Sunday, June 21, 2009

ಎಚ್ . ಆರ್. ಲೀಲಾವತಿ







ಮೈಸೂ­ರಿ­ನಲ್ಲಿ ಸುಗಮ ಸಂಗೀ­ತದ ಬೇರು


ಕನ್ನಡ ಸುಗಮ ಸಂಗೀತ ಪರಂ­ಪ­ರೆಯ ಮೂಲ ಬೇರು ಮೈಸೂ­ರಿ­ನ­ಲ್ಲಿದೆ.
ಅವರು ಮಾಧು­ರ್ಯಕ್ಕೆ ಇನ್ನೊಂದು ಹೆಸರು. ಪಿ. ಕಾಳಿಂ­ಗ­ರಾ­ಯ­ರಿಂದ ಆರಂ­ಭ­ವಾದ ಲಘು ಸಂಗೀತ ಪರಿ­ಕ­ಲ್ಪ­ನೆಗೆ ಹೊಸ ರೂಪ ಕೊಟ್ಟ­ವರು. ಸಂಗೀ­ತ­ದಲ್ಲಿ ಸಾಹಿ­ತ್ಯ­ವನ್ನೇ ಪ್ರಧಾನ ಮಾಡಿ ಹಾಡಿ­ದ­ವರು. ಶಾಸ್ತ್ರೀಯ ಸಂಗೀ­ತದ ಹಿನ್ನೆ­ಲೆ­ಯಿಂದ ಬಂದು ಲಘು ಸಂಗೀ­ತಕ್ಕೆ ಒಂದು ಸ್ಥಾನ ಕೊಟ್ಟ­ವರು. ಆಕಾ­ಶ­ವಾ­ಣಿಯ ಮೂಲಕ ಮನೆ ಮಾತಾ­ದ­ವರು. ದಿವಂ­ಗತ ಎಚ್‌.ಕೆ. ನಾರಾ­ಯ­ಣರ ಸಮ­ಕಾ­ಲೀ­ನರು. ಅವರ ಕ್ಯಾಸೆಟ್‌ ಕ್ರಾಂತಿ­ಯಲ್ಲಿ ಪಾಲ್ಗೊಂ­ಡ­ವರು.
ಅವರು ಎಚ್‌.ಆರ್‌. ಲೀಲಾ­ವತಿ. ಸುಗಮ ಸಂಗೀತ ಸಾಮ್ರಾಜ್ಞೆ. ಅವ­ತ್ತಿನ ಸುಗಮ ಸಂಗೀತ ತ್ರಿಮೂ­ತ್ರಿ­ಗ­ಳಲ್ಲಿ (ಪ­ದ್ಮಾ­ಚ­ರಣ್‌, ಎಚ್‌.ಕೆ. ನಾರಾ­ಯಣ್‌) ಲೀಲಾ­ವತಿ ಕೂಡ ಒಬ್ಬರು. ಅಸಂ­ಖ್ಯಾತ ಕವಿ­ಗಳ ಭಾವ­ಗೀ­ತೆಗೆ ದನಿ­ಯಾ­ದ­ವರು. ಜೊತೆಗೆ ಎಚ್‌.ಆರ್‌. ಲೀಲಾ­ವತಿ ಸ್ವತಃ ಕವಿ­ಗಳೂ ಹೌದು.
ಲೀಲಾ­ವತಿ ಸಂಗೀತ ಪರಿ­ಸ­ರ­ದಲ್ಲೇ ಹುಟ್ಟಿ ಬೆಳೆ­ದ­ವರು. ತಾಯಿ ಜಯಮ್ಮ ಅವರ ಮೊದಲ ಗುರು. ತಂದೆ ಅಠಾಣ ರಾಮಣ್ಣ(ಹಾ­ಸನ ರಾಮಣ್ಣ). ಕರ್ನಾ­ಟಕ ಶಾಸ್ತ್ರಿಯ ಸಂಗೀ­ತದ ಭದ್ರ ಬುನಾ­ದಿಯ ಮೇಲೆ ಭಾವ­ಗೀ­ತೆ­ಗ­ಳನ್ನು ಹಾಡಿ ವಿಖ್ಯಾ­ತಿ­ಯಾ­ದರು.
