Sunday, October 18, 2009

ಚಿತ್ರ­ವೀಣಾ ರವಿ­ಕಿ­ರಣ್‌




ಚಿತ್ರ­ವೀ­ಣೆಯ ರವಿ­ಕಿ­ರಣ

ಅತ್ಯಂತ ಹಳೆಯ ಸಂಗೀತ ವಾದ್ಯ ಚಿತ್ರ­ವೀಣೆ. ಇದಕ್ಕೆ ಸಾವಿ­ರಾರು ವರ್ಷ­ಗಳ ಇತಿ­ಹಾಸ ಇದ್ದರೂ ಬಹಳ ಮಂದಿ ಕಂಡಿ­ರ­ಲಿ­ಕ್ಕಿಲ್ಲ. 21 ತಂತಿ ಹೊಂದಿ­ರುವ ಚಿತ್ರ­ವೀ­ಣೆಯ ಮೇಲೆ ಹಿಡಿತ ಸಾಧಿ­ಸಿದ ಸಂಗೀತ ಸಾಧ­ಕರು ಬೆರ­ಳೆ­ಣಿ­ಕೆ­ಯಷ್ಟು. ಹಾಗಾಗಿ ಈ ವಾದ್ಯ ತೆರೆ­ಮ­ರೆ­ಯಲ್ಲೇ ಉಳಿ­ಯ­ಬೇ­ಕಾ­ಯಿತು. ಈ ವಾದ್ಯ ಅಷ್ಟು ಸುಲ­ಭ­ವಾಗಿ ಕೈಗ­ತ್ತು­ವಂ­ಥ­ದ್ದಲ್ಲ, ಕೊರ­ಡಿ­ನಂ­ಥದ್ದು. ರಾಮಾ­ಯ­ಣ­ದಲ್ಲಿ ಹನು­ಮಂತ ನುಡಿ­ಸು­ತ್ತಿದ್ದ (ಹ­ನುಮ ತೋಡಿಗೆ ಕಲ್ಲು ಕರ­ಗಿ­ತಂತೆ) `ಗೋ­ಟು­ವಾದ್ಯ'ದ ಪ್ರತಿ­ರೂ­ಪವೇ ಈ ಚಿತ್ರ­ವೀಣೆ.
ಮರೆ­ಯ­ಲ್ಲಿದ್ದ ಈ ಪ್ರಾಚೀನ ವಾದ್ಯಕ್ಕೆ ಹೊಸ ಆಯಾ­ಮ­ಕೊ­ಟ್ಟ­ವರು ಮೈಸೂರು ಹುಡುಗ, ವಿಶ್ವದ ಪ್ರತಿ­ಷ್ಠಿತ `ಮಿ­ಲೇ­ನಿಯಂ ಪ್ರಶಸ್ತಿ' ಪುರ­ಸ್ಕೃತ ಚಿತ್ರ­ವೀಣಾ ಎನ್‌. ರವಿ­ಕಿ­ರಣ್‌!
ಕೇವಲ ಒಬ್ಬನೇ ಒಬ್ಬ ಸಂಗೀತ ಸಾಧ­ಕ­ನಿಂದ ಅಳಿ­ವಿನ ಹಂಚಿ­ನ­ಲ್ಲಿದ್ದ ಚಿತ್ರ­ವೀಣೆ ಇಂದು ಜಗ­ತ್ತಿ­ನಾ­ದ್ಯಂತ ಮಿಡಿ­ಯು­ತ್ತಿದೆ. ಚಿತ್ರ­ವೀ­ಣೆಗೆ ಜೀವ­ತುಂ­ಬಿದ ರವಿ­ಕಿ­ರಣ್‌ ಕೂಡ ಜಗ­ತ್ಪ್ರ­ಸಿ­ದ್ಧ­ವಾಗಿ ರೂಪು­ಗೊಂ­ಡಿ­ದ್ದಾರೆ. ಸತತ 24 ಗಂಟೆ ಚಿತ್ರ­ವೀಣೆ ನುಡಿಸಿ ವಿಶ್ವದ ಗಮನ ಸೆಳೆ­ದಿ­ದ್ದಾರೆ. 325 ರಾಗ­ಗಳು, 175 ತಾಳ­ಗ­ಳನ್ನು ರವಿ­ಕಿ­ರಣ್‌ ತಮ್ಮ­ದಾ­ಗಿ­ಸಿ­ಕೊಂ­ಡಿ­ದ್ದಾರೆ.
ರವಿ­ಕಿ­ರಣ್‌ ಜಗ­ತ್ತಿನ ಅಪ­ರೂಪ. ಸಂಗೀ­ತ­ವನ್ನು ತಮ್ಮ ವಿಶಿ­ಷ್ಟ­ವಾದ ಲೆಕ್ಕಾ­ಚಾ­ರ­ಗ­ಳಿಂದ ಪ್ರಸ್ತು­ತ­ಪ­ಡಿ­ಸುವ ಪ್ರತಿ­ಭಾ­ವಂತ. ಅವರ ಹಾಡ­ಗಾ­ರಿಕೆ ಆಗಲೀ ನುಡಿ­ಸು­ಗಾ­ರಿಕೆ ಆಗಲೀ ಅಪ್ಪಟ ಶಾಸ್ತ್ರ­ಬದ್ಧ. ರಾಗ, ತಾಳ, ಕೃತಿ­ಗಳ ರಸ­ವನ್ನು ತಮ್ಮ ಚಿತ್ರ­ವೀ­ಣೆಯ ಮೂಲಕ ಬಹಳ ಶಾಸ್ತ್ರೀ­ಯ­ವಾಗಿ ಉಣ­ಬ­ಡಿ­ಸು­ವಲ್ಲಿ ಅವರು ಅಪ್ರ­ತಿ­ಮರು. ಚಿತ್ರ­ವೀ­ಣೆಯ ಮೇಲೆ ಅವ­ರಿ­ಗಿ­ರುವ ಹಿಡಿತ ನೋಡಿ­ದರೆ, ರವಿ­ಕಿ­ರಣ್‌ ಚಿತ್ರ­ವೀ­ಣೆ­ಗಾ­ಗಿಯೇ ಜನ್ಮ­ತಾ­ಳಿ­ದ್ದಾರೆ ಎಂಬ ತುಡಿತ ರಸಿ­ಕ­ರಲ್ಲಿ ಮೂಡು­ತ್ತದೆ.
