
ಮೃದಂಗ ಮಾಧುರ್ಯ ಮತ್ತು ಸ್ನೇಹಜೀವಿ ಶಿವು
ಸಂಗೀತ ಲೋಕದ `ಶಿವು' ಹಲವು ಅದ್ಭುತಗಳ ಸರದಾರ. ಅವರ ಮೃದಂಗ ಮಿಡಿತದ ಕಂಪು ನಾಡಲ್ಲೆಲ್ಲಾ ಹರಡಿದೆ. ನಮ್ಮ ದೇಶದಲ್ಲಿರುವ ಅತ್ಯಂತ ಪ್ರಬುದ್ಧ ತಾಳವಾದ್ಯ ಪ್ರತಿಭೆಗಳಲ್ಲಿ ಶಿವು ಪ್ರಮುಖರು. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಶಿವು ಅಂದರೆ ಲೆಜೆಂಡ್! ಮೃದಂಗ, ತವಿಲ್, ತಬಲಾ, ಕಂಜೀರಾ ಮುಂತಾದ ತಾಳವಾದ್ಯಗಳನ್ನು ನುಡಿಸಬಲ್ಲ ಬಹುವಾದ್ಯ ಪಂಡಿತ. ಹಾಡುಗಾರಿಯೂ ಅವರಿಗೆ ಗೊತ್ತಿದೆ. ಪ್ಯೂಜನ್ನಲ್ಲೂ ತಮ್ಮ ಕೈ ಚಳಕ ತೋರಿದ್ದಾರೆ. ಶಿವು ಉತ್ತಮ ಸಂಗೀತ ಸಂಯೋಜಕರೂ ಹೌದು. ಶಾಸ್ತ್ರೀಯ ನೆಲೆಯಲ್ಲಿ ಸಿನಿಮಾ, ಸುಗಮ ಸಂಗೀತ, ಜಾನಪದ ಹಾಗೂ ನೃತ್ಯಗಳಿಗೆ ಸಂಗೀತ ಸಂಯೋಜನೆ ಮಾಡಬಲ್ಲ ನಾಡಿನ ಒಂದೇ ಒಂದು ಪ್ರತಿಭೆ ಶಿವು!
ಅವರ ಪೂರಾ ಹೆಸರು ಆನೂರ್ ಅನಂತ ಕೃಷ್ಣ ಶರ್ಮಾ. ನಾದ ಲೋಕದಲ್ಲಿ ಶಿವು ಎಂತಲೇ ಚಿರಪರಿಚಿತರು. ಮುಖದ ಮೇಲೆ ತುಂಬಿರುವ ದಾಡಿ ರಾಶಿಯ ನಡುವೆ ತೂರಿ ಬರುವ ಅವರ ನಗು ಎಷ್ಟೋ ಹೊಸ ಪ್ರತಿಭೆಗಳಿಗೆ ಚೈತನ್ಯ ತುಂಬಿದೆ. ಶಿವು ಎಲ್ಲಿರುತ್ತಾರೋ ಅಲ್ಲಿ ನಗು ಇರುತ್ತೆ. ಸದಾ ಹಸನ್ಮುಖಿ. ಸಂಗೀತ ಪ್ರಪಂಚದ ಸ್ನೇಹ ಜೀವಿ!
ಆನೂರ್ ಅನಂತ ಕೃಷ್ಣ ಶರ್ಮಾ ಅಪ್ಪಟ ಸಂಗೀತ ಕುಟುಂಬದ ಕುಡಿ. ಖ್ಯಾತ ವೈಲಿನ್ ಕಲಾವಿದ ಹಾಗೂ ಬೆಂಗಳೂರು ವಿವಿಯಲ್ಲಿ ಸಂಗೀತ ಶಾಸ್ತ್ರಜ್ಞರಾಗಿದ್ದ ದಿ. ವಿದ್ವಾನ್ ಆನೂರ್ ಎಸ್. ರಾಮಕೃಷ್ಣ ಅವರ ಪುತ್ರ. ಅವರ ಆರಂಭಿಕ ಸಂಗೀತ ಶಿಕ್ಷಣ ತಂದೆಯವರಿಂದಲೇ ಆಯಿತು. ನಂತರ ವಿದ್ವಾನ್. ಆರ್. ಎ. ರಾಜಗೋಪಾಲ್ ಅವರ ಬಳಿ ಮೃದಂಗ ಕಲಿತರು. ತಮ್ಮ 15ನೇ ವಯಸ್ಸಿನಲ್ಲಿ ಕಚೇರಿ ನೀಡಲು ಆರಂಭಿಸಿದ ಶಿವು ರಾಷ್ಟ್ರದ ಎಲ್ಲಾ ಖ್ಯಾತನಾಮ ಸಂಗೀತಗಾರರಿಗೆ ಮೃದಂಗ ಸಹಕಾರ ನೀಡಿದ್ದಾರೆ. ಪ್ಯೂಜನ್ನಲ್ಲೂ ಸೈ ಎನಿಸಿಕೊಂಡಿದ್ದಾರೆ. ಹಲವು ನೃತ್ಯ ರೂಪಕಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅವರ `ಕೈಶಿಕಿ'ರೂಪಕ ಯುಕೆಯಲ್ಲಿ ಪ್ರದರ್ಶನಗೊಂಡಿದೆ. ಸಿನಿಮಾದಲ್ಲೂ ಶಿವು ತಮ್ಮ ಪ್ರತಿಭೆ ತೋರಿದ್ದಾರೆ. ಕನ್ನಡದ `ಆಪ್ತಮಿತ್ರ' ಚಿತ್ರದ ರಾ...ರಾ.. ಗೀತೆಯ ಮೃದಂಗ ಮಾಧ್ಯರ್ಯ ಶಿವು ಅವರ ಮ್ಯಾಜಿಕ್!