ಎಚ್‌.ಆರ್‌. ಲೀಲಾ­ವತಿ ಅವರು ತಮ್ಮ ಕಲಿ­ಕೆಯ ಹಾದಿ­ಯಲ್ಲಿ ಹಲವು ಮೈಲು­ಗ­ಲ್ಲು­ಗ­ಳನ್ನು ಧಾಟಿ­ದ್ದಾರೆ. ಶಾಸ್ತ್ರೀಯ ಸಂಗೀತ ಹಾಡು­ತ್ತಿದ್ದ ಅವರು ಪದ್ಮಾ­ಚ­ರಣ್‌ ಮಾರ್ಗ­ದ­ರ್ಶ­ನ­ದ­ದಲ್ಲಿ ಸುಗಮ ಸಂಗೀತ ಅಭ್ಯಾಸ ಮಾಡಿ­ದರು. ಜ್ಞಾನ ಪ್ರಕಾಶ್‌ ಘೋಶ್‌, ದುಬೇನ್‌ ಶರ್ಮಾ ಅವ­ರಿ­ದಂ­ದಲೂ ಲೀಲಾ­ವತಿ ತಮ್ಮ ಸುಸ್ವರ ಜ್ಞಾನ­ವನ್ನು ಹಿಮ್ಮ­ಡಿ­ಗೊ­ಳಿ­ಸಿ­ಕೊಂ­ಡರು.
ಕನ್ನ­ಡದ ಪ್ರಥಮ ಮಹಿಳಾ ಸಂಗೀತ ಸಂಯೋ­ಜ­ಕಿ­ಯಾಗಿ ತಮ್ಮ ಸಾಮರ್ಥ್ಯ ತೋರಿ­ಸಿ­ರುವ ಲೀಲಾ­ವತಿ ಅವರು ಸಾಹಿ­ತ್ಯ­ವನ್ನು ನೇರ ಹಾಗೂ ಸರ­ಳ­ವಾಗಿ ಕೇಳು­ಗರ ಮನ­ಮು­ಟ್ಟು­ವಂತೆ ತಲು­ಪಿ­ಸು­ವಲ್ಲಿ ನಿಷ್ಣಾ­ತರು. ಅವರ ಗಾಯನ ಹಾಗೂ ಸ್ವರ ಸಂಯೋ­ಜನೆ ವೈಶಿ­ಷ್ಟ್ಯ­ತೆ­ಯಿಂದ ಕೂಡಿದ್ದು ಯಾರು ಬೇಕಾ­ದರೂ ಇದು ಲೀಲಾ­ವತಿ ಅವರ ಗಾಯನ ಎಂದು ಗುರು­ತಿ­ಸ­ಬ­ಹುದು. ಕವಿಯ ಭಾವ­ನೆ­ಗ­ಳಿಗೆ ನಿರಾ­ಶೆ­ಯಾ­ಗ­ದಂತೆ ಅದರ ಅರ್ಥಕ್ಕೆ ಸ್ವರ ಕಟ್ಟು­ವಲ್ಲಿ ಅವರು ಎತ್ತಿದ ಕೈ. ಭಾವ­ನಾ­ತ್ಮಕ ತೀವ್ರತೆ ಲೀಲಾ­ವ­ತಿ­ಯ­ವರ ಗಾಯ­ನ­ದ­ಲ್ಲಿ­ರು­ವುದು ವಿಶೇಷ.