ಖ್ಯಾತ ಸಿತಾರ್‌ ವಾದಕ ಪಂಡಿತ್‌ ರವಿ­ಶಂ­ಕರ್‌ ಅವರು ಒಮ್ಮೆ ರವಿ­ಕಿ­ರಣ್‌ ಅವರ ಬಗ್ಗೆ ಮಾತ­ನಾ­ಡು­ವಾಗ `ನಿ­ಮಗೆ ದೇವ­ರಲ್ಲಿ ನಂಬಿಕೆ ಇಲ್ಲ­ದಿ­ದ್ದರೆ ನೀವು ಎನ್‌. ರವಿ­ಕಿ­ರಣ್‌ ಅವ­ರನ್ನು ನೋಡಿ' ಎಂದು ಹೇಳಿದ ಮಾತು ರವಿ­ಕಿ­ರಣ್‌ ಅವರ ವಿದ್ಯೆ­ಯನ್ನು ಎತ್ತಿ ಹಿಡಿ­ದಿದೆ. ರೇಡಿಯೋ ಆಸ್ಟ್ರೇ­ಲಿಯಾ ರವಿ­ಕಿ­ರಣ್‌ ಅವ­ರನ್ನು `ಗ್ರೇ­ಟೆಸ್ಟ್‌ ಸ್ಲ್ಕ್ರೆಡ್‌ ಇನ್‌­ಸ್ಟ್ರು­ಮೆಂ­ಟ­ಲಿಸ್ಟ್‌' ಎಂದು ಕರೆದು ಅವರ ಪ್ರಬು­ದ್ಧ­ತೆ­ಯನ್ನು ಜಗ­ತ್ತಿಗೆ ಸಾರಿದೆ. `ಇಂ­ಡಿ­ಯನ್‌ ಮೆಸಾರ್ಟ್‌' ಎಂದೇ ಜಗ­ತ್ತಿ­ನೆ­ಲ್ಲೆಡೆ ಎನ್‌. ರವಿ­ಕಿ­ರಣ್‌ ಪ್ರಖ್ಯಾ­ತರು.

ಬಾಲ ಸಂಗೀತ ಸಾಮ್ರಾಟ
ತಮ್ಮ ಎರ­ಡನೇ ವಯ­ಸ್ಸಿ­ನಲ್ಲೇ ಸಂಗೀತ ಕಚೇರಿ ನೀಡಿದ ರವಿ­ಕಿ­ರಣ್‌ ರಸಿ­ಕರ ಮನ­ಸ್ಸಿ­ನಲ್ಲಿ ಭರ­ವಸೆ ಮೂಡಿ­ಸಿ­ದರು. 1969ರಲ್ಲಿ ಬೆಂಗ­ಳೂ­ರಿನ ಮಲ್ಲೇ­ಶ್ವರಂ ಸಂಗೀತ ಸಭಾ­ದಲ್ಲಿ ತಮ್ಮ ಚೊಚ್ಚಲ ಕಚೇರಿ ನೀಡಿ­ದರು. ಬಹಳ ಚಿಕ್ಕ­ವ­ಯ­ಸ್ಸಿ­ನಲ್ಲೇ ಮದ್ರಾಸ್‌ ಸಂಗೀತ ಅಕಾ­ಡೆಮಿ ಆಯೋ­ಜಿ­ಸಿದ್ದ ಸಂಗೀತ ಕ್ವಿಜ್‌­ನಲ್ಲಿ ಕಷ್ಟದ ತಾಂತ್ರಿಕ ಪ್ರಶ್ನೆ­ಗ­ಳಿಗೆ ಉತ್ತ­ರಿಸಿ ಸ್ಕಾಲ­ರ್‌­ಶಿಪ್‌ ಪಡೆ­ದರು. ಆ ಸಂದ­ರ್ಭ­ದಲ್ಲಿ ಸಂಗೀತ ದಿಗ್ಗ­ಜ­ರಾದ ಪಂಡಿತ್‌ ರವಿ­ಶಂ­ಕರ್‌, ಎಂ.ಎಸ್‌. ಸುಬ್ಬು­ಲಕ್ಷ್ಮಿ ಅಂಥ­ವರೇ ರವಿ­ಕಿ­ರಣ್‌ ಅವರ ಸಂಗೀತ ವಿದ್ಯೆಗೆ ಮಾರು­ಹೋ­ದರು.
ಹತ್ತನೇ ವಯ­ಸ್ಸಿ­ನ­ವ­ರೆಗೆ ಗಾಯನ ಕಚೇರಿ ನೀಡು­ತಿದ್ದ ರವಿ­ಕಿ­ರಣ್‌ ನಂತರ ಚಿತ್ರ­ವೀಣೆ ಕಡೆ ಹೊರ­ಳಿ­ದರು. ಗೋಟು­ವಾದ್ಯ ಸ್ವರೂ­ಪದ ವಾದ್ಯಕ್ಕೆ ಚಿತ್ರ­ವೀಣೆ ಎಂದು ನಾಮ­ಕ­ರಣ ಮಾಡಿ­ದರು. ಆನಂ­ತರ ನಿರ್ಮಾಣ ಆಗಿದ್ದು ಇತಿ­ಹಾಸ. ಈಗ ರವಿ­ಕಿ­ರಣ್‌ ಜಗ­ತ್ತಿನ ಅತ್ಯಂತ ಶ್ರೇಷ್ಠ ಸಂಗೀ­ತ­ಗಾರ!