ಶಿವು ಅವರಿಗೆ ಶಾಸ್ತ್ರೀಯ ಸಂಗೀತವೇ ಮೊದಲ ಆಯ್ಕೆ. ಪ್ಯೂಜನ್ ಸಂಗೀತದಲ್ಲಿ ಅವರು ಕೃಷಿ ಮಾಡಿದ್ದರೂ ತಮ್ಮ ಶಾಸ್ತ್ರೀಯ ಜ್ಞಾನವನ್ನು ಆಧಾರವಾಗಿಟ್ಟುಕೊಂಡೇ ಮಾಡಿದ್ದಾರೆ. ಶಾಸ್ತ್ರಕ್ಕೆ ಎಲ್ಲೂ ಧಕ್ಕೆಯಾಗದಂತೆ, ನಿಯಮಬದ್ಧರಾಗಿ ಬೇರೆ ಪ್ರಾಕಾರದ ಸಂಗೀತವನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ಮೂಲಕ ಎಲ್ಲಾ ಸಂಗೀತದ ಮೂಲ ಒಂದೇ ಎಂಬುದನ್ನು ಸಾಭೀತು ಮಾಡಿದ್ದಾರೆ.
ಸ್ವಿಟ್ಜೆರ್ಲ್ಯಾಂಡ್, ಲಂಡನ್, ಜರ್ಮನಿ, ಇಟೆಲಿ ಮುಂತಾದ ದೇಶಗಳಲ್ಲಿ ಪ್ರವಾಸ ಮಾಡಿ ತಮ್ಮ ಪ್ರತಿಭೆ ಮೆರೆದಿದ್ದಾರೆ. ಪ್ರತಿಷ್ಠಿತ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಬೆಸ್ಟ್ ಮೃದಂಗಮ್ ಆರ್ಟಿಸ್ಟ್ ಪ್ರಶಸ್ತಿ, ಲಯ ಕಲಾ ಪ್ರತಿಭಾಮಣಿ ಬಿರುದು ಸೇರಿದಂತೆ ಅವರಿಗೆ ಅಸಂಖ್ಯ ಗೌರವ ಮನ್ನಣೆಗಳು ಲಭಿಸಿವೆ.
ಅವರ ಪೂರಾ ಹೆಸರು ಆನೂರ್ ಅನಂತ ಕೃಷ್ಣ ಶರ್ಮಾ. ನಾದ ಲೋಕದಲ್ಲಿ ಶಿವು ಎಂತಲೇ ಚಿರಪರಿಚಿತರು. ಮುಖದ ಮೇಲೆ ತುಂಬಿರುವ ದಾಡಿ ರಾಶಿಯ ನಡುವೆ ತೂರಿ ಬರುವ ಅವರ ನಗು ಎಷ್ಟೋ ಹೊಸ ಪ್ರತಿಭೆಗಳಿಗೆ ಚೈತನ್ಯ ತುಂಬಿದೆ. ಶಿವು ಎಲ್ಲಿರುತ್ತಾರೋ ಅಲ್ಲಿ ನಗು ಇರುತ್ತೆ. ಸದಾ ಹಸನ್ಮುಖಿ. ಸಂಗೀತ ಪ್ರಪಂಚದ ಸ್ನೇಹ ಜೀವಿ!