ಆಕಾ­ಶ­ವಾ­ಣಿ­ಯಲ್ಲಿ ಹಿರಿಯ ಕಲಾ­ವಿ­ದ­ರಾ­ಗಿದ್ದ ಪದ್ಮಾ­ಚ­ರಣ್‌ ಅವರ ನೂರಾರು ಸಂಯೋ­ಜ­ನೆ­ಗ­ಳಿಗೆ ಲೀಲಾ­ವತಿ ದನಿ­ಯಾ­ಗಿ­ದ್ದಾರೆ. ಅಡಿ­ಗರ `ನ­ಡೆದು ಬಂದ ದಾರಿಯ ಕಡೆಗೆ' ಕುವೆಂಪು ಅವರ `ಅಂ­ತ­ರ­ತಮ ನೀಗುರು' ಗೀತೆ­ಗ­ಳನ್ನು ಮತ್ತೆ ಮತ್ತೆ ಕೇಳ­ಬೇಕು ಎನಿ­ಸು­ತ್ತದೆ. ನೃತ್ಯ­ರೂ­ಪ­ಕ­ಗ­ಳಿಗೂ ಎಚ್‌.ಆರ್‌. ಲೀಲಾ­ವತಿ ಹಾಡಿ­ದ್ದಾರೆ. `ಅಕ್ಕ ಮಹಾ­ದೇವಿ' ರೂಪ­ಕ­ದಲ್ಲಿ ಎಚ್‌.ಕೆ. ನಾರಾ­ಯಣ್‌ ಜೊತೆ ಹಾಡಿ­ದ್ದರು. ವಚನ, ದೇವರ ನಾಮ ಹಾಗೂ ಚಲ­ನ­ಚಿ­ತ್ರ­ಗ­ಳಿಗೂ ಹಾಡಿ­ದ್ದಾರೆ.
ಲೀಲಾ­ವತಿ ಅವರ ಪತಿ ಎಸ್‌.ಜಿ. ರಘು­ರಾಮ್‌ ಕೂಡ ಗಾಯ­ಕರು. ಲೀಲಾ­ವ­ತಿ­ಯ­ವರ ಸುಗಮ ಸಂಗೀತ ಕಾರ್ಯ­ಕ್ರ­ಮ­ಗ­ಳಲ್ಲಿ ರಘು­ರಾಮ್‌ ಹಾಡು­ತ್ತಾರೆ. ಅಲ್ಲದೆ ಪತ್ನಿ ರಾಗ ಸಂಯೋ­ಜ­ನೆಯ ಹಲವು ಧ್ವನಿ­ಸು­ರುಳಿ ಹಾಗೂ ಸಿಡಿ­ಗ­ಳಲ್ಲಿ ಹಾಡಿ­ದ್ದಾರೆ.
ಎಚ್‌.ಆರ್‌. ಲೀಲಾ­ವತಿ ಕರ್ನಾ­ಟಕ ಸಂಗೀತ ನೃತ್ಯ ಅಕಾ­ಡೆ­ಮಿಯ ಅಧ್ಯ­ಕ್ಷ­ರಾ­ಗಿ­ದ್ದರು. ಅವರು ಅಧ್ಯ­ಕ್ಷ­ರಾ­ಗಿದ್ದ ಕಾಲ­ದಲ್ಲಿ ಸುಗಮ ಸಂಗೀತ ಪ್ರಗ­ತಿಗೆ ಹಲವು ದಾಖ­ಲಿತ ಕೆಲಸ ಮಾಡಿ­ದ್ದಾರೆ.


