


ಹೃದಯದ ಮಾತು ಅವರಿಗೆ ಗೊತ್ತು!
ಪ್ರೀತಿಗೂ ಮತ್ತು ಹೃದಯಕ್ಕೂ ಏನೋ ಒಂಥರಾ ನಂಟುಸ್ತನ. ‘ಪ್ರೀತಿ ಇಲ್ಲದ ಹೃದಯ ಹೃದಯವೇ ಅಲ್ಲ, ಅದು ಕಲ್ಲು’ ಅನ್ನುತ್ತೆ ಕವಿಹೃದಯ. ಪ್ರೀತಿಗೆ ಹೃದಯ ಅರಳುತ್ತೆ. ಭಾವನೆಯ ಬೀಜಕ್ಕೆ ಅಭಿವ್ಯಕ್ತಗೊಳ್ಳುತ್ತೆ. ಪುಟ್ಟ ಹೃದಯ ರಕ್ತದ ಮಡುವಿನಲ್ಲಿ ಢವ ಢವನೆ ಬಡಿದುಕೊಳ್ಳುತ್ತಾ ಹೂವಿನಂತೆ ಪರಿಮಳ ಬೀರುತ್ತೆ.....ಆದರೆ, ಹೂವಿನಷ್ಟೇ ಸೂಕ್ಷ್ಮವಾದ ಹೃದಯ ಗಾಯಗೊಂಡರೆ....? ಹೃದಯ ಕುಗ್ಗಿ ಹೋಗುತ್ತೆ. ನೋವಿಗೆ ನೊಂದುಕೊಳ್ಳುತ್ತೆ.....!
ನೊಂದ ಹೃದಯಗಳನ್ನು ಪ್ರೀತಿಯಿಂದ ಸಂತೈಸುವ ಜಗದ್ವಿಖ್ಯಾತ ವೈದ್ಯ ಬೆಂಗಳೂರಿನಲ್ಲಿದ್ದಾರೆ. ಅವರು ನೊಂದ ಹೃದಯಗಳನ್ನು ಪ್ರೀತಿಸುವ ಹೃದಯವಂತ. ಲಕ್ಷಾಂತರ ಹೃದಯಗಳನ್ನು ಕದ್ದು ತಮ್ಮ ಹೃದಯದಲ್ಲಿ ಬಚ್ಚಿಟ್ಟುಕೊಂಡಿರುವ ಹೃದಯಚೋರ!
ಅವರೇ ಡಾ. ದೇವಿ ಪ್ರಸಾದ್ ಶೆಟ್ಟಿ. ಜಗತ್ತಿನಲ್ಲೇ ಅತೀ ಹೆಚ್ಚು ತೆರೆದ ಹೃದಯ ಶಸ್ತ್ರಚಿಕೆತ್ಸೆ ಮಾಡಿರುವ ಹೃದ್ರೋಗ ತಜ್ಞ. ಅವರು ಕೇವಲ ಹೃದಯ ಖಾಯಿಲೆಗಳಿಗೆ ಚಿಕಿತ್ಸೆ ಕೊಡುವ ವೈದ್ಯರಲ್ಲ. ಕಲಾವಿದ ಕಲಾಕೃತಿಯನ್ನು ಕಸೂತಿ ಮಾಡಿ ಬಣ್ಣಗಟ್ಟಿಸುವಂತೆ ದೇವಿಶೆಟ್ಟಿ ಹೃದಯವನ್ನು ಕಸಿ ಮಾಡುತ್ತಾರೆ. ಅವರೊಬ್ಬ ಹೃದಯ ಕಸೂತಿಗಾರ! ಜಗತ್ತಿನಲ್ಲಿ ಅಸಂಖ್ಯಾತ ಹೃದ್ರೋಗ ತಜ್ಞರಿದ್ದಾರೆ. ಅವರೆಲ್ಲರ ಪ್ರಕಾರ ಹೃದಯವೆಂದರೆ ದೇಹದ ಒಂದು ದುಬಾರಿ ಅಂಗ. ಆದರೆ ದೇವಿಶೆಟ್ಟಿ ಅವರ ಪ್ರಕಾರ ಹೃದಯ ದುಬಾರಿ ಅಂಗವಲ್ಲ. ಅದು ದೇಹದ ದೇವರು.