ಮೆಲ್ಹಾ­ರ್ಮೋ­ನಿಕಾ
ಇದು ಚಿತ್ರ­ವೀಣಾ ರವಿ­ಕಿ­ರಣ್‌ ಅವರ ಕನ­ಸಿನ ಕೂಸು. ಈ ಕಾರ್ಯ­ಕ್ರ­ಮದ ಮೂಲಕ ಜಗ­ತ್ತಿ­ನಾ­ದ್ಯಂತ ತಮ್ಮ ಪ್ರತಿಭೆ ಮೆರೆ­ದಿ­ದ್ದಾರೆ. ಬೇರೆ ಬೇರೆ ನಗ­ರ­ಗ­ಳಲ್ಲಿ ವಿವಿಧ ಖ್ಯಾತ­ನಾಮ ಸಂಗೀ­ತ­ಗಾ­ರರ ಜತೆ­ಗೂಡಿ ಸಂಗೀತ ಸಾಧ್ಯ­ತೆ­ಗ­ಳನ್ನು ತಿಳಿ­ಸಿ­ಕೊ­ಟ್ಟಿ­ದ್ದಾರೆ. ಇದ­ರಲ್ಲಿ ಇಲ್ಲ­ದಿ­ರುವ ಸಂಗೀತ ಪ್ರಾಕಾ­ರ­ಗಳೇ ಇಲ್ಲ. ವಿವಿಧ ಸಮ­ಕಾ­ಲೀನ ಸಂಗೀತ ಪ್ರಬೇ­ಧ­ಗ­ಳನ್ನು ಇಲ್ಲಿ ಪ್ರಸ್ತು­ತ­ಪ­ಡಿ­ಸಿ­ದ್ದಾರೆ. ವಿವಿಧ ದೇಶ­ಗಳ ವಾದ್ಯ­ಗಳು ಮಿಲ್ಹಾ­ರ್ಮೋ­ನಿಕಾ ಕಾರ್ಯ­ಕ್ರ­ಮ­ದಲ್ಲಿ ಒಂದಾ­ಗು­ತ್ತವೆ. ಆ ಮೂಲಕ ಎಲ್ಲಾ ಸಂಗೀತ ಪ್ರಾಕಾ­ರ­ಗಳ ಮೂಲ ಒಂದೇ ಎಂದು ಪ್ರತಿ­ಪಾ­ದಿ­ಸಿ­ದ್ದಾರೆ. ವಿಶ್ವ­ದಾ­ದ್ಯಂತ ಹಲವು ನಗ­ರ­ಗ­ಳಲ್ಲಿ ಮೆಲ್ಹಾ­ರ್ಮೋ­ನಿಕಾ ನಡೆ­ದಿದೆ. ಬೇಸ­ರದ ಸಂಗತಿ ಎಂದರೆ ಈವ­ರೆಗೆ ಬೆಂಗ­ಳೂ­ರಿ­ನಲ್ಲಿ ನಡೆ­ದಿಲ್ಲ!

ಸಂಗೀ­ತ­ದಿಂದ ಸಾಮ­ರಸ್ಯ
ಹಲವು ದಶ­ಕ­ಗ­ಳಿಂದ ಅಸಂ­ಖ್ಯಾತ ದೇಶ­ಗ­ಳನ್ನು ಪ್ರವಾಸ ಮಾಡಿ, ಬೇರೆ ಬೇರೆ ಜನ, ಬೇರೆ ಬೇರೆ ಸಂಸ್ಕೃತಿ, ನೆಲ-ಜಲ ಅಭಿ­ರುಚಿ ಕಂಡಿ­ರುವ ರವಿ­ಕಿ­ರಣ್‌ ಅವ­ರಿಗೆ ಸಂಗೀ­ತ­ದಿಂದ ರಾಷ್ಟ್ರ­ಗಳ ನಡು­ವಣ ಸಾಮ­ರಸ್ಯ ಸಾಧಿ­ಸ­ಬ­ಹುದು ಎಂಬ ಬಲ­ವಾದ ನಂಬಿಕೆ ಇದೆ. ಎಷ್ಟೋ ಸಂದ­ರ್ಭ­ಗ­ಳಲ್ಲಿ ಅವರು ಈ ವಿಷ­ಯ­ವನ್ನು ಹೇಳಿ­ಕೊಂ­ಡಿ­ದ್ದಾರೆ. ಆದರೆ ಅವ­ರಿಗೆ ವಿದೇ­ಶ­ಗ­ಳಲ್ಲಿ ಸಿಕ್ಕಷ್ಟು ಪ್ರೋತ್ಸಾಹ, ಬೆಂಬಲ ತಾಯ್ನಾ­ಡಿ­ನಲ್ಲಿ ಸಿಕ್ಕಿಲ್ಲ. ಈ ಬೇಸರ ಅವ­ರನ್ನು ಬಾಧಿ­ಸ­ದೆಯೂ ಬಿಟ್ಟಿಲ್ಲ.

