

ಚಿತ್ರವೀಣೆಯ ರವಿಕಿರಣ
ಅತ್ಯಂತ ಹಳೆಯ ಸಂಗೀತ ವಾದ್ಯ ಚಿತ್ರವೀಣೆ. ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದ್ದರೂ ಬಹಳ ಮಂದಿ ಕಂಡಿರಲಿಕ್ಕಿಲ್ಲ. 21 ತಂತಿ ಹೊಂದಿರುವ ಚಿತ್ರವೀಣೆಯ ಮೇಲೆ ಹಿಡಿತ ಸಾಧಿಸಿದ ಸಂಗೀತ ಸಾಧಕರು ಬೆರಳೆಣಿಕೆಯಷ್ಟು. ಹಾಗಾಗಿ ಈ ವಾದ್ಯ ತೆರೆಮರೆಯಲ್ಲೇ ಉಳಿಯಬೇಕಾಯಿತು. ಈ ವಾದ್ಯ ಅಷ್ಟು ಸುಲಭವಾಗಿ ಕೈಗತ್ತುವಂಥದ್ದಲ್ಲ, ಕೊರಡಿನಂಥದ್ದು. ರಾಮಾಯಣದಲ್ಲಿ ಹನುಮಂತ ನುಡಿಸುತ್ತಿದ್ದ (ಹನುಮ ತೋಡಿಗೆ ಕಲ್ಲು ಕರಗಿತಂತೆ) `ಗೋಟುವಾದ್ಯ'ದ ಪ್ರತಿರೂಪವೇ ಈ ಚಿತ್ರವೀಣೆ.
ಮರೆಯಲ್ಲಿದ್ದ ಈ ಪ್ರಾಚೀನ ವಾದ್ಯಕ್ಕೆ ಹೊಸ ಆಯಾಮಕೊಟ್ಟವರು ಮೈಸೂರು ಹುಡುಗ, ವಿಶ್ವದ ಪ್ರತಿಷ್ಠಿತ `ಮಿಲೇನಿಯಂ ಪ್ರಶಸ್ತಿ' ಪುರಸ್ಕೃತ ಚಿತ್ರವೀಣಾ ಎನ್. ರವಿಕಿರಣ್!
ಕೇವಲ ಒಬ್ಬನೇ ಒಬ್ಬ ಸಂಗೀತ ಸಾಧಕನಿಂದ ಅಳಿವಿನ ಹಂಚಿನಲ್ಲಿದ್ದ ಚಿತ್ರವೀಣೆ ಇಂದು ಜಗತ್ತಿನಾದ್ಯಂತ ಮಿಡಿಯುತ್ತಿದೆ. ಚಿತ್ರವೀಣೆಗೆ ಜೀವತುಂಬಿದ ರವಿಕಿರಣ್ ಕೂಡ ಜಗತ್ಪ್ರಸಿದ್ಧವಾಗಿ ರೂಪುಗೊಂಡಿದ್ದಾರೆ. ಸತತ 24 ಗಂಟೆ ಚಿತ್ರವೀಣೆ ನುಡಿಸಿ ವಿಶ್ವದ ಗಮನ ಸೆಳೆದಿದ್ದಾರೆ. 325 ರಾಗಗಳು, 175 ತಾಳಗಳನ್ನು ರವಿಕಿರಣ್ ತಮ್ಮದಾಗಿಸಿಕೊಂಡಿದ್ದಾರೆ.
ರವಿಕಿರಣ್ ಜಗತ್ತಿನ ಅಪರೂಪ. ಸಂಗೀತವನ್ನು ತಮ್ಮ ವಿಶಿಷ್ಟವಾದ ಲೆಕ್ಕಾಚಾರಗಳಿಂದ ಪ್ರಸ್ತುತಪಡಿಸುವ ಪ್ರತಿಭಾವಂತ. ಅವರ ಹಾಡಗಾರಿಕೆ ಆಗಲೀ ನುಡಿಸುಗಾರಿಕೆ ಆಗಲೀ ಅಪ್ಪಟ ಶಾಸ್ತ್ರಬದ್ಧ. ರಾಗ, ತಾಳ, ಕೃತಿಗಳ ರಸವನ್ನು ತಮ್ಮ ಚಿತ್ರವೀಣೆಯ ಮೂಲಕ ಬಹಳ ಶಾಸ್ತ್ರೀಯವಾಗಿ ಉಣಬಡಿಸುವಲ್ಲಿ ಅವರು ಅಪ್ರತಿಮರು. ಚಿತ್ರವೀಣೆಯ ಮೇಲೆ ಅವರಿಗಿರುವ ಹಿಡಿತ ನೋಡಿದರೆ, ರವಿಕಿರಣ್ ಚಿತ್ರವೀಣೆಗಾಗಿಯೇ ಜನ್ಮತಾಳಿದ್ದಾರೆ ಎಂಬ ತುಡಿತ ರಸಿಕರಲ್ಲಿ ಮೂಡುತ್ತದೆ.