ದೇವಿಶೆಟ್ಟಿ ಬೆಂಗಳೂರಿನಲ್ಲಿ ಸ್ಥಾಪಿಸಿರುವ ನಾರಾಯಣ ಹೃದಾಯಾಲಯ ಕೇವಲ ಆಸ್ಪತ್ರೆಯಲ್ಲ. ಅದೊಂದು ಹೃದಯದ ಆಲಯ. ಆಕಾಶದಲ್ಲಿದ್ದ ಹೃದಯ ಚಿಕಿತ್ಸೆ ಬಡವ ಬಲ್ಲಿದರಿಗೆ ಇಂದು ವಿಶ್ವದಾದ್ಯಂತ ಸಿಗುತ್ತಿದೆ ಅಂದರೆ ಅದಕ್ಕೆ ದೇವಿಶೆಟ್ಟಿ ಕಾರಣ. ಅದೊಂದು ಕ್ರಾಂತಿಯೇ ಸರಿ. ಕರ್ನಾಟಕ ಸರ್ಕಾರದ ಜೊತೆ ದೇವಿಶೆಟ್ಟಿ ರಚಿಸಿರುವ ‘ಯಶಸ್ವಿನಿ’ ಆರೋಗ್ಯ ವಿಮಾ ಯೋಜನೆ ಜಗತ್ತಿನ ಅಗ್ಗದ ಆರೋಗ್ಯ ಯೋಜನೆ. ವಿಶ್ವದ ಅಸಂಖ್ಯಾತ ರೋಗಿಗಳು ಇದರ ಫಲಾನುಭವಿಗಳಾಗಿದ್ದಾರೆ.
ಸದಾ ಗಲಭೆಗಳಿಂದಲೇ ಕೂಡಿರುವ ಇರಾಕ್, ಇರಾನ್ ದೇಶಗಳ ಅದೆಷ್ಟೋ ಮಕ್ಕಳ ಹೃದಯಗಳು ನಗು ಬೀರಲು ನಾರಾಯಣ ಹೃದಯಾಲಯ ಕಾರಣ. ಶೋಷಣೆಯಿಂದ ಕಂಗೆಟ್ಟುಹೋಗಿರುವ ಅಪಘಾನಿಸ್ಥಾನದ ಹೃದಯ ರೋಗಿಗಳು ಉಚಿತವಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇನ್ನೂ ದಕ್ಷಿಣ ಆಫ್ರಿಕ. ಅದು ಐತಿಹಾಸಿಕ. ಹೃದಯ ರೋಗಗಳಿಂದ ಬಳಲುತ್ತಿರುವ ಆಫ್ರಿಕಾದ ಬುಡಕಟ್ಟು ಜನರಿಗೆ ದೇವಿಶೆಟ್ಟಿ ಅಕ್ಷರಶಃ ಸಂಜೀವಿನಿ. ಹಲವು ವರ್ಷಗಳ ಕಾಲ ಆಫ್ರಿಕಾದಲ್ಲೇ ಸಂಶೋಧನೆ ನಡೆಸುತ್ತಾ ಚಿಕಿತ್ಸೆ ಕೊಡುತ್ತಾ ಬಂದಿದ್ದಾರೆ. ಪಾಕಿಸ್ಥಾನ ಮತ್ತು ಭಾರತದ ನಡುವೆ ದೇವಿಶೆಟ್ಟಿ ವೈದ್ಯಕೀಯ ರಾಯಭಾರಿಯಂತೆ ಕೆಲಸ ಮಾಡಿದ್ದಾರೆ.
ವಿಶ್ವದ ದೊಡ್ಡಣ್ಣಂದಿರಾದ ಅಮೆರಿಕಾ ಇಂಗ್ಲೆಂಡ್, ಜರ್ಮನಿ, ರಷ್ಯಾಗಳಲ್ಲೂ ದೇವಿಶೆಟ್ಟಿ ಅವರಿಗೆ ಬಲು ಬೇಡಿಕೆಯಿದೆ. ಇಸ್ರೋ ಒದಗಿಸಿರುವ ‘ಟೆಲಿಮೆಡಿಸಿನ್ ’ ಟೆಕ್ನಾಲಜಿ ಮೂಲಕ ನಾರಾಯಣ ಹೃದಯಾಲಯದಲ್ಲಿ ಕೂತು ದೇವಿಶೆಟ್ಟಿ ವಿಶ್ವದ ಹೃದಯಗಳ ಜೊತೆ ಮಾತನಾಡುತ್ತಾರೆ. ಅವರ ಇನ್ನೊಂದು ವಿಶೇಷವೆಂದರೆ ದೇವಿಶೆಟ್ಟಿ ಆಪರೇಷನ್ ಥಿಯೇಟರ್ನಲ್ಲಿದ್ದಾರೆ ಅಂದರೆ ಸಂಗೀತ ಕಡ್ಡಾಯ. ಸಂಗೀತ ಮತ್ತು ಯೋಗದ ಮೇಲೆ ಅವರಿಗೆ ಅಪಾರ ನಂಬಿಕೆ.
ಕಬಡ್ಡಿ ಗೆ ಮಾರುಹೋದ ಅಮೆರಿಕಾ!