ಕೊಡುಗೆ
ವಿಶ್ವ ಸಂಗೀ­ತಕ್ಕೆ ಅವರು ನೀಡಿ­ರುವ ಕೊಡು­ಗೆ­ಗಳು ಅಪಾರ. `ಇಂ­ಟ­ರ್‌­ನ್ಯಾ­ಷ­ನಲ್‌ ಪೌಂಡೇ­ಶನ್‌ ಆಫ್‌ ಕರ್ನಾ­ಟಿಕ್‌ ಮ್ಯೂಸಿಕ್‌' ಸಂಸ್ಥೆ ಸ್ಥಾಪಿಸಿ ಆ ಮೂಲಕ ಹಲವು ದೇಶ­ಗಳ ನಡು­ವಿನ ಸಾಂಸ್ಕೃ­ತಿಕ ಬೆಸುಗೆ ಆಗಿ­ದ್ದಾರೆ. ರವಿ­ಕಿ­ರಣ್‌ ಸಂಗೀತ ತಜ್ಞರೂ ಆಗಿದ್ದು, ಹಲವು ಪುಸ್ತಕ ಬರೆ­ದಿ­ದ್ದಾರೆ. `ಅ­ಪ್ರಿ­ಷಿ­ಯೇ­ಟಿಂಗ್‌ ಕರ್ನಾ­ಟಿಕ್‌ ಮ್ಯೂಸಿಕ್‌', `ಪ­ರ್ಪೆ­ಕ್ಟಿಂಗ್‌ ಕರ್ನಾ­ಟಿಕ್‌ ಮ್ಯೂಸಿಕ್‌' ಕೃತಿ­ಗಳು ಕರ್ನಾ­ಟಕ ಶಾಸ್ತ್ರೀಯ ಸಂಗೀ­ತದ ಮೈಲು­ಗ­ಲ್ಲು­ಗಳು. `ಟೆಲಿ ಟೀಚಿಂಗ್‌' ಕಂಪ್ಯೂ­ಟರ್‌ ಕಾರ್ಯ­ಕ್ರ­ಮದ ಮೂಲದ ವಿಶ್ವ­ದಾ­ದ್ಯಂತ ಸಾವಿ­ರಾರು ವಿದ್ಯಾ­ರ್ಥಿ­ಗ­ಳನ್ನು ಹೊಂದಿ­ರುವ ಅವರು, ಸಂಗೀ­ತದ ಬಗ್ಗೆ ಯಾವುದೇ ಅನು­ಮಾ­ನ­ಗ­ಳಿಗೆ ಉತ್ತ­ರಿ­ಸು­ತ್ತಾರೆ.
ಅಪಾರ ಅಂತಾ­ರಾ­ಷ್ಟ್ರೀಯ, ರಾಷ್ಟ್ರೀಯ ಪ್ರಶ­ಸ್ತಿ­ಗಳು ರವಿ­ಕಿ­ರಣ್‌ ಅವ­ರಿಗೆ ಸಂದಿವೆ. ತಮ್ಮ ಆರನೇ ವಯ­ಸ್ಸಿ­ನಲ್ಲೇ ಅವ­ರಿಗೆ ಪ್ರತಿ­ಷ್ಠಿತ `ಅ­ರುಲ್‌ ಇಸ್ಕ್ರೆ ಸೆಲ್ವನ್‌' ಬಿರುದು ಲಭಿ­ಸಿದೆ. ಅಂತಾ­ರಾ­ಷ್ಟ್ರೀಯ ಪ್ರಶ­ಸ್ತಿ­ಗ­ಳಾದ ರಷ್ಯಾದ `ಮಿ­ಲೇ­ನಿಯಂ' ಪ್ರಶಸ್ತಿ, ಅಮೆ­ರಿ­ಕಾದ `ನ್ಯೂ ಏಜ್‌ ವಾ್ಸ್‌ ಅವಾರ್ಡ್‌'ಗಳು ದೊರೆ­ತಿವೆ. ಭಾರ­ತದ ಹೆಮ್ಮೆಯ `ಕ­ಲೈ­ಮಾ­ಮಣಿ' ಪ್ರಶಸ್ತಿ ಸಂದಿದೆ. `ವಿ­ಸ್‌­ಡಮ್‌ ಇಂಟ­ರ್‌­ನ್ಯಾ­ಷ­ನಲ್‌', `ಕು­ಮಾರ ಗಂಧರ್ವ', `ಸಂ­ಸ್ಕೃತಿ ಸಮ್ಮಾನ' ಮುಂತಾದ ಪ್ರಶ­ಸ್ತಿ­ಗಳು ಅವರ ಮುಡಿ­ಗೇ­ರಿವೆ. ಜೊತೆಗೆ ನೂರಾರು ಬಿರು­ದು­ಗಳು.
ಸದ್ಯ ಚೆನ್ನೈ­ನಲ್ಲಿ ನೆಲ­ಸಿ­ರುವ ರವಿ­ಕಿ­ರಣ್‌ ಅವ­ರಿಗೆ ಸಂಗೀ­ತವೇ ಪ್ರಪಂಚ. ಎರಡು ವರ್ಷದ ಮಗು­ವಾ­ಗಿ­ದ್ದಾಗ ಅವರು ಮೂಡಿ­ಸಿದ ಭರ­ವಸೆ ಇಲ್ಲಿ­ವ­ರೆಗೆ ಎಲ್ಲೂ ಮಂಕಾ­ಗಿಲ್ಲ. ಈಗ 42ರ ಹಂಚಿ­ನ­ಲ್ಲಿವ ರವಿ­ಕಿ­ರಣ್‌ ಪ್ರತಿಭೆ ಹೆಮ್ಮ­ರ­ವಾಗಿ ಬೆಳ­ದಿದ್ದು ಅದರ ಬೀಳಲು ವಿಶ್ವ­ದೆ­ಲ್ಲೆಡೆ ಚಾಚಿ­ಕೊಂ­ಡಿದೆ.

Tuesday, October 6, 2009

ಹುಲು­ಗಪ್ಪ ಕಟ್ಟೀ­ಮನಿ


'ಕಟ್ಟೀ­ಮನಿ' ಕಾಣಿ­ಕೆ­


ಅದೊಂದು ಕೆಟ್ಟ ಕಾಲ.
ಆ ಕಪಟ ಕಾಲ ಕಂಡ ಕನ­ಸು­ಗ­ಳ­ನ್ನೆಲ್ಲಾ ಕೊಂದು ಹಾಕಿತು.