ಖ್ಯಾತ ಸಿತಾರ್ ವಾದಕ ಪಂಡಿತ್ ರವಿಶಂಕರ್ ಅವರು ಒಮ್ಮೆ ರವಿಕಿರಣ್ ಅವರ ಬಗ್ಗೆ ಮಾತನಾಡುವಾಗ `ನಿಮಗೆ ದೇವರಲ್ಲಿ ನಂಬಿಕೆ ಇಲ್ಲದಿದ್ದರೆ ನೀವು ಎನ್. ರವಿಕಿರಣ್ ಅವರನ್ನು ನೋಡಿ' ಎಂದು ಹೇಳಿದ ಮಾತು ರವಿಕಿರಣ್ ಅವರ ವಿದ್ಯೆಯನ್ನು ಎತ್ತಿ ಹಿಡಿದಿದೆ. ರೇಡಿಯೋ ಆಸ್ಟ್ರೇಲಿಯಾ ರವಿಕಿರಣ್ ಅವರನ್ನು `ಗ್ರೇಟೆಸ್ಟ್ ಸ್ಲ್ಕ್ರೆಡ್ ಇನ್ಸ್ಟ್ರುಮೆಂಟಲಿಸ್ಟ್' ಎಂದು ಕರೆದು ಅವರ ಪ್ರಬುದ್ಧತೆಯನ್ನು ಜಗತ್ತಿಗೆ ಸಾರಿದೆ. `ಇಂಡಿಯನ್ ಮೆಸಾರ್ಟ್' ಎಂದೇ ಜಗತ್ತಿನೆಲ್ಲೆಡೆ ಎನ್. ರವಿಕಿರಣ್ ಪ್ರಖ್ಯಾತರು.
ಬಾಲ ಸಂಗೀತ ಸಾಮ್ರಾಟ
ತಮ್ಮ ಎರಡನೇ ವಯಸ್ಸಿನಲ್ಲೇ ಸಂಗೀತ ಕಚೇರಿ ನೀಡಿದ ರವಿಕಿರಣ್ ರಸಿಕರ ಮನಸ್ಸಿನಲ್ಲಿ ಭರವಸೆ ಮೂಡಿಸಿದರು. 1969ರಲ್ಲಿ ಬೆಂಗಳೂರಿನ ಮಲ್ಲೇಶ್ವರಂ ಸಂಗೀತ ಸಭಾದಲ್ಲಿ ತಮ್ಮ ಚೊಚ್ಚಲ ಕಚೇರಿ ನೀಡಿದರು. ಬಹಳ ಚಿಕ್ಕವಯಸ್ಸಿನಲ್ಲೇ ಮದ್ರಾಸ್ ಸಂಗೀತ ಅಕಾಡೆಮಿ ಆಯೋಜಿಸಿದ್ದ ಸಂಗೀತ ಕ್ವಿಜ್ನಲ್ಲಿ ಕಷ್ಟದ ತಾಂತ್ರಿಕ ಪ್ರಶ್ನೆಗಳಿಗೆ ಉತ್ತರಿಸಿ ಸ್ಕಾಲರ್ಶಿಪ್ ಪಡೆದರು. ಆ ಸಂದರ್ಭದಲ್ಲಿ ಸಂಗೀತ ದಿಗ್ಗಜರಾದ ಪಂಡಿತ್ ರವಿಶಂಕರ್, ಎಂ.ಎಸ್. ಸುಬ್ಬುಲಕ್ಷ್ಮಿ ಅಂಥವರೇ ರವಿಕಿರಣ್ ಅವರ ಸಂಗೀತ ವಿದ್ಯೆಗೆ ಮಾರುಹೋದರು.
ಹತ್ತನೇ ವಯಸ್ಸಿನವರೆಗೆ ಗಾಯನ ಕಚೇರಿ ನೀಡುತಿದ್ದ ರವಿಕಿರಣ್ ನಂತರ ಚಿತ್ರವೀಣೆ ಕಡೆ ಹೊರಳಿದರು. ಗೋಟುವಾದ್ಯ ಸ್ವರೂಪದ ವಾದ್ಯಕ್ಕೆ ಚಿತ್ರವೀಣೆ ಎಂದು ನಾಮಕರಣ ಮಾಡಿದರು. ಆನಂತರ ನಿರ್ಮಾಣ ಆಗಿದ್ದು ಇತಿಹಾಸ. ಈಗ ರವಿಕಿರಣ್ ಜಗತ್ತಿನ ಅತ್ಯಂತ ಶ್ರೇಷ್ಠ ಸಂಗೀತಗಾರ!