ಆನೂರ್ ಅನಂತ ಕೃಷ್ಣ ಶರ್ಮಾ ಅಪ್ಪಟ ಸಂಗೀತ ಕುಟುಂಬದ ಕುಡಿ. ಖ್ಯಾತ ವೈಲಿನ್ ಕಲಾವಿದ ಹಾಗೂ ಬೆಂಗಳೂರು ವಿವಿಯಲ್ಲಿ ಸಂಗೀತ ಶಾಸ್ತ್ರಜ್ಞರಾಗಿದ್ದ ದಿ. ವಿದ್ವಾನ್ ಆನೂರ್ ಎಸ್. ರಾಮಕೃಷ್ಣ ಅವರ ಪುತ್ರ. ಅವರ ಆರಂಭಿಕ ಸಂಗೀತ ಶಿಕ್ಷಣ ತಂದೆಯವರಿಂದಲೇ ಆಯಿತು. ನಂತರ ವಿದ್ವಾನ್. ಆರ್. ಎ. ರಾಜಗೋಪಾಲ್ ಅವರ ಬಳಿ ಮೃದಂಗ ಕಲಿತರು. ತಮ್ಮ 15ನೇ ವಯಸ್ಸಿನಲ್ಲಿ ಕಚೇರಿ ನೀಡಲು ಆರಂಭಿಸಿದ ಶಿವು ರಾಷ್ಟ್ರದ ಎಲ್ಲಾ ಖ್ಯಾತನಾಮ ಸಂಗೀತಗಾರರಿಗೆ ಮೃದಂಗ ಸಹಕಾರ ನೀಡಿದ್ದಾರೆ. ಪ್ಯೂಜನ್ನಲ್ಲೂ ಸೈ ಎನಿಸಿಕೊಂಡಿದ್ದಾರೆ. ಹಲವು ನೃತ್ಯ ರೂಪಕಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅವರ `ಕೈಶಿಕಿ'ರೂಪಕ ಯುಕೆಯಲ್ಲಿ ಪ್ರದರ್ಶನಗೊಂಡಿದೆ. ಸಿನಿಮಾದಲ್ಲೂ ಶಿವು ತಮ್ಮ ಪ್ರತಿಭೆ ತೋರಿದ್ದಾರೆ. ಕನ್ನಡದ `ಆಪ್ತಮಿತ್ರ' ಚಿತ್ರದ ರಾ...ರಾ.. ಗೀತೆಯ ಮೃದಂಗ ಮಾಧ್ಯರ್ಯ ಶಿವು ಅವರ ಮ್ಯಾಜಿಕ್!
ಶಿವು ಅವರಿಗೆ ಶಾಸ್ತ್ರೀಯ ಸಂಗೀತವೇ ಮೊದಲ ಆಯ್ಕೆ. ಪ್ಯೂಜನ್ ಸಂಗೀತದಲ್ಲಿ ಅವರು ಕೃಷಿ ಮಾಡಿದ್ದರೂ ತಮ್ಮ ಶಾಸ್ತ್ರೀಯ ಜ್ಞಾನವನ್ನು ಆಧಾರವಾಗಿಟ್ಟುಕೊಂಡೇ ಮಾಡಿದ್ದಾರೆ. ಶಾಸ್ತ್ರಕ್ಕೆ ಎಲ್ಲೂ ಧಕ್ಕೆಯಾಗದಂತೆ, ನಿಯಮಬದ್ಧರಾಗಿ ಬೇರೆ ಪ್ರಾಕಾರದ ಸಂಗೀತವನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ಮೂಲಕ ಎಲ್ಲಾ ಸಂಗೀತದ ಮೂಲ ಒಂದೇ ಎಂಬುದನ್ನು ಸಾಭೀತು ಮಾಡಿದ್ದಾರೆ.
ಸ್ವಿಟ್ಜೆರ್ಲ್ಯಾಂಡ್, ಲಂಡನ್, ಜರ್ಮನಿ, ಇಟೆಲಿ ಮುಂತಾದ ದೇಶಗಳಲ್ಲಿ ಪ್ರವಾಸ ಮಾಡಿ ತಮ್ಮ ಪ್ರತಿಭೆ ಮೆರೆದಿದ್ದಾರೆ. ಪ್ರತಿಷ್ಠಿತ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಬೆಸ್ಟ್ ಮೃದಂಗಮ್ ಆರ್ಟಿಸ್ಟ್ ಪ್ರಶಸ್ತಿ, ಲಯ ಕಲಾ ಪ್ರತಿಭಾಮಣಿ ಬಿರುದು ಸೇರಿದಂತೆ ಅವರಿಗೆ ಅಸಂಖ್ಯ ಗೌರವ ಮನ್ನಣೆಗಳು ಲಭಿಸಿವೆ.
No comments:
Post a Comment