ಆ ಕ್ಷಣ ಕಳೆ­ದು­ಹೋ­ಗಿ­ದ್ದರೆ ಬದುಕು ಬಂಗಾ­ರ­ವಾ­ಗು­ತ್ತಿತ್ತು.
ಮಾಡಿದ ತಪ್ಪಿಗೆ ಈಗ ಪಶ್ಚಾ­ತಾ­ಪ­ವಿಲ್ಲ.
ತೋರಲು ಮುಖ­ವಿಲ್ಲ. ಆಡಲು ಮಾತಿಲ್ಲ.
ಆ ಸನ್ನಿ­ವೇ­ಶದ ಸುಳಿ­ಯಲ್ಲಿ ಬದುಕು ಮುಳುಗಿ ಹೋಯಿತು.....
ಅಯ್ಯೋ ದೇವರೇ ನಾನು ಆ ತಪ್ಪನ್ನು ಮಾಡ­ಬಾ­ರ­ದಿತ್ತು!
ನನ್ನ ಈ ಅರಣ್ಯ ರೋಧ­ನ­ವನ್ನು ಕೇಳು­ವ­ವ­ರಾರು?
ಸರ­ಳು­ಗ­ಳ­ನ್ನಿ­ಡಿದು ಕೈಗೆರೆ ಸವೆದು ಹೋಗಿವೆ. ಗೋಡೆಯೂ ಮುನಿ­ಸಿ­ಕೊಂ­ಡಿದೆ. ತಿರುಗಿ ಮಾತ­ನಾ­ಡು­ತ್ತಿಲ್ಲ...
ಇದು ಜೈಲು ಹಕ್ಕಿಯ ನಾಡಿ ಮಿಡಿತ. ತಪ್ಪಿನ ಅರಿ­ವಾ­ದಾಗ ಆ ಜೀವ­ಕ್ಕಾದ ಆಘಾತ.....!
18 ವರ್ಷ­ಗಳ ಹಿಂದೆ ರಂಗಾ­ಯಣ ಕಲಾ­ವಿದ ಹುಲು­ಗಪ್ಪ ಕಟ್ಟೀ­ಮನಿ ಅವರು ಬಳ್ಳಾರಿ ಜೈಲಿಗೆ ಭೇಟಿ ನೀಡಿ­ದ್ದಾಗ ಮುಂದೆ ಕೈದಿ­ಗಳ ಮನ­ಸ್ಸಿ­ನಲ್ಲಿ ಇಂತಹ ಬದ­ಲಾ­ವಣೆ ಉಂಟಾ­ಗ­ಬ­ಹುದು ಎಂದು ಯೋಚಿ­ಸಿ­ರ­ಲಿ­ಕ್ಕಿಲ್ಲ. ಜೈಲು­ಹ­ಕ್ಕಿ­ಗಳ ನಾಡಿ­ಮಿ­ಡಿ­ತ­ವನ್ನು ರಂಗ­ಭೂಮಿ ಅರ್ಥ ಮಾಡಿ­ಕೊ­ಳ್ಳ­ಬ­ಲ್ಲದು ಎಂಬ ಯೋಚ­ನೆಯೂ ಬಂದಿ­ರ­ಲಿಲ್ಲ. ಕೊಲೆ­ಗ­ಡು­ಕರು, ಮಾನ­ಭಂಗ ಮಾಡಿ­ದ­ವರು, ಮನು­ಷ್ಯತ್ವ ಬಿಟ್ಟ­ವರು, ಕಳ್ಳರು, ಸುಳ್ಳರು...ಎಂ­ತೆಲ್ಲಾ ಹಣೆ­ಪಟ್ಟಿ ಕಟ್ಟಿ­ಕೊಂಡ ಕೈದಿ­ಗಳು ತಮ್ಮನ್ನು ತಾವು ರಂಗದ ಮೇಲೆ ತೆರೆ­ದು­ಕೊಂಡು ಹಗು­ರಾ­ಗು­ತ್ತಾರೆ ಎಂಬುದು ಊಹೆಗೂ ನಿಲು­ಕಿ­ರ­ಲಿಲ್ಲ.
ಆದರೆ ಹುಲು­ಗಪ್ಪ ಕಟ್ಟೀ­ಮನಿ ಅವರ ರಂಗ­ಪ್ರ­ಯೋ­ಗ­ದಲ್ಲಿ ಜೈಲು­ಹ­ಕ್ಕಿ­ಗಳ ಅಂತ­ರಂ­ಗದ ಕಟ್ಟೆ ಒಡೆ­ಯಿತು. ಮೈಸೂ­ರಿನ ಕಲಾ­ಮಂ­ದಿ­ರದ ಸುತ್ತಾ ಪೊಲೀಸ್‌ ಸರ್ಪ­ಗಾ­ವ­ಲಿನ ನಡುವೆ ಕೈದಿ­ಗ­ಳಿಂದ `ಮಾ­ರ­ನಾ­ಯಕ' ನಾಟಕ ಪ್ರಯೋ­ಗ­ಗೊಂ­ಡಾಗ `ಸ್ವ­ಸ್ಥ­ಸ­ಮಾಜ'ದ ದಿಲ್‌ ನಡು­ಗಿತ್ತು. ಬೆಂಗ­ಳೂರು ಕೇಂದ್ರಾ ಕಾರಾ­ಗೃ­ಹದ ಮಹಿಳಾ ಕೈದಿ­ಗ­ಳಿಂದ `ಮಾ­ಧವಿ' ನಾಟಕ ನೋಡಿ­ದ­ವರ ಮನ­ಸ್ಸಲ್ಲಿ ವಿಷಾ­ಧದ ಅಲೆ ಎದ್ದಿತ್ತು. ಇವರೂ ಕೂಡ ಮನು­ಷ್ಯರೇ......! ಎಂದ­ವರು ಅದೆಷ್ಟು ಮಂದಿಯೋ.