ಮೆಲ್ಹಾರ್ಮೋನಿಕಾ
ಇದು ಚಿತ್ರವೀಣಾ ರವಿಕಿರಣ್ ಅವರ ಕನಸಿನ ಕೂಸು. ಈ ಕಾರ್ಯಕ್ರಮದ ಮೂಲಕ ಜಗತ್ತಿನಾದ್ಯಂತ ತಮ್ಮ ಪ್ರತಿಭೆ ಮೆರೆದಿದ್ದಾರೆ. ಬೇರೆ ಬೇರೆ ನಗರಗಳಲ್ಲಿ ವಿವಿಧ ಖ್ಯಾತನಾಮ ಸಂಗೀತಗಾರರ ಜತೆಗೂಡಿ ಸಂಗೀತ ಸಾಧ್ಯತೆಗಳನ್ನು ತಿಳಿಸಿಕೊಟ್ಟಿದ್ದಾರೆ. ಇದರಲ್ಲಿ ಇಲ್ಲದಿರುವ ಸಂಗೀತ ಪ್ರಾಕಾರಗಳೇ ಇಲ್ಲ. ವಿವಿಧ ಸಮಕಾಲೀನ ಸಂಗೀತ ಪ್ರಬೇಧಗಳನ್ನು ಇಲ್ಲಿ ಪ್ರಸ್ತುತಪಡಿಸಿದ್ದಾರೆ. ವಿವಿಧ ದೇಶಗಳ ವಾದ್ಯಗಳು ಮಿಲ್ಹಾರ್ಮೋನಿಕಾ ಕಾರ್ಯಕ್ರಮದಲ್ಲಿ ಒಂದಾಗುತ್ತವೆ. ಆ ಮೂಲಕ ಎಲ್ಲಾ ಸಂಗೀತ ಪ್ರಾಕಾರಗಳ ಮೂಲ ಒಂದೇ ಎಂದು ಪ್ರತಿಪಾದಿಸಿದ್ದಾರೆ. ವಿಶ್ವದಾದ್ಯಂತ ಹಲವು ನಗರಗಳಲ್ಲಿ ಮೆಲ್ಹಾರ್ಮೋನಿಕಾ ನಡೆದಿದೆ. ಬೇಸರದ ಸಂಗತಿ ಎಂದರೆ ಈವರೆಗೆ ಬೆಂಗಳೂರಿನಲ್ಲಿ ನಡೆದಿಲ್ಲ!
ಸಂಗೀತದಿಂದ ಸಾಮರಸ್ಯ
ಹಲವು ದಶಕಗಳಿಂದ ಅಸಂಖ್ಯಾತ ದೇಶಗಳನ್ನು ಪ್ರವಾಸ ಮಾಡಿ, ಬೇರೆ ಬೇರೆ ಜನ, ಬೇರೆ ಬೇರೆ ಸಂಸ್ಕೃತಿ, ನೆಲ-ಜಲ ಅಭಿರುಚಿ ಕಂಡಿರುವ ರವಿಕಿರಣ್ ಅವರಿಗೆ ಸಂಗೀತದಿಂದ ರಾಷ್ಟ್ರಗಳ ನಡುವಣ ಸಾಮರಸ್ಯ ಸಾಧಿಸಬಹುದು ಎಂಬ ಬಲವಾದ ನಂಬಿಕೆ ಇದೆ. ಎಷ್ಟೋ ಸಂದರ್ಭಗಳಲ್ಲಿ ಅವರು ಈ ವಿಷಯವನ್ನು ಹೇಳಿಕೊಂಡಿದ್ದಾರೆ. ಆದರೆ ಅವರಿಗೆ ವಿದೇಶಗಳಲ್ಲಿ ಸಿಕ್ಕಷ್ಟು ಪ್ರೋತ್ಸಾಹ, ಬೆಂಬಲ ತಾಯ್ನಾಡಿನಲ್ಲಿ ಸಿಕ್ಕಿಲ್ಲ. ಈ ಬೇಸರ ಅವರನ್ನು ಬಾಧಿಸದೆಯೂ ಬಿಟ್ಟಿಲ್ಲ.
