಒಂದೂ ಉಳಿಯದಂತೆ ಖರ್ಚಾಗಿವೆ!
ಬೆಂಗಳೂರಿನ ಕೆನ್ ಸ್ಕೂಲ್ ಆಫ್ ಆರ್ಟ್ಸ್ನಲ್ಲಿ ಹೆಗಡೆ ಕಲಾ ಶಿಕ್ಷಣ ಪಡೆದಿದ್ದಾರೆ. ಅವರು ಉತ್ತರ ಕನ್ನಡ ಜಿಲ್ಲೆಯ ಕುಮುಟಾ ಪರಿಸರದಲ್ಲಿ ಹುಟ್ಟಿ ಬೆಳೆದವರು. ಅವರಿಗೆ ತಾತನೇ ಪ್ರೇರಣೆ. ಊರಿನ ಪರಿಸರ, ಅರಣ್ಯ ದಟ್ಟಣೆಯಿಂದ ಪ್ರೇರಿತರಾಗಿದ್ದ ಅವರು ಚಿತ್ರಕಲೆಯಲ್ಲಿ ಅದನ್ನೆಲ್ಲಾ ಎರಕ ಹೊಯ್ದಿದ್ದಾರೆ. ಎಂಟನೇ ತರಗತಿ ಕಲಿಯುತ್ತಿದ್ದಾಗಲೇ ಜಪಾನಿನ ಅಂತಾರಾಷ್ಟ್ರೀಯ ಪೈಂಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿಪದಕ ಗೆದ್ದು ದಾಖಲೆ ನಿರ್ಮಿಸಿದ್ದಾರೆ.
ಈಗ ಗಣಪತಿ ಹೆಗಡೆ ಇನ್ನೊಂದು ದಾಖಲೆ ಬರೆದಿದ್ದಾರೆ. ಪ್ರಕೃತಿಯ ವಿಚಿತ್ರ ವನ್ಯಜೀವಿ `ಹಲ್ಲಿ'ಗೆ ಅವರು ಕೊಟ್ಟ `ಮನುಷ್ಯತ್ವದ ಟಚ್' ಕೃತಿಗೆ 2009- 10ನೇ ಸಾಲಿನ ರಾಷ್ಟ್ರೀಯ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ. ಈ ಪ್ರತಿಷ್ಠಿತ ಪ್ರಶಸ್ತಿ ಪಡೆದ ಹತ್ತು ಪ್ರಬುದ್ಧ ಕಲಾವಿದರಲ್ಲಿ ಕರ್ನಾಟಕದ ಗಣಪತಿ ಹೆಗಡೆ ಕೂಡ ಒಬ್ಬರು.
ಉದಯವಾಣಿ ಸೇರಿದಂತೆ ಹಲವು ಪತ್ರಿಕೆಗಳಲ್ಲಿ , ಕತೆಗಳಿಗೆ ಬಣ್ಣದ ದೃಷ್ಟಾಂತ ಕೊಡುತ್ತಾ ಯಾವ ಗಾಡ್ಫಾದರ್ಗಳೂ ಇಲ್ಲದೆ ಸ್ವಂತ ಶಕ್ತಿಯಿಂದ ಬೆಳೆದ 35ರ ಹರೆಯದ ಗಣಪತಿ ಹೆಗಡೆ ಈಗ ಇನ್ಪೋಸಿಸ್ನಲ್ಲಿ ಕ್ರಿಯೆಟಿವ್ ಡಿಸೈನರ್!
ಗಣಪನ ಜೊತೆ ಉದಯವಾಣಿ ಮಾತುಕತೆ.
* ಎಂಟನೇ ತರಗತಿಯಲ್ಲಿ ಮುಡಿಗೇರಿದ ಅಂತಾರಾಷ್ಟ್ರೀಯ ಪ್ರಶಸ್ತಿ ಹಾಗೂ ಈಗ ಗಳಿಸಿದ ರಾಷ್ಟ್ರೀಯ ಪ್ರಶಸ್ತಿಯಲ್ಲಿ ಏನು ವ್ಯತ್ಯಾಸ ಕಂಡಿರಿ?
