Friday, June 26, 2009

ವಸುಂ­ದರಾ ದೊರೆಸ್ವಾಮಿ



ವಸುಂ­ದರಾ ಹೆಜ್ಜೆ ಗುರುತು





ಅವರ ಹೆಜ್ಜೆ­ಗ­ಳಲ್ಲಿ ಅದ್ಯಾವ ಶಕ್ತಿ ಅಡ­ಗಿ­ದೆಯೋ ಏನೋ!
ಆ ಹೆಜ್ಜೆ­ಗಳು ನಟು­ವಾಂ­ಗದ ಏಟಿಗೆ ಎದಿ­ರೇಟು ನೀಡು­ತ್ತವೆ. ಸಂಗೀ­ತಕ್ಕೆ ಸ್ವರೂಪ ಕೊಡು­ತ್ತವೆ. ದೇಹ­ಕ್ಕಾದ ಕಾಲ­ವನ್ನು ಮರೆ­ಮಾ­ಚು­ತ್ತವೆ. ಆ ಘಲ್‌ ಘಲ್‌ ಗೆಜ್ಜೆ­ನಾದ ನೋಡು­ಗನ ಹೃದ­ಯ­ದಲ್ಲಿ ಆನಂದ ಹುಟ್ಟಿ­ಸು­ತ್ತದೆ. ನಾಟ್ಯ­ಶಾ­ಸ್ತ್ರದ ನವ­ರ­ಸಾ­ದಿ­ಗಳು ದೇಹ­ವಿಡೀ ಹೊಮ್ಮಿ ಬರು­ತ್ತವೆ. ಗೆಜ್ಜೆ ಕಟ್ಟಿದ ಆ ಕಾಲು­ಗಳು ಭೂಮಿ­ಕೆಯ ಮೇಲೆ ರಂಗೋ­ಲಿಯ ಚಿತ್ತಾರ ಬಿಡಿ­ಸು­ತ್ತವೆ.
ಅವರು ವಸುಂ­ದರಾ ದೊರೆ­ಸ್ವಾಮಿ. ಮೈಸೂ­ರಿಗೆ ಹೆಮ್ಮೆ ಹಿರಿಮೆ ಗರಿಮೆ ಬರು­ವಲ್ಲಿ ಅವರ ನೃತ್ಯ ಸೇವೆಯೂ ಪಾಲು ಪಡೆ­ದಿದೆ. ನೃತ್ಯ­ಲೋ­ಕ­ದಲ್ಲಿ ದಂತ­ಕ­ತೆ­ಯಾ­ಗಿ­ರುವ ವಸುಂ­ದರಾ ನಮ್ಮ ದೇಶದ ಅಪ­ರೂ­ಪದ ಭರ­ತ­ನಾಟ್ಯ ಕಲಾ­ವಿದೆ. ಭಾರ­ತೀಯ ಶಾಸ್ತ್ರೀಯ ನೃತ್ಯ­ದಲ್ಲಿ ಅವರ ಸ್ಥಾನ ಉತ್ತುಂ­ಗ­ದ­ಲ್ಲಿದೆ. ಭರ­ತ­ನಾ­ಟ್ಯ­ವನ್ನು ಹೃದಯ ತಂಬೆಲ್ಲಾ ತುಂಬಿ­ಕೊಂಡು ಅದರ ವೈಶಾ­ಲ್ಯ­ತೆ­ಯನ್ನು ಜಗ­ತ್ತಿ­ನೆ­ಲ್ಲೆಡೆ ತೋರಿಸಿ ಸೈ ಎನಿ­ಸಿ­ಕೊಂ­ಡಿ­ದ್ದಾರೆ. ಮೂರು ದಶ­ಕ­ಗಳ ಅವರ ನೃತ್ಯ ತಪಸ್ಸು ಅಪಾರ ಮನ್ನಣೆ ಗಳಿ­ಸಿದೆ.