ಕೊಡುಗೆ
ವಿಶ್ವ ಸಂಗೀತಕ್ಕೆ ಅವರು ನೀಡಿರುವ ಕೊಡುಗೆಗಳು ಅಪಾರ. `ಇಂಟರ್ನ್ಯಾಷನಲ್ ಪೌಂಡೇಶನ್ ಆಫ್ ಕರ್ನಾಟಿಕ್ ಮ್ಯೂಸಿಕ್' ಸಂಸ್ಥೆ ಸ್ಥಾಪಿಸಿ ಆ ಮೂಲಕ ಹಲವು ದೇಶಗಳ ನಡುವಿನ ಸಾಂಸ್ಕೃತಿಕ ಬೆಸುಗೆ ಆಗಿದ್ದಾರೆ. ರವಿಕಿರಣ್ ಸಂಗೀತ ತಜ್ಞರೂ ಆಗಿದ್ದು, ಹಲವು ಪುಸ್ತಕ ಬರೆದಿದ್ದಾರೆ. `ಅಪ್ರಿಷಿಯೇಟಿಂಗ್ ಕರ್ನಾಟಿಕ್ ಮ್ಯೂಸಿಕ್', `ಪರ್ಪೆಕ್ಟಿಂಗ್ ಕರ್ನಾಟಿಕ್ ಮ್ಯೂಸಿಕ್' ಕೃತಿಗಳು ಕರ್ನಾಟಕ ಶಾಸ್ತ್ರೀಯ ಸಂಗೀತದ ಮೈಲುಗಲ್ಲುಗಳು. `ಟೆಲಿ ಟೀಚಿಂಗ್' ಕಂಪ್ಯೂಟರ್ ಕಾರ್ಯಕ್ರಮದ ಮೂಲದ ವಿಶ್ವದಾದ್ಯಂತ ಸಾವಿರಾರು ವಿದ್ಯಾರ್ಥಿಗಳನ್ನು ಹೊಂದಿರುವ ಅವರು, ಸಂಗೀತದ ಬಗ್ಗೆ ಯಾವುದೇ ಅನುಮಾನಗಳಿಗೆ ಉತ್ತರಿಸುತ್ತಾರೆ.
ಅಪಾರ ಅಂತಾರಾಷ್ಟ್ರೀಯ, ರಾಷ್ಟ್ರೀಯ ಪ್ರಶಸ್ತಿಗಳು ರವಿಕಿರಣ್ ಅವರಿಗೆ ಸಂದಿವೆ. ತಮ್ಮ ಆರನೇ ವಯಸ್ಸಿನಲ್ಲೇ ಅವರಿಗೆ ಪ್ರತಿಷ್ಠಿತ `ಅರುಲ್ ಇಸ್ಕ್ರೆ ಸೆಲ್ವನ್' ಬಿರುದು ಲಭಿಸಿದೆ. ಅಂತಾರಾಷ್ಟ್ರೀಯ ಪ್ರಶಸ್ತಿಗಳಾದ ರಷ್ಯಾದ `ಮಿಲೇನಿಯಂ' ಪ್ರಶಸ್ತಿ, ಅಮೆರಿಕಾದ `ನ್ಯೂ ಏಜ್ ವಾ್ಸ್ ಅವಾರ್ಡ್'ಗಳು ದೊರೆತಿವೆ. ಭಾರತದ ಹೆಮ್ಮೆಯ `ಕಲೈಮಾಮಣಿ' ಪ್ರಶಸ್ತಿ ಸಂದಿದೆ. `ವಿಸ್ಡಮ್ ಇಂಟರ್ನ್ಯಾಷನಲ್', `ಕುಮಾರ ಗಂಧರ್ವ', `ಸಂಸ್ಕೃತಿ ಸಮ್ಮಾನ' ಮುಂತಾದ ಪ್ರಶಸ್ತಿಗಳು ಅವರ ಮುಡಿಗೇರಿವೆ. ಜೊತೆಗೆ ನೂರಾರು ಬಿರುದುಗಳು.
ಸದ್ಯ ಚೆನ್ನೈನಲ್ಲಿ ನೆಲಸಿರುವ ರವಿಕಿರಣ್ ಅವರಿಗೆ ಸಂಗೀತವೇ ಪ್ರಪಂಚ. ಎರಡು ವರ್ಷದ ಮಗುವಾಗಿದ್ದಾಗ ಅವರು ಮೂಡಿಸಿದ ಭರವಸೆ ಇಲ್ಲಿವರೆಗೆ ಎಲ್ಲೂ ಮಂಕಾಗಿಲ್ಲ. ಈಗ 42ರ ಹಂಚಿನಲ್ಲಿವ ರವಿಕಿರಣ್ ಪ್ರತಿಭೆ ಹೆಮ್ಮರವಾಗಿ ಬೆಳದಿದ್ದು ಅದರ ಬೀಳಲು ವಿಶ್ವದೆಲ್ಲೆಡೆ ಚಾಚಿಕೊಂಡಿದೆ.