ಆಗಿನ ಅಂತಾರಾಷ್ಟ್ರೀಯ ಪ್ರಶಸ್ತಿ ಚಿತ್ರಕಲೆಯನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಲು ಪ್ರೇರಣೆ ಆಯಿತು. ಈಗಿನ ರಾಷ್ಟ್ರೀಯ ಪ್ರಶಸ್ತಿ ವಿಶಾಲ ಕಲಾ ಜಗತ್ತಿನೊಳಗೆ ಇನ್ನಷ್ಟು ಆಳವಾಗಿ ಇಳಿಯುವ ವಿಶ್ವಾಸ ತುಂಬಿತು.
* ನಿಮ್ಮ ಕೃತಿಗಳು ಪಕೃತಿಯ ಪ್ರತಿಬಿಂಬಗಳು. ವನ್ಯಜೀವಿ ವೈಶಿಷ್ಟ್ಯಗಳು. ಏನು ಇದರ ವಿಶೇಷ?
ಇದಕ್ಕೆ ನಮ್ಮೂರಿನ ಸುಂದರ ಪರಿಸರ ಹಾಗೂ ನನ್ನ ತಾತ ಕಾರಣ. ಅರ್ಚಕರಾಗಿದ್ದ ತಾತ ಪೂಜಿಸುವ ದೇವಾಲಯ ಬೆಟ್ಟದ ಮೇಲಿತ್ತು. ಅಲ್ಲಿಗೆ ಹುಲಿ ಕೂಗುವ ಧನಿ ಕೇಳುತ್ತಿತ್ತು. ವನ್ಯ ಜೀವಿಗಳನ್ನು ನಾನು ಬೆರಗುಗಣ್ಣಿನಿಂದ ನೋಡುತ್ತಿದ್ದೆ. ಅದು ಈಗ ಸಹಾಯಕ್ಕೆ ಬರುತ್ತಿದೆ. ನನ್ನ ಕೃತಿಗಳಲ್ಲಿ ಪ್ರಕೃತಿಯ ಉತ್ತಮ ಹಾಗೂ ಕೆಟ್ಟ ಎರಡೂ ಮುಖಗಳಿವೆ. ಪತಂಗ, ಮಿಡತೆ, ಪಡಚು ಉಳು, ಎಲೆ ತಿನ್ನುವ ಉಳು ಮುಂತಾದ ಕ್ರಿಮಿ ಕೀಟಗಳನ್ನು ಚಿತ್ರಿಸುವ ಮೂಲಕ ನಿಸರ್ಗದ ಸುಪ್ತತೆಯನ್ನು ಹೊರಗಿಡಲು ಪ್ರಯತ್ನ ಮಾಡಿದ್ದೇನೆ.
* ತಮ್ಮನ್ನು ಮನೆಮಾತು ಮಾಡಿದ `ಸೀರೀಸ್ ಆಫ್ ಗಣೇಶ' ಕೃತಿಗಳ ಬಗ್ಗೆ ಹೇಳಿ?
ಗಣೇಶ್ ಎಲ್ಲರ ಪ್ರೀತಿಯ ದೈವ. ಎಲ್ಲರ ಕೈಗೂ ಸಿಗುವವನು. ನನ್ನ ಸೀರಿಸ್ ಆಫ್ ಗಣೇಶ ಕೃತಿಗಳನ್ನು ದೈವಿಕ ತತ್ವದ ಮೇಲೆ ರಚಿಸಿದೆ. ಅದಕ್ಕಾಗಿ `ಗಣೇಶ ಉಪನಿಷತ್ತು' ಅಧ್ಯಯನ ಮಾಡಿದೆ. ಎಲೆಗಳ ಮೇಲೆ ಮಾಡಿದ ಗಣಪ ಎಲ್ಲರಿಗೂ ಇಷ್ಟವಾದವು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ವಿದೇಶಗಳಲ್ಲೂ ಪ್ರದರ್ಶನಗೊಂಡವು. ಈಗಲೂ ಗಣಪನನ್ನು ಮಾಡಿದರೆ ಒಂದೂ ಉಳಿಯದೆ ಖರ್ಚಾಗುತ್ತವೆ.