ಕೆಲವೊಮ್ಮೆ ಭಾರತದಿಂದ ವಿದೇಶಕ್ಕೆ ಹೋದವರು ಅಲ್ಲಿಯ ವ್ಯಾಮೋಹಕ್ಕೆ ಬಲಿಯಾಗಿ ದೇಸೀಯ ಸಂಸ್ಕೃತಿಯನ್ನು ಮರೆತುಬಿಡುತ್ತಾರೆ. ಮತ್ತೆ ಕೆಲವರು ವಿದೇಶಕ್ಕೆ ಹೋದರೂ ತಮ್ಮ ಜೊತೆ ತಮ್ಮ ದೇಸೀಯ ಸಂಸ್ಕೃತಿಯನ್ನು ಕಟ್ಟಿಕೊಂಡೇ ಹೋಗುತ್ತಾರೆ. ವಿದೇಶಕ್ಕೆ ಹೋಗಿ ತಮ್ಮ ತಾಯ್ನೆಡು ಹೆಮ್ಮೆಪಡುವಂಥ ಕೆಲ ಕೆಲಸ ಮಾಡಿ ಬರುತ್ತಾರೆ. ಅಂತಹ ಒಂದು ಕೆಲಸವನ್ನು ಭಾರತೀಯರಾದ ಅಜಯ್ಕುಮಾರ್ ಮಾಡಿ ಬಂದಿದ್ದಾರೆ. ಅಮೆರಿಕಾಗೆ ಭೇಟಿ ಕೊಟ್ಟಾಗ, ನಾಯರ್ ಆ ಸಂಸ್ಕೃತಿಗೆ ಮಾರು ಹೋಗಲಿಲ್ಲ. ಅಲ್ಲಿಯ ಮಕ್ಕಳಿಗೆ ಹಾಗೂ ಯುವಕರಿಗೆ ನಮ್ಮ ಐತಿಹಾಸಿಕ ಆಟ ಕಬಡ್ಡಿ ಕಲಿಸಿ ಬಂದಿದ್ದಾರೆ!
ಅಜಯ್ ಕುಮಾರ್ ಅಮೆರಿಕಾದ ಜಾನ್ಸ್ಬರ್ಗ್ ನಗರದ ಕೇಂದ್ರೀಯ ಶಾಲೆಯಲ್ಲಿ ಇಂಗ್ಲಿಷ್ ಶಾಲೆಗೆ ಶಿಕ್ಷಕರಾಗಿ ನೇಮಕಗೊಂಡರು. ಆರು ತಿಂಗಳ ಕಾಲ ಅಲ್ಲಿ ನೆಲಸಿದ್ದ ನಾಯರ್ ಭಾರತ ದೇಶ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಭಾರತದ ಜಾನಪದ ಆಟಕ್ಕೆ ಅಲ್ಲಿಯ ಯುವಕರು ಮನಸೂರೆಗೊಂಡಿದ್ದಾರೆ. ಅಂಗಿ ಬಿಚ್ಚಿ, ಒಂದೇ ಉಸಿರಿನಲ್ಲಿ ಕಬಡ್ಡಿ ಕಬಡ್ಡಿ ಎಂದು ಕೂಗುವಾಗ ಮೈಯಿಂದ ಜುಳುಜುಳು ಎಂದು ಸುರಿವ ನೀರಿಗೆ ಆ ಕೆಂಪು ಜನ ತೊಯ್ದು ಹೋಗಿದ್ದಾರೆ.
ನಾಯರ್ ಕೇವಲ ಕಬಡ್ಡಿ ಆಟವನ್ನು ಮಾತ್ರ ಹೇಳಿಕೊಡಲಿಲ್ಲ. ಬದಲಾಗಿ ಕಬಡ್ಡಿಯ ಹಿಂದಿರುವ ಜಾನಪದ ಮಹತ್ವವನ್ನೂ ಕಲಿಸಿದ್ದಾರೆ. ಕಬಡ್ಡಿ ಮಣ್ಣಿನ ಮಧ್ಯೆ ಆಡುವ ಆಟ. ಮಣ್ಣಿನಲ್ಲಿ ಕಬಡ್ಡಿ ಆಡುವಾಗ ಕಾಲಿಗೆ ಯಾವುದೇ ಶೂ ಧರಿಸುವಂತಿಲ್ಲ. ಅದರಲ್ಲಿ ವೈದ್ಯಕೀಯ ಶಕ್ತಿಯಿದೆ. ಮಣ್ಣಿನಲ್ಲಿರುವ ವೈದ್ಯಕೀಯ ಶಕ್ತಿಯ ಅರಿವು ಪಡೆದ ಅಮೆರಿಕಾ ಯುವಕರು ಒಂದು ಹೊಸ ಕಬಡ್ಡಿ ಟೀಂ ಕಟ್ಟಿದ್ದಾರೆ!
ನೃತ್ಯದ ಮೇಲೆ ಹೇಮಲತಾ ಭಕ್ತಿ
ದಾಖಲೆಗಾಗಿಯೇ ಸಾಧನೆ ಮಾಡುವವರಿಗೆ ಕಮ್ಮಿ ಇಲ್ಲ. ಆದರೆ ಸಾಧನೆಯ ಹಾದಿಯಲ್ಲಿ ಬಂದು ಹೋಗುವ ಅಸಂಖ್ಯ ಮೈಲಿಗಲ್ಲುಗಳಲ್ಲಿ ದಾಖಲೆಯೂ ಒಂದು ಕಲ್ಲು ಎಂದುಕೊಳ್ಳುವವರು ಬಹಳ ಕಮ್ಮಿ. ಇಂಥ ಬರಳೆಣಿಕೆಯಷ್ಟು ಸಾಧಕರಲ್ಲಿ ಕೇರಳದ ಖ್ಯಾತ ಮೋಹಿನಿಯಟ್ಟಂ ನೃತ್ಯ ಕಲಾವಿದೆ ಕಲಾಮಂಡಲ ಹೇಮಲತಾ ಕೂಡ ಒಬ್ಬರು.