ಅತ್ಯಂತ ಹಳೆಯ ಸಂಗೀತ ವಾದ್ಯ ಚಿತ್ರವೀಣೆ. ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದ್ದರೂ ಬಹಳ ಮಂದಿ ಕಂಡಿರಲಿಕ್ಕಿಲ್ಲ. 21 ತಂತಿ ಹೊಂದಿರುವ ಚಿತ್ರವೀಣೆಯ ಮೇಲೆ ಹಿಡಿತ ಸಾಧಿಸಿದ ಸಂಗೀತ ಸಾಧಕರು ಬೆರಳೆಣಿಕೆಯಷ್ಟು. ಹಾಗಾಗಿ ಈ ವಾದ್ಯ ತೆರೆಮರೆಯಲ್ಲೇ ಉಳಿಯಬೇಕಾಯಿತು. ಈ ವಾದ್ಯ ಅಷ್ಟು ಸುಲಭವಾಗಿ ಕೈಗತ್ತುವಂಥದ್ದಲ್ಲ, ಕೊರಡಿನಂಥದ್ದು. ರಾಮಾಯಣದಲ್ಲಿ ಹನುಮಂತ ನುಡಿಸುತ್ತಿದ್ದ (ಹನುಮ ತೋಡಿಗೆ ಕಲ್ಲು ಕರಗಿತಂತೆ) `ಗೋಟುವಾದ್ಯ'ದ ಪ್ರತಿರೂಪವೇ ಈ ಚಿತ್ರವೀಣೆ.
ಮರೆಯಲ್ಲಿದ್ದ ಈ ಪ್ರಾಚೀನ ವಾದ್ಯಕ್ಕೆ ಹೊಸ ಆಯಾಮಕೊಟ್ಟವರು ಮೈಸೂರು ಹುಡುಗ, ವಿಶ್ವದ ಪ್ರತಿಷ್ಠಿತ `ಮಿಲೇನಿಯಂ ಪ್ರಶಸ್ತಿ' ಪುರಸ್ಕೃತ ಚಿತ್ರವೀಣಾ ಎನ್. ರವಿಕಿರಣ್!
ಕೇವಲ ಒಬ್ಬನೇ ಒಬ್ಬ ಸಂಗೀತ ಸಾಧಕನಿಂದ ಅಳಿವಿನ ಹಂಚಿನಲ್ಲಿದ್ದ ಚಿತ್ರವೀಣೆ ಇಂದು ಜಗತ್ತಿನಾದ್ಯಂತ ಮಿಡಿಯುತ್ತಿದೆ. ಚಿತ್ರವೀಣೆಗೆ ಜೀವತುಂಬಿದ ರವಿಕಿರಣ್ ಕೂಡ ಜಗತ್ಪ್ರಸಿದ್ಧವಾಗಿ ರೂಪುಗೊಂಡಿದ್ದಾರೆ. ಸತತ 24 ಗಂಟೆ ಚಿತ್ರವೀಣೆ ನುಡಿಸಿ ವಿಶ್ವದ ಗಮನ ಸೆಳೆದಿದ್ದಾರೆ. 325 ರಾಗಗಳು, 175 ತಾಳಗಳನ್ನು ರವಿಕಿರಣ್ ತಮ್ಮದಾಗಿಸಿಕೊಂಡಿದ್ದಾರೆ.
ರವಿಕಿರಣ್ ಜಗತ್ತಿನ ಅಪರೂಪ. ಸಂಗೀತವನ್ನು ತಮ್ಮ ವಿಶಿಷ್ಟವಾದ ಲೆಕ್ಕಾಚಾರಗಳಿಂದ ಪ್ರಸ್ತುತಪಡಿಸುವ ಪ್ರತಿಭಾವಂತ. ಅವರ ಹಾಡಗಾರಿಕೆ ಆಗಲೀ ನುಡಿಸುಗಾರಿಕೆ ಆಗಲೀ ಅಪ್ಪಟ ಶಾಸ್ತ್ರಬದ್ಧ. ರಾಗ, ತಾಳ, ಕೃತಿಗಳ ರಸವನ್ನು ತಮ್ಮ ಚಿತ್ರವೀಣೆಯ ಮೂಲಕ ಬಹಳ ಶಾಸ್ತ್ರೀಯವಾಗಿ ಉಣಬಡಿಸುವಲ್ಲಿ ಅವರು ಅಪ್ರತಿಮರು. ಚಿತ್ರವೀಣೆಯ ಮೇಲೆ ಅವರಿಗಿರುವ ಹಿಡಿತ ನೋಡಿದರೆ, ರವಿಕಿರಣ್ ಚಿತ್ರವೀಣೆಗಾಗಿಯೇ ಜನ್ಮತಾಳಿದ್ದಾರೆ ಎಂಬ ತುಡಿತ ರಸಿಕರಲ್ಲಿ ಮೂಡುತ್ತದೆ.