* ನಿಮಗೆ ರಾಷ್ಟ್ರೀಯ ಪ್ರಶಸ್ತಿ ತಂದು ಕೊಟ್ಟ `ಹಲ್ಲಿ' ಚಿತ್ರಕೃತಿಯ ಬಗ್ಗೆ ಏನು ಹೇಳುತ್ತೀರಿ?
ನಾನು ಎಲ್ಲಾ ಜೀವಿಗಳಲ್ಲೂ ಸೌಂದರ್ಯವನ್ನು ಗುರುತಿಸುತ್ತೇನೆ. ಹಲ್ಲಿ ಅಥವಾ ಊಸರವಳ್ಳಿಯಂತಹ ಜೀವಿಗಳು ಎಲ್ಲರಿಗೂ ಭಯ ಹುಟ್ಟಿಸುತ್ತವೆ. ಆದರೆ ನನ್ನ ದೃಷ್ಟಿಯಲ್ಲಿ ಅವು ನಿಸರ್ಗದ ಅಪರೂಪ. ಹಲ್ಲಿಗೆ ಮನುಷ್ಯತ್ವದ ರೂಪ ಕೊಟ್ಟೆ. ಜ್ಯೂರಿಗೆ ವಿಶೇಷವಾಗಿ ಕಂಡುಬಂತು. ಪ್ರಶಸ್ತಿಗೆ ಆಯ್ಕೆಯಾಯಿತು.
* ಹಲವು ಪತ್ರಿಕೆಗಳಲ್ಲಿ ಕತೆಗಳಿಗೆ ಚಿತ್ರ ಬರೆದಿದ್ದೀರಿ. ಅಲ್ಲಿಯ ಅನುಭವ ಹೇಗಿತ್ತು?
ಅಲ್ಲಿ ನನಗೊಂದು ಮನ್ನಣೆ ದೊರೆಯಿತು. `ಅಂಧಪರ್ವ' ಧಾರವಾಹಿಗೆ ಬರೆದ ಚಿತ್ರ ಬಹಳ ಹೆಸರು ತಂದು ಕೊಟ್ಟಿತು.
ಬಹುಶಃ ಅವರಿಗೆ ಪ್ರಕೃತಿ ಸೌಂದರ್ಯದ ಅನುಭೂತಿ ಆಗಿರಬಹುದು! ಕುಂಚ ಹಿಡಿದು ಕೂತರೆ ಕಲ್ಪನೆಯ ಮೋಡ ಕರಗಿಸಿ ಬಣ್ಣದ ಮಳೆ ತರಿಸುತ್ತಾರೆ. ಪ್ರಕೃತಿಯ ಕೌತುಕವನ್ನು ಸರಳವಾಗಿ ಕೃತಿಗಿಳಿಸುತ್ತಾರೆ. ಅಪರೂಪದ ವನ್ಯಜೀವಿಯನ್ನು `ವರ್ಣಜೀವಿ'ಯಾಗಿ ಚಿತ್ರಿಸುತ್ತಾರೆ. ಅರಣ್ಯ ಚಿತ್ರಣವನ್ನು ರಮಣೀಯವಾಗಿ ವರ್ಣಿಸುತ್ತಾರೆ. ಪ್ರಕೃತಿಗೆ ಅವರ ಹೃದಯ ಮಿಡಿದು ಗೆರೆಗಳಲ್ಲಿ ಮೂಡುತ್ತದೆ. ಅವರು ಪ್ರಕೃತಿಯನ್ನು ಅಧ್ಯಯನ ಮಾಡಿದ್ದಾರೆ. ಆರಾಧಿಸಿದ್ದಾರೆ. ಪ್ರಕೃತಿಯೇ ದೇವರು ಎಂದು ನಂಬಿದ್ದಾರೆ.