ಹೇಮಲತಾ ಸತತ 123 ಗಂಟೆ 15 ನಿಮಿಷಗಳ ಕಾಲ ನರ್ತಿಸಿ ನೃತ್ಯಲೋಕದಲ್ಲೊಂದು ಹೊಸ ಇತಿಹಾಸ ಬರೆದಿದ್ದಾರೆ. ಕೇರಳದ ಅದ್ಭುತ ಕಲೆ ಮೋಹಿಯಟ್ಟಂ ನೃತ್ಯ ಪ್ರಕಾರವನ್ನು ಅವರು ಸಾಗರದಾಚೆಗೆ ಹಾರಿಸಿದ್ದಾರೆ. 2010 ಸೆಪ್ಟೆಂಬರ್ 20ರಂದು ರಾತ್ತಿ 11 ಗಂಟೆಗೆ ಕಾಲಿಗೆ ಗೆಜ್ಜೆ ಕಟ್ಟಿದ ಹೇಮಾ ಸೆಪ್ಟೆಂಬರ್ 26 ಮಧ್ಯಾಹ್ನ 2. 45ಗಂಟೆಯ ವರೆಗೆ ಸುಧೀರ್ಘವಾಗಿ ನರ್ತಿಸಿ 123 ಗಂಟೆ 15 ನಿಮಿಷಗಳನ್ನು ಪೂರ್ಣಗೊಳಿಸಿ ವಿಶ್ವ ವಿಖ್ಯಾತಿಯಾದರು. ಮಧ್ಯೆ ಗಂಟೆಗೊಮ್ಮೆ ಐದು ನಿಮಿಷಗಳ ಬ್ರೇಕ್ ಹಾಗೂ ಮುಂಜಾನೆ 2 ಗಂಟೆಯಿಂದ 4 ಗಂಟೆಯವರೆಗೆ ನಿದ್ದೆ ಹೊರೆತು ಪಡಿಸಿದರೆ ಸತತ ವಾರಗಳ ನೃತ್ಯವದು. ಆರು ದಿನಗಳ ಕಾಲ ಹಠಯೋಗ ಮಾದರಿಯಲ್ಲಿ ಅಂದುಕೊಂಡುದ್ದಕ್ಕೆ ಎಲ್ಲೂ ಧಕ್ಕೆಯಾಗದಂತೆ ಸಾಧಿಸಿ ಮುಗಿಸಿದರು. ಈ ಹೊಸ ಇತಿಹಾಸದ ಮೂಲಕ ಹೈದರಾಬಾದ್ನ ವೆಟ್ಟಿಕೊಟ್ಟ ಯಡಗಿರಿ ಅವರ 108 ಗಂಟೆಗಳ ನೃತ್ಯದಾಖಲೆಯನ್ನು ಮುರಿದರು.
ಹೇಮಲತಾ ಕೇರಳದ ತ್ರಿಸ್ಸೂರಿನವರು. 35 ವರ್ಷ ವಯಸ್ಸಿನ ಹೇಮಾ ಎರಡು ಮಕ್ಕಳ ತಾಯಿ. ಮದುವೆಯಾದ ಮೇಲೂ ಅವರ ಹೆಜ್ಜೆಗಳ ಶಕ್ತಿ ಎಂದೂ ಕುಗ್ಗಲಿಲ್ಲ. ಪತಿಯ ಪ್ರೋತ್ಸಾಹದ ಜೊತೆ ಹೊಸ ಶಕ್ತಿಯನ್ನು ಜಗತ್ತಿಗೆ ತೋರಿಸಿದರು. ಇದು ಕೇವಲ 123 ಗಂಟೆಗಳ ಕಾಲ ನರ್ತಿಸಿ ನಿಲ್ಲಿಸಿದ ಕತೆಯಲ್ಲ. ಇದು ಹತ್ತಾರು ವರ್ಷಗಳ ಕಾಲದ ತಸರತ್ತು. ಚಿಕ್ಕಂದಿನಿಂದ ನೃತ್ಯದ ಮೇಲೆ ಬೆಳೆಸಿಕೊಂಡು ಬಂದ ಭಕ್ತಿ ಹಾಗೂ ಶ್ರದ್ಧೆ ಪ್ರತಿಫಲ. ಹೇಮಲತಾ ಕೇರಳದ ಪ್ರಸಿದ್ಧ ಪ್ರದರ್ಶನ ಕಲೆಗಳ ತಾಣ ಕಲಾಮಂಡಲಂ ಪ್ರತಿಭೆ. ನೃತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಹೇಮಾ ಅವರಿಗೆ ನೃತ್ಯವೇ ಉಸಿರು.