ಖ್ಯಾತ ಸಿತಾರ್ ವಾದಕ ಪಂಡಿತ್ ರವಿಶಂಕರ್ ಅವರು ಒಮ್ಮೆ ರವಿಕಿರಣ್ ಅವರ ಬಗ್ಗೆ ಮಾತನಾಡುವಾಗ `ನಿಮಗೆ ದೇವರಲ್ಲಿ ನಂಬಿಕೆ ಇಲ್ಲದಿದ್ದರೆ ನೀವು ಎನ್. ರವಿಕಿರಣ್ ಅವರನ್ನು ನೋಡಿ' ಎಂದು ಹೇಳಿದ ಮಾತು ರವಿಕಿರಣ್ ಅವರ ವಿದ್ಯೆಯನ್ನು ಎತ್ತಿ ಹಿಡಿದಿದೆ. ರೇಡಿಯೋ ಆಸ್ಟ್ರೇಲಿಯಾ ರವಿಕಿರಣ್ ಅವರನ್ನು `ಗ್ರೇಟೆಸ್ಟ್ ಸ್ಲ್ಕ್ರೆಡ್ ಇನ್ಸ್ಟ್ರುಮೆಂಟಲಿಸ್ಟ್' ಎಂದು ಕರೆದು ಅವರ ಪ್ರಬುದ್ಧತೆಯನ್ನು ಜಗತ್ತಿಗೆ ಸಾರಿದೆ. `ಇಂಡಿಯನ್ ಮೆಸಾರ್ಟ್' ಎಂದೇ ಜಗತ್ತಿನೆಲ್ಲೆಡೆ ಎನ್. ರವಿಕಿರಣ್ ಪ್ರಖ್ಯಾತರು.
ಬಾಲ ಸಂಗೀತ ಸಾಮ್ರಾಟ
ತಮ್ಮ ಎರಡನೇ ವಯಸ್ಸಿನಲ್ಲೇ ಸಂಗೀತ ಕಚೇರಿ ನೀಡಿದ ರವಿಕಿರಣ್ ರಸಿಕರ ಮನಸ್ಸಿನಲ್ಲಿ ಭರವಸೆ ಮೂಡಿಸಿದರು. 1969ರಲ್ಲಿ ಬೆಂಗಳೂರಿನ ಮಲ್ಲೇಶ್ವರಂ ಸಂಗೀತ ಸಭಾದಲ್ಲಿ ತಮ್ಮ ಚೊಚ್ಚಲ ಕಚೇರಿ ನೀಡಿದರು. ಬಹಳ ಚಿಕ್ಕವಯಸ್ಸಿನಲ್ಲೇ ಮದ್ರಾಸ್ ಸಂಗೀತ ಅಕಾಡೆಮಿ ಆಯೋಜಿಸಿದ್ದ ಸಂಗೀತ ಕ್ವಿಜ್ನಲ್ಲಿ ಕಷ್ಟದ ತಾಂತ್ರಿಕ ಪ್ರಶ್ನೆಗಳಿಗೆ ಉತ್ತರಿಸಿ ಸ್ಕಾಲರ್ಶಿಪ್ ಪಡೆದರು. ಆ ಸಂದರ್ಭದಲ್ಲಿ ಸಂಗೀತ ದಿಗ್ಗಜರಾದ ಪಂಡಿತ್ ರವಿಶಂಕರ್, ಎಂ.ಎಸ್. ಸುಬ್ಬುಲಕ್ಷ್ಮಿ ಅಂಥವರೇ ರವಿಕಿರಣ್ ಅವರ ಸಂಗೀತ ವಿದ್ಯೆಗೆ ಮಾರುಹೋದರು.
ಹತ್ತನೇ ವಯಸ್ಸಿನವರೆಗೆ ಗಾಯನ ಕಚೇರಿ ನೀಡುತಿದ್ದ ರವಿಕಿರಣ್ ನಂತರ ಚಿತ್ರವೀಣೆ ಕಡೆ ಹೊರಳಿದರು. ಗೋಟುವಾದ್ಯ ಸ್ವರೂಪದ ವಾದ್ಯಕ್ಕೆ ಚಿತ್ರವೀಣೆ ಎಂದು ನಾಮಕರಣ ಮಾಡಿದರು. ಆನಂತರ ನಿರ್ಮಾಣ ಆಗಿದ್ದು ಇತಿಹಾಸ. ಈಗ ರವಿಕಿರಣ್ ಜಗತ್ತಿನ ಅತ್ಯಂತ ಶ್ರೇಷ್ಠ ಸಂಗೀತಗಾರ!