ವಸುಂ­ದರಾ ದೊರೆ­ಸ್ವಾಮಿ ಅವರ ಪ್ರತಿ­ಯೊಂದು ನೃತ್ಯ ರೂಪ­ಕ­ಗಳು ಅದ್ಬುತ ಕಲಾ­ಕೃ­ತಿ­ಗಳು. ಅವರ ಸಂಯೋ­ಜ­ನೆ­ಗ­ಳ­ಲ್ಲಿ­ರುವ ಭಕ್ತಿ ಸಂದೇಶ ವರ್ಣ­ನಾ­ತೀತ. ಮಹಿ­ಷೂರು ಪುರ ಜನರ ದುಸ್ವ­ಪ್ನ­ವಾ­ಗಿದ್ದ ಮಹಿ­ಷಾ­ಸು­ರ­ನನ್ನು ಸಂಹ­ರಿ­ಸುವ `ಆ­ದಿ­ಶಕ್ತಿ ದುರ್ಗಾ' ರೂಪಕ ನೋಡು­ಗನ ನಾಡಿ­ಯಲ್ಲಿ ಉಂಟು­ಮಾ­ಡಿದ್ದ ವಿದ್ಯುತ್‌ ಸಂಚ­ಲ­ನ­ವನ್ನು ಮರೆ­ಲಾ­ಗು­ವು­ದಿಲ್ಲ. ಇಂತಹ ಅಸಂ­ಖ್ಯಾತ ರೂಪ­ಕ­ಗ­ಳನ್ನು ಅವರು ಸಂಯೋ­ಜಿ­ಸಿ­ದ್ದಾರೆ. ನೃತ್ಯ ಸಂಯೋ­ಜ­ನೆಯ ಜೊತೆಗೆ ಸಾಹಿ­ತ್ಯ­ವನ್ನು ರಚನೆ ಮಾಡು­ವ­ಲ್ಲಿಯೂ ಅವರು ಕೃಷಿ ಮಾಡಿ­ದ್ದಾರೆ. ಕೆಲವು ವೇಳೆ ಸಂಗೀತ ಸಂಯೋ­ಜ­ನೆ­ಯನ್ನೂ ಮಾಡು­ತ್ತಾರೆ. ಅವ­ರನ್ನು ಅಪ­ರೂಪ ಎನ್ನಲು ಇಂತಹ ಹತ್ತಾರು ಕಾರ್ಯ­ಸಾ­ಧ­ನೆ­ಗಳು ಸಾಕ್ಷೀ­ಕ­ರಿ­ಸು­ತ್ತವೆ.
ವಸುಂ­ದರಾ ಅವರು ಖ್ಯಾತ ನೃತ್ಯ ಹಾಗೂ ಅಷ್ಟಾಂಗ ವಿನ್ಯಾಸ ಯೋಗ­ತಜ್ಞ ಪಟ್ಟಾಭಿ ಜೋಯಿಸ್‌ ಅವರ ಶಿಷ್ಯರು. ಸಣ್ಣ ವಯ­ಸ್ಸಿ­ನಲ್ಲೇ ಭೂಮಿಕೆ ಹತ್ತಿದ ಅವರ ಸಾಧ­ನೆಯ ಹಾದಿ ಹಲವು ಘಟ್ಟ­ಗ­ಳನ್ನು ಮುಟ್ಟಿ ಸಾಗಿ ಬಂದಿವೆ. ಅವರ ನೃತ್ಯ­ದಲ್ಲಿ ಯೋಗಕ್ಕೆ ಪ್ರಧಾನ ಸ್ಥಾನ­ವಿದೆ. ಅವರು ಯೋಗ ಸಂಶೋ­ಧಕಿ ಕೂಡ ಆಗಿ­ದ್ದಾರೆ. ಯೋಗ ಮತ್ತು ಭರ­ತ­ನಾಟ್ಯ ನಡು­ವಿನ ಸಂಬಂಧ ಕುರಿ­ತಂತೆ ಅವರ ಸಂಶೋ­ಧ­ನೆಗೆ ಪಿಎ­ಚ್‌ಡಿ ಪದವಿ ಲಭಿ­ಸಿದೆ. ಜಾನ­ಪ­ದ­ದಲ್ಲಿ ಸ್ನಾತ­ಕೋ­ತ್ತರ ಪದವಿ ಗಳಿ­ಸಿ­ದ್ದಾರೆ. ಜಾನ­ಪದ, ಯಕ್ಷ­ಗಾನ ಪ್ರಾಕಾ­ರ­ಗ­ಳನ್ನು ಭರ­ತ­ನಾ­ಟ್ಯಕ್ಕೆ ಅಳ­ವ­ಡಿ­ಸಿ­ಕೊಂಡು ಪ್ರಯೋಗ ಮಾಡಿದ ಕೀರ್ತಿ ಅವ­ರಿಗೆ ಸಲ್ಲು­ತ್ತದೆ.