ಅವರು ಗಣಪತಿ ಪಿ ಹೆಗಡೆ. ತಮ್ಮ ಅಪರೂಪದ ಚಿತ್ರಕಲೆ ಮೂಲಕ ದೇಶದಾದ್ಯಂತ ಹೆಸರು ಮಾಡಿರುವ ಕನ್ನಡದ ಹುಡುಗ. ವಿಶೇಷ ಯೋಚನೆಗಳ ಕಲಾವಿದ. ಸುತ್ತಲಿನ ವಾತಾವರಣವನ್ನು ಅವರು ನೋಡುವ ದೃಷ್ಟಿಯೇ ಬೇರೆ. ಅವುಗಳಿಗೆ ಕೊಡುವ ಅರ್ಥವಿವರಣೆಯೇ ಬೇರೆ. ಅವರ ಪ್ರತಿ ಕೃತಿಯಲ್ಲೂ ಎಲ್ಲರಿಗೂ ತಿಳಿಯುವ ಸರಳ ಅರ್ಥವಿದೆ.
ಗಣಪತಿ ಹೆಗಡೆ ಅವರ ಗಣೇಶ ಕೃತಿಗಳು ಜಗತ್ಪ್ರಸಿದ್ಧ. ಸೀರೀಸ್ ಆಫ್ ಗಣೇಶ್ ಸೋಲೋ ಪ್ರದರ್ಶನಕ್ಕೆ ಎಲ್ಲಾ ವರ್ಗದ ಮನ್ನಣೆ ಸಿಕ್ಕಿದೆ. ವಿವಿಧ ಮೀಡಿಯಾಗಳನ್ನು ಬಳಸಿ ಮಾಡಿದ ಗಣೇಶ ಕೃತಿಗಳು ಒಂದೂ ಉಳಿಯದಂತೆ ಖರ್ಚಾಗಿವೆ!
ಬೆಂಗಳೂರಿನ ಕೆನ್ ಸ್ಕೂಲ್ ಆಫ್ ಆರ್ಟ್ಸ್ನಲ್ಲಿ ಹೆಗಡೆ ಕಲಾ ಶಿಕ್ಷಣ ಪಡೆದಿದ್ದಾರೆ. ಅವರು ಉತ್ತರ ಕನ್ನಡ ಜಿಲ್ಲೆಯ ಕುಮುಟಾ ಪರಿಸರದಲ್ಲಿ ಹುಟ್ಟಿ ಬೆಳೆದವರು. ಅವರಿಗೆ ತಾತನೇ ಪ್ರೇರಣೆ. ಊರಿನ ಪರಿಸರ, ಅರಣ್ಯ ದಟ್ಟಣೆಯಿಂದ ಪ್ರೇರಿತರಾಗಿದ್ದ ಅವರು ಚಿತ್ರಕಲೆಯಲ್ಲಿ ಅದನ್ನೆಲ್ಲಾ ಎರಕ ಹೊಯ್ದಿದ್ದಾರೆ. ಎಂಟನೇ ತರಗತಿ ಕಲಿಯುತ್ತಿದ್ದಾಗಲೇ ಜಪಾನಿನ ಅಂತಾರಾಷ್ಟ್ರೀಯ ಪೈಂಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿಪದಕ ಗೆದ್ದು ದಾಖಲೆ ನಿರ್ಮಿಸಿದ್ದಾರೆ.
ಈಗ ಗಣಪತಿ ಹೆಗಡೆ ಇನ್ನೊಂದು ದಾಖಲೆ ಬರೆದಿದ್ದಾರೆ. ಪ್ರಕೃತಿಯ ವಿಚಿತ್ರ ವನ್ಯಜೀವಿ `ಹಲ್ಲಿ'ಗೆ ಅವರು ಕೊಟ್ಟ `ಮನುಷ್ಯತ್ವದ ಟಚ್' ಕೃತಿಗೆ 2009- 10ನೇ ಸಾಲಿನ ರಾಷ್ಟ್ರೀಯ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ. ಈ ಪ್ರತಿಷ್ಠಿತ ಪ್ರಶಸ್ತಿ ಪಡೆದ ಹತ್ತು ಪ್ರಬುದ್ಧ ಕಲಾವಿದರಲ್ಲಿ ಕರ್ನಾಟಕದ ಗಣಪತಿ ಹೆಗಡೆ ಕೂಡ ಒಬ್ಬರು.