ಮೆಲ್ಹಾರ್ಮೋನಿಕಾ
ಇದು ಚಿತ್ರವೀಣಾ ರವಿಕಿರಣ್ ಅವರ ಕನಸಿನ ಕೂಸು. ಈ ಕಾರ್ಯಕ್ರಮದ ಮೂಲಕ ಜಗತ್ತಿನಾದ್ಯಂತ ತಮ್ಮ ಪ್ರತಿಭೆ ಮೆರೆದಿದ್ದಾರೆ. ಬೇರೆ ಬೇರೆ ನಗರಗಳಲ್ಲಿ ವಿವಿಧ ಖ್ಯಾತನಾಮ ಸಂಗೀತಗಾರರ ಜತೆಗೂಡಿ ಸಂಗೀತ ಸಾಧ್ಯತೆಗಳನ್ನು ತಿಳಿಸಿಕೊಟ್ಟಿದ್ದಾರೆ. ಇದರಲ್ಲಿ ಇಲ್ಲದಿರುವ ಸಂಗೀತ ಪ್ರಾಕಾರಗಳೇ ಇಲ್ಲ. ವಿವಿಧ ಸಮಕಾಲೀನ ಸಂಗೀತ ಪ್ರಬೇಧಗಳನ್ನು ಇಲ್ಲಿ ಪ್ರಸ್ತುತಪಡಿಸಿದ್ದಾರೆ. ವಿವಿಧ ದೇಶಗಳ ವಾದ್ಯಗಳು ಮಿಲ್ಹಾರ್ಮೋನಿಕಾ ಕಾರ್ಯಕ್ರಮದಲ್ಲಿ ಒಂದಾಗುತ್ತವೆ. ಆ ಮೂಲಕ ಎಲ್ಲಾ ಸಂಗೀತ ಪ್ರಾಕಾರಗಳ ಮೂಲ ಒಂದೇ ಎಂದು ಪ್ರತಿಪಾದಿಸಿದ್ದಾರೆ. ವಿಶ್ವದಾದ್ಯಂತ ಹಲವು ನಗರಗಳಲ್ಲಿ ಮೆಲ್ಹಾರ್ಮೋನಿಕಾ ನಡೆದಿದೆ. ಬೇಸರದ ಸಂಗತಿ ಎಂದರೆ ಈವರೆಗೆ ಬೆಂಗಳೂರಿನಲ್ಲಿ ನಡೆದಿಲ್ಲ!
ಸಂಗೀತದಿಂದ ಸಾಮರಸ್ಯ
ಹಲವು ದಶಕಗಳಿಂದ ಅಸಂಖ್ಯಾತ ದೇಶಗಳನ್ನು ಪ್ರವಾಸ ಮಾಡಿ, ಬೇರೆ ಬೇರೆ ಜನ, ಬೇರೆ ಬೇರೆ ಸಂಸ್ಕೃತಿ, ನೆಲ-ಜಲ ಅಭಿರುಚಿ ಕಂಡಿರುವ ರವಿಕಿರಣ್ ಅವರಿಗೆ ಸಂಗೀತದಿಂದ ರಾಷ್ಟ್ರಗಳ ನಡುವಣ ಸಾಮರಸ್ಯ ಸಾಧಿಸಬಹುದು ಎಂಬ ಬಲವಾದ ನಂಬಿಕೆ ಇದೆ. ಎಷ್ಟೋ ಸಂದರ್ಭಗಳಲ್ಲಿ ಅವರು ಈ ವಿಷಯವನ್ನು ಹೇಳಿಕೊಂಡಿದ್ದಾರೆ. ಆದರೆ ಅವರಿಗೆ ವಿದೇಶಗಳಲ್ಲಿ ಸಿಕ್ಕಷ್ಟು ಪ್ರೋತ್ಸಾಹ, ಬೆಂಬಲ ತಾಯ್ನಾಡಿನಲ್ಲಿ ಸಿಕ್ಕಿಲ್ಲ. ಈ ಬೇಸರ ಅವರನ್ನು ಬಾಧಿಸದೆಯೂ ಬಿಟ್ಟಿಲ್ಲ.