ವಸುಂ­ದರಾ ಅವರು ಅತ್ಯಂತ ಚಿಕ್ಕ­ವ­ಯ­ಸ್ಸಿ­ನ­ಲ್ಲಿಯೇ `ಕ­ರ್ನಾ­ಟಕ ಕಲಾ ತಿಲಕ' ಪ್ರಶಸ್ತಿ ಪಡೆದ ಸಾಧಕಿ. ಮಾರ್ಷಲ್‌ ಆರ್ಟ್ಸ್‌, ಕಳರಿ ಪೊಯಿಟ್ಟು ನೃತ್ಯ­ಗಳೂ ಅವ­ರಿಗೆ ಗೊತ್ತಿವೆ. ದೂರ­ದ­ರ್ಶನ ಕಲಾ­ವಿ­ದರೂ ಆಗಿ­ರುವ ಅವ­ರಿಗೆ ಸಂದ ಗೌರವ ಪ್ರಶ­ಸ್ತಿ­ಗ­ಳಿಗೆ ಲೆಕ್ಕ­ವಿಲ್ಲ. ತಮ್ಮ ನೃತ್ಯ­ದೊಂ­ದಿಗೆ ವಿಶ್ವ­ವನ್ನು ಸುತ್ತಿ­ದ್ದಾರೆ. ಭರ­ತ­ನಾಟ್ಯ ಕುರಿತು ಕಾರ್ಯ­ಗಾ­ರ­ಗ­ಳನ್ನು ನಡೆ­ಸಿ­ದ್ದಾರೆ. ವಿದೇ­ಶ­ಗ­ಳನ್ನು ತಮ್ಮ ನೃತ್ಯ ಹಾಗೂ ಯೋಗ ಸಂಸ್ಥೆ­ಗ­ಳನ್ನೂ ತೆರೆ­ದಿ­ದ್ದಾರೆ.
ವಸುಂ­ದರಾ ದೊರೆ­ಸ್ವಾಮಿ ಅವರು ನೃತ್ಯ­ಗ­ರು­ವಾಗಿ ಸೃಷ್ಟಿ­ಸಿ­ರುವ ಪ್ರತಿ­ಭೆ­ಗಳು ಇಂದು ಎಲ್ಲೆಡೆ ತಮ್ಮ ಪರಿ­ಮಳ ಬೀರಿವೆ. ಅವರ ಮಾರ್ಗ­ದ­ರ್ಶ­ನ­ದಲ್ಲಿ ನೂರಾರು ಪ್ರತಿ­ಭೆ­ಗಳು ಭೂಮಿ­ಕೆ­ಯೇ­ರಿವೆ. ವಿದೇ­ಶ­ಗಳೂ ಸೇರಿ­ದಂತೆ ದೇಶ­ದೆ­ಲ್ಲೆಡೆ ಅವರ ವಿದ್ಯಾರ್ಥಿ ಬಳ­ಗವೇ ಇದೆ. ಯುವ ಪ್ರತಿ­ಭೆ­ಗ­ಳಿಗೆ ವಿದ್ಯಾ­ದಾ­ನದ ಜೊತೆಗೆ ಅವ­ರಿಗೆ ಸೂಕ್ತ ವೇದಿ­ಕೆ­ಯನ್ನೂ ಅವರು ಒದ­ಗಿ­ಸಿ­ಕೊ­ಟ್ಟಿ­ದ್ದಾರೆ. ಈ ಉದ್ದೇ­ಶ­ಕ್ಕಾಗಿ `ವ­ಸುಂ­ದರಾ ಪ್ರದ­ರ್ಶನಾ ಕಲೆ ಹಾಗೂ ಯೋಗ ಕೇಂದ್ರ'ವನ್ನು ಮೈಸೂ­ರಿ­ನಲ್ಲಿ ತೆರೆ­ದಿ­ದ್ದಾರೆ.