ಪ್ರೀತಿಗೂ ಮತ್ತು ಹೃದಯಕ್ಕೂ ಏನೋ ಒಂಥರಾ ನಂಟುಸ್ತನ. ‘ಪ್ರೀತಿ ಇಲ್ಲದ ಹೃದಯ ಹೃದಯವೇ ಅಲ್ಲ, ಅದು ಕಲ್ಲು’ ಅನ್ನುತ್ತೆ ಕವಿಹೃದಯ. ಪ್ರೀತಿಗೆ ಹೃದಯ ಅರಳುತ್ತೆ. ಭಾವನೆಯ ಬೀಜಕ್ಕೆ ಅಭಿವ್ಯಕ್ತಗೊಳ್ಳುತ್ತೆ. ಪುಟ್ಟ ಹೃದಯ ರಕ್ತದ ಮಡುವಿನಲ್ಲಿ ಢವ ಢವನೆ ಬಡಿದುಕೊಳ್ಳುತ್ತಾ ಹೂವಿನಂತೆ ಪರಿಮಳ ಬೀರುತ್ತೆ.....ಆದರೆ, ಹೂವಿನಷ್ಟೇ ಸೂಕ್ಷ್ಮವಾದ ಹೃದಯ ಗಾಯಗೊಂಡರೆ....? ಹೃದಯ ಕುಗ್ಗಿ ಹೋಗುತ್ತೆ. ನೋವಿಗೆ ನೊಂದುಕೊಳ್ಳುತ್ತೆ.....!
ನೊಂದ ಹೃದಯಗಳನ್ನು ಪ್ರೀತಿಯಿಂದ ಸಂತೈಸುವ ಜಗದ್ವಿಖ್ಯಾತ ವೈದ್ಯ ಬೆಂಗಳೂರಿನಲ್ಲಿದ್ದಾರೆ. ಅವರು ನೊಂದ ಹೃದಯಗಳನ್ನು ಪ್ರೀತಿಸುವ ಹೃದಯವಂತ. ಲಕ್ಷಾಂತರ ಹೃದಯಗಳನ್ನು ಕದ್ದು ತಮ್ಮ ಹೃದಯದಲ್ಲಿ ಬಚ್ಚಿಟ್ಟುಕೊಂಡಿರುವ ಹೃದಯಚೋರ!
ಅವರೇ ಡಾ. ದೇವಿ ಪ್ರಸಾದ್ ಶೆಟ್ಟಿ. ಜಗತ್ತಿನಲ್ಲೇ ಅತೀ ಹೆಚ್ಚು ತೆರೆದ ಹೃದಯ ಶಸ್ತ್ರಚಿಕೆತ್ಸೆ ಮಾಡಿರುವ ಹೃದ್ರೋಗ ತಜ್ಞ. ಅವರು ಕೇವಲ ಹೃದಯ ಖಾಯಿಲೆಗಳಿಗೆ ಚಿಕಿತ್ಸೆ ಕೊಡುವ ವೈದ್ಯರಲ್ಲ. ಕಲಾವಿದ ಕಲಾಕೃತಿಯನ್ನು ಕಸೂತಿ ಮಾಡಿ ಬಣ್ಣಗಟ್ಟಿಸುವಂತೆ ದೇವಿಶೆಟ್ಟಿ ಹೃದಯವನ್ನು ಕಸಿ ಮಾಡುತ್ತಾರೆ. ಅವರೊಬ್ಬ ಹೃದಯ ಕಸೂತಿಗಾರ! ಜಗತ್ತಿನಲ್ಲಿ ಅಸಂಖ್ಯಾತ ಹೃದ್ರೋಗ ತಜ್ಞರಿದ್ದಾರೆ. ಅವರೆಲ್ಲರ ಪ್ರಕಾರ ಹೃದಯವೆಂದರೆ ದೇಹದ ಒಂದು ದುಬಾರಿ ಅಂಗ. ಆದರೆ ದೇವಿಶೆಟ್ಟಿ ಅವರ ಪ್ರಕಾರ ಹೃದಯ ದುಬಾರಿ ಅಂಗವಲ್ಲ. ಅದು ದೇಹದ ದೇವರು.
ದೇವಿಶೆಟ್ಟಿ ಬೆಂಗಳೂರಿನಲ್ಲಿ ಸ್ಥಾಪಿಸಿರುವ ನಾರಾಯಣ ಹೃದಾಯಾಲಯ ಕೇವಲ ಆಸ್ಪತ್ರೆಯಲ್ಲ. ಅದೊಂದು ಹೃದಯದ ಆಲಯ. ಆಕಾಶದಲ್ಲಿದ್ದ ಹೃದಯ ಚಿಕಿತ್ಸೆ ಬಡವ ಬಲ್ಲಿದರಿಗೆ ಇಂದು ವಿಶ್ವದಾದ್ಯಂತ ಸಿಗುತ್ತಿದೆ ಅಂದರೆ ಅದಕ್ಕೆ ದೇವಿಶೆಟ್ಟಿ ಕಾರಣ. ಅದೊಂದು ಕ್ರಾಂತಿಯೇ ಸರಿ. ಕರ್ನಾಟಕ ಸರ್ಕಾರದ ಜೊತೆ ದೇವಿಶೆಟ್ಟಿ ರಚಿಸಿರುವ ‘ಯಶಸ್ವಿನಿ’ ಆರೋಗ್ಯ ವಿಮಾ ಯೋಜನೆ ಜಗತ್ತಿನ ಅಗ್ಗದ ಆರೋಗ್ಯ ಯೋಜನೆ. ವಿಶ್ವದ ಅಸಂಖ್ಯಾತ ರೋಗಿಗಳು ಇದರ ಫಲಾನುಭವಿಗಳಾಗಿದ್ದಾರೆ.