ದಶಕ ತುಂಬಿದೆ: ಹುಲು­ಗಪ್ಪ ಕಟ್ಟೀ­ಮನಿ ಅವರ `ಜೈ­ಲು­ನಾ­ಟಕ ಕ್ರಾಂತಿ'ಗೆ ಹತ್ತು ವರ್ಷ ತುಂಬಿದೆ. ಈ ಹತ್ತು ವರ್ಷದ ಜೈಲು ನಾಟಕ ಹಾದಿ ಇಡೀ ರಾಷ್ಟ್ರ­ದಲ್ಲಿ ಹಲವು ಮೈಲು­ಗ­ಲ್ಲು­ಗ­ಳನ್ನು ನಿರ್ಮಿ­ಸಿದೆ.
ಮೈಸೂ­ರಿ­ನಲ್ಲಿ ರಂಗಾ­ಯಣ ಆರಂಭ ಕಾಲ­ದಲ್ಲಿ ಬಿ.ವಿ. ಕಾರಂ­ತರು ತಮ್ಮ ರಂಗ­ಭೂಮಿ ವಿದ್ಯಾ­ರ್ಥಿ­ಗ­ಳನ್ನು ವೀಕ್ಷ­ಣೆಗೆ ಕರೆ­ದು­ಕೊಂಡು ಹೋಗು­ತ್ತಿ­ದ್ದರು. ಅದ­ರಲ್ಲಿ ಬಳ್ಳಾರಿ ಜೈಲು ಭೇಟಿಯೂ ಒಂದು.
ಜೈಲು ಅಂದರೆ ಎಲ್ಲ­ರಿಗೂ ಇರುವ ಕಲ್ಪ­ನೆಯೇ ಕಟ್ಟಿ­ಮನಿ ಅವ­ರಿಗೂ ಇತ್ತು. ಕೈದಿ­ಗ­ಳನ್ನು ಹತ್ತಿ­ರ­ದಿಂದ ಕಂಡಾಗ ಕಟ್ಟೀ­ಮನಿ ಅವ­ರಿಗೆ ಕಾಣಿ­ಸಿದ್ದೇ ಬೇರೆ. ಕೈದಿ­ಗಳ ಸ್ವಭಾ­ವ­ವನ್ನು ಗಮ­ನಿಸಿ ಅಭಿ­ನಯ ಕಲಿಕೆ ಅವರ ಮನ­ಸ್ಸಿಗೆ ಬರ­ಲಿಲ್ಲ. `ಕೈ­ದಿ­ಗ­ಳನ್ನೇ ರಂಗದ ಮೇಲೆ ತಂದರೆ?' ತಕ್ಷಣ ಯಾರಿಗೂ ಹೇಳ­ಲಿಲ್ಲ. ಹಾಗೇ ಮನ­ಸ್ಸಿ­ನಲ್ಲಿ ಇಟ್ಟು­ಕೊಂ­ಡರು. ಅದು ಹುಚ್ಚು ದೈರ್ಯವೇ ಆಗಿತ್ತು. ಯಾರಿ­ಗಾ­ದರೂ ಈ ವಿಷ­ಯ­ವನ್ನು ಹೇಳಲು ಕಟ್ಟೀ­ಮನಿ ಅಂಜಿ­ದರು. ಹುಚ್ಚ ಎಂದಾರು ಎಂಬ ಭಯ ಬೇರೆ. ಆದರೆ ಮನ­ಸ್ಸಿಗೆ ಆ ಹುಳು ಮಾತ್ರ ಸದಾ ಕೊರೆ­ಯು­ತ್ತಿತ್ತು.
ಜೈಲ್‌ ಸೂಪ­ರಿಂ­ಟೆಂ­ಡೆಂಟ್‌ ಗೋಪಾಲ್‌ ಹೊಸೂರು ಅವ­ರಿಗೆ ತಮ್ಮ ಮನ­ಸ್ಸಲ್ಲಿ ಮೂಡಿದ ವಿಷ­ಯ­ವನ್ನು ತಿಳಿ­ಸಿ­ದಾಗ ಕ್ಷಣ­ಹೊತ್ತು ಅವ­ರಲ್ಲಿ ಮಾತೇ ಹೊರ­ಡ­ಲಿಲ್ಲ. ಪರಿ­ಕ­ಲ್ಪನೆ ಅದ್ಬುತ ಆದರೆ....ಇದು ಸಾಧ್ಯವೆ? ಎಂಬ ಅನು­ಮಾನ ಗೋಪಾಲ್‌ ಅವ­ರ­ಲ್ಲಿತ್ತು. ಮೊದಲು ಅನು­ಮತಿ ಕೊಡಿ. ಆಮೇಲೆ ನೋಡಿ! ಎಂಬ ವಿಶ್ವಾ­ವನ್ನು ಕಟ್ಟೀ­ಮನಿ ಅವರು ವ್ಯಕ್ತ­ಪ­ಡಿ­ಸಿ­ದಾಗ ಗೋಪಾಲ್‌ ಹೊಸೂರು ಎಸ್‌ ಎಂದರು. ರಾಜ­ಕಾ­ರಣಿ ಹಾಗೂ ರಂಗ­ಕರ್ಮಿ ಎಂ.ಪಿ. ಪ್ರಕಾಶ್‌ ಅವರ ಸಹ­ಕಾ­ರವೂ ಇತ್ತು.