ಉದಯವಾಣಿ ಸೇರಿದಂತೆ ಹಲವು ಪತ್ರಿಕೆಗಳಲ್ಲಿ , ಕತೆಗಳಿಗೆ ಬಣ್ಣದ ದೃಷ್ಟಾಂತ ಕೊಡುತ್ತಾ ಯಾವ ಗಾಡ್ಫಾದರ್ಗಳೂ ಇಲ್ಲದೆ ಸ್ವಂತ ಶಕ್ತಿಯಿಂದ ಬೆಳೆದ 35ರ ಹರೆಯದ ಗಣಪತಿ ಹೆಗಡೆ ಈಗ ಇನ್ಪೋಸಿಸ್ನಲ್ಲಿ ಕ್ರಿಯೆಟಿವ್ ಡಿಸೈನರ್!
ಗಣಪನ ಜೊತೆ ಉದಯವಾಣಿ ಮಾತುಕತೆ.
* ಎಂಟನೇ ತರಗತಿಯಲ್ಲಿ ಮುಡಿಗೇರಿದ ಅಂತಾರಾಷ್ಟ್ರೀಯ ಪ್ರಶಸ್ತಿ ಹಾಗೂ ಈಗ ಗಳಿಸಿದ ರಾಷ್ಟ್ರೀಯ ಪ್ರಶಸ್ತಿಯಲ್ಲಿ ಏನು ವ್ಯತ್ಯಾಸ ಕಂಡಿರಿ?
ಆಗಿನ ಅಂತಾರಾಷ್ಟ್ರೀಯ ಪ್ರಶಸ್ತಿ ಚಿತ್ರಕಲೆಯನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಲು ಪ್ರೇರಣೆ ಆಯಿತು. ಈಗಿನ ರಾಷ್ಟ್ರೀಯ ಪ್ರಶಸ್ತಿ ವಿಶಾಲ ಕಲಾ ಜಗತ್ತಿನೊಳಗೆ ಇನ್ನಷ್ಟು ಆಳವಾಗಿ ಇಳಿಯುವ ವಿಶ್ವಾಸ ತುಂಬಿತು.
* ನಿಮ್ಮ ಕೃತಿಗಳು ಪಕೃತಿಯ ಪ್ರತಿಬಿಂಬಗಳು. ವನ್ಯಜೀವಿ ವೈಶಿಷ್ಟ್ಯಗಳು. ಏನು ಇದರ ವಿಶೇಷ?
ಇದಕ್ಕೆ ನಮ್ಮೂರಿನ ಸುಂದರ ಪರಿಸರ ಹಾಗೂ ನನ್ನ ತಾತ ಕಾರಣ. ಅರ್ಚಕರಾಗಿದ್ದ ತಾತ ಪೂಜಿಸುವ ದೇವಾಲಯ ಬೆಟ್ಟದ ಮೇಲಿತ್ತು. ಅಲ್ಲಿಗೆ ಹುಲಿ ಕೂಗುವ ಧನಿ ಕೇಳುತ್ತಿತ್ತು. ವನ್ಯ ಜೀವಿಗಳನ್ನು ನಾನು ಬೆರಗುಗಣ್ಣಿನಿಂದ ನೋಡುತ್ತಿದ್ದೆ. ಅದು ಈಗ ಸಹಾಯಕ್ಕೆ ಬರುತ್ತಿದೆ. ನನ್ನ ಕೃತಿಗಳಲ್ಲಿ ಪ್ರಕೃತಿಯ ಉತ್ತಮ ಹಾಗೂ ಕೆಟ್ಟ ಎರಡೂ ಮುಖಗಳಿವೆ. ಪತಂಗ, ಮಿಡತೆ, ಪಡಚು ಉಳು, ಎಲೆ ತಿನ್ನುವ ಉಳು ಮುಂತಾದ ಕ್ರಿಮಿ ಕೀಟಗಳನ್ನು ಚಿತ್ರಿಸುವ ಮೂಲಕ ನಿಸರ್ಗದ ಸುಪ್ತತೆಯನ್ನು ಹೊರಗಿಡಲು ಪ್ರಯತ್ನ ಮಾಡಿದ್ದೇನೆ.