ಸದಾ ಗಲಭೆಗಳಿಂದಲೇ ಕೂಡಿರುವ ಇರಾಕ್, ಇರಾನ್ ದೇಶಗಳ ಅದೆಷ್ಟೋ ಮಕ್ಕಳ ಹೃದಯಗಳು ನಗು ಬೀರಲು ನಾರಾಯಣ ಹೃದಯಾಲಯ ಕಾರಣ. ಶೋಷಣೆಯಿಂದ ಕಂಗೆಟ್ಟುಹೋಗಿರುವ ಅಪಘಾನಿಸ್ಥಾನದ ಹೃದಯ ರೋಗಿಗಳು ಉಚಿತವಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇನ್ನೂ ದಕ್ಷಿಣ ಆಫ್ರಿಕ. ಅದು ಐತಿಹಾಸಿಕ. ಹೃದಯ ರೋಗಗಳಿಂದ ಬಳಲುತ್ತಿರುವ ಆಫ್ರಿಕಾದ ಬುಡಕಟ್ಟು ಜನರಿಗೆ ದೇವಿಶೆಟ್ಟಿ ಅಕ್ಷರಶಃ ಸಂಜೀವಿನಿ. ಹಲವು ವರ್ಷಗಳ ಕಾಲ ಆಫ್ರಿಕಾದಲ್ಲೇ ಸಂಶೋಧನೆ ನಡೆಸುತ್ತಾ ಚಿಕಿತ್ಸೆ ಕೊಡುತ್ತಾ ಬಂದಿದ್ದಾರೆ. ಪಾಕಿಸ್ಥಾನ ಮತ್ತು ಭಾರತದ ನಡುವೆ ದೇವಿಶೆಟ್ಟಿ ವೈದ್ಯಕೀಯ ರಾಯಭಾರಿಯಂತೆ ಕೆಲಸ ಮಾಡಿದ್ದಾರೆ.
ವಿಶ್ವದ ದೊಡ್ಡಣ್ಣಂದಿರಾದ ಅಮೆರಿಕಾ ಇಂಗ್ಲೆಂಡ್, ಜರ್ಮನಿ, ರಷ್ಯಾಗಳಲ್ಲೂ ದೇವಿಶೆಟ್ಟಿ ಅವರಿಗೆ ಬಲು ಬೇಡಿಕೆಯಿದೆ. ಇಸ್ರೋ ಒದಗಿಸಿರುವ ‘ಟೆಲಿಮೆಡಿಸಿನ್ ’ ಟೆಕ್ನಾಲಜಿ ಮೂಲಕ ನಾರಾಯಣ ಹೃದಯಾಲಯದಲ್ಲಿ ಕೂತು ದೇವಿಶೆಟ್ಟಿ ವಿಶ್ವದ ಹೃದಯಗಳ ಜೊತೆ ಮಾತನಾಡುತ್ತಾರೆ. ಅವರ ಇನ್ನೊಂದು ವಿಶೇಷವೆಂದರೆ ದೇವಿಶೆಟ್ಟಿ ಆಪರೇಷನ್ ಥಿಯೇಟರ್ನಲ್ಲಿದ್ದಾರೆ ಅಂದರೆ ಸಂಗೀತ ಕಡ್ಡಾಯ. ಸಂಗೀತ ಮತ್ತು ಯೋಗದ ಮೇಲೆ ಅವರಿಗೆ ಅಪಾರ ನಂಬಿಕೆ.
ಕಬಡ್ಡಿ ಗೆ ಮಾರುಹೋದ ಅಮೆರಿಕಾ!