ಪ್ರತಿ­ರೋಧ ಇದ್ದೇ ಇತ್ತು: ಅದೆಲ್ಲಾ ಸರಿ. ಕೈದಿ­ಗ­ಳನ್ನು ಒಪ್ಪಿ­ಸು­ವುದು ಹೇಗೆ? ಮೊದ­ಮೊ­ದಲು ಕೈದಿ­ಗಳು ಸಹ­ಕ­ರಿ­ಸ­ಲಿಲ್ಲ. `ಏ ಹೋಗಯ್ಯಾ ನಮ್ಮ ಬದುಕೇ ನಾಟ­ಕ­ವಾ­ಗಿದೆ. ನೀನೆಂಥ ನಾಟಕ ಆಡಿ­ಸವೆ' ಎಂಬ ಉತ್ತರ ಕೈದಿ­ಗ­ಳಿಂದ ಬಂದಾಗ ಅದನ್ನು ಕಟ್ಟೀ­ಮನಿ ಸವಾ­ಲಾಗಿ ತೆಗೆ­ದು­ಕೊಂ­ಡರು.
ಆಮೇಲೆ ನಡೆ­ದದ್ದು ಬರೀ ಮ್ಯಾಜಿಕ್‌. ಕೈದಿ­ಗಳ ನಡುವೆ ಕಟ್ಟೀ­ಮನಿ ಅವರ ಬಾಂಧವ್ಯ ಬಹಳ ಗಾಢ­ವಾಗಿ ಬೆಳೆ­ಯಿತು. ಕೈದಿ­ಗಳ ತೂಕದ ಊಟ­ವನ್ನೇ ಕಟ್ಟೀ­ಮನಿ ಅವರೂ ಸೇವಿ­ಸು­ತ್ತಿ­ದ್ದರು. ತಿಂಗಳ ಕಾಲ ನಡೆ­ಯು­ತ್ತಿದ್ದ ನಾಟಕ ಕಾರ್ಯಾ­ಗಾ­ರ­ದಲ್ಲಿ ಕೈದಿ­ಗಳು ಕಟ್ಟೀ­ಮನಿ ಅವ­ರನ್ನು ಬಹ­ಳ­ವಾಗಿ ಹಚ್ಚಿ­ಕೊಂ­ಡರು. ಕಟ್ಟಿ­ಮನಿ ಅವರ ಜೊತೆ ತಮ್ಮ ಅಪ­ರಾ­ಧ­ಗ­ಳನ್ನು ಬಿಚ್ಚಿ­ಡು­ತ್ತಿ­ದ್ದರು. ಮಾಡಿದ ತಪ್ಪನ್ನು ಹೇಳಿ­ಕೊಂಡು ಹಗು­ರಾ­ಗು­ತ್ತಿ­ದ್ದರು. ನಾಟಕ ಹೇಳಿ­ಕೊ­ಡು­ವಾಗ ಕೈದಿ­ಗ­ಳಿಗೆ ಏಟು ಕೊಟ್ಟಿದ್ದು ಇದೆ. ಆದರೆ ಅದು ಪ್ರೀತಿಯ ಸಂಕೇ­ತ­ವಾ­ಗಿತ್ತು! ಕೈದಿ­ಗಳ ಅಂತ­ರಂ­ಗ­ದಲ್ಲಿ ಕಟ್ಟೀ­ಮನಿ ಸಸಂ­ಸ್ಕೃತ ಬೀಜ ಬಿತ್ತಿ­ದರು.

ಬದ­ಲಾದ ಚಿತ್ರಣ: ಮೈಸೂರು ಜೈಲು ಕೈದಿ­ಗ­ಳಿಂದ `ಮಾ­ರ­ನಾ­ಯಕ' ನಾಟಕ ಪ್ರದ­ರ್ಶ­ನ­ಗೊಂ­ಡಾಗ ಇಡೀ ರಾಷ್ಟ್ರಾ­ದ್ಯಂತ ಸುದ್ದಿ­ಯಾ­ಯಿತು. `ಔ­ಟ್‌­ಲುಕ್‌' ಮುಖ­ಪುಟ ಲೇಖನ ಮಾಡಿತು. ಇಂಗ್ಲಿಷ್‌ ಟಿವಿ ವಾಹಿ­ನಿ­ಗಳು ಕಟ್ಟೀ­ಮನಿ ಅವರ ಹಿಂದೆ ಬಿದ್ದವು. ಎಲ್ಲ­ಕ್ಕಿಂತ ಮುಖ್ಯ­ವಾಗಿ ಜೈಲು ಒಳ­ಗಿನ ವಾತಾ­ವ­ರಣ ಬದ­ಲಾ­ಯಿತು. ಪೊಲೀ­ಸರು ಕೈದಿ­ಗ­ಳನ್ನು ಕೊಲೆ ಅಪ­ರಾಧಿ, ಡಕಾ­ಯತಿ ಅಪ­ರಾಧಿ, ಕಳ್ಳ ಎಂದು ಕರೆ­ಯು­ತ್ತಿ­ದ್ದ­ವರು ಆಮೇಲೆ ಪಾತ್ರ­ಗ­ಳಿಂದ ಸಂಭೋ­ದಿ­ಸಿ­ದರು. ಮಹಿಳಾ ಮತ್ತು ಪುರುಷ ಕೈದಿ­ಗಳ ನಡುವೆ ಮಾತು­ಕ­ತೆಯೇ ಇರ­ಲಿಲ್ಲ. ಮಾಧವಿ ನಾಟ­ಕದ ನಂತರ ಇದು ಬದ­ಲಾ­ಯಿತು. ಜೂಲಿ­ಯಸ್‌ ಸೀಜರ್‌, ಹ್ಯಾಮೆಟ್‌ ನಾಟ­ಕ­ಗಳು ಕೈದಿ­ಗ­ಳಿಂದ ರಂಗ­ವೇ­ರಿ­ದವು.
ಆ ನಂತರ ಎಷ್ಟೋ ಕೈದಿ­ಗಳ ಶಿಕ್ಷೆಯ ಅವಧಿ ಕಮ್ಮಿ­ಯಾ­ದದ್ದೂ ಇದೆ. ಜೈಲು ನಾಟಕ ಕರ್ನಾ­ಟ­ಕಲ್ಲಿ ನಡೆ­ಯಿ­ತಾ­ದರೂ ಅದರ ಪರಿ­ಣಾಮ ಇಡೀ ದೇಶ­ದಲ್ಲಿ ಉಂಟಾ­ಯಿತು.