ನಾಡ­ಗೀತೆ ಮತ್ತು ಎಚ್‌.ಆರ್‌. ಲೀಲಾ­ವತಿ: ಕುವೆಂಪು ಅವರ ನಾಡ­ಗೀತೆ `ಜೈ ಭಾರತ ಜನ­ನಿಯ ತನು­ಜಾತೆ' ಗೀತೆ­ಯನ್ನು ರಾಗ ಸಂಯೋ­ಜಿಸಿ ಮೊದಲು ಹಾಡಿದ ಖ್ಯಾತಿ ಎಚ್‌.ಆರ್‌. ಲೀಲಾ­ವತಿ ಅವ­ರಗೆ ಸಲ್ಲ­ಬೇಕು. ಇತ್ತಿ­ಚೆಗೆ ನಾಡ­ಗೀ­ತೆಯ ಕುರಿ­ತಂತೆ ವಿವಾದ ಹುಟ್ಟಿ­ಕೊಂ­ಡಿತ್ತು. ವಿವಾ­ದದ ಸಂದ­ರ್ಭ­ದಲ್ಲಿ ಎಚ್‌.ಆರ್‌. ಲೀಲಾ­ವತಿ ಎಲ್ಲರೂ ಒಪ್ಪು­ವಂ­ತಹ ಮಾತು­ಗ­ಳ­ನ್ನಾ­ಡಿ­ದ್ದರು. `ನಾನೇ ಮೊದಲು ನಾಡ­ಗೀ­ತೆಗೆ ರಾಗ ಸಂಯೋ­ಜ­ಸಿ­ದ್ದರೂ ಕೂಡ ಮೈಸೂರು ಅನಂತ ಸ್ವಾಮಿ ಅವರ ಸಂಯೋ­ಜ­ನೆ­ಯನ್ನು ಜನ ಮೆಚ್ಚಿ­ಕೊಂ­ಡಿ­ದ್ದಾರೆ. ಆದ್ದ­ರಿಂದ ಅವರ ಸಂಯೋ­ಜ­ನೆಯೇ ಕಡ್ಡಾ­ಯ­ವಾ­ಗಿಲಿ' ಎಂಬ ವಿದ್ವತ್‌ ಪೂರ್ಣ ಮಾತು­ಗ­ಳನ್ನು ಇಲ್ಲಿ ಸ್ಮರ­ಸ­ಬ­ಹುದು. ಗೀತೆಯ ಸಾಹಿತ್ಯ ಮತ್ತು ಯಾರ ಸಂಯೋ­ಜ­ನೆಯ ಗೀತೆ­ಯನ್ನು ಹಾಡ­ಬೇಕು ಎಂಬ ಕುರಿ­ತಂತೆ ಇನ್ನೂ ವಿವಾದ ಇದ್ದೇ ಇದೆ.
ಲೀಲಾ­ವತಿ ಅವ­ರಿಗೆ ರಂಗ­ಭೂ­ಮಿಯ ಮೇಲೆ ಅತೀವ ಪ್ರೀತಿ ಇದೆ. ಮೈಸೂ­ರಿ­ನಲ್ಲಿ ನಡೆ­ಯುವ ರಂಗ­ಭೂಮಿ ಚಟು­ವ­ಟಿ­ಕೆ­ಯಲ್ಲಿ ಅವರು ಉತ್ಸಾ­ಹ­ದಿಂದ ಭಾಗ­ವ­ಹಿ­ಸು­ತ್ತಾರೆ. ಹಲವು ನಾಟ­ಕ­ಗ­ಳಿಗೆ ಸಂಗೀ­ತ­ವನ್ನೂ ನೀಡಿ­ದ್ದಾರೆ. ಎಚ್‌.ಆರ್‌. ಲೀಲಾ­ವತಿ ಅವರ ಸಂಗೀತ ಸೇವೆಗೆ ಅಪಾರ ಗೌರವ ಪ್ರಶ­ಸ್ತಿ­ಗಳು ಸಂದಿವೆ. ಹಲವು ಸಂಗೀತ ಸಮ್ಮೇ­ಳ­ನ­ಗ­ಳಲ್ಲಿ ಅಧ್ಯ­ಕ್ಷ­ರಾಗಿ ಭಾಗ­ವ­ಹಿ­ಸಿ­ದ್ದಾರೆ.
ಮೈಸೂ­ರಿನ ಕುವೆಂಪು ನಗ­ರದ ತಮ್ಮ ನಿವಾ­ಸ­ದಲ್ಲಿ ಸುಗಮ ಸಂಗೀತ ಅಕಾ­ಡೆಮಿ ಎಂಬ ಸಂಸ್ಥೆ­ಯನ್ನು ಕಟ್ಟಿ­ಕೊಂಡು ಯುವ ಪ್ರತಿ­ಭೆ­ಗ­ಳಿಗೆ ಸಂಗೀತ ತರ­ಬೇತಿ ನೀಡು­ವಲ್ಲಿ ಅವರು ಕಾರ್ಯ­ನಿ­ರ­ತ­ರಾ­ಗಿ­ದ್ದಾ.

No comments:

Post a Comment