ಕೆಲವೊಮ್ಮೆ ಭಾರತದಿಂದ ವಿದೇಶಕ್ಕೆ ಹೋದವರು ಅಲ್ಲಿಯ ವ್ಯಾಮೋಹಕ್ಕೆ ಬಲಿಯಾಗಿ ದೇಸೀಯ ಸಂಸ್ಕೃತಿಯನ್ನು ಮರೆತುಬಿಡುತ್ತಾರೆ. ಮತ್ತೆ ಕೆಲವರು ವಿದೇಶಕ್ಕೆ ಹೋದರೂ ತಮ್ಮ ಜೊತೆ ತಮ್ಮ ದೇಸೀಯ ಸಂಸ್ಕೃತಿಯನ್ನು ಕಟ್ಟಿಕೊಂಡೇ ಹೋಗುತ್ತಾರೆ. ವಿದೇಶಕ್ಕೆ ಹೋಗಿ ತಮ್ಮ ತಾಯ್ನೆಡು ಹೆಮ್ಮೆಪಡುವಂಥ ಕೆಲ ಕೆಲಸ ಮಾಡಿ ಬರುತ್ತಾರೆ. ಅಂತಹ ಒಂದು ಕೆಲಸವನ್ನು ಭಾರತೀಯರಾದ ಅಜಯ್ಕುಮಾರ್ ಮಾಡಿ ಬಂದಿದ್ದಾರೆ. ಅಮೆರಿಕಾಗೆ ಭೇಟಿ ಕೊಟ್ಟಾಗ, ನಾಯರ್ ಆ ಸಂಸ್ಕೃತಿಗೆ ಮಾರು ಹೋಗಲಿಲ್ಲ. ಅಲ್ಲಿಯ ಮಕ್ಕಳಿಗೆ ಹಾಗೂ ಯುವಕರಿಗೆ ನಮ್ಮ ಐತಿಹಾಸಿಕ ಆಟ ಕಬಡ್ಡಿ ಕಲಿಸಿ ಬಂದಿದ್ದಾರೆ!
ಅಜಯ್ ಕುಮಾರ್ ಅಮೆರಿಕಾದ ಜಾನ್ಸ್ಬರ್ಗ್ ನಗರದ ಕೇಂದ್ರೀಯ ಶಾಲೆಯಲ್ಲಿ ಇಂಗ್ಲಿಷ್ ಶಾಲೆಗೆ ಶಿಕ್ಷಕರಾಗಿ ನೇಮಕಗೊಂಡರು. ಆರು ತಿಂಗಳ ಕಾಲ ಅಲ್ಲಿ ನೆಲಸಿದ್ದ ನಾಯರ್ ಭಾರತ ದೇಶ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಭಾರತದ ಜಾನಪದ ಆಟಕ್ಕೆ ಅಲ್ಲಿಯ ಯುವಕರು ಮನಸೂರೆಗೊಂಡಿದ್ದಾರೆ. ಅಂಗಿ ಬಿಚ್ಚಿ, ಒಂದೇ ಉಸಿರಿನಲ್ಲಿ ಕಬಡ್ಡಿ ಕಬಡ್ಡಿ ಎಂದು ಕೂಗುವಾಗ ಮೈಯಿಂದ ಜುಳುಜುಳು ಎಂದು ಸುರಿವ ನೀರಿಗೆ ಆ ಕೆಂಪು ಜನ ತೊಯ್ದು ಹೋಗಿದ್ದಾರೆ.
ನಾಯರ್ ಕೇವಲ ಕಬಡ್ಡಿ ಆಟವನ್ನು ಮಾತ್ರ ಹೇಳಿಕೊಡಲಿಲ್ಲ. ಬದಲಾಗಿ ಕಬಡ್ಡಿಯ ಹಿಂದಿರುವ ಜಾನಪದ ಮಹತ್ವವನ್ನೂ ಕಲಿಸಿದ್ದಾರೆ. ಕಬಡ್ಡಿ ಮಣ್ಣಿನ ಮಧ್ಯೆ ಆಡುವ ಆಟ. ಮಣ್ಣಿನಲ್ಲಿ ಕಬಡ್ಡಿ ಆಡುವಾಗ ಕಾಲಿಗೆ ಯಾವುದೇ ಶೂ ಧರಿಸುವಂತಿಲ್ಲ. ಅದರಲ್ಲಿ ವೈದ್ಯಕೀಯ ಶಕ್ತಿಯಿದೆ. ಮಣ್ಣಿನಲ್ಲಿರುವ ವೈದ್ಯಕೀಯ ಶಕ್ತಿಯ ಅರಿವು ಪಡೆದ ಅಮೆರಿಕಾ ಯುವಕರು ಒಂದು ಹೊಸ ಕಬಡ್ಡಿ ಟೀಂ ಕಟ್ಟಿದ್ದಾರೆ!
ನೃತ್ಯದ ಮೇಲೆ ಹೇಮಲತಾ ಭಕ್ತಿ
ದಾಖಲೆಗಾಗಿಯೇ ಸಾಧನೆ ಮಾಡುವವರಿಗೆ ಕಮ್ಮಿ ಇಲ್ಲ. ಆದರೆ ಸಾಧನೆಯ ಹಾದಿಯಲ್ಲಿ ಬಂದು ಹೋಗುವ ಅಸಂಖ್ಯ ಮೈಲಿಗಲ್ಲುಗಳಲ್ಲಿ ದಾಖಲೆಯೂ ಒಂದು ಕಲ್ಲು ಎಂದುಕೊಳ್ಳುವವರು ಬಹಳ ಕಮ್ಮಿ. ಇಂಥ ಬರಳೆಣಿಕೆಯಷ್ಟು ಸಾಧಕರಲ್ಲಿ ಕೇರಳದ ಖ್ಯಾತ ಮೋಹಿನಿಯಟ್ಟಂ ನೃತ್ಯ ಕಲಾವಿದೆ ಕಲಾಮಂಡಲ ಹೇಮಲತಾ ಕೂಡ ಒಬ್ಬರು.