1987ರಲ್ಲಿ ಆರಂ­ಭ­ವಾದ ಈ ಸಂಸ್ಥೆ ಇಂದು ದೇಶ­ದೆ­ಲ್ಲೆಡೆ ಹಬ್ಬಿದೆ. ವಿದೇ­ಶ­ಗ­ಳಲ್ಲೂ ಶಾಖೆ­ಗ­ಳಿವೆ. ಪ್ರತಿ­ವರ್ಷ ಸಂಸ್ಥೆ­ಯಿಂದ ಅಸಂ­ಖ್ಯಾತ ಕಾರ್ಯ­ಕ್ರ­ಮ­ಗಳು ನಡೆ­ಯು­ತ್ತವೆ. ಮುಖ್ಯ­ವಾಗಿ ವರ್ಷ­ದಲ್ಲಿ ನಾಲ್ಕು ಕಾರ್ಯ­ಕ್ರ­ಮ­ಗಳು ಪ್ರತಿ­ವರ್ಷ ಕಡ್ಡಾ­ಯ­ವಾಗಿ ನಡೆ­ಯು­ತ್ತವೆ. ಪಲ್ಲ­ವೋ­ತ್ಸವ, ಪಾರಂ­ಗೋ­ತ್ಸವ, ಚಿಗುರು ಸಂಜೆ ಕಾರ್ಯ­ಕ್ರ­ಮ­ಗಳು ಜನ­ಮ­ನ್ನಣೆ ಗಳಿ­ಸಿವೆ.
ನಟ­ರಾ­ಜೋ­ತ್ಸ­ವ­ದಲ್ಲಿ ಪುರುಷ ನೃತ್ಯ­ಪ­ಟು­ಗಳು ತಮ್ಮ ಪ್ರತಿಭೆ ತೋರಿ­ದರೆ, ಪಲ್ಲ­ವೋ­ತ್ಸ­ವ­ದಲ್ಲಿ ಮಹಿಳಾ ನರ್ತ­ಕಿ­ಯರು ತಮ್ಮ ಪ್ರತಿಭೆ ಮರೆ­ಯು­ತ್ತೆರೆ. ಪಾರಂ­ಗೋ­ತ್ಸ­ವ­ದಲ್ಲಿ ಖ್ಯಾತ­ನಾಮ ಕಲಾ­ವಿ­ದರು ತಮ್ಮ ನೃತ್ಯ­ದ­ರ್ಶನ ಮಾಡಿ­ಸು­ತ್ತಾರೆ. ಚಿಗುರು ಸಂಜೆ ಕಾರ್ಯ­ಕ್ರ­ಮ­ದಲ್ಲಿ 12 ವರ್ಷ ವಯ­ಸ್ಸಿ­ನೊ­ಳ­ಗಿನ ಬಾಲ ಪ್ರತಿ­ಭೆ­ಗಳು ತಮ್ಮ ಹೆಜ್ಜೆ ಗುರುತು ಮಾಡು­ತ್ತಾರೆ. ಈ ನಾಲ್ಕು ವಾರ್ಷಿಕ ಕಾರ್ಯ­ಕ್ರ­ಮ­ಗಳ ಜೊತೆಗೆ ಹಲವು ಸಾಂಸ್ಕೃ­ತಿಕ ಕಾರ್ಯ­ಕ್ರ­ಮ­ಗ­ಳನ್ನು ಸಂಸ್ಥೆ ಆಯೋ­ಜಿ­ಸು­ತ್ತದೆ. ವರ್ಷ­ಪೂರ್ತಿ ರಂಗ­ಪ್ರ­ವೇಶ ಕಾರ್ಯ­ಕ್ರ­ಮ­ಗಳು ನಡೆ­ಯು­ತ್ತವೆ. ಉಪ­ನ್ಯಾಸ, ಯೋಗ ಕಾರ್ಯ­ಗಾ­ರ­ಗಳೂ ನಡೆ­ಯು­ತ್ತವೆ.
ವಸುಂ­ದರಾ ಅವರು ತಮ್ಮ ನೃತ್ಯದ ಮೂಲಕ ಶ್ರೀಮಂತ ಸಂಸ್ಕೃ­ತಿ­ಯೊಂ­ದರ ಪ್ರತಿ­ನಿ­ಧಿ­ಯಾ­ಗಿ­ದ್ದಾರೆ. ನೃತ್ಯ ಸಾಗ­ರ­ದಲ್ಲಿ ಮುಂದಿ­ದ್ದಾರೆ. ಶಾರದಾ ಪುತ್ರಿ­ಯಾ­ಗಿ­ದ್ದಾರೆ. ತಪಸ್ಸು ಭಕ್ತಿ ಯೋಗ ಮಾರ್ಗ­ಗ­ಳಿಂದ ದಕ್ಕಿ­ಸಿ­ಕೊಂಡ ವಿದ್ಯೆ­ಯಿಂದ ಇಂದು ನಾಟ್ಯ­ರಾ­ಣಿ­ಯಾಗಿ ಹೆಜ್ಜೆ ಇಡು­ತ್ತಿ­ದ್ದಾರೆ.

No comments:

Post a Comment