ರಂಗ­ಭೂಮಿ ಕಟ್ಟೀ­ಮನಿ: ಕನ್ನಡ ರಂಗ­ಭೂ­ಮಿ­ಯಲ್ಲಿ ಹುಲು­ಗಪ್ಪ ಕಟ್ಟೀ­ಮನಿ ಅವರು ಅತ್ಯಂತ ವಿಶಿಷ್ಟ ಸ್ಥಾನ­ದಲ್ಲಿ ನಿಲ್ಲು­ತ್ತಾರೆ. ಅವರ ರಂಗ­ಭೂಮಿ ಕಾರ್ಯಾ­ಗಾ­ರ­ಗ­ಳಲ್ಲಿ ಭಾಗ­ವ­ಹಿ­ಸಿ­ದ­ವರು ಅಪ­ರೂಪ ಅನು­ಭವ ಪಡೆ­ಯು­ತ್ತಾರೆ. ಅವರ ಮಾತಿ­ನಲ್ಲಿ ಒಂದು ಚಿಕಿ­ತ್ಸಕ ಗುಣ­ವಿದೆ. ಸಕಾ­ರಾ­ತ್ಮಕ ಎನರ್ಜಿ ಮೂಡಿ­ಸು­ವಲ್ಲಿ ಅವರು ನಿಷ್ಣಾ­ತರು.
ಜೈಲು ನಾಟಕ ನಿರ್ದೇ­ಶ­ಕ­ರಾಗಿ ಎಲ್ಲರ ಬಾಯಲ್ಲೂ ಕಟ್ಟಿ­ಮನಿ ಅವರು ಕೇಳಿ­ಬಂ­ದರೂ ಕೂಡ ಅವ­ರೊಬ್ಬ ಪ್ರಬುದ್ಧ ನಟ. `ಗಾಂಧಿ ವಿರುದ್ಧ ಗಾಂಧಿ' ನಾಟ­ಕದ ಗಾಂಧಿ ಯಾವಾ­ಗಲು ಎಲ್ಲ­ರನ್ನು ಕಾಡು­ತ್ತಾನೆ. `ಮಾ­ಯಾ­ಸೀತಾ ಪ್ರಸಂಗ'ದಲ್ಲಿ ಅವರ ಅದ್ಬುತ ಅಭಿ­ನ­ಯ­ವಿದೆ. ಕತ್ತಲೆ ಬೆಳಕು, ಹೀಗೊಂದು ಪ್ರಣಯ ಪ್ರಸಂಗ, ಕತ್ತಲೆ ಬೆಳಕು, ಕಿಂದ­ರಿ­ಜೋಗಿ ಹೀಗೆ ನೂರಾರು ನಾಟ­ಕ­ಗ­ಳಲ್ಲಿ ಅಭಿ­ನ­ಯಿ­ಸಿ­ದ್ದಾರೆ. ಸಂಘ­ಟ­ಕ­ರಾಗಿ ಮೈಸೂ­ರ­ನಲ್ಲಿ `ಸಂ­ಕಲ್ಪ'ವೆಂಬ ಹವ್ಯಾಸಿ ರಂಗ­ತಂಡ ಕಟ್ಟಿ­ದ್ದಾರೆ. ನಿರ್ದೇ­ಶ­ಕ­ರಾಗಿ ಅವರು ರಂಗ­ಭೂ­ಮಿಗೆ ಹಲವು ಪ್ರಸಿದ್ಧ ನಾಟ­ಕ­ಗ­ಳನ್ನು ನಿರ್ದೇ­ಶಿ­ಸಿ­ದ್ದಾರೆ.
ಸದ್ಯಕ್ಕೆ ಕಟ್ಟೀ­ಮನಿ ಧಾರ­ವಾಡ ರಂಗಾ­ಯಣ ಉಸ್ತು­ವಾರಿ ಹೊತ್ತಿ­ದ್ದಾರೆ. ಅಲ್ಲೂ ಜೈಲು ನಾಟಕ ತಯಾರಿ ನಡೆ­ಯು­ತ್ತಿದೆ. ಬಳ್ಳಾ­ರಿಯ ಹಗ­ರಿ­ಬೊ­ಮ್ಮನ ಹಳ್ಳಿ­ಯಿಂದ ಬಂದ ಅವರು ಇಂದು ರಂಗ­ಭೂ­ಮಿಯ ಆಸ್ತಿ­ಯಾ­ಗಿ­ದ್ದಾರೆ. ಪತ್ನಿ ಪ್ರಮೀಳಾ ಬೇಂಗ್ರೆ ಕೂಡ ರಂಗಾ­ಯಣ ಕಲಾ­ವಿ­ದರು. ಮಗಳು ಕುಂತಿ, ಮಗ ಕಣ್ವ.
ಅವರ ಈ ಹತ್ತು­ವ­ರ್ಷ­ಗಳ ಜೈಲು ನಾಟಕ ನಡಿ­ಗೆ­ಯಲ್ಲಿ ಹಲವು ಏಳು ಬೀಳು­ಗ­ಳನ್ನು ಅನು­ಭ­ವಿ­ಸಿ­ದ್ದಾರೆ. ಹಲವು ಅದ್ಬು­ತ­ಗ­ಳನ್ನು ಕಂಡಿ­ದ್ದಾರೆ. ಎಂದೂ ಮರೆ­ಯದ `ದಿ­ವ್ಯ­ಔ­ಷಧಿ'ಯನ್ನು ಅವರು ವಿಶ್ವ­ರಂ­ಗ­ಭೂ­ಮಿಗೆ ಕಾಣಿ­ಕೆ­ಯಾಗಿ ಕೊಟ್ಟಿ­ದ್ದಾರೆ.