ಹೇಮಲತಾ ಸತತ 123 ಗಂಟೆ 15 ನಿಮಿಷಗಳ ಕಾಲ ನರ್ತಿಸಿ ನೃತ್ಯಲೋಕದಲ್ಲೊಂದು ಹೊಸ ಇತಿಹಾಸ ಬರೆದಿದ್ದಾರೆ. ಕೇರಳದ ಅದ್ಭುತ ಕಲೆ ಮೋಹಿಯಟ್ಟಂ ನೃತ್ಯ ಪ್ರಕಾರವನ್ನು ಅವರು ಸಾಗರದಾಚೆಗೆ ಹಾರಿಸಿದ್ದಾರೆ. 2010 ಸೆಪ್ಟೆಂಬರ್ 20ರಂದು ರಾತ್ತಿ 11 ಗಂಟೆಗೆ ಕಾಲಿಗೆ ಗೆಜ್ಜೆ ಕಟ್ಟಿದ ಹೇಮಾ ಸೆಪ್ಟೆಂಬರ್ 26 ಮಧ್ಯಾಹ್ನ 2. 45ಗಂಟೆಯ ವರೆಗೆ ಸುಧೀರ್ಘವಾಗಿ ನರ್ತಿಸಿ 123 ಗಂಟೆ 15 ನಿಮಿಷಗಳನ್ನು ಪೂರ್ಣಗೊಳಿಸಿ ವಿಶ್ವ ವಿಖ್ಯಾತಿಯಾದರು. ಮಧ್ಯೆ ಗಂಟೆಗೊಮ್ಮೆ ಐದು ನಿಮಿಷಗಳ ಬ್ರೇಕ್ ಹಾಗೂ ಮುಂಜಾನೆ 2 ಗಂಟೆಯಿಂದ 4 ಗಂಟೆಯವರೆಗೆ ನಿದ್ದೆ ಹೊರೆತು ಪಡಿಸಿದರೆ ಸತತ ವಾರಗಳ ನೃತ್ಯವದು. ಆರು ದಿನಗಳ ಕಾಲ ಹಠಯೋಗ ಮಾದರಿಯಲ್ಲಿ ಅಂದುಕೊಂಡುದ್ದಕ್ಕೆ ಎಲ್ಲೂ ಧಕ್ಕೆಯಾಗದಂತೆ ಸಾಧಿಸಿ ಮುಗಿಸಿದರು. ಈ ಹೊಸ ಇತಿಹಾಸದ ಮೂಲಕ ಹೈದರಾಬಾದ್ನ ವೆಟ್ಟಿಕೊಟ್ಟ ಯಡಗಿರಿ ಅವರ 108 ಗಂಟೆಗಳ ನೃತ್ಯದಾಖಲೆಯನ್ನು ಮುರಿದರು.
ಹೇಮಲತಾ ಕೇರಳದ ತ್ರಿಸ್ಸೂರಿನವರು. 35 ವರ್ಷ ವಯಸ್ಸಿನ ಹೇಮಾ ಎರಡು ಮಕ್ಕಳ ತಾಯಿ. ಮದುವೆಯಾದ ಮೇಲೂ ಅವರ ಹೆಜ್ಜೆಗಳ ಶಕ್ತಿ ಎಂದೂ ಕುಗ್ಗಲಿಲ್ಲ. ಪತಿಯ ಪ್ರೋತ್ಸಾಹದ ಜೊತೆ ಹೊಸ ಶಕ್ತಿಯನ್ನು ಜಗತ್ತಿಗೆ ತೋರಿಸಿದರು. ಇದು ಕೇವಲ 123 ಗಂಟೆಗಳ ಕಾಲ ನರ್ತಿಸಿ ನಿಲ್ಲಿಸಿದ ಕತೆಯಲ್ಲ. ಇದು ಹತ್ತಾರು ವರ್ಷಗಳ ಕಾಲದ ತಸರತ್ತು. ಚಿಕ್ಕಂದಿನಿಂದ ನೃತ್ಯದ ಮೇಲೆ ಬೆಳೆಸಿಕೊಂಡು ಬಂದ ಭಕ್ತಿ ಹಾಗೂ ಶ್ರದ್ಧೆ ಪ್ರತಿಫಲ. ಹೇಮಲತಾ ಕೇರಳದ ಪ್ರಸಿದ್ಧ ಪ್ರದರ್ಶನ ಕಲೆಗಳ ತಾಣ ಕಲಾಮಂಡಲಂ ಪ್ರತಿಭೆ. ನೃತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಹೇಮಾ ಅವರಿಗೆ ನೃತ್ಯವೇ ಉಸಿರು.
No comments:
Post a Comment