* ತಮ್ಮನ್ನು ಮನೆಮಾತು ಮಾಡಿದ `ಸೀರೀಸ್ ಆಫ್ ಗಣೇಶ' ಕೃತಿಗಳ ಬಗ್ಗೆ ಹೇಳಿ?
ಗಣೇಶ್ ಎಲ್ಲರ ಪ್ರೀತಿಯ ದೈವ. ಎಲ್ಲರ ಕೈಗೂ ಸಿಗುವವನು. ನನ್ನ ಸೀರಿಸ್ ಆಫ್ ಗಣೇಶ ಕೃತಿಗಳನ್ನು ದೈವಿಕ ತತ್ವದ ಮೇಲೆ ರಚಿಸಿದೆ. ಅದಕ್ಕಾಗಿ `ಗಣೇಶ ಉಪನಿಷತ್ತು' ಅಧ್ಯಯನ ಮಾಡಿದೆ. ಎಲೆಗಳ ಮೇಲೆ ಮಾಡಿದ ಗಣಪ ಎಲ್ಲರಿಗೂ ಇಷ್ಟವಾದವು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ವಿದೇಶಗಳಲ್ಲೂ ಪ್ರದರ್ಶನಗೊಂಡವು. ಈಗಲೂ ಗಣಪನನ್ನು ಮಾಡಿದರೆ ಒಂದೂ ಉಳಿಯದೆ ಖರ್ಚಾಗುತ್ತವೆ.
* ನಿಮಗೆ ರಾಷ್ಟ್ರೀಯ ಪ್ರಶಸ್ತಿ ತಂದು ಕೊಟ್ಟ `ಹಲ್ಲಿ' ಚಿತ್ರಕೃತಿಯ ಬಗ್ಗೆ ಏನು ಹೇಳುತ್ತೀರಿ?
ನಾನು ಎಲ್ಲಾ ಜೀವಿಗಳಲ್ಲೂ ಸೌಂದರ್ಯವನ್ನು ಗುರುತಿಸುತ್ತೇನೆ. ಹಲ್ಲಿ ಅಥವಾ ಊಸರವಳ್ಳಿಯಂತಹ ಜೀವಿಗಳು ಎಲ್ಲರಿಗೂ ಭಯ ಹುಟ್ಟಿಸುತ್ತವೆ. ಆದರೆ ನನ್ನ ದೃಷ್ಟಿಯಲ್ಲಿ ಅವು ನಿಸರ್ಗದ ಅಪರೂಪ. ಹಲ್ಲಿಗೆ ಮನುಷ್ಯತ್ವದ ರೂಪ ಕೊಟ್ಟೆ. ಜ್ಯೂರಿಗೆ ವಿಶೇಷವಾಗಿ ಕಂಡುಬಂತು. ಪ್ರಶಸ್ತಿಗೆ ಆಯ್ಕೆಯಾಯಿತು.
* ಹಲವು ಪತ್ರಿಕೆಗಳಲ್ಲಿ ಕತೆಗಳಿಗೆ ಚಿತ್ರ ಬರೆದಿದ್ದೀರಿ. ಅಲ್ಲಿಯ ಅನುಭವ ಹೇಗಿತ್ತು?
ಅಲ್ಲಿ ನನಗೊಂದು ಮನ್ನಣೆ ದೊರೆಯಿತು. `ಅಂಧಪರ್ವ' ಧಾರವಾಹಿಗೆ ಬರೆದ ಚಿತ್ರ ಬಹಳ ಹೆಸರು ತಂದು ಕೊಟ್ಟಿತು.