ಕೊಡುಗೆ
ವಿಶ್ವ ಸಂಗೀತಕ್ಕೆ ಅವರು ನೀಡಿರುವ ಕೊಡುಗೆಗಳು ಅಪಾರ. `ಇಂಟರ್ನ್ಯಾಷನಲ್ ಪೌಂಡೇಶನ್ ಆಫ್ ಕರ್ನಾಟಿಕ್ ಮ್ಯೂಸಿಕ್' ಸಂಸ್ಥೆ ಸ್ಥಾಪಿಸಿ ಆ ಮೂಲಕ ಹಲವು ದೇಶಗಳ ನಡುವಿನ ಸಾಂಸ್ಕೃತಿಕ ಬೆಸುಗೆ ಆಗಿದ್ದಾರೆ. ರವಿಕಿರಣ್ ಸಂಗೀತ ತಜ್ಞರೂ ಆಗಿದ್ದು, ಹಲವು ಪುಸ್ತಕ ಬರೆದಿದ್ದಾರೆ. `ಅಪ್ರಿಷಿಯೇಟಿಂಗ್ ಕರ್ನಾಟಿಕ್ ಮ್ಯೂಸಿಕ್', `ಪರ್ಪೆಕ್ಟಿಂಗ್ ಕರ್ನಾಟಿಕ್ ಮ್ಯೂಸಿಕ್' ಕೃತಿಗಳು ಕರ್ನಾಟಕ ಶಾಸ್ತ್ರೀಯ ಸಂಗೀತದ ಮೈಲುಗಲ್ಲುಗಳು. `ಟೆಲಿ ಟೀಚಿಂಗ್' ಕಂಪ್ಯೂಟರ್ ಕಾರ್ಯಕ್ರಮದ ಮೂಲದ ವಿಶ್ವದಾದ್ಯಂತ ಸಾವಿರಾರು ವಿದ್ಯಾರ್ಥಿಗಳನ್ನು ಹೊಂದಿರುವ ಅವರು, ಸಂಗೀತದ ಬಗ್ಗೆ ಯಾವುದೇ ಅನುಮಾನಗಳಿಗೆ ಉತ್ತರಿಸುತ್ತಾರೆ.
ಅಪಾರ ಅಂತಾರಾಷ್ಟ್ರೀಯ, ರಾಷ್ಟ್ರೀಯ ಪ್ರಶಸ್ತಿಗಳು ರವಿಕಿರಣ್ ಅವರಿಗೆ ಸಂದಿವೆ. ತಮ್ಮ ಆರನೇ ವಯಸ್ಸಿನಲ್ಲೇ ಅವರಿಗೆ ಪ್ರತಿಷ್ಠಿತ `ಅರುಲ್ ಇಸ್ಕ್ರೆ ಸೆಲ್ವನ್' ಬಿರುದು ಲಭಿಸಿದೆ. ಅಂತಾರಾಷ್ಟ್ರೀಯ ಪ್ರಶಸ್ತಿಗಳಾದ ರಷ್ಯಾದ `ಮಿಲೇನಿಯಂ' ಪ್ರಶಸ್ತಿ, ಅಮೆರಿಕಾದ `ನ್ಯೂ ಏಜ್ ವಾ್ಸ್ ಅವಾರ್ಡ್'ಗಳು ದೊರೆತಿವೆ. ಭಾರತದ ಹೆಮ್ಮೆಯ `ಕಲೈಮಾಮಣಿ' ಪ್ರಶಸ್ತಿ ಸಂದಿದೆ. `ವಿಸ್ಡಮ್ ಇಂಟರ್ನ್ಯಾಷನಲ್', `ಕುಮಾರ ಗಂಧರ್ವ', `ಸಂಸ್ಕೃತಿ ಸಮ್ಮಾನ' ಮುಂತಾದ ಪ್ರಶಸ್ತಿಗಳು ಅವರ ಮುಡಿಗೇರಿವೆ. ಜೊತೆಗೆ ನೂರಾರು ಬಿರುದುಗಳು.
ಸದ್ಯ ಚೆನ್ನೈನಲ್ಲಿ ನೆಲಸಿರುವ ರವಿಕಿರಣ್ ಅವರಿಗೆ ಸಂಗೀತವೇ ಪ್ರಪಂಚ. ಎರಡು ವರ್ಷದ ಮಗುವಾಗಿದ್ದಾಗ ಅವರು ಮೂಡಿಸಿದ ಭರವಸೆ ಇಲ್ಲಿವರೆಗೆ ಎಲ್ಲೂ ಮಂಕಾಗಿಲ್ಲ. ಈಗ 42ರ ಹಂಚಿನಲ್ಲಿವ ರವಿಕಿರಣ್ ಪ್ರತಿಭೆ ಹೆಮ್ಮರವಾಗಿ ಬೆಳದಿದ್ದು ಅದರ ಬೀಳಲು ವಿಶ್ವದೆಲ್ಲೆಡೆ ಚಾಚಿಕೊಂಡಿದೆ.